Homeಅಂಕಣಗಳುಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ'

ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’

- Advertisement -
- Advertisement -

ನಂದಿನಿ, 17 ವರ್ಷದ ಯುವತಿ. ತಮಿಳುನಾಡಿನ ಅರಿಯೂರು ಜಿಲ್ಲೆಯ ಸಿರುಕಡಂಬೂರ್ ಎಂಬ ಹಳ್ಳಿಯ ದಲಿತ ಸಮುದಾಯ ಪರೈಯ್ಯಾ ಕುಟುಂಬದ ಯುವತಿ. ತಮಿಳುನಾಡಿನಲ್ಲಿ ಪ್ರತ್ಯೇಕವಾಗಿ ದಲಿತರ ಕಾಲೋನಿಗಳು ಕಣ್ಣಿಗೆ ಎದ್ದು ಕಾಣುವಂತೆಯೇ ಇರುತ್ತವೆ. ಸಿರುಕಡಂಬೂರಿನ ದಲಿತರ ಕಾಲೋನಿಯೂ ಹಾಗೆಯೇ ಇತ್ತು. ಈ ವಿದ್ಯಮಾನ ಇಡೀ ಭಾರತಕ್ಕೆ ಅನ್ವಯಿಸುತ್ತದೆ ಬಿಡಿ. ನಂದಿನಿ ಓದಿದ್ದು 8ನೇ ತರಗತಿಯವರೆಗೆ ಮಾತ್ರ. ಕುಟುಂಬದ ಕಡುಬಡತನ ಹೆಚ್ಚು ಓದಲು ಅವಳಿಗೆ ಬಿಡಲಿಲ್ಲ. ಹಾಗಾಗಿ ಶಾಲೆಯನ್ನು ಬಿಟ್ಟವಳೇ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡಲು ಆರಂಭಿಸಿದಳು. ಹಾಸ್ಯಭರಿತ ಮಾತು ಹಾಗು ಚುರುಕು ಬುದ್ಧಿಯಿಂದಾಗಿ ಅವಳು ಕೆಲಸ ಮಾಡುವ ಜಾಗದಲ್ಲಿಯೂ ಹೆಸರುವಾಸಿಯಾಗಿದ್ದಳು.

ಹೀಗಿದ್ದ ನಂದಿನಿ ದಿನಾಂಕ 29, ಡಿಸೆಂಬರ್ 2016ರಂದು ದಿಢೀರನೇ ಕಣ್ಮರೆಯಾದಳು. ಆ ದಿನ ಸಂಜೆ ನಂದಿನಿಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ’ನಂದಿನಿ ತನ್ನ ಬಳಿ ಇದ್ದಾಳೆ’ ಎಂದು ಹೇಳಿದ್ದ. ಗಾಬರಿಗೊಂಡ ನಂದಿನಿ ಕುಟುಂಬ ಪೊಲೀಸರಿಗೆ ದೂರು ನೀಡಿತು. ದೂರಿನಲ್ಲಿ ಮಣಿಕಂಠನ್ ಎಂಬ ವಣ್ಣಿಯಾರ್ ಹಿಂದೂ ಮೇಲ್ಜಾತಿಗೆ ಸೇರಿದ್ದ ವ್ಯಕ್ತಿಯ ವಿರುದ್ಧ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದರು. ಈ ಮಣಿಕಂಠನ್ ’ಹಿಂದೂ ಮುನ್ನಾಣಿ’ ಸಂಘಟನೆಯ ಕಾರ್ಯದರ್ಶಿಯಾಗಿದ್ದನು. ಹಿಂದೂ ಮುನ್ನಾಣಿ ಸಂಘಟನೆಯನ್ನು 1980ರಲ್ಲಿ ’ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ರಾಮಗೋಪಾಲನ್ ಅವರು ಸ್ಥಾಪಿಸಿದ್ದರು. ಈಗದು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಪರಿವಾರದ ಭಾಗವಾಗಿದೆ.

ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದರು. ಅಪ್ರಾಪ್ತೆ ನಂದಿನಿ ಕಾಣೆಯಾಗಿದ್ದ ಕಾರಣ ’ಮಿಸ್ಸಿಂಗ್ ಕಂಪ್ಲೇಂಟ್’ ದಾಖಲಿಸಿಕೊಂಡಿದ್ದರು. ವಿಚಾರಣೆಯ ವೇಳೆ ನಂದಿನಿಯ ಆಪ್ತ ಸ್ನೇಹಿತೆಯಾಗಿದ್ದ ದೇವಿಯೂ ಮಣಿಕಂಠನ ಹೆಸರನ್ನು ಪ್ರಸ್ತಾಪಿಸಿದಳು. ಅಷ್ಟೇ ಅಲ್ಲದೇ ನಂದಿನಿ ಮತ್ತು ಮಣಿಕಂಠನ್ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದುದಾಗಿ ಹಾಗೂ ಇತ್ತೀಚೆಗೆ ನಂದಿನಿ ’ತಾನು ಗರ್ಭಿಣಿ’ ಆಗಿರುವುದಾಗಿಯೂ ಹೇಳಿಕೊಂಡಿದ್ದಳೆಂದು ದೇವಿ ತಿಳಿಸಿದಳು. ಈ ಕಾರಣವಾಗಿ ದಿನಾಂಕ 5, ಜನವರಿ 2017ರಂದು ಮಣಿಕಂಠನ ವಿಚಾರಣೆಯನ್ನು ಪೊಲೀಸರು ಮಾಡಿದ್ದರು. ಅಂದು ಸಂಜೆಯ ವೇಳೆಗಾಗಲೇ ವಣ್ಣಿಯಾರ್ ಸಮುದಾಯದ ಹಿರಿಯರು ಆತನನ್ನು ಮನೆಗೆ ಕರೆದುಕೊಂಡು ಹೋದರು. ಈ ಘಟನೆಯಾದ ಮಾರನೇ ದಿನದಿಂದ ಮಣಿಕಂಠನ್ ನಾಪತ್ತೆಯಾದನು. ಆತನ ಮೇಲಿದ್ದ ಕುಟುಂಬದವರ ಅನುಮಾನ ನಿಜವಾಗಿತ್ತು. ಪೊಲೀಸರು ಮಣಿಕಂಠನ ಪತ್ತೆಗಾಗಿ ಶೋಧಿಸತೊಡಗಿದರು.

ಇದಾದ ವಾರದ ನಂತರ ಮಣಿಕಂಠನ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದನು. ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಣಿಕಂಠನ್‌ನನ್ನು ಪರಿಚಿತರು ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖನಾದ ಮಣಿಕಂಠನ್ ಪೊಲೀಸರ ಬಳಿ ಬಾಯಿಬಿಟ್ಟ ವಿಷಯ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದರು. ಹಿಂದೂರಾಷ್ಟ್ರ ಚಿಂತನೆಯಲ್ಲಿ ಬೆಳೆದುಬಂದ ಮಣಿಕಂಠನೊಳಗಿದ್ದ ಮಾನವ ವಿರೋಧಿ ಜಾತಿಪದ್ಧತಿಯ ಕರಾಳ ಮುಖವನ್ನು ನೋಡಿ ಪೊಲೀಸರಷ್ಟೇ ಅಲ್ಲ, ಇಡೀ ತಮಿಳುನಾಡು ಬೆಚ್ಚಿಬಿದ್ದಿತು.

