Homeಕರ್ನಾಟಕಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

ಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

- Advertisement -
- Advertisement -

ಸಂಘ ಪರಿವಾರದ ’ದೂರನಿಯಂತ್ರಿತ ಆಡಳಿತ’ ದೇಶದಲ್ಲಿ ಶುರುವಾದ ಬಳಿಕ ಅಪ್ಪಟ ಸಮಯಸಾಧಕತನವೆ ರಾಜಕೀಯ ಸಿದ್ಧಾಂತ ಎಂಬಂತಾಗಿಬಿಟ್ಟಿದೆ. ಹಿಂದುತ್ವದ ಹೆಸರಲ್ಲಿ ಅವಕಾಶವಾದಿ ರಾಜಕಾರಣ ಪೋಷಿಸುತ್ತಿರುವ ಬಿಜೆಪಿ ಸೈಕಲಾಜಿಕಲ್ ವಾರ್‌ಅನ್ನು ಸದ್ದಿಲ್ಲದೆ ಶುರುಹಚ್ಚಿಕೊಂಡಂತಿದೆ. ದೇಶದಲ್ಲಿ ವಿರೋಧ ಪಕ್ಷಗಳು ಖಾಲಿಯಾಗುತ್ತಿವೆ; ಬಿಜೆಪಿ ಸೇರಿದರೆ ಅಧಿಕಾರದ ಸ್ಥಾನ-ಮಾನಪಡೆಯಬಹುದು; ಐಟಿ ರೇಡು ತಪ್ಪಿಸಿಕೊಂಡು ನಿರಾತಂಕವಾಗಿ ಮುನ್ನಡೆಯಬಹುದು; ಇಲ್ಲದಿದ್ದರೆ ಉದ್ಯೋಗ-ಉದ್ಯಮ ನಷ್ಟವಾಗಿ ಜೈಲು ಸೇರಬೇಕಾಗುತ್ತದೆ ಎಂಬಂಥ ಭಯಾನಕ ರಾಜಕೀಯ ಸಂದೇಶಗಳು ಬಿತ್ತರಗೊಳ್ಳುತ್ತಿವೆ.

ಸಂಘಪರಿವಾರದ ಹಿಂದುತ್ವ ತಂತ್ರಗಾರಿಕೆಗೆ ಪೂರಕವಾದ ಪರಿಸ್ಥಿತಿ ಕಾಂಗ್ರೆಸ್, ಜನತಾದಳ ಮತ್ತಿತರ ಪಕ್ಷದಲ್ಲಿದೆ. ವಿರೋಧ ಪಕ್ಷದಲ್ಲಿದ್ದು ಅಧಿಕಾರ, ಅಂತಸ್ತು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಹಿಡನ್ ಹಿಂದುತ್ವ ಸಿದ್ಧಾಂತಿಗಳು ಬಿಜೆಪಿ ಬೆಳೆಯಲು ಸಹಕರಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ ಉಡುಪಿಯ ’ದೊಡ್ಡ’ ರಾಜಕಾರಣಿ ಪ್ರಮೋದ್ ಮಧ್ವರಾಜ್ ಅವಶ್ಯಕತೆ ಬಿಜೆಪಿಗಿತ್ತಾ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಸ್ವಜಾತಿ (ಮೊಗವೀರ) ಮತಗಳನ್ನೇ ಪಡೆಯಲಾಗದ ಪ್ರಮೋದ್‌ರಿಂದ ಬಿಜೆಪಿಗೆ ಪ್ರಯೋಜನ ಇಲ್ಲವೆಂಬುದು ಸಂಘ ಸೂತ್ರಧಾರರಿಗೆ ಗೊತ್ತಿಲ್ಲದ ಸಂಗತಿಯೆ? ಪ್ರಮೋದ್ ಅವರು ಸೇರಿರುವ ಮೊಗವೀರ ಸಮುದಾಯದ ಮುಕ್ಕಾಲು ಪಾಲು ಓಟುಗಳು ಬಿಜೆಪಿಗೆ ಬೀಳುತ್ತಿರುವಾಗ ಅವರನ್ನು ನಾಲ್ಕು ವರ್ಷಗಳ ಕಾಲ ಬಿಜೆಪಿಯ ಮಂತ್ರಿ-ಶಾಸಕರ ಮತ್ತು ಕರಾವಳಿಯ ಸರ್ವೋಚ್ಚ ನಾಯಕನ ಮನೆ ಬಾಗಿಲು ಕಾಯುವಂತೆ ಮಾಡಿ ಸತಾಯಿಸಿ ಪಾರ್ಟಿಗೆ ಸೇರಿಸಿಕೊಂಡ ಸಂಘದ ಉದ್ದೇಶವಾದರೂ ಏನಿರಬಹುದು?

