Homeಮುಖಪುಟಚಂಪಾರೊಂದಿಗೆ ಹೆಜ್ಜೆ ಹಾಕಿದ ನೆನಪು..

ಚಂಪಾರೊಂದಿಗೆ ಹೆಜ್ಜೆ ಹಾಕಿದ ನೆನಪು..

- Advertisement -
- Advertisement -

1979 ಮಾರ್ಚ್ 10ರಂದು ಬೆಂಗಳೂರಿನ ದೇವಾಂಗ ಸಂಘದಲ್ಲಿ ನಡೆದ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಕೋಲಾರದಿಂದ ನಾನು, ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಎಚ್ಚೆನ್, ಸೋಮಶೇಖರ ಗೌಡ, ಹ.ಸೋಮಶೇಖರ್ ಬಂದಿದ್ದೆವು. ನಾವು ಸತತವಾಗಿ ಓದುತಿದ್ದ ’ಸಂಕ್ರಮಣ’ ಪತ್ರಿಕೆಯ ಮೂಲಕ ನಮಗೆ ಅಪಾರ ಮೆಚ್ಚುಗೆಯಾಗಿದ್ದ ಚಂಪಾರನ್ನು ಅಂದೇ ಮೊದಲು ನೋಡಿದ್ದು. ಅವರ ಮೊನಚು, ವ್ಯಂಗ್ಯಗಳಿಂದಾಗಿ ಮಿಕ್ಕೆಲ್ಲ ಸಾಹಿತಿಗಳಿಗಿಂತಲೂ ಚಂಪಾ ನಮಗೆ ಹೆಚ್ಚು ಹತ್ತಿರವಾಗಿದ್ದರು. ಮಿಕ್ಕವರ ಸಾಹಿತ್ಯ ಅದರ ಸಂಕೀರ್ಣತೆಯಿಂದಾಗಿ ಆ ಹದಿಹರೆಯದ ವಯಸ್ಸಿನಲ್ಲಿ ನಮಗೆ ಅಷ್ಟೇನು ಅರ್ಥವಾಗುತ್ತಿರಲಿಲ್ಲ. ಅವರು ಬಂಡಾಯ ಸಮ್ಮೇಳನದ ಸಭಾಂಗಣದ ಮುಂದೆ, ಅದಾಗ ತಾನೇ ಬರೆದುತಂದಿದ್ದ ’ನಳಕವಿಯ ಮಸ್ತಕಾಭಿಷೇಕ’ ನಾಟಕದ ಪೋಸ್ಟರ್‌ಅನ್ನು ಕಂಬಕ್ಕೆ ಕಟ್ಟುತ್ತಿದ್ದರು. ದೂರದಿಂದ ಚಂಪಾ ಅವರನ್ನು ನಮಗೆ ಎಟುಕಲಾರದ ಬಹಳ ದೊಡ್ಡ ಸಾಹಿತಿ ಎಂದು ಊಹಿಸಿಕೊಂಡಿದ್ದೆವು, ಅಲ್ಲಿ ಅವರ ಸರಳತೆಯನ್ನು ಕಂಡು ದಂಗಾದೆವು!

ನಂತರದ ಬಂಡಾಯ ಸಾಹಿತ್ಯದ ಒಡನಾಟದಲ್ಲಿ ಚಂಪಾ ತೀರಾ ಹತ್ತಿರವಾಗಿಬಿಟ್ಟರು. ನಾನು ’ಲಂಕೇಶ್ ಪತ್ರಿಕೆ’ಯಲ್ಲಿ ಬರೆಯಲು ಆರಂಭಿಸಿದ ಮೇಲಂತೂ ತೀರಾ ಆಪ್ತರಾಗಿ, ಅವರು ಲಂಕೇಶರ ಜತೆ ಜಗಳವಾಡಿಕೊಂಡು ಹೊರಹೋದ ಮೇಲೂ ಅವರ ನನ್ನ ಬಾಂಧವ್ಯ ಕಡಿಮೆಯಾಗಲಿಲ್ಲ. ಲಂಕೇಶರು ನಿಧನರಾದ ನಂತರ, ನಾವೆಲ್ಲ ’ಅಗ್ನಿ’ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ ಮೇಲೆ ಅಗ್ನಿ ಶ್ರೀಧರ್ ಮತ್ತಿತರ ಸಾಹಿತಿ ಹೋರಾಟಗಾರರೊಂದಿಗೆ ಅನೇಕ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಂಡೆವು, ಅದರಲ್ಲಿ ಪ್ರಮುಖ ಪಾತ್ರ ಚಂಪಾ ಅವರದೇ ಆಗಿತ್ತು.

ರಾಜಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ ಈ ಸಂಬಂಧ ನೆಡುಮಾರನ್ ಅವರನ್ನು ನೋಡಲು ಅಗ್ನಿ ಶ್ರೀಧರ್ ನೇತೃತ್ವದಲ್ಲಿ ದೇವನೂರು ಮಹದೇವ, ಅಗ್ರಹಾರ ಕೃಷ್ಣಮೂರ್ತಿ, ಎಲ್.ಹನುಮಂತಯ್ಯ ಮುಂತಾಗಿ ನಾವೆಲ್ಲ ಬಸ್ ಮಾಡಿಕೊಂಡು ಚೆನೈಗೆ ಹೋಗಿದ್ದೆವು. ಅದಕ್ಕೂ ಕ್ಯಾಪ್ಟನ್ ಚಂಪಾ ಅವರೇ ಆಗಿದ್ದರು.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದ ’ಅಕ್ಕ’ ಸಮ್ಮೇಳನಕ್ಕೆ ಅನೇಕ ಸಾಹಿತಿ ಕಲಾವಿದರೊಂದಿಗೆ ಚಂಪಾ, ಜನ್ನಿ, ನಾನು ಕೂಡ ಹೋಗಿದ್ದೆವು. ಅಲ್ಲೇ ನೆಲೆಸಿರುವ ಸಿರೂರ್ ಹನುಮಂತ ರೆಡ್ಡಿ ನಮ್ಮೊಂದಿಗೆ ಸೇರಿಕೊಂಡರು. ಗೋಷ್ಠಿಯೊಂದರಲ್ಲಿ ಎಸ್.ಎಲ್.ಬೈರಪ್ಪನವರನ್ನು ಹಾಡಿ ಹೊಗಳುವ ಭಜನಾ ಕಾರ್ಯಕ್ರಮವೊಂದು ನಡೆಯುತಿತ್ತು. “ಸರ್.. ನಿಮ್ಮ ’ಪರ್ವ’ ಕಾದಂಬರಿ ಮಹಾಭಾರತದ ಮರುಸೃಷ್ಟಿ.. ಕನ್ನಡದಲ್ಲಿ ಇಂತಹದೊಂದು ಬರುವುದು ಅಪರೂಪ.. ಇದೇ ರೀತಿ ರಾಮಾಯಣದ ಮರುಸೃಷ್ಟಿ ಮಾಡಿ ಸರ್.. ನಿಮ್ಮಿಂದ ಮಾತ್ರ ಇದು ಸಾದ್ಯ..” ಎಂದು ಒಬ್ಬ ವಟು ಹೇಳಿದಾಕ್ಷಣ ಬೇರೆಲ್ಲಾ ವಟುಗಳು ’ವಟವಟ’ ಎನ್ನತೊಡಗಿದವು. ಬೈರಪ್ಪನವರು “ರಾಮಾಯಣ ಮರುಸೃಷ್ಟಿ ಸಾಧವಾಗಲಾರದು..” ಎನ್ನುತಿದ್ದಂತೆ ಹಿಂದೆ ನಮ್ಮೊಂದಿಗೆ ಕುಂತಿದ್ದ ಚಂಪಾ “ನೀವ್ಯಾರೂ ಕುವೆಂಪು ಅವರ ರಾಮಾಯಣ ದರ್ಶನಂ ಓದಿಲ್ಲೇನ್ರಿ.. ಅದು ರಾಮಾಯಣದ ಮರುಸೃಷ್ಟಿ ಅಲ್ಲೇನು” ಎನ್ನುತಿದ್ದಂತೆ ಬೈರಪ್ಪನವರ ವಂದಿಮಾಗಧ ವಟುಗಳು ಮೌನವಾದರು. ನಾವು ಆ ಭಜನಾ ಕಾರ್ಯಕ್ರಮವನ್ನು ಪ್ರತಿಭಟಿಸಿ ಹೊರಬಂದೆವು. ಅಂದು ಇಡೀ ರಾತ್ರಿ ತೀರ್ಥಸೇವನೆ ಮಾಡುತ್ತಾ ಚಂಪಾ ಅವರ ಜೋಕುಗಳಿಗೆ ಮನಸಾರೆ ನಕ್ಕೆವು.

