Homeಕರ್ನಾಟಕವಿಕ್ಸು, ಗ್ಲಿಸರಿನ್‌ ಹಚ್ಚಿಕೊಂಡು ಎಚ್‌ಡಿಕೆ ಅಳುತ್ತಾರೆ: ಸದಾನಂದಗೌಡರ ಥರ ಎಲ್ಲದಕ್ಕೂ ನಾನು ಹಲ್ಲುಬಿಟ್ಟುಕೊಂಡು ನಿಂತುಕೊಳ್ಳುವುದಿಲ್ಲ -...

ವಿಕ್ಸು, ಗ್ಲಿಸರಿನ್‌ ಹಚ್ಚಿಕೊಂಡು ಎಚ್‌ಡಿಕೆ ಅಳುತ್ತಾರೆ: ಸದಾನಂದಗೌಡರ ಥರ ಎಲ್ಲದಕ್ಕೂ ನಾನು ಹಲ್ಲುಬಿಟ್ಟುಕೊಂಡು ನಿಂತುಕೊಳ್ಳುವುದಿಲ್ಲ – ಏನಿದು ಜಟಾಪಟಿ

ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸದಾನಂದಗೌಡರ ನಡುವೆ ಕಣ್ಣೀರಿನ ವಿಚಾರಕ್ಕೆ ಪರಸ್ಪರ ಆರೋಪ ಪ್ರತ್ಯಾರೋಪ..

- Advertisement -
- Advertisement -

ಎಷ್ಟು ಜನ ಬಡವರು ನಿಮ್ಮ ಮನೆ ಹತ್ರ ಬಂದಿದ್ದಾರೆ ಸದಾನಂದಗೌಡರೇ? ಎಷ್ಟು ಜನರ ನೋವಿಗೆ ನೀವು ಸ್ಪಂದಿಸಿದ್ದೀರಿ? ಬನ್ನಿ ನಮ್ಮ ಮನೆ ಹತ್ತಿರ ನೋಡಿ ಎಷ್ಟು ಜನ ಹಸಿದುಕೊಂಡು ಬರುತ್ತಾರೆ ಅಂತ. ಇಲ್ಲ ನಿಮ್ಮ ಕೇಂದ್ರದ ಗೂಢಚಾರರನ್ನು ಕಳಿಸಿ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನವೀಯತೆ ಎಂಬುದು ಸದಾನಂದಗೌಡರಿಗೆ ಎಲ್ಲಿ ಗೊತ್ತಿದೆ. ನಮ್ಮಲ್ಲಿ ನೂರು ದಿನದ ನಾಟಕ, ಇನ್ನೂರು ದಿನದ ನಾಟಕ ಎಂದು ಹೇಳುತ್ತಾರೆ. ಹೌದು ನೀವು ಬಂದಿರುವುದೇ ನಾಟಕ ಆಡುವ ಕಡೆಯಿಂದ. ಕಲಾವಿದರ ಬಗ್ಗೆ ನಾನು ಅಗೌರವ ತೋರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ನಾನು ವಿಕ್ಸು, ಗ್ಲಿಸರಿನ್‌ ಹಚ್ಚಿಕೊಂಡು ಅಳುವುದಿಲ್ಲ. ಬಡವರ ಕಣ್ಣೀರು ನೋಡಿದೊಡನೆಯೇ ನನಗೂ ಕಣ್ಣೀರು ಸುರಿಸುತ್ತೇನೆ. ನಮ್ಮ ಹೃದಯದ ನೋವನ್ನು ಅಳುವಿನ ಮೂಲಕ ಹೊರಹಾಕುತ್ತೇನೆ. ಇದು ಡ್ರಾಮ ಕಣ್ಣೀರು ಅಲ್ಲ. ನಮ್ಮದು ಭಾವನಾತ್ಮಕ ಜೀವನ. ಅದು ನಮ್ಮ ಕುಟುಂಬದಿಂದಲೇ ಬಂದಿರುವ ರೂಢಿ. ಅದನ್ನು ನಮ್ಮ ಕುಟುಂಬದ ಪೆಟೇಂಟ್‌ ಎಂದೇ ಹೇಳುತ್ತೇನೆ ಎಂದು ಭಾವುಕರಾಗಿ ಎಚ್‌ಡಿಕೆ ಮಾತನಾಡಿದ್ದಾರೆ.

