Homeಮುಖಪುಟವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

ವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಎರಡು ವಿಧವಾದ ಯೋಚನಾಲಹರಿಯ ಅವಶ್ಯಕತೆ ಇರುತ್ತದೆ. ಮೊದಲನೆಯದು ವಿಮರ್ಶಾತ್ಮಕ ಯೋಚನೆ (ಕ್ರಿಟಿಕಲ್ ಥಿಂಕಿಂಗ್), ಎರಡನೆಯದು ಸೃಜನಾತ್ಮಕ ಯೋಚನೆ (ಕ್ರಿಯೇಟಿವ್ ಥಿಂಕಿಂಗ್). ವಿಮರ್ಶಾತ್ಮಕ ಯೋಚನೆ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳನ್ನು ಅವಲಂಬಿಸಿದ್ದು, ಮುಖ್ಯವಾಗಿ ಒಂದೇ ರೀತಿಯಲ್ಲಿ,ಹಾಕಿದ ಹಾದಿಯಲ್ಲೇಸಾಗುತ್ತದೆ. ದಿನನಿತ್ಯದ ಕೆಲಸಕ್ಕೆ ನಾವು ಇದನ್ನು ಬಳಸುತ್ತೇವೆ. ಸರಿಯಾಗಿ ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ವಿಧವಾಗಿ ಮಾಡಬಹುದೇ ಎಂದು ಯೋಚಿಸಲೂ ಸಹ ನಾವು ಹೆಚ್ಚಾಗಿ ಪ್ರಯತ್ನ ಪಡುವುದಿಲ್ಲ. ಅನಿರೀಕ್ಷಿತ ಸಮಸ್ಯೆಯೊಂದು ಉದ್ಭವಿಸಿದಾಗ ಅದರ ಪರಿಹಾರಕ್ಕೂನಮ್ಮ ಸಾಧಾರಣ ವಿಮರ್ಶಾತ್ಮಕ ಯೋಚನೆಯನ್ನೇ ಬಳಸುತ್ತೇವೆಯೇ ಹೊರತು, ಇದನ್ನು ವಿಭಿನ್ನವಾಗಿ ಯೋಚಿಸಿ ಪರಿಹರಿಸಬಹುದೇ ಎಂದು ಚಿಂತಿಸುವುದಿಲ್ಲ.

ಹಾಗಾದರೆ ನಾವು ಸೃಜನಾತ್ಮಕವಾಗಿ ಯೋಚಿಸುವುದು ಯಾವಾಗ? ಹೆಚ್ಚಾಗಿ ಸೃಜನಾತ್ಮಕ ಯೋಚನೆಗಳು ನಾವು ಸಮಸ್ಯೆಯ ಬಗ್ಗೆ ಯೋಚಿಸದೇ ಇರುವಂತಹ ಸಮಯದಲ್ಲಿ ದಿಢೀರನೇ ಹೊಳೆದವುಗಳಾಗಿರುತ್ತವೆ. ಇದನ್ನು ಮೆದುಳಿನ ಬಲಬದಿಯ ಯೋಚನೆ ಎಂದೂ ಹೇಳುತ್ತಾರೆ. ಈ ಮಿಂಚಿನಂತಹ ಉಪಯುಕ್ತ ಯೋಚನೆಗಳು ತಾವಾಗಿಯೇ ಬರಬೇಕೇ ಅಥವಾ ಅವನ್ನು ನಮಗೆ ಬೇಕಾದ ಸಮಯದಲ್ಲಿ ಹೊಳೆಯುವಂತೆ ಮಾಡಬಹುದೇ? ನಮ್ಮ ಎಲ್ಲಾ ಯೋಚನೆಗಳು ವಿಮರ್ಶಾತ್ಮಕವಾಗಿರುವುದಿಲ್ಲ ಎಂದ ಮಾತ್ರಕ್ಕೆ ಅವು ಸೃಜನಾತ್ಮಕವಾಗಿರುತ್ತವೆ ಎಂದೂ ಇಲ್ಲ. ತಲೆಯ ಗಾಲಿಗಳು ಅವಿರತವಾಗಿ ಸುತ್ತುತ್ತಿರುವಾಗ ಕೆಲವು ಮೂರ್ಖತನದ ಯೋಚನೆಗಳಾದರೆ, ಕೆಲವು ವಿಮರ್ಶಾತ್ಮಕ ಮತ್ತು ಒಂದೋ-ಎರಡೋ ಸೃಜನಾತ್ಮಕವಾಗಿರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಕೇವಲ ಸಮಸ್ಯೆಯನ್ನು ಎರಡೇ ಆಯಾಮದ ಚೌಕಟ್ಟಿನಲ್ಲಿ ನೋಡುತ್ತಿರುತ್ತೇವೆ. ಹಾಗಾದರೆ ನಾವು ತ್ರಿ-ಪರಿಮಾಣ (3-ಡೈಮೆನ್ಷನ್) ನಲ್ಲಿ ಯೋಚಿಸಲು ಸಾಧ್ಯವೇ?

