Homeಕರ್ನಾಟಕExclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು

Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು

ಬೆಂಗಳೂರಿನ ಬಸವನಗುಡಿ ಮಸೀದಿಗೆ ಸೇರಿದ ಮಳಿಗೆಗಳಲ್ಲಿ ಹಿಂದೂ ಮುಸ್ಲಿಂ ವ್ಯಾಪಾರಿಗಳಿಬ್ಬರೂ ತಮ್ಮ ಬದುಕು ಕಂಡುಕೊಂಡಿದ್ದಾರೆ. ಮುಸ್ಲಿಮರು ಮಂದಿರಗಳ ಬಳಿ ವ್ಯಾಪಾರ ಮಾಡಬಾರದೆಂದು ಮತೀಯ ಸಂಘಟನೆಗಳು ಮಾಡುತ್ತಿರುವ ರಾಜಕಾರಣವನ್ನು ಹಿಂದೂ ವ್ಯಾಪಾರಿಗಳು ಖಂಡಿಸಿದ್ದಾರೆ. (ಮುಂದೆ ಓದಿರಿ...)

- Advertisement -
- Advertisement -

“ರೋಡಲ್ಲಿ ಹೋಗೋರು ವ್ಯಾಪಾರ ಮಾಡ್ತಾರೆ, ಹಿಂದೂ ಮುಸ್ಲಿಮರೆಲ್ಲ ನಮ್ಮಲ್ಲಿ ಖರೀದಿಸುತ್ತಾರೆ. ನೋಡಿ ಪಕ್ಕದಲ್ಲೇ ಮಸೀದಿ ಇದೆ. ಇಲ್ಲಿ ವ್ಯಾಪಾರ ಮಾಡಬೇಡಿ ಎಂದು ಮಸೀದಿಯವರೇನೂ ನಮಗೆ ತೊಂದರೆ ಕೊಡುತ್ತಿಲ್ಲ. ಎಲ್ಲರದ್ದೂ ಹೊಟ್ಟೆಪಾಡು. ಜಾತಿ, ಧರ್ಮದ ಕಾರಣಕ್ಕೆ ಯಾರಿಗೂ ತೊಂದರೆ ಕೊಡಬಾರದು” ಎನ್ನುತ್ತಾರೆ ಮಂಡ್ಯ ಮೂಲದ ವ್ಯಾಪಾರಿ ಕೃಷ್ಣ.

ಕಳೆದ ಏಳೆಂಟು ವರ್ಷಗಳಿಂದ ಬಸವನಗುಡಿಯ ಮಸೀದಿ ಪಕ್ಕದಲ್ಲೇ ತಳ್ಳೋಗಾಡಿಯಲ್ಲಿ ನಿಂಬೆ ಹಣ್ಣು ಹಾಗೂ ಇತರೆ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಅವರು, ಇಂದಿನ ಬೆಳವಣಿಗೆಗಳನ್ನು ಕಟುವಾಗಿ ಟೀಕಿಸುತ್ತಾರೆ. ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಅಡ್ಡಿಪಡಿಸುತ್ತಿರುವ ಸಂಘಟನೆಗಳ ವರ್ತನೆಗಳಿಗೆ ಬೇಸರ ವ್ಯಕ್ತಪಡಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಂಡ್ಯ ಮೂಲದ ಕೃಷ್ಣ ಅವರು ಬಸವನಗುಡಿ ಮಸೀದಿ ಬಳಿ ವ್ಯಾಪಾರ ಮಾಡುತ್ತಿದ್ದು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದರು.

ಬೆಂಗಳೂರಿನ ಬಸವನಗುಡಿಯ ಖಾಝಿ ಸ್ಟ್ರೀಟ್‌ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಈಗ ರಂಜಾನ್ ಮಾಸವೂ ಇರುವುದರಿಂದ ವ್ಯಾಪಾರ ವಹಿವಾಟು ಕೂಡ ಜೋರಾಗಿ ನಡೆಯುತ್ತಿದೆ. ಇಲ್ಲಿನ ಮಸೀದಿಯ ನೆಲಮಹಡಿಯಲ್ಲಿರುವ ಮಳಿಗೆಗಳಲ್ಲಿ ಹಿಂದೂ, ಮುಸ್ಲಿಮ್ ಬಾಂಧವರಿಬ್ಬರೂ ಕಾಯಕ ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: 40% ಕಮಿಷನ್‌ ನಿಜ; 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷರ ಗಂಭೀರ ಆರೋಪ

