HomeUncategorizedಕೊರೋನಾ ವೈರಸ್‌ ಬಿಕ್ಕಟ್ಟು ನಿಜ; ಆದರೆ ದುರಂತವಾಗಬೇಕಾಗಿಲ್ಲ: ಎಸ್ತರ್ ‌ಡಫ್ಲೋ, ಅಭಿಜಿತ್ ಬ್ಯಾನರ್ಜಿ

ಕೊರೋನಾ ವೈರಸ್‌ ಬಿಕ್ಕಟ್ಟು ನಿಜ; ಆದರೆ ದುರಂತವಾಗಬೇಕಾಗಿಲ್ಲ: ಎಸ್ತರ್ ‌ಡಫ್ಲೋ, ಅಭಿಜಿತ್ ಬ್ಯಾನರ್ಜಿ

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಸಾಧ್ಯವಾಗಬೇಕು. ಸೋಂಕಿತರ ಒಳ ಹರಿವು ದಿಢೀರನೆ ಹೆಚ್ಚಾದಾಗ ಅದನ್ನು ನಿರ್ವಹಿಸುವುದಕ್ಕೆ ಬೇಕಾದ ವ್ಯವಸ್ಥೆ ನಮ್ಮಲ್ಲಿರಬೇಕು.

- Advertisement -
- Advertisement -

ಜನರಿಗೆ ಜೀವನ ಭದ್ರತೆಯ ಖಾತ್ರಿ ಇರಬೇಕು. ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಅದನ್ನು ಒದಗಿಸುವ ಭರವಸೆಯನ್ನು ಜನರಿಗೆ ಕೊಡಬೇಕು. ಅಂತಹ ಖಾತ್ರಿಯನ್ನು ಕೊಡುವುದಕ್ಕೆ ಸಾಧ್ಯವಾಗದೇ ಹೋದರೆ ಜನ ಕ್ವಾರಂಟೈನ್‌ನಿಂದ ಬಳಲಿ ಹೋಗುತ್ತಾರೆ. ಲಾಕ್‌ಡೌನನ್ನು ಜಾರಿಯಲ್ಲಿಡುವುದು ಕಷ್ಟವಾಗುತ್ತದೆ. ಜೊತೆಗೆ ಆ ದೇಶಗಳ ಆರ್ಥಿಕತೆಯ ಬೇಡಿಕೆಯು ಕುಸಿಯಬಾರದು. ಆ ದೃಷ್ಟಿಯಿಂದಲೂ ಅಲ್ಲಿಯ ಸರ್ಕಾರಗಳು ಜನರಿಗೆ ಅವಶ್ಯಕತೆಯಿರುವಷ್ಟೂ ಕಾಲ ಹಣಕಾಸು ಬೆಂಬಲದ ಭರವಸೆ ಕೊಡಬೇಕು.

ಮೂಲ: ಎಸ್ತರ್‌ಡಫ್ಲೋ ಮತ್ತು ಅಭಿಜಿತ್ ಬ್ಯಾನರ್ಜಿ (ಮೇ 6, ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ಲೇಖನ.)

ಅನುವಾದ: ವೇಣುಗೋಪಾಲ್ ಟಿ.ಎಸ್

ಪೂರ್ವಏಷ್ಯಾ ಹಾಗೂ ಐರೋಪ್ಯ ದೇಶಗಳು ತಮ್ಮ ಆರ್ಥಿಕತೆಯನ್ನು ನಿಧಾನವಾಗಿ ಮತ್ತೆ ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಬರುವ ದಿನಗಳಲ್ಲಿ ಈ ಪಿಡುಗು ಇನ್ನಷ್ಟು ಭೀಕರವಾಗಬಹುದೇನೋ ಎಂಬ ಆತಂಕದಲ್ಲಿ ಜಗತ್ತಿನ ದಕ್ಷಿಣದ ಭಾಗಗಳು ಇವೆ. ಅರ್ಥಶಾಸ್ತ್ರಜ್ಞರಾಗಿ ನಾವು ಅಭಿವೃದ್ಧ ಶೀಲ ರಾಷ್ಟ್ರಗಳಲ್ಲಿ ಬಡತನ ನಿರ್ಮೂಲನದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ.

ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಮೇಲೆ ಕೊರೋನಾ ವೈರಾಣುವಿನ ಪರಿಣಾಮ ಹೇಗಿರಬಹುದು ಅಂತ ಜನ ನಮ್ಮನ್ನು ಕೇಳುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ನಮಗೆ ಗೊತ್ತಿಲ್ಲ. ನಿಜವಾಗಿ ಸೋಂಕು ಎಷ್ಟು ಜನರಿಗೆ ತಗುಲಿದೆ, ಅದು ಎಷ್ಟು ವ್ಯಾಪಕವಾಗಿ ಹರಡಿದೆ ಅನ್ನುವುದು ಗೊತ್ತಾಗಬೇಕು. ಅದಕ್ಕೆ ವ್ಯಾಪಕವಾಗಿ ಪರೀಕ್ಷೆ ನಡೆಯಬೇಕು. ಕೋವಿಡ್-19 ವಿಭಿನ್ನ ಪರಿಸ್ಥಿತಿಯಲ್ಲಿ ಅಂದರೆ ಸೂರ್ಯನ ಬೆಳಕಿನಲ್ಲಿ, ಬಿಸಿಲಿನಲ್ಲಿ, ತೇವಾಂಶ ಹೆಚ್ಚಿದ್ದಾಗ ಹೇಗೆ ವರ್ತಿಸುತ್ತದೆ ಎಂಬುದು ನಮಗಿನ್ನು ಸ್ಪಷ್ಟವಾಗಿ ಗೊತ್ತಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳ ಯುವಕರನ್ನು ಕೊರೋನಾ ಅಷ್ಟು ಗಂಭೀರವಾಗಿ ಕಾಡದೇ ಇರಬಹುದು. ಆದರೆ ಜಗತ್ತಿನ ದಕ್ಷಿಣ ಭಾಗದಲ್ಲಿ ಇರುವ ಆರೋಗ್ಯ ವ್ಯವಸ್ಥೆ ಈ ಪಿಡುಗನ್ನು ನಿರ್ವಹಿಸುವುದಕ್ಕೆಸಾಲುವುದಿಲ್ಲ. ಅದು ತುಂಬಾ ದುರ್ಬಲವಾಗಿದೆ. ಜೊತೆಗೆ ಅಲ್ಲಿ ಬಡತನವೂ ವ್ಯಾಪಕವಾಗಿದೆ. ಅದು ಖಾಯಿಲೆಯನ್ನು ಮತ್ತಷ್ಟು ಗಂಭೀರವಾಗಿಸುತ್ತದೆ.

