Homeಕರ್ನಾಟಕಮಳಲಿ ಪೇಟೆ ಮಸೀದಿ ವಿವಾದ | ಆಡಳಿತ ಮಂಡಳಿ ಅರ್ಜಿ ವಜಾ; ಬಿಜೆಪಿ ಬೆಂಬಲಿತ ವಿಎಚ್‌ಪಿ...

ಮಳಲಿ ಪೇಟೆ ಮಸೀದಿ ವಿವಾದ | ಆಡಳಿತ ಮಂಡಳಿ ಅರ್ಜಿ ವಜಾ; ಬಿಜೆಪಿ ಬೆಂಬಲಿತ ವಿಎಚ್‌ಪಿ ಅರ್ಜಿ ಪುರಸ್ಕರಿಸಿದ ಕೋರ್ಟ್‌

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಪೇಟೆಯಲ್ಲಿರುವ, ಮಸೀದಿ ವಿವಾದ ಪ್ರಕರಣವನ್ನು ಅಧೀನ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಬಹುದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಬುಧವಾರ ಆದೇಶಿಸಿದ್ದು, 2023ರ ಜನವರಿ 8ರಂದು ಅರ್ಜಿ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಯಾದ ವಿಎಚ್‌ಪಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಮಳಲಿ ಮಸೀದಿ ವಿವಾದ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಸಿವಿಲ್‌ ನ್ಯಾಯಾಲಯವೇ ಆಲಿಸಲಿದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಳಲಿ ಮಸೀದಿಯಲ್ಲಿ ದೇಗುಲ ಮಾದರಿ ರಚನೆ ಪತ್ತೆಯಾಗಿದ್ದು, ಕೋರ್ಟ್​ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕು” ಎಂದು ಕೋರಿ ವಿಹೆಚ್‌ಪಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಸೀದಿ ಸಮಿತಿ, “ಇಂಥ ಆದೇಶ ಮಾಡಲು ಅಧೀನ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಎಚ್‌ಪಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು” ಎಂದು ಕೋರಿತ್ತು.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ಮಳಲಿಪೇಟೆಯ ಪ್ರಾಚೀನ ಮಸೀದಿ ನವೀಕರಣ ಕಾಮಗಾರಿಯ ವೇಳೆ ಅದರ ಸಾಂಪ್ರದಾಯಿಕ ಕೆತ್ತನೆ ಹಾಗೂ ರಚನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದನ್ನು ವಿವಾದ ಮಾಡಿದ್ದ ವಿಎಚ್‌ಪಿ ಮಸೀದಿಯ ರಚನೆಯು ದೇವಾಲಯದ ಮಾದರಿಯಲ್ಲಿದೆ ಎಂದು ವಾದಿಸಿ ದಾವೆ ಹೂಡಿತ್ತು. ಧನಂಜಯ್ ಮತ್ತು ಮನೋಜ್ ಕುಮಾರ್ ಎಂಬುವವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಈ ದಾವೆ ಹೂಡಿದ್ದರು. ನಂತರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು.

ಈ ಮಧ್ಯೆ, ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅಡಿಯಲ್ಲಿ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು.

ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಇದನ್ನೂ ಓದಿ:  ಮಸೀದಿ ವಾಸ್ತು ಶೈಲಿಗಳೂ, ಪೊಳ್ಳು ವಾದಗಳೂ!

ಏನಿದು ವಿವಾದ?

