Homeಮುಖಪುಟಸರಕಾರದ ಅಸಹಕಾರ; ಇತಿಹಾಸದ ಪುಟದತ್ತ ಮಲೆನಾಡಿನ ಸಹಕಾರ ಸಾರಿಗೆ!

ಸರಕಾರದ ಅಸಹಕಾರ; ಇತಿಹಾಸದ ಪುಟದತ್ತ ಮಲೆನಾಡಿನ ಸಹಕಾರ ಸಾರಿಗೆ!

- Advertisement -
- Advertisement -

ಬೆಟ್ಟಗುಡ್ಡಗಳ ಇಣುಕಿನಲ್ಲಿ, ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲದ ಕಲ್ಲುಕಣ್ಣಿನ ಮಲೆನಾಡಿನ ರಸ್ತೆಗಳಲ್ಲಿ ಕೆಎಸ್‍ಆರ್‌ಟಿಸಿ ಸೇವೆಯನ್ನು ಆರಂಭಿಸಲು ಸರ್ಕಾರವೇ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರರೇ ಮಾಲೀಕರಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮಲೆನಾಡಿನ ಪ್ರತಿ ಮೂಲೆಮೂಲೆಗೂ, ಪ್ರತಿ ಹಳ್ಳಿಗೂ ಸಾರಿಗೆ ಸೇವೆಯನ್ನು ತಲುಪಿದ ಕೀರ್ತಿ ಮತ್ತು ಶ್ರೇಯ ಸಹಕಾರ ಸಾರಿಗೆಗೆ ಸಲ್ಲುತ್ತದೆ.

ರಾಜ್ಯದ ಅವಳಿ ಮಲೆನಾಡು ಜಿಲ್ಲೆ ಎಂದರೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು. ಈ ಎರಡೂ ಜಿಲ್ಲೆಯ ಸುಮಾರು 16 ತಾಲೂಕುಗಳೂ ಸೇರಿದಂತೆ ಇಲ್ಲಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಭಾಗವಾದ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ರಾಜ್ಯದ ಅತಿದೊಡ್ಡ ರಸ್ತೆ ಸಾರಿಗೆ ಸಂಪರ್ಕ ಜಾಲದಲ್ಲೊಂದಾದ ಸಹಕಾರ ಸಾರಿಗೆ ಇಂದು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲದೆ, ಸರ್ಕಾರದ ಅಸಹಕಾರಕ್ಕೆ ಬೇಸತ್ತು ಫೆಬ್ರವರಿ 17 ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಬೆಟ್ಟಗುಡ್ಡಗಳ ಇಣುಕಿನಲ್ಲಿ, ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲದ ಕಲ್ಲುಕಣ್ಣಿನ ಮಲೆನಾಡಿನ ರಸ್ತೆಗಳಲ್ಲಿ ಕೆಎಸ್‍ಆರ್‍ಟಿಸಿ ಸೇವೆಯನ್ನು ಆರಂಭಿಸಲು ಸರ್ಕಾರವೇ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರರೇ ಮಾಲೀಕರಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮಲೆನಾಡಿನ ಪ್ರತಿ ಮೂಲೆಮೂಲೆಗೂ, ಪ್ರತಿ ಹಳ್ಳಿಗೂ ಸಾರಿಗೆ ಸೇವೆಯನ್ನು ತಲುಪಿದ ಕೀರ್ತಿ ಮತ್ತು ಶ್ರೇಯ ಸಹಕಾರ ಸಾರಿಗೆಗೆ ಸಲ್ಲುತ್ತದೆ.

ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಸೇವೆ ಎಂದೇ ಪರಿಗಣಿಸುತ್ತದೆ. ಆದರೆ ಸರ್ಕಾರ ಇದನ್ನು ನಿಜಕ್ಕೂ ಪಾಲಿಸುತ್ತದೆಯೋ ಇಲ್ಲವೋ? ಆದರೆ, ಇದನ್ನು ರಾಜ್ಯದ ಮಟ್ಟಿಗೆ ನಿಜವಾಗಿಯೂ ಪಾಲಿಸಿದ್ದು ಸಹಕಾರ ಸಾರಿಗೆ. ಇಂದು ದೇಶ-ವಿದೇಶದಲ್ಲಿ ಉನ್ನತ ಮಟ್ಟದ ನಾನಾ ಕೆಲಸದಲ್ಲಿರುವ ವಿದ್ಯಾರ್ಥಿಗಳು ಇದೇ ಸಹಕಾರ ಸಾರಿಗೆ ರಿಯಾಯಿತಿ ಬಸ್ ಪಾಸ್‍ನಲ್ಲಿ ಓಡಾಡಿದವರು. ಇನ್ನೂ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು ವಿಕಲಚೇತನರಿಗೆ ಶೇ.50 ರಷ್ಟು ರಿಯಾಯಿತಿ ನೀಡಿದ ಮೊದಲ ಖಾಸಗಿ ಸಾರಿಗೆ ಸಂಸ್ಥೆ ಎಂಬ ಖ್ಯಾತಿಯೂ ಸಹಕಾರಿ ಸಾರಿಗೆಗೆ ಇದೆ.

ಹೀಗೆ ಮಲೆನಾಡು ಭಾಗದ ಇಂಚಿಂಚೂ ಓಡಾಡಿ ಅಕ್ಷರಶಃ ಜನರ ಜೀವನಾಡಿಯೇ ಆಗಿಹೋದ ಸಹಕಾರ ಸಾರಿಗೆ ಇಂದು ತನ್ನ ಸೇವೆಯನ್ನೇ ಸ್ಥಗಿತಗೊಳಿಸಿದೆ. ಸಹಕಾರ ವಿಭಾಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದ ಸಾರಿಗೆ ವ್ಯವಸ್ಥೆ ಇಂದು ಅಕ್ಷರಶಃ ಇತಿಹಾಸ ಪುಟಕ್ಕೆ ಸೇರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಈ ಹಿನ್ನೆಲೆ ಸಹಕಾರ ಸಾರಿಗೆ ವ್ಯವಸ್ಥೆಯ ಇತಿಹಾಸ ಹಿನ್ನೆಲೆ ಏನು? ಮಲೆನಾಡು ಭಾಗದಲ್ಲಿ ಈ ಸಂಸ್ಥೆ ಸೃಷ್ಟಿಸಿರುವ ಇತಿಹಾಸ ಎಂಥಾದ್ದು? ಈಗನ ನಷ್ಟಕ್ಕೆ ಕಾರಣವೇನು? ಈ ಸಂಸ್ಥೆಯ ಸಂಕಷ್ಟಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಹಕಾರ ಸಾರಿಗೆ ಹಿನ್ನೆಲೆ ಮತ್ತು ಇತಿಹಾಸ
ಮಲೆನಾಡಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶಂಕರ್ ಟ್ರಾನ್ಸ್ಪೋರ್ಟ್ ಕಂಪೆನಿ 1991ರಲ್ಲಿ ನಷ್ಟದ ಕಾರಣ ಮುಚ್ಚಲಾಯಿತು. ಈ ವೇಳೆ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದ್ದ ಸುಮಾರು 300 ಕಾರ್ಮಿಕರ ಬದುಕು ಬೀದಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ದಿವಂಗತ ಬಿ.ಕೆ. ಸುಂದರೇಶ್ ಮತ್ತು ಹೋರಾಟಗಾರ ಸಿರಿಮನೆ ನಾಗರಾಜ್ ಇದೇ ಕಾರ್ಮಿಕರನ್ನು ಒಟ್ಟುಗೂಡಿಸಿ ಎಲ್ಲರೂ ತಮ್ಮ ಕೈಲಾದ ಹಣವನ್ನು ಕ್ರೋಢೀಕರಿಸಿ ಕೇವಲ 12 ಲಕ್ಷ ರೂ. ಬಂಡವಾಳದಲ್ಲಿ ಹುಟ್ಟು ಹಾಕಿದ ಸಂಸ್ಥೆಯೇ ಸಹಕಾರ ಸಾರಿಗೆ ಸಂಸ್ಥೆ. ಭಾಗಶಃ ಇಡೀ ದೇಶದಲ್ಲೇ ಕಾರ್ಮಿಕರೇ ಮಾಲೀಕರಾಗಿ ಆರಂಭಿಸಿದ ಮೊದಲ ಸಂಸ್ಥೆ ಇದು.