ಅಭಿಜಿತ್ ಬ್ಯಾನರ್ಜಿ

ಬಡದೇಶಗಳಲ್ಲಿ ಸೋಂಕಿತರ ಪರೀಕ್ಷೆ ಅಷ್ಟು ವ್ಯಾಪಾಕವಾಗಿ ನಡೆದಿಲ್ಲ. ಹಾಗಾಗಿ ಸ್ಪಷ್ಟ ಕ್ರಮ ತೆಗೆದುಕೊಳ್ಳುವುದಕ್ಕೆ ಬೇಕಾದ ಮಾಹಿತಿ ಇಲ್ಲ. ಅದರಿಂದಾಗಿ ಬಡ ದೇಶಗಳು ತೀರಾ ಎಚ್ಚರಿಕೆಯ ಹಾದಿಯನ್ನು ಹಿಡಿದಿವೆ. ಮಾರ್ಚ್ 24 ರಂದು ಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಬಂತು. ಆಗ ದೇಶದಲ್ಲಿ ಸುಮಾರು 500 ಜನ ಸೋಂಕಿತರಿದ್ದರು. ರುವಾಂಡ, ದಕ್ಷಿಣ ಆಫ್ರಿಕ ಮತ್ತು ನೈಜೀರಿಯಾದಂತಹ ದೇಶಗಳು ಮಾರ್ಚ್ ನಲ್ಲಿಯೇ ಲಾಕ್‌ಡೌನ್‌ ಜಾರಿಗೆ ತಂದವು. ಆಗಿನ್ನೂ ವೈರಾಣು ಸೋಂಕು ಪೀಕ್ ‌ತಲುಪಿರಲಿಲ್ಲ. ಆದರೆ ಈ ಲಾಕ್‌ಡೌನ್ ‌ತುಂಬಾ ದಿನ ಮುಂದುವರಿಯಲು ಸಾಧ್ಯವಿಲ್ಲ. ಆದರೆ ಹೀಗೆ ಪ್ರತ್ಯೇಕತೆಯನ್ನು ಜಾರಿಯಲ್ಲಿಡುವುದರಿಂದ, ಬಡ ರಾಷ್ಟ್ರಗಳಿಗೆ ಒಂದಿಷ್ಟು ಸಮಯ ಸಿಗುತ್ತದೆ. ಅಷ್ಟರಲ್ಲಿ ಈ ಸೋಂಕು ಹೇಗೆ ವರ್ತಿಸುತ್ತದೆ ಎಂಬುದರ ಕುರಿತಂತೆ ಒಂದಿಷ್ಟು ಮಾಹಿತಿ ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಅದನ್ನು ಆಧರಿಸಿ ಪರೀಕ್ಷಿಸುವುದಕ್ಕೆ ಹಾಗೂ ಸೋಂಕಿತರನ್ನು ಗುರುತಿಸುವುದಕ್ಕೆ ಸೂಕ್ತವಾದ ಮಾರ್ಗವನ್ನು ರೂಪಿಸಿ ಕೊಳ್ಳಬಹುದು.

ಆದರೆ ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಆಗಿಲ್ಲ. ಶ್ರೀಮಂತ ರಾಷ್ಟ್ರಗಳು ಇವರ ನೆರವಿಗೆ ಬರುವ ಬದಲು ಪಿಪಿಇ, ಆಮ್ಲಜನಕ, ವೆಂಟಿಲೇರ‍್ಸ್ ಇವುಗಳನ್ನು ಪಡೆದುಕೊಳ್ಳುವ ರೇಸಿನಲ್ಲಿ ಬಡ ರಾಷ್ಟ್ರಗಳನ್ನು ಬುಡಮೇಲು ಮಾಡುತ್ತಿವೆ.

ಲಾಕ್‌ಡೌನ್ ನಿಂದಾಗಿ ಅಪಾರ ಸಾವುನೋವು ಸಂಭವಿಸುತ್ತವೆ. ಇದು ಹಲವು ದೇಶಗಳ ಅನುಭವದಿಂದ ಈಗಾಗಲೇ ಸ್ಪಷ್ಟವಾಗಿದೆ. ಮಕ್ಕಳಿಗೆ ಲಸಿಕೆಗಳು ಸಿಗುತ್ತಿಲ್ಲ. ಬೆಳೆಗಳ ಕೊಯ್ಲು ನಡೆಯುತ್ತಿಲ್ಲ. ನಿರ್ಮಾಣದ ಯೋಜನೆಗಳು ನಿಂತಿವೆ. ಮಾರುಕಟ್ಟೆಗಳು ಛಿದ್ರವಾಗಿವೆ, ಉದ್ಯೋಗ ಹಾಗೂ ವರಮಾನ ಮಾಯವಾಗಿವೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ದೀರ್ಘ ಕಾಲದ ಕ್ವಾರಂಟೈನ್, ವೈರಾಣುವಿನಷ್ಟೇ ಹಾನಿಕಾರಕ. ಕೋವಿಡ್-19 ಜಗತ್ತನ್ನು ಆಕ್ರಮಿಸುವ ಮೊದಲು ಜಗತ್ತಿನ ದಕ್ಷಿಣ ಭಾಗದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 15000 ಮಕ್ಕಳು ಬಡತನಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ಪ್ರತಿದಿನ ಸಾಯುತ್ತಿದ್ದರು. ಇನ್ನಷ್ಟು ಕುಟುಂಬಗಳು ಬಡತನದ ಅಂಚಿಗೆ ಸರಿದರೆ ಹಾಗೆ ಸಾಯುವವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು.

