HomeUncategorizedಕೊರೋನಾ ವೈರಸ್‌ ಬಿಕ್ಕಟ್ಟು ನಿಜ; ಆದರೆ ದುರಂತವಾಗಬೇಕಾಗಿಲ್ಲ: ಎಸ್ತರ್ ‌ಡಫ್ಲೋ, ಅಭಿಜಿತ್ ಬ್ಯಾನರ್ಜಿ

ಕೊರೋನಾ ವೈರಸ್‌ ಬಿಕ್ಕಟ್ಟು ನಿಜ; ಆದರೆ ದುರಂತವಾಗಬೇಕಾಗಿಲ್ಲ: ಎಸ್ತರ್ ‌ಡಫ್ಲೋ, ಅಭಿಜಿತ್ ಬ್ಯಾನರ್ಜಿ

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಸಾಧ್ಯವಾಗಬೇಕು. ಸೋಂಕಿತರ ಒಳ ಹರಿವು ದಿಢೀರನೆ ಹೆಚ್ಚಾದಾಗ ಅದನ್ನು ನಿರ್ವಹಿಸುವುದಕ್ಕೆ ಬೇಕಾದ ವ್ಯವಸ್ಥೆ ನಮ್ಮಲ್ಲಿರಬೇಕು.

- Advertisement -
- Advertisement -

ಜನರಿಗೆ ಜೀವನ ಭದ್ರತೆಯ ಖಾತ್ರಿ ಇರಬೇಕು. ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಅದನ್ನು ಒದಗಿಸುವ ಭರವಸೆಯನ್ನು ಜನರಿಗೆ ಕೊಡಬೇಕು. ಅಂತಹ ಖಾತ್ರಿಯನ್ನು ಕೊಡುವುದಕ್ಕೆ ಸಾಧ್ಯವಾಗದೇ ಹೋದರೆ ಜನ ಕ್ವಾರಂಟೈನ್‌ನಿಂದ ಬಳಲಿ ಹೋಗುತ್ತಾರೆ. ಲಾಕ್‌ಡೌನನ್ನು ಜಾರಿಯಲ್ಲಿಡುವುದು ಕಷ್ಟವಾಗುತ್ತದೆ. ಜೊತೆಗೆ ಆ ದೇಶಗಳ ಆರ್ಥಿಕತೆಯ ಬೇಡಿಕೆಯು ಕುಸಿಯಬಾರದು. ಆ ದೃಷ್ಟಿಯಿಂದಲೂ ಅಲ್ಲಿಯ ಸರ್ಕಾರಗಳು ಜನರಿಗೆ ಅವಶ್ಯಕತೆಯಿರುವಷ್ಟೂ ಕಾಲ ಹಣಕಾಸು ಬೆಂಬಲದ ಭರವಸೆ ಕೊಡಬೇಕು.

ಮೂಲ: ಎಸ್ತರ್‌ಡಫ್ಲೋ ಮತ್ತು ಅಭಿಜಿತ್ ಬ್ಯಾನರ್ಜಿ (ಮೇ 6, ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ಲೇಖನ.)

ಅನುವಾದ: ವೇಣುಗೋಪಾಲ್ ಟಿ.ಎಸ್

ಪೂರ್ವಏಷ್ಯಾ ಹಾಗೂ ಐರೋಪ್ಯ ದೇಶಗಳು ತಮ್ಮ ಆರ್ಥಿಕತೆಯನ್ನು ನಿಧಾನವಾಗಿ ಮತ್ತೆ ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಬರುವ ದಿನಗಳಲ್ಲಿ ಈ ಪಿಡುಗು ಇನ್ನಷ್ಟು ಭೀಕರವಾಗಬಹುದೇನೋ ಎಂಬ ಆತಂಕದಲ್ಲಿ ಜಗತ್ತಿನ ದಕ್ಷಿಣದ ಭಾಗಗಳು ಇವೆ. ಅರ್ಥಶಾಸ್ತ್ರಜ್ಞರಾಗಿ ನಾವು ಅಭಿವೃದ್ಧ ಶೀಲ ರಾಷ್ಟ್ರಗಳಲ್ಲಿ ಬಡತನ ನಿರ್ಮೂಲನದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ.

ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಮೇಲೆ ಕೊರೋನಾ ವೈರಾಣುವಿನ ಪರಿಣಾಮ ಹೇಗಿರಬಹುದು ಅಂತ ಜನ ನಮ್ಮನ್ನು ಕೇಳುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ನಮಗೆ ಗೊತ್ತಿಲ್ಲ. ನಿಜವಾಗಿ ಸೋಂಕು ಎಷ್ಟು ಜನರಿಗೆ ತಗುಲಿದೆ, ಅದು ಎಷ್ಟು ವ್ಯಾಪಕವಾಗಿ ಹರಡಿದೆ ಅನ್ನುವುದು ಗೊತ್ತಾಗಬೇಕು. ಅದಕ್ಕೆ ವ್ಯಾಪಕವಾಗಿ ಪರೀಕ್ಷೆ ನಡೆಯಬೇಕು. ಕೋವಿಡ್-19 ವಿಭಿನ್ನ ಪರಿಸ್ಥಿತಿಯಲ್ಲಿ ಅಂದರೆ ಸೂರ್ಯನ ಬೆಳಕಿನಲ್ಲಿ, ಬಿಸಿಲಿನಲ್ಲಿ, ತೇವಾಂಶ ಹೆಚ್ಚಿದ್ದಾಗ ಹೇಗೆ ವರ್ತಿಸುತ್ತದೆ ಎಂಬುದು ನಮಗಿನ್ನು ಸ್ಪಷ್ಟವಾಗಿ ಗೊತ್ತಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳ ಯುವಕರನ್ನು ಕೊರೋನಾ ಅಷ್ಟು ಗಂಭೀರವಾಗಿ ಕಾಡದೇ ಇರಬಹುದು. ಆದರೆ ಜಗತ್ತಿನ ದಕ್ಷಿಣ ಭಾಗದಲ್ಲಿ ಇರುವ ಆರೋಗ್ಯ ವ್ಯವಸ್ಥೆ ಈ ಪಿಡುಗನ್ನು ನಿರ್ವಹಿಸುವುದಕ್ಕೆಸಾಲುವುದಿಲ್ಲ. ಅದು ತುಂಬಾ ದುರ್ಬಲವಾಗಿದೆ. ಜೊತೆಗೆ ಅಲ್ಲಿ ಬಡತನವೂ ವ್ಯಾಪಕವಾಗಿದೆ. ಅದು ಖಾಯಿಲೆಯನ್ನು ಮತ್ತಷ್ಟು ಗಂಭೀರವಾಗಿಸುತ್ತದೆ.