ಸಂಸ್ಥೆಯಲ್ಲಿ ಪ್ರತಿಯೊಬ್ಬ ಕಾರ್ಮಿಕನೂ ತಾನೇ ಮಾಲೀಕ ಎಂಬಂತೆ ಹಗಲಿರುಳು ಶ್ರಮಿಸಿದ ಫಲವಾಗಿ 6 ಬಸ್‍ಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 76 ಬಸ್‍ಗಳಿವೆ. ಕೊಪ್ಪದಲ್ಲಿ ಕೇಂದ್ರ ಕಚೇರಿ ಇದ್ದರೆ, ಕೊಪ್ಪ ಮತ್ತು ಶೃಂಗೇರಿ ಎರಡು ಕಡೆಗಳಲ್ಲಿ ಸ್ವಂತ ಗ್ಯಾರೇಜ್ ಅನ್ನು ಈ ಸಂಸ್ಥೆ ಹೊಂದಿದೆ.

ಮಲೆನಾಡಿನ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ನೌಕರ ವರ್ಗ ಹಾಗೂ ಪ್ರವಾಸಿಗರು ಸೇರಿದಂತೆ ಅನೇಕರು ಕಳೆದ 3 ದಶಕಗಳಿಂದ ಈ ಸಾರಿಗೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಸಂಚಾರ, ಸಮಯ ಪಾಲನೆ ಹಾಗೂ ಶಿಸ್ತಿಗೆ ಈ ಸಂಸ್ಥೆ ಹೆಸರುವಾಸಿ. ಆದರೆ, 2017ರಲ್ಲಿ ಬೆಳ್ಳಿಹಬ್ಬ ಆಚರಿಸಿದ ಈ ಸಂಸ್ಥೆ ಕೇವಲ ಮೂರು ವರ್ಷದಲ್ಲಿ ಇದೀಗ ನಷ್ಟದ ಸುಳಿಯಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.

ಸಂಸ್ಥೆಯ ನಷ್ಟಕ್ಕೆ ಕಾರಣವೇನು?
ಕಳೆದ ಮೂರು ನಾಲ್ಕು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಿನನಿತ್ಯ ಏರಿಸಲಾಗುತ್ತಿದೆ. ಆದರೆ, 2013ರಿಂದ ಸಹಕಾರಿ ಸಾರಿಗೆ ಬಸ್ ಪ್ರಯಾಣ ದರವನ್ನು ಏರಿಸಲಾಗಿಲ್ಲ. ಇದರಿಂದ ಸಂಸ್ಥೆಯ ಆದಾಯ ಕುಂಠಿತವಾಗಿದೆ. ಅಲ್ಲದೆ, ಡೀಸೆಲ್ ಬೆಲೆ ಏರಿಕೆಯಿಂದಲೇ ಪ್ರತಿ ತಿಂಗಳು ಕನಿಷ್ಟ 24 ಲಕ್ಷ ಹಣ ಸಂಸ್ಥೆಗೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ.

ಇದರ ಜೊತೆಗೆ ವರ್ಷಕ್ಕೆ 1.5 ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಇನ್ನೂ ಬಸ್ ಪ್ರಯಾಣ ದರದಲ್ಲಿ ವಿದ್ಯಾರ್ಥಿಗಳು , ವಿಕಲಚೇತನರು, ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದವರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ಪರಿಣಾಮ ಸಂಸ್ಥೆಗೆ ಆರ್ಥಿಕ ಹೊರೆ ಅಧಿಕವಾಗಿದ್ದು, ಪ್ರತಿ ತಿಂಗಳ ಖರ್ಚನ್ನು ನಿಭಾಯಿಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಸಂಸ್ಥೆಯ ಪದಾಧಿಕಾರಿಗಳು.