ಬಡ ರಾಷ್ಟ್ರಗಳು ಈ ಪಿಡುಗಿನ ಸಮಯದಲ್ಲಿ ಏನು ಮಾಡಬಹುದು? ಶ್ರೀಮಂತ ರಾಷ್ಟ್ರಗಳು ಅವುಗಳಿಗೆ ಹೇಗೆ ನೆರವಾಗಬಹುದು? ಮೊದಲಿಗೆ ಈ ಪಿಡುಗನ್ನು ತಹಬಂದಿಗೆ ತರುವುದಕ್ಕೆ ಮತ್ತು ಲಾಕಡೌನ್ ಕ್ರಮಗಳನ್ನು ಸಡಿಲ ಗೊಳಿಸುವುದಕ್ಕೆ ಪರೀಕ್ಷೆ ಹೆಚ್ಚು ವ್ಯವಸ್ಥಿತವಾಗಿ ನಡೆಯಬೇಕು. ಅದಕ್ಕಾಗಿ ಒಂದು ಪರಿಣಾಮಕಾರಿಯಾದ ಯೋಜನೆಯನ್ನುರೂಪಿಸುವುದು ತುಂಬಾ ಮುಖ್ಯ. ಯೂರೋಪಿನಲ್ಲಿ ಈ ಕ್ರಮದಿಂದ ಅನುಕೂಲವಾಗಿದೆ. ಸೋಂಕು ಹರಡುವುದನ್ನು ಕುರಿತಂತೆ ನಮಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದಾಗ ಹಾಗೂ ಸಾಕಷ್ಟು ಸಂಪನ್ಮೂಲಗಳು ಇಲ್ಲದಿದ್ದಾಗ ಸಕ್ರಿಯವಾಗಿರುವ ಹಾಟ್ ಸ್ಪಾಟ್‌ಗಳ ಕಡಗೆ ಮನಕೊಡುವುದು ಸೂಕ್ತ. ಹೀಗೆ ಮಾಡುವುದರಿಂದ ಸಾರ್ವತ್ರಿಕವಾಗಿ ಲಾಕ್‌ಡೌನ್ ಹೇರಬೇಕಾಗುವುದಿಲ್ಲ. ಕೇವಲ ಕ್ವಾರಂಟೈನ್‌ ಅವಶ್ಯಕವಾಗಿರುವ ತಾಣಗಳನ್ನು ಗುರುತಿಸಿ,ಕ್ರಮ ತೆಗೆದುಕೊಳ್ಳಬಹುದು.

ಎಸ್ತರ್ ‌ಡಫ್ಲೋ

ಎರಡನೆಯದಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಸಾಧ್ಯವಾಗಬೇಕು. ಸೋಂಕಿತರ ಒಳ ಹರಿವು ದಿಢೀರನೆ ಹೆಚ್ಚಾದಾಗ ಅದನ್ನು ನಿರ್ವಹಿಸುವುದಕ್ಕೆ ಬೇಕಾದ ವ್ಯವಸ್ಥೆ ನಮ್ಮಲ್ಲಿರಬೇಕು.

ಮೂರನೆಯದಾಗಿ, ಬಡ ರಾಷ್ಟ್ರಗಳ ಜನರಿಗೆ ಜೀವನ ಭದ್ರತೆಯ ಖಾತ್ರಿ ಇರಬೇಕು. ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಅದನ್ನು ಒದಗಿಸುವ ಭರವಸೆಯನ್ನು ಜನರಿಗೆ ಕೊಡಬೇಕು. ಅಂತಹ ಖಾತ್ರಿಯನ್ನು ಕೊಡುವುದಕ್ಕೆ ಸಾಧ್ಯವಾಗದೇ ಹೋದರೆ ಜನ ಕ್ವಾರಂಟೈನ್‌ನಿಂದ ಬಳಲಿ ಹೋಗುತ್ತಾರೆ. ಲಾಕ್‌ಡೌನನ್ನು ಜಾರಿಯಲ್ಲಿಡುವುದು ಕಷ್ಟವಾಗುತ್ತದೆ. ಜೊತೆಗೆ ಆ ದೇಶಗಳ ಆರ್ಥಿಕತೆಯ ಬೇಡಿಕೆಯು ಕುಸಿಯಬಾರದು. ಆ ದೃಷ್ಟಿಯಿಂದಲೂ ಅಲ್ಲಿಯ ಸರ್ಕಾರಗಳು ಜನರಿಗೆ ಅವಶ್ಯಕತೆಯಿರುವಷ್ಟೂ ಕಾಲ ಹಣಕಾಸು ಬೆಂಬಲದ ಭರವಸೆ ಕೊಡಬೇಕು.

