Homeಕರ್ನಾಟಕ‘ಮಸ್ಜಿದ್‌‌ ಝೀನತ್‌ ಭಕ್ಷ್‌’: ಕರ್ನಾಟಕದ ಅತ್ಯಂತ ಪುರಾತನ ಮಸೀದಿಯನ್ನು ದೇವಸ್ಥಾನ ಎಂದು ಪ್ರತಿಪಾದಿಸಿ ವಿಡಿಯೊ ವೈರಲ್‌‌...

‘ಮಸ್ಜಿದ್‌‌ ಝೀನತ್‌ ಭಕ್ಷ್‌’: ಕರ್ನಾಟಕದ ಅತ್ಯಂತ ಪುರಾತನ ಮಸೀದಿಯನ್ನು ದೇವಸ್ಥಾನ ಎಂದು ಪ್ರತಿಪಾದಿಸಿ ವಿಡಿಯೊ ವೈರಲ್‌‌ ಮಾಡಿರುವ ದುಷ್ಕರ್ಮಿಗಳು

- Advertisement -
- Advertisement -

ಕರಾವಳಿ ನಗರವಾದ ಮಂಗಳೂರಿನಲ್ಲಿ ಮಸೀದಿಯಾಗಿ ಪರಿವರ್ತನೆಯಾಗಿರುವ ಪುರಾತನ ದೇವಾಲಯದ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವಾರು ಬಿಜೆಪಿಯನ್ನು ಬೆಂಬಲಿಸುವ ಬಲಪಂಥೀಯ ವ್ಯಕ್ತಿಗಳು ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಝೀನತ್‌ ಭಕ್ಷ್‌ ಮಸೀದಿಯ ಬಗ್ಗೆಗಿನ ಸುಳ್ಳು ಪೋಸ್ಟ್‌‌

ವಿಡಿಯೊದಲ್ಲಿ, ಮಸೀದಿಯಲ್ಲಿರುವ ಕೆರೆ, ಮಸೀದಿಯ ಸುಂದರವಾದ ಕೆತ್ತನೆಗಳು, ಮಸೀದಿಯ ರಚನೆಗಳನ್ನು ಕಾಣಬಹುದಾಗಿದೆ.


ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವೀಡಿಯೊದ ಮೇಲಿನ ಎಡ ಭಾಗದಲ್ಲಿ “Thousands  shades of India” ಎಂಬ ಸಾಲಿನ ವಾಟರ್‌ಮಾರ್ಕ್ ಅನ್ನು ನೋಡಬಹುದು. ಈ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊವನ್ನು ಹುಡುಕಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವಿಡಿಯೊವನ್ನು 20 ಡಿಸೆಂಬರ್ 2021 ರಂದು ‘ದಿ ಥೌಸಂಡ್ ಶೇಡ್ಸ್ ಆಫ್ ಇಂಡಿಯಾ’ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ಅವರು ಅದನ್ನು ಮಂಗಳೂರು ಬಂದರು ಪ್ರದೇಶದಲ್ಲಿ ಇರುವ ಪುರಾತನ ಝೀನತ್ ಬಕ್ಷ್ ಮಸೀದಿಯ ವಿಡಿಯೊ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಕರ್ನಾಟಕದದಲ್ಲಿ ನಿರ್ಮಿಸಲಾದ ಮೂರನೇ ಅತ್ಯಂತ ಹಳೆಯ ಮಸೀದಿ ಎಂದು ಇತಿಹಾಸ ಹೇಳುತ್ತದೆ.

ಜೀನತ್ ಬಕ್ಷ್ ಮಸೀದಿಯ ಇತಿಹಾಸವು ‘ಕರ್ನಾಟಕ ಪ್ರವಾಸೋದ್ಯಮ’ ವೆಬ್‌ಸೈಟ್ ಮತ್ತು ಝೀನತ್ ಬಕ್ಷ್ ಮಸೀದಿ ಫೇಸ್‌ಬುಕ್ ಪೇಜ್‍ನಲ್ಲಿ ಲಭ್ಯವಿದೆ. ‘ಬೆಲಿಯೊ ಪಲ್ಲಿ’ ಅಥವಾ ‘ಝೀನತ್‌‌ ಭಕ್ಷ್‌ ಜಮ್ಮಾ ಮಸೀದಿ’ ಎಂದೂ ಕರೆಯಲ್ಪಡುವ ಮಸೀದಿಯನ್ನು ಅರಬ್ ವ್ಯಾಪಾರಿಗಳು, ಕಿತ್ ಮತ್ತು ಸಹಬಾಸ್ (ಪ್ರವಾದಿ ಮೊಹಮ್ಮದ್ ಅವರ ಸಹಚರರು) ಸ್ಥಾಪಿಸಿದರು ಎಂದು ನಂಬಲಾಗಿದೆ.

