Homeಕರೋನಾ ತಲ್ಲಣಕೊರೊನಾ ತಪ್ಪಿದರೂ ಕಳಂಕ ತಪ್ಪುತ್ತಿಲ್ಲ: ಸೋಂಕಿತರ ಕಥೆ–ವ್ಯಥೆ!

ಕೊರೊನಾ ತಪ್ಪಿದರೂ ಕಳಂಕ ತಪ್ಪುತ್ತಿಲ್ಲ: ಸೋಂಕಿತರ ಕಥೆ–ವ್ಯಥೆ!

ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ.

- Advertisement -
- Advertisement -

ಭಾರತದಲ್ಲಿ ಸುಮಾರು 9,31,181 ಜನರಿಗೆ ಕೊರೊನಾ ಸೋಂಕು ಆವರಿಸಿದೆ. ಈ ಪೈಕಿ 5,92,032 ಜನ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ 3,19,840. ಕೊರೊನಾ ಸೋಂಕಿನಿಂದಾಗಿ ಈವರೆಗೆ ಸುಮಾರು 24,309 ಜನ ಮೃತಪಟ್ಟಿದ್ದಾರೆ. ಅಂದರೆ ಮೃತಪಟ್ಟಿರುವ ಶೇಕಡಾವಾರು ಪ್ರಮಾಣ 2.3. ಮೃತಪಟ್ಟವರಲ್ಲಿ ಬಹುತೇಕರು 60ಕ್ಕಿಂತ ಹೆಚ್ಚು ವಯಸ್ಸಿನವರು ಮತ್ತು ಇತರ ರೋಗವನ್ನು ಹೊಂದಿದ್ದಂತವರು.

ಸ್ವಲ್ಪ ಹೆಚ್ಚುವರಿ ಎಚ್ಚರಿಕೆ ಮತ್ತು ಧೈರ್ಯ ಇದ್ದರೆ ಈ ಸೋಂಕನ್ನು ಸಂಭಾಳಿಸುವುದು ಕಷ್ಟದ ಕೆಲಸ ಏನಲ್ಲ ಎಂಬುದ ಹಲವು ತಜ್ಞರ ಅಭಿಪ್ರಾಯ. ಇದಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಬೆನ್ನಿಗೆ ನಿಂತು ಸೋಂಕಿತರ ರಕ್ಷಣೆಗೆ, ಅವರ ಆತ್ಮಸ್ಥೈರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಅವಶ್ಯಕ. ಇದು ನಮ್ಮೆಲ್ಲರ ಸಾಮಾಜಿಕ ಹೊಣೆಯೂ ಹೌದು. ಇಂತಹ ಪರಸ್ಪರ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳಿಂದ ಮಾತ್ರ ಸೋಂಕಿನ ವಿರುದ್ಧ ಗೆಲ್ಲಲು ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಆಗುತ್ತಿರುವು ಒಂದು ಅಮಾನವೀಯ ಬೆಳವಣಿಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ನಡೆಸಿಕೊಳ್ಳುತ್ತಿರುವ – ಅವರ ಜೊತೆಗೆ ವರ್ತಿಸುತ್ತಿರುವ ಹಲವು ವರದಿಗಳು ಸಿಗುತ್ತವೆ. ಸೋಂಕು ಪೀಡಿತರಾಗಿ ರೋಗದ ನೋವಿಗಿಂತಲೂ ಜನರಿಂದ ಮಾನಸಿಕ ಹಿಂಸೆ ಅನುಭವಿಸಿದ ಕೆಲವರ ಕಥೆ ಇಲ್ಲಿದೆ.

ಕಥೆ-1: ಆತನ ಹೆಸರು ಸುರೇಶ್ (ಹೆಸರನ್ನು ಬದಲಿಸಲಾಗಿದೆ). ಬೆಂಗಳೂರಿನಲ್ಲಿ ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಕೂಡ ಇದೆ. ಇತ್ತೀಚೆಗೆ ಒಂದು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದರು. ಆದರೆ, ವಾರದ ಹಿಂದೆ ಅವರಿಗೆ ಊಟ ಮಾಡುವಾಗ ರುಚಿ ಗೊತ್ತಾಗಿರಲಿಲ್ಲ. ಹೀಗಾಗಿ ತಮ್ಮ ವೈದ್ಯರ ಸಲಹೆ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಪಾಸಿಟೀವ್ ಫಲಿತಾಂಶ ಬಂದಿದೆ. ಆದರೆ, ಈ ವಿಚಾರ ಮನೆಗೆ ಆಗಮಿಸುವ ವೇಳೆಗೆ ಎಲ್ಲರಿಗೂ ಗೊತ್ತಾಗಿದೆ.

