Homeಕರೋನಾ ತಲ್ಲಣಕೊರೊನಾ ತಪ್ಪಿದರೂ ಕಳಂಕ ತಪ್ಪುತ್ತಿಲ್ಲ: ಸೋಂಕಿತರ ಕಥೆ–ವ್ಯಥೆ!

ಕೊರೊನಾ ತಪ್ಪಿದರೂ ಕಳಂಕ ತಪ್ಪುತ್ತಿಲ್ಲ: ಸೋಂಕಿತರ ಕಥೆ–ವ್ಯಥೆ!

ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ.

- Advertisement -
- Advertisement -

ಭಾರತದಲ್ಲಿ ಸುಮಾರು 9,31,181 ಜನರಿಗೆ ಕೊರೊನಾ ಸೋಂಕು ಆವರಿಸಿದೆ. ಈ ಪೈಕಿ 5,92,032 ಜನ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ 3,19,840. ಕೊರೊನಾ ಸೋಂಕಿನಿಂದಾಗಿ ಈವರೆಗೆ ಸುಮಾರು 24,309 ಜನ ಮೃತಪಟ್ಟಿದ್ದಾರೆ. ಅಂದರೆ ಮೃತಪಟ್ಟಿರುವ ಶೇಕಡಾವಾರು ಪ್ರಮಾಣ 2.3. ಮೃತಪಟ್ಟವರಲ್ಲಿ ಬಹುತೇಕರು 60ಕ್ಕಿಂತ ಹೆಚ್ಚು ವಯಸ್ಸಿನವರು ಮತ್ತು ಇತರ ರೋಗವನ್ನು ಹೊಂದಿದ್ದಂತವರು.

ಸ್ವಲ್ಪ ಹೆಚ್ಚುವರಿ ಎಚ್ಚರಿಕೆ ಮತ್ತು ಧೈರ್ಯ ಇದ್ದರೆ ಈ ಸೋಂಕನ್ನು ಸಂಭಾಳಿಸುವುದು ಕಷ್ಟದ ಕೆಲಸ ಏನಲ್ಲ ಎಂಬುದ ಹಲವು ತಜ್ಞರ ಅಭಿಪ್ರಾಯ. ಇದಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಆಗುತ್ತಿರುವು ಒಂದು ಅಮಾನವೀಯ ಬೆಳವಣಿಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ನಡೆಸಿಕೊಳ್ಳುತ್ತಿರುವ – ಅವರ ಜೊತೆಗೆ ವರ್ತಿಸುತ್ತಿರುವ ಹಲವು ವರದಿಗಳು ಸಿಗುತ್ತವೆ. ಸೋಂಕು ಪೀಡಿತರಾಗಿ ರೋಗದ ನೋವಿಗಿಂತಲೂ ಜನರಿಂದ ಮಾನಸಿಕ ಹಿಂಸೆ ಅನುಭವಿಸಿದ ಕೆಲವರ ಕಥೆ ಇಲ್ಲಿದೆ.

ಕಥೆ-1: ಆತನ ಹೆಸರು ಸುರೇಶ್ (ಹೆಸರನ್ನು ಬದಲಿಸಲಾಗಿದೆ). ಬೆಂಗಳೂರಿನಲ್ಲಿ ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಕೂಡ ಇದೆ. ಇತ್ತೀಚೆಗೆ ಒಂದು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದರು. ಆದರೆ, ವಾರದ ಹಿಂದೆ ಅವರಿಗೆ ಊಟ ಮಾಡುವಾಗ ರುಚಿ ಗೊತ್ತಾಗಿರಲಿಲ್ಲ. ಹೀಗಾಗಿ ತಮ್ಮ ವೈದ್ಯರ ಸಲಹೆ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಪಾಸಿಟೀವ್ ಫಲಿತಾಂಶ ಬಂದಿದೆ. ಆದರೆ, ಈ ವಿಚಾರ ಮನೆಗೆ ಆಗಮಿಸುವ ವೇಳೆಗೆ ಎಲ್ಲರಿಗೂ ಗೊತ್ತಾಗಿದೆ.

