Homeಅಂಕಣಗಳುಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ'

ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’

- Advertisement -
- Advertisement -

ನಂದಿನಿ, 17 ವರ್ಷದ ಯುವತಿ. ತಮಿಳುನಾಡಿನ ಅರಿಯೂರು ಜಿಲ್ಲೆಯ ಸಿರುಕಡಂಬೂರ್ ಎಂಬ ಹಳ್ಳಿಯ ದಲಿತ ಸಮುದಾಯ ಪರೈಯ್ಯಾ ಕುಟುಂಬದ ಯುವತಿ. ತಮಿಳುನಾಡಿನಲ್ಲಿ ಪ್ರತ್ಯೇಕವಾಗಿ ದಲಿತರ ಕಾಲೋನಿಗಳು ಕಣ್ಣಿಗೆ ಎದ್ದು ಕಾಣುವಂತೆಯೇ ಇರುತ್ತವೆ. ಸಿರುಕಡಂಬೂರಿನ ದಲಿತರ ಕಾಲೋನಿಯೂ ಹಾಗೆಯೇ ಇತ್ತು. ಈ ವಿದ್ಯಮಾನ ಇಡೀ ಭಾರತಕ್ಕೆ ಅನ್ವಯಿಸುತ್ತದೆ ಬಿಡಿ. ನಂದಿನಿ ಓದಿದ್ದು 8ನೇ ತರಗತಿಯವರೆಗೆ ಮಾತ್ರ. ಕುಟುಂಬದ ಕಡುಬಡತನ ಹೆಚ್ಚು ಓದಲು ಅವಳಿಗೆ ಬಿಡಲಿಲ್ಲ. ಹಾಗಾಗಿ ಶಾಲೆಯನ್ನು ಬಿಟ್ಟವಳೇ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡಲು ಆರಂಭಿಸಿದಳು. ಹಾಸ್ಯಭರಿತ ಮಾತು ಹಾಗು ಚುರುಕು ಬುದ್ಧಿಯಿಂದಾಗಿ ಅವಳು ಕೆಲಸ ಮಾಡುವ ಜಾಗದಲ್ಲಿಯೂ ಹೆಸರುವಾಸಿಯಾಗಿದ್ದಳು.

ಹೀಗಿದ್ದ ನಂದಿನಿ ದಿನಾಂಕ 29, ಡಿಸೆಂಬರ್ 2016ರಂದು ದಿಢೀರನೇ ಕಣ್ಮರೆಯಾದಳು. ಆ ದಿನ ಸಂಜೆ ನಂದಿನಿಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ’ನಂದಿನಿ ತನ್ನ ಬಳಿ ಇದ್ದಾಳೆ’ ಎಂದು ಹೇಳಿದ್ದ. ಗಾಬರಿಗೊಂಡ ನಂದಿನಿ ಕುಟುಂಬ ಪೊಲೀಸರಿಗೆ ದೂರು ನೀಡಿತು. ದೂರಿನಲ್ಲಿ ಮಣಿಕಂಠನ್ ಎಂಬ ವಣ್ಣಿಯಾರ್ ಹಿಂದೂ ಮೇಲ್ಜಾತಿಗೆ ಸೇರಿದ್ದ ವ್ಯಕ್ತಿಯ ವಿರುದ್ಧ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದರು. ಈ ಮಣಿಕಂಠನ್ ’ಹಿಂದೂ ಮುನ್ನಾಣಿ’ ಸಂಘಟನೆಯ ಕಾರ್ಯದರ್ಶಿಯಾಗಿದ್ದನು. ಹಿಂದೂ ಮುನ್ನಾಣಿ ಸಂಘಟನೆಯನ್ನು 1980ರಲ್ಲಿ ’ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ರಾಮಗೋಪಾಲನ್ ಅವರು ಸ್ಥಾಪಿಸಿದ್ದರು. ಈಗದು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಪರಿವಾರದ ಭಾಗವಾಗಿದೆ.

ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದರು. ಅಪ್ರಾಪ್ತೆ ನಂದಿನಿ ಕಾಣೆಯಾಗಿದ್ದ ಕಾರಣ ’ಮಿಸ್ಸಿಂಗ್ ಕಂಪ್ಲೇಂಟ್’ ದಾಖಲಿಸಿಕೊಂಡಿದ್ದರು. ವಿಚಾರಣೆಯ ವೇಳೆ ನಂದಿನಿಯ ಆಪ್ತ ಸ್ನೇಹಿತೆಯಾಗಿದ್ದ ದೇವಿಯೂ ಮಣಿಕಂಠನ ಹೆಸರನ್ನು ಪ್ರಸ್ತಾಪಿಸಿದಳು. ಅಷ್ಟೇ ಅಲ್ಲದೇ ನಂದಿನಿ ಮತ್ತು ಮಣಿಕಂಠನ್ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದುದಾಗಿ ಹಾಗೂ ಇತ್ತೀಚೆಗೆ ನಂದಿನಿ ’ತಾನು ಗರ್ಭಿಣಿ’ ಆಗಿರುವುದಾಗಿಯೂ ಹೇಳಿಕೊಂಡಿದ್ದಳೆಂದು ದೇವಿ ತಿಳಿಸಿದಳು. ಈ ಕಾರಣವಾಗಿ ದಿನಾಂಕ 5, ಜನವರಿ 2017ರಂದು ಮಣಿಕಂಠನ ವಿಚಾರಣೆಯನ್ನು ಪೊಲೀಸರು ಮಾಡಿದ್ದರು. ಅಂದು ಸಂಜೆಯ ವೇಳೆಗಾಗಲೇ ವಣ್ಣಿಯಾರ್ ಸಮುದಾಯದ ಹಿರಿಯರು ಆತನನ್ನು ಮನೆಗೆ ಕರೆದುಕೊಂಡು ಹೋದರು. ಈ ಘಟನೆಯಾದ ಮಾರನೇ ದಿನದಿಂದ ಮಣಿಕಂಠನ್ ನಾಪತ್ತೆಯಾದನು. ಆತನ ಮೇಲಿದ್ದ ಕುಟುಂಬದವರ ಅನುಮಾನ ನಿಜವಾಗಿತ್ತು. ಪೊಲೀಸರು ಮಣಿಕಂಠನ ಪತ್ತೆಗಾಗಿ ಶೋಧಿಸತೊಡಗಿದರು.

ಇದಾದ ವಾರದ ನಂತರ ಮಣಿಕಂಠನ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದನು. ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಣಿಕಂಠನ್‌ನನ್ನು ಪರಿಚಿತರು ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖನಾದ ಮಣಿಕಂಠನ್ ಪೊಲೀಸರ ಬಳಿ ಬಾಯಿಬಿಟ್ಟ ವಿಷಯ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದರು. ಹಿಂದೂರಾಷ್ಟ್ರ ಚಿಂತನೆಯಲ್ಲಿ ಬೆಳೆದುಬಂದ ಮಣಿಕಂಠನೊಳಗಿದ್ದ ಮಾನವ ವಿರೋಧಿ ಜಾತಿಪದ್ಧತಿಯ ಕರಾಳ ಮುಖವನ್ನು ನೋಡಿ ಪೊಲೀಸರಷ್ಟೇ ಅಲ್ಲ, ಇಡೀ ತಮಿಳುನಾಡು ಬೆಚ್ಚಿಬಿದ್ದಿತು.