ಸರ್ಕಾರದ ಎದುರು ಸಂಸ್ಥೆ ಇಟ್ಟಿರುವ ಬೇಡಿಕೆ ಏನು?
ಸಹಕಾರ ಸಾರಿಗೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಿದೆ. ಈ ಪೈಕಿ ಸರ್ಕಾರ ಪ್ರತಿವರ್ಷ ರಿಯಾಯಿತಿ ಪಾಸ್ ಬಾಬ್ತು 6.6 ಕೋಟಿ ಹಣವನ್ನು ಸಂಸ್ಥೆಗೆ ಪಾವತಿ ಮಾಡಬೇಕು. ಆದರೆ, ಈವರೆಗೆ ಈ ಹಣ ಬಿಡುಗಡೆಯಾಗಿಲ್ಲ.

ಇದಲ್ಲದೆ, ಸಂಸ್ಥೆಯ ಬಸ್‍ಗಳ ಡೀಸೆಲ್ ಖರೀದಿಯಲ್ಲಿ ತೆರಿಗೆ ವಿನಾಯಿತಿ ನೀಡಬೇಕು, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಸಹಕಾರ ತತ್ವದ ಅಡಿಯಲ್ಲಿ ನಡೆಯುತ್ತಿರುವ ಸಹಕಾರ ಸಾರಿಗೆಗೂ ನೀಡಬೇಕು ಎಂಬುದು ಸಂಸ್ಥೆಯ ಬೇಡಿಕೆ. ಆದರೆ, ಈವರೆಗೆ ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಿಲ್ಲ ಎಂಬುದೇ ದುರದೃಷ್ಟಕರ ಸಂಗತಿ.

ಮಲೆನಾಡಿನ ಈ ಸಹಕಾರ ಸಾರಿಗೆಯ ಸೇವಾ ಮನೋಭಾವವನ್ನು ಜಪಾನ್ ಸರ್ಕಾರ ಮೆಚ್ಚಿಕೊಂಡಿತ್ತು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಪಡೆದರು, ಮಣಿಪಾಲ್ ಸ್ನಾತಕೋತ್ತರ ಪದವಿಗೆ ಸಹಕಾರ ಸಾರಿಗೆ ಪಠ್ಯವಾಗಿಯೇ ಬದಲಾಗಿತ್ತು. ಇನ್ನೂ ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಯ ಇದರ ಮೇಲಿನ ಸಂಶೋಧನೆಗೆ ಪಿಹೆಚ್ಡಿ ಪದವಿಯನ್ನು ಪ್ರದಾನ ಮಾಡಿತ್ತು.

ಆದರೆ, ಇಷ್ಟೆಲ್ಲಾ ಶ್ರೇಯಕ್ಕೆ ಪಾತ್ರವಾದ ಸಹಕಾರ ಸಾರಿಗೆ ಇಂದು ಅಳಿವಿನ ಅಂಚಿನಲ್ಲಿದೆ, ಇತಿಹಾಸದ ಕಾಲಗರ್ಭ ಸೇರಲು ಅವಸರಿಸುತ್ತಿದೆ ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳುವುದು ನಿಜಕ್ಕೂ ಕಷ್ಟದಾಯಕವಾದ ವಿಚಾರ. ಅಲ್ಲದೆ, ಮಲೆನಾಡಿಗರ ಅತೀ ಅವಶ್ಯಕವಾದ ವಿಚಾರಗಳಲ್ಲಿ ಸಹಕಾರ ಸಾರಿಗೆ ಪ್ರಮುಖವಾದದ್ದು. ಹೀಗಾಗಿ ಸರ್ಕಾರ ಈ ಸಂಸ್ಥೆಯ ಪುನಶ್ಚೇತನಕ್ಕೆ ಸಹಕಾರ ನೀಡಲೇಬೇಕಿದೆ.

