Homeಮುಖಪುಟ"ವಿಶ್ವಾಸಾರ್ಹ" ಪತ್ರಿಕೆಯೊಳಗೆ ನಡೆಯುತ್ತಿರೋದು ಕಾಸ್ಟ್ ಕಟಿಂಗೊ? ಕ್ಯಾಸ್ಟ್ ಕಟಿಂಗೊ?

“ವಿಶ್ವಾಸಾರ್ಹ” ಪತ್ರಿಕೆಯೊಳಗೆ ನಡೆಯುತ್ತಿರೋದು ಕಾಸ್ಟ್ ಕಟಿಂಗೊ? ಕ್ಯಾಸ್ಟ್ ಕಟಿಂಗೊ?

- Advertisement -
- Advertisement -

`ವಿಶ್ವಾಸಾರ್ಹ’ ಬ್ರ್ಯಾಂಡಿನ ಪತ್ರಿಕೆಯ ವಿಶ್ವಾಸವೇ ಕುಸಿದುಬೀಳುತ್ತಿರುವ ಆಘಾತಕಾರಿ ಸುದ್ದಿಯೊಂದು `ನಂ.75, ಎಂ.ಜಿ.ರೋಡ್’ ಬಿಲ್ಡಿಂಗಿನಿಂದ ಹೊರಬರುತ್ತಿದೆ. ಹೌದು, ಪತ್ರಿಕಾರಂಗವೇ ಮೀಡಿಯೋದ್ಯಮವಾದ ಈ ಕಾಲಘಟ್ಟದಲ್ಲಿ ಕಿಂಚಿತ್ತು ವಿಶ್ವಾಸ ಉಳಿಸಿಕೊಂಡಿರುವ ಪತ್ರಿಕೆಯೆಂದರೆ ಪ್ರಜಾವಾಣಿ. ಆದರೆ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಇದೀಗ ಅಲ್ಲಿ ನಡೆಯುತ್ತಿರುವ `ಟರ್ಮಿನೇಟಿಂಗ್’ ಧಾವಂತ ನೋಡಿದರೆ, ಹಲವು ಅನುಮಾನಗಳು ಮೂಡುತ್ತಿವೆ. ದೇಶದ ಆರ್ಥಿಕ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಕೂತಿದೆಯೆಂದರೆ ಪತ್ರಿಕಾ ಕಚೇರಿಗಳಿರಲಿ, ಎಂಎನ್‍ಸಿ ಕಂಪನಿಗಳೇ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಮುಲಾಜಿಲ್ಲದೆ ಮನೆಗೆ ಕಳಿಸುತ್ತಿವೆ. ಕನ್ನಡದ ಅದೆಷ್ಟೊ ಪತ್ರಿಕೆ, ಟಿವಿ ಚಾನೆಲ್‍ಗಳು ತಮ್ಮ ಸಿಬ್ಬಂದಿಗಳ ಜೊತೆ ನಿರ್ದಯವಾಗಿ ನಡೆದುಕೊಂಡಿವೆ. ಅಂತದ್ದರಲ್ಲಿ ಪ್ರಜಾವಾಣಿ ಪತ್ರಿಕೆ ತನ್ನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ನೌಕರರನ್ನು ಕಿತ್ತುಹಾಕಿದರೆ ಏನು ತಪ್ಪು?

