Homeಮುಖಪುಟಸೃಜನಾತ್ಮಕ ಚಿಂತನೆ : ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹೌದು ಸಾಧ್ಯ

ಸೃಜನಾತ್ಮಕ ಚಿಂತನೆ : ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹೌದು ಸಾಧ್ಯ

- Advertisement -
- Advertisement -

ಜೀವನ ಕಲೆಗಳು ಅಂಕಣ: 9

ಸೃಜನಾತ್ಮಕ ಚಿಂತನೆ ಎಂದರೆ ಸಮಸ್ಯೆಯನ್ನು ಹೊಸ ದೃಷ್ಟಿಕೋನದಿಂದ ವೀಕ್ಷಿಸಿ, ಪಾರಂಪರಿಕವಲ್ಲದ ಪರಿಹಾರ ಸೂಚಿಸುವ ಪ್ರಯತ್ನ. ಇದು ಪ್ರಾರಂಭದಲ್ಲಿ ವಿಚಲಿತಗೊಳಿಸಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮುಕ್ತ ಆಲೋಚನೆ (ಓಪನ್ ಮೈಂಡ್). ಸೃಜನಾತ್ಮಕ ಚಿಂತನೆಯನ್ನು ವ್ಯವಸ್ಥಿತ ಅಥವಾ ಅವ್ಯಸ್ಥಿತ ಪ್ರಕ್ರಿಯೆಯಿಂದ ಚಾಲನೆಗೆ ತರಬಹುದು. ಚಿಂತನೆ ಸಹಜವಾಗಿ ಬಂದಿರಬಹುದು ಅಥವಾ ಅಕಸ್ಮಿಕವೂ ಆಗಿರಬಹುದು. ಯಾವುದೇ ಪ್ರಯತ್ನವಿಲ್ಲದೆ ಸೃಜನಾತ್ಮಕ ಚಿಂತನೆ ತಾನಾಗಿಯೇ ನಡೆಯುತ್ತದೆ ಆದರೆ ಆಕಸ್ಮಿಕವಾಗಿ. ಪ್ರಯತ್ನಪೂರ್ವಕ ಸೃಜನಾತ್ಮಕ ಚಿಂತನೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದರೆ ಇದ್ದಕ್ಕಿದಂತೆ ಹೊಳೆದ ಉಪಾಯ ಕೂಡಲೇ ಮಹತ್ತರ ಬದಲಾವಣೆ ತರಬಲ್ಲದು. ಇದನ್ನು ಚೌಕಟ್ಟಿನ ಹೊರಗಿನ ಚಿಂತನೆ (ಥಿಂಕಿಂಗ್ ಔಟ್ ಆಫ್ ದಿ ಬಾಕ್ಸ್) ಎನ್ನುತ್ತಾರೆ.
ಕೆಲವು ವಿಶೇಷ ಉಪಾಯಗಳಿಂದ ಈ ಸೃಜನಾತ್ಮಕ ಚಿಂತನೆ ಬೇಗಲೇ ಆಗುವಂತೆ ಮಾಡಬಹುದು. ಇದರಿಂದ ಹೊಸ ರೀತಿಯ ಯೋಚನೆಗಳು ಏಕ ಕಾಲಕ್ಕೆ ಬಂದು ಅಥವಾ ಒಂದರಿಂದ ಒಂದು ಹುಟ್ಟಿಕೊಂಡು ಅಥವಾ ಒಂದಕ್ಕೊಂದು ಸೇರಿ, ಹೊಸ ರೀತಿಯ ಉಪಾಯ ಅಥವಾ ಪ್ರಕ್ರಿಯೆಗೆ ದಾರಿ ಮಾಡಿಕೊಡಬಹುದು. ಇದನ್ನು ಬ್ರೇನ್ ಸ್ಟಾರ್ಮಿಂಗ್ ಎನ್ನುತ್ತಾರೆ. ಒಂದಕ್ಕಿಂತ ಹೆಚ್ಚು ತಲೆಗಳು ಒಟ್ಟಿಗೆ ಕೆಲಸ ಮಾಡಿದಾಗ ಪರಿಣಾಮ ಇನ್ನೂ ಹೆಚ್ಚುತ್ತದೆ.