ಮೇಲಿನ ಚಿತ್ರ ನೋಡಿ. ಇದರಲ್ಲಿ ಮೂರು ಬೆಂಕಿಕಡ್ದಿಗಳನ್ನು ಜೋಡಿಸಿ ಒಂದು ತ್ರಿಕೋನ (ತ್ರಿಭುಜ) ನಿರ್ಮಿಸಲಾಗಿದೆ. ಬದಿಯಲ್ಲಿರುವ ಮೂರು ಕಡ್ಡಿಗಳನ್ನು ಈ ತ್ರಿಕೋನಕ್ಕೆ ಸೇರಿಸಿ ಒಟ್ಟು ನಾಲ್ಕು ಸಮಭುಜ ತ್ರಿಕೋನ ನಿರ್ಮಿಸಲು ಸಾಧ್ಯವೇ, ಯೋಚಿಸಿ.

ಮೊದಲೇ ತಿಳಿಸಿದಂತೆ ನಮ್ಮ ಸಾಮಾನ್ಯ ವಿಮರ್ಶಾತ್ಮಕ ಯೋಚನಾಲಹರಿ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳ ಚೌಕಟ್ಟಿನಲ್ಲಿ ಬಂಧಿತಗೊಂಡು,ಚೌಕಟ್ಟಿನ ಹೊರಗೆ (ಔಟ್ ಆಫ್ ದಿ ಬಾಕ್ಸ್) ಸೃಜನಾತ್ಮಕವಾಗಿ ಥಟ್ಟನೆ ಯೋಚಿಸಲು ಬಿಡುವುದಿಲ್ಲ.

ಕೆಳಗೆ ಚಿತ್ರದಲ್ಲಿ ಇರುವ ಬಣ್ಣ-ಬಣ್ಣದ ಇಟ್ಟಿಗೆಗಳ ಬಣ್ಣವನ್ನು ಮೇಲಿಂದ ಕೆಳಗೆ ಗಟ್ಟಿಯಾಗಿ ಹೇಳುತ್ತಾ ಹೋಗಿ.

ಸುಲಭವಾಗಿ ಓದಿದಿರಿ, ಅಲ್ಲವೇ?

 

ಈಗ ಕೆಳಗೆ ಚಿತ್ರ-3 ರಲ್ಲಿರುವ ಬಣ್ಣಗಳ ಹೆಸರು ಹೇಳಿ (ಬಣ್ಣದ ಹೆಸರು, ಏನು ಬರೆದಿದೆ ಅದಲ್ಲ – ಮೊದಲನೆಯದು ತಿಳಿನೀಲಿ, ಕೆಂಪು ಅಲ್ಲ).

