Homeಕರ್ನಾಟಕರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

ರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

- Advertisement -
- Advertisement -

ಒಂಥರಾ ಟ್ವೆಂಟಿ-20 ಪಂದ್ಯದಂತೆ ಇಲ್ಲಿ ಸ್ಕೋರ್ ಬೋರ್ಡ್ ಬದಲಾಗುತ್ತಿದೆ. ಸಂವಿಧಾನವನ್ನೇ ಅರಗಿಸಿಕೊಂಡಂತೆ ಟಿವಿ ಸ್ಟುಡಿಯೋಗಳಿಂದ ಪಂದ್ಯದ ‘ರಿಸಲ್ಟ್’ ಹೊರಬೀಳುತ್ತಿವೆ. ಟ್ವೆಂಟಿ-20 ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್‍ಗಳನ್ನು ಹಿನ್ನೆಲೆಗೆ ಸರಿಸಿದಂತೆ ಇಲ್ಲಿಯೂ ಕುದುರೆ ವ್ಯಾಪಾರವನ್ನು ಹಿನ್ನೆಲೆಗೆ ಸರಿಸಲಾಗಿದೆ. ಸೋಲುವ ಭೀತಿಯಲ್ಲಿರುವ ಸಮ್ಮಿಶ್ರ ಟೀಮ್ ಕೈಚೆಲ್ಲಿದಂತೆ ಒದ್ದಾಡುತ್ತ, ಧೋ ಅಂತ ಮಳೆ ಸುರಿಯಲಿ ಎಂದು ಮುಗಿಲು ನೋಡುತ್ತಿದೆ. ಒಟ್ಟೂ ಈ ರಾಜಕಾರಣದ ಬಗ್ಗೆ ಜಿಗುಪ್ಸೆಯ ಭಾವನೆ ಹೊಂದಿರುವ ಸಾಮಾನ್ಯ ಜನರು ಬರದ ಬೇಗುದಿಯಲ್ಲೂ ಪಂದ್ಯವನ್ನು ವೀಕ್ಷಿಸುತ್ತ ಎಂಜಾಯ್ ಮಾಡುತ್ತ, ಗಂಟೆಗೊಮ್ಮೆ ಬದಲಾಗುತ್ತಿರುವ ರಾಜಕಾರಣವನ್ನು ಉಗಿಯುತ್ತ ತಮ್ಮ ಪಾಳೆಯಕ್ಕಾಗಿ ಕಾದಿದ್ದಾರೆ.

ಇಲ್ಲಿ ನಾಳೆ ಏನಾಗುತ್ತೆ ಎನ್ನುವುದು ಸ್ಪಷ್ಟವಾಗುತ್ತಿದ್ದರೂ ಚುಟುಕು ಪಂದ್ಯದಲ್ಲಿ ಏನಾದರೂ ಆಗಬಹುದು. ಒಂದು ಟೀಮ್‍ನ ಆಂತರಿಕ ಸದಸ್ಯರೇ ಆಗಿರುವ ಅಂಪೈರ್ ಸಾಹೇಬರು ಮೌನ ಮುರಿಯುತ್ತಲೇ ಇಲ್ಲ. ಇದು ಕೂಡ ನಿಗೂಢವಾಗಿದೆ. ಸರಿಯಾಗಿ ಒಂದು ವರ್ಷ ಎರಡು ತಿಂಗಳ ಹಿಂದೆ ಇದೇ ಅಂಪೈರ್ ತಾವೇ ‘ಸಾಂವಿಧಾನಿಕ’ ಬಿಕ್ಕಟ್ಟನ್ನು ಸೃಷ್ಟಿಸಲು ಹೋಗಿ ಸುಪ್ರಿಂಕೋರ್ಟ್‍ನ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೆಲ್ಲವನ್ನೂ ಹಿನ್ನೆಲೆಯಲ್ಲಿ ಇಟ್ಟುಕೊಂಡು ನೋಡಿದಾಗ, ಇಲ್ಲಿ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂಬ ಭಾವವಂತೂ ಜನರಿಗೆ ಇದೆ. ಹಾಗೆಯೇ ಹೊಸ ಸರ್ಕಾರ ಬಂದರೂ ಮತ್ತದೇ ಅತಂತ್ರ ವಾತಾವರಣ ಎಂಬ ಪ್ರಾಥಮಿಕ ಜ್ಞಾನವೂ ಜನರಲ್ಲಿದೆ. ಆದರೆ ಈಗ ಪಾರ್ಟಿ ಬದಲಿಸರುವ ಜನಪ್ರತಿನಿಧಿಗಳಿಗೆ ಇದು ಗೊತ್ತಿದ್ದರೂ, ಅವರು ಯಾವ ಅಳುಕಿಲ್ಲದೇ ಏಕೆ ಹೋಗುತ್ತಿದ್ದಾರೆ?

