ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ ಕನಿಷ್ಠ 17 ಲೋಕಸಭಾ ಸದಸ್ಯರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಇಂದು ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಿದ ಕಡ್ಡಾಯ ಕೊರೊನಾ ಪರೀಕ್ಷೆಗಳಲ್ಲಿ ಈ ವರದಿ ಹೊರಬಂದಿದೆ.
ಸೋಂಕಿತರಲ್ಲಿ 12 ಬಿಜೆಪಿ ಸಂಸದರು, ವೈಎಸ್ಆರ್ ಕಾಂಗ್ರೆಸ್ ಪಕ್ಷದ 2 ಸಂಸದರು, ಶಿವಸೇನೆಯ 2 ಸಂಸದರು ಮತ್ತು ಓರ್ವ ಡಿಎಂಕೆ ಸಂಸದರು ಸೇರಿದ್ದಾರೆ.
ಇದನ್ನೂ ಓದಿ: ಬಿಎಸ್ಎನ್ಎಲ್ನಲ್ಲಿ ದೇಶದ್ರೋಹಿಗಳಿದ್ದಾರೆ: ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ವಿರೋಧ
ಕೊರೊನಾ ಪರಿಸ್ಥಿತಿಯಿಂದಾಗಿ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಸರ್ಕಾರ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದು, ಸಂಸದರು, ಸಂಸತ್ತಿನ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗೆ ಕಡ್ಡಾಯ ಪರೀಕ್ಷೆ, ಸಂದರ್ಶಕರ ಮೇಲಿನ ನಿರ್ಬಂಧ ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆ ಇವುಗಳಲ್ಲಿ ಸೇರಿವೆ.
ಇತ್ತೀಚೆಗಷ್ಟೇ ಕೊರೊನಾದಿಂದ ಚೇತರಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಸತ್ ಅಧಿವೇಶನ ಪ್ರಾರಂಭವಾಗುವ ಮೊದಲು ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ 1-2 ದಿನಗಳ ಕಾಲ ಏಮ್ಸ್ ದೆಹಲಿಗೆ ದಾಖಲಿಸಲಾಗಿದೆ.
ಸಂಸದ ಅನಂತ್ ಕುಮಾರ್ ಈ ಹಿಂದೆ ಮಾಸ್ಕ್ ಹಾಕಿರುವವರನ್ನು ನೋಡಿದರೆ ರಾಮಾಯಣ ನೆನಪಾಗುತ್ತದೆ, ಕೊರೊನಾ ಸಣ್ಣದೊಂದು ನೆಗಡಿ ಎಂದು ಎಂದು ಹೇಳಿದ್ದರು.
ಇದನ್ನೂ ಓದಿ: 40,000 ಕೋಟಿ ರೂ ಉಳಿಸಲು ಫಡ್ನವಿಸ್ ಸಿಎಂ ಆದರು ಎಂದ ಅನಂತ್ ಕುಮಾರ್ ಹೆಗಡೆ