Homeಮುಖಪುಟಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

- Advertisement -
- Advertisement -

ಕಳೆದ ಕೆಲವು ವಾರಗಳಲ್ಲಿ ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ, ಶ್ರೀರಂಗಪಟ್ಟಣದ ಮಸ್ಜೀದ್-ಈ-ಆಲಾ, ಮಥುರಾದಲ್ಲಿರುವ ಶಾಹೀ ಈದ್ಗಾ ಮಸೀದಿ, ದಿಲ್ಲಿಯ ಕುತುಬ್ ಮಿನಾರ್ – ಇವೆಲ್ಲೆಡೆ ಹಿಂದುತ್ವ ಸಂಘಟನೆಗಳು ಇಲ್ಲದ ವಿವಾದ ಸೃಷ್ಟಿಸಿವೆ. ಈ ಸಂಘಟನೆಗಳ ಮನುವಾದಿ, ಕೋಮುವಾದಿ ನಡೆ ಬಗ್ಗೆ ನಮಗೆಲ್ಲರಿಗೂ
ಗೊತ್ತಿರುವಂಥದ್ದೇ. ಆದರೆ ನಮಗೆ ಆತಂಕವಾಗಿರಬೇಕಾಗಿರುವ ವಿಷಯವೆಂದರೆ ನಮ್ಮ ನ್ಯಾಯಾಲಯಗಳ ಪ್ರತಿಕ್ರಿಯೆ. ಹಿಂದುತ್ವ ಸಂಘಟನೆಗಳು ಮಸೀದಿಗಳ ಮೇಲೆ ನಡೆಸುತ್ತಿರುವ ದಾಳಿಗಳಿಗೆ ನ್ಯಾಯಾಲಯಗಳು ಕೈ ಜೋಡಿಸಿವೆಯೇ ಎಂಬ ಅನುಮಾನ ಮೂಡುತ್ತದೆ. ಈ ಅನುಮಾನವನ್ನು ಈ ಬರೆಹದಲ್ಲಿ ಪರಿಶೀಲಿಸೋಣ. ಮುಖ್ಯವಾಗಿ ಜ್ಞಾನವಾಪಿ ಮಸೀದಿಯ ವಿಷಯದಲ್ಲಿ ನ್ಯಾಯಾಲಯಗಳ ನಡೆಯನ್ನು ಗಮನಿಸೋಣ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಯಿತು ಎಂದು ಹಿಂದೂ ಪರ ಸಂಘಟನೆಗಳು ಹೇಳಿಕೊಂಡ ತಕ್ಷಣ, ವಾರಣಾಸಿಯ ನ್ಯಾಯಾಲಯ, ಅದು ಪತ್ತೆಯಾಗಿದೆ ಎಂದು ಪ್ರತಿಪಾದಿಸಿದ ಜಾಗವನ್ನು ಬಂದ್ ಮಾಡಲು ಅದೇಶಿಸಿತು. ನ್ಯಾಯಾಲಯವೇ ನೇಮಿಸಿದ್ದ ’ಕೋರ್ಟ್ ಕಮಿಷಿನರ್’ ವರದಿ ಸಲ್ಲಿಸುವ ತನಕ ಸಹ ಕಾಯಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಅಸಾದುದ್ದೀನ್ ಒವೈಸಿಯವರು, “ದಿಸ್ ಇಸ್ ಎ ಟೆಕ್ಸ್ಟ್ ಬುಕ್ ರಿಪೀಟ್ ಆಪ್ ಡಿಸೆಂಬರ್ 1949 ಇನ್ ಬಾಬ್ರಿ ಮಸ್ಜಿದ್” ಎಂದರು.

ಬಾಬ್ರಿ ಮಸೀದಿ ಸುತ್ತ ಸೃಷ್ಟಿಸಿದ ವಿವಾದ ಸ್ವತಂತ್ರ ಭಾರತದ ರಾಜಕೀಯ ಹಾಗು ಸಾಮಾಜಿಕ ಇತಿಹಾಸವನ್ನು ಇನ್ನಿಲ್ಲದಂತೆ ಬದಲಿಸಿತು. ಈ ಪ್ರಕರಣದ ಅಂತಿಮ ತೀರ್ಪು ಹಾಗು ಅದರಲ್ಲಿ ಅಡಗಿದ ಅನ್ಯಾಯದ ಬಗ್ಗೆ ಸಾಕಷ್ಟು ಬರೆದಾಗಿದೆ. ಆದರೆ ಈ ಪ್ರಕರಣ ಈ ಮಟ್ಟಕ್ಕೆ ಬೆಳೆದಿದ್ದು ನ್ಯಾಯಾಲಯಗಳು ತಮ್ಮ ಸಂವಿಧಾನಿಕ ಜವಾಬ್ದಾರಿ ಮರೆತು, ಹಿಂದುತ್ವವಾದಿಗಳಿಗೆ ನೀಡಿದ ನೆರವಿನಿಂದಲೇ.

