Homeಅಂಕಣಗಳುಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ'

ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’

- Advertisement -
- Advertisement -

ನಂದಿನಿ, 17 ವರ್ಷದ ಯುವತಿ. ತಮಿಳುನಾಡಿನ ಅರಿಯೂರು ಜಿಲ್ಲೆಯ ಸಿರುಕಡಂಬೂರ್ ಎಂಬ ಹಳ್ಳಿಯ ದಲಿತ ಸಮುದಾಯ ಪರೈಯ್ಯಾ ಕುಟುಂಬದ ಯುವತಿ. ತಮಿಳುನಾಡಿನಲ್ಲಿ ಪ್ರತ್ಯೇಕವಾಗಿ ದಲಿತರ ಕಾಲೋನಿಗಳು ಕಣ್ಣಿಗೆ ಎದ್ದು ಕಾಣುವಂತೆಯೇ ಇರುತ್ತವೆ. ಸಿರುಕಡಂಬೂರಿನ ದಲಿತರ ಕಾಲೋನಿಯೂ ಹಾಗೆಯೇ ಇತ್ತು. ಈ ವಿದ್ಯಮಾನ ಇಡೀ ಭಾರತಕ್ಕೆ ಅನ್ವಯಿಸುತ್ತದೆ ಬಿಡಿ. ನಂದಿನಿ ಓದಿದ್ದು 8ನೇ ತರಗತಿಯವರೆಗೆ ಮಾತ್ರ. ಕುಟುಂಬದ ಕಡುಬಡತನ ಹೆಚ್ಚು ಓದಲು ಅವಳಿಗೆ ಬಿಡಲಿಲ್ಲ. ಹಾಗಾಗಿ ಶಾಲೆಯನ್ನು ಬಿಟ್ಟವಳೇ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡಲು ಆರಂಭಿಸಿದಳು. ಹಾಸ್ಯಭರಿತ ಮಾತು ಹಾಗು ಚುರುಕು ಬುದ್ಧಿಯಿಂದಾಗಿ ಅವಳು ಕೆಲಸ ಮಾಡುವ ಜಾಗದಲ್ಲಿಯೂ ಹೆಸರುವಾಸಿಯಾಗಿದ್ದಳು.

ಹೀಗಿದ್ದ ನಂದಿನಿ ದಿನಾಂಕ 29, ಡಿಸೆಂಬರ್ 2016ರಂದು ದಿಢೀರನೇ ಕಣ್ಮರೆಯಾದಳು. ಆ ದಿನ ಸಂಜೆ ನಂದಿನಿಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ’ನಂದಿನಿ ತನ್ನ ಬಳಿ ಇದ್ದಾಳೆ’ ಎಂದು ಹೇಳಿದ್ದ. ಗಾಬರಿಗೊಂಡ ನಂದಿನಿ ಕುಟುಂಬ ಪೊಲೀಸರಿಗೆ ದೂರು ನೀಡಿತು. ದೂರಿನಲ್ಲಿ ಮಣಿಕಂಠನ್ ಎಂಬ ವಣ್ಣಿಯಾರ್ ಹಿಂದೂ ಮೇಲ್ಜಾತಿಗೆ ಸೇರಿದ್ದ ವ್ಯಕ್ತಿಯ ವಿರುದ್ಧ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದರು. ಈ ಮಣಿಕಂಠನ್ ’ಹಿಂದೂ ಮುನ್ನಾಣಿ’ ಸಂಘಟನೆಯ ಕಾರ್ಯದರ್ಶಿಯಾಗಿದ್ದನು. ಹಿಂದೂ ಮುನ್ನಾಣಿ ಸಂಘಟನೆಯನ್ನು 1980ರಲ್ಲಿ ’ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ರಾಮಗೋಪಾಲನ್ ಅವರು ಸ್ಥಾಪಿಸಿದ್ದರು. ಈಗದು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಪರಿವಾರದ ಭಾಗವಾಗಿದೆ.

ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದರು. ಅಪ್ರಾಪ್ತೆ ನಂದಿನಿ ಕಾಣೆಯಾಗಿದ್ದ ಕಾರಣ ’ಮಿಸ್ಸಿಂಗ್ ಕಂಪ್ಲೇಂಟ್’ ದಾಖಲಿಸಿಕೊಂಡಿದ್ದರು. ವಿಚಾರಣೆಯ ವೇಳೆ ನಂದಿನಿಯ ಆಪ್ತ ಸ್ನೇಹಿತೆಯಾಗಿದ್ದ ದೇವಿಯೂ ಮಣಿಕಂಠನ ಹೆಸರನ್ನು ಪ್ರಸ್ತಾಪಿಸಿದಳು. ಅಷ್ಟೇ ಅಲ್ಲದೇ ನಂದಿನಿ ಮತ್ತು ಮಣಿಕಂಠನ್ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದುದಾಗಿ ಹಾಗೂ ಇತ್ತೀಚೆಗೆ ನಂದಿನಿ ’ತಾನು ಗರ್ಭಿಣಿ’ ಆಗಿರುವುದಾಗಿಯೂ ಹೇಳಿಕೊಂಡಿದ್ದಳೆಂದು ದೇವಿ ತಿಳಿಸಿದಳು. ಈ ಕಾರಣವಾಗಿ ದಿನಾಂಕ 5, ಜನವರಿ 2017ರಂದು ಮಣಿಕಂಠನ ವಿಚಾರಣೆಯನ್ನು ಪೊಲೀಸರು ಮಾಡಿದ್ದರು. ಅಂದು ಸಂಜೆಯ ವೇಳೆಗಾಗಲೇ ವಣ್ಣಿಯಾರ್ ಸಮುದಾಯದ ಹಿರಿಯರು ಆತನನ್ನು ಮನೆಗೆ ಕರೆದುಕೊಂಡು ಹೋದರು. ಈ ಘಟನೆಯಾದ ಮಾರನೇ ದಿನದಿಂದ ಮಣಿಕಂಠನ್ ನಾಪತ್ತೆಯಾದನು. ಆತನ ಮೇಲಿದ್ದ ಕುಟುಂಬದವರ ಅನುಮಾನ ನಿಜವಾಗಿತ್ತು. ಪೊಲೀಸರು ಮಣಿಕಂಠನ ಪತ್ತೆಗಾಗಿ ಶೋಧಿಸತೊಡಗಿದರು.

ಇದಾದ ವಾರದ ನಂತರ ಮಣಿಕಂಠನ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದನು. ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಣಿಕಂಠನ್‌ನನ್ನು ಪರಿಚಿತರು ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖನಾದ ಮಣಿಕಂಠನ್ ಪೊಲೀಸರ ಬಳಿ ಬಾಯಿಬಿಟ್ಟ ವಿಷಯ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದರು. ಹಿಂದೂರಾಷ್ಟ್ರ ಚಿಂತನೆಯಲ್ಲಿ ಬೆಳೆದುಬಂದ ಮಣಿಕಂಠನೊಳಗಿದ್ದ ಮಾನವ ವಿರೋಧಿ ಜಾತಿಪದ್ಧತಿಯ ಕರಾಳ ಮುಖವನ್ನು ನೋಡಿ ಪೊಲೀಸರಷ್ಟೇ ಅಲ್ಲ, ಇಡೀ ತಮಿಳುನಾಡು ಬೆಚ್ಚಿಬಿದ್ದಿತು.