ಇಲ್ಲಿನ ಮಳಿಗೆಯೊಂದರಲ್ಲಿ ಕಳೆದ 42 ವರ್ಷಗಳಿಂದ ಹಿಂದೂ ಕುಟುಂಬವೊಂದು ಜೀವನೋಪಾಯ ಕಂಡುಕೊಂಡಿದೆ. ಟೈಲರಿಂಗ್ ಮಾಡುತ್ತಿದ್ದ ರೂಪಾ ರಾಘವೇಂದ್ರ ಎಂಬವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಳೆದ 42 ವರ್ಷಗಳಿಂದ ನಮ್ಮ ಮಾವನವರು ಇಲ್ಲಿ ವಹಿವಾಟು ನಡೆಸುತ್ತಿದ್ದರು. ಈಗ ನಾನು ಹಾಗೂ ನನ್ನ ಗಂಡ ಇದೇ ವೃತ್ತಿಯನ್ನು ಇಲ್ಲಿಯೇ ಮುಂದುವರಿಸಿದ್ದೇವೆ. ಈ ಮಳಿಗೆಯು ಮಸೀದಿಗೆ ಸೇರಿದೆ. ಆದರೆ ಮುಸ್ಲಿಮರ್‍ಯಾರೂ ನಮಗೆ ತೊಂದರೆ ಕೊಟ್ಟಿಲ್ಲ. ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ಮಾರಾಟ ಮಾಡಬೇಡಿ ಎಂದು ಹೇಳುತ್ತಿರುವುದು ತುಂಬಾ ಹಿಂಸೆ ತಂದಿದೆ. ಬೇಕಂತಲೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ರೂಪಾ ರಾಘವೇಂದ್ರ ಅವರು ಬಸವನಗುಡಿ ಮಸೀದಿಗೆ ಸೇರಿದ ಮಳಿಗೆಯಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ.

ಮಾತು ಮುಂದುವರಿಸಿದ ಅವರು, “ನಮಗೆ ಮುಸ್ಲಿಮರೇ ಹೆಚ್ಚು ಗ್ರಾಹಕರಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರಿದ್ದಾರೆ. ಸುಮ್ಮನೆ ಈ ರೀತಿಯ ಗಲಾಟೆಗಳನ್ನು ಬಿಟ್ಟು ಅವರವರ ಕೆಲಸ ಮಾಡಿಕೊಂಡರೆ ಒಳ್ಳೆಯದು. ಈಗ ಕೋವಿಡ್ ಇಲ್ಲದ ಕಾರಣ ಇದನ್ನು ಎತ್ತಿಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ಎಷ್ಟೊಂದು ಸಮಸ್ಯೆಯಾಯಿತು. ಜನರು ಬದುಕಲು ಬಿಡಿ. ಮಕ್ಕಳನ್ನು ಓದಲು ಬಿಡಿ. ಈ ಗಲಾಟೆಗಳಿಂದ ಒಳ್ಳೆಯದಾಗಲ್ಲ. ಹಿಂದೂ ಮುಸ್ಲಿಂ ಗಲಭೆಗಳಾಗುತ್ತವೆ ಅಷ್ಟೇ” ‌ಎಂದು ಎಚ್ಚರಿಸಿದರು. ಅವರ ವಿಡಿಯೋ ನೋಡಿ.

ಮಸೀದಿಯ ಎದುರಲ್ಲೇ ನಂದಿನಿ ಹಾಲು ಉತ್ಪನ್ನ ಮಳಿಗೆ ಇದೆ. ಮಳಿಗೆಯಲ್ಲಿದ್ದ ಸುನಂದಾ ಅವರನ್ನು ಮಾತನಾಡಿಸಿದಾಗ, “ನನ್ನ ಯಜಮಾನರು ಸುಮಾರು 25 ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಮರೆಲ್ಲ ಅಣ್ಣತಮ್ಮಂದಿರಂತೆ ಇದ್ದೇವೆ. ಮಸ್ಲಿಮರೇ ನಮ್ಮಲ್ಲಿ ಹೆಚ್ಚು ವ್ಯಾಪಾರ ಮಾಡುತ್ತಾರೆ. ನಮ್ಮ ಕೆಲಸವನ್ನು ನಾವು ನೋಡಿಕೊಳ್ಳಬೇಕು. ಬೇರೆಯವರಿಗೆ ತೊಂದರೆ ಕೊಡಬಾರದು. ಎಲ್ಲರೂ ನಮ್ಮಂಥೇ ಅಲ್ಲವೇ?” ಎಂದು ಪ್ರಶ್ನಿಸಿದರು.

