Homeಕರೋನಾ ತಲ್ಲಣಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? - ಡಾ.ವಾಸು ಎಚ್‌.ವಿ

ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್‌.ವಿ

ಸದ್ಯಕ್ಕಂತೂ ಒಮ್ಮೆಯೂ ಕೊರೊನಾ ಬಾರದವರಿಗಿಂತ, ಕೊರೊನಾ ಬಂದು ಹೋದವರು ಸಾಪೇಕ್ಷವಾಗಿ ಕಡಿಮೆ ರಿಸ್ಕ್ ಹೊಂದಿರುತ್ತಾರೆಂದು ಖಚಿತವಾಗಿ ಹೇಳಬಹುದು. ಅದರಲ್ಲೂ ರೋಗಲಕ್ಷಣಗಳುಳ್ಳ ಕೊರೊನಾ ರೋಗ ಬಂದವರಿಗೆ ಸ್ವಲ್ಪ ಹೆಚ್ಚು ಕಾಲವೇ ಈ ರೋಗನಿರೋಧಕತೆ ಉಳಿದುಕೊಂಡಿರುತ್ತದೆ.

- Advertisement -
- Advertisement -

ಕೊರೊನಾ ಸೋಂಕು ಬಂದು ಗುಣವಾಗಿರುವ ನನಗೆ ಈ ಪ್ರಶ್ನೆ ಏಕೆ ಮುಖ್ಯ? ಒಂದು, ನಾಳೆಯಿಂದ ನಾನು ಎಲ್ಲಿ ಬೇಕಾದರೂ ಮತ್ತೆ ಕೊರೊನಾ ಬರುವ ಭಯ ಇಲ್ಲದೇ ಓಡಾಡಬಹುದಾ? ಇಲ್ಲವಾ ಎಂಬ ಕಾರಣಕ್ಕೆ. ಎರಡು, ಒಂದು ವೇಳೆ ನನಗೆ ಕೊರೊನಾ ಬಾರದೇ ಇರಬಹುದಾದರೂ ಬೇರೆಯವರಿಗೆ ಹರಡುವ ಸಾಧ್ಯತೆ ಇದೆಯೇ? ಇವೆರಡೂ ಸರಿಯಾಗಿ ಗೊತ್ತಾಗದಿದ್ದರೆ ಮುಂದಿನ ದಿನಗಳಲ್ಲಿ ವಿಪರೀತ ಮುನ್ನೆಚ್ಚರಿಕೆ ತೆಗೆದುಕೊಂಡೇ ಓಡಾಡಬೇಕಾಗುವ ಆತಂಕ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕ್ವಾರಂಟೈನ್ ಓದಿನ ಮೊಟ್ಟ ಮೊದಲ ಅಂಶ ಇದಾಗಿತ್ತು. ವಿಜ್ಞಾನಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿರುವುದಕ್ಕೆ ಕಾರಣಗಳಿವೆ. ಈ ಸದ್ಯ ಸಂಶೋಧನೆಯ ಹಂತದಲ್ಲಿರುವ ವ್ಯಾಕ್ಸೀನ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರಬಲ್ಲದು? ಒಂದು ವೇಳೆ ಅಂತಹ ವ್ಯಾಕ್ಸೀನ್ ಹೊರಬಂದರೂ ಒಂದೇ ಡೋಸ್ ಸಾಕಾಗುತ್ತಾ ಎಂಬ ಅಂಶಗಳನ್ನೂ, ಮಂದೆ ರೋಗನಿರೋಧಕತೆ (Herd immunity) ಸಾಧ್ಯವಾ? ಇವೆಲ್ಲಕ್ಕೆ ಉತ್ತರ ಸಿಗಬೇಕೆಂದರೆ ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಎಷ್ಟು ದಿನ ಬರುವುದಿಲ್ಲ? ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಬೇಕು.

