Homeಕರ್ನಾಟಕರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

ರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

- Advertisement -
- Advertisement -

ಒಂಥರಾ ಟ್ವೆಂಟಿ-20 ಪಂದ್ಯದಂತೆ ಇಲ್ಲಿ ಸ್ಕೋರ್ ಬೋರ್ಡ್ ಬದಲಾಗುತ್ತಿದೆ. ಸಂವಿಧಾನವನ್ನೇ ಅರಗಿಸಿಕೊಂಡಂತೆ ಟಿವಿ ಸ್ಟುಡಿಯೋಗಳಿಂದ ಪಂದ್ಯದ ‘ರಿಸಲ್ಟ್’ ಹೊರಬೀಳುತ್ತಿವೆ. ಟ್ವೆಂಟಿ-20 ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್‍ಗಳನ್ನು ಹಿನ್ನೆಲೆಗೆ ಸರಿಸಿದಂತೆ ಇಲ್ಲಿಯೂ ಕುದುರೆ ವ್ಯಾಪಾರವನ್ನು ಹಿನ್ನೆಲೆಗೆ ಸರಿಸಲಾಗಿದೆ. ಸೋಲುವ ಭೀತಿಯಲ್ಲಿರುವ ಸಮ್ಮಿಶ್ರ ಟೀಮ್ ಕೈಚೆಲ್ಲಿದಂತೆ ಒದ್ದಾಡುತ್ತ, ಧೋ ಅಂತ ಮಳೆ ಸುರಿಯಲಿ ಎಂದು ಮುಗಿಲು ನೋಡುತ್ತಿದೆ. ಒಟ್ಟೂ ಈ ರಾಜಕಾರಣದ ಬಗ್ಗೆ ಜಿಗುಪ್ಸೆಯ ಭಾವನೆ ಹೊಂದಿರುವ ಸಾಮಾನ್ಯ ಜನರು ಬರದ ಬೇಗುದಿಯಲ್ಲೂ ಪಂದ್ಯವನ್ನು ವೀಕ್ಷಿಸುತ್ತ ಎಂಜಾಯ್ ಮಾಡುತ್ತ, ಗಂಟೆಗೊಮ್ಮೆ ಬದಲಾಗುತ್ತಿರುವ ರಾಜಕಾರಣವನ್ನು ಉಗಿಯುತ್ತ ತಮ್ಮ ಪಾಳೆಯಕ್ಕಾಗಿ ಕಾದಿದ್ದಾರೆ.

ಇಲ್ಲಿ ನಾಳೆ ಏನಾಗುತ್ತೆ ಎನ್ನುವುದು ಸ್ಪಷ್ಟವಾಗುತ್ತಿದ್ದರೂ ಚುಟುಕು ಪಂದ್ಯದಲ್ಲಿ ಏನಾದರೂ ಆಗಬಹುದು. ಒಂದು ಟೀಮ್‍ನ ಆಂತರಿಕ ಸದಸ್ಯರೇ ಆಗಿರುವ ಅಂಪೈರ್ ಸಾಹೇಬರು ಮೌನ ಮುರಿಯುತ್ತಲೇ ಇಲ್ಲ. ಇದು ಕೂಡ ನಿಗೂಢವಾಗಿದೆ. ಸರಿಯಾಗಿ ಒಂದು ವರ್ಷ ಎರಡು ತಿಂಗಳ ಹಿಂದೆ ಇದೇ ಅಂಪೈರ್ ತಾವೇ ‘ಸಾಂವಿಧಾನಿಕ’ ಬಿಕ್ಕಟ್ಟನ್ನು ಸೃಷ್ಟಿಸಲು ಹೋಗಿ ಸುಪ್ರಿಂಕೋರ್ಟ್‍ನ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೆಲ್ಲವನ್ನೂ ಹಿನ್ನೆಲೆಯಲ್ಲಿ ಇಟ್ಟುಕೊಂಡು ನೋಡಿದಾಗ, ಇಲ್ಲಿ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂಬ ಭಾವವಂತೂ ಜನರಿಗೆ ಇದೆ. ಹಾಗೆಯೇ ಹೊಸ ಸರ್ಕಾರ ಬಂದರೂ ಮತ್ತದೇ ಅತಂತ್ರ ವಾತಾವರಣ ಎಂಬ ಪ್ರಾಥಮಿಕ ಜ್ಞಾನವೂ ಜನರಲ್ಲಿದೆ. ಆದರೆ ಈಗ ಪಾರ್ಟಿ ಬದಲಿಸರುವ ಜನಪ್ರತಿನಿಧಿಗಳಿಗೆ ಇದು ಗೊತ್ತಿದ್ದರೂ, ಅವರು ಯಾವ ಅಳುಕಿಲ್ಲದೇ ಏಕೆ ಹೋಗುತ್ತಿದ್ದಾರೆ?