ಸದಾನಂದಗೌಡರ ಥರ ಎಲ್ಲದಕ್ಕೂ ನಾನು ಹಲ್ಲುಬಿಟ್ಟುಕೊಂಡು ನಿಂತುಕೊಳ್ಳುವವನಲ್ಲ ನಾನು. ಅವರಿಂದ ಪಾಠ ಕಲಿಯಬೇಕಾಗಿಲ್ಲ. ಪ್ರವಾಹದಲ್ಲಿ 22 ಜಿಲ್ಲೆಗಳು ಸಂಕಷ್ಟದಿಂದ ಇವೆ. ದೇವೇಗೌಡರ, ಕುಮಾರಸ್ವಾಮಿಯವರ ಕಣ್ಣೀರಿನಿಂದ ಇನ್ನುಳಿದ ಜಿಲ್ಲೆಗಳು ಮುಳಗದಿರಲಿ ಎಂದು ಅಪಹಾಸ್ಯ ಮಾಡಿದ್ದಾರೆ. ಅವರು ಎಷ್ಟು ಕಡೆ ಹೋಗಿ ಜನರ ಕಷ್ಟ ಕೇಳಿದ್ದಾರೆ? ನಿಮ್ಮ ಯೋಗ್ಯತೆಗೆ

ದೀಪಾವಳಿ ಹಬ್ಬ, ಗಣೇಶನ ಹಬ್ಬ ಮಾಡದೇ ಪರದಾಡುತ್ತಿದ್ದಾರೆ. ನಾನು ಹೋಗಿದ್ದೇನೆ. ಲಿಂಗಾಯಿತ ಸಮಾಜದ ಒಂದೂವರೆ ತಿಂಗಳ ಮಗು, ವಿಧವೆ ತಾಯಿ ಸಂಕಷ್ಟದಿಂದ ಇದ್ದರು. ನಾನು 2 ಲಕ್ಷ ದುಡ್ಡು ಕೊಟ್ಟು ಬಂದಿದ್ದೇನೆ.

ಸದಾನಂದಗೌಡರು ಈ ಮೊದಲು “ಗ್ಲಿಸರಿನ್‌ ಮತ್ತು ವಿಕ್ಸ್‌ ಹಂಚಿಕೊಂಡು ಮಾಜಿ ಪ್ರಧಾನಿ ಮತ್ತು ಕುಮಾರಸ್ವಾಮಿ. ಇದು ಅವರ ಕುಟುಂಬದ ಹುಟ್ಟು ಗುಣ. ಇ ಬಗ್ಗೆ ಅವರ ಜೊತೆ ಇದ್ದ ಜಮೀರ್‌ ಚೆನ್ನಾಗಿ ಹೇಳಿದ್ದಾರೆ. ಅದು ವಿಕ್ಸ್‌ ಕಣ್ಣೀರು, ಜನ ಇದನ್ನೆಲ್ಲಾ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ಕಣ್ಣೀರ ಪ್ರವಾಹ ಡೇಂಜರಸ್‌ ಪ್ರವಾಹ. ಎಷ್ಟು ದಿನ ನಾಟಕ ಮಾಡುತ್ತಾರೆ. ಹಿಂದೆ ನೂರು ದಿನ, ಇನ್ನೂರು ದಿನ ನಾಟಕ ನೋಡುತ್ತಿದ್ದರು. ಈಗ ಅವರ ನಾಟಕ ನಡೆಯುವುದಿಲ್ಲ. ದೇವೇಗೌಡರು ನಂತರ ಕುಮಾರಸ್ವಾಮಿ ಮುಂದೆ ನಿಖಿಲ್‌ ಕೂಡ ಇದೇ ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗಿವೆ, ಐದು ದಿನಗಳ ಕಾಲ ದಾಳಿ ಮಾಡದಂತೆ ಸೂಚಿಸಿದ್ದೇನೆ : ಟ್ರಂಪ್

ಕಳೆದ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿವೆ. ಆದ್ದರಿಂದ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಐದು ದಿನಗಳವರೆಗೆ ಮುಂದೂಡಲು ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಎಸ್‌ಐಆರ್ ದೂರಾಲೋಚನೆ ಅಲ್ಲ, ಸಿಎಎ-ಎನ್‌ಆರ್‌ಸಿ ಜಾರಿಗೊಳಿಸುವ ದುರಾಲೋಚನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು 'ದೂರಾಲೋಚನೆ'ಯಲ್ಲ, ಬದಲಿಗೆ ಅದು ಸಿಎಎ-ಎನ್‌ಅರ್‌ಸಿಯನ್ನು ಜಾರಿಗೊಳಿಸುವ 'ದುರಾಲೋಚನೆ'ಯನ್ನು ತನ್ನ ಒಡಲಲ್ಲಿಟ್ಟಿಕೊಂಡಿದೆ. ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿರುವಾಗ ಕರ್ನಾಟಕದಲ್ಲಿ ತರಾರುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಬಾರದು...