ನಂದಿನಿ ಕೆಲಸ ಮಾಡುತ್ತಿದ್ದ ಕಟ್ಟಡದ ಉಸ್ತುವಾರಿ ಹೊತ್ತಿದ್ದವನು ಮಣಿಕಂಠನ್. ಅಲ್ಲಿ ಅವರಿಬ್ಬರ ನಡುವೆ ಸಲುಗೆ ಬೆಳೆದು ಮಣಿಕಂಠನ ಪ್ರೀತಿಯೆಂಬ ನಾಟಕಕ್ಕೆ ತಲೆದೂಗಿದ್ದ ನಂದಿನಿ ಮೈಮನಸ್ಸನ್ನು ಒಪ್ಪಿಸಿದ್ದಳು. ಇದರಿಂದಾಗಿ ಗರ್ಭಿಣಿಯಾಗಿದ್ದ ನಂದಿನಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಕ್ಕೆ ’ಮೊದಲು ಗರ್ಭಪಾತ ಮಾಡಿಸಿಕೋ’ ಎಂದು ತಾಕೀತು ಮಾಡಿದ್ದ ಮಣಿಕಂಠನ್. ಅವಳೆಷ್ಟೇ ಬೇಡಿಕೊಂಡರೂ ಅದಕ್ಕೆ ಮಣಿಯದ ಮಣಿಕಂಠನ್ ಗರ್ಭಪಾತವಾದ ನಂತರವೇ ಮದುವೆ ಎಂದು ಹೇಳಿದ್ದನಾದರೂ ಅದಕ್ಕೆ ಒಪ್ಪಿಕೊಳ್ಳದ ನಂದಿನಿ ಇದ್ದ ವಿಷಯವನ್ನು ತನ್ನ ಆಪ್ತರೊಂದಿಗೆ ಹೇಳಿದ್ದಳು. ಇದನ್ನು ಸಹಿಸದ ಮಣಿಕಂಠನ್ ದಿನಾಂಕ 29, ಡಿಸೆಂಬರ್ 2016ರಂದು ನಂದಿನಿಯನ್ನು ಹೊರಗಡೆ ಭೇಟಿಯಾಗುವಂತೆ ತಿಳಿಸಿದ್ದ; ನಂದಿನಿ ಭೇಟಿ ಮಾಡಲು ಬಂದಾಗ ತನ್ನ ಮೂವರು ಸ್ನೇಹಿತರೊಡನೆ ಆಕೆಯನ್ನ ಅಪಹರಿಸಿದ್ದನು. ಮೂರು ದಿನಗಳ ನಂತರ ನಂದಿನಿಯ ಮೇಲೆ ಮೃಗಗಳಂತೆ ಎರಗಿದ ನಾಲ್ವರು ಗಂಡು ಪಿಶಾಚಿಗಳು ಒಬ್ಬರಾದ ಮೇಲೊಬ್ಬರಂತೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಿತ್ರಾಣಳಾಗಿ ಬಿದ್ದಿದ್ದ ನಂದಿನಿಯ ಜನನಾಂಗವನ್ನು ಬ್ಲೇಡಿನಿಂದ ಕೊಯ್ದು ಅವಳ ಗರ್ಭಕ್ಕೆ ಕೈ ಹಾಕಿ ಭ್ರೂಣವನ್ನು ಹೊರತೆಗೆದು ಬಿಸಾಡಿದರು. ಪ್ರಜ್ಞೆ ತಪ್ಪಿದ್ದ ನಂದಿನಿ ರಕ್ತಸ್ರಾವದಿಂದ ಅಲ್ಲಿಯೇ ಕೊನೆಯುಸಿರೆಳೆದಿದ್ದಳು. ಇಂತಹ ಭೀಕರ ಕೃತ್ಯವೆಸಗಿದ ಮಣಿಕಂಠನ್ ಮತ್ತು ಮೂವರು ಸ್ನೇಹಿತರು ಆಕೆಯ ದೇಹವನ್ನು ಸಂಪೂರ್ಣ ಬೆತ್ತಲೆಗೊಳಿಸಿ, ಆಭರಣವನ್ನು ಕಸಿದುಕೊಂಡು ಕೈಗಳನ್ನು ಕಟ್ಟಿ ಕಾಲಿಗೆ ಕಲ್ಲುಕಟ್ಟಿ ಬಾವಿಯೊಂದರಲ್ಲಿ ಬಿಸಾಕಿಬಿಟ್ಟಿದ್ದರು. ಯಾರಿಗೂ ವಾಸನೆಯಿಂದ ಅನುಮಾನ ಬರಬಾರದೆಂದು ನಾಯಿಯೊಂದನ್ನು ಕೊಂದು ಅದೇ ಬಾವಿಗೆ ಎಸೆದಿದ್ದರು. ಜನವರಿ 14ರಂದು ಪೊಲೀಸರು ಬಾವಿಯನ್ನು ಶೋಧಿಸಿ ನಂದಿನಿಯ ಕೊಳೆತ ದೇಹವನ್ನು ಹೊರತೆಗೆದಿದ್ದರು. ಕ್ರೂರಿ ಮಣಿಕಂಠನ್ ಮತ್ತು ಆತನ ಸ್ನೇಹಿತರು ಇಂದು ಜೈಲಿನಲ್ಲಿದ್ದಾರೆ.

ಈ ಇಡೀ ಪ್ರಕರಣ ತಿಳಿಸುವ ಸತ್ಯವೇನೆಂದರೆ ಹಿಂದೂರಾಷ್ಟ್ರ ಪ್ರತಿಪಾದಕರು ಆಳದಲ್ಲಿ ಜಾತಿವಾದಿಗಳೇ ಆಗಿದ್ದು ಮುಸ್ಲಿಮರ ವಿರುದ್ಧದ “ದ್ವೇಷ ಸಾಧಿಸಿ” ಸೆಣಸಾಡಲು ಮಾತ್ರ ಹಿಂದುತ್ವ ಶಕ್ತಿಗಳಿಗೆ ದಲಿತರು ಬೇಕೆಂದೂ, ಮದುವೆಯಾಗಲು ದಲಿತರು ಯಾವುದೇ ಕಾರಣಕ್ಕೆ ಬೇಡವೆಂಬುದನ್ನು! ಇವರೊಳಗಿನ ಜಾತಿಪ್ರಜ್ಞೆ ಅದೆಷ್ಟರಮಟ್ಟಿಗೆ ಆಳದಲ್ಲಿ ಹುದುಗಿದೆಯೆಂದರೆ ದಲಿತ ಹೆಣ್ಣಿನ ಗರ್ಭದಲ್ಲಿರುವ ತಮ್ಮ ಭ್ರೂಣವನ್ನೂ ಕೊಲ್ಲುವಷ್ಟು! ಹಿಂದೂಗಳ ದೃಷ್ಟಿಯಲ್ಲಿ ದಲಿತರೆಂದಿಗೂ ಹಿಂದೂಗಳಾಗಲು ಸಾಧ್ಯವೇ ಇಲ್ಲ. ಯಾರು ಏನೇ ಹೇಳಿದರೂ ಇದೇ ಸತ್ಯವೆಂದು ಪದೇಪದೇ ಸಾಬೀತಾಗುತ್ತಿದೆ. ದುರಂತವೆಂದರೆ ದಲಿತರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪದೇಪದೇ ಎಡವುತ್ತಲೇ ಇದ್ದಾರೆ.


ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...