ಇದರ ಮೂಲ ಹುಡುಕುತ್ತ ಹೋದರೆ, ಅದು 2008ರ ಸಂದರ್ಭಕ್ಕೆ ಬಂದು ನಿಲ್ಲುತ್ತದೆ. ಪಕ್ಷಾಂತರ ಕಾನೂನನ್ನೇ ಅಣಕಿಸುವಂತೆ ಚಾಲೆಂಜ್ ಮಾಡಿದ ‘ಆಪರೇಷನ್ ಕಮಲ’ ಎಂಬ ಜನದ್ರೋಹಿ ನಡೆ ಶುರುವಾಯಿತಲ್ಲ, ಅದು ರಾಜಕಾರಣದಲ್ಲಿ ದಿಢೀರ್ ಕೋಟಿಗಳನ್ನು ಸಂಪಾದಿಸುವ ಮಾರ್ಗವನ್ನು ತೋರಿಸಿಕೊಟ್ಟಿತು. ಮೊದಲ ಆಪರೇಷನ್ ಕಮಲದ ಫಲಾನುಭವಿಗಳು ಇವತ್ತು ಎಷ್ಟು ನಿಶ್ಚಿಂತರಾಗಿದ್ದಾರೆ ಎಂದರೆ, ಅವರಿಗೆ ಈಗ ಚುನಾವಣೆ ಎಂಬುದೀಗ ಜೂಜು. ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಹೆಸರಲ್ಲಿ ಬರುವ ದುಡ್ಡು ಜುಜುಬಿ. ಇಲ್ಲಿ ಸಿಕ್ಕಿ ಬಿದ್ದರೆ ಮಾನಗೇಡಿ. ಆದರೆ ಆಪರೇಷನ್ ಕಮಲದಲ್ಲಿ ಅನಾತಾಸವಾಗಿ 30-80 ಕೋಟಿವರೆಗೆ ಪಡೆದರೆ ಅದಕ್ಕೆ ಯಾವ ಕಾನೂನಿನ ಅಡಿಯೂ ಇಲ್ಲ!

2008ರಲ್ಲಿ ಬಿಜೆಪಿಯಿಂದ ಚಾಲನೆಗೊಂಡ ಈ ಬಲ್ಕ್ ವ್ಯಾಪಾರದ ಬಗ್ಗೆ ಯಾವ ಪಕ್ಷಕ್ಕೂ ಅಂತಹ ಅಸಹ್ಯವೇನೂ ಇಲ್ಲ. ಹೀಗಾಗಿ ಈ ರೋಗ ದೇಶದ ಎಲ್ಲ ರಾಜ್ಯಗಳಿಗೂ ಹಬ್ಬಿದೆ. ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ನಜೀರ್ ಸಾಬ್‍ರಂತಹ ಮಾದರಿ ರಾಜಕಾರಣಿಗಳನ್ನು ಕೊಟ್ಟ ಕರ್ನಾಟಕವೇ ಆಪರೇಷನ್ ಕಮಲ ಎಂಬ ಹೇಯ ರಾಜಕೀಯದ ಪಿತೃ ಆಗಿರುವುದು ಒಟ್ಟೂ ರಾಜಕಾರಣದ ದುರಂತ.

ಮುಂಬೈನಲ್ಲಿ ಅತೃಪ್ತರು ತಂಗಿರುವ ಹೊಟೆಲ್‍ನ ರೂಮ್ ಬಾಡಿಗೆ ದರವನ್ನು ಉಲ್ಲೇಖಿಸುವಾಗ ಮಾಧ್ಯಮ ಮಿತ್ರರು ಅದನ್ನು ವೈಭವೀಕರಿಸುತ್ತಿದ್ದಾರೆಯೇ ವಿನ: ಅವರಿಗೆ ಇದೆಲ್ಲದರ ಹಿಂದಿರುವ ಹಣದ ಮೂಲದ ಬಗ್ಗೆ ಪ್ರಶ್ನೆಯೂ ಇಲ್ಲ. ಇವತ್ತು ಅಸಹಾಯಕ ಸ್ಥಿಯಲ್ಲಿರುವ ಮೈತ್ರಿ ಪಕ್ಷಗಳಿಗೂ ಇದನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ.

ರೆಸಾರ್ಟ್ ರಾಜಕಾರಣ ಎಂಬುದು ಈಗ ಸಹಜ ವಿದ್ಯಮಾನ ಎಂದು ಬಿಂಬಿತವಾಗಿರುವ ಈ ಸಂದರ್ಭದಲ್ಲಿ ನಾಳೆ ಹೊಸ ಸರ್ಕಾರವೋ, ರಾಷ್ಟ್ರಪತಿ ಆಡಳಿತವೋ ಎಂದು ಚರ್ಚಿಸುವುದೇ ಈ ಹೊತ್ತಿನ ವ್ಯಂಗ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...