Homeಮುಖಪುಟಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಭಾರತೀಯ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇಂದು ವ್ಯಕ್ತಪಡಿಸಲಾಗುತ್ತಿರುವ ಅಭಿಪ್ರಾಯಗಳನ್ನು ಸಂವಿಧಾನ ಸಭೆಯು 70 ವರ್ಷಗಳ ಹಿಂದೆಯೇ ಚರ್ಚಿಸಿತ್ತು.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನವಂಬರ್ 1948ರಲ್ಲಿ ಸದಸ್ಯ ಝಡ್.ಎಚ್. ಲಾರಿ ಅವರು ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಸಂವಿಧಾನ ಸಭೆಯಲ್ಲಿ ತನ್ನ ವಾದವನ್ನು ಮಂಡಿಸುತ್ತಿದ್ದಾಗ ಅವರನ್ನು ಮತ್ತೆಮತ್ತೆ ಅಣಕಿಸಲಾಗಿತ್ತು. ಯುನೈಟೆಡ್ ಪ್ರಾವಿನ್ಸಸ್ (ಬಹುತೇಕ ಈಗಿನ ಉತ್ತರ ಪ್ರದೇಶ)ನ ಈ ಮುಸ್ಲಿಮ್ ನಾಯಕನಲ್ಲಿ ಕೆಲವು ಸದಸ್ಯರು, ಪಾಕಿಸ್ತಾನದಲ್ಲಿ “ನಿಮ್ಮ ನಾಯಕರು” ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಅವರ ಭಾರತೀಯ ಪೌರತ್ವವನ್ನೇ ಪ್ರಶ್ನೆ ಮಾಡಿದ್ದರು.

“ನಾನು ನನ್ನ ಹಕ್ಕುಗಳನ್ನು ಪಾಕಿಸ್ತಾನಕ್ಕೆ ಅಡವು ಇಟ್ಟಿಲ್ಲ. ಪಾಕಿಸ್ತಾನ ಏನು ಮಾಡುತ್ತದೆ, ಏನು ಮಾಡುವುದಿಲ್ಲ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ” ಎಂದು ಅವರು ಅಂತವರಿಗೆ ಸರಿಯಾದ ಉತ್ತರವನ್ನೇ ನೀಡಿದ್ದರು. “ಭಾರತೀಯ ಮುಸ್ಲಿಮರು ಈ ಮಣ್ಣಿನ ಮಕ್ಕಳು. ಆದುದರಿಂದ ನಾವು ಭಾರತೀಯ ಪೌರರ ಹಕ್ಕುಗಳನ್ನು ಕೇಳುತ್ತಿದ್ದೇವೆ” ಎಂದು ವಕೀಲರಾದ ಅವರು ಹೇಳಿದ್ದರು.

ಇದೀಗ ಏಳು ದಶಕಗಳ ನಂತರ ಮುಸ್ಲಿಂ ಸಮುದಾಯವನ್ನು ಅದೇ ರೀತಿಯ, ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ಅಣಕಕ್ಕೆ ಗುರಿಪಡಿಸಲಾಗುತ್ತಿದೆ. ದೇಶದ ಪೌರತ್ವ ಕಾಯಿದೆಗೆ ಧಾರ್ಮಿಕ ಮಾನದಂಡ ನೀಡುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಎನ್‌ಪಿಎ ಮತ್ತು ಎನ್‌ಆರ್‌ಸಿ ವಿರುದ್ಧ ಲಕ್ಷಾಂತರ ಭಾರತೀಯರು ಬೀದಿಗಿಳಿದಿರುವ ಹೊತ್ತಿನಲ್ಲಿ ಅಂದು ಸಂವಿಧಾನ ಸಭೆಯಲ್ಲಿ ಎತ್ತಲಾಗಿದ್ದ ಕೆಲವು ಪ್ರಶ್ನೆಗಳನ್ನೇ ಈಗ ಎತ್ತಲಾಗುತ್ತಿದೆ.

ಸಂವಿಧಾನದ ಕುರಿತು ಹಲವಾರು ಭಯಗಳು, ಅಸಮ್ಮತಿಗಳು ಮತ್ತು ಟೀಕೆಗಳು ಇದ್ದ ಹೊರತಾಗಿಯೂ, ಭಾರತದ ಭವಿಷ್ಯ ಏನಾಗಿರಬೇಕು ಎಂಬದಕ್ಕಿಂತ ಹೆಚ್ಚಾಗಿ, ಏನಾಗಿರಬಾರದು ಎಂಬ ವಿವೇಕ ಅಂದು ಜಯಿಸಿತ್ತು. ಆಗಲೂ ಭಾರತವನ್ನು ಬಹುಸಂಖ್ಯಾತರ ದೇಶವನ್ನಾಗಿ ಮಾಡುವುದರ ಪರವಾಗಿ ಬೊಬ್ಬೆಗಳು ಇದ್ದರೂ, ಅದನ್ನು ಜಾತ್ಯಾತೀತ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು ಎಂದು ಅಂಬೇಡ್ಕರ್ ಮತ್ತು ನೆಹರೂ ನೇತೃತ್ವದಲ್ಲಿ ಸಂವಿಧಾನ ಸಭೆಯ ಸದಸ್ಯರು ನಿರ್ಣಾಯಕವಾಗಿ ನಿರ್ಧರಿಸಿದ್ದರು. ಆಗ ನಡೆದ ಚರ್ಚೆಗಳು ಇಂದಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ನೆರವಾಗಬಹುದು.

