Homeಅಂಕಣಗಳುಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ಭಾರತದ ಕಾಫಿ ಉತ್ಪಾದನೆಯ ಶೇ 65 ರಷ್ಟು ಪಾಲು ಕರ್ನಾಟಕದ್ದು. ಉಳಿದ ಶೇ 35 ರಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಕೇರಳಕ್ಕೆ ಮೂರನೆಯ ಸ್ಥಾನ.

- Advertisement -
- Advertisement -

ಕಾಫಿ ಮೂರು ರಾಜ್ಯಗಳ ಬೆಳೆ, ಕರ್ನಾಟಕ ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಒರಿಸ್ಸಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ಪ್ರಯತ್ನ ನಡೆಯಿತಾದರೂ ಅದು ನಗಣ್ಯ.

ಈ ಮೂರು ರಾಜ್ಯಗಳಲ್ಲಿಯೂ ಕರ್ನಾಟಕದ ಪಾಲು ದೊಡ್ಡದು, ಭಾರತದ ಕಾಫಿ ಉತ್ಪಾದನೆಯ ಶೇ 65 ರಷ್ಟು ಪಾಲು ಕರ್ನಾಟಕದ್ದು ಉಳಿದ ಶೇ 35 ರಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಕೇರಳಕ್ಕೆ ಮೂರನೆಯ ಸ್ಥಾನ.

ಇದಕ್ಕೆ ಕಾರಣ ಕರ್ನಾಟಕ ಎರಡು ಜಿಲ್ಲೆಗಳು. ಇವು ಕೊಡಗು ಮತ್ತು ಚಿಕ್ಕಮಗಳೂರು. ಇಲ್ಲಿನ ವಾತಾವರಣದಲ್ಲಿ ಕೆಲವು ಭಾಗಗಳಲ್ಲಿ ಉತ್ಕೃಷ್ಟವಾದ ಅರೆಬಿಕಾ ಕಾಫಿಯೂ, ಉಳಿದ ಕೆಲವು ಭಾಗಗಳಲ್ಲಿ ಅಷ್ಟೇ ಉತ್ತಮ ದರ್ಜೆಯ ರೊಬಸ್ಟ ಕಾಫಿಯೂ ಬೆಳೆಯುತ್ತದೆ. ಇವರೆಡು ಜಿಲ್ಲೆಗಳನ್ನು ಒಂದುಗೂಡಿಸುವ ಕೊಂಡಿಯೇ ಮಂಜ್ರಾಬಾದ್ ಪ್ರದೇಶ, ಅಂದರೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಮತ್ತು ಬೇಲೂರು ಮತ್ತು ಆಲೂರು ತಾಲ್ಲೂಕಿನ ಕೆಲವು ಭಾಗಗಳು.

ಬಾಬಾ ಬುಡನ್ ಗಿರಿ ಬೆಟ್ಟ ಸಾಲು

ಕಾಫಿ ಭಾರತಕ್ಕೆ ಬಂದ ಕತೆ ಸುಮಾರು ಏಳುನೂರು ವರ್ಷ ಹಿಂದಕ್ಕೆ ಹೋಗುತ್ತದೆ. ಬಾಬಾಬುಡನ್ ಅರೇಬಿಯಾದಿಂದ ಏಳು ಕಾಫಿ ಬೀಜಗಳನ್ನು ತಂದು ನೆಟ್ಟ ಕತೆ ಬಹಳ ಪ್ರಚಲಿತ. ಏನಿದ್ದರೂ ಆಫ್ರಿಕಾ ಮೂಲದ ಕಾಫಿ ಗಿಡ ಭಾರತವನ್ನು ತಲುಪಿದ್ದು ಅರಬರ ಮೂಲಕವೇ.

ಬ್ರಿಟಿಷರು ಬಂದ ನಂತರ ಕಾಫಿ ಬೆಳೆಗೊಂದು ಸಾಂಸ್ಥಿಕ ರೂಪವೂ ಜೊತೆಗೆ ಜಾಗತಿಕ ಮನ್ನಣೆಯೂ ದೊರೆಯಿತು. ಹೇಗೂ ವ್ಯಾಪಾರಕ್ಕೆಂದೇ ಬಂದ ಬ್ರಿಟಿಷರು, ಇದರ ಮೂಲಕ ಇನ್ನೊಂದು ಆದಾಯದ ಮೂಲವನ್ನು ಕಂಡುಕೊಂಡರು.