ಅಭಿಜಿತ್ ಬ್ಯಾನರ್ಜಿ

ಬಡದೇಶಗಳಲ್ಲಿ ಸೋಂಕಿತರ ಪರೀಕ್ಷೆ ಅಷ್ಟು ವ್ಯಾಪಾಕವಾಗಿ ನಡೆದಿಲ್ಲ. ಹಾಗಾಗಿ ಸ್ಪಷ್ಟ ಕ್ರಮ ತೆಗೆದುಕೊಳ್ಳುವುದಕ್ಕೆ ಬೇಕಾದ ಮಾಹಿತಿ ಇಲ್ಲ. ಅದರಿಂದಾಗಿ ಬಡ ದೇಶಗಳು ತೀರಾ ಎಚ್ಚರಿಕೆಯ ಹಾದಿಯನ್ನು ಹಿಡಿದಿವೆ. ಮಾರ್ಚ್ 24 ರಂದು ಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಬಂತು. ಆಗ ದೇಶದಲ್ಲಿ ಸುಮಾರು 500 ಜನ ಸೋಂಕಿತರಿದ್ದರು. ರುವಾಂಡ, ದಕ್ಷಿಣ ಆಫ್ರಿಕ ಮತ್ತು ನೈಜೀರಿಯಾದಂತಹ ದೇಶಗಳು ಮಾರ್ಚ್ ನಲ್ಲಿಯೇ ಲಾಕ್‌ಡೌನ್‌ ಜಾರಿಗೆ ತಂದವು. ಆಗಿನ್ನೂ ವೈರಾಣು ಸೋಂಕು ಪೀಕ್ ‌ತಲುಪಿರಲಿಲ್ಲ. ಆದರೆ ಈ ಲಾಕ್‌ಡೌನ್ ‌ತುಂಬಾ ದಿನ ಮುಂದುವರಿಯಲು ಸಾಧ್ಯವಿಲ್ಲ. ಆದರೆ ಹೀಗೆ ಪ್ರತ್ಯೇಕತೆಯನ್ನು ಜಾರಿಯಲ್ಲಿಡುವುದರಿಂದ, ಬಡ ರಾಷ್ಟ್ರಗಳಿಗೆ ಒಂದಿಷ್ಟು ಸಮಯ ಸಿಗುತ್ತದೆ. ಅಷ್ಟರಲ್ಲಿ ಈ ಸೋಂಕು ಹೇಗೆ ವರ್ತಿಸುತ್ತದೆ ಎಂಬುದರ ಕುರಿತಂತೆ ಒಂದಿಷ್ಟು ಮಾಹಿತಿ ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಅದನ್ನು ಆಧರಿಸಿ ಪರೀಕ್ಷಿಸುವುದಕ್ಕೆ ಹಾಗೂ ಸೋಂಕಿತರನ್ನು ಗುರುತಿಸುವುದಕ್ಕೆ ಸೂಕ್ತವಾದ ಮಾರ್ಗವನ್ನು ರೂಪಿಸಿ ಕೊಳ್ಳಬಹುದು.

ಆದರೆ ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಆಗಿಲ್ಲ. ಶ್ರೀಮಂತ ರಾಷ್ಟ್ರಗಳು ಇವರ ನೆರವಿಗೆ ಬರುವ ಬದಲು ಪಿಪಿಇ, ಆಮ್ಲಜನಕ, ವೆಂಟಿಲೇರ‍್ಸ್ ಇವುಗಳನ್ನು ಪಡೆದುಕೊಳ್ಳುವ ರೇಸಿನಲ್ಲಿ ಬಡ ರಾಷ್ಟ್ರಗಳನ್ನು ಬುಡಮೇಲು ಮಾಡುತ್ತಿವೆ.

ಲಾಕ್‌ಡೌನ್ ನಿಂದಾಗಿ ಅಪಾರ ಸಾವುನೋವು ಸಂಭವಿಸುತ್ತವೆ. ಇದು ಹಲವು ದೇಶಗಳ ಅನುಭವದಿಂದ ಈಗಾಗಲೇ ಸ್ಪಷ್ಟವಾಗಿದೆ. ಮಕ್ಕಳಿಗೆ ಲಸಿಕೆಗಳು ಸಿಗುತ್ತಿಲ್ಲ. ಬೆಳೆಗಳ ಕೊಯ್ಲು ನಡೆಯುತ್ತಿಲ್ಲ. ನಿರ್ಮಾಣದ ಯೋಜನೆಗಳು ನಿಂತಿವೆ. ಮಾರುಕಟ್ಟೆಗಳು ಛಿದ್ರವಾಗಿವೆ, ಉದ್ಯೋಗ ಹಾಗೂ ವರಮಾನ ಮಾಯವಾಗಿವೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ದೀರ್ಘ ಕಾಲದ ಕ್ವಾರಂಟೈನ್, ವೈರಾಣುವಿನಷ್ಟೇ ಹಾನಿಕಾರಕ. ಕೋವಿಡ್-19 ಜಗತ್ತನ್ನು ಆಕ್ರಮಿಸುವ ಮೊದಲು ಜಗತ್ತಿನ ದಕ್ಷಿಣ ಭಾಗದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 15000 ಮಕ್ಕಳು ಬಡತನಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ಪ್ರತಿದಿನ ಸಾಯುತ್ತಿದ್ದರು. ಇನ್ನಷ್ಟು ಕುಟುಂಬಗಳು ಬಡತನದ ಅಂಚಿಗೆ ಸರಿದರೆ ಹಾಗೆ ಸಾಯುವವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು.

