Homeಕರೋನಾ ತಲ್ಲಣಕೊರೊನಾ ತಪ್ಪಿದರೂ ಕಳಂಕ ತಪ್ಪುತ್ತಿಲ್ಲ: ಸೋಂಕಿತರ ಕಥೆ–ವ್ಯಥೆ!

ಕೊರೊನಾ ತಪ್ಪಿದರೂ ಕಳಂಕ ತಪ್ಪುತ್ತಿಲ್ಲ: ಸೋಂಕಿತರ ಕಥೆ–ವ್ಯಥೆ!

ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ.

- Advertisement -
- Advertisement -

ಭಾರತದಲ್ಲಿ ಸುಮಾರು 9,31,181 ಜನರಿಗೆ ಕೊರೊನಾ ಸೋಂಕು ಆವರಿಸಿದೆ. ಈ ಪೈಕಿ 5,92,032 ಜನ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ 3,19,840. ಕೊರೊನಾ ಸೋಂಕಿನಿಂದಾಗಿ ಈವರೆಗೆ ಸುಮಾರು 24,309 ಜನ ಮೃತಪಟ್ಟಿದ್ದಾರೆ. ಅಂದರೆ ಮೃತಪಟ್ಟಿರುವ ಶೇಕಡಾವಾರು ಪ್ರಮಾಣ 2.3. ಮೃತಪಟ್ಟವರಲ್ಲಿ ಬಹುತೇಕರು 60ಕ್ಕಿಂತ ಹೆಚ್ಚು ವಯಸ್ಸಿನವರು ಮತ್ತು ಇತರ ರೋಗವನ್ನು ಹೊಂದಿದ್ದಂತವರು.

ಸ್ವಲ್ಪ ಹೆಚ್ಚುವರಿ ಎಚ್ಚರಿಕೆ ಮತ್ತು ಧೈರ್ಯ ಇದ್ದರೆ ಈ ಸೋಂಕನ್ನು ಸಂಭಾಳಿಸುವುದು ಕಷ್ಟದ ಕೆಲಸ ಏನಲ್ಲ ಎಂಬುದ ಹಲವು ತಜ್ಞರ ಅಭಿಪ್ರಾಯ. ಇದಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಆಗುತ್ತಿರುವು ಒಂದು ಅಮಾನವೀಯ ಬೆಳವಣಿಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ನಡೆಸಿಕೊಳ್ಳುತ್ತಿರುವ – ಅವರ ಜೊತೆಗೆ ವರ್ತಿಸುತ್ತಿರುವ ಹಲವು ವರದಿಗಳು ಸಿಗುತ್ತವೆ. ಸೋಂಕು ಪೀಡಿತರಾಗಿ ರೋಗದ ನೋವಿಗಿಂತಲೂ ಜನರಿಂದ ಮಾನಸಿಕ ಹಿಂಸೆ ಅನುಭವಿಸಿದ ಕೆಲವರ ಕಥೆ ಇಲ್ಲಿದೆ.

ಕಥೆ-1: ಆತನ ಹೆಸರು ಸುರೇಶ್ (ಹೆಸರನ್ನು ಬದಲಿಸಲಾಗಿದೆ). ಬೆಂಗಳೂರಿನಲ್ಲಿ ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಕೂಡ ಇದೆ. ಇತ್ತೀಚೆಗೆ ಒಂದು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದರು. ಆದರೆ, ವಾರದ ಹಿಂದೆ ಅವರಿಗೆ ಊಟ ಮಾಡುವಾಗ ರುಚಿ ಗೊತ್ತಾಗಿರಲಿಲ್ಲ. ಹೀಗಾಗಿ ತಮ್ಮ ವೈದ್ಯರ ಸಲಹೆ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಪಾಸಿಟೀವ್ ಫಲಿತಾಂಶ ಬಂದಿದೆ. ಆದರೆ, ಈ ವಿಚಾರ ಮನೆಗೆ ಆಗಮಿಸುವ ವೇಳೆಗೆ ಎಲ್ಲರಿಗೂ ಗೊತ್ತಾಗಿದೆ.