ಬ್ರಿಟಿಷರು ಬರುವ ಮೊದಲು ಇಲ್ಲಿನ ಬೆಳೆಗಳು ಯಾವುವು ?

ಮುಖ್ಯವಾಗಿ ಭತ್ತ, ಒಂದಷ್ಟು ಬಾಳೆ, ನಂತರ ಕಾಡು ಗುಡ್ಡೆಗಳಲ್ಲಿ ಮೆಣಸು ಮತ್ತು ಯಾಲಕ್ಕಿ. ಜೊತೆಗೆ ಇನ್ನು ಕೆಲವು ಸಹಜ ಕಾಡು ಉತ್ಪನ್ನಗಳು.

ನಿಜವಾದ ಅರ್ಥದಲ್ಲಿ ಇಲ್ಲಿನ ಕೃಷಿಯೆಂದರೆ ಭತ್ತ ಮತ್ತು ಬಾಳೆ, ಯಾಲಕ್ಕಿ ಮತ್ತು ಮೆಣಸು ಕೂಡಾ ಒಂದು ರೀತಿಯಲ್ಲಿ ಕಾಡು ಉತ್ಪನ್ನಗಳೇ ಆಗಿದ್ದವು.

ಮೆಣಸಿನಲ್ಲಿ ಕೆಲವು ನಾಟಿ ತಳಿಗಳಿದ್ದವು, ಮುಖ್ಯವಾಗಿ ಕರಿಮುಂಡ, ಉದರಂಕೊಟ್ಟ, ಮತ್ತು ಕಾಡು ಮೆಣಸು, ಇವೆಲ್ಲವೂ ಹೆಚ್ಚಿ ರೋಗ ನಿರೋಧಕ ಶಕ್ತಿ ಮತ್ತು ಧೀರ್ಘಬಾಳಿಕೆಯ ಗುಣಹೊಂದಿದ್ದವು.

ಯಾಲಕ್ಕಿ ಮಲೆಗಳು

ಯಾಲಕ್ಕಿಯಲ್ಲಿಯೂ ಅಷ್ಟೇ ಕೊಡಗಿನ ಮಲೆ ಯಾಲಕ್ಕಿ ಹಾಗೂ ಮಂಜ್ರಾಬಾದ್ ಪ್ರದೇಶದ ಮಂಜ್ರಾಬಾದ್ ಯಾಲಕ್ಕಿ ,ಇದಕ್ಕೂ ಉತ್ತರ ಮಲೆ ಎಂದೇ ಹೆಸರಿತ್ತಂತೆ, ಸಕಲೇಶಪುರ, ಮೂಡಿಗೆರೆಯಲ್ಲಿ ಇದ್ದುದೆಲ್ಲ ಇದೇ ತಳಿ.

ಇವೆರಡೂ ನಾಟಿ ತಳಿಗಳೇ. ಇದನ್ನು ನೆಡುವ ಪರಿಪಾಠ ಕಡಿಮೆ. ತಾನಾಗಿಯೇ ಬೀಜ ಪ್ರಸಾರವಾಗಿ ಹುಟ್ಟುವುದು.

ಮೆಣಸಿನ ಬಳ್ಳಿ ಮತ್ತು ಯಾಲಕ್ಕಿ ಗಿಡಗಳಿಗೆ ಬೆಳಕು ಬರುವಂತೆ ಮಧ್ಯೆ ಕೆಲವು ಮರಗಳನ್ನು ಕಡಿದು ಹಾಕುತ್ತಿದ್ದರಂತೆ. ಸಾಮಾನ್ಯವಾಗಿ ಒಬ್ಬೊಬ್ಬ ಜಮೀನುದಾರರರಿಗೆ ನೂರಾರು ಎಕರೆ ಯಾಲಕ್ಕಿ ಮಲೆಗಳಿರುತ್ತಿದ್ದವು. ಹಾಗೇ ಮಧ್ಯಮ ಹಿಡುವಳಿದಾರರೂ ಇದ್ದರು.

