Homeಅಂಕಣಗಳುಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

- Advertisement -
- Advertisement -

ಮಿರ್ಚ್‌ಪುರ, ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಗ್ರಾಮ. ಸಿಂಧೂ ಬಯಲಿನ ನಾಗರಿಕತೆಗೆ ಸಂಬಂಧಿಸಿದ ರಾಖೀಗರಿ ಸ್ಥಳ ಇಲ್ಲಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಜಾಟ್ ಜನಾಂಗ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ದಲಿತರು ಸಹ ಶೇ.18ರಷ್ಟಿದ್ದಾರೆ. ದಲಿತರಲ್ಲಿ ವಾಲ್ಮೀಕಿ ಸಮುದಾಯದ (ಕರ್ನಾಟಕದ ವಾಲ್ಮೀಕಿ ಸಮುದಾಯ ಬೇರೆ) ಜನಸಂಖ್ಯೆಯೇ ಹೆಚ್ಚಿದ್ದು ಓಟ್ ಬ್ಯಾಂಕ್ ರಾಜಕಾರಣದಲ್ಲಿ ಗಮನಾರ್ಹವಾದ ಪಾತ್ರವನ್ನೇ ಹೊಂದಿದ್ದರು. ಆದರೆ ಇಂದು ಈ ವಾಲ್ಮೀಕಿ ಸಮುದಾಯದ ಒಂದು ಕುಟುಂಬವೂ ಸಹ ಮಿರ್ಚ್‌ಪುರದಲ್ಲಿ ವಾಸವಾಗಿಲ್ಲ. ಜಾಟರು ನಡೆಸಿದ ಅಮಾನವೀಯ ದೌರ್ಜನ್ಯಕ್ಕೆ ಬೇಸತ್ತು ಭಾರತದಾದ್ಯಂತ ಚದುರಿಹೋಗಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಬಾಳಿ ಬದುಕಿದ್ದ ಊರು ಬಿಟ್ಟುಹೋಗಲು ಕಾರಣವೇನು? ಮುಂದೆ ಮಿರ್ಚ್‌ಪುರ ಫೈಲ್ ಕತೆಯನ್ನು ನೋಡೋಣ.

ದಲಿತರಾದ ವಾಲ್ಮೀಕಿ ಸಮುದಾಯದ ಜಯಪ್ರಕಾಶ ಕುಟುಂಬ ನಾಯಿಯೊಂದನ್ನು ಸಾಕಿತ್ತು. ಏಪ್ರಿಲ್ 19, 2010ರ ರಾತ್ರಿ ಊರಿಗೆ ಬೈಕಿನಲ್ಲಿ ಮರಳಿದ ಹಿಂದೂ ಮೇಲ್ಜಾತಿ ಜಾಟ್ ಯುವಕರ ಗುಂಪನ್ನು ಕಂಡು ಆ ನಾಯಿ ಬೊಗಳಿತು. ತಮ್ಮನ್ನು ಕಂಡು ಬೊಗಳಿದ ನಾಯಿ ದಲಿತರು ಸಾಕಿರುವುದೆಂದು ತಿಳಿದಿದ್ದ ಜಾಟ್ ಯುವಕರಿಗೆ ಅದನ್ನು ಸಹಿಸಲಾಗಲಿಲ್ಲ. ಹಾಗಾಗಿ ಅ ಯುವಕರಲ್ಲೊಬ್ಬ ಆ ಸಾಕುನಾಯಿಯ ಮೇಲೆ ಇಟ್ಟಿಗೆಯನ್ನು ತೂರಿಯೋಬಿಟ್ಟ. ಇದನ್ನು ಕಂಡ ದಲಿತ ಕುಟುಂಬದ ಯೋಗೇಶ್ ಆ ಯುವಕರಿಗೆ ಬುದ್ಧಿವಾದ ಹೇಳಿದ. ’ನಾಯಿ ಬೊಗಳುವುದು ಸಹಜ; ಅದಕ್ಕೆಲ್ಲ ಇಟ್ಟಿಗೆಯಿಂದ ಹೊಡೆಯುವುದ’ ಎಂದು ಪ್ರಶ್ನಿಸಿದ. ಆಗ ಅಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಗಲಾಟೆಯೂ ನಡೆಯಿತು. ಆದರೆ ಊರಿನವರೆಲ್ಲರೂ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿ ಸಮಾಧಾನ ಪಡಿಸಿದ್ದರು.

