Homeಅಂಕಣಗಳುಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

- Advertisement -
- Advertisement -

1947ರ ಆಗಸ್ಟ್ 15ರಂದು ಭಾರತ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು. ಭಾರತೀಯರು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದರು. 1950 ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೊಂಡಿತು. ಅದು ಸಮಸ್ತ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿತು. ಅದು ಸರ್ವ ಭಾರತೀಯರಿಗೂ ಸ್ವಾತಂತ್ರ್ಯ, ಸಮಾನತೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಹೆಗಲ ಮೇಲೆ ಹೇರಿತು. ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ನಂತರದ ದಿನಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ತನ್ನೆಲ್ಲಾ ಜನತೆಗೆ ಖಾತ್ರಿಗೊಳಿಸಲು ಸೋತಿದೆ. ಅದಕ್ಕೆ ಸ್ಪಷ್ಟ ನಿದರ್ಶನ ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳಾಗಿವೆ.

ಸ್ವತಂತ್ರ ಭಾರತಕ್ಕೆ 20 ವರ್ಷಗಳಾಗಿತ್ತು. ಅಷ್ಟರಲ್ಲಿಯೇ ಅತ್ಯಂತ ಭೀಕರ ದಲಿತರ ಹತ್ಯಾಕಾಂಡ ತಮಿಳುನಾಡಿನ ಕಿಲ್ವೇನ್ಮಣಿಯಲ್ಲಿ ನಡೆಯಿತು. ಅದಕ್ಕೂ ಮೊದಲು ಅದೆಷ್ಟು ದೌರ್ಜನ್ಯಗಳಾಗಿದ್ದವೋ ಕಾಣೆ. ಅವುಗಳೆಲ್ಲ ಭಾರತದ ಇತಿಹಾಸದಲ್ಲಿ ಸಮಾಧಿಯಾಗಿ ಹೋಗಿವೆ. ಆದರೆ 1968 ಡಿಸೆಂಬರ್ 25ರಂದು ಕಿಲ್ವೇನ್ಮಣಿಯಲ್ಲಿ ನಡೆದದ್ದು ಅಕ್ಷರಶಃ ನರಮೇಧ.

60ರ ದಶಕ ಭಾರತದ ಭೂಹೋರಾಟಗಳ ಕಾಲಘಟ್ಟ ಎಂದೇ ಹೇಳಬಹುದು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಎಡಪಂಥೀಯ ಸಂಘಟನೆಗಳು ಭೂರಹಿತ ಕೂಲಿ ಕಾರ್ಮಿಕರಿಗೆ
ಭೂಹಂಚಿಕೆ ಮಾಡುವಂತೆ ದೇಶಾದ್ಯಂತ ಹೋರಾಟ ರೂಪಿಸಿದ್ದವು. ಮಹಾರಾಷ್ಟ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಅನುಯಾಯಿ ದಾದಾಸಾಹೇಬ್ ಗಾಯಕ್ವಾಡ್ ಸಹ ಭೂಹೋರಾಟ ಆರಂಭಿಸಿದ್ದು ಇದೇ ಕಾಲಘಟ್ಟದಲ್ಲಿ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡು 20 ವರ್ಷಗಳು ಕಳೆದಿದ್ದರೂ ಬೃಹತ್ ದೇವಾಲಯಗಳು ಹಾಗೂ ಮೇಲ್ಜಾತಿ ಭೂಮಾಲೀಕರು ಸಾವಿರಾರು ಎಕರೆಗಟ್ಟಲೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿದ್ದರು. ಅಂದಿನ ಎಲ್ಲಾ ರಾಜಕೀಯ ಪಕ್ಷಗಳೂ ಭೂಮಾಲೀಕರ ಅಂಗಳವಾಗಿದ್ದ ಕಾರಣ ಅವರ ವಿರುದ್ಧ ತಿರುಗಿ ಬೀಳುವವರಿರಲಿಲ್ಲ. ಆದರೆ ಸೈದ್ಧಾಂತಿಕವಾಗಿ ಕೃಷಿಕೂಲಿಗಳ ಪರವಾಗಿಯೇ ಕೆಲಸ ಮಾಡುತ್ತಿದ್ದ ಕಮ್ಯುನಿಸ್ಟ್ ಸಂಘಟನೆಗಳು ಮಾತ್ರ ಭೂಹೋರಾಟವನ್ನೇ ಪ್ರಮುಖ ಕಾರ್ಯಕ್ರಮವನ್ನಾಗಿ ಮಾಡಿಕೊಂಡವು. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿ ಕೃಷಿಕೂಲಿಗಳಾಗಿ ದುಡಿಯುತ್ತಿದ್ದ ದಲಿತರನ್ನು ಸಂಘಟಿಸಿದರು. ಇದೇ ರೀತಿಯಲ್ಲಿಯೇ ಅವಿಭಜಿತ ತಂಜಾವೂರು ಜಿಲ್ಲೆಯಲ್ಲಿಯೂ ಹಲವು ಸಂಘಟನೆಗಳಾದವು.