ಪರೀಕ್ಷೆ ನಡೆಸಿ ಇಂದಿಗೆ ಸರಿಯಾಗಿ 10 ದಿನಗಳಾಗಿವೆ. ತಾನು ಹಾಗೂ ತನ್ನ ಹೆಂಡತಿ ಮನೆಯಿಂದ ಹೊರ ಬರುವುದಿಲ್ಲ. ಅಪಾಟ್ಮೆರ್ಂಟ್‍ನ ಕಾಮನ್ ಸ್ಥಳಗಳನ್ನು ಬಳಸುವುದಿಲ್ಲ ಎಂದು ಇವರು ಅಪಾರ್ಟ್ಮೆಂಟ್ ಮ್ಯಾನೇಜ್ಮೆಂಟ್‍ನವರಿಗೆ ಮಾತು ನೀಡಿದ್ದಾರೆ. ಹೀಗಾಗಿ ಗಂಡ-ಹೆಂಡತಿ ಇಬ್ಬರೂ ಮನೆಯಿಂದ ಹೊರ ಬಂದು ಸೂರ್ಯನ ಕಿರಣಗಳನ್ನು ನೋಡಿಯೇ 10 ದಿನಗಳಾಗಿವೆ. ಈ ನಡುವೆ ವಾಚ್ಮನ್ ಪ್ರತಿದಿನ ಮನೆಯ ಬಾಗಿಲ ಬಳಿಯಲ್ಲಿ ಇಟ್ಟು ಹೋಗುವ ಮೊಸರನ್ನವೇ ಇವರಿಗೆ ಗತಿ. ಇನ್ನು ಮನೆಯಲ್ಲಿ ತುಂಬಾ ಕಸ ಇದ್ದು ಅದನ್ನು ಹೊರಗೆ ಸಾಗಿಸುವುದಕ್ಕೂ ಇವರು ನಿಸ್ಸಹಾಯಕರು. ಕೊರೊನಾ ನಿಮಿತ್ತ ತಮ್ಮ ಪ್ರತಿಯೊಂದು ಕೆಲಸಕ್ಕೂ ಇವರು ಪರಾವಲಂಬಿಗಳಾಗಿದ್ದಾರೆ.

ಕೊರೋನಾ ಸೋಂಕಿತರಾದ ಎಲ್ಲರೂ ಸಾಮಾನ್ಯವಾಗಿ ಎದುರಿಸಲೇಬೇಕಾದ ಸಂಕಷ್ಟವಿದು ಎಂದುಕೊಳ್ಳೋಣ. ಆದರೆ, ಚೂರಿಯಂತೆ ಇರಿಯುವ ಜನರ ಮಾತು ಕೊರೋನಾ ರೋಗಿಗಳ ಮಾನಸಿಕ ಆರೋಗ್ಯವನ್ನು ಹದಗೆಡಿಸಿದೆ. ಒಂದೆಡೆ ಅಪಾಟ್ಮೆರ್ಂಟ್‍ನ ಇತರ ನಿವಾಸಿಗಳು ಇಂತವರನ್ನು ಏಕೆ ಇಲ್ಲಿ ಇಟ್ಟಿದ್ದೀರಿ? ಎಂದು ವರಾತ ತೆಗೆಯುತ್ತಿದ್ದಾರೆ. ಅಪಾಟ್ಮೆರ್ಂಟ್ ನಿವಾಸಿಗಳ ವಾಟ್ಸಾಪ್ ಗ್ರೂಪುಗಳಲ್ಲಿ ಪ್ರತಿನಿತ್ಯ ಇವರದ್ದೇ ಮಾತಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಆರೋಗ್ಯ ವಿಚಾರಿಸುವ ನೆಪದಲ್ಲಿ ಇವರಿಗೆ ಕರೆ ಮಾಡುವವರ ಚುಚ್ಚು ಮಾತುಗಳಿಂದ ಅಕ್ಷರಶಃ ನೊಂದಿದ್ದಾರೆ.

ನಾಳೆ ಇವರು ಖಂಡಿತ ಕೊರೋನಾದಂತಹ ಖಾಯಿಲೆಯಿಂದ ಬಚಾವಾಗಿ ಬರಬಹುದು. ಆದರೆ, ಈ ಸಂದರ್ಭದಲ್ಲಿ ಅವರ ಮನಸ್ಸಿಗೆ ಸತತವಾಗಿ ಉಂಟಾಗಿರುವ ನೋವಿನಿಂದ ರೋಗಿ ಬೇಗ ಗುಣವಾಗುತ್ತಾನೆ ಎಂದು ಹೇಳುವುದು ಕಷ್ಟ.