ಮಳೆಗಾಲ ಕಡಿಮೆಯಾಗುವ ವೇಳೆಗೆ ಈ ಜಮೀನುದಾರರು ಹತ್ತಾರು ಜನರ ತಂಡ ಕಟ್ಟಿಕೊಂಡಿ ಮಲೆಗಳಲ್ಲಿ ಬಂದು ಬಿಡಾರ ಹೂಡಿ ಒಂದೆರೆಡು ತಿಂಗಳು ನಿಂತು ಅಲ್ಲಿನ ಯಾಲಕ್ಕಿ, ಮೆಣಸು ಇತ್ಯಾದಿಗಳನ್ನು ಕೊಯ್ಲಮಾಡಿಕೊಂಡು ವಾಪಸ್ ಹೋಗುವುದೇ ಪದ್ಧತಿ. ಆ ಸಮಯದಲ್ಲಿ ಮಳೆಗಾಲವಿರುತ್ತಿದ್ದುದರಿಂದ ಬರುವಾಗಲೇ ಬೆಲ್ಲವನ್ನೂ ಸಾಗಿಸಿ ತಂದು ಅಲ್ಲೇ ಭಟ್ಟಿಯನ್ನು ಕಾಯಿಸಿಕೊಳ್ಳುತ್ತಿದ್ದರು. ಜೊತೆಗೆ ಶಿಕಾರಿಗೆ ಸಾಕಷ್ಟು ಪ್ರಾಣಿಗಳೂ ಇದ್ದವು. ಬೇಸಗೆಯಲ್ಲಿ ಬೈನೆ ಸೇಂದಿಯಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಜಮೀನ್ದಾರರಿಗೆ ಕೊಡಗಿನ ಸೋಮವಾರಪೇಟೆ ಮತ್ತು ಮಡಿಕೇರಿ ತಾಲ್ಲೂಕಿನಲ್ಲಿ ಮತ್ತು ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಈ ರೀತಿ ಯಾಲಕ್ಕಿ ಮಲೆಗಳ ಒಡೆತನವಿತ್ತು.

ದಕ್ಷಿಣ ಭಾರತ ಪ್ಲಾಂಟರ್ಸ್ ಒಕ್ಕೂಟದ ಕಛೇರಿ (ಉಪಾಸಿ) ಕೂನೂರ್

ಬ್ರಿಟಿಷರು ಬರುವ ತನಕವೂ ಇದು ಹೀಗೆಯೇ ನಡೆದು ಬಂದಿತ್ತು. ಬ್ರಿಟಿಷರು ಕೂಡಾ ಇಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ರಬ್ಬರ್, ಯಾಲಕ್ಕಿ, ಕೊಕೋ ಗಳನ್ನು ಕೂಡಾ ಆಕಾಲದಲ್ಲಿಯೇ ಬೆಳೆದು ನೋಡಿದ್ದಾರೆ. ನಂತರ ಅವರು ಆಯ್ಕೆ ಮಾಡಿಕೊಂಡದ್ದು ಕಾಫಿಯನ್ನು.

ಈ ಭಾಗಗಳಲ್ಲಿ ಜನ ಸಂಖ್ಯೆಯೂ ವಿರಳವಾಗಿತ್ತು. ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಈಗಲೂ ಜನವಸತಿ ಕಡಿಮೆಯೇ, ಬೇರೆ ಕಡೆಗಳಲ್ಲಿ ಒಂದು ಅಥವಾ ಎರಡು ಗ್ರಾಮಗಳಿಗೆ ಒಂದು ಗ್ರಾಮ ಪಂಚಾಯತ್ ಇದ್ದರೆ ನಮ್ಮಲ್ಲಿ ಸಾಮಾನ್ಯವಾಗಿ ಆರರಿಂದ ಎಂಟು ಗ್ರಾಮಗಳಿಗೆ ಒಂದು ಗ್ರಾಮ ಪಂಚಾಯತಿ ಇದೆ. ಹಾಗೂ ಕೆಲವು ಪಂಚಾಯತ್‌ಗಳು ಒಂದು ಹೋಬಳಿಯಷ್ಟೇ ವಿಸ್ತೀರ್ಣವನ್ನು ಹೊಂದಿವೆ.

ಆ ಕಾರಣಕ್ಕಾಗಿಯೇ ಬ್ರಿಟಿಷರು ತಮಿಳುನಾಡು, ಕೇರಳಗಳಿಂದ ಕೆಲಸಗಾರರನ್ನು ಕರೆತಂದರು, ದಕ್ಷಿಣಕನ್ನಡ  ಜಿಲ್ಲೆಯಿಂದಲೂ ದೊಡ್ಡ ಪ್ರಮಾಣದಲ್ಲೇ ಕಾರ್ಮಿಕರ ವಲಸೆ ನಡೆಯಿತು.