ನಮ್ಮ ಎಡ ಬದಿಯ ಮೆದುಳು ವ್ಯವಸ್ಥಿತ ಸಾಧಾರಣ ಯೋಚನೆಗಳಿಗೂ (ತರ್ಕ, ಗಣಿತ, ಯಾಂತ್ರಿಕ ಕೆಲಸ) ಮತ್ತು ಬಲಬದಿಯ ಮೆದುಳು ಸೃಜನಾತ್ಮಕ ಚಿಂತನೆಗೂ ಬಳಕೆಯಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಇತ್ತೀಚಿನ ವೈದ್ಯಕೀಯ ಪರಿಶೋಧನೆಯ ವರದಿ ಪ್ರಕಾರ ಎರಡೂ ಬದಿಯ ಮೆದುಳು ಏಕ ಕಾಲಕ್ಕೆ, ಒಂದೇ ಸಂಕೀರ್ಣ ವಿಚಾರದ ಬಗ್ಗೆ ಕೆಲಸ ಮಾಡುತ್ತವೆ ಎಂಬುದು ಸಿದ್ಧವಾಗಿದೆ. ಆದ್ದರಿಂದ ಎಡ-ಬಲ ಮೆದುಳಿನ ಪ್ರವೃತ್ತಿ ಎನ್ನುವುದು ತಪ್ಪು ಪರಿಕಲ್ಪನೆ. ಯಾವುದೋ ಒಂದು ಯೋಚನೆಯ ಮೇಲೆ ತೀರಾ ಮಗ್ನರಾಗಿ ಏನೂ ತೋಚದೇ ಇದ್ದಾಗ, ಮೆದುಳಿನ ಮೇಲಿನ ಒತ್ತಡವನ್ನು ತಗ್ಗಿಸಿ, ಮನಸ್ಸನ್ನು ಬೇರೆಡೆಗೆ ಹೊರಳಿಸಿದಾಗ, ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಥಟ್ಟನೇ ಹೊಳೆಯುವ ಸಾಧ್ಯತೆ ಹೆಚ್ಚು. ಇದನ್ನು ಕೆಲವೊಮ್ಮೆ ಬಲ ಬದಿಯ ಮೆದುಳನ್ನು ಬಳಸುವುದು ಎಂದು ಕರೆಯುವ ವಾಡಿಕೆಯುಂಟು.

ಕೆಲವು ಮೆದುಳಿನ ಆಟಗಳು ಮತ್ತು ವ್ಯಾಯಾಮದಿಂದ, ತ್ರಿ-ಪರಿಮಾಣದಲ್ಲಿ (3-ಡೈಮೆನ್ಷನಲ್) ಚಿಂತನೆ ಮಾಡುವುದರ ಮೂಲಕ, ಚಿತ್ರ/ಮಾದರಿಗಳನ್ನು ರಚಿಸುವುದರ ಮೂಲಕ ಹೆಚ್ಚಿನ ಸೃಜನಾತ್ಮಕ ಯೋಚನೆಗಳು ತಲೆಯಲ್ಲಿ ಹುಟ್ಟುತ್ತವೆ ಎಂಬುದು ನಿಜ. ಇಂತಹ ವ್ಯಾಯಾಮವನ್ನು ಏಕಾಂಗಿಯಾಗಿ ಅಥವಾ ಗುಂಪುಗೂಡಿಯೂ ಮಾಡಬಹುದು. ಒಬ್ಬರ ಯೋಚನೆಗೆ ಇನ್ನೊಬ್ಬರು ಮೌಲ್ಯ ಸೇರಿಸಬಹುದು. ಬ್ರೇನ್ ಸ್ಟಾರ್ಮಿಂಗಿನ ಮುಖ್ಯ ನಿಯಮವೆಂದರೆ ಎಲ್ಲರಿಗೂ ಹೇಳುವ ಹಕ್ಕಿದೆ, ಎಲ್ಲರ ಯೋಚನೆಗಳಿಗೂ ಅದರದರ ಮೌಲ್ಯವಿದೆ ಮತ್ತು ಒಬ್ಬರ ಚಿಂತನೆಯ ಬಗ್ಗೆ ಯಾರೂ ಟೀಕೆ/ಟಿಪ್ಪಣಿ ಮಾಡುವಂತಿಲ್ಲ. ಹೀಗಿದ್ದಾಗ ಗುಂಪಿನಲ್ಲಿ ಹೊಸ-ಹೊಸ ಸೃಜನಾತ್ಮಕ ಯೋಚನೆಗಳಿಗೆ ಕೊರತೆ ಇರುವುದಿಲ್ಲ. ಆದರೂ ಕೆಲವರು ಮಿಕ್ಕವರಿಗಿಂತ ಹೆಚ್ಚಿನ ಯೋಚನೆಗಳನ್ನು ಮೇಜಿಗೆ ತರುತ್ತಾರೆ. ಅದು ಅವರ ಸ್ವಾಭಾವಿಕ ಶಕ್ತಿ.