ಇದಾದ ಮಾರನೇ ದಿನದಿಂದಲೇ ನಾಯಿ ಸಾಕಿದ್ದ ದಲಿತ ಸಮುದಾಯದವರು ತಮ್ಮ ಕ್ಷಮೆ ಕೇಳಬೇಕೆಂದು ಜಾಟ್ ಸಮುದಾಯದವರು ಒತ್ತಾಯಿಸಿದರು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದೂ ಧಮಕಿ ಹಾಕಿದರು. ಇದಕ್ಕೆ ದಲಿತ ಯುವಕರು ಒಪ್ಪಲಿಲ್ಲವಾದರೂ, ದಲಿತ ಮುಖಂಡರಾದ ವೀರ್ ಭನ್ ಮತ್ತು ಕರಣ್ ಸಿಂಗ್ ಅವರುಗಳು ಕ್ಷಮೆ ಕೇಳಲು ಜಾಟ್ ಕುಟುಂಬದ ಮನೆಗೆ ಹೋಗಿಯೇಬಿಟ್ಟರು. ಜಾಟ್ ಮುಖ್ಯಸ್ಥನ ಮನೆಯ ಮುಂದೆ ನಿಂತು ಕ್ಷಮೆ ಕೇಳಿದ ದಲಿತ ಹಿರೀಕರಿಬ್ಬರಿಗೂ ಜಾಟರು ಅಮಾನವೀಯವಾಗಿ ಥಳಿಸಿದರು. ಅವರಿಬ್ಬರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಪೊಲೀಸ್ ಸ್ಟೇಷನ್ನಿನಲ್ಲಿ ದೂರನ್ನು ದಾಖಲಿಸಲಾಯಿತು.

ಇದಾದ ಮಾರನೇ ದಿನ ಅಂದರೆ ಏಪ್ರಿಲ್ 20, 2010ರಂದು ದಾರಿಯಲ್ಲಿ ಹೋಗುತ್ತಿದ್ದ ದಲಿತ ಯುವಕರನ್ನುದ್ದೇಶಿಸಿ ಜಾಟ್ ಯುವಕನೊಬ್ಬ ’ನಿಮ್ಮ ಮನೆಗಳನ್ನ ಸುಟ್ಟುಹಾಕ್ತೀವಿ ನೋಡಿ’ ಎಂದಿದ್ದನು. ಆಗಲೂ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಈ ಜಗಳಕ್ಕೆ ಸಂಬಂಧಿಸಿದಂತೆ ಊರಿನ ಜಾಟ್ ಜನರೆಲ್ಲರೂ ಒಂದೆಡೆ ಸೇರಿದರು. ಅದರಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಈ ಜಗಳಕ್ಕೆ ಸಂಬಂಧಿಸಿದಂತೆ ’ದಲಿತರು ಜಾಟ್ ಯುವಕನೊಬ್ಬನನ್ನು ಸುಖಾಸುಮ್ಮನೆ ಥಳಿಸಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಜಾಟರು ಊರಲ್ಲೆಲ್ಲಾ ಹಬ್ಬಿಸಿದರು.

