Homeಮುಖಪುಟವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

ವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಎರಡು ವಿಧವಾದ ಯೋಚನಾಲಹರಿಯ ಅವಶ್ಯಕತೆ ಇರುತ್ತದೆ. ಮೊದಲನೆಯದು ವಿಮರ್ಶಾತ್ಮಕ ಯೋಚನೆ (ಕ್ರಿಟಿಕಲ್ ಥಿಂಕಿಂಗ್), ಎರಡನೆಯದು ಸೃಜನಾತ್ಮಕ ಯೋಚನೆ (ಕ್ರಿಯೇಟಿವ್ ಥಿಂಕಿಂಗ್). ವಿಮರ್ಶಾತ್ಮಕ ಯೋಚನೆ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳನ್ನು ಅವಲಂಬಿಸಿದ್ದು, ಮುಖ್ಯವಾಗಿ ಒಂದೇ ರೀತಿಯಲ್ಲಿ,ಹಾಕಿದ ಹಾದಿಯಲ್ಲೇಸಾಗುತ್ತದೆ. ದಿನನಿತ್ಯದ ಕೆಲಸಕ್ಕೆ ನಾವು ಇದನ್ನು ಬಳಸುತ್ತೇವೆ. ಸರಿಯಾಗಿ ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ವಿಧವಾಗಿ ಮಾಡಬಹುದೇ ಎಂದು ಯೋಚಿಸಲೂ ಸಹ ನಾವು ಹೆಚ್ಚಾಗಿ ಪ್ರಯತ್ನ ಪಡುವುದಿಲ್ಲ. ಅನಿರೀಕ್ಷಿತ ಸಮಸ್ಯೆಯೊಂದು ಉದ್ಭವಿಸಿದಾಗ ಅದರ ಪರಿಹಾರಕ್ಕೂನಮ್ಮ ಸಾಧಾರಣ ವಿಮರ್ಶಾತ್ಮಕ ಯೋಚನೆಯನ್ನೇ ಬಳಸುತ್ತೇವೆಯೇ ಹೊರತು, ಇದನ್ನು ವಿಭಿನ್ನವಾಗಿ ಯೋಚಿಸಿ ಪರಿಹರಿಸಬಹುದೇ ಎಂದು ಚಿಂತಿಸುವುದಿಲ್ಲ.

ಹಾಗಾದರೆ ನಾವು ಸೃಜನಾತ್ಮಕವಾಗಿ ಯೋಚಿಸುವುದು ಯಾವಾಗ? ಹೆಚ್ಚಾಗಿ ಸೃಜನಾತ್ಮಕ ಯೋಚನೆಗಳು ನಾವು ಸಮಸ್ಯೆಯ ಬಗ್ಗೆ ಯೋಚಿಸದೇ ಇರುವಂತಹ ಸಮಯದಲ್ಲಿ ದಿಢೀರನೇ ಹೊಳೆದವುಗಳಾಗಿರುತ್ತವೆ. ಇದನ್ನು ಮೆದುಳಿನ ಬಲಬದಿಯ ಯೋಚನೆ ಎಂದೂ ಹೇಳುತ್ತಾರೆ. ಈ ಮಿಂಚಿನಂತಹ ಉಪಯುಕ್ತ ಯೋಚನೆಗಳು ತಾವಾಗಿಯೇ ಬರಬೇಕೇ ಅಥವಾ ಅವನ್ನು ನಮಗೆ ಬೇಕಾದ ಸಮಯದಲ್ಲಿ ಹೊಳೆಯುವಂತೆ ಮಾಡಬಹುದೇ? ನಮ್ಮ ಎಲ್ಲಾ ಯೋಚನೆಗಳು ವಿಮರ್ಶಾತ್ಮಕವಾಗಿರುವುದಿಲ್ಲ ಎಂದ ಮಾತ್ರಕ್ಕೆ ಅವು ಸೃಜನಾತ್ಮಕವಾಗಿರುತ್ತವೆ ಎಂದೂ ಇಲ್ಲ. ತಲೆಯ ಗಾಲಿಗಳು ಅವಿರತವಾಗಿ ಸುತ್ತುತ್ತಿರುವಾಗ ಕೆಲವು ಮೂರ್ಖತನದ ಯೋಚನೆಗಳಾದರೆ, ಕೆಲವು ವಿಮರ್ಶಾತ್ಮಕ ಮತ್ತು ಒಂದೋ-ಎರಡೋ ಸೃಜನಾತ್ಮಕವಾಗಿರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಕೇವಲ ಸಮಸ್ಯೆಯನ್ನು ಎರಡೇ ಆಯಾಮದ ಚೌಕಟ್ಟಿನಲ್ಲಿ ನೋಡುತ್ತಿರುತ್ತೇವೆ. ಹಾಗಾದರೆ ನಾವು ತ್ರಿ-ಪರಿಮಾಣ (3-ಡೈಮೆನ್ಷನ್) ನಲ್ಲಿ ಯೋಚಿಸಲು ಸಾಧ್ಯವೇ?