ಪರೀಕ್ಷೆ ನಡೆಸಿ ಇಂದಿಗೆ ಸರಿಯಾಗಿ 10 ದಿನಗಳಾಗಿವೆ. ತಾನು ಹಾಗೂ ತನ್ನ ಹೆಂಡತಿ ಮನೆಯಿಂದ ಹೊರ ಬರುವುದಿಲ್ಲ. ಅಪಾಟ್ಮೆರ್ಂಟ್‍ನ ಕಾಮನ್ ಸ್ಥಳಗಳನ್ನು ಬಳಸುವುದಿಲ್ಲ ಎಂದು ಇವರು ಅಪಾರ್ಟ್ಮೆಂಟ್ ಮ್ಯಾನೇಜ್ಮೆಂಟ್‍ನವರಿಗೆ ಮಾತು ನೀಡಿದ್ದಾರೆ. ಹೀಗಾಗಿ ಗಂಡ-ಹೆಂಡತಿ ಇಬ್ಬರೂ ಮನೆಯಿಂದ ಹೊರ ಬಂದು ಸೂರ್ಯನ ಕಿರಣಗಳನ್ನು ನೋಡಿಯೇ 10 ದಿನಗಳಾಗಿವೆ. ಈ ನಡುವೆ ವಾಚ್ಮನ್ ಪ್ರತಿದಿನ ಮನೆಯ ಬಾಗಿಲ ಬಳಿಯಲ್ಲಿ ಇಟ್ಟು ಹೋಗುವ ಮೊಸರನ್ನವೇ ಇವರಿಗೆ ಗತಿ. ಇನ್ನು ಮನೆಯಲ್ಲಿ ತುಂಬಾ ಕಸ ಇದ್ದು ಅದನ್ನು ಹೊರಗೆ ಸಾಗಿಸುವುದಕ್ಕೂ ಇವರು ನಿಸ್ಸಹಾಯಕರು. ಕೊರೊನಾ ನಿಮಿತ್ತ ತಮ್ಮ ಪ್ರತಿಯೊಂದು ಕೆಲಸಕ್ಕೂ ಇವರು ಪರಾವಲಂಬಿಗಳಾಗಿದ್ದಾರೆ.

ಕೊರೋನಾ ಸೋಂಕಿತರಾದ ಎಲ್ಲರೂ ಸಾಮಾನ್ಯವಾಗಿ ಎದುರಿಸಲೇಬೇಕಾದ ಸಂಕಷ್ಟವಿದು ಎಂದುಕೊಳ್ಳೋಣ. ಆದರೆ, ಚೂರಿಯಂತೆ ಇರಿಯುವ ಜನರ ಮಾತು ಕೊರೋನಾ ರೋಗಿಗಳ ಮಾನಸಿಕ ಆರೋಗ್ಯವನ್ನು ಹದಗೆಡಿಸಿದೆ. ಒಂದೆಡೆ ಅಪಾಟ್ಮೆರ್ಂಟ್‍ನ ಇತರ ನಿವಾಸಿಗಳು ಇಂತವರನ್ನು ಏಕೆ ಇಲ್ಲಿ ಇಟ್ಟಿದ್ದೀರಿ? ಎಂದು ವರಾತ ತೆಗೆಯುತ್ತಿದ್ದಾರೆ. ಅಪಾಟ್ಮೆರ್ಂಟ್ ನಿವಾಸಿಗಳ ವಾಟ್ಸಾಪ್ ಗ್ರೂಪುಗಳಲ್ಲಿ ಪ್ರತಿನಿತ್ಯ ಇವರದ್ದೇ ಮಾತಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಆರೋಗ್ಯ ವಿಚಾರಿಸುವ ನೆಪದಲ್ಲಿ ಇವರಿಗೆ ಕರೆ ಮಾಡುವವರ ಚುಚ್ಚು ಮಾತುಗಳಿಂದ ಅಕ್ಷರಶಃ ನೊಂದಿದ್ದಾರೆ.