ಯಾವುದೇ ವ್ಯಕ್ತಿಗೆ ಸೋಂಕು ರೋಗವೊಂದರ ವಿರುದ್ಧ ರೋಗನಿರೋಧಕತೆ ಬರುವುದು ಎರಡು ರೀತಿಯಲ್ಲಿ. ಒಂದು, ಸಹಜವಾಗಿ ಸೋಂಕು ಬಂದಾಗ ದೇಹವು ಅದನ್ನು ಎದುರಿಸಲು ಆಂಟಿಬಾಡಿ (ಪ್ರತಿಕಾಯ)ಗಳನ್ನು ಉತ್ಪಾದಿಸಿ, ಸೋಂಕುಕಾರಕವನ್ನು ದೇಹದಿಂದ ಹೊರಹಾಕುತ್ತದೆ; ನಂತರ ನೇರವಾಗಿ ಟಿ ಜೀವಕೋಶಗಳ ಮುಖಾಂತರವೂ ಎದುರಿಸುತ್ತದೆ. ತಕ್ಷಣದಲ್ಲೇ ಎದುರಿಸುವ ಪ್ರತಿಕಾಯ ಮತ್ತು ಜೀವಕೋಶಗಳಲ್ಲದೇ ನೆನಪಿನ ಜೀವಕೋಶಗಳ (Memory cells) ಮುಖಾಂತರ ದೀರ್ಘಕಾಲಿಕ ರೋಗನಿರೋಧಕತೆಯನ್ನೂ ದೇಹವು ಬೆಳೆಸಿಕೊಳ್ಳುತ್ತದೆ. ಅಂದರೆ ಮುಂದೆಂದಾದರೂ ಆ ಸೋಂಕುಕಾರಕ ದೇಹವನ್ನು ಪ್ರವೇಶಿಸಿದರೆ ಅದನ್ನು ಕೂಡಲೇ ಎದುರಿಸಲು ದೇಹವು ಸನ್ನದ್ಧವಾಗಿರುತ್ತದೆ. ಆದರೆ, ಒಮ್ಮೆ ಸೋಂಕುಕಾರಕ ದೇಹದೊಳಗೆ ಬಂದರೆ ಜೀವನವಿಡೀ ಅದನ್ನು ಎದುರಿಸಲು ಬೇಕಾದ ಶಕ್ತಿ ಎಲ್ಲಾ ರೋಗಗಳಿಗೂ ಒದಗಿಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಎರಡನೆಯದಾಗಿ, ಲಸಿಕೆ (ವ್ಯಾಕ್ಸೀನ್) ತೆಗೆದುಕೊಳ್ಳುವುದರಿಂದಲೂ ರೋಗನಿರೋಧಕ ಶಕ್ತಿ ಬರುತ್ತದೆ. ಕೆಲವು ರೋಗಗಳು ಒಮ್ಮೆ ಬಂದರೆ ಹೇಗೆ ಜೀವನವಿಡೀ ಮತ್ತೆ ಬರುವುದಿಲ್ಲವೋ, ಹಾಗೆ ಕೆಲವು ವ್ಯಾಕ್ಸೀನ್‌ಗಳನ್ನು ಒಮ್ಮೆ ತೆಗೆದುಕೊಂಡರೆ ಸಾಕು. ಸಿಡುಬು ರೋಗವನ್ನು ಪ್ರಪಂಚದಿಂದಲೇ ನಿರ್ಮೂಲನ ಮಾಡಿದ್ದು ಹಾಗೆ. ಒಮ್ಮೆ ಮಾತ್ರ ಕೊಡುವ ವ್ಯಾಕ್ಸೀನ್‌ನಿಂದ. ಆದರೆ, ಕೆಲವಕ್ಕೆ ಒಂದಕ್ಕಿಂತ ಹೆಚ್ಚು ಸಾರಿ ವ್ಯಾಕ್ಸೀನ್ ಬೇಕಾಗುತ್ತದೆ. ದಡಾರ, ಟೆಟನಸ್ ಇತ್ಯಾದಿ ರೋಗಗಳನ್ನು ಎದುರಿಸುತ್ತಿರುವುದೂ ಹಾಗೆ.