ಕೊರೋನಾ ಬಿಕ್ಕಟ್ಟಿಗೆ ಮೊದಲು ಬರೆದಿದ್ದ, ನಮ್ಮ ಇತ್ತೀಚಿನ ‘ಗುಡ್‌ಎಕಾನಾಮಿಕ್ಸ್ ಫಾರ್ ಹಾರ್ಡ್ಟೈಮ್ಸ್’ ಪುಸ್ತಕದಲ್ಲಿ ಬಡ ರಾಷ್ಟ್ರಗಳಿಗೆ ಅತಿ ಸಾರ್ವತ್ರಿಕ ಮೂಲಭೂತ ಅದಾಯ(ಅಲ್ಟ್ರಾ ಯುನಿವರ್ಸಲ್ ಬೇಸಿಕ್ ಇನ್‌ಕಮ್) ಎಂಬ ಯೋಜನೆಯೊಂದನ್ನು ಜಾರಿಗೊಳಿಸಬೇಕೆಂದು ನಾವು ಪ್ರತಿಪಾದಿಸಿದ್ದೇವೆ. ಜನರ ಮೂಲಭೂತ ಬದುಕಿಗೆ ಬೇಕಾದ ಹಣವನ್ನು ಅವರ ಖಾತೆಗೆ ವರ್ಗಾಯಿಸಬೇಕೆಂಬುದು ನಮ್ಮ ಸಲಹೆ.

ಯುಯುಬಿಐ ಯೋಜನೆಯ ದೊಡ್ಡ ಅನುಕೂಲವೆಂದರೆ, ಅದು ತುಂಬಾ ಸರಳ, ಪಾರದರ್ಶಕ ಯೋಜನೆ. ಅದನ್ನು ಜಾರಿಗೊಳಿಸುವುದರಿಂದ ಜನರು ಹಸಿವಿನಿಂದ ನರಳುವುದು ತಪ್ಪುತ್ತದೆ. ಹೆಚ್ಚಿನ ಕಲ್ಯಾಣ ಯೋಜನೆಗಳಲ್ಲಿ “ಅವಶ್ಯಕತೆ ಇಲ್ಲದವರಿಗೆ” ಸಿಗಬಾರದು ಅನ್ನುವುದನ್ನು ಕುರಿತಂತೆ ಹೆಚ್ಚು ಎಚ್ಚರ ವಹಿಸಲಾಗುತ್ತದೆ. ಆದರೆ ಹೀಗೆ ಮಾಡುವಾಗ ಅವಶ್ಯಕತೆಯಿರುವವರಿಗೆ ತಪ್ಪಿಹೋಗುವ ಸಾಧ್ಯತೆಗಳೇ ಹೆಚ್ಚು. ಪಿಡುಗಿನ ಸಂದರ್ಭದಲ್ಲಿ ಸಾಧ್ಯವಾದಷ್ಟು ಜನರಿಗೆ, ಕಡಿಮೆ ಸಮಯದಲ್ಲಿ ನೆರವು ಸಿಗಬೇಕು. ಅಂತಹ ಸಂದರ್ಭದಲ್ಲಿಯು ಯುಬಿಐ ಯೋಜನೆಯ ಸರಳತೆ ಸರ್ಕಾರದನೆರವಿಗೆ ಬರುತ್ತದೆ. ಬಡ ರಾಷ್ಟ್ರಗಳಲ್ಲಿ ಇಂದು ಬಹುಪಾಲು ಜನ ಮುಂದಿನ ವಿಪತ್ತಿನ ಕುರಿತ ಆತಂಕದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬದುಕಿಗೆ ಅವಶ್ಯಕವಾದದ್ದು ಎಲ್ಲರಿಗೂ ಸಿಗುತ್ತದೆ ಎಂಬ ಭರವಸೆ ಅವ ರಆತಂಕವನ್ನು ಎಷ್ಟೋ ಕಡಿಮೆ ಮಾಡುತ್ತದೆ.