ನಂದಿನಿ ಕೆಲಸ ಮಾಡುತ್ತಿದ್ದ ಕಟ್ಟಡದ ಉಸ್ತುವಾರಿ ಹೊತ್ತಿದ್ದವನು ಮಣಿಕಂಠನ್. ಅಲ್ಲಿ ಅವರಿಬ್ಬರ ನಡುವೆ ಸಲುಗೆ ಬೆಳೆದು ಮಣಿಕಂಠನ ಪ್ರೀತಿಯೆಂಬ ನಾಟಕಕ್ಕೆ ತಲೆದೂಗಿದ್ದ ನಂದಿನಿ ಮೈಮನಸ್ಸನ್ನು ಒಪ್ಪಿಸಿದ್ದಳು. ಇದರಿಂದಾಗಿ ಗರ್ಭಿಣಿಯಾಗಿದ್ದ ನಂದಿನಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಕ್ಕೆ ’ಮೊದಲು ಗರ್ಭಪಾತ ಮಾಡಿಸಿಕೋ’ ಎಂದು ತಾಕೀತು ಮಾಡಿದ್ದ ಮಣಿಕಂಠನ್. ಅವಳೆಷ್ಟೇ ಬೇಡಿಕೊಂಡರೂ ಅದಕ್ಕೆ ಮಣಿಯದ ಮಣಿಕಂಠನ್ ಗರ್ಭಪಾತವಾದ ನಂತರವೇ ಮದುವೆ ಎಂದು ಹೇಳಿದ್ದನಾದರೂ ಅದಕ್ಕೆ ಒಪ್ಪಿಕೊಳ್ಳದ ನಂದಿನಿ ಇದ್ದ ವಿಷಯವನ್ನು ತನ್ನ ಆಪ್ತರೊಂದಿಗೆ ಹೇಳಿದ್ದಳು. ಇದನ್ನು ಸಹಿಸದ ಮಣಿಕಂಠನ್ ದಿನಾಂಕ 29, ಡಿಸೆಂಬರ್ 2016ರಂದು ನಂದಿನಿಯನ್ನು ಹೊರಗಡೆ ಭೇಟಿಯಾಗುವಂತೆ ತಿಳಿಸಿದ್ದ; ನಂದಿನಿ ಭೇಟಿ ಮಾಡಲು ಬಂದಾಗ ತನ್ನ ಮೂವರು ಸ್ನೇಹಿತರೊಡನೆ ಆಕೆಯನ್ನ ಅಪಹರಿಸಿದ್ದನು. ಮೂರು ದಿನಗಳ ನಂತರ ನಂದಿನಿಯ ಮೇಲೆ ಮೃಗಗಳಂತೆ ಎರಗಿದ ನಾಲ್ವರು ಗಂಡು ಪಿಶಾಚಿಗಳು ಒಬ್ಬರಾದ ಮೇಲೊಬ್ಬರಂತೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಿತ್ರಾಣಳಾಗಿ ಬಿದ್ದಿದ್ದ ನಂದಿನಿಯ ಜನನಾಂಗವನ್ನು ಬ್ಲೇಡಿನಿಂದ ಕೊಯ್ದು ಅವಳ ಗರ್ಭಕ್ಕೆ ಕೈ ಹಾಕಿ ಭ್ರೂಣವನ್ನು ಹೊರತೆಗೆದು ಬಿಸಾಡಿದರು. ಪ್ರಜ್ಞೆ ತಪ್ಪಿದ್ದ ನಂದಿನಿ ರಕ್ತಸ್ರಾವದಿಂದ ಅಲ್ಲಿಯೇ ಕೊನೆಯುಸಿರೆಳೆದಿದ್ದಳು. ಇಂತಹ ಭೀಕರ ಕೃತ್ಯವೆಸಗಿದ ಮಣಿಕಂಠನ್ ಮತ್ತು ಮೂವರು ಸ್ನೇಹಿತರು ಆಕೆಯ ದೇಹವನ್ನು ಸಂಪೂರ್ಣ ಬೆತ್ತಲೆಗೊಳಿಸಿ, ಆಭರಣವನ್ನು ಕಸಿದುಕೊಂಡು ಕೈಗಳನ್ನು ಕಟ್ಟಿ ಕಾಲಿಗೆ ಕಲ್ಲುಕಟ್ಟಿ ಬಾವಿಯೊಂದರಲ್ಲಿ ಬಿಸಾಕಿಬಿಟ್ಟಿದ್ದರು. ಯಾರಿಗೂ ವಾಸನೆಯಿಂದ ಅನುಮಾನ ಬರಬಾರದೆಂದು ನಾಯಿಯೊಂದನ್ನು ಕೊಂದು ಅದೇ ಬಾವಿಗೆ ಎಸೆದಿದ್ದರು. ಜನವರಿ 14ರಂದು ಪೊಲೀಸರು ಬಾವಿಯನ್ನು ಶೋಧಿಸಿ ನಂದಿನಿಯ ಕೊಳೆತ ದೇಹವನ್ನು ಹೊರತೆಗೆದಿದ್ದರು. ಕ್ರೂರಿ ಮಣಿಕಂಠನ್ ಮತ್ತು ಆತನ ಸ್ನೇಹಿತರು ಇಂದು ಜೈಲಿನಲ್ಲಿದ್ದಾರೆ.

ಈ ಇಡೀ ಪ್ರಕರಣ ತಿಳಿಸುವ ಸತ್ಯವೇನೆಂದರೆ ಹಿಂದೂರಾಷ್ಟ್ರ ಪ್ರತಿಪಾದಕರು ಆಳದಲ್ಲಿ ಜಾತಿವಾದಿಗಳೇ ಆಗಿದ್ದು ಮುಸ್ಲಿಮರ ವಿರುದ್ಧದ “ದ್ವೇಷ ಸಾಧಿಸಿ” ಸೆಣಸಾಡಲು ಮಾತ್ರ ಹಿಂದುತ್ವ ಶಕ್ತಿಗಳಿಗೆ ದಲಿತರು ಬೇಕೆಂದೂ, ಮದುವೆಯಾಗಲು ದಲಿತರು ಯಾವುದೇ ಕಾರಣಕ್ಕೆ ಬೇಡವೆಂಬುದನ್ನು! ಇವರೊಳಗಿನ ಜಾತಿಪ್ರಜ್ಞೆ ಅದೆಷ್ಟರಮಟ್ಟಿಗೆ ಆಳದಲ್ಲಿ ಹುದುಗಿದೆಯೆಂದರೆ ದಲಿತ ಹೆಣ್ಣಿನ ಗರ್ಭದಲ್ಲಿರುವ ತಮ್ಮ ಭ್ರೂಣವನ್ನೂ ಕೊಲ್ಲುವಷ್ಟು! ಹಿಂದೂಗಳ ದೃಷ್ಟಿಯಲ್ಲಿ ದಲಿತರೆಂದಿಗೂ ಹಿಂದೂಗಳಾಗಲು ಸಾಧ್ಯವೇ ಇಲ್ಲ. ಯಾರು ಏನೇ ಹೇಳಿದರೂ ಇದೇ ಸತ್ಯವೆಂದು ಪದೇಪದೇ ಸಾಬೀತಾಗುತ್ತಿದೆ. ದುರಂತವೆಂದರೆ ದಲಿತರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪದೇಪದೇ ಎಡವುತ್ತಲೇ ಇದ್ದಾರೆ.


ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...