Homeಮುಖಪುಟಸೃಜನಾತ್ಮಕ ಚಿಂತನೆ : ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹೌದು ಸಾಧ್ಯ

ಸೃಜನಾತ್ಮಕ ಚಿಂತನೆ : ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹೌದು ಸಾಧ್ಯ

- Advertisement -
- Advertisement -

ಜೀವನ ಕಲೆಗಳು ಅಂಕಣ: 9

ಸೃಜನಾತ್ಮಕ ಚಿಂತನೆ ಎಂದರೆ ಸಮಸ್ಯೆಯನ್ನು ಹೊಸ ದೃಷ್ಟಿಕೋನದಿಂದ ವೀಕ್ಷಿಸಿ, ಪಾರಂಪರಿಕವಲ್ಲದ ಪರಿಹಾರ ಸೂಚಿಸುವ ಪ್ರಯತ್ನ. ಇದು ಪ್ರಾರಂಭದಲ್ಲಿ ವಿಚಲಿತಗೊಳಿಸಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮುಕ್ತ ಆಲೋಚನೆ (ಓಪನ್ ಮೈಂಡ್). ಸೃಜನಾತ್ಮಕ ಚಿಂತನೆಯನ್ನು ವ್ಯವಸ್ಥಿತ ಅಥವಾ ಅವ್ಯಸ್ಥಿತ ಪ್ರಕ್ರಿಯೆಯಿಂದ ಚಾಲನೆಗೆ ತರಬಹುದು. ಚಿಂತನೆ ಸಹಜವಾಗಿ ಬಂದಿರಬಹುದು ಅಥವಾ ಅಕಸ್ಮಿಕವೂ ಆಗಿರಬಹುದು. ಯಾವುದೇ ಪ್ರಯತ್ನವಿಲ್ಲದೆ ಸೃಜನಾತ್ಮಕ ಚಿಂತನೆ ತಾನಾಗಿಯೇ ನಡೆಯುತ್ತದೆ ಆದರೆ ಆಕಸ್ಮಿಕವಾಗಿ. ಪ್ರಯತ್ನಪೂರ್ವಕ ಸೃಜನಾತ್ಮಕ ಚಿಂತನೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದರೆ ಇದ್ದಕ್ಕಿದಂತೆ ಹೊಳೆದ ಉಪಾಯ ಕೂಡಲೇ ಮಹತ್ತರ ಬದಲಾವಣೆ ತರಬಲ್ಲದು. ಇದನ್ನು ಚೌಕಟ್ಟಿನ ಹೊರಗಿನ ಚಿಂತನೆ (ಥಿಂಕಿಂಗ್ ಔಟ್ ಆಫ್ ದಿ ಬಾಕ್ಸ್) ಎನ್ನುತ್ತಾರೆ.
ಕೆಲವು ವಿಶೇಷ ಉಪಾಯಗಳಿಂದ ಈ ಸೃಜನಾತ್ಮಕ ಚಿಂತನೆ ಬೇಗಲೇ ಆಗುವಂತೆ ಮಾಡಬಹುದು. ಇದರಿಂದ ಹೊಸ ರೀತಿಯ ಯೋಚನೆಗಳು ಏಕ ಕಾಲಕ್ಕೆ ಬಂದು ಅಥವಾ ಒಂದರಿಂದ ಒಂದು ಹುಟ್ಟಿಕೊಂಡು ಅಥವಾ ಒಂದಕ್ಕೊಂದು ಸೇರಿ, ಹೊಸ ರೀತಿಯ ಉಪಾಯ ಅಥವಾ ಪ್ರಕ್ರಿಯೆಗೆ ದಾರಿ ಮಾಡಿಕೊಡಬಹುದು. ಇದನ್ನು ಬ್ರೇನ್ ಸ್ಟಾರ್ಮಿಂಗ್ ಎನ್ನುತ್ತಾರೆ. ಒಂದಕ್ಕಿಂತ ಹೆಚ್ಚು ತಲೆಗಳು ಒಟ್ಟಿಗೆ ಕೆಲಸ ಮಾಡಿದಾಗ ಪರಿಣಾಮ ಇನ್ನೂ ಹೆಚ್ಚುತ್ತದೆ.