ಇದಕ್ಕೆಲ್ಲ ಸರಳ ಉತ್ತರಗಳು ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ ಹೈರಾಣಾಗುತ್ತಿದೆ; ಬಿಜೆಪಿ ಕಡೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಬಿಂಬಿಸಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ದೀರ್ಘಕಾಲದವರೆಗೆ ಪ್ರಮೋದ್ ಬಿಜೆಪಿ ಗೇಟಿನ ಮುಂದೆ ನಿಲ್ಲುವಂತೆ ಮಾಡಲಾಗಿತ್ತಂತೆ.
ಉಡುಪಿಯಲ್ಲಿರುವ ಮತ್ತೊಂದು ಸುದ್ದಿಯ ಪ್ರಕಾರ ಪ್ರಮೋದ್ ಮಧ್ವರಾಜ್ ನಡೆಸುತ್ತಿರುವ ಕೋಟ್ಯಂತರ ರುಪಾಯಿ ವಹಿವಾಟಿನ ಫಿಶ್ ಮಿಲ್‌ನಿಂದ ಮಲ್ಪೆಯಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಆ ಫ್ಯಾಕ್ಟರಿ ಬಂದ್ ಮಾಡಿಸುವ ಬೆದರಿಕೆಗೆ ಕಂಗಾಲಾಗಿರುವ ಪ್ರಮೋದ್ ಬಿಜೆಪಿ ಸೇರಬೇಕಾಗಿ ಬಂತೆನ್ನಲಾಗಿದೆ. ಮತ್ತೊಂದು ತರ್ಕದ ಪ್ರಕಾರ, ಬಿಜೆಪಿ ಸೇರಿದರೆ ಕೇಂದ್ರ ರಕ್ಷಣಾ ಮಂತ್ರಿ, ರಾಜ್ಯದ ಮುಖ್ಯಮಂತ್ರಿ ಆಗುವ ಯೋಗ ಖುಲಾಯಿಸಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಿಂದ ಪ್ರಮೋದ್ ಅತ್ತೂ ಕರೆದು ಬಿಜೆಪಿ ಸೇರ್ಪಡೆಯಾಗಿದ್ದಾರಂತೆ!

ಇದು ರಾಜಕೀಯ ಮತ್ತು ಔದ್ಯೋಗಿಕ ವಿಶ್ಲೇಷಣೆಯಾದರೆ, ಮೂಲಭೂತವಾಗಿ ಪ್ರಮೋದ್ ಸಂಘ ತತ್ವಾದರ್ಶದ ರಾಜಕಾರಣಿಯೆಂಬ ವ್ಯಾಖ್ಯಾನಗಳೂ ಬರಲಾರಂಭಿಸಿವೆ. ಸಿದ್ದರಾಮಯ್ಯ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಪ್ರಮೋದ್ ಬುದ್ಧಿಪೂರ್ವಕವಾಗೆ ಟಿಪ್ಪು ಜಯಂತಿಗೆ ಚಕ್ಕರ್ ಹಾಕಿದ್ದರೆಂದು ಅಂದು ಸುದ್ದಿಯಾಗಿತ್ತು. ಮಾಜಿ ಶಾಸಕನಾಗಿ ಸಂಘ ಶ್ರೇಷ್ಠರ ಮನ ಒಲಿಸುವ ಪ್ರಯತ್ನದಲ್ಲಿದ್ದ ಪ್ರಮೋದ್ ಕಾರ್ಯಕ್ರಮ ಒಂದರಲ್ಲಿ ತಾನು ಟಿಪ್ಪು ಜಯಂತಿಗೆ ಹೋಗದಂಥ ’ಸುಸಂದರ್ಭ’ ಒದಗಿಬಂದುದನ್ನು ವಿವರಿಸಿ ತನ್ನ ಅಸಹಿಷ್ಣು ರೀತಿ-ನೀತಿ ಬಹಿರಂಗ ಮಾಡಿಕೊಂಡಿದ್ದರು. ಅಷ್ಟ ಮಠದ ಕಾರ್ಯಕ್ರಮದಲ್ಲಿ- ’ಉಡುಪಿಯ ಕೃಷ್ಣ ದೇವಾಲಯವನ್ನು ಸಿದ್ದರಾಮಯ್ಯ ಸರಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸಿಎಂಗೆ ಫೋನ್ ಮಾಡಿ ತಡೆಯೊಡ್ಡಿದ್ದೆ’ ಎಂದು ಹೇಳಿದ್ದರು. ಅಲ್ಲಿಗೆ ಪ್ರಮೋದ್ ತಾವಿದ್ದ ಪಕ್ಷದ ಸಿದ್ಧಾಂತಕ್ಕೆ ಯಾವದೇ ನಿಷ್ಠೆ-ನಿಯತ್ತುಗಳಿಲ್ಲದೆ ಕೇವಲ ಅಧಿಕಾರ ಲಾಲಸೆಗಾಗಿ ಮಾತ್ರ ಕಾಂಗ್ರೆಸ್‌ನಲ್ಲಿದ್ದ ಸಂಘ ಪರಿವಾರ ಮನಸ್ಥಿತಿಯವರು ಎಂದು ಸ್ವಯಂ ಸಾಬೀತುಪಡಿಸಿಕೊಂಡಿದ್ದರೆನ್ನಲಾಗಿದೆ.