ಈ ಯೋಚನೆಗಳು ಬರಿಯ ಕನಸಲ್ಲ. ಪಶ್ಚಿಮ ಆಫ್ರಿಕದ ಅತಿ ಸಣ್ಣ ರಾಷ್ಟ್ರವಾದ ಟೋಗೊದಲ್ಲಿ ಈ ಎಲ್ಲಾ ಯೋಜನೆಗಳು ಚಾಲ್ತಿಯಲ್ಲಿವೆ. ಅಲ್ಲಿ 80 ಲಕ್ಷ ಜನ ಇದ್ದಾರೆ. ಅಲ್ಲಿ ಜಿಡಿಪಿ 1538 ಡಾಲರ್. ಅಲ್ಲಿ ಸೋಂಕು ಇರಬಹುದು ಎಂಬ ಅನುಮಾನವಿರುವ 7900 ಜನರನ್ನು ಪರೀಕ್ಷಿಸಲಾಗಿದೆ. ಜೊತೆಗೆ ಸೋಂಕಿನ ಪ್ರಮಾಣವನ್ನು ತಿಳಿದುಕೊಳ್ಳುವ ದೃಷ್ಟಿಯಿಂದ 5000 ಜನರನ್ನು ಯಾದೃಚ್ಛಿಕವಾಗಿ ಪರೀಕ್ಷಿಸಲಾಗಿದೆ. ಆರೋಗ್ಯ ಇಲಾಖೆ ಜನರ ಚಲನೆಯನ್ನು ಎಲ್ಲಿ ಮತ್ತು ಯಾವಾಗ ನಿಯಂತ್ರಿಸಬೇಕು ಅನ್ನುವುದನ್ನು ನಿರ್ಧರಿಸಲು ಈ ಮಾಹಿತಿಯನ್ನು ಬಳಸಿಕೊಳ್ಳುತ್ತಿದೆ. ಅಲ್ಲಿ ಸರ್ಕಾರ ಎಲಾಕ್ಟ್ರಾನಿಕ್ ವ್ಯಾಲೆಟ್ಟನ್ನು ಜನರ ಸೆಲ್ ಫೋನ್‌ಗೆ ಲಿಂಕ್ ಮಾಡುವ ಮೂಲಕ ಹಣವನ್ನು ವರ್ಗಾಯಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ 13 ಲಕ್ಷಜನ ನೋಂದಾಯಿಸಿಕೊಂಡಿದ್ದಾರೆ.ಅಲ್ಲಿಯ ರಾಜಧಾನಿಯಾದ ಗ್ರೇಟರ್ ಲೋಮ್ ಪ್ರಾಂತ್ಯವೊಂದರಲ್ಲೇ 5,00,000 ಜನಕ್ಕೆ ಹಣವನ್ನು ವರ್ಗಾಯಿಸಲಾಗಿದೆ.