ಬಡ ರಾಷ್ಟ್ರಗಳು ಈ ಪಿಡುಗಿನ ಸಮಯದಲ್ಲಿ ಏನು ಮಾಡಬಹುದು? ಶ್ರೀಮಂತ ರಾಷ್ಟ್ರಗಳು ಅವುಗಳಿಗೆ ಹೇಗೆ ನೆರವಾಗಬಹುದು? ಮೊದಲಿಗೆ ಈ ಪಿಡುಗನ್ನು ತಹಬಂದಿಗೆ ತರುವುದಕ್ಕೆ ಮತ್ತು ಲಾಕಡೌನ್ ಕ್ರಮಗಳನ್ನು ಸಡಿಲ ಗೊಳಿಸುವುದಕ್ಕೆ ಪರೀಕ್ಷೆ ಹೆಚ್ಚು ವ್ಯವಸ್ಥಿತವಾಗಿ ನಡೆಯಬೇಕು. ಅದಕ್ಕಾಗಿ ಒಂದು ಪರಿಣಾಮಕಾರಿಯಾದ ಯೋಜನೆಯನ್ನುರೂಪಿಸುವುದು ತುಂಬಾ ಮುಖ್ಯ. ಯೂರೋಪಿನಲ್ಲಿ ಈ ಕ್ರಮದಿಂದ ಅನುಕೂಲವಾಗಿದೆ. ಸೋಂಕು ಹರಡುವುದನ್ನು ಕುರಿತಂತೆ ನಮಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದಾಗ ಹಾಗೂ ಸಾಕಷ್ಟು ಸಂಪನ್ಮೂಲಗಳು ಇಲ್ಲದಿದ್ದಾಗ ಸಕ್ರಿಯವಾಗಿರುವ ಹಾಟ್ ಸ್ಪಾಟ್‌ಗಳ ಕಡಗೆ ಮನಕೊಡುವುದು ಸೂಕ್ತ. ಹೀಗೆ ಮಾಡುವುದರಿಂದ ಸಾರ್ವತ್ರಿಕವಾಗಿ ಲಾಕ್‌ಡೌನ್ ಹೇರಬೇಕಾಗುವುದಿಲ್ಲ. ಕೇವಲ ಕ್ವಾರಂಟೈನ್‌ ಅವಶ್ಯಕವಾಗಿರುವ ತಾಣಗಳನ್ನು ಗುರುತಿಸಿ,ಕ್ರಮ ತೆಗೆದುಕೊಳ್ಳಬಹುದು.

ಎಸ್ತರ್ ‌ಡಫ್ಲೋ

ಎರಡನೆಯದಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಸಾಧ್ಯವಾಗಬೇಕು. ಸೋಂಕಿತರ ಒಳ ಹರಿವು ದಿಢೀರನೆ ಹೆಚ್ಚಾದಾಗ ಅದನ್ನು ನಿರ್ವಹಿಸುವುದಕ್ಕೆ ಬೇಕಾದ ವ್ಯವಸ್ಥೆ ನಮ್ಮಲ್ಲಿರಬೇಕು.

ಮೂರನೆಯದಾಗಿ, ಬಡ ರಾಷ್ಟ್ರಗಳ ಜನರಿಗೆ ಜೀವನ ಭದ್ರತೆಯ ಖಾತ್ರಿ ಇರಬೇಕು. ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಅದನ್ನು ಒದಗಿಸುವ ಭರವಸೆಯನ್ನು ಜನರಿಗೆ ಕೊಡಬೇಕು. ಅಂತಹ ಖಾತ್ರಿಯನ್ನು ಕೊಡುವುದಕ್ಕೆ ಸಾಧ್ಯವಾಗದೇ ಹೋದರೆ ಜನ ಕ್ವಾರಂಟೈನ್‌ನಿಂದ ಬಳಲಿ ಹೋಗುತ್ತಾರೆ. ಲಾಕ್‌ಡೌನನ್ನು ಜಾರಿಯಲ್ಲಿಡುವುದು ಕಷ್ಟವಾಗುತ್ತದೆ. ಜೊತೆಗೆ ಆ ದೇಶಗಳ ಆರ್ಥಿಕತೆಯ ಬೇಡಿಕೆಯು ಕುಸಿಯಬಾರದು. ಆ ದೃಷ್ಟಿಯಿಂದಲೂ ಅಲ್ಲಿಯ ಸರ್ಕಾರಗಳು ಜನರಿಗೆ ಅವಶ್ಯಕತೆಯಿರುವಷ್ಟೂ ಕಾಲ ಹಣಕಾಸು ಬೆಂಬಲದ ಭರವಸೆ ಕೊಡಬೇಕು.