1949ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದೇನು ಹಾಗು ಅದಕ್ಕೆ ನ್ಯಾಯಾಲಯಗಳು ಹೇಗೆ ಸ್ಪಂದಿಸಿದವು ಎಂಬುದನ್ನು ವಕೀಲರಾದ ಮೊಹಮ್ಮದ್ ಅಫೀಫ್ ಅವರು ವಿವರಿಸಿದ್ದಾರೆ. ಮೊದಲನೆಯದಾಗಿ ಡಿಸೆಂಬರ್ 23, 1949ರ ರಾತ್ರಿ, ಮಸೀದಿಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ, ಕೆಲವರು ಮಸೀದಿಯೊಳಗೆ ನುಗ್ಗಿ ಅಲ್ಲಿ ಕಳ್ಳತನದಿಂದ ಹಿಂದೂ ದೇವರ ವಿಗ್ರಹ ಇಟ್ಟರು. ಅಲ್ಲಿಗೆ ನಂತರ ಹೋದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಮಸೀದಿಗೆ ಬೀಗ ಹಾಕಿ, ಆ ಸ್ಥಳವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮಾಡಿದರು. ಆದರೆ, ಕಾನೂನುಬಾಹಿರವಾಗಿ ಅಲ್ಲಿಟ್ಟ ವಿಗ್ರಹಗಳನ್ನು ಮಾತ್ರ ತೆಗೆಸುವುದಿಲ್ಲ. ನಂತರ 1950ರಲ್ಲಿ ಇಬ್ಬರು ಹಿಂದೂ ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮೊರೆಹೋಗಿ, ಮಸೀದಿ ಇರುವ ಸ್ಥಳ ಅವರದ್ದು ಎಂದು ಅರ್ಜಿ ಹಾಕುತ್ತಾರೆ. ಆ ಪ್ರಕರಣದಲ್ಲಿ ನ್ಯಾಯಾಲಯವು, ಮಧ್ಯಂತರ ಆದೇಶ ನೀಡಿ, ಮಸೀದಿಯಲ್ಲಿಟ್ಟ ವಿಗ್ರಹಗಳನ್ನು ಯಾರೂ ಜರಿಗಿಸಬಾರದೆಂದು ತೀರ್ಪು ನೀಡುತ್ತದೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ನಿಲುವು, ಆ ಸ್ಥಳವನ್ನು 1949ರಲ್ಲಿ ಮಸೀದಿಯಾಗಿ ಉಪಯೋಗಿಸಲಾಗುತ್ತಿತ್ತು ಎಂಬುದು. ಹಾಗಿದ್ದರೂ ಸಹ ನ್ಯಾಯಾಲಯವು ಮಸೀದಿಯನ್ನು ಬಂದ್ ಮಾಡಿ, ಯಾರಿಗೂ ಪ್ರವೇಶ ನೀಡದಂತೆ ಆದೇಶಿಸುತ್ತದೆ. ನಂತರ ಉತ್ತರ ಪ್ರದೇಶ ಉಚ್ಚ ನ್ಯಾಯಾಲಯವು ಸಿವಿಲ್ ಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯುತ್ತದೆ. ಹಾಗಾಗಿ, 1949ರಲ್ಲಿ ಮಸೀದಿಗೆ ನುಗ್ಗಿ ಅಲ್ಲಿ ವಿಗ್ರಹಗಳನ್ನು ಇಟ್ಟ ಕಾನೂನುಬಾಹಿರ ಕಾರ್ಯವನ್ನು ನ್ಯಾಯಾಲಯವೆ ನ್ಯಾಯಸಮ್ಮತಗೊಳಿಸುತ್ತದೆ. ಅದು ಅಲ್ಲಿಗೆ ನಿಲ್ಲುವುದಿಲ್ಲ. ಈ ಸಿವಿಲ್ ಪ್ರಕರಣಗಳು ದಶಕಗಳ ಕಾಲ ನಡೆಯುತಿದ್ದವು. 1989ರಲ್ಲಿ ದಿಢೀರ್ ಎಂದು ಒಂದು ದಿನ, ಈ ಪ್ರಕರಣದ ಭಾಗವೇ ಅಲ್ಲದ ಹಿಂದೂ ವ್ಯಕ್ತಿಯೊಬ್ಬರು, ಸಿವಿಲ್ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸುತ್ತಾರೆ. ಪ್ರಕರಣದಲ್ಲಿ ಪಾರ್ಟಿಯಾಗಿರುವ ಮುಸ್ಲಿಂ ಅರ್ಜಿದಾರರಿಗೆ ತಿಳಿಸದೆ, ಅದರ ಬಗ್ಗೆ ಹಿಯರಿಂಗ್ ಮಾಡಿ, ಮಸೀದಿಯ ಬಾಗಿಲುಗಳನ್ನು ತೆಗೆದು ಅಲ್ಲಿ ಹಿಂದೂಗಳಿಗೆ 1949ರಲ್ಲಿ ಇಟ್ಟ ವಿಗ್ರಹಗಳಿಗೆ ಪೂಜೆ ಮಾಡಲು ಅವಕಾಶ ನೀಡಲಾಗುತ್ತದೆ. ದಿಢೀರೆಂದು ನೂರಾರು ವರ್ಷಗಳಿಂದ ನಡೆದುಕೊಂಡಂತ ಮಸೀದಿ, ನ್ಯಾಯಾಲಯದ ಈ ತೀರ್ಪಿನಿಂದ ದೇವಾಲಯವಾಗಿ ಪರಿವರ್ತನೆಯಾಯಿತು. ಪ್ರಕರಣದ ಭಾಗವೇ ಆಗದಿದ್ದವರಿಗೆ ಪ್ರಕರಣದಲ್ಲಿ ಅರ್ಜಿ ಹಾಕಲು ’ಲೋಕಸ್ ಸ್ಟಾಂಡಿ’ ಇಲ್ಲ (ಎಂದರೆ ಅಧಿಕಾರ ಇಲ್ಲ). ಇಂತಹ ವ್ಯಕ್ತಿಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು, ಪ್ರಕರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಂಘಟನೆಗಳ ವಾದವನ್ನೂ ಕೇಳಿಸಿಕೊಳ್ಳದೆ ನೀಡಿದ ತೀರ್ಪು, ’ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಜಸ್ಟಿಸ್’ಗೆ ವಿರುದ್ಧವಾಗಿದೆ.