ಪರೀಕ್ಷೆ ನಡೆಸಿ ಇಂದಿಗೆ ಸರಿಯಾಗಿ 10 ದಿನಗಳಾಗಿವೆ. ತಾನು ಹಾಗೂ ತನ್ನ ಹೆಂಡತಿ ಮನೆಯಿಂದ ಹೊರ ಬರುವುದಿಲ್ಲ. ಅಪಾಟ್ಮೆರ್ಂಟ್‍ನ ಕಾಮನ್ ಸ್ಥಳಗಳನ್ನು ಬಳಸುವುದಿಲ್ಲ ಎಂದು ಇವರು ಅಪಾರ್ಟ್ಮೆಂಟ್ ಮ್ಯಾನೇಜ್ಮೆಂಟ್‍ನವರಿಗೆ ಮಾತು ನೀಡಿದ್ದಾರೆ. ಹೀಗಾಗಿ ಗಂಡ-ಹೆಂಡತಿ ಇಬ್ಬರೂ ಮನೆಯಿಂದ ಹೊರ ಬಂದು ಸೂರ್ಯನ ಕಿರಣಗಳನ್ನು ನೋಡಿಯೇ 10 ದಿನಗಳಾಗಿವೆ. ಈ ನಡುವೆ ವಾಚ್ಮನ್ ಪ್ರತಿದಿನ ಮನೆಯ ಬಾಗಿಲ ಬಳಿಯಲ್ಲಿ ಇಟ್ಟು ಹೋಗುವ ಮೊಸರನ್ನವೇ ಇವರಿಗೆ ಗತಿ. ಇನ್ನು ಮನೆಯಲ್ಲಿ ತುಂಬಾ ಕಸ ಇದ್ದು ಅದನ್ನು ಹೊರಗೆ ಸಾಗಿಸುವುದಕ್ಕೂ ಇವರು ನಿಸ್ಸಹಾಯಕರು. ಕೊರೊನಾ ನಿಮಿತ್ತ ತಮ್ಮ ಪ್ರತಿಯೊಂದು ಕೆಲಸಕ್ಕೂ ಇವರು ಪರಾವಲಂಬಿಗಳಾಗಿದ್ದಾರೆ.

ಕೊರೋನಾ ಸೋಂಕಿತರಾದ ಎಲ್ಲರೂ ಸಾಮಾನ್ಯವಾಗಿ ಎದುರಿಸಲೇಬೇಕಾದ ಸಂಕಷ್ಟವಿದು ಎಂದುಕೊಳ್ಳೋಣ. ಆದರೆ, ಚೂರಿಯಂತೆ ಇರಿಯುವ ಜನರ ಮಾತು ಕೊರೋನಾ ರೋಗಿಗಳ ಮಾನಸಿಕ ಆರೋಗ್ಯವನ್ನು ಹದಗೆಡಿಸಿದೆ. ಒಂದೆಡೆ ಅಪಾಟ್ಮೆರ್ಂಟ್‍ನ ಇತರ ನಿವಾಸಿಗಳು ಇಂತವರನ್ನು ಏಕೆ ಇಲ್ಲಿ ಇಟ್ಟಿದ್ದೀರಿ? ಎಂದು ವರಾತ ತೆಗೆಯುತ್ತಿದ್ದಾರೆ. ಅಪಾಟ್ಮೆರ್ಂಟ್ ನಿವಾಸಿಗಳ ವಾಟ್ಸಾಪ್ ಗ್ರೂಪುಗಳಲ್ಲಿ ಪ್ರತಿನಿತ್ಯ ಇವರದ್ದೇ ಮಾತಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಆರೋಗ್ಯ ವಿಚಾರಿಸುವ ನೆಪದಲ್ಲಿ ಇವರಿಗೆ ಕರೆ ಮಾಡುವವರ ಚುಚ್ಚು ಮಾತುಗಳಿಂದ ಅಕ್ಷರಶಃ ನೊಂದಿದ್ದಾರೆ.

ನಾಳೆ ಇವರು ಖಂಡಿತ ಕೊರೋನಾದಂತಹ ಖಾಯಿಲೆಯಿಂದ ಬಚಾವಾಗಿ ಬರಬಹುದು. ಆದರೆ, ಈ ಸಂದರ್ಭದಲ್ಲಿ ಅವರ ಮನಸ್ಸಿಗೆ ಸತತವಾಗಿ ಉಂಟಾಗಿರುವ ನೋವಿನಿಂದ ರೋಗಿ ಬೇಗ ಗುಣವಾಗುತ್ತಾನೆ ಎಂದು ಹೇಳುವುದು ಕಷ್ಟ.

