Homeಅಂಕಣಗಳುಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

- Advertisement -
- Advertisement -

1947ರ ಆಗಸ್ಟ್ 15ರಂದು ಭಾರತ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು. ಭಾರತೀಯರು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದರು. 1950 ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೊಂಡಿತು. ಅದು ಸಮಸ್ತ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿತು. ಅದು ಸರ್ವ ಭಾರತೀಯರಿಗೂ ಸ್ವಾತಂತ್ರ್ಯ, ಸಮಾನತೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಹೆಗಲ ಮೇಲೆ ಹೇರಿತು. ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ನಂತರದ ದಿನಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ತನ್ನೆಲ್ಲಾ ಜನತೆಗೆ ಖಾತ್ರಿಗೊಳಿಸಲು ಸೋತಿದೆ. ಅದಕ್ಕೆ ಸ್ಪಷ್ಟ ನಿದರ್ಶನ ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳಾಗಿವೆ.

ಸ್ವತಂತ್ರ ಭಾರತಕ್ಕೆ 20 ವರ್ಷಗಳಾಗಿತ್ತು. ಅಷ್ಟರಲ್ಲಿಯೇ ಅತ್ಯಂತ ಭೀಕರ ದಲಿತರ ಹತ್ಯಾಕಾಂಡ ತಮಿಳುನಾಡಿನ ಕಿಲ್ವೇನ್ಮಣಿಯಲ್ಲಿ ನಡೆಯಿತು. ಅದಕ್ಕೂ ಮೊದಲು ಅದೆಷ್ಟು ದೌರ್ಜನ್ಯಗಳಾಗಿದ್ದವೋ ಕಾಣೆ. ಅವುಗಳೆಲ್ಲ ಭಾರತದ ಇತಿಹಾಸದಲ್ಲಿ ಸಮಾಧಿಯಾಗಿ ಹೋಗಿವೆ. ಆದರೆ 1968 ಡಿಸೆಂಬರ್ 25ರಂದು ಕಿಲ್ವೇನ್ಮಣಿಯಲ್ಲಿ ನಡೆದದ್ದು ಅಕ್ಷರಶಃ ನರಮೇಧ.

60ರ ದಶಕ ಭಾರತದ ಭೂಹೋರಾಟಗಳ ಕಾಲಘಟ್ಟ ಎಂದೇ ಹೇಳಬಹುದು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಎಡಪಂಥೀಯ ಸಂಘಟನೆಗಳು ಭೂರಹಿತ ಕೂಲಿ ಕಾರ್ಮಿಕರಿಗೆ
ಭೂಹಂಚಿಕೆ ಮಾಡುವಂತೆ ದೇಶಾದ್ಯಂತ ಹೋರಾಟ ರೂಪಿಸಿದ್ದವು. ಮಹಾರಾಷ್ಟ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಅನುಯಾಯಿ ದಾದಾಸಾಹೇಬ್ ಗಾಯಕ್ವಾಡ್ ಸಹ ಭೂಹೋರಾಟ ಆರಂಭಿಸಿದ್ದು ಇದೇ ಕಾಲಘಟ್ಟದಲ್ಲಿ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡು 20 ವರ್ಷಗಳು ಕಳೆದಿದ್ದರೂ ಬೃಹತ್ ದೇವಾಲಯಗಳು ಹಾಗೂ ಮೇಲ್ಜಾತಿ ಭೂಮಾಲೀಕರು ಸಾವಿರಾರು ಎಕರೆಗಟ್ಟಲೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿದ್ದರು. ಅಂದಿನ ಎಲ್ಲಾ ರಾಜಕೀಯ ಪಕ್ಷಗಳೂ ಭೂಮಾಲೀಕರ ಅಂಗಳವಾಗಿದ್ದ ಕಾರಣ ಅವರ ವಿರುದ್ಧ ತಿರುಗಿ ಬೀಳುವವರಿರಲಿಲ್ಲ. ಆದರೆ ಸೈದ್ಧಾಂತಿಕವಾಗಿ ಕೃಷಿಕೂಲಿಗಳ ಪರವಾಗಿಯೇ ಕೆಲಸ ಮಾಡುತ್ತಿದ್ದ ಕಮ್ಯುನಿಸ್ಟ್ ಸಂಘಟನೆಗಳು ಮಾತ್ರ ಭೂಹೋರಾಟವನ್ನೇ ಪ್ರಮುಖ ಕಾರ್ಯಕ್ರಮವನ್ನಾಗಿ ಮಾಡಿಕೊಂಡವು. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿ ಕೃಷಿಕೂಲಿಗಳಾಗಿ ದುಡಿಯುತ್ತಿದ್ದ ದಲಿತರನ್ನು ಸಂಘಟಿಸಿದರು. ಇದೇ ರೀತಿಯಲ್ಲಿಯೇ ಅವಿಭಜಿತ ತಂಜಾವೂರು ಜಿಲ್ಲೆಯಲ್ಲಿಯೂ ಹಲವು ಸಂಘಟನೆಗಳಾದವು.

