Homeಮುಖಪುಟವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

ವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಎರಡು ವಿಧವಾದ ಯೋಚನಾಲಹರಿಯ ಅವಶ್ಯಕತೆ ಇರುತ್ತದೆ. ಮೊದಲನೆಯದು ವಿಮರ್ಶಾತ್ಮಕ ಯೋಚನೆ (ಕ್ರಿಟಿಕಲ್ ಥಿಂಕಿಂಗ್), ಎರಡನೆಯದು ಸೃಜನಾತ್ಮಕ ಯೋಚನೆ (ಕ್ರಿಯೇಟಿವ್ ಥಿಂಕಿಂಗ್). ವಿಮರ್ಶಾತ್ಮಕ ಯೋಚನೆ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳನ್ನು ಅವಲಂಬಿಸಿದ್ದು, ಮುಖ್ಯವಾಗಿ ಒಂದೇ ರೀತಿಯಲ್ಲಿ,ಹಾಕಿದ ಹಾದಿಯಲ್ಲೇಸಾಗುತ್ತದೆ. ದಿನನಿತ್ಯದ ಕೆಲಸಕ್ಕೆ ನಾವು ಇದನ್ನು ಬಳಸುತ್ತೇವೆ. ಸರಿಯಾಗಿ ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ವಿಧವಾಗಿ ಮಾಡಬಹುದೇ ಎಂದು ಯೋಚಿಸಲೂ ಸಹ ನಾವು ಹೆಚ್ಚಾಗಿ ಪ್ರಯತ್ನ ಪಡುವುದಿಲ್ಲ. ಅನಿರೀಕ್ಷಿತ ಸಮಸ್ಯೆಯೊಂದು ಉದ್ಭವಿಸಿದಾಗ ಅದರ ಪರಿಹಾರಕ್ಕೂನಮ್ಮ ಸಾಧಾರಣ ವಿಮರ್ಶಾತ್ಮಕ ಯೋಚನೆಯನ್ನೇ ಬಳಸುತ್ತೇವೆಯೇ ಹೊರತು, ಇದನ್ನು ವಿಭಿನ್ನವಾಗಿ ಯೋಚಿಸಿ ಪರಿಹರಿಸಬಹುದೇ ಎಂದು ಚಿಂತಿಸುವುದಿಲ್ಲ.

ಹಾಗಾದರೆ ನಾವು ಸೃಜನಾತ್ಮಕವಾಗಿ ಯೋಚಿಸುವುದು ಯಾವಾಗ? ಹೆಚ್ಚಾಗಿ ಸೃಜನಾತ್ಮಕ ಯೋಚನೆಗಳು ನಾವು ಸಮಸ್ಯೆಯ ಬಗ್ಗೆ ಯೋಚಿಸದೇ ಇರುವಂತಹ ಸಮಯದಲ್ಲಿ ದಿಢೀರನೇ ಹೊಳೆದವುಗಳಾಗಿರುತ್ತವೆ. ಇದನ್ನು ಮೆದುಳಿನ ಬಲಬದಿಯ ಯೋಚನೆ ಎಂದೂ ಹೇಳುತ್ತಾರೆ. ಈ ಮಿಂಚಿನಂತಹ ಉಪಯುಕ್ತ ಯೋಚನೆಗಳು ತಾವಾಗಿಯೇ ಬರಬೇಕೇ ಅಥವಾ ಅವನ್ನು ನಮಗೆ ಬೇಕಾದ ಸಮಯದಲ್ಲಿ ಹೊಳೆಯುವಂತೆ ಮಾಡಬಹುದೇ? ನಮ್ಮ ಎಲ್ಲಾ ಯೋಚನೆಗಳು ವಿಮರ್ಶಾತ್ಮಕವಾಗಿರುವುದಿಲ್ಲ ಎಂದ ಮಾತ್ರಕ್ಕೆ ಅವು ಸೃಜನಾತ್ಮಕವಾಗಿರುತ್ತವೆ ಎಂದೂ ಇಲ್ಲ. ತಲೆಯ ಗಾಲಿಗಳು ಅವಿರತವಾಗಿ ಸುತ್ತುತ್ತಿರುವಾಗ ಕೆಲವು ಮೂರ್ಖತನದ ಯೋಚನೆಗಳಾದರೆ, ಕೆಲವು ವಿಮರ್ಶಾತ್ಮಕ ಮತ್ತು ಒಂದೋ-ಎರಡೋ ಸೃಜನಾತ್ಮಕವಾಗಿರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಕೇವಲ ಸಮಸ್ಯೆಯನ್ನು ಎರಡೇ ಆಯಾಮದ ಚೌಕಟ್ಟಿನಲ್ಲಿ ನೋಡುತ್ತಿರುತ್ತೇವೆ. ಹಾಗಾದರೆ ನಾವು ತ್ರಿ-ಪರಿಮಾಣ (3-ಡೈಮೆನ್ಷನ್) ನಲ್ಲಿ ಯೋಚಿಸಲು ಸಾಧ್ಯವೇ?