ಕಥೆ-2: ಆತ ಮೂಲತಃ ಮಲೆನಾಡಿನ ಹುಡುಗ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ. ಒಂದೊಳ್ಳೆ ಕೆಲಸ ಪಡೆದಿದ್ದ ಆತ ನಗರದ ಪ್ರತಿಷ್ಠಿತ ಏರಿಯಾದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಆದರೆ, ದುರಾದೃಷ್ಟವಶಾತ್ ಆಗಿನ್ನು ರಾಜ್ಯಕ್ಕೆ ಕಾಲಿಟ್ಟಿದ್ದ ಕೊರೊನಾ ಲಾಕ್‍ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಆತನಿಗೂ ವಕ್ಕರಿಸಿತ್ತು.

ದಿಢೀರನೆ ಕಾಣಿಸಿಕೊಂಡಿದ್ದ ಸುಸ್ತು ಜ್ವರದಿಂದಾಗಿ ಮೆತ್ತಗಾಗಿದ್ದ ಆತ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದ. ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆತನೂ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವಾಗಿ ಗುಣಮುಖನಾಗಿದ್ದ.

ಆದರೆ, ಆಗಿನ್ನು ಮಾಧ್ಯಮಗಳು ಪ್ರತಿನಿತ್ಯ ಕೊರೊನಾ ಕೇಕೆ, ತಬ್ಲಿಘಿ ಸೋಂಕು, ಕೊರೊನಾ ರಣಕಹಳೆ, ಕೊರೊನಾ ಅಟ್ಟಹಾಸ, ಸಾವಿನ ಸರದಾರ ಹೀಗೆ ನಾನಾ ಹೆಸರಿನಲ್ಲಿ ಸೋಂಕನ್ನು ವಿಜೃಂಭಿಸಿ ವರದಿ ಮಾಡಿದ್ದವು. ಈ ಮೂಲಕ ಜನರಲ್ಲಿ ಎಚ್ಚರಿಕೆಯ ಬದಲು ಭೀತಿ ಹುಟ್ಟಿಸುವಲ್ಲಿ ಸಫಲರಾಗಿದ್ದರು. ಪರಿಣಾಮ ಆತ ಕೊರೊನಾದಿಂದ ಗುಣಮುಖನಾಗಿ ಮನೆಗೆ ಮರಳಿದ್ದರೂ ಸಹ ಕೊರೊನಾಗೆ ಹೆದರಿ ಮನೆಯ ಯಜಮಾನ ಆತನನ್ನು ಏಕಾಏಕಿ ಹೊರಹಾಕಿದ್ದ. “ಲಾಕ್‍ಡೌನ್ ಸಂದರ್ಭದಲ್ಲಿ ಅಸಹಾಯಕನಂತೆ ನಾನು ಬೀದಿ ಪಾಲಾಗಿದ್ದೆ. ಯಾರೂ ಸಹಾಯ ಹಸ್ತ ಚಾಚಲಿಲ್ಲ. ಕೊನೆಗೆ ಕೆಲಸವನ್ನೂ ಕಳೆದುಕೊಂಡು, ಆನಂತರ ಅನಿವಾರ್ಯವಾಗಿ ಊರಿಗೆ ಮರಳಿದೆ” ಎನ್ನುತ್ತಾರೆ ಅವರು.

ಇದು ಕೊರೊನಾ ಸೋಂಕು ಪೀಡಿತರ ಕಥೆಯಾದರೆ, ಇಂತಹ ಸಂದರ್ಭದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಅನಿವಾರ್ಯ ಕಾರಣಗಳಿಗಾಗಿ ತಮ್ಮ ಸಂಬಂಧಿಕರ ಅಥವಾ ತಮ್ಮ ಮನೆಗೆ ತೆರಳುವವರ ಕಥೆ ಭಿನ್ನವಾಗಿದೆ, ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿರುವುದು ತಿಳಿಯುತ್ತದೆ.