“ಮೈಂಡ್ ಮ್ಯಾಪಿಂಗ್” ಎನ್ನುವ ಕಲೆ/ಆಟ/ವ್ಯಾಯಾಮ ಉಪಯೋಗಿಸಿ ಒಂದು ದೊಡ್ಡ ಹಾಳೆಯ ಮೇಲೆ ನಮ್ಮ ಮುಖ್ಯ ಯೋಚನೆ ಅಥವಾ ಗುರಿಯನ್ನು ಕೇಂದ್ರ ಬಿಂದುವನ್ನಾಗಿ ರಚಿಸಿಕೊಂಡು ಅದರಿಂದ ಹೊರಟ ಯೋಚನೆಗಳನ್ನು ರೇಖೆಗಳ ಸಹಾಯದಿಂದ ಕೇಂದ್ರಬಿಂದುವಿಗೆ ಸೇರಿಸುತ್ತಾ ಹೋಗುವುದು. ಕೆಲವು ಯೋಚನೆಗಳು ಕ್ಷಣಿಕ/ಕ್ಷುಲ್ಲಕವಾಗಿದ್ದು ಅವನ್ನು ಹೆಚ್ಚು ವಿಕಸಿತಗೊಳಿಸಲು ಬರದಿರಬಹುದು ಆದರೆ ಕೆಲವು ಯೋಚನೆಗಳಲ್ಲಿ ತುಂಬಾ ಸಾಧ್ಯತೆಗಳಿರುತ್ತವೆ. ಹೀಗೆ ಒಂದಕ್ಕೊಂದು ಕೊಂಡಿ ಬೆಳೆಯುತ್ತಾ ಹೋಗಿ ನಮಗೆ ಬೇಕಿದ್ದ ಪರಿಹಾರ ಸ್ಪಷ್ಟವಾಗುತ್ತಾ ಹೋಗಬಹುದು.

“ಮೈಂಡ್ ಮ್ಯಾಪಿಂಗ್” ಎನ್ನುವ  ಕಲೆಯನ್ನು ಟೋನಿ ಬುಜಾನ್ ಎಂಬವರು ಮೂಲವಾಗಿ ಕಂಡು ಹಿಡಿದಿದ್ದು, ಅದನ್ನು ಅನೇಕರು ಮೌಲ್ಯವೃದ್ಧಿಗೊಳಿಸಿರುತ್ತಾರೆ. ಅದೇ ತರಹ “ರಿಚ್ ಪಿಕ್ಚರ್ಸ್” ಮತ್ತು ’ಎನ್ವಿಸೇಜಿಂಗ್ ದಿ ಫ್ಯೂಚರ್” ಎಂಬ ಕಸರತ್ತುಗಳೂ ಸಹ ಸೃಜನಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತವೆ.

ಸೃಜನಾತ್ಮಕ ಚಿಂತನೆಗೆ ಕೆಲವು ಸರಳ ಉದಾಹರಣೆಗಳು:

ಯೋಚಿಸಿ, ಹದಿಮೂರರ ಅರ್ಧ ಎರಡು, ಹನ್ನೊಂದು ಅಥವಾ ಎಂಟಾಗಲು ಸಾಧ್ಯವೇ? ಹಾಗೆಯೇ ಎಂಟರ ಅರ್ಧ ಮೂರು ಆಗಲು ಸಾಧ್ಯವೇ? ಹದಿಮೂರರ ಆರ್ಧ ಆರೂವರೆ ಮತ್ತು ಎಂಟರ ಅರ್ಧ ನಾಲ್ಕು ಇದೇ ನಿಮ್ಮ ಕಡೆಯ ಉತ್ತರವೇ? (ಉತ್ತರ ಲೇಖನದ ಕೊನೆಯಲ್ಲಿದೆ).