ನಾಳೆ ಇವರು ಖಂಡಿತ ಕೊರೋನಾದಂತಹ ಖಾಯಿಲೆಯಿಂದ ಬಚಾವಾಗಿ ಬರಬಹುದು. ಆದರೆ, ಈ ಸಂದರ್ಭದಲ್ಲಿ ಅವರ ಮನಸ್ಸಿಗೆ ಸತತವಾಗಿ ಉಂಟಾಗಿರುವ ನೋವಿನಿಂದ ರೋಗಿ ಬೇಗ ಗುಣವಾಗುತ್ತಾನೆ ಎಂದು ಹೇಳುವುದು ಕಷ್ಟ.

ಕಥೆ-2: ಆತ ಮೂಲತಃ ಮಲೆನಾಡಿನ ಹುಡುಗ. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ. ಒಂದೊಳ್ಳೆ ಕೆಲಸ ಪಡೆದಿದ್ದ ಆತ ನಗರದ ಪ್ರತಿಷ್ಠಿತ ಏರಿಯಾದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಆದರೆ, ದುರಾದೃಷ್ಟವಶಾತ್ ಆಗಿನ್ನು ರಾಜ್ಯಕ್ಕೆ ಕಾಲಿಟ್ಟಿದ್ದ ಕೊರೊನಾ ಲಾಕ್‍ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಆತನಿಗೂ ವಕ್ಕರಿಸಿತ್ತು.

ದಿಢೀರನೆ ಕಾಣಿಸಿಕೊಂಡಿದ್ದ ಸುಸ್ತು ಜ್ವರದಿಂದಾಗಿ ಮೆತ್ತಗಾಗಿದ್ದ ಆತ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದ. ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆತನೂ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವಾಗಿ ಗುಣಮುಖನಾಗಿದ್ದ.

ಆದರೆ, ಆಗಿನ್ನು ಮಾಧ್ಯಮಗಳು ಪ್ರತಿನಿತ್ಯ ಕೊರೊನಾ ಕೇಕೆ, ತಬ್ಲಿಘಿ ಸೋಂಕು, ಕೊರೊನಾ ರಣಕಹಳೆ, ಕೊರೊನಾ ಅಟ್ಟಹಾಸ, ಸಾವಿನ ಸರದಾರ ಹೀಗೆ ನಾನಾ ಹೆಸರಿನಲ್ಲಿ ಸೋಂಕನ್ನು ವಿಜೃಂಭಿಸಿ ವರದಿ ಮಾಡಿದ್ದವು. ಈ ಮೂಲಕ ಜನರಲ್ಲಿ ಎಚ್ಚರಿಕೆಯ ಬದಲು ಭೀತಿ ಹುಟ್ಟಿಸುವಲ್ಲಿ ಸಫಲರಾಗಿದ್ದರು. ಪರಿಣಾಮ ಆತ ಕೊರೊನಾದಿಂದ ಗುಣಮುಖನಾಗಿ ಮನೆಗೆ ಮರಳಿದ್ದರೂ ಸಹ ಕೊರೊನಾಗೆ ಹೆದರಿ ಮನೆಯ ಯಜಮಾನ ಆತನನ್ನು ಏಕಾಏಕಿ ಹೊರಹಾಕಿದ್ದ. “ಲಾಕ್‍ಡೌನ್ ಸಂದರ್ಭದಲ್ಲಿ ಅಸಹಾಯಕನಂತೆ ನಾನು ಬೀದಿ ಪಾಲಾಗಿದ್ದೆ. ಯಾರೂ ಸಹಾಯ ಹಸ್ತ ಚಾಚಲಿಲ್ಲ. ಕೊನೆಗೆ ಕೆಲಸವನ್ನೂ ಕಳೆದುಕೊಂಡು, ಆನಂತರ ಅನಿವಾರ್ಯವಾಗಿ ಊರಿಗೆ ಮರಳಿದೆ” ಎನ್ನುತ್ತಾರೆ ಅವರು.

ಇದು ಕೊರೊನಾ ಸೋಂಕು ಪೀಡಿತರ ಕಥೆಯಾದರೆ, ಇಂತಹ ಸಂದರ್ಭದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಅನಿವಾರ್ಯ ಕಾರಣಗಳಿಗಾಗಿ ತಮ್ಮ ಸಂಬಂಧಿಕರ ಅಥವಾ ತಮ್ಮ ಮನೆಗೆ ತೆರಳುವವರ ಕಥೆ ಭಿನ್ನವಾಗಿದೆ, ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿರುವುದು ತಿಳಿಯುತ್ತದೆ.