ತಮಿಳುನಾಡಿನ ಕಿಲ್ವೇನ್ಮಣಿ ದಲಿತ ಕೃಷಿಕೂಲಿಗಳೂ ಸಹ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡರು. ಇದಕ್ಕೆ ತಕ್ಕಂತೆ ಹಸಿರು ಕ್ರಾಂತಿಯೂ ಸಹ ಭಾರತದಲ್ಲಿ ಮನೆಮಾತಾಗಿತ್ತು. ಈ ಸಂಘಟನೆಯ ಮೂಲಕ ಕೂಲಿ ದರವನ್ನು ಹೆಚ್ಚು ಮಾಡಲು ಭೂಮಾಲೀಕರನ್ನು ಆಗ್ರಹಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಭೂಮಾಲೀಕರೂ ಸಹ ಭತ್ತ ಉತ್ಪಾದನೆ ಸಂಘಟನೆಯನ್ನು ಸ್ಥಾಪಿಸಿಕೊಂಡು ಒಗ್ಗಟ್ಟಾದರು. ಅಲ್ಲಿಂದ ಈ ಎರಡು ಸಂಘಟನೆಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ಕೃಷಿ ಕೂಲಿಕಾರರು ತಮ್ಮ ಕೂಲಿ ದರವನ್ನು ಹೆಚ್ಚು ಮಾಡಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಭೂಮಾಲೀಕರು ಕೃಷಿ ಕೂಲಿಗಳನ್ನು ಹದ್ದುಬಸ್ತಿನಲ್ಲಿಡುವ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು.

1968ನೇ ಇಸವಿಯ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಬೆಳೆ ಕೊಯ್ಲು ಸಮಯ ಬಂದಾಗ ಕೃಷಿಕೂಲಿಗಳ ಸಂಘಟನೆಯು ಭೂಮಾಲೀಕರು ಕೂಲಿ ದರ ಹೆಚ್ಚು ಮಾಡದಿದ್ದರೆ ಕೆಲಸಕ್ಕೆ ಬರುವುದಿಲ್ಲವೆಂದು ಘೋಷಿಸಿತು. ಎಂದಿನಂತೆ ಭೂಮಾಲೀಕರು ಕೃಷಿಕೂಲಿಗಳನ್ನು ವಿಭಜಿಸಿ ತಮ್ಮ ಆಟವನ್ನು ಆಡಲು ಮುಂದಾದರಾದರೂ ಈ ಬಾರಿ ಸಂಘಟನೆಯ ಕಾರಣಕ್ಕಾಗಿ ಒಬ್ಬ/ಳು ಕೃಷಿಕೂಲಿಯೂ ಅಲ್ಲಾಡಲಿಲ್ಲ. ಈ ಬೆಳವಣಿಗೆ ಭೂಮಾಲೀಕರ ಪಿತ್ತ ನೆತ್ತಿಗೇರಿಸಿತ್ತು. ಆದರೂ ಪಕ್ಕದ ಊರಿನ ಕೃಷಿಕೂಲಿಗಳನ್ನು ಕರೆಸಿ ಕೊಯ್ಲು ಮಾಡಿಸಿಕೊಳ್ಳುವಲ್ಲಿ ಮೇಲ್ಜಾತಿ ಭೂಮಾಲೀಕರು ಯಶಸ್ವಿಯಾದರು. ಈ ಘಟನೆ ಎರಡೂ ಪಾಳೆಯದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಇಂತಹ ಪರಿಸ್ಥಿತಿಯಲ್ಲಿ ಕಿಲ್ವೇನ್ಮಣಿಯ ಕಿರಾಣಿ ಅಂಗಡಿಯ ಮಾಲೀಕನೊಬ್ಬನನ್ನು ಭೂಮಾಲೀಕರ ಬೆಂಬಲಿಗರು ಅಪಹರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಭೂಮಾಲೀಕರು ದಲಿತ ಕೃಷಿಕೂಲಿಗಳನ್ನು ಬಹಿಷ್ಕಾರ ಹಾಕಿದ್ದರೂ ಅವರಿಗೆ ಆ ಅಂಗಡಿಯ ಮಾಲೀಕ ದವಸ ಧಾನ್ಯಗಳನ್ನು ನೀಡಿದ್ದು. ಹೀಗೆ ಅಪಹರಣಗೊಂಡ ವ್ಯಕ್ತಿಯನ್ನು ಬಿಡಿಸಿಕೊಂಡು ಬರಲು ತೆರಳಿದ ಕೃಷಿ ಕೂಲಿಗಳ ಹಾಗೂ ಭೂಮಾಲೀಕರ ಗೂಂಡಾಗಳ ನಡುವೆ ಸಂಘರ್ಷವೇರ್ಪಟ್ಟು ಭೂಮಾಲೀಕರ ಬೆಂಬಲಿಗನೊಬ್ಬ ಅದರಲ್ಲಿ ಹತ್ಯೆಯಾದನು. ಈ ಘಟನೆ ಕಿಲ್ವೇನ್ಮಣಿಯ ಹತ್ಯಾಕಾಂಡಕ್ಕೆ ತಕ್ಷಣದ ಕಾರಣವಾಯಿತು. ಆದರೆ ಮೇಲ್ಜಾತಿ ಭೂಮಾಲೀಕರಲ್ಲಿದ್ದ ’ಸ್ವಾಭಿಮಾನಿ ದಲಿತ’ರ ಮೇಲಿನ ಸಿಟ್ಟು ಅದಕ್ಕೆ ಶಾಶ್ವತ ಕಾರಣವಾಗಿತ್ತು.

