Homeಕರ್ನಾಟಕಬಿಜೆಪಿ ವಿರುದ್ಧ ತೆಂಗು ಬೆಳೆಗಾರರ ಆಕ್ರೋಶ

ಬಿಜೆಪಿ ವಿರುದ್ಧ ತೆಂಗು ಬೆಳೆಗಾರರ ಆಕ್ರೋಶ

- Advertisement -
|  ಆಣೆಕಟ್ಟೆ ವಿಶ್ವನಾಥ್ |
ತೆಂಗು ಬೆಳೆಗಾರರ ಸಂಘ
ತೆಂಗು ಬೆಳೆಗಾರರ ಮಟ್ಟಿಗೆ ರಾಜ್ಯದಲ್ಲಿ ಒಂದು ಸಹಕಾರಿ ಚಳವಳಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸಂಕ್ರಮಣ ಕಾಲ ಇದು. ಇದಕ್ಕೆ ಮುಖ್ಯ ಕಾರಣ ಶ್ರೀ ಟಿ.ಕೆ.ಜೋಶ್ ಎಂಬ ದೂರಗಾಮಿ ದೃಷ್ಟಿ ಹೊಂದಿದ್ದ ಐಎಎಸ್ ಅಧಿಕಾರಿ 2002ರಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಬಂದಿದ್ದು. ಇವರು ಕೇರಳ ಸರ್ಕಾರದಲ್ಲಿ ಕುಟುಂಬಶ್ರೀ ಎಂಬ ಮಹಿಳಾ ಸ್ವ ಸಹಾಯ ಸಂಘಗಳ ಯೋಜನೆ ಪ್ರಾರಂಭಿಸಿ ಯಶಸ್ವಿ ಯಾಗಿದ್ದವರು. ಭಾರತ ದೇಶವನ್ನು ತೆಂಗು ಕ್ಷೇತ್ರದಲ್ಲಿ ಜಾಗತಿಕ ಮುಂದಾಳಾಗಿಸುವ ದೂರದೃಷ್ಟಿ ಹೊಂದಿದ್ದರು. ಅದಕ್ಕಾಗಿ ದೇಶದಾದ್ಯಂತ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟ ಸ್ಥಾಪಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮೌಲ್ಯವರ್ಧನೆ ಮೂಲಕ ಸಶಕ್ತೀಕರಣಕ್ಕೆ ಮುಂದಾಗಿದ್ದರು. ಇವರು ಎಷ್ಟೊಂದು ಸಕಾರಾತ್ಮಕ ವಾಗಿದ್ದರೆಂದರೆ, ಇವರ ಜೊತೆಗೆ ಒಂದು ದಿನ ಕಳೆದರೆ ನಮಗೆಲ್ಲ ಒಂದು ವರ್ಷಕ್ಕಾಗುವಷ್ಟು ಎನರ್ಜಿ ಸಿಗುತ್ತಿತ್ತು. ಕೇರಳ ಸರ್ಕಾರ ನೀರಾ ನೀತಿ ರೂಪಿಸಲು ಉಮ್ಮನ್ ಚಾಂಡಿ ಜೊತೆಗೆ ಸೇರಿ ಯಶಸ್ವಿಯಾಗಿ ಮಾಡಿದ್ದರು. ಕರ್ನಾಟಕದಲ್ಲಿ ನೀರಾ ನೀತಿ ರೂಪಿಸಲು ನಮ್ಮ ಬೆನ್ನು ತಟ್ಟಿ ಸರ್ಕಾರದ ಜೊತೆಯಲ್ಲಿ ಮಾತುಕತೆ ನಡೆಸಲು ಅವಶ್ಯಕ ಎಲ್ಲಾ ಬೆಂಬಲ ನೀಡಿದ್ದರು. ಇದರಿಂದ ಕರ್ನಾಟಕದಲ್ಲಿಯೂ ಸಿಹಿ ನೀರಾ ನೀತಿ ಜಾರಿಗೆ ಬಂತು.