ಸ್ಥಳೀಯರ ಪ್ರಕಾರ ಮಳಲಿ ಮಸೀದಿ ಸುಮಾರು 900 ನೂರು ವರ್ಷಗಳಷ್ಟು ಹಳೆಯದು. ಊರು ಬೆಳೆದಂತೆ ಈ ಮಸೀದಿಯಲ್ಲಿ ಜನರಿಗೆ ಜಾಗ ಸಾಕಾಗದ ಕಾರಣಕ್ಕೆ ಅದರ ಹೊರ ಭಾಗದಲ್ಲಿ ಕೂಡಾ ಮಸೀದಿಯನ್ನು ವಿಸ್ತರಿಸಲಾಗಿತ್ತು. ಎಪ್ರಿಲ್‌‌ನಲ್ಲಿ ಪ್ರಾಚೀನ ಮಸೀದಿಯ ರಚನೆಯನ್ನು ಹಾಗೆ ಬಿಟ್ಟು, ನಂತರ ವಿಸ್ತರಿಸಿರುವ ಕಟ್ಟಡವನ್ನು ಕೆಡವಿ ನವೀಕರಣಕ್ಕೆ ಊರಿನ ಜನರು ಸಿದ್ದತೆ ನಡೆಸಿದ್ದರು. ಈ ವೇಳೆ ಪ್ರಾಚೀನ ಮಸೀದಿಯ ಶೈಲಿಯ ಕಾರಣಕ್ಕೆ ಅದನ್ನು ವಿವಾದ ಮಾಡಲಾಗುತ್ತಿದೆ.

ಬಿಜೆಪಿ ಬೆಂಬಲಿತ ಬಜರಂಗದಳ ಮತ್ತು ವಿಎಚ್‌ಪಿ ಸುದ್ದಿ ಹರಡಿರುವಂತೆ ಅದು ಹೊಸದಾಗಿ ಪತ್ತೆಯಾದ ಕಟ್ಟಡ ಅಲ್ಲ. ಜೊತೆಗೆ ಅದು ದರ್ಗಾವನ್ನು ಕಡೆವಿದಾಗ ಧುತ್ತನೆ ಪ್ರತ್ಯಕ್ಷವಾದ ಕಟ್ಟಡವೂ ಅಲ್ಲ. “ನಾವು ಅಲ್ಲಿಯೆ ತಲತಲಾಂತರದಿಂದ ನಮಾಜ್‌ ಮಾಡುತ್ತಲೇ ಬಂದಿದ್ದೇವೆ” ಎಂದು ಸ್ಥಳೀಯ ನಾಗರೀಕ ಝಾಕಿರ್‌ ನಾನುಗೌರಿ.ಕಾಂಗೆ ಹೇಳಿದ್ದಾರೆ.

ಎಪ್ರಿಲ್‌ನಲ್ಲಿ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ್ದ ಮಳಲಿ ಪೇಟೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್‌ ಮಾಮು, “ಇದು ಸುಮಾರು 900 ವರ್ಷಗಳಷ್ಟು ಹಳೆಯ ಮಸೀದಿಯಾಗಿದೆ. ಇದೇನೂ ಹೊಸದಾಗಿ ಏನೂ ಪತ್ತೆಯಾಗಿದ್ದಲ್ಲ, ನಾವು ತಲೆಮಾರುಗಳಿಂದಲೂ ಪ್ರಾರ್ಥನೆ ಮಾಡುತ್ತಲೆ ಬಂದಿರುವ ಮಸೀದಿಯಾಗಿದೆ. ಹೊರಗಿನ ಕಟ್ಟಡಗಳನ್ನು ಕೆಡವಿದಾಗ ಅದರ ಆಕರ್ಷಕ ಶೈಲಿಯ ರಚನೆಗಳು ಹೊರಗೆ ಗೋಚರಿಸಿದೆ. ಈ ರೀತಿಯ ಮಸೀದಿಯನ್ನು ಕಂಡಿರದ ಹಾಗೂ ಈಗಾಗಲೆ ಬಿಜೆಪಿ ಹರಡಿರುವ ಸುಳ್ಳುಗಳಿಂದ ಪ್ರೇರೇಪಿತರಾಗಿರುವವರು ಮಸೀದಿಯನ್ನು ದೇವಸ್ಥಾನ ಎಂದು ಯಾವುದೆ ಆಧಾರ ಇಲ್ಲದೆ ಪ್ರತಿಪಾದಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:  ‘ಮಸ್ಜಿದ್‌‌ ಝೀನತ್‌ ಭಕ್ಷ್‌’: ಕರ್ನಾಟಕದ ಅತ್ಯಂತ ಪುರಾತನ ಮಸೀದಿಯನ್ನು ದೇವಸ್ಥಾನ ಎಂದು ಪ್ರತಿಪಾದಿಸಿ ವಿಡಿಯೊ ವೈರಲ್‌‌ ಮಾಡಿರುವ ದುಷ್ಕರ್ಮಿಗಳು