ನಂದಿನಿ ಕೆಲಸ ಮಾಡುತ್ತಿದ್ದ ಕಟ್ಟಡದ ಉಸ್ತುವಾರಿ ಹೊತ್ತಿದ್ದವನು ಮಣಿಕಂಠನ್. ಅಲ್ಲಿ ಅವರಿಬ್ಬರ ನಡುವೆ ಸಲುಗೆ ಬೆಳೆದು ಮಣಿಕಂಠನ ಪ್ರೀತಿಯೆಂಬ ನಾಟಕಕ್ಕೆ ತಲೆದೂಗಿದ್ದ ನಂದಿನಿ ಮೈಮನಸ್ಸನ್ನು ಒಪ್ಪಿಸಿದ್ದಳು. ಇದರಿಂದಾಗಿ ಗರ್ಭಿಣಿಯಾಗಿದ್ದ ನಂದಿನಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಕ್ಕೆ ’ಮೊದಲು ಗರ್ಭಪಾತ ಮಾಡಿಸಿಕೋ’ ಎಂದು ತಾಕೀತು ಮಾಡಿದ್ದ ಮಣಿಕಂಠನ್. ಅವಳೆಷ್ಟೇ ಬೇಡಿಕೊಂಡರೂ ಅದಕ್ಕೆ ಮಣಿಯದ ಮಣಿಕಂಠನ್ ಗರ್ಭಪಾತವಾದ ನಂತರವೇ ಮದುವೆ ಎಂದು ಹೇಳಿದ್ದನಾದರೂ ಅದಕ್ಕೆ ಒಪ್ಪಿಕೊಳ್ಳದ ನಂದಿನಿ ಇದ್ದ ವಿಷಯವನ್ನು ತನ್ನ ಆಪ್ತರೊಂದಿಗೆ ಹೇಳಿದ್ದಳು. ಇದನ್ನು ಸಹಿಸದ ಮಣಿಕಂಠನ್ ದಿನಾಂಕ 29, ಡಿಸೆಂಬರ್ 2016ರಂದು ನಂದಿನಿಯನ್ನು ಹೊರಗಡೆ ಭೇಟಿಯಾಗುವಂತೆ ತಿಳಿಸಿದ್ದ; ನಂದಿನಿ ಭೇಟಿ ಮಾಡಲು ಬಂದಾಗ ತನ್ನ ಮೂವರು ಸ್ನೇಹಿತರೊಡನೆ ಆಕೆಯನ್ನ ಅಪಹರಿಸಿದ್ದನು. ಮೂರು ದಿನಗಳ ನಂತರ ನಂದಿನಿಯ ಮೇಲೆ ಮೃಗಗಳಂತೆ ಎರಗಿದ ನಾಲ್ವರು ಗಂಡು ಪಿಶಾಚಿಗಳು ಒಬ್ಬರಾದ ಮೇಲೊಬ್ಬರಂತೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಿತ್ರಾಣಳಾಗಿ ಬಿದ್ದಿದ್ದ ನಂದಿನಿಯ ಜನನಾಂಗವನ್ನು ಬ್ಲೇಡಿನಿಂದ ಕೊಯ್ದು ಅವಳ ಗರ್ಭಕ್ಕೆ ಕೈ ಹಾಕಿ ಭ್ರೂಣವನ್ನು ಹೊರತೆಗೆದು ಬಿಸಾಡಿದರು. ಪ್ರಜ್ಞೆ ತಪ್ಪಿದ್ದ ನಂದಿನಿ ರಕ್ತಸ್ರಾವದಿಂದ ಅಲ್ಲಿಯೇ ಕೊನೆಯುಸಿರೆಳೆದಿದ್ದಳು. ಇಂತಹ ಭೀಕರ ಕೃತ್ಯವೆಸಗಿದ ಮಣಿಕಂಠನ್ ಮತ್ತು ಮೂವರು ಸ್ನೇಹಿತರು ಆಕೆಯ ದೇಹವನ್ನು ಸಂಪೂರ್ಣ ಬೆತ್ತಲೆಗೊಳಿಸಿ, ಆಭರಣವನ್ನು ಕಸಿದುಕೊಂಡು ಕೈಗಳನ್ನು ಕಟ್ಟಿ ಕಾಲಿಗೆ ಕಲ್ಲುಕಟ್ಟಿ ಬಾವಿಯೊಂದರಲ್ಲಿ ಬಿಸಾಕಿಬಿಟ್ಟಿದ್ದರು. ಯಾರಿಗೂ ವಾಸನೆಯಿಂದ ಅನುಮಾನ ಬರಬಾರದೆಂದು ನಾಯಿಯೊಂದನ್ನು ಕೊಂದು ಅದೇ ಬಾವಿಗೆ ಎಸೆದಿದ್ದರು. ಜನವರಿ 14ರಂದು ಪೊಲೀಸರು ಬಾವಿಯನ್ನು ಶೋಧಿಸಿ ನಂದಿನಿಯ ಕೊಳೆತ ದೇಹವನ್ನು ಹೊರತೆಗೆದಿದ್ದರು. ಕ್ರೂರಿ ಮಣಿಕಂಠನ್ ಮತ್ತು ಆತನ ಸ್ನೇಹಿತರು ಇಂದು ಜೈಲಿನಲ್ಲಿದ್ದಾರೆ.

ಈ ಇಡೀ ಪ್ರಕರಣ ತಿಳಿಸುವ ಸತ್ಯವೇನೆಂದರೆ ಹಿಂದೂರಾಷ್ಟ್ರ ಪ್ರತಿಪಾದಕರು ಆಳದಲ್ಲಿ ಜಾತಿವಾದಿಗಳೇ ಆಗಿದ್ದು ಮುಸ್ಲಿಮರ ವಿರುದ್ಧದ “ದ್ವೇಷ ಸಾಧಿಸಿ” ಸೆಣಸಾಡಲು ಮಾತ್ರ ಹಿಂದುತ್ವ ಶಕ್ತಿಗಳಿಗೆ ದಲಿತರು ಬೇಕೆಂದೂ, ಮದುವೆಯಾಗಲು ದಲಿತರು ಯಾವುದೇ ಕಾರಣಕ್ಕೆ ಬೇಡವೆಂಬುದನ್ನು! ಇವರೊಳಗಿನ ಜಾತಿಪ್ರಜ್ಞೆ ಅದೆಷ್ಟರಮಟ್ಟಿಗೆ ಆಳದಲ್ಲಿ ಹುದುಗಿದೆಯೆಂದರೆ ದಲಿತ ಹೆಣ್ಣಿನ ಗರ್ಭದಲ್ಲಿರುವ ತಮ್ಮ ಭ್ರೂಣವನ್ನೂ ಕೊಲ್ಲುವಷ್ಟು! ಹಿಂದೂಗಳ ದೃಷ್ಟಿಯಲ್ಲಿ ದಲಿತರೆಂದಿಗೂ ಹಿಂದೂಗಳಾಗಲು ಸಾಧ್ಯವೇ ಇಲ್ಲ. ಯಾರು ಏನೇ ಹೇಳಿದರೂ ಇದೇ ಸತ್ಯವೆಂದು ಪದೇಪದೇ ಸಾಬೀತಾಗುತ್ತಿದೆ. ದುರಂತವೆಂದರೆ ದಲಿತರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪದೇಪದೇ ಎಡವುತ್ತಲೇ ಇದ್ದಾರೆ.


ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...