ಕೊರೋನಾ ಬಿಕ್ಕಟ್ಟಿಗೆ ಮೊದಲು ಬರೆದಿದ್ದ, ನಮ್ಮ ಇತ್ತೀಚಿನ ‘ಗುಡ್‌ಎಕಾನಾಮಿಕ್ಸ್ ಫಾರ್ ಹಾರ್ಡ್ಟೈಮ್ಸ್’ ಪುಸ್ತಕದಲ್ಲಿ ಬಡ ರಾಷ್ಟ್ರಗಳಿಗೆ ಅತಿ ಸಾರ್ವತ್ರಿಕ ಮೂಲಭೂತ ಅದಾಯ(ಅಲ್ಟ್ರಾ ಯುನಿವರ್ಸಲ್ ಬೇಸಿಕ್ ಇನ್‌ಕಮ್) ಎಂಬ ಯೋಜನೆಯೊಂದನ್ನು ಜಾರಿಗೊಳಿಸಬೇಕೆಂದು ನಾವು ಪ್ರತಿಪಾದಿಸಿದ್ದೇವೆ. ಜನರ ಮೂಲಭೂತ ಬದುಕಿಗೆ ಬೇಕಾದ ಹಣವನ್ನು ಅವರ ಖಾತೆಗೆ ವರ್ಗಾಯಿಸಬೇಕೆಂಬುದು ನಮ್ಮ ಸಲಹೆ.

ಯುಯುಬಿಐ ಯೋಜನೆಯ ದೊಡ್ಡ ಅನುಕೂಲವೆಂದರೆ, ಅದು ತುಂಬಾ ಸರಳ, ಪಾರದರ್ಶಕ ಯೋಜನೆ. ಅದನ್ನು ಜಾರಿಗೊಳಿಸುವುದರಿಂದ ಜನರು ಹಸಿವಿನಿಂದ ನರಳುವುದು ತಪ್ಪುತ್ತದೆ. ಹೆಚ್ಚಿನ ಕಲ್ಯಾಣ ಯೋಜನೆಗಳಲ್ಲಿ “ಅವಶ್ಯಕತೆ ಇಲ್ಲದವರಿಗೆ” ಸಿಗಬಾರದು ಅನ್ನುವುದನ್ನು ಕುರಿತಂತೆ ಹೆಚ್ಚು ಎಚ್ಚರ ವಹಿಸಲಾಗುತ್ತದೆ. ಆದರೆ ಹೀಗೆ ಮಾಡುವಾಗ ಅವಶ್ಯಕತೆಯಿರುವವರಿಗೆ ತಪ್ಪಿಹೋಗುವ ಸಾಧ್ಯತೆಗಳೇ ಹೆಚ್ಚು. ಪಿಡುಗಿನ ಸಂದರ್ಭದಲ್ಲಿ ಸಾಧ್ಯವಾದಷ್ಟು ಜನರಿಗೆ, ಕಡಿಮೆ ಸಮಯದಲ್ಲಿ ನೆರವು ಸಿಗಬೇಕು. ಅಂತಹ ಸಂದರ್ಭದಲ್ಲಿಯು ಯುಬಿಐ ಯೋಜನೆಯ ಸರಳತೆ ಸರ್ಕಾರದನೆರವಿಗೆ ಬರುತ್ತದೆ. ಬಡ ರಾಷ್ಟ್ರಗಳಲ್ಲಿ ಇಂದು ಬಹುಪಾಲು ಜನ ಮುಂದಿನ ವಿಪತ್ತಿನ ಕುರಿತ ಆತಂಕದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬದುಕಿಗೆ ಅವಶ್ಯಕವಾದದ್ದು ಎಲ್ಲರಿಗೂ ಸಿಗುತ್ತದೆ ಎಂಬ ಭರವಸೆ ಅವ ರಆತಂಕವನ್ನು ಎಷ್ಟೋ ಕಡಿಮೆ ಮಾಡುತ್ತದೆ.