“ಇದೇ ಮಾದರಿಯ ವಾಸ್ತುಶೈಲಿಯ ಪ್ರಾಚೀನ ಮಸೀದಿಗಳು ಕರಾವಳಿಯಲ್ಲಿ ಹಲವಾರು ಇದೆ. ಮಸೀದಿಯ ವಾಸ್ತು ಶೈಲಿ ಹಾಗೆ ಇದ್ದ ಕೂಡಲೇ ಅದು ದೇವಸ್ಥಾನಗಳು ಆಗುತ್ತದೆಯೆ?. ಈ ರೀತಿಯ ವಾಸ್ತುಶೈಲಿ ಮಸೀದಿಗೆ ಇರಬಾರದು ಎಂದರೆ ಯಾವ ನ್ಯಾಯ?” ಎಂದು ಅವರು ಪ್ರಶ್ನಿಸಿದ್ದರು.

ಮಳಲಿ ಮಸೀದಿಯ ವಾಸ್ತುಶೈಲಿಯನ್ನು ಅಭ್ಯಾಸ ಮಾಡಿದ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ, “ಮಳಲಿ ಮಸೀದಿಯು ದ್ರಾವಿಡ ಶೈಲಿಯ ಒಂದು ಪ್ರಬೇಧವಾದ ಕೇರಳ ವಾಸ್ತುವನ್ನು ಬಳಸಿಕೊಂಡಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾದ್ದರಿಂದ, ಇಳಿಜಾರಾದ ಮಾಡು ಬಹಳ ಅಗತ್ಯ.‌ ಮಾಡನ್ನು ಮುಳಿ ಹುಲ್ಲು ಅಥವಾ ಹಂಚು ಬಳಸಿ ಕಟ್ಟಲಾಗಿದೆ. ಒಳಗಿನ ಕಂಬವು ವಿಜಯನಗರ ಕಾಲದ್ದು.‌ ಹೀಗಾಗಿ ಇದು ಸುಮಾರು 15-16ನೇ ಶತಮಾನದ್ದೆಂದು ಹೇಳಬಹುದು. ಹಿಂದೂ ಮುಸ್ಲಿಂ ಮೈತ್ರಿಯನ್ನು ಸಾರುವ ಇಂಥ ಕಟ್ಟಡಗಳು ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ” ಎಂದು ಹೇಳಿದ್ದಾರೆ.

“ವಿಜಯನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಇಂಡೋ ಸಾರ್ಸೆನಿಕ್ (ಇಂಡೋ-ಇಸ್ಲಾಮಿಕ್) ಶೈಲಿಯ ಅನೇಕ ಧಾರ್ಮಿಕ ಕಟ್ಟಡಗಳು ಬೆಳೆದಿವೆ. ಇವು ಎರಡೂ ಸಂಸ್ಕೃತಿಗಳ ಅತ್ಯುತ್ತಮ ಅಂಶಗಳನ್ನು ಒಟ್ಟಿಗೆ ತರುವ ಪ್ರಯತ್ನ.‌ ಹಂಪಿಯ ಕಮಲ ಮಹಲ್ ಇದಕ್ಕೆ ಒಳ್ಳೆಯ ಉದಾಹರಣೆ” ಎಂದು ಡಾ. ಬಿಳಿಮಲೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ತುಳುನಾಡಿನ ಮಸೀದಿಗಳು ದ್ರಾವಿಡಶೈಲಿಯಲ್ಲಿ ಯಾಕಿದೆ? ತುಳುನಾಡಿನ ಇತಿಹಾಸವೇನು? ಮಾಧ್ಯಮಗಳ ಸುಳ್ಳುಗಳೇನು?