ನೋಡಿದಿರಾ, ನಮ್ಮ ಬುದ್ಧಿ ನಮಗೆ ಹೇಗೆ ಮೋಸ ಮಾಡುತ್ತದೆ ಎಂದು. ಈ ರೀತಿಯ ಬುದ್ಧಿ ವರ್ಧಕ ವ್ಯಾಯಾಮಗಳಿಂದ ನಮ್ಮ ಯೋಚನಾಲಹರಿಯನ್ನು ಬೇಕೆಂದಾಗ ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಒಂದೇ ದಿನದಲ್ಲಿ ಆಗುವ ಕೆಲಸವಲ್ಲ.

ಈಗ ಮತ್ತೆ ಬೆಂಕಿ ಕಡ್ಡಿಯ ಸಮಸ್ಯೆಗೆ ಬರೋಣ. ನಿಮ್ಮ ಯೋಚನಾಲಹರಿ ವಿಮರ್ಶಾತ್ಮಕವಾಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಕೆಳಕಂಡ ಚಿತ್ರ-4 ರಂತೆ ಇರಬಹುದು.

ಆದರೆ ಉತ್ತರ ತಪ್ಪು ಏಕೆಂದರೆ ಕಡ್ಡಿಗಳು ಒಂದೇ ಉದ್ದವಾಗಿರುವುದರಿಂದ ತ್ರಿಕೋನಗಳು ಸರಿಯಾಗಿ  ಸಮಭುಜ ತ್ರಿಕೋನವಾಗಿರುವುದಿಲ್ಲ.

ಆದರೆ ನಿಮ್ಮ ಯೋಚನಾಲಹರಿ ತ್ರಿಪರಿಣಾಮ (3-ಡೈಮೆನ್ಷನಲ್) ಆಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಚಿತ್ರ-5 ರಂತೆ ಕಾಣಬಹುದು. ಇದು ಸರಿಯಾದ  ಉತ್ತರ.

ಸೃಜನಾತ್ಮಕ ಯೋಚನೆ ಪ್ರತಿ ಬಾರಿ ಸರಿಯಾಗಿರಲೇಬೇಕು ಎಂದೇನಿಲ್ಲ, ಹಾಗಾಗಿ ಉತ್ತರ ಚಿತ್ರ-6 ರಂತೆಯೂ ಇರಬಹುದು.ಉತ್ತರ ಸರಿ ಎಂದು ಎಲ್ಲರಿಗೂ ಅನಿಸದಿದ್ದರೂಸಹ ಇದು ಸಮರ್ಪಕ ಉತ್ತರ.

ಇಂತಹ ಉತ್ತರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ದೊರೆಯುತ್ತದೆ. ಸೃಜನಾತ್ಮಕ ಯೋಚನಾಲಹರಿಯನ್ನು ಹೊಂದಿರುವ ಯುವಕರಿಗೆ ಕೆಲಸ ನೀಡಲು ಕಂಪನಿಗಳು ಹಾತೊರೆಯುತ್ತಿರುತ್ತವೆ. ನಮಗೆ ವಿಮರ್ಶಾತ್ಮಕ ಯೋಚನೆಯೂ ಬೇಕು ಆದರೆ ಸೃಜನಾತ್ಮಕ ಲಹರಿಯೂ ಇರಬೇಕು. ಎರಡನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ.

ನೀವೂ ಸಹ ಹೀಗೆ ಬೇಕೆಂದಾಗ ಸೃಜನಾತ್ಮಕವಾಗಿ ಯೋಚಿಸಲು ಕಲಿತಲ್ಲಿ, ನಿಮಗೆ ಕೆಲಸದ ಸಮಸ್ಯೆಯಾಗಲೀ, ನಿಮ್ಮ ಕಂಪನಿಯಲ್ಲಿ ಒಳ್ಳೆಯ ಸ್ಥಾನಮಾನಕ್ಕಾಗಲೀ ಎಂದೂ ತೊಂದರೆ ಇರುವುದಿಲ್ಲ. ಪ್ರಯತ್ನಿಸುತ್ತೀರಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...