ಇಂಥ ಕನಿಷ್ಟ ಬದ್ಧತೆಯಿಲ್ಲದ ದೊಡ್ಡ ದಂಡೇ ಕರಾವಳಿ ಕಾಂಗ್ರೆಸ್ ಪಕ್ಷದಲ್ಲಿದೆ. ಕಾರವಾರದ ಮಾಜಿ ಶಾಸಕ-ಗಣಿ ಹಗರಣದಲ್ಲಿ ಜೈಲಿಗೆ ಹೋಗಿಬಂದಿರುವ ಸತೀಶ್ ಸೈಲ್ ಮತ್ತು ಜನತಾ ದಳದ ಮಾಜಿ ಮಂತ್ರಿ ಆನಂದ ಅಸ್ನೋಟಿಕರ್ ಬಿಜೆಪಿ ಪ್ರವೇಶಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್-ಜನತಾದಳದ ಅಭ್ಯರ್ಥಿಯಾಗಿದ್ದ ಆನಂದ ಅಸ್ನೋಟಿಕರ್ ತಮ್ಮ ಬಿಜೆಪಿ-ಸಂಘಪರಿವಾರದ ಎದುರಾಳಿ, ಶೂದ್ರ ವಿರೋಧಿ ಅನಂತಕುಮಾರ್ ಹೆಗಡೆ ಮತಾಂಧ ಮಸಲತ್ತುಗಾರನೆಂದು ನೇರಾನೇರ ಟೀಕಿಸಿದ್ದರು. ಆದರೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ ಮೊಟ್ಟಮೊದಲ ತಂಡದಲ್ಲಿದ್ದ ಆನಂದ ಅಲ್ಲಿ ಮಂತ್ರಿಯಾಗಿ, ಶಾಸಕ ಸ್ಥಾನದಿಂದಲೆ ಅನರ್ಹನಾಗಿ ಆ ಪಾರ್ಟಿಯಿಂದ ಹೊರಬಂದಿದ್ದರು. ಕಾಂಗ್ರೆಸ್ ಸೇರಲು ಆರ್.ವಿ.ದೇಶಪಾಂಡೆ ಬಿಡದಿದ್ದಾಗ ಜನತಾ ದಳಕ್ಕೆ ಹೋಗಿದ್ದರು. ಈಗ ಮತ್ತೆ ಬಿಜೆಪಿ ಸೇರಲು ಹವಣಿಸುತ್ತಿರುವ ಅಸ್ನೋಟಿಕರ್ ಬದ್ಧತೆಯೆ ಪ್ರಶ್ನಾರ್ಹವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

ಸತೀಶ್ ಸೈಲ್

ಮಾಜಿ ಶಾಸಕ ಸತೀಶ್ ಸೈಲ್ ದೈಹಿಕವಾಗಿ ಕಾಂಗ್ರೆಸ್‌ನಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್‌ರಿಗೆ ಟಿಕೆಟ್ ತಪ್ಪಿಸಿ ತಾನೆ ಬಿಜೆಪಿ ಶಾಸಕನಾಗುವ ಆಸೆಯಲ್ಲಿದ್ದಾರೆನ್ನಲಾಗಿದೆ. 2018ರ ಅಸೆಂಬ್ಲಿ ಚುನಾವಣಾ ಸಂದರ್ಭದಿಂದ ಗಣಿ ಲಾಬಿ ಮುಖಾಂತರ ಬಿಜೆಪಿ ಪ್ರವೇಶಿಸುವ ಎಲ್ಲ ತಂತ್ರಗಾರಿಕೆಯನ್ನೂ ಪ್ರಯೋಗಿಸುತ್ತಿದ್ದಾರೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಕೃಪಾಶೀರ್ವಾದದ ರೂಪಾಲಿ ನಾಯ್ಕ್ ಅಡ್ಡಗಾಲು ಹಾಕಿರುವುದು ಕಾರವಾರದಲ್ಲಿ ಬಹಿರಂಗ ರಹಸ್ಯ. ಬ್ರಾಹ್ಮಣರಿಗೂ ಮೀಸಲಾತಿ ಬೇಕೆನ್ನುವ ಮಂತ್ರಿ ಶಿವರಾಮ ಹೆಬ್ಬಾರ್, ಕಾಂಗ್ರೆಸ್‌ನಲ್ಲಿದ್ದಾಗ ಸಂಘ ತತ್ವ ಪರಿಪಾಲಕರಾಗಿದ್ದರು.