ತಮಿಳುನಾಡಿನ ಕಿಲ್ವೇನ್ಮಣಿ ದಲಿತ ಕೃಷಿಕೂಲಿಗಳೂ ಸಹ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡರು. ಇದಕ್ಕೆ ತಕ್ಕಂತೆ ಹಸಿರು ಕ್ರಾಂತಿಯೂ ಸಹ ಭಾರತದಲ್ಲಿ ಮನೆಮಾತಾಗಿತ್ತು. ಈ ಸಂಘಟನೆಯ ಮೂಲಕ ಕೂಲಿ ದರವನ್ನು ಹೆಚ್ಚು ಮಾಡಲು ಭೂಮಾಲೀಕರನ್ನು ಆಗ್ರಹಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಭೂಮಾಲೀಕರೂ ಸಹ ಭತ್ತ ಉತ್ಪಾದನೆ ಸಂಘಟನೆಯನ್ನು ಸ್ಥಾಪಿಸಿಕೊಂಡು ಒಗ್ಗಟ್ಟಾದರು. ಅಲ್ಲಿಂದ ಈ ಎರಡು ಸಂಘಟನೆಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ಕೃಷಿ ಕೂಲಿಕಾರರು ತಮ್ಮ ಕೂಲಿ ದರವನ್ನು ಹೆಚ್ಚು ಮಾಡಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಭೂಮಾಲೀಕರು ಕೃಷಿ ಕೂಲಿಗಳನ್ನು ಹದ್ದುಬಸ್ತಿನಲ್ಲಿಡುವ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು.

1968ನೇ ಇಸವಿಯ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಬೆಳೆ ಕೊಯ್ಲು ಸಮಯ ಬಂದಾಗ ಕೃಷಿಕೂಲಿಗಳ ಸಂಘಟನೆಯು ಭೂಮಾಲೀಕರು ಕೂಲಿ ದರ ಹೆಚ್ಚು ಮಾಡದಿದ್ದರೆ ಕೆಲಸಕ್ಕೆ ಬರುವುದಿಲ್ಲವೆಂದು ಘೋಷಿಸಿತು. ಎಂದಿನಂತೆ ಭೂಮಾಲೀಕರು ಕೃಷಿಕೂಲಿಗಳನ್ನು ವಿಭಜಿಸಿ ತಮ್ಮ ಆಟವನ್ನು ಆಡಲು ಮುಂದಾದರಾದರೂ ಈ ಬಾರಿ ಸಂಘಟನೆಯ ಕಾರಣಕ್ಕಾಗಿ ಒಬ್ಬ/ಳು ಕೃಷಿಕೂಲಿಯೂ ಅಲ್ಲಾಡಲಿಲ್ಲ. ಈ ಬೆಳವಣಿಗೆ ಭೂಮಾಲೀಕರ ಪಿತ್ತ ನೆತ್ತಿಗೇರಿಸಿತ್ತು. ಆದರೂ ಪಕ್ಕದ ಊರಿನ ಕೃಷಿಕೂಲಿಗಳನ್ನು ಕರೆಸಿ ಕೊಯ್ಲು ಮಾಡಿಸಿಕೊಳ್ಳುವಲ್ಲಿ ಮೇಲ್ಜಾತಿ ಭೂಮಾಲೀಕರು ಯಶಸ್ವಿಯಾದರು. ಈ ಘಟನೆ ಎರಡೂ ಪಾಳೆಯದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಇಂತಹ ಪರಿಸ್ಥಿತಿಯಲ್ಲಿ ಕಿಲ್ವೇನ್ಮಣಿಯ ಕಿರಾಣಿ ಅಂಗಡಿಯ ಮಾಲೀಕನೊಬ್ಬನನ್ನು ಭೂಮಾಲೀಕರ ಬೆಂಬಲಿಗರು ಅಪಹರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಭೂಮಾಲೀಕರು ದಲಿತ ಕೃಷಿಕೂಲಿಗಳನ್ನು ಬಹಿಷ್ಕಾರ ಹಾಕಿದ್ದರೂ ಅವರಿಗೆ ಆ ಅಂಗಡಿಯ ಮಾಲೀಕ ದವಸ ಧಾನ್ಯಗಳನ್ನು ನೀಡಿದ್ದು. ಹೀಗೆ ಅಪಹರಣಗೊಂಡ ವ್ಯಕ್ತಿಯನ್ನು ಬಿಡಿಸಿಕೊಂಡು ಬರಲು ತೆರಳಿದ ಕೃಷಿ ಕೂಲಿಗಳ ಹಾಗೂ ಭೂಮಾಲೀಕರ ಗೂಂಡಾಗಳ ನಡುವೆ ಸಂಘರ್ಷವೇರ್ಪಟ್ಟು ಭೂಮಾಲೀಕರ ಬೆಂಬಲಿಗನೊಬ್ಬ ಅದರಲ್ಲಿ ಹತ್ಯೆಯಾದನು. ಈ ಘಟನೆ ಕಿಲ್ವೇನ್ಮಣಿಯ ಹತ್ಯಾಕಾಂಡಕ್ಕೆ ತಕ್ಷಣದ ಕಾರಣವಾಯಿತು. ಆದರೆ ಮೇಲ್ಜಾತಿ ಭೂಮಾಲೀಕರಲ್ಲಿದ್ದ ’ಸ್ವಾಭಿಮಾನಿ ದಲಿತ’ರ ಮೇಲಿನ ಸಿಟ್ಟು ಅದಕ್ಕೆ ಶಾಶ್ವತ ಕಾರಣವಾಗಿತ್ತು.