ನಮ್ಮ ಎಡ ಬದಿಯ ಮೆದುಳು ವ್ಯವಸ್ಥಿತ ಸಾಧಾರಣ ಯೋಚನೆಗಳಿಗೂ (ತರ್ಕ, ಗಣಿತ, ಯಾಂತ್ರಿಕ ಕೆಲಸ) ಮತ್ತು ಬಲಬದಿಯ ಮೆದುಳು ಸೃಜನಾತ್ಮಕ ಚಿಂತನೆಗೂ ಬಳಕೆಯಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಇತ್ತೀಚಿನ ವೈದ್ಯಕೀಯ ಪರಿಶೋಧನೆಯ ವರದಿ ಪ್ರಕಾರ ಎರಡೂ ಬದಿಯ ಮೆದುಳು ಏಕ ಕಾಲಕ್ಕೆ, ಒಂದೇ ಸಂಕೀರ್ಣ ವಿಚಾರದ ಬಗ್ಗೆ ಕೆಲಸ ಮಾಡುತ್ತವೆ ಎಂಬುದು ಸಿದ್ಧವಾಗಿದೆ. ಆದ್ದರಿಂದ ಎಡ-ಬಲ ಮೆದುಳಿನ ಪ್ರವೃತ್ತಿ ಎನ್ನುವುದು ತಪ್ಪು ಪರಿಕಲ್ಪನೆ. ಯಾವುದೋ ಒಂದು ಯೋಚನೆಯ ಮೇಲೆ ತೀರಾ ಮಗ್ನರಾಗಿ ಏನೂ ತೋಚದೇ ಇದ್ದಾಗ, ಮೆದುಳಿನ ಮೇಲಿನ ಒತ್ತಡವನ್ನು ತಗ್ಗಿಸಿ, ಮನಸ್ಸನ್ನು ಬೇರೆಡೆಗೆ ಹೊರಳಿಸಿದಾಗ, ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಥಟ್ಟನೇ ಹೊಳೆಯುವ ಸಾಧ್ಯತೆ ಹೆಚ್ಚು. ಇದನ್ನು ಕೆಲವೊಮ್ಮೆ ಬಲ ಬದಿಯ ಮೆದುಳನ್ನು ಬಳಸುವುದು ಎಂದು ಕರೆಯುವ ವಾಡಿಕೆಯುಂಟು.

ಕೆಲವು ಮೆದುಳಿನ ಆಟಗಳು ಮತ್ತು ವ್ಯಾಯಾಮದಿಂದ, ತ್ರಿ-ಪರಿಮಾಣದಲ್ಲಿ (3-ಡೈಮೆನ್ಷನಲ್) ಚಿಂತನೆ ಮಾಡುವುದರ ಮೂಲಕ, ಚಿತ್ರ/ಮಾದರಿಗಳನ್ನು ರಚಿಸುವುದರ ಮೂಲಕ ಹೆಚ್ಚಿನ ಸೃಜನಾತ್ಮಕ ಯೋಚನೆಗಳು ತಲೆಯಲ್ಲಿ ಹುಟ್ಟುತ್ತವೆ ಎಂಬುದು ನಿಜ. ಇಂತಹ ವ್ಯಾಯಾಮವನ್ನು ಏಕಾಂಗಿಯಾಗಿ ಅಥವಾ ಗುಂಪುಗೂಡಿಯೂ ಮಾಡಬಹುದು. ಒಬ್ಬರ ಯೋಚನೆಗೆ ಇನ್ನೊಬ್ಬರು ಮೌಲ್ಯ ಸೇರಿಸಬಹುದು. ಬ್ರೇನ್ ಸ್ಟಾರ್ಮಿಂಗಿನ ಮುಖ್ಯ ನಿಯಮವೆಂದರೆ ಎಲ್ಲರಿಗೂ ಹೇಳುವ ಹಕ್ಕಿದೆ, ಎಲ್ಲರ ಯೋಚನೆಗಳಿಗೂ ಅದರದರ ಮೌಲ್ಯವಿದೆ ಮತ್ತು ಒಬ್ಬರ ಚಿಂತನೆಯ ಬಗ್ಗೆ ಯಾರೂ ಟೀಕೆ/ಟಿಪ್ಪಣಿ ಮಾಡುವಂತಿಲ್ಲ. ಹೀಗಿದ್ದಾಗ ಗುಂಪಿನಲ್ಲಿ ಹೊಸ-ಹೊಸ ಸೃಜನಾತ್ಮಕ ಯೋಚನೆಗಳಿಗೆ ಕೊರತೆ ಇರುವುದಿಲ್ಲ. ಆದರೂ ಕೆಲವರು ಮಿಕ್ಕವರಿಗಿಂತ ಹೆಚ್ಚಿನ ಯೋಚನೆಗಳನ್ನು ಮೇಜಿಗೆ ತರುತ್ತಾರೆ. ಅದು ಅವರ ಸ್ವಾಭಾವಿಕ ಶಕ್ತಿ.