ಕಥೆ 3: ಆಕೆಯ ಹೆಸರು ಭಾನು (ಹೆಸರನ್ನು ಬದಲಾಯಿಸಲಾಗಿದೆ). ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿರುವ ಈಕೆ ಪದವೀಧರೆ. ಪೋಷಕರು ಈಕೆಯನ್ನು ದೂರದ ಮಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ಆಕೆಯ ದುರಾದೃಷ್ಟವೋ ಏನೋ? ಆಕೆಗೆ 7 ತಿಂಗಳು ತುಂಬುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಲಾಕ್‍ಡೌನ್ ಘೋಷಿಸಲಾಯಿತು.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ 7ನೇ ತಿಂಗಳು ನಡೆಯುವಾಗ ಸೀಮಂತ ಮಾಡಿಸಿ ಹೆರಿಗೆಗೆ ತವರು ಮನೆಗೆ ಕಳಿಸುವುದು ವಾಡಿಕೆ. ತವರು ಮನೆಗೆ ತೆರಳಲು ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ವಿಪರ್ಯಾಸ ಆಕೆ ಹೆರಿಗೆಗೆಂದು ತವರು ಮನೆಗೆ ಹೋಗುವುದು ಸಾಧ್ಯವೇ ಆಗಿರಲಿಲ್ಲ. ಹೀಗಾಗಿ ಗಂಡನ ಮನೆಯಲ್ಲೇ ಹೆರಿಗೆಯಾಗಿ ಹೆಣ್ಣುಮಗು ಜನಿಸಿತ್ತು.

ಆಕೆಗೆ ಮಗು ಜನಿಸುವಷ್ಟರಲ್ಲಿ ದೇಶದಾದ್ಯಂತ ಲಾಕ್‍ಡೌನ್ ಹಂತಹಂತವಾಗಿ ಸಡಿಲಿಕೆಯಾಗಿತ್ತು. ಹೀಗಾಗಿ ಮಗುವನ್ನಾದರೂ ತವರಿಗೆ ತೋರಿಸುವ ಸಲುವಾಗಿ ಆಕೆ ಗಂಡನ ಜೊತೆಗೆ ಕಾರಿನಲ್ಲಿ ತನ್ನ ಊರಿಗೆ ಬಂದಿಳಿದಿದ್ದಳು. ಆದರೆ, ಇಡೀ ಊರೇ ಒಟ್ಟಾಗಿ ಆಕೆ ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿತ್ತು. ಹೊರಗಡೆಯಿಂದ ಯಾರೂ ಊರಿನ ಒಳಗೆ ಬರಬಾರದು ಎಂದು ತಾಕೀತು ಮಾಡಿ, ಕೊನೆಗೆ ಜಗಳ ಮಾಡಿ ಒತ್ತಾಯಪೂರ್ವಕವಾಗಿ ಆಕೆಯನ್ನು ಹಿಂದಕ್ಕೆ ಕಳಿಸಲಾಯಿತು.

ಇಂತಹ ಅಸಂಖ್ಯಾತ ಕಥೆಗಳಲ್ಲಿ ಇವು ಕೆಲವಷ್ಟೇ. ಮಾನವೀಯ ಸಮಾಜ ತಲೆ ತಗ್ಗಿಸುವ ಅದೆಷ್ಟೋ ಕಥೆಗಳು ಕೊರೊನಾ ಸೋಂಕಿತರನ್ನು ಕಳಂಕಿತರಾಗಿ ಕಾಣುತ್ತಿರುವ ಕಾರಣಕ್ಕೆ ಹುಟ್ಟಿಕೊಂಡಿವೆ. ಕೊರೊನಾ ಸಮಯದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಬಾರದೆಲ್ಲ! ಹೀಗೆ ಕೆಲವು ‘ಭಯಂಕರ’ ಮಾಧ್ಯಮಗಳ ವೈಭವೀಕೃತ ವರದಿಗಳಿಗೆ ಬೆಚ್ಚಿಬಿದ್ದು ಇಂತಹ ಸಂದಿಗ್ಧ ಸಂದರ್ಭದಲ್ಲಿ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲುಬೇಕಿರುವ ಸಮಯದಲ್ಲಿ ವಿವೇಕ ಕಳೆದುಕೊಳ್ಳಬಾರದಲ್ಲವೇ?


ಇದನ್ನು ಓದಿ: ‘ಪಕ್ಷದ ಬಾಗಿಲು ಮುಚ್ಚಿಲ್ಲ’: ಬಿಜೆಪಿ ಸೇರುವುದಿಲ್ಲ ಎಂದ ಪೈಲಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...