Homeಮುಖಪುಟ‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

- Advertisement -
- Advertisement -

ಲೇಖನದ ಶೀರ್ಷಿಕೆಯು ಹಿಂದೂ ರಾಷ್ಟ್ರ ಎಂಬುದೊಂದು ಅಸ್ತಿತ್ವಕ್ಕೆ ಬರಲಿದೆ ಎಂಬ ಸಾಧ್ಯತೆಯನ್ನು ಧ್ವನಿಸುತ್ತದೆ. ಇಂದು ಅಂತಹ ಸಾಧ್ಯತೆಯನ್ನು ಖಡಾಖಂಡಿತವಾಗಿ ಯಾರಾದರೂ ಅಲ್ಲಗಳೆದರೆ ಅಂತಹವರನ್ನು ಒಂದು ಮಾತು ಕೇಳಬೇಕಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರಾಗಿರುವ ಏಕೈಕ ಕಾರಣಕ್ಕೆ ವ್ಯಕ್ತಿಗಳನ್ನು, ಕೆಲವೊಮ್ಮೆ ಅಪರಿಚಿತರನ್ನೂ ಕೊಲ್ಲಬಹುದು ಎಂದು ನೀವು ಊಹಿಸಿದ್ದೀರಾ? ದೇಶದ ಪ್ರಧಾನಮಂತ್ರಿಯು ಧರ್ಮವನ್ನು ಎಳೆದುತಂದು ಕೆಲವರ ಪರ ಅಥವಾ ವಿರುದ್ಧ ನೇರವಾಗಿ ಮಾತಾಡಬಹುದು ಎಂದು ಭಾವಿಸಿದ್ದೀರಾ? ಭಾರತ ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ ನಿರ್ಧರಿಸುವ ಕಾನೂನೊಂದು ಬರುತ್ತದೆ ಎಂದು ನಿರೀಕ್ಷಿಸಿದ್ದಿರಾ? ಭಾರತದ ಪ್ರಧಾನಿಯು ಪತ್ರಕರ್ತೆಯೊಬ್ಬರ ಕೊಲೆಯನ್ನು ಸಂಭ್ರಮಿಸುವ ವ್ಯಕ್ತಿಗಳನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಾರಷ್ಟೇ ಅಲ್ಲದೇ, ಅದನ್ನು ಬಯಲಿಗೆ ತಂದರೂ ಅದನ್ನು ಬದಲಿಸದೇ ಸೂಚನೆಯೊಂದನ್ನು ನೀಡಬಹುದು ಎಂದುಕೊಂಡಿದ್ದಿರಾ?

ಪ್ರಶ್ನೆಗಳ ಪಟ್ಟಿ ಇನ್ನೂ ದೀರ್ಘವಿದೆ ಎಂಬುದು ನಿಮಗೆ ಗೊತ್ತು. ಹಾಗಾಗಿ ಹಿಂದೂ ರಾಷ್ಟ್ರವೆಂಬುದೊಂದು ಬರುವುದೇ ಇಲ್ಲ ಎಂದು ಅಂದುಕೊಳ್ಳಲಾಗದು. ಪ್ರಧಾನಿ ಹಾಗೂ ಆಳುವ ಪಕ್ಷವು ಸದಾ ಪೂಜಿಸುವ ಭಾರತ ಮಾತೆಯ ಫೋಟೋದಲ್ಲಿ ರಾಷ್ಟ್ರಧ್ವಜ ಇರುವುದಿಲ್ಲ; ಕೇಸರಿ ಧ್ವಜ ಮಾತ್ರ ಇರುತ್ತದೆ ಎಂಬುದನ್ನು ಗಮನಿಸಿ. ಈ ಪರಿವಾರವು ಬಳಸುವ ಸಂಕೇತಗಳು, ದೀರ್ಘಕಾಲದಿಂದ ಮುಂದಿಡುತ್ತಾ ಬಂದಿರುವ ಯೋಜನೆಗಳು, ಡಿಮ್ಯಾಂಡ್‍ಗಳು ಒಂದೊಂದೇ ನಿಜವಾಗುತ್ತಿರುವುದನ್ನೂ ಗಮನಿಸಿ. ಮುಂದಿನ ಎರಡು ವರ್ಷಗಳಲ್ಲಿ ಗೋಡ್ಸೆಯನ್ನು ಬಹಿರಂಗವಾಗಿ ಆರಾಧಿಸುವ (ಆ ಚಿಂತನೆಯು ಸಾಕಷ್ಟು ಕಾಲದಿಂದ ಸಾಕಷ್ಟು ವ್ಯಾಪಕವಾಗಿಯೇ ಚಾಲನೆಯಲ್ಲಿದೆ ಎಂಬುದು ತಿಳಿದಿಲ್ಲವಾದರೆ, ಆರೆಸ್ಸೆಸ್‍ನ ಯಾವುದೇ ಸ್ವಯಂಸೇವಕನನ್ನು ಖಾಸಗಿಯಾಗಿ ಮಾತನಾಡಿಸಿ) ಕಾರ್ಯಕ್ರಮಗಳು ನಡೆಯಲು ಎಲ್ಲಾ ತಯಾರಿಗಳು ನಡೆದಿಲ್ಲವೇ?