ಮೇಲಿನ ಚಿತ್ರ ನೋಡಿ. ಇದರಲ್ಲಿ ಮೂರು ಬೆಂಕಿಕಡ್ದಿಗಳನ್ನು ಜೋಡಿಸಿ ಒಂದು ತ್ರಿಕೋನ (ತ್ರಿಭುಜ) ನಿರ್ಮಿಸಲಾಗಿದೆ. ಬದಿಯಲ್ಲಿರುವ ಮೂರು ಕಡ್ಡಿಗಳನ್ನು ಈ ತ್ರಿಕೋನಕ್ಕೆ ಸೇರಿಸಿ ಒಟ್ಟು ನಾಲ್ಕು ಸಮಭುಜ ತ್ರಿಕೋನ ನಿರ್ಮಿಸಲು ಸಾಧ್ಯವೇ, ಯೋಚಿಸಿ.

ಮೊದಲೇ ತಿಳಿಸಿದಂತೆ ನಮ್ಮ ಸಾಮಾನ್ಯ ವಿಮರ್ಶಾತ್ಮಕ ಯೋಚನಾಲಹರಿ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳ ಚೌಕಟ್ಟಿನಲ್ಲಿ ಬಂಧಿತಗೊಂಡು,ಚೌಕಟ್ಟಿನ ಹೊರಗೆ (ಔಟ್ ಆಫ್ ದಿ ಬಾಕ್ಸ್) ಸೃಜನಾತ್ಮಕವಾಗಿ ಥಟ್ಟನೆ ಯೋಚಿಸಲು ಬಿಡುವುದಿಲ್ಲ.

ಕೆಳಗೆ ಚಿತ್ರದಲ್ಲಿ ಇರುವ ಬಣ್ಣ-ಬಣ್ಣದ ಇಟ್ಟಿಗೆಗಳ ಬಣ್ಣವನ್ನು ಮೇಲಿಂದ ಕೆಳಗೆ ಗಟ್ಟಿಯಾಗಿ ಹೇಳುತ್ತಾ ಹೋಗಿ.

ಸುಲಭವಾಗಿ ಓದಿದಿರಿ, ಅಲ್ಲವೇ?

 

ಈಗ ಕೆಳಗೆ ಚಿತ್ರ-3 ರಲ್ಲಿರುವ ಬಣ್ಣಗಳ ಹೆಸರು ಹೇಳಿ (ಬಣ್ಣದ ಹೆಸರು, ಏನು ಬರೆದಿದೆ ಅದಲ್ಲ – ಮೊದಲನೆಯದು ತಿಳಿನೀಲಿ, ಕೆಂಪು ಅಲ್ಲ).