ಸ್ವಘೋಷಿತ ದೇವಮಾನವನ ಖರಾತ್ ವಿರುದ್ಧ ಮತ್ತೆರಡು ಎಫ್‌ಐಆರ್ : ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಆರೋಪ

ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳ ಮೇಲೆ ಈಗಾಗಲೇ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿ ಅಶೋಕ್ ಖರಾತ್ ವಿರುದ್ಧ ಮಹಾರಾಷ್ಟ್ರದ ನಾಸಿಕ್‌ನ ಸರ್ಕಾರವಾಡಾ ಪೊಲೀಸರು ಶನಿವಾರ (ಮಾ.21) ಎರಡು ಹೊಸ ಅತ್ಯಾಚಾರ...

ದಲಿತ ಮಹಿಳೆ ಮೇಲೆ ಸಾರ್ವಜನಿಕವಾಗಿ ಹಲ್ಲೆ; ಹಾಡಗಲೇ ಕೂದಲಿಡಿದು ಎಳೆದಾಡಿದ ಪಂಜಾಬ್ ಪೊಲೀಸರು

ಪಂಜಾಬ್‌ನ ಜಲಂಧರ್‌ನಲ್ಲಿ ಕಳೆದ ಶುಕ್ರವಾರ (ಮಾ.20), ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಾಡಿದ್ದಾರೆ ಎಂದು 'ಸಿಯಾಸಾಟ್.ಕಾಮ್' ವರದಿ ಮಾಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ...

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ; ಇಬ್ಬರು ಸಾವು

ಭಾನುವಾರ ತಡರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಸುಮಾರು 76 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ನೆಲದ ಮೇಲೆ ಚಲಿಸುತ್ತಿದ್ದ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೈಲಟ್ ಮತ್ತು...

‘ತೀರ್ಮಾನಿಸಲು ಏನೂ ಉಳಿದಿಲ್ಲ’ : ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿದ್ದ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್

ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾ.23)...

ಡೋನಾಲ್ಡ್‌ ಟ್ರಂಪ್ ಕಠಿಣ ವೀಸಾ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿದ ಭಾರತ-ಚೀನಾ

ಡೊನಾಲ್ಡ್‌ ಟ್ರಂಪ್ ಆಡಳಿತವು ಅನಾವರಣಗೊಳಿಸಿದ ಕಠಿಣ ವಲಸೆ ನೀತಿಯ ಗರಿಷ್ಠ ಹೊರೆಯು ಭಾರತ ಮತ್ತು ಚೀನಾ ದೇಶಗಳ ಮೇಲೆ ಬಿದ್ದಿದೆ. 2024 ರ ಅದೇ ಅವಧಿಗೆ ಹೋಲಿಸಿದರೆ 2025 ರ ಮೊದಲ ಎಂಟು...

ಉತ್ತರಾಖಂಡ| ಪೌರಿಯಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪ; ದೂರು ದಾಖಲು

ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ನಂತರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು (ಮಾ.22) ತಿಳಿಸಿದ್ದಾರೆ. ಮಾರ್ಚ್ 21 ರ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಲಕನಂದಾ...

ಅಸ್ಸಾಂ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಚಿವೆ ನಂದಿತಾ ಗರ್ಲೋಸಾ

ಅಸ್ಸಾಂನ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ನಂದಿತಾ ಗರ್ಲೋಸಾ ಅವರು ಭಾನುವಾರ (ಮಾ.22) ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ನಂದಿತಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ನಂದಿತಾ ಅವರು ಪ್ರತಿನಿಧಿಸುತ್ತಿದ್ದ...

ಉತ್ತರ ಪ್ರದೇಶ| ವಾಲ್ಮೀಕಿ ಸಮುದಾಯದ ವಿರುದ್ಧ ಹೇಳಿಕೆ; ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಬಂಧನ

ವಾಲ್ಮೀಕಿ ಸಮುದಾಯದ ವಿರುದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನೀಡಿದ ಆಕ್ಷೇಪಾರ್ಹ ಹೇಳಿಕೆ ಆಕ್ರೋಶ ವ್ಯಕ್ತವಾಗಿದ್ದು, ಸಮುದಾಯದಿಂದ ಪ್ರತಿಭಟನೆ ಮತ್ತು ರಸ್ತೆ ತಡೆಗೆ ಕಾರಣವಾದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಗವಾನ್ ಪಕ್ಡಿಯಾ...