ಬಸವನಗುಡಿ ಮಸೀದಿಗೆ ಎದುರಲ್ಲೇ ಇರುವ ನಂದಿನಿ ಉತ್ಪನ್ನಗಳ ಮಳಿಗೆಯ ವ್ಯಾಪಾರಿ ಸುನಂದಾ ಅವರು ‘ಹಿಂದೂ ಮುಸ್ಲಿಂ’ ಸಹೋದರತೆಯ ಕುರಿತು ತಿಳಿಸಿದರು.

ಹಣ್ಣು, ತರಕಾರಿ ಮಾರುವ ತಮಿಳುನಾಡಿನ ಸೆಲಂನ ಧನಲಕ್ಷ್ಮಿ ಅವರು ಮಸೀದಿ ಬದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬದುಕು ಕಂಡುಕೊಂಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣನ್ನು ಮಾರುತ್ತಲೇ ಮಾತಿಗಿಳಿದ ಅವರು, “ಒಂದು ದಿನ ಬರದಿದ್ದರೆ ಏನಾಯಿತೆಂದು ಇಲ್ಲಿನ ಮುಸ್ಲಿಮರು ವಿಚಾರಿಸುತ್ತಾರೆ” ಎಂದು ತಮ್ಮ ಬಾಂಧವ್ಯವನ್ನು ಹಂಚಿಕೊಂಡರು.

ಬಸವನಗುಡಿ ಮಸೀದಿ ಬಳಿ ತಮಿಳುನಾಡಿನ ಧನಲಕ್ಷ್ಮಿಯವರು ಕಳೆದ ಹತ್ತು ವರ್ಷಗಳಿಂದ ತರಕಾರಿ, ಹಣ್ಣುಗಳನ್ನು ಮಾರುತ್ತಾ ಜೀವನ ಕಂಡುಕೊಂಡಿದ್ದಾರೆ.

ಹಣ್ಣು ತರಕಾರಿ ಖರೀದಿಸುತ್ತಿದ್ದ ಸ್ಥಳೀಯ ನಿವಾಸಿ ಎಸ್‌.ಎ.ಖಾದರ್‌ ಮಾತಿಗಿಳಿದು, “ಇಲ್ಲಿ ಸಾಕಷ್ಟು ಮುಸ್ಲಿಂ ಅಂಗಡಿಗಳಿವೆ. ಆದರೆ ನಾನು ಇವರಲ್ಲಿಯೇ ಹತ್ತು ವರ್ಷಗಳಿಂದ ಖರೀದಿಸುತ್ತಿದ್ದೇನೆ” ಎಂದು ತಿಳಿಸಿದರು.

ಮುಸ್ಲಿಂ ಗ್ರಾಹಕ ಎಸ್.ಎ.ಖಾದರ್‌ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದರು.

ಸ್ಥಳೀಯ ನಿವಾಸಿ ಹಾಗೂ ವ್ಯಾಪಾರಿ ಅಹಮದ್ ಶರೀಫ್‌ ಪ್ರತಿಕ್ರಿಯಿಸಿ, “ನಮ್ಮ ಮಸೀದಿಯ ಬಳಿ ಯಾವ ಜಾತಿ, ಜನಾಂಗದವರು ಬಂದು ವ್ಯಾಪಾರ ಮಾಡಿದರೂ ಅಭ್ಯಂತರವಿಲ್ಲ. ಇದುವರೆಗೂ ನೀವು ಯಾವ ಜಾತಿಯವರು, ಯಾವ ಧರ್ಮದವರು ಎಂದು ನಾವು ಕೇಳಿಲ್ಲ” ಎಂದು ಸ್ಪಷ್ಟಪಡಿಸಿದರು.