ಪ್ರಗ್ಯಾ ಠಾಕೂರ್ ಎಂಬ ಸಂಸದೆ ಈಗಾಗಲೇ ಗೋಡ್ಸೆ ಒಬ್ಬ ದೇಶಭಕ್ತ ಎಂದು ದೇಶದ ಸಂಸತ್ತಿನಲ್ಲೇ ಹೇಳಿಯಾಗಿದೆ. ಅಂತಹ ಹಲವು ಹೇಳಿಕೆಗಳ ನಂತರ ಬಿಜೆಪಿ ಪಕ್ಷವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂಬುದು ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ಕಲ್ಪನೆ ಏನಿತ್ತೋ, ಅದು ಸಾಕಾರವಾಗುವ ದಿಕ್ಕಿನಲ್ಲಿ ದೇಶ ನಡೆದಿದೆ. ಗಾಂಧಿ ಕೊಲೆಯನ್ನು ಆರೆಸ್ಸೆಸ್ಸಿನವರೇ ಮಾಡಿದ್ದು ಮತ್ತು ಅದನ್ನು ಅವರು ಸಂಭ್ರಮಿಸಿದರು ಎಂಬುದಕ್ಕೆ ದಾಖಲೆಗಳಿವೆ. ಗಾಂಧಿ ದ್ವೇಷ ಮಾತ್ರವಲ್ಲದೇ ಅಂಬೇಡ್ಕರ್‍ಗೆ ವಿರೋಧ, ಮಂಡಲ್ ವರದಿಗೆ ವಿರೋಧ ಇತ್ಯಾದಿಗಳು ಬಹಿರಂಗವಾಗಿ ವ್ಯಕ್ತವಾಗಿವೆ. ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

ಅದೇ ರೀತಿ ಬಡವರು, ಅನಕ್ಷರಸ್ಥರು, ‘ಕೀಳು’ ಜಾತಿಯವರು (ಕೀಳು ಜಾತಿ ಎಂಬ ಪದ ಇಂದಿಗೂ ಬಳಕೆಯಲ್ಲಿದೆ ಎಂಬುದನ್ನು ಮರೆಯಲಾಗುತ್ತದೆಯೇ?) ಚುನಾವಣೆಯಲ್ಲಿ ಸರಿಯಾದ ಆಯ್ಕೆ ಮಾಡುವುದಿಲ್ಲ; ಸ್ಲಂ ಜನರಂತಹವರು ಸೇರಿಕೊಂಡು ದೇಶ ಹಾಳು ಮಾಡುತ್ತಿದ್ದಾರೆ ಎಂಬ ಭಾವವೂ ‘ಕುಲೀನ’ರಲ್ಲಿ ಗಾಢವಾಗಿಯೇ ಇದೆ. ವಿದ್ಯಾವಂತರಲ್ಲದವರಿಗೆ ಮತದಾನದ ಹಕ್ಕು ಇರಬಾರದು ಎಂದು ಪ್ರತಿಪಾದಿಸುವವರೂ ಇದ್ದಾರೆ.

ಪೌರತ್ವವೆಂಬುದು ಹಕ್ಕುಗಳನ್ನು ಪಡೆಯಲು ಇರುವ ಹಕ್ಕಾಗಿದೆ. ಇಂದು ದಾಖಲಾತಿಗಳ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವ ಪ್ರಕ್ರಿಯೆಯೊಂದು ದೇಶದಲ್ಲಿ ಚಾಲ್ತಿಗೆ ಬಂದಿದೆ. ಅಂತಹ ಹಕ್ಕುಗಳಲ್ಲಿ ಒಂದು ಮತದಾನದ ಹಕ್ಕೂ ಆಗಿದೆ. ದೇಶದ ಬಡವರಿಗೆ, ದಲಿತರಿಗೆ ಏನಾದರೂ ಹಕ್ಕುಗಳು ಸಿಕ್ಕಿದ್ದರೆ ಅದಕ್ಕೆ ಓಟೂ ಒಂದು ಕಾರಣವಾಗಿದೆ. ಆದರೆ, ದಾಖಲಾತಿಗಳ ಮೇಲೆ ನಿರ್ಧರಿಸಲಾಗುವ ಪೌರತ್ವವು ಮುಂದೊಂದು ದಿನ ಈ ಬಡವರ, ದಲಿತರ, ಹಿಂದುಳಿದವರ ಓಟಿನ ಹಕ್ಕನ್ನೂ ಕಸಿಯುವ ಅಸ್ತ್ರವಾಗುವುದಿಲ್ಲ ಎಂದು ಸುಮ್ಮನೇ ಕೂರುವ ಹಾಗಿಲ್ಲ. ಈಗ ಮೈಮರೆತರೆ ಮುಂದೊಂದು ದಿನ ಬಹಳ ದುಬಾರಿ ಬೆಲೆ ತೆರಬೇಕಾಗಿ ಬರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...