ನೋಡಿದಿರಾ, ನಮ್ಮ ಬುದ್ಧಿ ನಮಗೆ ಹೇಗೆ ಮೋಸ ಮಾಡುತ್ತದೆ ಎಂದು. ಈ ರೀತಿಯ ಬುದ್ಧಿ ವರ್ಧಕ ವ್ಯಾಯಾಮಗಳಿಂದ ನಮ್ಮ ಯೋಚನಾಲಹರಿಯನ್ನು ಬೇಕೆಂದಾಗ ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಒಂದೇ ದಿನದಲ್ಲಿ ಆಗುವ ಕೆಲಸವಲ್ಲ.

ಈಗ ಮತ್ತೆ ಬೆಂಕಿ ಕಡ್ಡಿಯ ಸಮಸ್ಯೆಗೆ ಬರೋಣ. ನಿಮ್ಮ ಯೋಚನಾಲಹರಿ ವಿಮರ್ಶಾತ್ಮಕವಾಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಕೆಳಕಂಡ ಚಿತ್ರ-4 ರಂತೆ ಇರಬಹುದು.

ಆದರೆ ಉತ್ತರ ತಪ್ಪು ಏಕೆಂದರೆ ಕಡ್ಡಿಗಳು ಒಂದೇ ಉದ್ದವಾಗಿರುವುದರಿಂದ ತ್ರಿಕೋನಗಳು ಸರಿಯಾಗಿ  ಸಮಭುಜ ತ್ರಿಕೋನವಾಗಿರುವುದಿಲ್ಲ.

ಆದರೆ ನಿಮ್ಮ ಯೋಚನಾಲಹರಿ ತ್ರಿಪರಿಣಾಮ (3-ಡೈಮೆನ್ಷನಲ್) ಆಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಚಿತ್ರ-5 ರಂತೆ ಕಾಣಬಹುದು. ಇದು ಸರಿಯಾದ  ಉತ್ತರ.

ಸೃಜನಾತ್ಮಕ ಯೋಚನೆ ಪ್ರತಿ ಬಾರಿ ಸರಿಯಾಗಿರಲೇಬೇಕು ಎಂದೇನಿಲ್ಲ, ಹಾಗಾಗಿ ಉತ್ತರ ಚಿತ್ರ-6 ರಂತೆಯೂ ಇರಬಹುದು.ಉತ್ತರ ಸರಿ ಎಂದು ಎಲ್ಲರಿಗೂ ಅನಿಸದಿದ್ದರೂಸಹ ಇದು ಸಮರ್ಪಕ ಉತ್ತರ.

ಇಂತಹ ಉತ್ತರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ದೊರೆಯುತ್ತದೆ. ಸೃಜನಾತ್ಮಕ ಯೋಚನಾಲಹರಿಯನ್ನು ಹೊಂದಿರುವ ಯುವಕರಿಗೆ ಕೆಲಸ ನೀಡಲು ಕಂಪನಿಗಳು ಹಾತೊರೆಯುತ್ತಿರುತ್ತವೆ. ನಮಗೆ ವಿಮರ್ಶಾತ್ಮಕ ಯೋಚನೆಯೂ ಬೇಕು ಆದರೆ ಸೃಜನಾತ್ಮಕ ಲಹರಿಯೂ ಇರಬೇಕು. ಎರಡನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ.

ನೀವೂ ಸಹ ಹೀಗೆ ಬೇಕೆಂದಾಗ ಸೃಜನಾತ್ಮಕವಾಗಿ ಯೋಚಿಸಲು ಕಲಿತಲ್ಲಿ, ನಿಮಗೆ ಕೆಲಸದ ಸಮಸ್ಯೆಯಾಗಲೀ, ನಿಮ್ಮ ಕಂಪನಿಯಲ್ಲಿ ಒಳ್ಳೆಯ ಸ್ಥಾನಮಾನಕ್ಕಾಗಲೀ ಎಂದೂ ತೊಂದರೆ ಇರುವುದಿಲ್ಲ. ಪ್ರಯತ್ನಿಸುತ್ತೀರಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...