ವಿಷಯ ಇಷ್ಟು ಸರಳವಾಗಿದ್ದಿದ್ದರೆ, ಇಂತದ್ದೊಂದು ಪ್ರಶ್ನೆಗೆ ಬೆಲೆ ಇರುತ್ತಿತ್ತು. ಆದರೆ, ಒಂದಾನೊಂದು ಕಾಲದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಸಿಗುವುದೆಂದರೆ ಸರ್ಕಾರಿ ನೌಕರಿ ಸಿಕ್ಕಷ್ಟೇ `ಜಾಬ್ ಸೆಕ್ಯೂರಿಟಿ’ ಭಾವನೆ ಇರುತ್ತಿದ್ದ ಸಂಸ್ಥೆ ಅದು. ಈಗ ಅದೇ ಸಂಸ್ಥೆ ಕಾಸ್ಟ್ ಕಟ್ಟಿಂಗ್ ಹೆಸರಲ್ಲಿ ತನ್ನ ಸಿಬ್ಬಂದಿಗಳನ್ನು ನಿವಾರಿಸಿಕೊಳ್ಳಲು ಬಳಸುತ್ತಿರುವ ರೀತಿಯೇ ಆಶ್ಚರ್ಯಕರವಾಗಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಸಾಮಾನ್ಯವಾಗಿ ಪ್ರಜಾವಾಣಿ ಪತ್ರಿಕೆ ತನ್ನ ಸಿಬ್ಬಂದಿಗಳನ್ನು ಕೆಲಸದಿಂದ ಕೈಬಿಡಬೇಕಾದ ಸಂದರ್ಭ ಬಂದಾಗ ಗ್ರೆಡೇಶನ್ ನಿಯಮ ಪಾಲಿಸುತ್ತಿತ್ತು. ಅಂದರೆ ಸಿಬ್ಬಂದಿಯ ಕಾರ್ಯದಕ್ಷತೆ, ಸಂಸ್ಥೆಗೆ ಅವರಿಂದ ಆಗುತ್ತಿರುವ ಅನುಕೂಲದ ಆಧಾರದಲ್ಲಿ ಗ್ರೇಡ್-1, ಗ್ರೇಡ್-2, ಗ್ರೇಡ್-3, ಗ್ರೇಡ್-4 ಎಂದು ವರ್ಗೀಕರಿಸಲಾಗುತ್ತಿತ್ತು. ಗ್ರೇಡ್-4ರಲ್ಲಿರುತ್ತಿದ್ದ ಕಳಪೆ ಸಾಮಥ್ರ್ಯದ ಸಿಬ್ಬಂದಿಗಳನ್ನು ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ನೀಡಿಯೇ, ಅಂದರೆ ಒಂದೆರಡು ತಿಂಗಳ ನೋಟಿಸ್ ಕೊಟ್ಟು, ಮೂರ್ನಾಲ್ಕು ತಿಂಗಳ ಸಂಬಳವನ್ನು ಒಟ್ಟಿಗೇ ಕೊಟ್ಟು ಕೆಲಸದಿಂದ ತೆಗೆದುಹಾಕಲಾಗುತ್ತಿತ್ತು. ತೀರಾ ಅನಿವಾರ್ಯವೆನಿಸಿದರೆ ಗ್ರೇಡ್-3 ಸಿಬ್ಬಂದಿಗಳನ್ನು ತೆಗೆದುಹಾಕುವ ಸಂಪ್ರದಾಯವಿತ್ತು. ಆದರೆ ಗ್ರೇಡ್-1, ಗ್ರೇಡ್-2 ದಕ್ಷತೆಯ ಸಿಬ್ಬಂದಿಗಳನ್ನು ಸಂಸ್ಥೆ ಗೌರವಯುತವಾಗಿಯೇ ಮುಂದುವರೆಸುತ್ತಿತ್ತು. ಪ್ರಜಾವಾಣಿ ಪತ್ರಿಕೆಯ ನೌಕರಿಗೆ ಸರ್ಕಾರಿ ನೌಕರಿಯಷ್ಟೆ ಘನತೆ ಬಂದಿದ್ದೇ ಇಂತಹ ನಡೆಗಳಿಂದ.

ಇತ್ತೀಚಿನ ಕೆಲ ವರ್ಷಗಳಲ್ಲಿ ಪ್ರಜಾವಾಣಿ ಬಳಗ ಅಂತಹ ಗ್ರೆಡೇಷನ್ ವ್ಯವಸ್ಥೆಯಿಂದ ದೂರ ಸರಿದಿತ್ತಾದರೂ ಕೆಲಸಗಾರರನ್ನು ತೆಗೆಯುವಾಗ ದಕ್ಷತೆ, ಅನುಭವ, ಅವರ ಸೇವೆಗಳಿಗೆ ಬೆಲೆ ಕೊಡುವ ಪರಂಪರೆಯನ್ನು ಕಾಯ್ದುಕೊಂಡು ಬಂದಿತ್ತು. ಆದರೆ ಇದೀಗ ಕಾಸ್ಟ್ ಕಟಿಂಗ್ ನೆಪದಲ್ಲಿ ತೀರಾ ಗ್ರೇಡ್-1ಗೆ ಒಳಪಡಬಹುದಾದ ಹಿರಿಯ ಸಿಬ್ಬಂದಿಗಳನ್ನೇ ತೆಗೆದುಹಾಕಲು ಸಂಸ್ಥೆ ಮುಂದಾಗಿರೋದು ನಿಜಕ್ಕೂ ಆಘಾತಕಾರಿಯಾಗಿದೆ. ಅಷ್ಟಕ್ಕೂ ಪ್ರಜಾವಾಣಿ ಈಗ ಮನೆಗೆ ಕಳಿಸಲು ಹೊರಟಿರೋದು ಕೇಶವ ಜಿಂಗಾಡೆ, ಹೊನಕೆರೆ ನಂಜುಂಡೇಗೌಡ, ಸಿದ್ದೇಗೌಡ, ಷಣ್ಮುಖಪ್ಪ, ಶೈಲಜಾ ಹೂಗಾರ್ ಮೊದಲಾದ ಹಿರಿಯ ಉಪಸಂಪಾದಕರುಗಳನ್ನು!