ಹಾಗೆ ಬಂದವರು ಸ್ವಲ್ಪ ಮಟ್ಟಿಗೆ ಅವರ ಜಾನಪದ ಕಲೆಗಳಾದ, ಪಾಡ್ದನ, ಭೂತಾರಾಧನೆ, ಯಕ್ಷಗಾನಗಳನ್ನು ತಂದರಾದರೂ ಇಲ್ಲಿನ ಸಂಸ್ಕೃತಿಯನ್ನು ಬದಲಾಯಿಸುವಷ್ಟು ಅಥವಾ ಅವುಗಳನ್ನು ಶಕ್ತವಾಗಿ ಮುಂದುವರೆಸುವಷ್ಟು ಶಕ್ತರಾಗಲಿಲ್ಲ. ಕಾರಣ ಅವರೆಲ್ಲರೂ ಎಸ್ಟೇಟುಗಳ ಒಳಗೆ ಗುಮ್ಮಿಗಳೆಂದು ಕರೆಯುತ್ತಿದ್ದ ಲೈನ್ ಮನೆಗಳಲ್ಲಿ ಇರುವ ವ್ಯವಸ್ಥೆ ಇದ್ದುದು. ಅಲ್ಲದೆ ಇಲ್ಲಿನ ಸ್ಥಳಿಯರು ಅವುಗಳನ್ನು ತಮ್ಮದಾಗಿಸಿಕೊಳ್ಳುವ ಬದಲಿಗೆ ಹೆಚ್ಚು ಹೆಚ್ಚಾಗಿ ಬ್ರಿಟಿಷರ ಆಚಾರ ವಿಚಾರಗಳ ಅನುಕರಣೆಯಲ್ಲಿ ಮೇಲರಿಮೆಯನ್ನು ಕಂಡುಕೊಂಡದ್ದು.

ಇವೆಲ್ಲ ಕಾರಣಗಳಿಂದ ಕರ್ನಾಟಕದ ಕಾಫಿ ವಲಯದಲ್ಲಿ ಕಾಫಿ ಸಂಸ್ಕೃತಿಯೆಂಬ ಹೆಸರಿನ ಜೀವನ ಶೈಲಿ ಹಾಗೆಯೇ ಉಳಿದುಕೊಂಡಿತು.

ವಲಸೆ ಬಂದವರು ಇಲ್ಲೇ ಉಳಿದರು. ಬದುಕು ಕಟ್ಟಿಕೊಂಡರು. ಕೆಲವರು ಬ್ರಿಟಿಷರ ನಂತರ ತಾವೇ ಪ್ಲಾಂಟರುಗಳಾದರು. ಅವರ ನಂತರದ ಪೀಳಿಗೆ ವಿದ್ಯಾವಂತವಾಯಿತು. ಅನೇಕ ರೀತಿಯ ಉದ್ಯೋಗಗಳನ್ನು ಅರಸಿ ಬೇರೆ ಬೇರೆ ಕಡೆಗೆ ಹೋದರು. ಹೀಗೆ ಹೋದವರ ಬದಲಿಗೆ ಮತ್ತೆ ತಾತ್ಕಾಲಿಕ ಕಾರ್ಮಿಕರು ಹೊರಗಿನಿಂದ ಬರುವ ಪದ್ಧತಿ ಪ್ರಾರಂಭವಾಯಿತು. ಮೊದಲಿಗೆ ಬಯಲು ಸೀಮೆಯಿಂದ, ನಂತರ ಉತ್ತರ ಕರ್ನಾಟಕದಿಂದ. ಇತ್ತೀಚಿನ ದಿನಗಳಲ್ಲಿ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಂದ ಬರುತ್ತಿದ್ದಾರೆ.