ಮೇಲಿನ ಚಿತ್ರ ನೋಡಿ. ಇದರಲ್ಲಿ ಮೂರು ಬೆಂಕಿಕಡ್ದಿಗಳನ್ನು ಜೋಡಿಸಿ ಒಂದು ತ್ರಿಕೋನ (ತ್ರಿಭುಜ) ನಿರ್ಮಿಸಲಾಗಿದೆ. ಬದಿಯಲ್ಲಿರುವ ಮೂರು ಕಡ್ಡಿಗಳನ್ನು ಈ ತ್ರಿಕೋನಕ್ಕೆ ಸೇರಿಸಿ ಒಟ್ಟು ನಾಲ್ಕು ಸಮಭುಜ ತ್ರಿಕೋನ ನಿರ್ಮಿಸಲು ಸಾಧ್ಯವೇ, ಯೋಚಿಸಿ.

ಮೊದಲೇ ತಿಳಿಸಿದಂತೆ ನಮ್ಮ ಸಾಮಾನ್ಯ ವಿಮರ್ಶಾತ್ಮಕ ಯೋಚನಾಲಹರಿ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳ ಚೌಕಟ್ಟಿನಲ್ಲಿ ಬಂಧಿತಗೊಂಡು,ಚೌಕಟ್ಟಿನ ಹೊರಗೆ (ಔಟ್ ಆಫ್ ದಿ ಬಾಕ್ಸ್) ಸೃಜನಾತ್ಮಕವಾಗಿ ಥಟ್ಟನೆ ಯೋಚಿಸಲು ಬಿಡುವುದಿಲ್ಲ.

ಕೆಳಗೆ ಚಿತ್ರದಲ್ಲಿ ಇರುವ ಬಣ್ಣ-ಬಣ್ಣದ ಇಟ್ಟಿಗೆಗಳ ಬಣ್ಣವನ್ನು ಮೇಲಿಂದ ಕೆಳಗೆ ಗಟ್ಟಿಯಾಗಿ ಹೇಳುತ್ತಾ ಹೋಗಿ.

ಸುಲಭವಾಗಿ ಓದಿದಿರಿ, ಅಲ್ಲವೇ?

 

ಈಗ ಕೆಳಗೆ ಚಿತ್ರ-3 ರಲ್ಲಿರುವ ಬಣ್ಣಗಳ ಹೆಸರು ಹೇಳಿ (ಬಣ್ಣದ ಹೆಸರು, ಏನು ಬರೆದಿದೆ ಅದಲ್ಲ – ಮೊದಲನೆಯದು ತಿಳಿನೀಲಿ, ಕೆಂಪು ಅಲ್ಲ).