ತೆಂಗು ಬೆಳೆಗಾರರ ಸಂಘದ ಉದ್ಘಾಟನೆ
ಕರ್ನಾಟಕದ ತೆಂಗು ಕ್ಷೇತ್ರದಲ್ಲಿ ಕೇರಳದಲ್ಲಿ ಆದಂತಹ ಬದಲಾವಣೆ ಆಗಲಿಲ್ಲ. ಅದಕ್ಕೆ ಮುಖ್ಯ ಕಾರಣ ಕರ್ನಾಟಕದ ನಿರ್ದೇಶಕರು ಅಂತಹ ದಕ್ಷ ಅಧಿಕಾರಿಗಳಾಗಿರಲಿಲ್ಲ. ಕೇರಳದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಕೇಂದ್ರ ಕಛೇರಿ ಇದ್ದದ್ದು ಕೇರಳ ರೈತರಿಗೆ ಪೂರಕವಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಹೋರಾಟದ ಫಲವಾಗಿ ರಾಜ್ಯದಲ್ಲಿ ಸುಮಾರು ಹದಿನಾಲ್ಕು ತೆಂಗು ಉತ್ಪಾದಕರ ಕಂಪನಿಗಳು ನೂರೈವತ್ತಕ್ಕು ಅಧಿಕ ಒಕ್ಕೂಟಗಳು ರಾಜ್ಯದಾದ್ಯಂತ ಸ್ಥಾಪನೆಯಾದವು. ಇವುಗಳ ಅಷ್ಟೊಂದು ಪರಿಣಾಮಕಾರಿಯಾಗಿ  ಕೆಲಸ ಮಾಡಲು ದಕ್ಷ ಅಧಿಕಾರಿಯ ಕೊರತೆಯನ್ನು ಮನಗಂಡು ತನ್ನ ಬಲಗೈನಂತಿದ್ದ ಶ್ರೀ ಹೇಮಚಂದ್ರ ಅವರನ್ನು ಕರ್ನಾಟಕಕ್ಕೆ ನಿರ್ದೇಶಕರಾಗಿ ಶ್ರೀ ಟಿ ಕೆ ಜೋಶ್ ಕಳಿಸಿಕೊಟ್ಟರು.
ಶ್ರೀ ಹೇಮಚಂದ್ರ ಕರ್ನಾಟಕಕ್ಕೆ ಬಂದ ಮೇಲೆ ತೆಂಗು ಬೆಳೆಗಾರರ ಒಕ್ಕೂಟ ಮತ್ತು ಕಂಪನಿಗಳಿಗೆ ಆನೆ ಬಲ ಬಂತು. ಜಾತ್ಯಾತೀತ ವಾಗಿ ಮತ್ತು ಪ್ರದೇಶಾತೀತವಾಗಿ ಎಲ್ಲರ ಬೆನ್ನು ತಟ್ಟಿ ಬೆಂಬಲಿಸಿದರು. ಇದರ ಪರಿಣಾಮವಾಗಿ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟಗಳಿಗೆ ಆನೆ ಬಲ ಬಂತು. ಐತಿಹಾಸಿಕವಾಗಿ ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಅತೀ ಹೆಚ್ಚು ಅನುದಾನ ಹರಿದು ಬಂದವು. ವರ್ಷಕ್ಕೆ ಸರಾಸರಿ ನಾಲ್ಕು ಕೋಟಿ ಬರುತ್ತಿದ್ದ ಅನುದಾನ ಎಂಬತ್ತು ಕೋಟಿಗೆ ಏರಿತು.  ಇದೇ ಸಮಯದಲ್ಲಿ ಟಿಕೆ ಜೋಶ್ ಅವರನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿತು. ಈ ಸ್ಥಾನಕ್ಕೆ ಬಿಜೆಪಿ ವಿಚಾರದಲ್ಲಿ ನಂಬಿಕೆ ಉಳ್ಳ ರಾಜು ನಾರಾಯಣ ಸ್ವಾಮಿ ಅಧಿಕಾರವಹಿಸಿಕೊಂಡರು.
ಹೇಮಚಂದ್ರ ಅವರು ತಮ್ಮ ಕೆಲಸಗಳನ್ನು ಪ್ರಾಮಾಣಿಕ ವಾಗಿ ನಡೆಸುತ್ತಿದ್ದರು. ನಮಗೆ ಟಿಕೆ ಜೋಶ್ ಇಲ್ಲ ಎಂಬ ಭಾವನೆ ಬರದಂತೆ ವೈಯಕ್ತಿಕವಾಗಿ ನಮ್ಮ ಜೊತೆ ನಿಂತರು. ಯಾವುದೇ ಒಕ್ಕೂಟ ಕಂಪನಿ ಯಾವುದೇ ಕೆಲಸ ಕಾರ್ಯ ಕೇಳಿದರೂ ಪ್ರಾಮಾಣಿಕವಾಗಿ ಬೆಂಬಲ ನೀಡುತ್ತಿದ್ದರು. ಯೋಜನೆಗಳ ಅನುಷ್ಠಾನದಲ್ಲಿ ಇದ್ದ ನ್ಯೂನತೆಗಳನ್ನು ನಿವಾರಿಸಲು ಅನೇಕ ಬಗೆಯ ಬದಲಾವಣೆ ತಂದರು.