ಸರಕಾರೇತರ ಸ್ವಯಂಸೇವಿ ಸಂಸ್ಥೆಯೊಂದರ ಸಹಯೋಗದೊಂದಿಗೆ ಒಮ್ಮೆ ಕೊಳಗೇರಿ ಯುವ ಮಕ್ಕಳಿಗೆ ಪಾಠ ಮಾಡುತ್ತಿರುವಾಗ, ನಾನೊಂದು ವಿಚಿತ್ರವಾದ ಪ್ರಶ್ನೆ ಕೇಳಿದೆ: ಒಂದು ಅಂಡರ್ ಬ್ರಿಡ್ಜಿನಲ್ಲಿ ಹೋಗುತ್ತಿದ್ದ ಸರಕು ವಾಹನವೊಂದು, ಎತ್ತರದ ಎಡವಟ್ಟಿನಿಂದಾಗಿ, ಬ್ರಿಡ್ಜಿನ ಕೆಳಗೆ ಸಿಕ್ಕಿಕೊಂಡಿದೆ. ಹಿಂದಕ್ಕೂ ಮುಂದಕ್ಕೂ ಹೋಗಲಾದದೆ, ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಜನ ಕಿರುಚಾಡುತ್ತಿದ್ದಾರೆ. ಅಲ್ಲಿಗೆ ಬಂದ ಅಭಿಯಂತರುಗಳು, ಪರಿಸ್ಥಿತಿಯನ್ನು ನಿರೀಕ್ಷಿಸಿ, “ಕೇವಲ ಒಂದು ಅಂಗುಲ (ಇಂಚು) ಎತ್ತರದ ಎಡವಟ್ಟಿನಿಂದಾಗಿ ಈ ವಾಹನ ಸಿಲುಕಿಕೊಂಡಿದೆ. ವಾಹನದ ಒಂದು ಅಂಗುಲ ಮೇಲ್ಭಾಗವನ್ನು ಕತ್ತರಿಸಿ ತೆಗೆಯಬೇಕು ಅಥವಾ ಸೇತುವೆಯ ಕೆಳ ಭಾಗದ ಒಂದು ಅಂಗುಲ ಕತ್ತರಿಸಬೇಕು. ಹೋಗಿ ಕತ್ತರಿಸುವ ಸಲಕರಣೆ ತನ್ನಿ” ಎಂದು ಆದೇಶ ನೀಡಿದರು. “ಮಕ್ಕಳೇ, ನಿಮಗೆ ಇಲ್ಲಿ ಯಾವುದು ಸರಿಯಾದ ಕ್ರಮ ಎಂದು ಅನಿಸುತ್ತದೆ” ಎಂದು ಕೇಳಿದೆ. ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರು. ಅಷ್ಟೇನು ಜಾಣನಂತೆ ಕಾಣುತ್ತಿಲ್ಲದ ಓರ್ವಹುಡುಗನನ್ನು ನಾನೇ ಬಲವಂತದಿಂದ ಉತ್ತರಿಸಲು ಹೇಳಿದೆ. ಆತ “ವಾಹನದ ನಾಲ್ಕೂ ಚಕ್ರಗಳಿಂದ ಗಾಳಿ ತೆಗೆದಲ್ಲಿ ವಾಹನ ತಾನಾಗಿಯೇ ಒಂದು ಅಂಗುಲ ಕೆಳಗೆ ಬರುವುದಿಲ್ಲವೇ?” ಎಂದು ಹೇಳಿದ. ಆ ಹುಡುಗ ರಸ್ತೆ ಬದಿಯಲ್ಲಿಯ ದ್ವಿಚಕ್ರ ವಾಹನ ದುರಸ್ತಿ/ಪಂಚರ್ ಶಾಪಿನಲ್ಲಿ ಕೆಲಸ ಮಾಡುವ ಹದಿನಾರು ವರ್ಷದ ಹುಡುಗ. ಹಾಗಾಗಿ ಸೃಜನಾತ್ಮಕ ಚಿಂತನೆ ಯಾರೊಬ್ಬರ ಖಾಸಗಿ ಆಸ್ತಿ ಅಲ್ಲ. ಎಲ್ಲರೂ ಎಲ್ಲಾ ಕಾಲದಲ್ಲೂ ಪಡೆಯಬಹುದಾದ ಕಲೆ.

ಸೃಜನಾತ್ಮಕ ಚಿಂತನೆಗೆ ಯಾವುದೇ ಇತಿ-ಮಿತಿ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (ಯು.ಪಿ.ಎಸ್.ಸಿ., ಮುಂತಾದ) ಇಂತಹ ಉತ್ತರಕ್ಕೆ ಹೆಚ್ಚಿನ ಅಂಕಗಳು ದೊರೆಯುತ್ತವೆ. ನೀವೂ ಸೃಜನಾತ್ಮಕರಾಗಿ. ಮಕ್ಕಳಿಗೂ ಕಲಿಸಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...