“ನಮ್ಮನ್ನೆಲ್ಲ ದೇವರು ಸೃಷ್ಟಿ ಮಾಡಿದ್ದಾನೆ. ಗಾಳಿ, ನೀರು, ಭೂಮಿಯೆಲ್ಲ ದೇವರ ಸೃಷ್ಟಿ. ಸುನಾಮಿ ಬಂದರೆ, ಭೂಕಂಪವಾದರೆ, ಕೋವಿಡ್ ಬಂದರೆ ಹಿಂದೂ, ಮುಸ್ಲಿಂ ಎಂದು ನೋಡುತ್ತದೆಯೇ? ಎಲ್ಲರನ್ನೂ ಹೊತ್ತುಕೊಂಡು ಹೋಗುತ್ತದೆ. ದೇವರು ತಾರತಮ್ಯ ಮಾಡುತ್ತಿಲ್ಲ. ಸಾಯಿಸಿದರೆ ಒಟ್ಟಿಗೆ ಸಾಯಿಸುತ್ತಾನೆ, ಬದುಕಿಸಿದರೆ ಒಟ್ಟಿಗೆ ಬದುಕಿಸುತ್ತಾನೆ? ಇದನ್ನು ಸ್ವಲ್ಪ ಯೋಚನೆ ಮಾಡಿದರೆ ಸರಿಯಾಗುತ್ತದೆ. ಯೋಚನೆ ಮಾಡದವರು ಮಾತ್ರ ಹೀಗೆ ವರ್ತಿಸುತ್ತಾರೆ. ಶಿಕ್ಷಣ ಕಡಿಮೆ ಇದ್ದವರು ಧರ್ಮಗಳ ಜಗಳ ಮಾಡುತ್ತಿದ್ದಾರೆ. ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಸ್ವಲ್ಪ ವಿಳಂಬ ಮಾಡುತ್ತಿದೆ. ನೋಡೋಣ, ದೇವರು ಬುದ್ಧಿಕೊಡಬಹುದು” ಎಂದು ನಿಟ್ಟುಸಿರು ಬಿಟ್ಟರು.

ಬಸವನಗುಡಿ ಮಸೀದಿ ಬಳಿಯ ಬೇಕರಿಯೊಂದರಲ್ಲಿ ಮಾತಿಗೆ ಸಿಕ್ಕ ಅಹಮದ್ ಶರೀಫ್‌

ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಕಿಡ್ನಿ ಸ್ಟೋನ್‌ ಮೆಡಿಕಲ್‌ ಶಾಪ್ ನಡೆಸುತ್ತಿರುವ ಮಹಮ್ಮದ್ ರಫೀ ಮಾತನಾಡಿ, “ನಮ್ಮ ತಂದೆಯವರು ಕಳೆದ ಐವತ್ತು ವರ್ಷಗಳಿಂದ ಅಂಗಡಿಯನ್ನು ನಡೆಸುತ್ತಿದ್ದರು. ತಂದೆಯವರು ಮನೆಯಲ್ಲಿರುವುದರಿಂದ ಆಗಾಗ್ಗೆ ಬಂದು ಹೋಗುತ್ತೇನೆ. ಪಕ್ಕದಲ್ಲಿರುವವರು ಹಿಂದೂಗಳು. ಕಳೆದ ನಲವತ್ತು ವರ್ಷಗಳಿಂದ ನಮ್ಮ ಜೊತೆ ಇದ್ದಾರೆ. ಈ ಬದಿಯಲ್ಲಿರುವ ಮೊಬೈಲ್‌ ಅಂಗಡಿ ಮುಸ್ಲಿಮ್ ವ್ಯಕ್ತಿಗೆ ಸೇರಿದ್ದರೂ ಇಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಹೆಸರು ಪ್ರಕಾಶ್” ಎಂದು ಹೇಳುತ್ತಾ ಹಿಂದೂ ಮುಸ್ಲಿಂ ಏಕತೆಯನ್ನು ಉಳಿಸಬೇಕೆಂದು ಕೋರಿದರು.

ಬಸವನಗುಡಿ ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಕಿಡ್ನಿ ಸ್ಟೋನ್‌ ಮೆಡಿಕಲ್‌ ಶಾಪ್ ನಡೆಸುತ್ತಿರುವ ಮಹಮ್ಮದ್ ರಫೀ ಮಾತನಾಡಿದರು.

ಪಕ್ಕದಲ್ಲೇ ಇದ್ದ ಮೊಬೈಲ್‌ ಶಾಪ್‌ನಲ್ಲಿ ಮಾತಿಗೆ ಸಿಕ್ಕ ಪ್ರಕಾಶ್ ಮೂಲತಃ ರಾಜಸ್ಥಾನದವರು. ಕಳೆದ ಒಂದು ವರ್ಷದಿಂದ ತನ್ನ ಮುಸ್ಲಿಂ ಗೆಳೆಯನೊಂದಿಗೆ ಈ ಅಂಗಡಿಯಲ್ಲಿ ಪಾಲುದಾರನಾಗಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ಇಲ್ಲಿ ನನಗೇನೂ ತೊಂದರೆಯಾಗಿಲ್ಲ. ಹಿಂದೂ ಮುಸ್ಲಿಂ ಎಲ್ಲರೂ ಚೆನ್ನಾಗಿದ್ದೇವೆ” ಎಂದು ಅವರು ತಮ್ಮ ಸಂತಸ ಹಂಚಿಕೊಂಡರು ಪ್ರಕಾಶ್.