ನಷ್ಟಕ್ಕೆ ಸರ್ಕಾರವೇ ಕಾರಣ ಹೊರತು ಸಹಕಾರಿ ಸಾರಿಗೆಯಲ್ಲ- ಸಿರಿಮನೆ ನಾಗರಾಜ್

ಸಹಕಾರಿ ಸಂಸ್ಥೆಯ ಸದಸ್ಯರು ಸದ್ಯಕ್ಕೆ ಧರಣಿ ಕೂತಿದ್ದಾರೆ. ಕೆ.ಎಸ್.ಆರ್.ಟಿ.ಸಿಗೆ ನೀಡುವ ಸವಲತ್ತುಗಳನ್ನು ನಮಗೂ ನೀಡಿ ಎಂಬುದು ಅವರ ಬೇಡಿಕೆ. ಏಕೆಂದರೆ ಸಹಕಾರಿ ಸಾರಿಗೆಯವರು ಲಾಭ ನಷ್ಟದ ಯೋಚನೆಯಿಲ್ಲದೇ ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ಮಲೆನಾಡಿನ ದೂರ ದೂರದ ಹಳ್ಳಿಗಳಿಗೂ ಬಸ್ ಸೌಲಭ್ಯ ನೀಡಿದ್ದಾರೆ. ಅಲ್ಲದೇ ಶಾಲಾಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.

ಸದ್ಯ ಸರ್ಕಾರದ ನಿಷ್ಕ್ರಿಯತೆ ಮತ್ತು ನಿಷ್ಕಾಳಜಿಯಿಂದು ಒಂದು ವೇಳೆ ಈ ಸಹಕಾರಿ ಸಾರಿಗೆ ಮುಚ್ಚಿಹೋದರೆ ಅರ್ಧ ಮಲೆನಾಡು ಸಮರ್ಪಕ ಸಂಪರ್ಕವಿಲ್ಲದೇ ಸ್ತಬ್ದವಾಗುವುದರಲ್ಲಿ ಅನುಮಾನವಿಲ್ಲ. ಸಹಕಾರಿ ಸಂಸ್ಥೆಯ ನಷ್ಟಕ್ಕೆ ಮಿಸ್ ಮ್ಯಾನೇಜ್‍ಮೆಂಟ್, ಹಣದ ದುರ್ಬಳಕೆ ಕಾರಣವಲ್ಲ. ಡೀಸೆಲ್ ಸಬ್ಸಿಡಿ, ರಸ್ತೆ ತೆರಿಗೆ ವಿನಾಯಿತಿಯಂತಹ ಹಲವು ಸರ್ಕಾರದ ಸವಲತ್ತುಗಳು ಸಿಗದಿರುವುದು, ಡಿಸೇಲ್ ಬೆಲೆ ದಿನೇ ದಿನೇ ಏರುತ್ತಿರುವುದು ಕಾರಣವಾಗಿದೆ. ಅವರ ಬೇಡಿಕೆಗಳು ನ್ಯಾಯಯುತವಾಗಿದೆ. ಹಾಗಾಗಿ ಕೂಡಲೇ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಐತಿಹಾಸಿಕ ಸಹಕಾರಿ ಸಾರಿಗೆಯನ್ನು ಉಳಿಸಬೇಕು. ಅವರ ಹೋರಾಟಕ್ಕೆ ನಾನು ಸಂಪೂರ್ಣವಾಗಿ ಬೆಂಬಲ ಕೊಡುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...

‘ನಾವು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಪ್ರಯತ್ನಿಸುತ್ತೇವೆ’; ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ: ವರದಿ

ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ದಾಳಿಗಳ ನಂತರ ಇರಾನ್‌ನ ಉನ್ನತ ಅಧಿಕಾರಿಗಳು ಮತ್ತು ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಸಾವಿರಾರು ಜನರು ಸಾವನ್ನಪ್ಪಿದ ನಂತರ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ...

‘ಅಮೆರಿಕ ಇಲ್ಲದೆ, ನ್ಯಾಟೋ ಒಂದು ಕಾಗದದ ಹುಲಿ’: ಅಟ್ಲಾಂಟಿಕ್ ಮೈತ್ರಿಕೂಟದ ದೇಶಗಳನ್ನು ‘ಹೇಡಿಗಳು’ ಎಂದ ಡೊನಾಲ್ಡ್ ಟ್ರಂಪ್  

ಇರಾನ್ ವಿರುದ್ಧದ ಅಮೆರಿಕ - ಇಸ್ರೇಲ್ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ಮಿತ್ರರಾಷ್ಟ್ರಗಳ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೀರ್ಘಕಾಲದ ಅಮೆರಿಕದ ಮಿತ್ರರಾಷ್ಟ್ರಗಳನ್ನು "ಹೇಡಿಗಳು" ಎಂದು ಕರೆದಿದ್ದಾರೆ. "ಯುಎಸ್ಎ ಇಲ್ಲದೆ,...