ರಕ್ತವೇ? ಹುಟ್ಟೇ?

ಸಂವಿಧಾನ ಸಭೆಯಲ್ಲಿ ನಡೆದ ಅತ್ಯಂತ ಕಠಿಣವಾದ ಕದನವು, ಭಾರತದ ಪೌರತ್ವವನ್ನು ಯಾವ ಆಧಾರದಲ್ಲಿ ನಿರ್ಣಯಿಸಬೇಕು ಎಂಬುದಾಗಿತ್ತು. ಇದು ಲೆಕ್ಸ್ ಸೋಲಿ (lex soli) ಅಂದರೆ, ಜನ್ಮಸ್ಥಾನದ ಕಾನೂನು ಮತ್ತು ಲೆಕ್ಸ್ ಸಾಂಗ್ವಿನಿಸ್ (lex sanguinis) ಅಂದರೆ, ರಕ್ತ ಸಂಬಂಧದ ಕಾನೂನುಗಳೆರಡರ ಪ್ರಕಾರವೂ ಪೌರತ್ವವು ನಿರ್ಧಾರವಾಗುತ್ತದೆ ಎಂದು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ವಾದಿಸಿದ್ದರು. ಸಂವಿಧಾನದಲ್ಲಿರುವ “ನಾವು ಜನರು” ಎಂಬ ಉಲ್ಲೇಖದಂತೆ ದೇಶದಲ್ಲಿ ಹುಟ್ಟಿದ ಎಲ್ಲರನ್ನೂ ಯಾವುದೇ ಧರ್ಮದ ಹಂಗಿಲ್ಲದೆ ಭಾರತೀಯ ಪ್ರಜೆಗಳೆಂದು ಪರಿಗಣಿಸಬೇಕು ಎಂದು ಹಲವರು ವಾದಿಸಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಎಲ್ಲಿಯೇ ಹುಟ್ಟಿದ್ದರೂ ರಕ್ತಸಂಬಂಧ, ನಿರ್ದಿಷ್ಟ ಜನಾಂಗಕ್ಕೆ ಸೇರಿದವರಿಗೆ ಪೌರತ್ವ ನೀಡಬೇಕು ಎಂದು ಕೆಲವರು ವಾದಿಸಿದ್ದರು. ಇಂದು ಇದೇ ವಾದ ಸಿಎಎ ಮೂಲಕ ಮತ್ತೆ ತಲೆಯೆತ್ತಿದೆ. ಅದರ ಪ್ರಕಾರ ನಿರ್ದಿಷ್ಟ ಜನಾಂಗಕ್ಕೆ, ಅಥವಾ ಧರ್ಮಕ್ಕೆ ಸೇರದ ಜನರು (ಮುಖ್ಯವಾಗಿ ಮುಸ್ಲಿಮರು) ಸಮಾನ ಹಕ್ಕುಗಳನ್ನು ಹೊಂದಿಲ್ಲ ಮತ್ತು ಅವರನ್ನು ನೈಸರ್ಗಿಕ ಪೌರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಬೆಂಬಲಿಗರ ವಾದವಾಗಿದೆ.

ಜಾತ್ಯಾತೀತತೆ ಅಪರಾಧವೇ?