ಕಥೆ 3: ಆಕೆಯ ಹೆಸರು ಭಾನು (ಹೆಸರನ್ನು ಬದಲಾಯಿಸಲಾಗಿದೆ). ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿರುವ ಈಕೆ ಪದವೀಧರೆ. ಪೋಷಕರು ಈಕೆಯನ್ನು ದೂರದ ಮಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ಆಕೆಯ ದುರಾದೃಷ್ಟವೋ ಏನೋ? ಆಕೆಗೆ 7 ತಿಂಗಳು ತುಂಬುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಲಾಕ್‍ಡೌನ್ ಘೋಷಿಸಲಾಯಿತು.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ 7ನೇ ತಿಂಗಳು ನಡೆಯುವಾಗ ಸೀಮಂತ ಮಾಡಿಸಿ ಹೆರಿಗೆಗೆ ತವರು ಮನೆಗೆ ಕಳಿಸುವುದು ವಾಡಿಕೆ. ತವರು ಮನೆಗೆ ತೆರಳಲು ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ವಿಪರ್ಯಾಸ ಆಕೆ ಹೆರಿಗೆಗೆಂದು ತವರು ಮನೆಗೆ ಹೋಗುವುದು ಸಾಧ್ಯವೇ ಆಗಿರಲಿಲ್ಲ. ಹೀಗಾಗಿ ಗಂಡನ ಮನೆಯಲ್ಲೇ ಹೆರಿಗೆಯಾಗಿ ಹೆಣ್ಣುಮಗು ಜನಿಸಿತ್ತು.

ಆಕೆಗೆ ಮಗು ಜನಿಸುವಷ್ಟರಲ್ಲಿ ದೇಶದಾದ್ಯಂತ ಲಾಕ್‍ಡೌನ್ ಹಂತಹಂತವಾಗಿ ಸಡಿಲಿಕೆಯಾಗಿತ್ತು. ಹೀಗಾಗಿ ಮಗುವನ್ನಾದರೂ ತವರಿಗೆ ತೋರಿಸುವ ಸಲುವಾಗಿ ಆಕೆ ಗಂಡನ ಜೊತೆಗೆ ಕಾರಿನಲ್ಲಿ ತನ್ನ ಊರಿಗೆ ಬಂದಿಳಿದಿದ್ದಳು. ಆದರೆ, ಇಡೀ ಊರೇ ಒಟ್ಟಾಗಿ ಆಕೆ ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿತ್ತು. ಹೊರಗಡೆಯಿಂದ ಯಾರೂ ಊರಿನ ಒಳಗೆ ಬರಬಾರದು ಎಂದು ತಾಕೀತು ಮಾಡಿ, ಕೊನೆಗೆ ಜಗಳ ಮಾಡಿ ಒತ್ತಾಯಪೂರ್ವಕವಾಗಿ ಆಕೆಯನ್ನು ಹಿಂದಕ್ಕೆ ಕಳಿಸಲಾಯಿತು.

ಇಂತಹ ಅಸಂಖ್ಯಾತ ಕಥೆಗಳಲ್ಲಿ ಇವು ಕೆಲವಷ್ಟೇ. ಮಾನವೀಯ ಸಮಾಜ ತಲೆ ತಗ್ಗಿಸುವ ಅದೆಷ್ಟೋ ಕಥೆಗಳು ಕೊರೊನಾ ಸೋಂಕಿತರನ್ನು ಕಳಂಕಿತರಾಗಿ ಕಾಣುತ್ತಿರುವ ಕಾರಣಕ್ಕೆ ಹುಟ್ಟಿಕೊಂಡಿವೆ. ಕೊರೊನಾ ಸಮಯದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಬಾರದೆಲ್ಲ! ಹೀಗೆ ಕೆಲವು ‘ಭಯಂಕರ’ ಮಾಧ್ಯಮಗಳ ವೈಭವೀಕೃತ ವರದಿಗಳಿಗೆ ಬೆಚ್ಚಿಬಿದ್ದು ಇಂತಹ ಸಂದಿಗ್ಧ ಸಂದರ್ಭದಲ್ಲಿ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲುಬೇಕಿರುವ ಸಮಯದಲ್ಲಿ ವಿವೇಕ ಕಳೆದುಕೊಳ್ಳಬಾರದಲ್ಲವೇ?


ಇದನ್ನು ಓದಿ: ‘ಪಕ್ಷದ ಬಾಗಿಲು ಮುಚ್ಚಿಲ್ಲ’: ಬಿಜೆಪಿ ಸೇರುವುದಿಲ್ಲ ಎಂದ ಪೈಲಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....