ಈ ಯೋಚನೆಗಳು ಬರಿಯ ಕನಸಲ್ಲ. ಪಶ್ಚಿಮ ಆಫ್ರಿಕದ ಅತಿ ಸಣ್ಣ ರಾಷ್ಟ್ರವಾದ ಟೋಗೊದಲ್ಲಿ ಈ ಎಲ್ಲಾ ಯೋಜನೆಗಳು ಚಾಲ್ತಿಯಲ್ಲಿವೆ. ಅಲ್ಲಿ 80 ಲಕ್ಷ ಜನ ಇದ್ದಾರೆ. ಅಲ್ಲಿ ಜಿಡಿಪಿ 1538 ಡಾಲರ್. ಅಲ್ಲಿ ಸೋಂಕು ಇರಬಹುದು ಎಂಬ ಅನುಮಾನವಿರುವ 7900 ಜನರನ್ನು ಪರೀಕ್ಷಿಸಲಾಗಿದೆ. ಜೊತೆಗೆ ಸೋಂಕಿನ ಪ್ರಮಾಣವನ್ನು ತಿಳಿದುಕೊಳ್ಳುವ ದೃಷ್ಟಿಯಿಂದ 5000 ಜನರನ್ನು ಯಾದೃಚ್ಛಿಕವಾಗಿ ಪರೀಕ್ಷಿಸಲಾಗಿದೆ. ಆರೋಗ್ಯ ಇಲಾಖೆ ಜನರ ಚಲನೆಯನ್ನು ಎಲ್ಲಿ ಮತ್ತು ಯಾವಾಗ ನಿಯಂತ್ರಿಸಬೇಕು ಅನ್ನುವುದನ್ನು ನಿರ್ಧರಿಸಲು ಈ ಮಾಹಿತಿಯನ್ನು ಬಳಸಿಕೊಳ್ಳುತ್ತಿದೆ. ಅಲ್ಲಿ ಸರ್ಕಾರ ಎಲಾಕ್ಟ್ರಾನಿಕ್ ವ್ಯಾಲೆಟ್ಟನ್ನು ಜನರ ಸೆಲ್ ಫೋನ್‌ಗೆ ಲಿಂಕ್ ಮಾಡುವ ಮೂಲಕ ಹಣವನ್ನು ವರ್ಗಾಯಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ 13 ಲಕ್ಷಜನ ನೋಂದಾಯಿಸಿಕೊಂಡಿದ್ದಾರೆ.ಅಲ್ಲಿಯ ರಾಜಧಾನಿಯಾದ ಗ್ರೇಟರ್ ಲೋಮ್ ಪ್ರಾಂತ್ಯವೊಂದರಲ್ಲೇ 5,00,000 ಜನಕ್ಕೆ ಹಣವನ್ನು ವರ್ಗಾಯಿಸಲಾಗಿದೆ.