1968 ಡಿಸೆಂಬರ್ 25ನೇ ತಾರೀಖಿನಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ ಲಾರಿಗಳಲ್ಲಿ ಬಂದ ಸುಮಾರು 200 ಭೂಮಾಲೀಕರ ಗೂಂಡಾಗಳು ದಲಿತ ಕೇರಿಯನ್ನು ಸುತ್ತುವರಿದು ನಿಂತರು. ಕೇರಿಯಿಂದ ಒಂದು ಸೊಳ್ಳೆಯೂ ಹೊರಹೋಗದಂತೆ ದಿಗ್ಭಂಧನ ವಿಧಿಸಿದರು. ಇಬ್ಬರು ಕೃಷಿಕೂಲಿಗಳನ್ನು ಗುರಿಮಾಡಿ ಬಂದೂಕಿನಿಂದ ಸುಟ್ಟು ಗಾಯಗೊಳಿಸಲಾಯಿತು. ಈ ಸದ್ದು ತಿಳಿದು ಹೊರಬಂದ ದಲಿತರ ಕೈಯಲ್ಲಿದ್ದ ಆಯುಧ ಕೇವಲ ಕಲ್ಲುಗಳು ಮಾತ್ರ. ಒಂದೆಡೆ ದಲಿತ ಯುವಕರು ಹಾಗೂ ವಯಸ್ಕರು ಕಲ್ಲುಗಳನ್ನು ತೂರುತ್ತಾ ಭೂಮಾಲೀಕರ ಗೂಂಡಾಗಳನ್ನು ಹಿಂದೆ ಸರಿಸುತ್ತಿದ್ದರೆ ಭೂಮಾಲೀಕರ ಗೂಂಡಾಗಳು ದಲಿತರು ಗುಂಪುಗಟ್ಟಿದ್ದ ಸ್ಥಳವನ್ನು ಹುಡುಕುತ್ತಿದ್ದರು. ಸುರಕ್ಷತೆಗಾಗಿ ಹೆಂಗಸರು, ವಯಸ್ಸಾದ ಮುದುಕ, ಮುದುಕಿಯರು ಹಾಗೂ ಮಕ್ಕಳನ್ನು ತನ್ನೊಡಲಲ್ಲಿ ತುಂಬಿಕೊಂಡಿದ್ದ ಗುಡಿಸಲು ಆ ಪಾಪಿಗಳ ಕಣ್ಣಿಗೆ ಬಿದ್ದೇಬಿಟ್ಟಿತು. ಆ ಗುಡಿಸಿಲಿನ ಸುತ್ತ ನೆರೆದ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಇಟ್ಟೇಬಿಟ್ಟರು. ಬೆಂಕಿಯ ತಾಪ ತಾಳಲಾರದೇ ಹೊರಬಂದ ಇಬ್ಬರು ಮುದುಕರನ್ನು ಕತ್ತರಿಸಿ ಮತ್ತೆ ಗುಡಿಸಿಲಿನೊಳಕ್ಕೆ ಎಸೆದರು. ಮಕ್ಕಳಾದರೂ ಬದುಕಿಕೊಳ್ಳಲೆಂದು ಗುಡಿಸಿಲಿನೊಳಗಿದ್ದ ಹೆಂಗಸರು ಇಬ್ಬರು ಮಕ್ಕಳನ್ನು ಹೊರಹಾಕಿದರು. ಆದರೆ ಒಂದೇ ಕ್ಷಣದಲ್ಲಿ ಮತ್ತೆ ಆ ಮಕ್ಕಳಿಬ್ಬರನ್ನೂ ಧಗಧಗನೆ ಉರಿಯುತ್ತಿರುವ ಗುಡಿಸಿಲಿನೊಳಕ್ಕೆ ಎಸೆಯಲಾಯಿತು. ಕೆಲವೇ ಕ್ಷಣಗಳಲ್ಲಿ ಆ ಗುಡಿಸಲು ಸುಟ್ಟು ಭಸ್ಮವಾಯಿತು. ಅದರಲ್ಲಿದ್ದ 5 ಮುದುಕರು, 16 ಮಹಿಳೆಯರು ಹಾಗೂ 23 ಮಕ್ಕಳೂ ಸೇರಿ 44 ಜನ ದಲಿತರು ಸುಟ್ಟು ಕರಕಲಾಗಿದ್ದರು.