ರಾಜಸ್ಥಾನ ಮೂಲದ ಪ್ರಕಾಶ್ ಅವರು ಬಸವನಗುಡಿಯ ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಮುಸ್ಲಿಂ ಗೆಳೆಯನೊಂದಿಗೆ ಪಾಲುದಾರನಾಗಿ ವ್ಯಾಪಾರ ಮಾಡುದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: 40% ಕಮಿಷನ್‌ ಸರ್ಕಾರದ ವಿರುದ್ಧ ಜನಜಾಗೃತಿಗೆ ರಾಜ್ಯ ಪ್ರವಾಸ: ಸಿದ್ದರಾಮಯ್ಯ ಘೋಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಈಗ ಹಿಂದೂ ಮುಸ್ಲಿಂ ಸೌಹಾರ್ದ ತೆ ಬಗ್ಗೆ ಮಾತಾಡೋ ನಿಮ್ಮ ಪತ್ರಿಕೆ ಹಾಗೂ 61ಜನ ಸ್ವಯಂಘೋಷಿತ ಬುದ್ದಿಜೀವಿಗಳು ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮಹಿಳಾ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದಾಗ ಎಲ್ಲಿ ಇದ್ರೀ ಮುಸುರೆ ತಿನ್ಕೊಂಡು

  2. ಮುಸ್ಲಿಮರು ಮಂಗಳೂರಲ್ಲಿ ಎಂದೂ ಹಿಂದೂ ಮಹಿಳಾ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಿಲ್ಲ.

  3. ರಾಜು ಅವರೇ ನೀವು ಮುಸ್ಲಿಂ ವ್ಯಾಪಾರಿಗೆ ಬಹಿಷ್ಕಾರ ಹಾಕಿದ್ದು ಸರಿ,ಹಾಗೆಯೇ ಮುಸ್ಲಿಮರು ಕೂಡ ಬೆಂಗಳೂರಿನ ಮಸೀದಿ ಹತ್ತಿರದ ಹಿಂದೂ ವ್ಯಾಪಾರಿಗಳಿಗೆ ಬಹಿಷ್ಕಾರ ಹಕಬೇಕಾಗಿತ್ತು ಅಂತೀರಾ.ಹಾಗೆಯೇ ನಿಮ್ಮ ನಿಲುವು ಸರಿಯಾಗಿದ್ದರೆ ಹಿಂದೂ ವ್ಯಾಪಾರಿಗಳನ್ನ ಮಸೀದಿ ಹತ್ತಿರ ಮಾರಾಟ ಮಾಡಬೇಡಿ ಮುತ್ತು ರಂಝಾನ್ ಹಬ್ಬಕ್ಕೆ ಬಟ್ಟೆ ಬರೆ ಹಬ್ಬದ ಸಾಮಾನು ಮುಸ್ಲಿಮರಿಗೆ ಮಾರುವುದಿಲ್ಲ ಎಂದು ಹಿಂದೂ ಅಂಗಡಿಗಳ ಮುಂದೆ ಬೋರ್ಡ್ ಹಾಕಿಸಿ ನೋಡೋಣ.ನೀವು ನಿಜವಾದ ನ್ಯಾಯವಂತರದರೆ.

  4. ಈ ಲೇಖನ ಅರ್ಥಗರ್ಭಿತವಾಗಿದ್ದು. ವಿಚಾರ ಮಾಡಿಕೊಂಡು ಓದಿ…. ನಮ್ಮ ಭಾರತ ಜ್ಯಾತ್ಯಾತೀತ ರಾಷ್ಟ್ರ…. ಕನ್ನಡ ನಾಡು ಸುಂದರವಾದ ತೋಟವಿದ್ದಂತೆ. ಅಲ್ಲಿ ನಾನಾ ತರಹದ ಹೂವಿನ ಪರಿಮಳ ಪಸರಿಸುತ್ತದೆ…

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...