ಇದನ್ನೂ ಓದಿ: Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು

ಝೀನತ್ ಬಕ್ಷ್ ಮಸೀದಿಯು ಸಂಪೂರ್ಣ ಭಾರತೀಯ ವಾಸ್ತುಶಿಲ್ಪದ ಶೈಲಿಯಿಂದಾಗಿ ಎಲ್ಲಾ ಮಸೀದಿಗಳನ್ನು ಮೀರಿಸುತ್ತದೆ. ಕ್ರಿಸ್ತ ಶಕ 7 ನೇ ಶತಮಾನದ ಅವಧಿಯಲ್ಲಿ, ಅರಬ್ ಮುಸ್ಲಿಂ ವ್ಯಾಪಾರಿಗಳು ಸ್ಥಳೀಯ ಜನಸಂಖ್ಯೆ ಮತ್ತು ಪಶ್ಚಿಮ ಕರಾವಳಿಯ ಆಡಳಿತಗಾರರೊಂದಿಗೆ ಅತ್ಯಂತ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದರು.

ವಿವರಗಳ ಪ್ರಕಾರ, ಮಲಬಾರ್‌ನ ರಾಜಾ ಚೆರುಮಾನ್ ಪೆರುಮಾಳ್ ಅರಬ್ ವ್ಯಾಪಾರಿಗಳಿಗೆ ಸೂಕ್ತವಾದ ವಸತಿ ಮತ್ತು ವ್ಯಾಪಾರ ಮಾಡುವ ಸ್ಥಳವನ್ನು ನೀಡಿದ್ದರು ಮತ್ತು ಅವರ ಮಸೀದಿಗಳನ್ನು ನಿರ್ಮಿಸಲು ಭೂಮಿಯನ್ನು ಸಹ ಒದಗಿಸಿದ್ದರು.

ನಂತರ, 17 ನೇ ಶತಮಾನದಲ್ಲಿ, ಟಿಪ್ಪು ಸುಲ್ತಾನ್ ಈ ಮಸೀದಿಯನ್ನು ಸುಂದರವಾದ ಮರದ ಕೆತ್ತನೆಗಳೊಂದಿಗೆ ನವೀಕರಿಸಿದ್ದರು. ನಂತರ ತನ್ನ ಮಗಳ ಹೆಸರನ್ನು ಮಸೀದಿಗೆ ಇಟ್ಟು ಝೀನತ್ ಬಕ್ಷ್ ಎಂದು ಹೆಸರಿಸಿದ್ದರು. ಮಸೀದಿ ಜೀನತ್ ಬಕ್ಷ್ ರೋಸ್‌ವುಡ್ ಮತ್ತು ತೇಗದ ಮರದಗಳಿಂದ ವಿನ್ಯಾಸಗೊಳಿಸಲಾಗಿದೆ. ಉತ್ಕೃಷ್ಟ ಬಗೆಯ ಗೋಡೆಗಳು, ಬಾಗಿಲುಗಳು ಮತ್ತು ಮಹಡಿಗಳನ್ನು ಒಳಗೊಂಡಿದೆ. ಬಂದರ್‌ನಲ್ಲಿರುವ ಜೀನತ್ ಬಕ್ಷ್ ಮಸೀದಿಯನ್ನು ಹಿಂದೂ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!

ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯದ ಮಂಗಳೂರಿನ ಜೀನತ್ ಬಕ್ಷ್ ಮಸೀದಿಯು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗುತ್ತಿರುವ ಪೋಸ್ಟ್‌‌ನಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳಾಗಿದೆ. ಕೃಪೆ:ಫ್ಯಾಕ್ಟ್‌ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...