ಮಸೀದಿಯ ಒಳಭಾಗದ ದೃಶ್ಯವನ್ನು ಕೆಳಗಿನ ವಿಡಿಯೊದಲ್ಲಿ ನೋಡಿ

ಕರ್ನಾಟಕದ ಕರಾವಳಿಯಲ್ಲಿ ಹಾಗೂ ನೆರೆಯ ಕೇರಳದಲ್ಲೂ ಇದೇ ರೀತಿಯ ಹಲವಾರು ಮಸೀದಿಗಳು ಇವೆ. ಉದಾಹರಣೆಗೆ ಕಾಸರಗೋಡಿನ ಮಾಲಿಕು ದಿನಾರ್‌‌ ಮಸೀದಿಯನ್ನು ಓದುಗರು ಗಮನಿಸಬಹುದು.

ಕರಾವಳಿಯ ಪ್ರಾಚೀನ ಮಸೀದಿಯ ಬಗ್ಗೆ ಹಲವಾರು ಡಾಕ್ಯುಮಂಟ್‌ ಮಾಡುತ್ತಿರುವ ಲೇಖಕ, ಇಸ್ಮತ್‌ ಪಜೀರ್‌, “ಮಸೀದಿಗೆ ಸುಮಾರು 900 ವರ್ಷಗಳ ಇತಿಹಾಸವಿದೆ. 900 ವರ್ಷಗಳ ಹಿಂದೆಯೆ ಪ್ರಸ್ತುತ ಕಾಣುತ್ತಿರುವಂತೆ ವೈಭವಯುತವಾಗಿ ಕಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಅದನ್ನು ನವೀಕರಣ ಮಾಡುತ್ತಲೇ ಬಂದಿದ್ದಾರೆ. ಈ ರೀತಿಯ ಹಲವಾರು ಮಸೀದಿಗಳು ಕರಾವಳಿಯಲ್ಲಿ ಇವೆ. ಉದಾಹರಣೆಗೆ ಹಳೆ ಬಂದರ್‌ನಲ್ಲಿ ಇರುವ 1400 ವರ್ಷಗಳ ಹಿಂದಿನ ಝೀನತ್‌ ಬಖ್ಷ್‌ ಮಸೀದಿ. ದ್ರಾವಿಡ ವಾಸ್ತುಶೈಲಿ ಇದ್ದಕೂಡಲೇ ಅದು ದೇವಸ್ಥಾನ ಆಗುವುದಿಲ್ಲ. ಇಲ್ಲಿನ ಮುಸ್ಲಿಮರು ಕೂಡಾ ಸ್ಥಳೀಯ ದ್ರಾವಿಡ ಸಂಸ್ಕೃತಿಯವರೇ ಆಗಿರುವುದರಿಂದ ಅವರು ಕಟ್ಟಿದ ಮಸೀದಿ ಸ್ಥಳೀಯ ಶೈಲಿಯಲ್ಲೇ ಇರುತ್ತದೆ. ಅದರಲ್ಲಿ ವಿಶೇಷ ಏನೂ ಇಲ್ಲ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಳ, ಉಳ್ಳಾಲ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಮೂವತ್ತು ಪುರಾತನ ಮಸೀದಿಗಳಿವೆ ಎಂದು ಇಸ್ಮತ್‌ ಪಜೀರ್‌ ಹೇಳುತ್ತಾರೆ. ಅದರಲ್ಲೂ ಜಿಲ್ಲೆಯ ವಲವೂರು, ಅಕ್ಕರಂಗಡಿ, ಅಜಿಲಮೊಗರು, ವಿಟ್ಲ ಪರ್ತಿಪ್ಪಾಡಿ, ಅಮ್ಮುಂಜೆ ಸೇರಿದಂತೆ ಆರರಿಂದ ಏಳು ಮಸೀದಿಗಳು ಮಳಲಿ ಪೇಟೆಯಲ್ಲಿರುವ ಮಸೀದಿಯ ವಾಸ್ತು ಶೈಲಿಯಲ್ಲೇ ಕಟ್ಟಲ್ಪಟ್ಟಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...