ಇನ್ನು ಈಗಿನ ಕೋವಿಡ್-19 ರೋಗದ ವಿಚಾರಕ್ಕೆ ಬರೋಣ. ಈ ಕೊರೊನಾ ಸೋಂಕು ತಗುಲಿದ ನಂತರವೂ ಪ್ರತಿಕಾಯಗಳು (ಆಂಟಿಬಾಡಿಗಳು) ವೃದ್ಧಿಯಾಗುತ್ತವೆ ಎಂಬ ಬಗ್ಗೆ ಸಂದೇಹವೇ ಇಲ್ಲ. ಆದರೆ, ಅದು ಎಷ್ಟು ಕಾಲ ಇರುತ್ತದೆ, ಇದ್ದರೂ ಮತ್ತೆ ಸೋಂಕು ಬರದ ಹಾಗೆ ತಡೆಯುತ್ತದೆಯಾ, ಒಮ್ಮೆ ಕೊರೊನಾ ಸೋಂಕು ತಗುಲಿ ಗುಣವಾದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದು ಒಂದೇ ರೀತಿ ಇರುತ್ತದೆಯಾ ಎಂಬ ಬಗ್ಗೆ ಮಾತ್ರ ಇದುವರೆಗೆ ಆಗಿರುವ ಸಂಶೋಧನೆಗಳು ಭಿನ್ನ ಭಿನ್ನ ತೀರ್ಮಾನಗಳನ್ನು ಮುಂದಿಟ್ಟಿವೆ. 40 ದಿನಗಳಿಂದ 4 ತಿಂಗಳವರೆಗೆ ಈ ಪ್ರತಿಕಾಯಗಳು ಮತ್ತೆ ಕೊರೊನಾ ಸೋಂಕು ಬಾರದಂತೆ ತಡೆಯುತ್ತವೆ ಎಂದು ಬೇರೆ ಬೇರೆ ಸಂಶೋಧನೆಗಳು ತಿಳಿಸಿವೆ. ಕೋತಿಗಳ ಮೇಲೆ ಮತ್ತು ಪ್ರಯೋಗಾಲಯಗಳಲ್ಲಿ ನಡೆದ ಹಲವು ಸಂಶೋಧನೆಗಳೂ ಇದನ್ನು ಖಚಿತಪಡಿಸಿವೆ. ತೀವ್ರ ಗುಣಲಕ್ಷಣಗಳನ್ನು ಹೊಂದಿದ್ದವರಲ್ಲಿ ಹೆಚ್ಚಿನ ರೋಗನಿರೋಧಕತೆಯ ಅಂಶ ಕಂಡುಬಂದಿದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಆದರೆ ಆಂಟಿಬಾಡಿಗಳು ಹೆಚ್ಚಿದ್ದರೆ ಹೆಚ್ಚು ರೋಗನಿರೋಧಕತೆಯೆಂದೂ, ಕಡಿಮೆ ಇದ್ದರೆ ಮತ್ತೆ ಸೋಂಕು ಬರುವ ಸಾಧ್ಯತೆ ಹೆಚ್ಚು ಎಂದೇನೂ ಅಲ್ಲ. ಜೊತೆಗೆ ರೋಗನಿರೋಧಕತೆ ಪ್ರತಿಕಾಯಗಳ ಮುಖಾಂತರ ಮಾತ್ರವಲ್ಲದೇ ಟಿ ಜೀವಕೋಶಗಳಿಂದಲೂ ಉಂಟಾಗುತ್ತದೆ ಎಂಬುದನ್ನು ಈಗಾಗಲೇ ಮೇಲೆ ಹೇಳಲಾಗಿದೆ. ಹಾಗೆಯೇ ಕೊರೊನಾ ವಿರುದ್ಧ ಉತ್ಪತ್ತಿಯಾಗುವ ಎಲ್ಲಾ ಪ್ರತಿಕಾಯಗಳೂ ಕೊರೊನಾ ವಿರುದ್ಧ ರೋಗನಿರೋಧಕತೆಯನ್ನು ಖಾತರಿಗೊಳಿಸುವುದಿಲ್ಲ. ನಿರ್ದಿಷ್ಟವಾಗಿ ಕೊರೊನಾ ವೈರಸ್‌ಅನ್ನು ಕೊಲ್ಲುವ neutralising antibodies ಇವೆಯಾ ಎನ್ನುವುದು ಮುಖ್ಯ.