ಬಾಂಬೈ ಬಾಯ್ಸ್‌ಗೆ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ ಎನ್ನಲಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾರ್ ಚಿತ್ತ ಕಾಂಗ್ರೆಸ್‌ನತ್ತ ಹರಿದಿದೆ ಎನ್ನಲಾಗುತ್ತಿದೆ. ಹೆಬ್ಬಾರ್ ಕಾಂಗ್ರೆಸ್‌ಗೆ ಬಂದರೆ ಬಿಜೆಪಿಗೇ ಲಾಭವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಾರೆ. ಪಕ್ಷಾಂತರ ಮತ್ತು ಎಂಟಿ ಇನ್‌ಕಂಬೆನ್ಸ್‌ನಿಂದ ಜನರ ತಾತ್ಸಾರಕ್ಕೆ ತುತ್ತಾಗಿರುವ ಹೆಬ್ಬಾರ್‌ಗೆ ಆನಂದ್ ಅಸ್ನೋಟಿಕರ್ ಪರಿಸ್ಥಿತಿ ಬಂದರೆ ಅಚ್ಚರಿ ಇಲ್ಲವೆನ್ನಲಾಗುತ್ತಿದೆ. ಹಳಿಯಾಳದ ಮಾಜಿ ಎಮ್ಮೆಲ್ಸಿ ಶ್ರೀಕಾಂತ ಘೋಟನೇಕರ್ ಬಿಜೆಪಿ ಮೇಲೆ ಕಣ್ಣಿಟ್ಟು ’ಶಿವಾಜಿ ಮಹಾರಾಜ್ ಕಿ ಜೈ’ ಎನ್ನುತ್ತಿದ್ದಾರೆ. ಮರಾಠರು ಹೆಚ್ಚಿರುವ ಹಳಿಯಾಳದಲ್ಲಿ ಕೇಸರಿ ಹವಾ ಬೀಸುತ್ತಿರುವುದನ್ನು ಅರಿತಿರುವ ಘೋಟನೇಕರ್ ಪರೋಕ್ಷವಾಗಿ ಕೇಸರಿ ಅಭಿಯಾನಕ್ಕೆ ಅನುವು ಮಾಡಿ ಕೊಡುತ್ತ ಮುಂದೊಂದು ದಿನ ಅದರ ಲಾಭ ತನಗೆ ಅಥವಾ ತನ್ನ ಮಗನಿಗೆ ದಕ್ಕುವ ದೂ(ದು)ರಾಲೋಚನೆ ನಡೆಸಿದ್ದಾರೆಂಬ ಚರ್ಚೆಗಳು ನಡೆದಿದೆ.

ಒಂದು ಗಮನಾರ್ಹ ಅಂಶವೆಂದರೆ ಬಿಜೆಪಿಗೆ ಹೋಗುವವರು ರಸಭರಿತ ಕಬ್ಬಾಗಿ ಹೋಗುತ್ತಾರೆ; ರಸ ಹಿಂಡಿದ ಜಲ್ಲೆಯಾಗಿ ಹೊರಬರುತ್ತಿದ್ದಾರೆ. ಬಿಜೆಪಿಯಲ್ಲಿ ಇರುವಷ್ಟು ದಿನ ಸಂಘ ಸೂತ್ರಧಾರರ ಆಜ್ಞಾನುಧಾರಿಗಳಾಗಿ ತಮ್ಮದೇ ಅಸ್ತಿತ್ವಕ್ಕೆ ಮುಳುವಾಗುವಷ್ಟು ಹಿಂದುತ್ವ ಮತ್ತು ಮತೋನ್ಮತ್ತ ಮಸಲತ್ತು ಮಾಡುತ್ತ ಭಸ್ಮಾಸುರರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸಮಾಜದ ನೆಮ್ಮದಿಗೂ ಭಂಗ ತರುತ್ತಿರುವುದು ದುರಂತವೆಂದು ಪ್ರಜ್ಞಾವಂತರು ಕಳವಳ ಪಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...