1968 ಡಿಸೆಂಬರ್ 25ನೇ ತಾರೀಖಿನಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ ಲಾರಿಗಳಲ್ಲಿ ಬಂದ ಸುಮಾರು 200 ಭೂಮಾಲೀಕರ ಗೂಂಡಾಗಳು ದಲಿತ ಕೇರಿಯನ್ನು ಸುತ್ತುವರಿದು ನಿಂತರು. ಕೇರಿಯಿಂದ ಒಂದು ಸೊಳ್ಳೆಯೂ ಹೊರಹೋಗದಂತೆ ದಿಗ್ಭಂಧನ ವಿಧಿಸಿದರು. ಇಬ್ಬರು ಕೃಷಿಕೂಲಿಗಳನ್ನು ಗುರಿಮಾಡಿ ಬಂದೂಕಿನಿಂದ ಸುಟ್ಟು ಗಾಯಗೊಳಿಸಲಾಯಿತು. ಈ ಸದ್ದು ತಿಳಿದು ಹೊರಬಂದ ದಲಿತರ ಕೈಯಲ್ಲಿದ್ದ ಆಯುಧ ಕೇವಲ ಕಲ್ಲುಗಳು ಮಾತ್ರ. ಒಂದೆಡೆ ದಲಿತ ಯುವಕರು ಹಾಗೂ ವಯಸ್ಕರು ಕಲ್ಲುಗಳನ್ನು ತೂರುತ್ತಾ ಭೂಮಾಲೀಕರ ಗೂಂಡಾಗಳನ್ನು ಹಿಂದೆ ಸರಿಸುತ್ತಿದ್ದರೆ ಭೂಮಾಲೀಕರ ಗೂಂಡಾಗಳು ದಲಿತರು ಗುಂಪುಗಟ್ಟಿದ್ದ ಸ್ಥಳವನ್ನು ಹುಡುಕುತ್ತಿದ್ದರು. ಸುರಕ್ಷತೆಗಾಗಿ ಹೆಂಗಸರು, ವಯಸ್ಸಾದ ಮುದುಕ, ಮುದುಕಿಯರು ಹಾಗೂ ಮಕ್ಕಳನ್ನು ತನ್ನೊಡಲಲ್ಲಿ ತುಂಬಿಕೊಂಡಿದ್ದ ಗುಡಿಸಲು ಆ ಪಾಪಿಗಳ ಕಣ್ಣಿಗೆ ಬಿದ್ದೇಬಿಟ್ಟಿತು. ಆ ಗುಡಿಸಿಲಿನ ಸುತ್ತ ನೆರೆದ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಇಟ್ಟೇಬಿಟ್ಟರು. ಬೆಂಕಿಯ ತಾಪ ತಾಳಲಾರದೇ ಹೊರಬಂದ ಇಬ್ಬರು ಮುದುಕರನ್ನು ಕತ್ತರಿಸಿ ಮತ್ತೆ ಗುಡಿಸಿಲಿನೊಳಕ್ಕೆ ಎಸೆದರು. ಮಕ್ಕಳಾದರೂ ಬದುಕಿಕೊಳ್ಳಲೆಂದು ಗುಡಿಸಿಲಿನೊಳಗಿದ್ದ ಹೆಂಗಸರು ಇಬ್ಬರು ಮಕ್ಕಳನ್ನು ಹೊರಹಾಕಿದರು. ಆದರೆ ಒಂದೇ ಕ್ಷಣದಲ್ಲಿ ಮತ್ತೆ ಆ ಮಕ್ಕಳಿಬ್ಬರನ್ನೂ ಧಗಧಗನೆ ಉರಿಯುತ್ತಿರುವ ಗುಡಿಸಿಲಿನೊಳಕ್ಕೆ ಎಸೆಯಲಾಯಿತು. ಕೆಲವೇ ಕ್ಷಣಗಳಲ್ಲಿ ಆ ಗುಡಿಸಲು ಸುಟ್ಟು ಭಸ್ಮವಾಯಿತು. ಅದರಲ್ಲಿದ್ದ 5 ಮುದುಕರು, 16 ಮಹಿಳೆಯರು ಹಾಗೂ 23 ಮಕ್ಕಳೂ ಸೇರಿ 44 ಜನ ದಲಿತರು ಸುಟ್ಟು ಕರಕಲಾಗಿದ್ದರು.