ಈ neutralising antibodies ಸಾರ್ಸ್ ರೋಗ ಬಂದವರ ದೇಹಗಳಲ್ಲಿ (ಈ ಕೋವಿಡ್-19 ಎಂಬುದು ಸಾರ್ಸ್-2) ಸುಮಾರು 2ರಿಂದ 3 ವರ್ಷಗಳ ಕಾಲ ಇರುತ್ತಿತ್ತು. ಇನ್ನೊಂದು ಕೊರೊನಾ ವೈರಸ್ ಆದ ಮೆರ್ಸ್ (MERS-CoV, the virus that caused Middle East respiratory syndrome)ನಲ್ಲಿ ಸುಮಾರು ಮೂರು ವರ್ಷಗಳ ಕಾಲ ಇರುತ್ತಿತ್ತು. ಸಾರ್ಸ್ 2004ರ ನಂತರ ಮತ್ತೆ ಬಂದಿಲ್ಲ ಮತ್ತು ಮೆರ್ಸ್ ರೋಗವು ಎಲ್ಲೋ ಒಂದೊಂದು ಕಡೆ ಕಾಣುತ್ತಿದೆ ಎಂಬುದನ್ನು ಗಮನಿಸಬೇಕು.

ಒಮ್ಮೆ ಕೊರೊನಾ (ಕೊರೊನಾ ಎಂದು ಹೇಳಿದಾಗಲೆಲ್ಲಾ ಈಗ ಚರ್ಚೆಯಲ್ಲಿರುವ ಕೊರೊನಾ-2 ಎಂದು ಭಾವಿಸಬೇಕು, ಇನ್ನೂ ಬೇರೆ ಬೇರೆ ಕೊರೊನಾ ವೈರಸ್‌ಗಳೂ ಇವೆ) ಬಂದವರಲ್ಲಿ ಮತ್ತೆ ಇನ್ನೊಮ್ಮೆ ಸೋಂಕು ಕಾಣಿಸಿಕೊಂಡ ಎಷ್ಟು ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ? ಖಚಿತವಾಗಿ ಹೇಳಬಹುದಾದ ಒಂದೂ ಪ್ರಕರಣ ಇಲ್ಲ. ಅದರ ಅರ್ಥ ಕೊರೊನಾ ಪಾಸಿಟಿವ್ ಆಗಿದ್ದವರು ಗುಣವಾಗಿ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಮತ್ತೆ ಪಾಸಿಟಿವ್ ಬಂದಿಲ್ಲ ಎಂದಲ್ಲ. ಆದರೆ ಅಂತಹ ಪ್ರಕರಣಗಳಲ್ಲಿ ಪರೀಕ್ಷೆಗಳ ಕುರಿತೇ ಸಂದೇಹಗಳು ವ್ಯಕ್ತವಾಗಿವೆ ಮತ್ತು ಸುಪ್ತವಾದ ಅತೀ ಸಣ್ಣ ಪ್ರಮಾಣದ ಸೋಂಕು ಅವರಲ್ಲಿ ಇದ್ದೇ ಇದ್ದು, ಅದೇ ಮತ್ತೆ ಪಾಸಿಟಿವ್ ರಿಪೋರ್ಟ್‌ಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಮತ್ತೆ ಬಂತಂತೆ, ಇಲ್ಲಿ ಬಂತಂತೆ ಎಂಬ ಸುದ್ದಿಗಳ ಹೊರತಾಗಿ, ಖಚಿತವಾಗಿ ದಾಖಲಿಸಲಾದ ಕೊರೊನಾ ಮರುಸೋಂಕಿನ ಉದಾಹರಣೆಗಳು ಇಲ್ಲವೆಂದೇ ಸದ್ಯಕ್ಕೆ ಅಂದುಕೊಳ್ಳಬೇಕು. ನೆಗೆಟಿವ್ ಆದವರಲ್ಲಿ ನಂತರ ಪಾಸಿಟಿವ್ ಬಂತು ಎಂದಾಕ್ಷಣ ಅವರಿಗೆ ಕೊರೊನಾ ರೋಗ ಬಂದಿದೆ ಎಂದರ್ಥವಲ್ಲ. ಅವರ ದೇಹದಲ್ಲಿ ವೈರಸ್‌ನ ಕೆಲವು ಅಂಶ ಇನ್ನೂ ಉಳಿದುಕೊಂಡಿತ್ತು ಎಂದು ಮಾತ್ರ ಅರ್ಥ.