ಅಸಾದುದ್ದೀನ್ ಒವೈಸಿ

ಈ ಸಮಯದಲ್ಲಿ ಇದನ್ನು ಏಕೆ ನೆನೆಯಬೇಕೆಂದರೆ ಜ್ಞಾನವಾಪಿ ಮಸೀದಿಯಲ್ಲಿ ಸಹ ಇದೇ ನಡೆಯುತ್ತಿದೆ. ಜ್ಞಾನವಾಪಿ ಮಸೀದಿಯ ಸುತ್ತ ಸೃಷ್ಟಿಸಿರುವ ವಿವಾದದ ಲೀಗಲ್ ಕಾಲಾನುಕ್ರಮ-ಇತಿಹಾಸ ಹೀಗಿದೆ:


ಎಲ್ಲದಕ್ಕಿಂತ ಆತಂಕಕಾರಿ ವಿಷಯವೆಂದರೆ, ಸುಪ್ರೀಂ ಕೋರ್ಟ್‌ನ ಸದರಿ ಪ್ರಕರಣವನ್ನು ಆಲಿಸುತ್ತಿರುವ ಬೆಂಚ್‌ನಲ್ಲಿ ಇರುವ ಜಸ್ಟಿಸ್ ಚಂದ್ರಚೂಡ್ ಬಾಬ್ರಿ ತೀರ್ಪಿನಲ್ಲಿ ಪ್ಲೇಸಸ್ ಆಫ್ ವರ್ಷಿಪ್ ಕಾಯ್ದೆ ಬಹು ಮುಖ್ಯ, ಅದನ್ನು ಉಲ್ಲಂಘಿಸಬಾರದೆಂದು ಹೇಳಿದ್ದರು; ಆದರೆ ಈ ಪ್ರಕರಣದಲ್ಲಿ ಅದರ ಉಲ್ಲಂಘನೆಯಾಗಿರುವುದನ್ನು ಗಣನೆಗೇ ತೆಗೆದುಕೊಳ್ಳದಿರುವುದು ಮತ್ತು ಆ ಉಲ್ಲಂಘನೆಯನ್ನು ಸಮರ್ಥಿಸುವಂತೆ ಮಾತನಾಡಿರುವುದು.