ಇಂತಹ ನರಮೇಧ ನಡೆಸಿದ ಮೇಲೆ ಆ ದುಷ್ಕರ್ಮಿಗಳು ನೇರವಾಗಿ ಹೋದದ್ದು ಪೊಲೀಸ್ ಸ್ಟೇಷನ್ನಿಗೆ. ಅಲ್ಲಿ ತಮಗೆ ರಕ್ಷಣೆ ಬೇಕೆಂದು ಪೊಲೀಸ್ ಸೆಕ್ಯುರಿಟಿ ಪಡೆದರು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಅಣ್ಣಾದೊರೈ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದರು. ಭೂಮಾಲೀಕರನ್ನು ಹಾಗೂ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟಲಾಯಿತು. 10 ಜನರಿಗೆ 10 ವರ್ಷಗಳ ಕಾಲ ಶಿಕ್ಷೆಯನ್ನು ಸೆಷನ್ ಕೋರ್ಟ್ ವಿಧಿಸಿತು. ಅದರಲ್ಲಿ ಭೂಮಾಲೀಕರ ನಾಯಕ ಗೋಪಾಲಕೃಷ್ಣನ್ ನಾಯ್ಡು ಸಹ ಸೇರಿದ್ದನು. ಆದರೆ 1975ರಲ್ಲಿ ಸಾಕ್ಷಿಗಳ ಕೊರತೆಯ ಕಾರಣ ನೀಡಿ ಮದ್ರಾಸ್ ಹೈ ಕೋರ್ಟ್ ನಾಯ್ಡುಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೊಳಿಸಿತು. ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡ ನಾಯ್ಡುವನ್ನು 1980ರಲ್ಲಿ ಪ್ರತೀಕಾರವಾಗಿ ಕೊಲೆ ಮಾಡಲಾಯಿತು.

ಕಿಲ್ವೇನ್ಮಣಿ ಘಟನೆಯು ಭಾರತದ ಭೂಹೋರಾಟಗಳ ಧಿಕ್ಕನ್ನು ಬದಲಾಯಿಸಿತು. ದೇಶಾದ್ಯಂತ ಹಲವು ಕಡೆ ನೂರಾರು ಭೂಹೋರಾಟಗಳು ನಡೆದವು. ವಿಪರ್ಯಾಸವೆಂದರೆ ಪ್ರತಿ ಬಾರಿಯೂ ಈ ದೇಶದಲ್ಲಿ ಒಂದು ಹುಲ್ಲುಕಡ್ಡಿಯು ಪ್ರಗತಿಪರವಾಗಿ ಅಲುಗಾಡಬೇಕೆಂದರೆ ದಲಿತರ ಮಾರಣ ಹೋಮವೇ ನಡೆಯಬೇಕಲ್ಲ!

ಕಿಲ್ವೇನ್ಮಣಿ ಘಟನೆ ಅಧರಿಸಿ ಹಲವು ಕಾದಂಬರಿಗಳು ಬಂದಿವೆ. ಸಿನೆಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಅಸುರನ್ ಸಿನೆಮಾದಲ್ಲಿ ಕಿಲ್ವೇನ್ಮಣಿ ಹೋಲುವ ಘಟನೆಯೂ ಸೇರಿದೆ. ಅರವಿಂದನ್ ಸಿನೆಮಾದ ಪ್ರಮುಖ ಕಥೆ ಕಿಲ್ವೇನ್ಮಣಿ.

ಕೋಮುವಾದದ ಫೈಲ್ಸ್‌ಗಳೇ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ದಲಿತ್ ಫೈಲ್ಸ್‌ಗಳನ್ನು ಪರಿಗಣಿಸುವುದೇ ಈ ಮೇಲ್ಜಾತಿ ಹಿಂದೂ ಸಮಾಜ?


ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...