ಹೀಗೆ ವಲಸೆ ಬಂದವರಲ್ಲಿ ಇಲ್ಲಿನ ಕಾಫಿ ಬೆಳೆ ಮಾತ್ರವಲ್ಲ ಹಲವು ಬೇರೆ ಬೇರೆ ಉದ್ಯೋಗಗಳೂ ನಿರ್ಮಾಣವಾದವು. ದಕ್ಷಿಣ ಕನ್ನಡದವರು ಮುಖ್ಯವಾಗಿ ಹೋಟೆಲ್ ಉದ್ಯಮ ಬೆಳೆಸಿದರು. ಕಾಫಿ ವಲಯದ ಹೆಚ್ಚಿನ ಹೋಟಲ್‌ಗಳೆಲ್ಲ ಇಂದೂ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರದೇ ಆಗಿದೆ.

ತಮಿಳುನಾಡಿನಿಂದ ಬಂದವರು ಹಲವು ರೀತಿಯ ಕೆಲಸಗಳಲ್ಲಿ ತೊಡಗಿದರು. ಕಟ್ಟಡ, ರಸ್ತೆ ನಿರ್ಮಾಣದಲ್ಲಿ ಕೂಡಾ ಇವರ ಕೊಡುಗೆ ದೊಡ್ಡದು. ಇನ್ನೊಂದು ಕೊಡುಗೆಯೆಂದರೆ. ಕೃಷಿ ಯಂತ್ರ ಮತ್ತ ಉಪಕರಣಗಳ ತಯಾರಿಕೆಯಲ್ಲಿ.

ಮಂಜ್ರಾಬಾದ್ ನೆನಪು

1926 ರಲ್ಲಿ ಮನಿಸ್ವಾಮಿ ಮೊದಲಿಯಾರ್ ಎಂಬವರು ಬಿ.ಎಂ ಇಂಜಿನಿಯರಿಂಗ್ ವರ್ಕ್ಸ ಅನ್ನು ಚಿಕ್ಕಮಗಳೂರಿನಲ್ಲಿ ಪ್ರಾರಂಭಿಸಿದರು. ಅದುವರೆಗೆ ಕಾಫಿ ತೋಟಗಳಿಗೆ ಸಂಬಂಧಿಸಿದ ಎಲ್ಲ ಕೃಷಿ ಯಂತ್ರೋಪಕರಣಗಳು ಇಂಗ್ಲೆಂಡಿನಿಂದಲೇ ಬರುತ್ತಿದ್ದವು. ಮುನಿಸ್ವಾಮಿಯವರು ಸ್ಥಳೀಯ ತಾಂತ್ರಿಕತೆಯನ್ನು ಬಳಸಿ ಇಲ್ಲೇ ಅವುಗಳನ್ನು ತಯಾರಿಸಲು ತೊಡಗಿದರು. ಕಾಫಿ ಪಲ್ಪಿಂಗ್ ಯಂತ್ರಗಳು ಇಲ್ಲೇ ತಯಾರಾಗ ತೊಡಗಿದವು. ನಂತರ ಇವರ ಮೊಮ್ಮಕ್ಕಳಾದ ಬಾಲಕೃಷ್ಣ ಮತ್ತು ಶಾಮಣ್ಣನವರು ಸಕಲೇಶಪುರದಲ್ಲಿ 1953 ರಲ್ಲಿ ಶಿವಶಂಕರ್ ಇಂಜಿನಿಯರಿಂಗ್ ವರ್ಕ್ಸ್ ಅನ್ನು ಸ್ಥಾಪಿಸಿದರು. ಅದೇ ಸುಮಾರಿಗೆ ಮಡಿಕೇರಿಯಲ್ಲಿ ಸಿ.ವಿ.ಎಸ್ ಬ್ರದರ್ಸ್ ಅವರು ಕೂಡಾ ಇದೇರೀತಿಯ ಇಂಜಿನಿಯರಿಂಗ್ ವರ್ಕ್ಸ್ ಉದ್ಯಮ ಆರಂಭಿಸಿದ್ದರು. ಇವರೆಲ್ಲರೂ ತಮ್ಮ ಉದ್ಯಮಗಳಲ್ಲಿ ಕೈಗಾರಿಕಾ ತರಬೇತಿಗಾಗಿ ಯುವಕರನ್ನು ನೇಮಿಸಿಕೊಳ್ಳತೊಡಗಿದರು. ಮುಂದೆ ಮಡಿಕೇರಿಯಲ್ಲಿ ಸರ್ಕಾರದಿಂದ ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭವಾದರೂ ಇವರಲ್ಲಿಗೆ ತರಬೇತಿ ಪಡೆಯುವುದು ಮುಂದುವರೆದಿತ್ತು. ಇಂದು ಕಾಫಿ ವಲಯದಲ್ಲಿರುವ ಹೆಚ್ಚಿನ ಯಂತ್ರೋಪಕರಣ ಉದ್ಯಮಿಗಳು ಈ ಸಂಸ್ಥೆಗಳಿಂದ ಕಲಿತು ಬಂದವರೇ.

ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಹೊರಗಿನಿಂದ ಕಾರ್ಮಿಕರು ಬಾರದಿದ್ದರೆ ಕಾಫಿ ಕೃಷಿ ಸಂಪೂರ್ಣ ಕುಸಿದುಹೋಗಲಿದೆ.

ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾಫಿ ಬೆಳೆಯಿಂದ ಬದುಕುತ್ತಿರುವವರ ಸಂಖ್ಯೆ ಸುಮಾರು ಹನ್ನೆರಡು ಲಕ್ಷಗಳಷ್ಟು.

ಕಾಫಿ ಆದಾಯ ಕಡಿಮೆಯಾಯಿತೆಂದರೆ ಇವರೆಲ್ಲರ ಬದುಕಿನ ಮೇಲೆ ಪರಿಣಾಮವಾಗುತ್ತದೆ.

ಎರಡು ದಶಕಗಳಿಂದ ನಾನಾ ಕಾರಣಗಳಿಂದ ಕರ್ನಾಟಕದ ಕಾಫಿ ವಲಯ ಸಂಕಷ್ಟದಲ್ಲಿದೆ.

ವಾತಾವರಣದಲ್ಲಿ ಆದ ಬದಲಾವಣೆ ಮತ್ತು ಅರಣ್ಯ ನಾಶಗಳಿಂದ ಯಾಲಕ್ಕಿ ಮತ್ತು ಅರೆಬಿಕಾ ಕಾಫಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಬೋರ್ಡಿನ ಸಂಶೋಧನೆಗಳು ಸಾಕಾಗುತ್ತಿಲ್ಲ. ಕಾಫಿ ಬೆಳೆಯನ್ನು ತೋಟಗಾರಿಕಾ ವಿಭಾಗಕ್ಕೆ ವರ್ಗಾಯಿಸಿ ಅಲ್ಲಿನ ಸಂಶೋಧನಾ ವಿಭಾಗಗಳ ಸಹಾಯ ಪಡೆದು ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲ ಹಾಗೂ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುವ ಹೊಸ ತಳಿಗಳನ್ನು ಸೃಷ್ಟಿಸಿಕೊಳ್ಳಬೇಕೆಂಬ ಯೋಜನೆ ಹಾಗೆಯೇ ಇದೆ.

ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟ ಇದೆ. ಅಲ್ಲಿ ತಮಿಳು ನಾಡು ಮತ್ತು ಕೇರಳದವರೇ ಪ್ರಬಲರು, ರಬ್ಬರ್ ಮತ್ತು ಟೀ ಬೆಳೆಗಾರರದ್ದೇ ಅಲ್ಲಿ ಸಾರಥ್ಯ. ಹೀಗಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲೂ ಅವರ ಮಾತಿಗೇ ಮನ್ನಣೆ ಹೆಚ್ಚು ಇದು ನಿರಂತರವಾಗಿ ನಡೆದುಬಂದ ವಿದ್ಯಮಾನ.

ಕರ್ನಾಟಕದ ವಿಚಾರ ಬಂದಾಗ ಇಲ್ಲಿನ ಬೆಳೆಗಾರರ ಒಕ್ಕೂಟವೂ ಅಷ್ಟು ಪ್ರಬಲವಲ್ಲ. ನಮ್ಮ ರಾಜಕಾರಣಿಗಳೂ ಕೂಡಾ ಒಟ್ಟಾಗಿ ನಿಂತು ಹಕ್ಕನ್ನು ಮಂಡಿಸಿ, ಅನುಕೂಲ ಪಡೆದದ್ದೂ ಇಲ್ಲ. ಇದು ಇಲ್ಲಿನ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಮತ್ತಷ್ಟು ಕಾರಣವಾಗಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕಾಫಿ ವಲಯದಲ್ಲಿನ ಕಾರ್ಮಿಕರ ಸ್ಥಿತಿ-ಗತಿ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...