ನೋಡಿದಿರಾ, ನಮ್ಮ ಬುದ್ಧಿ ನಮಗೆ ಹೇಗೆ ಮೋಸ ಮಾಡುತ್ತದೆ ಎಂದು. ಈ ರೀತಿಯ ಬುದ್ಧಿ ವರ್ಧಕ ವ್ಯಾಯಾಮಗಳಿಂದ ನಮ್ಮ ಯೋಚನಾಲಹರಿಯನ್ನು ಬೇಕೆಂದಾಗ ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಒಂದೇ ದಿನದಲ್ಲಿ ಆಗುವ ಕೆಲಸವಲ್ಲ.

ಈಗ ಮತ್ತೆ ಬೆಂಕಿ ಕಡ್ಡಿಯ ಸಮಸ್ಯೆಗೆ ಬರೋಣ. ನಿಮ್ಮ ಯೋಚನಾಲಹರಿ ವಿಮರ್ಶಾತ್ಮಕವಾಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಕೆಳಕಂಡ ಚಿತ್ರ-4 ರಂತೆ ಇರಬಹುದು.

ಆದರೆ ಉತ್ತರ ತಪ್ಪು ಏಕೆಂದರೆ ಕಡ್ಡಿಗಳು ಒಂದೇ ಉದ್ದವಾಗಿರುವುದರಿಂದ ತ್ರಿಕೋನಗಳು ಸರಿಯಾಗಿ  ಸಮಭುಜ ತ್ರಿಕೋನವಾಗಿರುವುದಿಲ್ಲ.

ಆದರೆ ನಿಮ್ಮ ಯೋಚನಾಲಹರಿ ತ್ರಿಪರಿಣಾಮ (3-ಡೈಮೆನ್ಷನಲ್) ಆಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಚಿತ್ರ-5 ರಂತೆ ಕಾಣಬಹುದು. ಇದು ಸರಿಯಾದ  ಉತ್ತರ.

ಸೃಜನಾತ್ಮಕ ಯೋಚನೆ ಪ್ರತಿ ಬಾರಿ ಸರಿಯಾಗಿರಲೇಬೇಕು ಎಂದೇನಿಲ್ಲ, ಹಾಗಾಗಿ ಉತ್ತರ ಚಿತ್ರ-6 ರಂತೆಯೂ ಇರಬಹುದು.ಉತ್ತರ ಸರಿ ಎಂದು ಎಲ್ಲರಿಗೂ ಅನಿಸದಿದ್ದರೂಸಹ ಇದು ಸಮರ್ಪಕ ಉತ್ತರ.

ಇಂತಹ ಉತ್ತರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ದೊರೆಯುತ್ತದೆ. ಸೃಜನಾತ್ಮಕ ಯೋಚನಾಲಹರಿಯನ್ನು ಹೊಂದಿರುವ ಯುವಕರಿಗೆ ಕೆಲಸ ನೀಡಲು ಕಂಪನಿಗಳು ಹಾತೊರೆಯುತ್ತಿರುತ್ತವೆ. ನಮಗೆ ವಿಮರ್ಶಾತ್ಮಕ ಯೋಚನೆಯೂ ಬೇಕು ಆದರೆ ಸೃಜನಾತ್ಮಕ ಲಹರಿಯೂ ಇರಬೇಕು. ಎರಡನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ.

ನೀವೂ ಸಹ ಹೀಗೆ ಬೇಕೆಂದಾಗ ಸೃಜನಾತ್ಮಕವಾಗಿ ಯೋಚಿಸಲು ಕಲಿತಲ್ಲಿ, ನಿಮಗೆ ಕೆಲಸದ ಸಮಸ್ಯೆಯಾಗಲೀ, ನಿಮ್ಮ ಕಂಪನಿಯಲ್ಲಿ ಒಳ್ಳೆಯ ಸ್ಥಾನಮಾನಕ್ಕಾಗಲೀ ಎಂದೂ ತೊಂದರೆ ಇರುವುದಿಲ್ಲ. ಪ್ರಯತ್ನಿಸುತ್ತೀರಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...