ಕಥೆ-2: ಆತ ಮೂಲತಃ ಮಲೆನಾಡಿನ ಹುಡುಗ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ. ಒಂದೊಳ್ಳೆ ಕೆಲಸ ಪಡೆದಿದ್ದ ಆತ ನಗರದ ಪ್ರತಿಷ್ಠಿತ ಏರಿಯಾದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಆದರೆ, ದುರಾದೃಷ್ಟವಶಾತ್ ಆಗಿನ್ನು ರಾಜ್ಯಕ್ಕೆ ಕಾಲಿಟ್ಟಿದ್ದ ಕೊರೊನಾ ಲಾಕ್‍ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಆತನಿಗೂ ವಕ್ಕರಿಸಿತ್ತು.

ದಿಢೀರನೆ ಕಾಣಿಸಿಕೊಂಡಿದ್ದ ಸುಸ್ತು ಜ್ವರದಿಂದಾಗಿ ಮೆತ್ತಗಾಗಿದ್ದ ಆತ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದ. ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆತನೂ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವಾಗಿ ಗುಣಮುಖನಾಗಿದ್ದ.

ಆದರೆ, ಆಗಿನ್ನು ಮಾಧ್ಯಮಗಳು ಪ್ರತಿನಿತ್ಯ ಕೊರೊನಾ ಕೇಕೆ, ತಬ್ಲಿಘಿ ಸೋಂಕು, ಕೊರೊನಾ ರಣಕಹಳೆ, ಕೊರೊನಾ ಅಟ್ಟಹಾಸ, ಸಾವಿನ ಸರದಾರ ಹೀಗೆ ನಾನಾ ಹೆಸರಿನಲ್ಲಿ ಸೋಂಕನ್ನು ವಿಜೃಂಭಿಸಿ ವರದಿ ಮಾಡಿದ್ದವು. ಈ ಮೂಲಕ ಜನರಲ್ಲಿ ಎಚ್ಚರಿಕೆಯ ಬದಲು ಭೀತಿ ಹುಟ್ಟಿಸುವಲ್ಲಿ ಸಫಲರಾಗಿದ್ದರು. ಪರಿಣಾಮ ಆತ ಕೊರೊನಾದಿಂದ ಗುಣಮುಖನಾಗಿ ಮನೆಗೆ ಮರಳಿದ್ದರೂ ಸಹ ಕೊರೊನಾಗೆ ಹೆದರಿ ಮನೆಯ ಯಜಮಾನ ಆತನನ್ನು ಏಕಾಏಕಿ ಹೊರಹಾಕಿದ್ದ. “ಲಾಕ್‍ಡೌನ್ ಸಂದರ್ಭದಲ್ಲಿ ಅಸಹಾಯಕನಂತೆ ನಾನು ಬೀದಿ ಪಾಲಾಗಿದ್ದೆ. ಯಾರೂ ಸಹಾಯ ಹಸ್ತ ಚಾಚಲಿಲ್ಲ. ಕೊನೆಗೆ ಕೆಲಸವನ್ನೂ ಕಳೆದುಕೊಂಡು, ಆನಂತರ ಅನಿವಾರ್ಯವಾಗಿ ಊರಿಗೆ ಮರಳಿದೆ” ಎನ್ನುತ್ತಾರೆ ಅವರು.

ಇದು ಕೊರೊನಾ ಸೋಂಕು ಪೀಡಿತರ ಕಥೆಯಾದರೆ, ಇಂತಹ ಸಂದರ್ಭದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಅನಿವಾರ್ಯ ಕಾರಣಗಳಿಗಾಗಿ ತಮ್ಮ ಸಂಬಂಧಿಕರ ಅಥವಾ ತಮ್ಮ ಮನೆಗೆ ತೆರಳುವವರ ಕಥೆ ಭಿನ್ನವಾಗಿದೆ, ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿರುವುದು ತಿಳಿಯುತ್ತದೆ.

