Homeಕರ್ನಾಟಕಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

ಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

- Advertisement -
- Advertisement -

ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಬೆಂಕಿಕೆರೆ ಗ್ರಾಮದ ಈ ಬಾರಿಯ ಗೌರಿ ಗಣೇಶ ಹಬ್ಬ ಹಲವು ವಿಶೇಷತೆಗೆ ಕಾರಣವಾಗಿದೆ. ಮಹಿಳೆಯರು ಪೂಜೆ ಮಾಡಬಾರದು, ಗರ್ಭಗುಡಿ ಪ್ರವೇಶ ಮಾಡಬಾರದು ಎಂಬ ಹಲವು ವಾದಗಳಿವೆ. ಮಹಿಳೆಯರ ಮುಟ್ಟನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಭಾರತದಂತಹ ದೇಶದಲ್ಲಿ ಮಹಿಳೆಯರು ದೇವಾಲಯದ ಪ್ರವೇಶ ಮಾಡುವುದನ್ನು ನಿಷೇಧಿಸಿರುವ, ಕೆಲ ಪ್ರಕರಣಗಳು ಸುಪ್ರೀಮ್ ಕೋರ್ಟ್ ಮೆಟ್ಟಿಲೂ ಏರಿರುವ ಸನ್ನಿವೇಶಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ.

ಮನುಷ್ಯ ನಿರ್ಮಿತ ಈ ಚೌಕಟ್ಟಗಳನ್ನು ತಿಳಿಯದ, ಅಸಮಾನತೆಯನ್ನು ಆಚರಣೆ ಮಾಡದ, ನಿಶ್ಕಲ್ಮಶ ಮುಗ್ದ ಮನಸ್ಸಿನ ಈ ಗ್ರಾಮದ ಪುಟಾಣಿ ಹೆಣ್ಣಮಕ್ಕಳು ಗ್ರಾಮದ ಮೂಲೆಯೊಂದರಲ್ಲಿ ಗೌರಿ ಗಣೇಶ ಕೂರಿಸಿದ್ದಾರೆ. ಗಂಡಸರೇ ಸೇರಿ ಪೆಂಡಾಲ್ ಕಟ್ಟಿ, ಕುಣಿದು ಕುಪ್ಪಳಿಸಿ ಹಬ್ಬ ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆ ಅಪವಾದದಂತೆ ಇಲ್ಲಿನ ಹುಡುಗೀಯರೇ ಸೇರಿ ಗ್ರಾಮದ ಮಟ್ಟಕ್ಕೆ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಡುಗುಡು ಅಂಕಲ್ ಖ್ಯಾತಿಯ ಮೊಹಮ್ಮದ್ ಅಣ್ಣನ ಗಣಪತಿ ಪ್ರೀತಿ

ರಾಜ್ಯದಲ್ಲೀಗ ಹಬ್ಬ-ಧರ್ಮದ ಹೆಸರಿನಲ್ಲಿ ರಾಜಕಾರಣ ಹೆಚ್ಚಾಗಿದೆ. ಗಲಭೆಗಳಲ್ಲಿ ಯುವಕರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಹೋದರ ಧರ್ಮೀಯರ ಮೇಲೆ ದ್ವೇಷ ಹರಡಿಸುತ್ತಿರುವ ಹೊತ್ತಲ್ಲಿ ಗಾರೆ ಕೆಲಸದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಅವರು ಬೆಂಕಿಕೆರೆಯಲ್ಲಿ ಈ ಮಕ್ಕಳ ಜೊತೆ ಸೇರಿ ಪ್ರೀತಿಯನ್ನು ಹಂಚುತ್ತಿದ್ದಾರೆ.ಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

 

ಮಕ್ಕಳ ಗಣಪತಿ ಪೆಂಡಾಲ್ ಅನ್ನು ಇವರೇ ಕಟ್ಟಿದ್ದು ಅಲ್ಲದೆ ಹಣ್ಣು ಸಿಹಿತಿನಿಸುಗಳನ್ನು ತಂದು ಕೊಟ್ಟಿದ್ದಾರೆ. ಗಣಪತಿಗೆ ಹಾರ ತರಲು ತಮ್ಮದೇ ಗಾಡಿಯಲ್ಲಿ 70 ಕಿ.ಮಿ. ದೂರದ ದಾವಣಗೆರೆಗೆ ಹೋಗಿ ಹೂವಿನ ಹಾರ ತಂದಿದ್ದಾರೆ. ಪೆಂಡಾಲ್ ಮತ್ತಷ್ಟು ಚೆನ್ನಾಗಿ ಕಾಣಲು ಲೈಟಿನ ಸರ, ಉಸ್ರುಬುಲ್ಡೆ (ಬಲೂನ್) ಗಳನ್ನು ಕಟ್ಟಿದ್ದಾರೆ. ಮಕ್ಕಳು ಪ್ರೀತಿಯಿಂದ ಭಾರತದ ಧ್ವಜವನ್ನೂ ಕಟ್ಟಿದ್ದಾರೆ.