ನಂತರದ ದಿನಗಳಲ್ಲಿ ಚಂಪಾ ಅವರೊಂದಿಗೆ ಅನೇಕ ಟಿ.ವಿ. ಡಿಬೇಟ್‌ಗಳಲ್ಲಿ ಭಾಗವಹಿಸುತ್ತಿದ್ದೆ.
ನಾವಿಬ್ಬರೂ ಸೇರಿದರಂತೂ ಚಡ್ಡಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದೆವು. ’ಲಿಂಗಾಯತ ಧರ್ಮ’ದ ಹೋರಾಟದಲ್ಲೂ ಇಬ್ಬರೂ ಜತೆಜತೆಯಾಗಿ ಅನೇಕ ಸಭೆಗಳಲ್ಲಿ ಪಾಲ್ಗೊಂಡೆವು. ಚಂಪಾ
ಕುರಿತು ಮಾತಾಡಲು ಬರೆಯಲು ಇನ್ನೂ ಸಾಕಷ್ಟಿದೆ, ಮುಂದೆ ಬರೆಯುತ್ತೇನೆ. ಕವಿ, ನಾಟಕಕಾರ, ಹೋರಾಟಗಾರರಾದ ಚಂಪಾ ನಮ್ಮಂತವರ ಸಾಕ್ಷಿಪ್ರಜ್ಞೆಯಾಗಿದ್ದರು. ಎಂದೂ ಎಲ್ಲೂ ರಾಜಿಯಾಗದ ತಮ್ಮ ಸಾಹಿತ್ಯ ಮತ್ತು ಹೋರಾಟಗಳಿಂದಾಗಿ ಸದಾ ಜೀವಂತವಾಗಿದ್ದ ಚಂಪಾರಿಗೆ ಸಾವಿಲ್ಲ, ಇನ್ನು ಮುಂದೆ ನಡೆಯುವ ಹೋರಾಟಗಳಲ್ಲೂ ಅವರು ನಮ್ಮೊಂದಿಗೆ-ನಮ್ಮೊಳಗೆ ಜೀವಂತವಾಗಿ ಇರುತ್ತಾರೆ.

ಸಿ.ಎಸ್.ದ್ವಾರಕಾನಾಥ್

ಸಿ.ಎಸ್.ದ್ವಾರಕಾನಾಥ್
ವೃತ್ತಿಯಿಂದ ವಕೀಲರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. ಲಂಕೇಶ್ ಪತ್ರಿಕೆಯ ಒಡನಾಡಿಯಾಗಿದ್ದ ದ್ವಾರಕಾನಾಥ್, ’ಮೂಕ ನಾಯಕ’, ’ಗಾಂಧಿಮಟ್ಟಿದ ನಾಡಿನಲ್ಲಿ’, ’ಸಾಕ್ರೆಟಿಸ್ ಮತ್ತಿತರ ಕಥೆಗಳು’ ಕೃತಿಗಳನ್ನು ರಚಿಸಿದ್ದಾರೆ.


ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...