ಒಳ್ಳೆಯ ಸುದ್ದಿ ಅಂದರೆ ಹಲವು ದೇಶಗಳು ಅದರಲ್ಲೂ ಆಫ್ರಿಕದಲ್ಲಿನ ಹೆಚ್ಚಿನ ರಾಷ್ಟ್ರಗಳಲ್ಲಿ ಜನರಿಗೆ ಹಣ ವರ್ಗಾಯಿಸಲು ಬೇಕಾದ ಮೂಲಭೂತ ಸೌಕರ್ಯವಿದೆ. ಸೆಲ್ ಫೋನ್ ಮುಖಾಂತರ ಜನರಿಗೆ ತಕ್ಷಣ ಹಣವನ್ನು ವರ್ಗಾಯಿಸುವುದಕ್ಕೆ ಸಾಧ್ಯವಿದೆ. ಈಗ ಹಲವರು ಈ ಕ್ರಮವನ್ನು ಬಳಿಸಿಕೊಂಡು ಖಾಸಗಿಯಾಗಿ ಹಣವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರಿ ಯೋಜನೆಗಳನ್ನು ಕೆಲವೇ ದಿನಗಳಲ್ಲಿ ಜಾರಿಗೆತರಬಹುದು. ಯಾವುದಾದರೂ ಪ್ರಾಂತ್ಯಗಳು ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ ಎಂಬ ಮಾಹಿತಿ ಫೋನಿನಲ್ಲಿ ಸಿಕ್ಕರೆ, ಅಂತಹ ಸ್ಥಳಗಳಿಗೆ ಹೆಚ್ಚು ಧಾರಾಳವಾಗಿ ನೆರವನ್ನು ನೀಡಬಹುದು.

ಆ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಅಂತ ಅಲ್ಲ. ನಿಜವಾದ ಸಮಸ್ಯೆ ಇಚ್ಛಾ ಶಕ್ತಿಯದು. ನಮಗೆ ಅದಕ್ಕೆ ಹಣ ಹೂಡುವ ಮನಸ್ಸಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ನೆರವಾಗಬೇಕು. ಆಗ ಅಲ್ಲಿಯ ಸರ್ಕಾರಗಳು ಯುಯುಬಿಐ ನೆರವು ನೀಡಬಹುದು. ಈ ಕ್ರಮಗಳನ್ನು ತೀರಾ ತೀವ್ರವಾಗಿ ಜಾರಿಗೆ ತಂದರೆ ತಮ್ಮಲ್ಲಿರುವ ಹಣ ಖಾಲಿಯಾಗಿ ಹೋಗುತ್ತದೆ. ಸಾಲದ ಬಿಕ್ಕಟ್ಟಿಗೆ ಸಿಕ್ಕಿ ಬೀಳುತ್ತೇವೆ ಎಂಬ ಆತಂಕದಲ್ಲಿ ಕೆಲವರಿದ್ದಾರೆ. ಶ್ರೀಮಂತ ರಾಷ್ಟ್ರಗಳು ಜಾಗತಿಕ ಹಣಕಾಸು ಸಂಸ್ಥೆಗಳೊಂದಿಗೆ ಸೇರಿಕೊಂಡು ಬಡ ರಾಷ್ಟ್ರಗಳಿಗೆ ಸಾಲ ಪರಿಹಾರ ಮತ್ತು ಇತರ ಹೆಚ್ಚುವರಿ ಸಂಪನ್ಮೂಲವನ್ನು ಒದಗಿಸಬೇಕು. ಹೆಚ್ಚಿನ ಅಭಿವೃದ್ಧಿ ಶೀಲ ರಾಷ್ಟ್ರಗಳು ಆಹಾರವನ್ನು ಮತ್ತು ಔಷಧಿಗಳನ್ನು ಹಣಕೊಟ್ಟು ಕೊಳ್ಳಬೇಕು. ಅವರ ರಫ್ತು ಆದಾಯ ಮತ್ತು ಸಂದಾಯ ಆಗುತ್ತಿರುವ ಹಣಕುಸಿಯುತ್ತಿರುವ ಈ ಸಂದರ್ಭದಲ್ಲಿ ಇದು ತುಂಬಾ ಕಷ್ಟವಾಗುತ್ತದೆ.