ಧರ್ಮಾಧರಿತ ಪೌರತ್ವವನ್ನು ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ ಮತ್ತು ಹಲವಾರು ಇತರರು ವಿರೋಧಿಸಿದ್ದರು. ಆದರೆ ಕೆಲವರು- ನಾಝಿ ಜರ್ಮನಿಯ ತತ್ವಗಳು ಮತ್ತು ಫ್ಯಾಸಿಸ್ಟ್ ಇಟಲಿಯ ತತ್ವಗಳಿಂದ ಪ್ರಭಾವಿತರಾಗಿ ಅವುಗಳನ್ನು ಮೆಚ್ಚಿ ಅನುಸರಿಸುತ್ತಿದ್ದ ಕೆಲವು ಸಂಘಟನೆಗಳಿಗೆ ಸೇರಿದವರೇ ಧರ್ಮ ಮತ್ತು ಪೌರತ್ವಗಳ ನಡುವೆ ಸಂಬಂಧ ಕಲ್ಪಿಸಲು ಪಟ್ಟುಹಿಡಿದಿದ್ದರು. (ಅವರೇ ಇಂದಿಲ್ಲಿ ಅಧಿಕಾರ ಹಿಡಿದಿದ್ದಾರೆ.)  ಇವರಲ್ಲಿ ಪ್ರಮುಖರೆಂದರೆ ಪಿ. ಎಸ್. ದೇಶ್‌ಮುಖ್. ಅವರು ಆಗಸ್ಟ್ 11, 1949ರಂದು ಮಾಡಿದ ಭಾಷಣದ ಸಾರಾಂಶ ಕೆಳಗಿದೆ:

ಡಾ. ಬಿ.ಆರ್.  ಅಂಬೇಡ್ಕರ್ ಅವರ ಪೌರತ್ವ ಕುರಿತ ವ್ಯಾಖ್ಯಾನವು  ಭಾರತೀಯ ಪೌರತ್ವವನ್ನು “ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಪೌರತ್ವ”ವನ್ನಾಗಿ ಮಾಡುವುದೆಂದು ದೇಶ್‌ಮುಖ್ ಅವರು ಭಾವಿಸಿದ್ದರು. ಹುಟ್ಟಿನಿಂದ ಪೌರತ್ವ ನೀಡುವ ಕುರಿತು ಅವರಿಗೆ ಅಸಮಾಧಾನವಿತ್ತು. ಕರಡು ವಿಧಿಯನ್ನು ಸ್ವೀಕರಿಸಿದರೆ ಮುಂಬಯಿ ಬಂದರಿನ ಮೂಲಕ ಪ್ರಯಾಣಿಸುವ ಮಹಿಳೆಯೊಬ್ಬಳು ಹೆತ್ತ ಮಗುವಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಅವರು ವಾದಿಸಿದ್ದರು ದೇಶ್‌ಮುಖ್ ಅವರು ಕನಿಷ್ಟ ಎರಡು ತಿದ್ದುಪಡಿಗಳಿಗೆ ಬೇಡಿಕೆ ಇಟ್ಟಿದ್ದರು.

ಮೊದಲನೆಯದು ಕೇವಲ ಭಾರತದಲ್ಲಿ ಹುಟ್ಟುವುದು ಸಾಕಾಗದು; ಮಗು ಭಾರತೀಯ ಹೆತ್ತವರಿಗೆ ಹುಟ್ಟಿರಬೇಕು ಎಂಬುದು. ಎರಡನೆಯದೆಂದರೆ, ಹಿಂದೂಗಳು ಮತ್ತು ಸಿಕ್ಖರು ಪ್ರಪಂಚದ ಯಾವುದೇ ಕಡೆಯಲ್ಲಿ ವಾಸಿಸುತ್ತಿದ್ದರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿರಬೇಕು ಎಂಬುದು.

ಇದೇ ಅಭಿಪ್ರಾಯಗಳು ನರೇಂದ್ರ ಮೋದಿ ಚುನಾವಣಾ ಗೆಲುವಿನ ನಂತರ ಮೇ 2019ರಂದು ಮಾಡಿದ ಭಾಷಣದಲ್ಲಿ ಪ್ರತಿಫಲಿಸಿದೆ. ಅದರಲ್ಲಿ ಅವರು ಜಾತ್ಯತೀತ ಪರಿಕಲ್ಪನೆಯನ್ನು ದೂರಿ, ಯಾವ ರಾಜಕೀಯ ಪಕ್ಷವೂ ಜಾತ್ಯತೀತತೆಯ ಮುಖವಾಡದ ಹಿಂದೆ ಅಡಗುವ ಧೈರ್ಯ ತೋರಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪೌರತ್ವದ ಪ್ರಶ್ನೆ ಎದ್ದಿದೆ. ದೇಶವನ್ನು ತಳಮಳಕ್ಕೆ ದೂಡಿದೆ. ಇದು 1948ರ ನಾಝಿ, ಫ್ಯಾಸಿಸ್ಟ್ ಬೆಂಬಲಿಗರ ಪ್ರಯತ್ನವನ್ನು ಮುಂದುವರಿಸುವ ಯತ್ನ.

(ಜಾತ್ಯತೀತತೆಯ ಪರವಾಗಿ ಸಂವಿಧಾನ ಸಭೆಯಲ್ಲಿ ಅಂದು ನಡೆದ ಚರ್ಚೆಗಳ ಕುರಿತು ಪ್ರತ್ಯೇಕ ಲೇಖನವನ್ನು ನಿರೀಕ್ಷಿಸಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...