“ಮೈಂಡ್ ಮ್ಯಾಪಿಂಗ್” ಎನ್ನುವ ಕಲೆ/ಆಟ/ವ್ಯಾಯಾಮ ಉಪಯೋಗಿಸಿ ಒಂದು ದೊಡ್ಡ ಹಾಳೆಯ ಮೇಲೆ ನಮ್ಮ ಮುಖ್ಯ ಯೋಚನೆ ಅಥವಾ ಗುರಿಯನ್ನು ಕೇಂದ್ರ ಬಿಂದುವನ್ನಾಗಿ ರಚಿಸಿಕೊಂಡು ಅದರಿಂದ ಹೊರಟ ಯೋಚನೆಗಳನ್ನು ರೇಖೆಗಳ ಸಹಾಯದಿಂದ ಕೇಂದ್ರಬಿಂದುವಿಗೆ ಸೇರಿಸುತ್ತಾ ಹೋಗುವುದು. ಕೆಲವು ಯೋಚನೆಗಳು ಕ್ಷಣಿಕ/ಕ್ಷುಲ್ಲಕವಾಗಿದ್ದು ಅವನ್ನು ಹೆಚ್ಚು ವಿಕಸಿತಗೊಳಿಸಲು ಬರದಿರಬಹುದು ಆದರೆ ಕೆಲವು ಯೋಚನೆಗಳಲ್ಲಿ ತುಂಬಾ ಸಾಧ್ಯತೆಗಳಿರುತ್ತವೆ. ಹೀಗೆ ಒಂದಕ್ಕೊಂದು ಕೊಂಡಿ ಬೆಳೆಯುತ್ತಾ ಹೋಗಿ ನಮಗೆ ಬೇಕಿದ್ದ ಪರಿಹಾರ ಸ್ಪಷ್ಟವಾಗುತ್ತಾ ಹೋಗಬಹುದು.

“ಮೈಂಡ್ ಮ್ಯಾಪಿಂಗ್” ಎನ್ನುವ  ಕಲೆಯನ್ನು ಟೋನಿ ಬುಜಾನ್ ಎಂಬವರು ಮೂಲವಾಗಿ ಕಂಡು ಹಿಡಿದಿದ್ದು, ಅದನ್ನು ಅನೇಕರು ಮೌಲ್ಯವೃದ್ಧಿಗೊಳಿಸಿರುತ್ತಾರೆ. ಅದೇ ತರಹ “ರಿಚ್ ಪಿಕ್ಚರ್ಸ್” ಮತ್ತು ’ಎನ್ವಿಸೇಜಿಂಗ್ ದಿ ಫ್ಯೂಚರ್” ಎಂಬ ಕಸರತ್ತುಗಳೂ ಸಹ ಸೃಜನಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತವೆ.

ಸೃಜನಾತ್ಮಕ ಚಿಂತನೆಗೆ ಕೆಲವು ಸರಳ ಉದಾಹರಣೆಗಳು:

ಯೋಚಿಸಿ, ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹಾಗೆಯೇ ಎಂಟರ ಅರ್ಧ ಮೂರು ಆಗಲು ಸಾಧ್ಯವೇ? ಹದಿಮೂರರ ಆರ್ಧ ಆರೂವರೆ ಮತ್ತು ಎಂಟರ ಅರ್ಧ ನಾಲ್ಕು ಇದೇ ನಿಮ್ಮ ಕಡೆಯ ಉತ್ತರವೇ? (ಉತ್ತರ ಲೇಖನದ ಕೊನೆಯಲ್ಲಿದೆ).