ಮುಖ್ಯಮಂತ್ರಿಗಳಿಗೆ ವರ್ಗಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತ ಮಹತ್ವದ ಕೆಲಸವಿದೆ: ಕರ್ನಾಟಕ ಹೈಕೋರ್ಟ್ 

ಸರ್ಕಾರಿ ನೌಕರರ ವರ್ಗಾವಣೆ ಮತ್ತು ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತ ಮುಖ್ಯಮಂತ್ರಿಗಳು ನಿರ್ವಹಿಸಬೇಕಾದ ಕೆಲಸ ಉತ್ತಮ ಮತ್ತು ಹೆಚ್ಚು ಮುಖ್ಯವಾದುದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚಿನ ತೀರ್ಪೊಂದರಲ್ಲಿ ಹೇಳಿದೆ.  ಬೆಸ್ಕಾಂ ಎಂಜಿನಿಯರ್ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಪಶ್ಚಿಮ ಏಷ್ಯಾ ಸಂಘರ್ಷ: ಪ್ರತ್ಯೇಕ ಘಟನೆಗಳಲ್ಲಿ ಈವರೆಗೆ ಆರು ಭಾರತೀಯರ ಸಾವು, ಒಬ್ಬರು ಕಾಣೆ; ವಿದೇಶಾಂಗ ಸಚಿವಾಲಯ ಮಾಹಿತಿ

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಗಲ್ಫ್ ಪ್ರದೇಶದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಆರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ.  ಭಾರತೀಯ ಕಾರ್ಯಾಚರಣೆಗಳು...

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಮತ್ತೊಬ್ಬ ನಾಯಕ, ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವು

ಟೆಹ್ರಾನ್: ಇಸ್ರೇಲಿ-ಅಮೆರಿಕನ್ ಕ್ಷಿಪಣಿ ದಾಳಿಯಲ್ಲಿ ಇರಾನ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ದೃಢಪಡಿಸಿದೆ. ಸರ್ಕಾರಿ ಸ್ವಾಮ್ಯದ ತಸ್ನಿಮ್ ಸುದ್ದಿ ಸಂಸ್ಥೆ...

ಶಿವಮೊಗ್ಗ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ; 26 ವರ್ಷದ ಪಶುವೈದ್ಯೆ ಸಾವು

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಮೃಗಾಲಯದಲ್ಲಿ ಗುರುವಾರ ತಡರಾತ್ರಿ ನೀರಾನೆ ದಾಳಿಗೆ ಒಳಗಾಗಿದ್ದ 26 ವರ್ಷದ ತರಬೇತಿ ವನ್ಯಜೀವಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದವರಾದ ಸಮೀಕ್ಷಾ,...

ಸಾಮೂಹಿಕ ಮತಾಂತರಕ್ಕೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ; ಮಸೂದೆ ಅಂಗೀಕರಿಸಿದ ಛತ್ತೀಸ್‌ಗಢ ವಿಧಾನಸಭೆ

ಬಲವಂತ, ಪ್ರಚೋದನೆ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಛತ್ತೀಸ್‌ಗಢ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ...

6 ವರ್ಷಗಳ ಜೈಲುವಾಸದ ನಂತರ ಮಧ್ಯಂತರ ಜಾಮೀನು; ಜೈಲಿನಿಂದ ಹೊರಬಂದ ಶಾರ್ಜೀಲ್ ಇಮಾಮ್‌

ಸಹೋದರನ ಮದುವೆಯಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ದೆಹಲಿ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದ ನಂತರ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶುಕ್ರವಾರ ಸುಮಾರು ಆರು ವರ್ಷಗಳ...

ಉತ್ತಮ್ ನಗರದಲ್ಲಿ ಗೌರವಯುತ-ಶಾಂತಿಯುತ ಈದ್ ಆಚರಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಎಂದು ದೆಹಲಿ ಹೈಕೋರ್ಟ್ ನಿರ್ದೇಶನ

ರಾಷ್ಟ್ರ ರಾಜಧಾನಿಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಶಾಂತಿಯುತ ಮತ್ತು ಘನತೆಯ ಈದ್ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಎಲ್ಲಾ...