ವಿಚಾರಣೆ ನಡೆಯಬೇಕಾದರೆ, ಮಸೀದಿ ಸಮಿತಿ ಪರ ವಕೀಲರು, ಸಮೀಕ್ಷೆಗೆ ಆದೇಶಿಸಿದ್ದು ಕಾಯ್ದೆಯ ಕಲಂ 3ರ ಉಲ್ಲಂಘನೆ ಎಂದಾಗ, “ದೇಶದಲ್ಲಿ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಎರಡು ಧರ್ಮಗಳು ಗುರುತು ಇರುತ್ತವೆ, ಹಾಗಾಗಿ ಅದು ಯಾವ ಧರ್ಮಕ್ಕೆ ಸೇರಿದೆ ಎಂದು ಪರಿಶೀಲಿಸುವುದು ಕಾಯ್ದೆಯ ಉಲ್ಲಂಘನೆಯಲ್ಲ” ಎಂದು ಸಮರ್ಥಿಸಿಕೊಳ್ಳುತ್ತಾರೆ!

ಇದು ಅಪಾಯಕಾರಿ ಸಂಗತಿ. ಏಕೆಂದರೆ ಈಗ ಯಾವುದೋ ಒಂದು ಮಸೀದಿಯಲ್ಲಿ ಹಿಂದೂ ವಿಗ್ರಹಗಳು ಇವೆಯೆಂದು ಅನೇಕ ಜನ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಹಾಗಾಗಿ, 1947ರ ಸಮಯದಲ್ಲಿ ಯಾವುದಾದರು ಸ್ಥಳಗಳು ಮಸೀದಿಯಾಗಿದ್ದರೆ ಅದು ಮಸೀದಿಯಾಗಿ ಉಳಿಯಬೇಕು, ದೇವಾಲಯವಾಗಿದ್ದುದು ದೇವಾಲಯವಾಗಿ ಉಳಿಯಬೇಕು, ಆಗಲೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಹಾಗು ಸಮಾಜ ಒಗ್ಗಟ್ಟಾಗಿರುತ್ತದೆ ಎಂಬ ಉದ್ದೇಶವನ್ನು ಎತ್ತಿಹಿಡಿಯುವ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ಅಪಾಯದಲ್ಲಿದೆ.

ಹೀಗೆ ನ್ಯಾಯಾಲಯಗಳೇ ಹಿಂದುತ್ವವಾದಿ ಸಂಘಟನೆಗಳ ಕೋಮುವಾದಿ ದಾಳಿಗಳಿಗೆ ನೆರವಾಗಿ ನಿಂತಿವೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಅದು ದೇವಾಲಯವಾಗಿತ್ತೇ ಎಂಬ ವಿಚಾರಣೆಗಿಂತಲೂ, ಇಲ್ಲಿ ನ್ಯಾಯಾಲಯಗಳು ಸಂವಿಧಾನ ಬದ್ಧವಾಗಿವೆಯೇ ಎಂಬ ವಿಚಾರಣೆ ನಡೆಯುತ್ತಿದೆ.

ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others



ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ಶಿವಲಿಂಗ ಎಲ್ಲಿ ಕಂಡು ಬಂದಿದೆ ಎಂಬ ಸುಪ್ರೀಂ ಪ್ರಶ್ನೆಗೆ, ವರದಿ ನೋಡಿಲ್ಲ ಎಂದ ಯುಪಿ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಕ್ರಮ ಮಸೀದಿಗಳ ಬಿಟ್ಟು ಎಲ್ಲಾ ನಗರ ನಕ್ಸಲ್ ಕಮ್ಯೂನಿಸ್ಟ್ ರ ಮನೆಗಳನ್ನು ಕೋರ್ಟ್ ಮುಟ್ಟುಗೋಲು ಹಾಕಿದರೆ ನ್ಯಾಯ ಸಮ್ಮತ ಆಗಬಹುದು ಅನಿಸುತ್ತೆ ಸಮಾಜದಲ್ಲಿ ಏಕೆಂದರೆ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಇವರಿಂದಲೇ ನಡಿತಿರುವ ಕಾರಣ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...