ಈ ಒಬ್ಬೊಬ್ಬರು ಏನಿಲ್ಲವೆಂದರು ಹತ್ತಾರು ವರ್ಷ ಪತ್ರಿಕೆಗಾಗಿ ದುಡಿದಿದ್ದಾರೆ. ಪತ್ರಿಕೆಯೇ ಅವರನ್ನು ಬ್ರ್ಯಾಂಡ್ ಮಾಡಿ ಬೆಳೆಸುತ್ತಾ ಬಂದಿದೆ. ಈಗ ಏಕಾಏಕಿ ಕಾಸ್ಟ್ ಕಟಿಂಗ್ ಹೆಸರಲ್ಲಿ ಇಂತಹ ಹಿರಿಯರನ್ನೆಲ್ಲ ಮನೆಗೆ ಕಳಿಸಲು ಮುಂದಾಗಿರೋದು ಪತ್ರಿಕೆ ಇಷ್ಟುದಿನ ನಡೆದುಬಂದ ಹಾದಿಗೆ ತಕ್ಕುನಾದುದಲ್ಲವೆಂಬುದು ಒಟ್ಟು ಪತ್ರಕರ್ತ ವಲಯದ ಒಳಗಿನ ಮಾತು. ಪತ್ರಿಕಾ ಸಂಸ್ಥೆಗಳಲ್ಲೂ ಕಾರ್ಪೊರೇಟ್ ಶೈಲಿಯ ಸಿಇಒ ಹುದ್ದೆಗಳು ಸೃಷ್ಟಿಯಾಗಿ, ಅಲ್ಲಿಗೆ ಎಂಬಿಎ ಮ್ಯಾನೇಜ್‍ಮೆಂಟಿಗರು ಕಾಲಿರಿಸಿದಾಗಿನಿಂದ ಪತ್ರಿಕೋದ್ಯಮ ಇಂಥಾ ವಿಚಾರಗಳಲ್ಲಿ ತನ್ನ ಸ್ಪಂದನೆಯನ್ನು ಕಳೆದುಕೊಳ್ಳುತ್ತಾ ಬಂದಿದೆ. ಪ್ರಜಾವಾಣಿ ಸಂಸ್ಥೆಯ ಈ ನಡೆಗೂ ಇಂತಹ ಶುಷ್ಕ ಆಲೋಚನೆಗಳೇ ಕಾರಣ ಎನ್ನಲಾಗುತ್ತಿದೆ. ಅಲ್ಲದೇ, ಸಂಸ್ಥೆ ಮತ್ತು ಆಡಳಿತ ಮಂಡಳಿಗೆ ಈಗಿರುವ ಆರ್ಥಿಕ ಮುಗ್ಗಟ್ಟಿನ ಲಾಭ ಪಡೆಯುತ್ತಿರುವ ನಿರ್ದಿಷ್ಟ `ಜಾತಿ’ ಕೂಟವೊಂದು, ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ತಮಗಾಗದವರನ್ನು ಟಾರ್ಗೆಟ್ ಮಾಡಿ ಸಂಸ್ಥೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಹಾಗೆ ನೋಡಿದರೆ, ಕೆ.ಎನ್.ಗುರುಸ್ವಾಮಿಯವರು ಪ್ರಜಾವಾಣಿ ಪತ್ರಿಕೆಯನ್ನು ಹುಟ್ಟುಹಾಕಿದ್ದೇ, ಒಂದು `ಮೇಲ್ಜಾತಿ’ಯ ಕೈಯಲ್ಲೇ ಇದ್ದ ಪತ್ರಿಕೋದ್ಯಮದಲ್ಲಿ `ಇತರರ’ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ. ಆದಾಗ್ಯೂ ಅದು `ಮೇಲ್ಜಾತಿ’ಯ ವೈರಸ್‍ನಿಂದ ಸಣ್ಣಗೆ ಬಳಲುತ್ತಲೇ ಬಂದಿತ್ತು. ಅದೀಗ ವಿರಾಟ್ ರೂಪದಲ್ಲಿ ಉಲ್ಬಣಿಸಿ ಕನ್ನಡಿಗರ ವಿಶ್ವಾಸಾರ್ಹ ಪತ್ರಿಕೆಯ ಘನತೆಯನ್ನೇ ಮಣ್ಣುಪಾಲು ಮಾಡಲಿದೆಯೇನೊ ಎಂಬ ಆತಂಕ ಶುರುವಾಗಿದೆ. ಪತ್ರಿಕೆ ತನ್ನ ಮೂಲ ಬದ್ಧತೆಯಿಂದ ಸಂಪೂರ್ಣ ವಿಮುಖವಾಗದಂತೆ ನೋಡಿಕೊಂಡು ಬಂದ, ಸಂಸ್ಥೆಯ ಮುಖ್ಯಸ್ಥರು ಇತ್ತ ತುರ್ತು ಗಮನಹರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...