ಇದರ ಮೂಲ ಹುಡುಕುತ್ತ ಹೋದರೆ, ಅದು 2008ರ ಸಂದರ್ಭಕ್ಕೆ ಬಂದು ನಿಲ್ಲುತ್ತದೆ. ಪಕ್ಷಾಂತರ ಕಾನೂನನ್ನೇ ಅಣಕಿಸುವಂತೆ ಚಾಲೆಂಜ್ ಮಾಡಿದ ‘ಆಪರೇಷನ್ ಕಮಲ’ ಎಂಬ ಜನದ್ರೋಹಿ ನಡೆ ಶುರುವಾಯಿತಲ್ಲ, ಅದು ರಾಜಕಾರಣದಲ್ಲಿ ದಿಢೀರ್ ಕೋಟಿಗಳನ್ನು ಸಂಪಾದಿಸುವ ಮಾರ್ಗವನ್ನು ತೋರಿಸಿಕೊಟ್ಟಿತು. ಮೊದಲ ಆಪರೇಷನ್ ಕಮಲದ ಫಲಾನುಭವಿಗಳು ಇವತ್ತು ಎಷ್ಟು ನಿಶ್ಚಿಂತರಾಗಿದ್ದಾರೆ ಎಂದರೆ, ಅವರಿಗೆ ಈಗ ಚುನಾವಣೆ ಎಂಬುದೀಗ ಜೂಜು. ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಹೆಸರಲ್ಲಿ ಬರುವ ದುಡ್ಡು ಜುಜುಬಿ. ಇಲ್ಲಿ ಸಿಕ್ಕಿ ಬಿದ್ದರೆ ಮಾನಗೇಡಿ. ಆದರೆ ಆಪರೇಷನ್ ಕಮಲದಲ್ಲಿ ಅನಾತಾಸವಾಗಿ 30-80 ಕೋಟಿವರೆಗೆ ಪಡೆದರೆ ಅದಕ್ಕೆ ಯಾವ ಕಾನೂನಿನ ಅಡಿಯೂ ಇಲ್ಲ!

2008ರಲ್ಲಿ ಬಿಜೆಪಿಯಿಂದ ಚಾಲನೆಗೊಂಡ ಈ ಬಲ್ಕ್ ವ್ಯಾಪಾರದ ಬಗ್ಗೆ ಯಾವ ಪಕ್ಷಕ್ಕೂ ಅಂತಹ ಅಸಹ್ಯವೇನೂ ಇಲ್ಲ. ಹೀಗಾಗಿ ಈ ರೋಗ ದೇಶದ ಎಲ್ಲ ರಾಜ್ಯಗಳಿಗೂ ಹಬ್ಬಿದೆ. ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ನಜೀರ್ ಸಾಬ್‍ರಂತಹ ಮಾದರಿ ರಾಜಕಾರಣಿಗಳನ್ನು ಕೊಟ್ಟ ಕರ್ನಾಟಕವೇ ಆಪರೇಷನ್ ಕಮಲ ಎಂಬ ಹೇಯ ರಾಜಕೀಯದ ಪಿತೃ ಆಗಿರುವುದು ಒಟ್ಟೂ ರಾಜಕಾರಣದ ದುರಂತ.

ಮುಂಬೈನಲ್ಲಿ ಅತೃಪ್ತರು ತಂಗಿರುವ ಹೊಟೆಲ್‍ನ ರೂಮ್ ಬಾಡಿಗೆ ದರವನ್ನು ಉಲ್ಲೇಖಿಸುವಾಗ ಮಾಧ್ಯಮ ಮಿತ್ರರು ಅದನ್ನು ವೈಭವೀಕರಿಸುತ್ತಿದ್ದಾರೆಯೇ ವಿನ: ಅವರಿಗೆ ಇದೆಲ್ಲದರ ಹಿಂದಿರುವ ಹಣದ ಮೂಲದ ಬಗ್ಗೆ ಪ್ರಶ್ನೆಯೂ ಇಲ್ಲ. ಇವತ್ತು ಅಸಹಾಯಕ ಸ್ಥಿಯಲ್ಲಿರುವ ಮೈತ್ರಿ ಪಕ್ಷಗಳಿಗೂ ಇದನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ.

ರೆಸಾರ್ಟ್ ರಾಜಕಾರಣ ಎಂಬುದು ಈಗ ಸಹಜ ವಿದ್ಯಮಾನ ಎಂದು ಬಿಂಬಿತವಾಗಿರುವ ಈ ಸಂದರ್ಭದಲ್ಲಿ ನಾಳೆ ಹೊಸ ಸರ್ಕಾರವೋ, ರಾಷ್ಟ್ರಪತಿ ಆಡಳಿತವೋ ಎಂದು ಚರ್ಚಿಸುವುದೇ ಈ ಹೊತ್ತಿನ ವ್ಯಂಗ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...