ಈ ಮೇಲಿನ ಮೂರೂ ಘಟನೆಗಳು ಮಿರ್ಚ್‌ಪುರದಲ್ಲಿ ದಲಿತರ ವಿರುದ್ಧ ಬಹುದೊಡ್ಡ ಸಂಚನ್ನು ರೂಪಿಸಿದವು. ಏಪ್ರಿಲ್ 21ರಂದು ಇದ್ದಕ್ಕಿದ್ದಂತೆ ಸುಮಾರು 100-150 ಜನಸಂಖ್ಯೆಯ ಜಾಟ್ ಯುವಕರ ತಂಡವೊಂದು ಲಾಠಿ, ಕಲ್ಲು, ಪೆಟ್ರೋಲ್ ಹಿಡಿದು ಗುಂಪುಗೂಡಿತು. ಅಲ್ಲೇನಾಗುತ್ತಿದೆ ಎಂಬುದನ್ನು ತಿಳಿಯುವಷ್ಟರಲ್ಲಿ ದಲಿತರ ಮನೆಗಳ ಮೇಲೆ ಕಲ್ಲುಗಳನ್ನು ತೂರಲಾಯಿತು. ಕೆಲವೇ ನಿಮಿಷಗಳಲ್ಲಿ ಜಾಟರ ಮತ್ತೊಂದು ಗುಂಪು ಸಹ ಜೊತೆಗೂಡಿಕೊಂಡಿದ್ದರಿಂದ ಅವರ ಸಂಖ್ಯೆ 400ಕ್ಕೆ ಏರಿತು. ಕೆಲವು ವರದಿಗಳ ಪ್ರಕಾರ ಅದು 1000 ಮುಟ್ಟಿತ್ತು. ಜಾಟರ ಮುಂದೆ ಜನಸಂಖ್ಯೆಯಲ್ಲಿ ಕಡಿಮೆ ಇದ್ದ ದಲಿತರ ಗುಂಪು ಸಹ ಸುಮ್ಮನೆ ಹೆದರಿ ಕುಳಿತುಕೊಳ್ಳದೆ ಅಥವಾ ಓಡಿಹೋಗದೇ ಕೈಗೆ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳನ್ನು ಜಾಟರತ್ತ ತೂರಿ ತಿರುಗೇಟು ನೀಡಿತು. ಪರಿಸ್ಥಿತಿ ತಾರಕಕ್ಕೇರುತ್ತಿರುವುದನ್ನು ಕಂಡ ಹಿರಿಯ ಮುಖಂಡರುಗಳು ಎರಡೂ ಗುಂಪಿನ ಯುವಕರಿಗೆ ಬುದ್ಧಿ ಹೇಳಿ ಈಗಲೇ ಸಭೆ ಸೇರಿ ವಿಷಯ ಬಗೆಹರಿಸಿಕೊಳ್ಳೋಣವೆಂದು ತಿಳಿಸಿದರು. ಈ ರಾಜಿ ಸಂಧಾನ ಸಭೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದರೆಂದೇ ಹೇಳಲಾಗುತ್ತದೆ. ಇದರ ಪರಿಣಾಮವಾಗಿ ದಲಿತ ಮತ್ತು ಜಾಟ್ ಸಮುದಾಯದ ಪುರುಷರು ಪಂಚಾಯ್ತಿ ಸೇರಿದರು. ಹೀಗೆ ಮಾತುಕತೆ ಆರಂಭಿಸುವಷ್ಟರಲ್ಲಿ ದಲಿತ ಕೇರಿಯ ಕಡೆಯಿಂದ ಮಹಿಳೆಯರ ಕೂಗು ಮುಗಿಲುಮುಟ್ಟಿತು. ಕ್ಷಣ ಮಾತ್ರದಲ್ಲಿ ದಲಿತ ಕೇರಿಯನ್ನು ಕಡುಗಪ್ಪಿನ ಹೊಗೆ ಆವರಿಸಿತ್ತು. ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ದಲಿತರು ತಮ್ಮ ಮನೆಗಳತ್ತ ಓಡಿ ವಯಸ್ಸಾದವರನ್ನು, ಮಕ್ಕಳನ್ನು ಹಾಗೂ ಕೈಗೆ ಸಿಕ್ಕಷ್ಟು ಸಾಮಾನುಗಳನ್ನು ರಕ್ಷಿಸಿಕೊಂಡರು. ಆದರೆ 70 ವರ್ಷದ ತಾರಾ ಚಂದ್ ಹಾಗೂ ಆತನ ಪೋಲಿಯೋ ಪೀಡಿತ ಕೊನೆಯ ಮಗಳಿಬ್ಬರೂ ಮನೆಯಿಂದ ಹೊರಬರಲಾರದೇ ಜಾಟರಿತ್ತ ಬೆಂಕಿಗೆ ಗುಡಿಸಲಿನಲ್ಲಿಯೇ ಆಹುತಿಯಾಗಿದ್ದರು. ಈ ಭೀಕರ ಮಾರಣಹೋಮದಲ್ಲಿ 51 ದಲಿತರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಸುಮಾರು 18 ಮನೆಗಳು ಸುಟ್ಟು ಕರಕಲಾಗಿದ್ದವು. ಹಿಂದೂ ಮೇಲ್ಜಾತಿಗಳೊಳಗೆ ತುಂಬಿರುವ ಸನಾತನ ಜಾತಿಪ್ರಜ್ಞೆಯಿಂದ, ಕ್ಷುಲ್ಲಕ ಕಾರಣಕ್ಕೆ ದಲಿತರಿಬ್ಬರನ್ನೂ ಹಾಗೂ ಮಿರ್ಚ್‌ಪುರದ ದಲಿತರು ಕಟ್ಟಿಕೊಂಡಿದ್ದ ಬದುಕನ್ನು ಸುಟ್ಟುಹಾಕಿತ್ತು.