ಒಳ್ಳೆಯ ಸುದ್ದಿ ಅಂದರೆ ಹಲವು ದೇಶಗಳು ಅದರಲ್ಲೂ ಆಫ್ರಿಕದಲ್ಲಿನ ಹೆಚ್ಚಿನ ರಾಷ್ಟ್ರಗಳಲ್ಲಿ ಜನರಿಗೆ ಹಣ ವರ್ಗಾಯಿಸಲು ಬೇಕಾದ ಮೂಲಭೂತ ಸೌಕರ್ಯವಿದೆ. ಸೆಲ್ ಫೋನ್ ಮುಖಾಂತರ ಜನರಿಗೆ ತಕ್ಷಣ ಹಣವನ್ನು ವರ್ಗಾಯಿಸುವುದಕ್ಕೆ ಸಾಧ್ಯವಿದೆ. ಈಗ ಹಲವರು ಈ ಕ್ರಮವನ್ನು ಬಳಿಸಿಕೊಂಡು ಖಾಸಗಿಯಾಗಿ ಹಣವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರಿ ಯೋಜನೆಗಳನ್ನು ಕೆಲವೇ ದಿನಗಳಲ್ಲಿ ಜಾರಿಗೆತರಬಹುದು. ಯಾವುದಾದರೂ ಪ್ರಾಂತ್ಯಗಳು ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ ಎಂಬ ಮಾಹಿತಿ ಫೋನಿನಲ್ಲಿ ಸಿಕ್ಕರೆ, ಅಂತಹ ಸ್ಥಳಗಳಿಗೆ ಹೆಚ್ಚು ಧಾರಾಳವಾಗಿ ನೆರವನ್ನು ನೀಡಬಹುದು.

ಆ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಅಂತ ಅಲ್ಲ. ನಿಜವಾದ ಸಮಸ್ಯೆ ಇಚ್ಛಾ ಶಕ್ತಿಯದು. ನಮಗೆ ಅದಕ್ಕೆ ಹಣ ಹೂಡುವ ಮನಸ್ಸಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ನೆರವಾಗಬೇಕು. ಆಗ ಅಲ್ಲಿಯ ಸರ್ಕಾರಗಳು ಯುಯುಬಿಐ ನೆರವು ನೀಡಬಹುದು. ಈ ಕ್ರಮಗಳನ್ನು ತೀರಾ ತೀವ್ರವಾಗಿ ಜಾರಿಗೆ ತಂದರೆ ತಮ್ಮಲ್ಲಿರುವ ಹಣ ಖಾಲಿಯಾಗಿ ಹೋಗುತ್ತದೆ. ಸಾಲದ ಬಿಕ್ಕಟ್ಟಿಗೆ ಸಿಕ್ಕಿ ಬೀಳುತ್ತೇವೆ ಎಂಬ ಆತಂಕದಲ್ಲಿ ಕೆಲವರಿದ್ದಾರೆ. ಶ್ರೀಮಂತ ರಾಷ್ಟ್ರಗಳು ಜಾಗತಿಕ ಹಣಕಾಸು ಸಂಸ್ಥೆಗಳೊಂದಿಗೆ ಸೇರಿಕೊಂಡು ಬಡ ರಾಷ್ಟ್ರಗಳಿಗೆ ಸಾಲ ಪರಿಹಾರ ಮತ್ತು ಇತರ ಹೆಚ್ಚುವರಿ ಸಂಪನ್ಮೂಲವನ್ನು ಒದಗಿಸಬೇಕು. ಹೆಚ್ಚಿನ ಅಭಿವೃದ್ಧಿ ಶೀಲ ರಾಷ್ಟ್ರಗಳು ಆಹಾರವನ್ನು ಮತ್ತು ಔಷಧಿಗಳನ್ನು ಹಣಕೊಟ್ಟು ಕೊಳ್ಳಬೇಕು. ಅವರ ರಫ್ತು ಆದಾಯ ಮತ್ತು ಸಂದಾಯ ಆಗುತ್ತಿರುವ ಹಣಕುಸಿಯುತ್ತಿರುವ ಈ ಸಂದರ್ಭದಲ್ಲಿ ಇದು ತುಂಬಾ ಕಷ್ಟವಾಗುತ್ತದೆ.