ಸರಕಾರೇತರ ಸ್ವಯಂಸೇವಿ ಸಂಸ್ಥೆಯೊಂದರ ಸಹಯೋಗದೊಂದಿಗೆ ಒಮ್ಮೆ ಕೊಳಗೇರಿ ಯುವ ಮಕ್ಕಳಿಗೆ ಪಾಠ ಮಾಡುತ್ತಿರುವಾಗ, ನಾನೊಂದು ವಿಚಿತ್ರವಾದ ಪ್ರಶ್ನೆ ಕೇಳಿದೆ: ಒಂದು ಅಂಡರ್ ಬ್ರಿಡ್ಜಿನಲ್ಲಿ ಹೋಗುತ್ತಿದ್ದ ಸರಕು ವಾಹನವೊಂದು, ಎತ್ತರದ ಎಡವಟ್ಟಿನಿಂದಾಗಿ, ಬ್ರಿಡ್ಜಿನ ಕೆಳಗೆ ಸಿಕ್ಕಿಕೊಂಡಿದೆ. ಹಿಂದಕ್ಕೂ ಮುಂದಕ್ಕೂ ಹೋಗಲಾದದೆ, ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಜನ ಕಿರುಚಾಡುತ್ತಿದ್ದಾರೆ. ಅಲ್ಲಿಗೆ ಬಂದ ಅಭಿಯಂತರುಗಳು, ಪರಿಸ್ಥಿತಿಯನ್ನು ನಿರೀಕ್ಷಿಸಿ, “ಕೇವಲ ಒಂದು ಅಂಗುಲ (ಇಂಚು) ಎತ್ತರದ ಎಡವಟ್ಟಿನಿಂದಾಗಿ ಈ ವಾಹನ ಸಿಲುಕಿಕೊಂಡಿದೆ. ವಾಹನದ ಒಂದು ಅಂಗುಲ ಮೇಲ್ಭಾಗವನ್ನು ಕತ್ತರಿಸಿ ತೆಗೆಯಬೇಕು ಅಥವಾ ಸೇತುವೆಯ ಕೆಳ ಭಾಗದ ಒಂದು ಅಂಗುಲ ಕತ್ತರಿಸಬೇಕು. ಹೋಗಿ ಕತ್ತರಿಸುವ ಸಲಕರಣೆ ತನ್ನಿ” ಎಂದು ಆದೇಶ ನೀಡಿದರು. “ಮಕ್ಕಳೇ, ನಿಮಗೆ ಇಲ್ಲಿ ಯಾವುದು ಸರಿಯಾದ ಕ್ರಮ ಎಂದು ಅನಿಸುತ್ತದೆ” ಎಂದು ಕೇಳಿದೆ. ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರು. ಅಷ್ಟೇನು ಜಾಣನಂತೆ ಕಾಣುತ್ತಿಲ್ಲದ ಓರ್ವಹುಡುಗನನ್ನು ನಾನೇ ಬಲವಂತದಿಂದ ಉತ್ತರಿಸಲು ಹೇಳಿದೆ. ಆತ “ವಾಹನದ ನಾಲ್ಕೂ ಚಕ್ರಗಳಿಂದ ಗಾಳಿ ತೆಗೆದಲ್ಲಿ ವಾಹನ ತಾನಾಗಿಯೇ ಒಂದು ಅಂಗುಲ ಕೆಳಗೆ ಬರುವುದಿಲ್ಲವೇ?” ಎಂದು ಹೇಳಿದ. ಆ ಹುಡುಗ ರಸ್ತೆ ಬದಿಯಲ್ಲಿಯ ದ್ವಿಚಕ್ರ ವಾಹನ ದುರಸ್ತಿ/ಪಂಚರ್ ಶಾಪಿನಲ್ಲಿ ಕೆಲಸ ಮಾಡುವ ಹದಿನಾರು ವರ್ಷದ ಹುಡುಗ. ಹಾಗಾಗಿ ಸೃಜನಾತ್ಮಕ ಚಿಂತನೆ ಯಾರೊಬ್ಬರ ಖಾಸಗಿ ಆಸ್ತಿ ಅಲ್ಲ. ಎಲ್ಲರೂ ಎಲ್ಲಾ ಕಾಲದಲ್ಲೂ ಪಡೆಯಬಹುದಾದ ಕಲೆ.

ಸೃಜನಾತ್ಮಕ ಚಿಂತನೆಗೆ ಯಾವುದೇ ಇತಿ-ಮಿತಿ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (ಯು.ಪಿ.ಎಸ್.ಸಿ., ಮುಂತಾದ) ಇಂತಹ ಉತ್ತರಕ್ಕೆ ಹೆಚ್ಚಿನ ಅಂಕಗಳು ದೊರೆಯುತ್ತವೆ. ನೀವೂ ಸೃಜನಾತ್ಮಕರಾಗಿ. ಮಕ್ಕಳಿಗೂ ಕಲಿಸಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...