ಇಂತಹ ನರಮೇಧ ನಡೆಸಿದ ಮೇಲೆ ಆ ದುಷ್ಕರ್ಮಿಗಳು ನೇರವಾಗಿ ಹೋದದ್ದು ಪೊಲೀಸ್ ಸ್ಟೇಷನ್ನಿಗೆ. ಅಲ್ಲಿ ತಮಗೆ ರಕ್ಷಣೆ ಬೇಕೆಂದು ಪೊಲೀಸ್ ಸೆಕ್ಯುರಿಟಿ ಪಡೆದರು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಅಣ್ಣಾದೊರೈ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದರು. ಭೂಮಾಲೀಕರನ್ನು ಹಾಗೂ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟಲಾಯಿತು. 10 ಜನರಿಗೆ 10 ವರ್ಷಗಳ ಕಾಲ ಶಿಕ್ಷೆಯನ್ನು ಸೆಷನ್ ಕೋರ್ಟ್ ವಿಧಿಸಿತು. ಅದರಲ್ಲಿ ಭೂಮಾಲೀಕರ ನಾಯಕ ಗೋಪಾಲಕೃಷ್ಣನ್ ನಾಯ್ಡು ಸಹ ಸೇರಿದ್ದನು. ಆದರೆ 1975ರಲ್ಲಿ ಸಾಕ್ಷಿಗಳ ಕೊರತೆಯ ಕಾರಣ ನೀಡಿ ಮದ್ರಾಸ್ ಹೈ ಕೋರ್ಟ್ ನಾಯ್ಡುಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೊಳಿಸಿತು. ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡ ನಾಯ್ಡುವನ್ನು 1980ರಲ್ಲಿ ಪ್ರತೀಕಾರವಾಗಿ ಕೊಲೆ ಮಾಡಲಾಯಿತು.

ಕಿಲ್ವೇನ್ಮಣಿ ಘಟನೆಯು ಭಾರತದ ಭೂಹೋರಾಟಗಳ ಧಿಕ್ಕನ್ನು ಬದಲಾಯಿಸಿತು. ದೇಶಾದ್ಯಂತ ಹಲವು ಕಡೆ ನೂರಾರು ಭೂಹೋರಾಟಗಳು ನಡೆದವು. ವಿಪರ್ಯಾಸವೆಂದರೆ ಪ್ರತಿ ಬಾರಿಯೂ ಈ ದೇಶದಲ್ಲಿ ಒಂದು ಹುಲ್ಲುಕಡ್ಡಿಯು ಪ್ರಗತಿಪರವಾಗಿ ಅಲುಗಾಡಬೇಕೆಂದರೆ ದಲಿತರ ಮಾರಣ ಹೋಮವೇ ನಡೆಯಬೇಕಲ್ಲ!

ಕಿಲ್ವೇನ್ಮಣಿ ಘಟನೆ ಅಧರಿಸಿ ಹಲವು ಕಾದಂಬರಿಗಳು ಬಂದಿವೆ. ಸಿನೆಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಅಸುರನ್ ಸಿನೆಮಾದಲ್ಲಿ ಕಿಲ್ವೇನ್ಮಣಿ ಹೋಲುವ ಘಟನೆಯೂ ಸೇರಿದೆ. ಅರವಿಂದನ್ ಸಿನೆಮಾದ ಪ್ರಮುಖ ಕಥೆ ಕಿಲ್ವೇನ್ಮಣಿ.

ಕೋಮುವಾದದ ಫೈಲ್ಸ್‌ಗಳೇ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ದಲಿತ್ ಫೈಲ್ಸ್‌ಗಳನ್ನು ಪರಿಗಣಿಸುವುದೇ ಈ ಮೇಲ್ಜಾತಿ ಹಿಂದೂ ಸಮಾಜ?


ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...