ಹಲವಾರು ಜನರ ಆದಾಯ ತೀವ್ರವಾಗಿ ಕುಸಿಯುತ್ತಿದೆ. ಈ ಮಟ್ಟದ ಕುಸಿತ ಹಿಂದೆಂದೂ ಆಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿತ್ತೀಯ ನೀತಿಯ ಕುರಿತಂತೆ ಹಿಂದಿನ ಎಚ್ಚರ ಈಗ ಬೇಕಾಗಿಲ್ಲ. ಇಂದು ಸರ್ಕಾರಗಳು ಜನರಿಗೆ ಹಾಗೂ ಆರ್ಥಿಕತೆಗೆ ನೆರವಾಗಬೇಕಾಗಿದೆ. ಅದಕ್ಕಾಗಿ ಗಣನೀಯವಾಗಿ ಹಣಖರ್ಚು ಮಾಡಬೇಕಾದ ಸಮಯ ಇದು. ಅಭಿವೃದ್ಧಿಶೀಲ ರಾಷ್ಟ್ರಗಳ ಸರ್ಕಾರಗಳು ಯುಯುಬಿಐಗೆ ಹಣ ಒದಗಿಸಬೇಕಾಗಿದೆ. ಅದರಿಂದಾಗಿ ಬಜೆಟ್‌ ಕೊರತೆ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ. ಸಧ್ಯಕ್ಕಂತು ಅದು ಅನಿವಾರ್ಯ. ಈ ದೇಶಗಳು ತಮ್ಮ ಲಾಕ್‌ಡೌನ್ ಸಡಿಲಿಸಿ, ಉತ್ಪಾದನೆಯನ್ನು ಪ್ರಾರಂಭಿಸಿದಾಗ, ಬೇಡಿಕೆ ತುಂಬಾ ಕಡಿಮೆ ಇರುತ್ತದೆ. ಜನರ ಕೈಯಲ್ಲಿ ಹಣ ಇರಬೇಕು. ಮುಂದೆಯೂ ಕೆಲ ಕಾಲ ನಗದು ಅವರ ಖಾತೆಗೆ ವರ್ಗಾವಣೆಯಾಗುತ್ತದೆ ಎಂಬ ಭರವಸೆ ಅವರಿಗೆ ಇರಬೇಕು. ಹೀಗೆ ಪರಿಸ್ಥಿತಿ ಸುರಕ್ಷಿತವಾದಾಗ ಅವರು ಹೊರಗೆ ಬಂದು, ಹಣಖರ್ಚು ಮಾಡುತ್ತಾರೆ. ಆರ್ಥಿಕತೆಯ ಪುನಚ್ಛೇತನ ಸಾಧ್ಯವಾಗುತ್ತದೆ.

ಇದೆಲ್ಲದರ ಅರ್ಥ ಸರ್ಕಾರಗಳು ಮೇಕ್ರೋ ಆರ್ಥಿಕ ಸ್ಥಿರತೆಯನ್ನು ನಿರ್ಲಕ್ಷಿಸ ಬೇಕು ಅಂತಅಲ್ಲ. ತಕ್ಷಣದ ಕೊರೊನಾ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ತಂದಿರುವ ಲಾಕ್‌ಡೌನ್ ಕೊನೆಗೊಳಿಸಬೇಕು. ಅದಕ್ಕೆ ಕ್ರಮತೆಗೆದು ಕೊಳ್ಳಬೇಕು. ಆ ಕ್ರಮಕ್ಕೆ ಪೂರಕವಾಗಿ ಒಂದು ಸ್ಪಷ್ಟವಾದ ಹೂಡಿಕೆಯ ಯೋಜನೆಯನ್ನೂ ರೂಪಿಸಬೇಕು. ಹಾಗೆ ಮಾಡುವುದರಿಂದ ಇಂದಿನ ಬಿಕ್ಕಟ್ಟು ಮುಂದೆ ದೊಡ್ಡದುರಂತವಾಗುವುದು ತಪ್ಪಬಹುದು. ಅದೊಂದೇ ನಮಗಿರುವ ಆಸೆ.

ಎಸ್ತರ್ ‌ಡಫ್ಲೋ ಮತ್ತುಅಭಿಜಿತ್ ಬ್ಯಾನರ್ಜಿ- 2019 ರಲ್ಲಿ ನೋಬೆಲ್ ಪಡೆದಿರುವ ಅರ್ಥಶಾಸ್ತ್ರಜ್ಞರು.


ಓದಿ: ಭಾರತಕ್ಕೆ ದೊಡ್ಡ ಉದ್ದೀಪನ ಪ್ಯಾಕೇಜ್ ಬೇಕು: ಅಭಿಜಿತ್ ಬ್ಯಾನರ್ಜಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...