ಹೇಮಚಂದ್ರ
ಇದೇ ಸಮಯದಲ್ಲಿ ಬಿಜೆಪಿಯ ಕಣ್ಣು ಇವರ ಮೇಲೆ ಬಿತ್ತು. ಬಿಜೆಪಿಯ ಮಾಜಿ ಎಂಎಲ್ ಸಿ ಮನೋಹರ ಮಸ್ಕಿ ಗುಂಪು ಇವರ ಮೇಲೆ ಒತ್ತಡ ಹೇರಿ ತಮಗೆ ಬೇಕಾದಂತೆ ಲಾಬಿ ನಡೆಸಲು ಪ್ರಯತ್ನಿಸಿದರು. ಇದ್ಯಾವುದಕ್ಕೂ ಜಗ್ಗದ ಹೇಮಚಂದ್ರ “ತೆಂಗು ಅಭಿವೃದ್ಧಿ ಮಂಡಳಿಯ ಕಛೇರಿಯನ್ನು ಬಿಜೆಪಿಯ ಕಛೇರಿಯನ್ನಾಗಿ ಮಾಡಿಕೊಳ್ಳಲು ಬಿಡೆನು” ಎಂಬ ಸಂದೇಶ ರವಾನಿಸಿದರು. ಇದರ ಪರಿಣಾಮವಾಗಿ ಮನೋರ ಮಸ್ಕಿಯವರು (ಇವರ ಬಗ್ಗೆ ತಿಳಿಯಲು ಆರ್ ಎಸ್ ಎಸ್ ಹಿರಿಯರಾದ ಬೇಳೂರು ಸುದರ್ಶನ ಅವರನ್ನು ಕೇಳಿರಿ. ಅವರು ತಮ್ಮ ಮಿತ್ರಮಾಧ್ಯಮ ವೆಬ್ ಸೈಟ್ ನಲ್ಲಿ ಮಸ್ಕಿಯ ಸ್ಕೀಮುಗಳ ಬಗ್ಗೆ ಬರೆದಿದ್ದಾರೆ. ) ಚಿಕ್ಕನಾಯಕನಹಳ್ಳಿ ಎಮ್.ಎಲ್.ಎ ಜೆ.ಸಿ ಮಾಧುಸ್ವಾಮಿ ಜೊತೆ ಸೇರಿ ಹೇಮಚಂದ್ರ ವಿರುದ್ಧ ತಿರುಗಿ ಬಿದ್ದರು.
ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಮೂಲಕ ಹೇಮಚಂದ್ರ ವಿರುದ್ಧ ಪಿತೂರಿ ನಡೆಸಿ ಅವರನ್ನು ಅಮಾನತುಗೊಳಿಸುವಲ್ಲಿ ಯಶಸ್ವಿಯಾದರು. ಈ ವಿಚಾರವನ್ನು ಸ್ವತಃ ಮಾಧುಸ್ವಾಮಿಯೇ  ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಇಲ್ಲಿಂದ ತೆಂಗು ಬೆಳೆಗಾರರ ಯಶಸ್ಸಿಗೆ ದುಡಿಯುತ್ತಿದ್ದ ಮಹಾಚೇತನವೊಂದು ನಮ್ಮಿಂದ ದೂರವಾಯಿತು. ಈಗ ಇದರ ವಿರುದ್ಧ ತೆಂಗು ಬೆಳೆಗಾರರು ಚಳವಳಿ ನಡೆಸುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಪಣ ತೊಟ್ಟಿದ್ದಾರೆ. ಕರ್ನಾಟಕದ ತೆಂಗು ಬೆಳೆಗಾರರ ಅಸ್ಮಿತೆಯಂತಿದ್ದ ಹೇಮಚಂದ್ರ ಮರಳಿ ಬರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...