ಈ ಘಟನೆಯಿಂದ ಭಯಭೀತರಾದ ದಲಿತರು ಊರುಬಿಟ್ಟು ವಾಸಕ್ಕಾಗಿ ಅಲೆದಾಡಿದರು. ಸುಮಾರು 150 ವಾಲ್ಮೀಕಿ ದಲಿತರು ಕೊನೆಗೆ ಕನ್ನಾಟ್ ನಗರದ ವಾಲ್ಮೀಕಿ ಮಂದಿರದಲ್ಲಿ ತಿಂಗಳಾನುಗಟ್ಟಲೆ ಕಾಲದೂಡಿ ಉಸಿರಾಡಿದರು. ಜಾಟರಿಂದ ಬೆದರಿಕೆಗಳು ಪದೇಪದೇ ಬರುತ್ತಿದ್ದ ಕಾರಣ 2011ರಷ್ಟೊತ್ತಿಗೆ 12 ಕುಟುಂಬಗಳು ಊರುಬಿಟ್ಟವು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 254 ವಾಲ್ಮೀಕಿ ದಲಿತ ಕುಟುಂಬಗಳು ಊರುಬಿಟ್ಟು ದೇಶದಾದ್ಯಂತ ಚದುರಿಹೋಗಿದ್ದಾರೆ. ನೂರಾರು ವರ್ಷಗಳ ಕಾಲ ಒಂದೆಡೆ ನೆಲೆಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದ ಈ ದಲಿತ ಕುಟುಂಬಗಳು ಜಾಟರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಜನ್ಮಸ್ಥಾನವನ್ನು ಬಿಟ್ಟು ಊರೂರು ಅಲೆಯುತ್ತಿದ್ದಾರೆ.

ಈ ನರಮೇಧಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು 103 ಜನ ಆರೋಪಿಗಳನ್ನು ಬಂಧಿಸಿದರು. ಅದೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಕಾರಣಕ್ಕೆ! ಜನವರಿ 2011ರಷ್ಟೊತ್ತಿಗೆ ಅವರಲ್ಲಿ 98 ಆರೋಪಿಗಳನ್ನು ತಿಹಾರ್ ಜೈಲಿಗೆ ಹಾಕಲಾಯಿತು. ಇದರ ವಿರುದ್ಧ ಜಾಟರು ಬೀದಿಗಿಳಿದು ಹೋರಾಡಿದ್ದರು. ಇದರ ಪರಿಣಾಮವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸೆಪ್ಟೆಂಬರ್ 24ರಂದು 82 ಜನರನ್ನು ಖುಲಾಸೆಗೊಳಿಸಿದ ಕೋರ್ಟ್ ಕೇವಲ 15 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿತು. ಆದರೆ ಅವರ್‍ಯಾರಿಗೂ ಕೊಲೆ ಮಾಡಿದ್ದಕ್ಕೆ ಶಿಕ್ಷೆ ಆಗಲಿಲ್ಲ. ಆದರೆ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2017ರಲ್ಲಿ ಮತ್ತೆ 40 ವಾಲ್ಮೀಕಿ ಕುಟುಂಬಗಳು ಇದೇ ಮಿರ್ಚ್‌ಪುರವನ್ನು ಬಿಟ್ಟು ಹೊರಹೋದವು. ಇದಕ್ಕೆ ಕಾರಣ ದಲಿತ ಯುವಕ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಟರು ಏಕಾಏಕಿ ಆತನನ್ನು ಥಳಿಸಿದ್ದಾಗಿತ್ತು. ಇಂದು ಮಿರ್ಚ್‌ಪುರದಲ್ಲಿ ವಾಸಿಸುತ್ತಿರುವ ಬೆರಳೆಣಿಕೆಯಷ್ಟು ದಲಿತ ಕುಟುಂಬಗಳೂ ಸಹ ಊರು ಬಿಡುವ ಸಿದ್ಧತೆಯಲ್ಲಿವೆ. ಕಾಶ್ಮೀರಿ ಪಂಡಿತರು ಕಾಣುವ ಕಣ್ಣುಗಳಿಗೆ ಮಿರ್ಚ್‌ಪುರದ ವಾಲ್ಮೀಕಿಗಳು ಕಾಣುವರೇ?

ಕೊನೆಯದಾಗಿ ಇನ್ನೊಂದು ವಿಚಾರವನ್ನು ನೆನಪಿಸುತ್ತೇನೆ. 2010ರಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 2017ರಲ್ಲಿ ಬಿಜೆಪಿ ಸರ್ಕಾರವಿತ್ತು.


ಇದನ್ನೂ ಓದಿ: ಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...