ಇದನ್ನೂ ಓದಿ: ಏ.14 ರಂದು ಅಂಬೇಡ್ಕರ್ ಹಬ್ಬ: ದ್ವೇಷ, ಅಸೂಯೆ ಮೀರಿ ಶಾಂತಿ ಸಾಮರಸ್ಯದ ದೇಶ ಕಟ್ಟಲು ಕರೆ

ಮೊಹಮ್ಮದ್ ಅವರು ಭಕ್ತಿಯಿಂದ ಗಣಪತಿಗೆ ಕೈ ಮುಗಿಯುತ್ತಾರೆ, ಮಂಗಳಾರತಿ- ತೀರ್ಥ ಪಡೆಯುತ್ತಾರೆ. ಮಕ್ಕಳೆಲ್ಲಾ ಸಂಜೆಯ ಮೇಲೆ ಮನೆಗೆ ಹೋದಾಗ ಗಣಪತಿಯ ಮುಂದೆ ಹಚ್ಚಿಟ್ಟುರವ ದೀಪ ಆರದಂತೆ ನೋಡಿಕೊಳ್ಳಲು ಅವರೇ ಪೆಂಡಾಪ್ ಮುಂದೆ ಮಲಗುತ್ತಿದ್ದಾರೆ.

“ನಿನಿಗ್ಯಾಕಣ್ಣ ಇದೆಲ್ಲಾ, ಈ ಮಕ್ಳು ಸುಮ್ಮನೆ ನಿಮ್ ದುಡ್ಡೆಲ್ಲಾ ಖರ್ಚು ಮಾಡಿಸ್ತಾರೆ ನೋಡಿ” ಅಂತ ಗ್ರಾಮಸ್ತರು ಹೇಳಿದ ಮಾತಿಗೆ, “ಹಬ್ಬ ಏನ್ ದಿನಾ ಬರಲ್ಲ, ಮಕ್ಳು ಎಷ್ಟು ಖುಷಿ ಆಗಿದ್ದಾರೆ ನೋಡಿ. ಏನ್ ಮೂರ್ನಾಕ್ ಸಾವ್ರ ಖರ್ಚಾಗುತ್ತಾ? ಆಗ್ಲಿ ಬಿಡಿ” ಎಂದು ದಿನಕ್ಕೆ 500 ರೂ. ಕೂಲಿ ಪಡೆಯುವ ಮೊಹಮ್ಮದ್ ಅವರು ಉತ್ತರಿಸುತ್ತಾರೆ. ಅಲ್ಲದೇ ಈ ಹಿಂದೆಯೂ ಗಣಪತಿ ಹಬ್ಬಗಳಲ್ಲಿ ತಾವು ಭಾಗಿಯಾಗಿದ್ದ ಅನುಭವಗಳನ್ನು ಅಭಿಮಾನದಿಂದ ಹಂಚಿಕೊಳ್ಳುತ್ತಾರೆ.

ಗಣಪತಿ ಪೆಂಡಾಲ್ ನ ವಿಶೇಷತೆಗಳೇನು?

ಗ್ರಾಮದಲ್ಲಿ ಸುಮಾರು 8 ಸಮುದಾಯಗಳಿವೆ, ಎಲ್ಲರೂ ತಮ್ಮ ತಮ್ಮ ಸಮುದಾಯದ ಸ್ನೇಹಿತರು ಸೇರಿಕೊಂಡು ಗಣಪತಿ ಕೂರಿಸುತ್ತಾರೆ. ಆದರೆ ಈ ಹೆಣ್ಣುಮಕ್ಕಳ ಗಣಪತಿ ಪೆಂಡಾಲ್ ನಲ್ಲಿ ಬಹುತೇಕ ಎಲ್ಲಾ ಸಮುದಾಯದ ಮಕ್ಕಳು ಸೇರಿಕೊಂಡು ಆಚರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ದೇವರ ಮಂತ್ರಗಳು ತಿಳಿಯದ ಈ ಮಕ್ಕಳು ಕೈ ಮುಗಿದು ದೇಶಭಕ್ತಿ ಗೀತೆ ಮತ್ತು ನಾಡ ಗೀತೆಗಳನ್ನು ಹಾಡುತ್ತಾರೆ. ತಮ್ಮ ಟೀಚರ್ ಹೇಳಿಕೊಟ್ಟಿರುವ “ನಮ್ಮ ದೇಶವು ಪ್ರೀತಿಯ ಪ್ರತಿರೂಪವು” ಎನ್ನುವ ಹಾಡು ಗಮನ ಸೆಳೆಯುತ್ತಿದೆ. ಡಿಜೆ, ಡ್ರಮ್ ಸೆಟ್, ವಿಚಿತ್ರ ಚಿತ್ರಗೀತೆಗಳ ಯಾವ ಹಂಗು ಇಲ್ಲದೆ ತಮಗೆ ತಿಳಿದಷ್ಟು ಜಾನಪದ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾರೆ. ಬಂದವರಿಗೆ ಕಾರ ಮಂಡಿಕ್ಕಿ ಕೊಡುತ್ತಾರೆ.

ಒಟ್ಟಾರೆಯಾಗಿ ಗಲಭೆ, ದ್ವೇಷ ಅಸೂಯೆ, ಶ್ರೇಷ್ಠತೆ ಯಾವುದೂ ಇಲ್ಲದೆ ಪ್ರೀತಿ ಸೌಹಾರ್ದತೆ ಹಂಚುವ ಇಂತಹ ಪರಂಪರೆ ಮುಂದುವರೆಯಲಿ. ಮಕ್ಕಳ ಹಾಡಿನ ಸಾಲುಗಳು ಹೇಳುವ “ಈ ನಮ್ಮ ದೇಶವು, ಪ್ರೀತಿಯ ಪ್ರತಿ ರೂಪವು” ಎಲ್ಲರಿಗೂ ಆದರ್ಶವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...