ಕಥೆ 3: ಆಕೆಯ ಹೆಸರು ಭಾನು (ಹೆಸರನ್ನು ಬದಲಾಯಿಸಲಾಗಿದೆ). ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿರುವ ಈಕೆ ಪದವೀಧರೆ. ಪೋಷಕರು ಈಕೆಯನ್ನು ದೂರದ ಮಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ಆಕೆಯ ದುರಾದೃಷ್ಟವೋ ಏನೋ? ಆಕೆಗೆ 7 ತಿಂಗಳು ತುಂಬುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಲಾಕ್‍ಡೌನ್ ಘೋಷಿಸಲಾಯಿತು.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ 7ನೇ ತಿಂಗಳು ನಡೆಯುವಾಗ ಸೀಮಂತ ಮಾಡಿಸಿ ಹೆರಿಗೆಗೆ ತವರು ಮನೆಗೆ ಕಳಿಸುವುದು ವಾಡಿಕೆ. ತವರು ಮನೆಗೆ ತೆರಳಲು ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ವಿಪರ್ಯಾಸ ಆಕೆ ಹೆರಿಗೆಗೆಂದು ತವರು ಮನೆಗೆ ಹೋಗುವುದು ಸಾಧ್ಯವೇ ಆಗಿರಲಿಲ್ಲ. ಹೀಗಾಗಿ ಗಂಡನ ಮನೆಯಲ್ಲೇ ಹೆರಿಗೆಯಾಗಿ ಹೆಣ್ಣುಮಗು ಜನಿಸಿತ್ತು.

ಆಕೆಗೆ ಮಗು ಜನಿಸುವಷ್ಟರಲ್ಲಿ ದೇಶದಾದ್ಯಂತ ಲಾಕ್‍ಡೌನ್ ಹಂತಹಂತವಾಗಿ ಸಡಿಲಿಕೆಯಾಗಿತ್ತು. ಹೀಗಾಗಿ ಮಗುವನ್ನಾದರೂ ತವರಿಗೆ ತೋರಿಸುವ ಸಲುವಾಗಿ ಆಕೆ ಗಂಡನ ಜೊತೆಗೆ ಕಾರಿನಲ್ಲಿ ತನ್ನ ಊರಿಗೆ ಬಂದಿಳಿದಿದ್ದಳು. ಆದರೆ, ಇಡೀ ಊರೇ ಒಟ್ಟಾಗಿ ಆಕೆ ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿತ್ತು. ಹೊರಗಡೆಯಿಂದ ಯಾರೂ ಊರಿನ ಒಳಗೆ ಬರಬಾರದು ಎಂದು ತಾಕೀತು ಮಾಡಿ, ಕೊನೆಗೆ ಜಗಳ ಮಾಡಿ ಒತ್ತಾಯಪೂರ್ವಕವಾಗಿ ಆಕೆಯನ್ನು ಹಿಂದಕ್ಕೆ ಕಳಿಸಲಾಯಿತು.

ಇಂತಹ ಅಸಂಖ್ಯಾತ ಕಥೆಗಳಲ್ಲಿ ಇವು ಕೆಲವಷ್ಟೇ. ಮಾನವೀಯ ಸಮಾಜ ತಲೆ ತಗ್ಗಿಸುವ ಅದೆಷ್ಟೋ ಕಥೆಗಳು ಕೊರೊನಾ ಸೋಂಕಿತರನ್ನು ಕಳಂಕಿತರಾಗಿ ಕಾಣುತ್ತಿರುವ ಕಾರಣಕ್ಕೆ ಹುಟ್ಟಿಕೊಂಡಿವೆ. ಕೊರೊನಾ ಸಮಯದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಬಾರದೆಲ್ಲ! ಹೀಗೆ ಕೆಲವು ‘ಭಯಂಕರ’ ಮಾಧ್ಯಮಗಳ ವೈಭವೀಕೃತ ವರದಿಗಳಿಗೆ ಬೆಚ್ಚಿಬಿದ್ದು ಇಂತಹ ಸಂದಿಗ್ಧ ಸಂದರ್ಭದಲ್ಲಿ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲುಬೇಕಿರುವ ಸಮಯದಲ್ಲಿ ವಿವೇಕ ಕಳೆದುಕೊಳ್ಳಬಾರದಲ್ಲವೇ?


ಇದನ್ನು ಓದಿ: ‘ಪಕ್ಷದ ಬಾಗಿಲು ಮುಚ್ಚಿಲ್ಲ’: ಬಿಜೆಪಿ ಸೇರುವುದಿಲ್ಲ ಎಂದ ಪೈಲಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...