ಆದರೆ, ವಿಶ್ವ ಆರೋಗ್ಯ ಸಂಸ್ಥೆಯು ಒಮ್ಮೆ ಕೊರೊನಾ ಬಂದು ಹೋದವರ ದೇಹದಲ್ಲಿ ಪ್ರತಿಕಾಯಗಳು ಇದ್ದ ಮಾತ್ರಕ್ಕೆ ಅದನ್ನು ರೋಗನಿರೋಧಕತೆಯ ಸರ್ಟಿಫಿಕೇಟ್/ಪಾಸ್‌ಪೋರ್ಟ್ ಎಂದೇನೂ ತಿಳಿಯಬೇಕಿಲ್ಲ ಎಂದೇ (ಏಪ್ರಿಲ್ 24ರಂದು ಅಪ್‌ಲೋಡ್ ಮಾಡಲಾದ ಪೇಜ್) ಹೇಳುತ್ತಿದೆ. ಹಾಗಾದರೆ ಇದರ ಅರ್ಥವೇನು? ಇದುವರೆಗೆ ಪತ್ತೆಯಾದ ಮರುಸೋಂಕಿನ ಪ್ರಕರಣಗಳು ಸಂದೇಹಾಸ್ಪದ ಎಂದು ಹೇಳುತ್ತಿರುವ ವಿಜ್ಞಾನ ಲೋಕ ಹೀಗೇಕೆ ಹೇಳುತ್ತಿದೆ? ಇವೆರಡೂ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಂಟಿಬಾಡಿ ಇದ್ದ ಮಾತ್ರಕ್ಕೆ ರೋಗನಿರೋಧಕತೆ ಇದೆ, ಅವರು ಎಲ್ಲಿಗೆ ಬೇಕಾದರೂ ಹೇಗೆ ಬೇಕಾದರೂ ಓಡಾಡಬಹುದು ಎಂದು ಹೇಳಲಾಗದು ಎಂಬುದು ಬೇರೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಪಾಸಿಟಿವ್ ಆದವರಲ್ಲಿ ಮತ್ತೆ ಕೊರೊನಾ ಸೋಂಕು ಬಂದ ಖಚಿತ ಉದಾಹರಣೆ ಇಲ್ಲ ಎಂಬುದು ಬೇರೆ ಅಷ್ಟೇ.

ಈ ಕೊರೊನಾ-2 ವೈರಸ್‌ನ ಸೋಂಕಿನ ಕುರಿತು ಆದಷ್ಟು ಸಂಶೋಧನೆ ಇನ್ನಾವುದರ ಮೇಲೂ ಆಗಿಲ್ಲ ಎಂದು ಕೆಲವರು ಅಂದಾಜಿಸಿದ್ದಾರೆ. ಹಾಗಿದ್ದೂ, ಅಂತಿಮ ತೀರ್ಮಾನಗಳಿಗೆ ಇನ್ನೂ ಬರಲಾಗಿಲ್ಲ. ಬಹುಶಃ ಕೆಲವು ವಿಚಾರಗಳಲ್ಲಿ ಖಚಿತ ತೀರ್ಮಾನಕ್ಕೆ ಬರಲು ಒಂದು ವರ್ಷವೂ ಬೇಕಾಗಬಹುದೇನೋ.

ಆದರೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಗಾಬರಿಗೊಳಿಸುತ್ತವೆ. ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕಗಳಲ್ಲೇ ಗೊಂದಲಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಸೆನ್ಸೇಷನಲಿಸಂಗಾಗಿ ಸುಳ್ಳನ್ನು ಬಿತ್ತರಿಸಲು ಹಿಂಜರಿಯದ ಮಾಧ್ಯಮಗಳನ್ನು ಕೇಳಬೇಕೇ? ಒಂದು ಉದಾಹರಣೆ ಕೊಡುವುದಾದರೆ ವಾಷಿಂಗ್ಟನ್ ಪೋಸ್ಟ್ Can you get coronavirus twice? Doctors are unsure, even as anecdotal reports mount ಎಂಬ ಶೀರ್ಷಿಕೆಯಡಿ ವರದಿಯೊಂದನ್ನು ಪ್ರಕಟಿಸಿತು. ಅದನ್ನೇ ಆಧರಿಸಿ ಭಾರತದ ಲೈವ್‌ಮಿಂಟ್ COVID-19 reinfection cases increase, doctors clueless ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿತು. ಮರುಸೋಂಕಿನ ಕೇಸುಗಳ ಬಗ್ಗೆ ವೈದ್ಯರುಗಳಿಗೆ ಖಾತರಿಯಿಲ್ಲ ಎಂಬುದಕ್ಕೂ, ವೈದ್ಯರುಗಳಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂಬುದಕ್ಕೂ ದೊಡ್ಡ ವ್ಯತ್ಯಾಸವುಂಟಾಗುತ್ತದೆ. ವರದಿಯನ್ನು ತೆರೆದು ನೋಡಿದರೆ ಅದರಲ್ಲಿ ಈ ಮರುಸೋಂಕಿನ ಪ್ರಕರಣವು ದಾಖಲೀಕೃತ ಪ್ರಕರಣವಲ್ಲವೆಂದೂ, ವೈದ್ಯರುಗಳು ಅದನ್ನು ಒಪ್ಪಿಲ್ಲವೆಂದೂ ಬರೆಯಲಾಗಿದೆ. ಆದರೆ, ಎರಡನೆಯ ಬಾರಿ ಬರುವುದೇ ಇಲ್ಲ ಎಂದು ಅಂತಿಮ ಷರಾವನ್ನೇನೂ ತಜ್ಞರು ಇದುವರೆಗೆ ಬರೆದಿಲ್ಲ.

ಅಂತಿಮವಾಗಿ: ಒಮ್ಮೆ ಕೊರೊನಾ ಸೋಂಕು ತಗುಲಿದವರಲ್ಲಿ ರೋಗ ನಿರೋಧಕತೆ ಬೆಳೆಯುತ್ತದೆ. ಅದರ ಪ್ರಮಾಣ, ಅವಧಿಯ ಕುರಿತು ಇನ್ನೂ ಖಚಿತ ತೀರ್ಮಾನಗಳಿಗೆ ಬರುವುದು ಕಷ್ಟ. ಸಾಮಾನ್ಯ ಎಚ್ಚರಿಕೆಗಳನ್ನು ಮುಂದುವರೆಸುವುದೇ ಸೂಕ್ತ. ಆದರೆ ಸದ್ಯಕ್ಕಂತೂ ಒಮ್ಮೆಯೂ ಕೊರೊನಾ ಬಾರದವರಿಗಿಂತ, ಕೊರೊನಾ ಬಂದು ಹೋದವರು ಸಾಪೇಕ್ಷವಾಗಿ ಕಡಿಮೆ ರಿಸ್ಕ್ ಹೊಂದಿರುತ್ತಾರೆಂದು ಖಚಿತವಾಗಿ ಹೇಳಬಹುದು. ಅದರಲ್ಲೂ ರೋಗಲಕ್ಷಣಗಳುಳ್ಳ ಕೊರೊನಾ ರೋಗ ಬಂದವರಿಗೆ ಸ್ವಲ್ಪ ಹೆಚ್ಚು ಕಾಲವೇ ಈ ರೋಗನಿರೋಧಕತೆ ಉಳಿದುಕೊಂಡಿರುತ್ತದೆ. ಅಂತಹವರಿಗೆ ಈ ಸೀಸನ್ನಿನಲ್ಲಂತೂ ಇನ್ನೊಮ್ಮೆ ಕೊರೊನಾ ಬರುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಒಂದು ವೇಳೆ ವೈರಸ್‌ನಲ್ಲೇ ದೊಡ್ಡ ಬದಲಾವಣೆ (ಮ್ಯುಟೇಷನ್) ಆಗಿ, ಈಗ ಬಂದಿರುವ ರೋಗನಿರೋಧಕತೆಯೇ ಅಪ್ರಯೋಜಕವಾಗದ ಹೊರತು.

  • ಡಾ.ವಾಸು ಎಚ್. ವಿ, ವೈದ್ಯರು, ಸಂಪಾದಕರು ನ್ಯಾಯಪಥ ಪತ್ರಿಕೆ.

References:

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...