ಹಲವಾರು ಜನರ ಆದಾಯ ತೀವ್ರವಾಗಿ ಕುಸಿಯುತ್ತಿದೆ. ಈ ಮಟ್ಟದ ಕುಸಿತ ಹಿಂದೆಂದೂ ಆಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿತ್ತೀಯ ನೀತಿಯ ಕುರಿತಂತೆ ಹಿಂದಿನ ಎಚ್ಚರ ಈಗ ಬೇಕಾಗಿಲ್ಲ. ಇಂದು ಸರ್ಕಾರಗಳು ಜನರಿಗೆ ಹಾಗೂ ಆರ್ಥಿಕತೆಗೆ ನೆರವಾಗಬೇಕಾಗಿದೆ. ಅದಕ್ಕಾಗಿ ಗಣನೀಯವಾಗಿ ಹಣಖರ್ಚು ಮಾಡಬೇಕಾದ ಸಮಯ ಇದು. ಅಭಿವೃದ್ಧಿಶೀಲ ರಾಷ್ಟ್ರಗಳ ಸರ್ಕಾರಗಳು ಯುಯುಬಿಐಗೆ ಹಣ ಒದಗಿಸಬೇಕಾಗಿದೆ. ಅದರಿಂದಾಗಿ ಬಜೆಟ್‌ ಕೊರತೆ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ. ಸಧ್ಯಕ್ಕಂತು ಅದು ಅನಿವಾರ್ಯ. ಈ ದೇಶಗಳು ತಮ್ಮ ಲಾಕ್‌ಡೌನ್ ಸಡಿಲಿಸಿ, ಉತ್ಪಾದನೆಯನ್ನು ಪ್ರಾರಂಭಿಸಿದಾಗ, ಬೇಡಿಕೆ ತುಂಬಾ ಕಡಿಮೆ ಇರುತ್ತದೆ. ಜನರ ಕೈಯಲ್ಲಿ ಹಣ ಇರಬೇಕು. ಮುಂದೆಯೂ ಕೆಲ ಕಾಲ ನಗದು ಅವರ ಖಾತೆಗೆ ವರ್ಗಾವಣೆಯಾಗುತ್ತದೆ ಎಂಬ ಭರವಸೆ ಅವರಿಗೆ ಇರಬೇಕು. ಹೀಗೆ ಪರಿಸ್ಥಿತಿ ಸುರಕ್ಷಿತವಾದಾಗ ಅವರು ಹೊರಗೆ ಬಂದು, ಹಣಖರ್ಚು ಮಾಡುತ್ತಾರೆ. ಆರ್ಥಿಕತೆಯ ಪುನಚ್ಛೇತನ ಸಾಧ್ಯವಾಗುತ್ತದೆ.

ಇದೆಲ್ಲದರ ಅರ್ಥ ಸರ್ಕಾರಗಳು ಮೇಕ್ರೋ ಆರ್ಥಿಕ ಸ್ಥಿರತೆಯನ್ನು ನಿರ್ಲಕ್ಷಿಸ ಬೇಕು ಅಂತಅಲ್ಲ. ತಕ್ಷಣದ ಕೊರೊನಾ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ತಂದಿರುವ ಲಾಕ್‌ಡೌನ್ ಕೊನೆಗೊಳಿಸಬೇಕು. ಅದಕ್ಕೆ ಕ್ರಮತೆಗೆದು ಕೊಳ್ಳಬೇಕು. ಆ ಕ್ರಮಕ್ಕೆ ಪೂರಕವಾಗಿ ಒಂದು ಸ್ಪಷ್ಟವಾದ ಹೂಡಿಕೆಯ ಯೋಜನೆಯನ್ನೂ ರೂಪಿಸಬೇಕು. ಹಾಗೆ ಮಾಡುವುದರಿಂದ ಇಂದಿನ ಬಿಕ್ಕಟ್ಟು ಮುಂದೆ ದೊಡ್ಡದುರಂತವಾಗುವುದು ತಪ್ಪಬಹುದು. ಅದೊಂದೇ ನಮಗಿರುವ ಆಸೆ.

ಎಸ್ತರ್ ‌ಡಫ್ಲೋ ಮತ್ತುಅಭಿಜಿತ್ ಬ್ಯಾನರ್ಜಿ- 2019 ರಲ್ಲಿ ನೋಬೆಲ್ ಪಡೆದಿರುವ ಅರ್ಥಶಾಸ್ತ್ರಜ್ಞರು.


ಓದಿ: ಭಾರತಕ್ಕೆ ದೊಡ್ಡ ಉದ್ದೀಪನ ಪ್ಯಾಕೇಜ್ ಬೇಕು: ಅಭಿಜಿತ್ ಬ್ಯಾನರ್ಜಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....