Homeಮುಖಪುಟಚಂಪಾರೊಂದಿಗೆ ಹೆಜ್ಜೆ ಹಾಕಿದ ನೆನಪು..

ಚಂಪಾರೊಂದಿಗೆ ಹೆಜ್ಜೆ ಹಾಕಿದ ನೆನಪು..

- Advertisement -
- Advertisement -

1979 ಮಾರ್ಚ್ 10ರಂದು ಬೆಂಗಳೂರಿನ ದೇವಾಂಗ ಸಂಘದಲ್ಲಿ ನಡೆದ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಕೋಲಾರದಿಂದ ನಾನು, ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಎಚ್ಚೆನ್, ಸೋಮಶೇಖರ ಗೌಡ, ಹ.ಸೋಮಶೇಖರ್ ಬಂದಿದ್ದೆವು. ನಾವು ಸತತವಾಗಿ ಓದುತಿದ್ದ ’ಸಂಕ್ರಮಣ’ ಪತ್ರಿಕೆಯ ಮೂಲಕ ನಮಗೆ ಅಪಾರ ಮೆಚ್ಚುಗೆಯಾಗಿದ್ದ ಚಂಪಾರನ್ನು ಅಂದೇ ಮೊದಲು ನೋಡಿದ್ದು. ಅವರ ಮೊನಚು, ವ್ಯಂಗ್ಯಗಳಿಂದಾಗಿ ಮಿಕ್ಕೆಲ್ಲ ಸಾಹಿತಿಗಳಿಗಿಂತಲೂ ಚಂಪಾ ನಮಗೆ ಹೆಚ್ಚು ಹತ್ತಿರವಾಗಿದ್ದರು. ಮಿಕ್ಕವರ ಸಾಹಿತ್ಯ ಅದರ ಸಂಕೀರ್ಣತೆಯಿಂದಾಗಿ ಆ ಹದಿಹರೆಯದ ವಯಸ್ಸಿನಲ್ಲಿ ನಮಗೆ ಅಷ್ಟೇನು ಅರ್ಥವಾಗುತ್ತಿರಲಿಲ್ಲ. ಅವರು ಬಂಡಾಯ ಸಮ್ಮೇಳನದ ಸಭಾಂಗಣದ ಮುಂದೆ, ಅದಾಗ ತಾನೇ ಬರೆದುತಂದಿದ್ದ ’ನಳಕವಿಯ ಮಸ್ತಕಾಭಿಷೇಕ’ ನಾಟಕದ ಪೋಸ್ಟರ್‌ಅನ್ನು ಕಂಬಕ್ಕೆ ಕಟ್ಟುತ್ತಿದ್ದರು. ದೂರದಿಂದ ಚಂಪಾ ಅವರನ್ನು ನಮಗೆ ಎಟುಕಲಾರದ ಬಹಳ ದೊಡ್ಡ ಸಾಹಿತಿ ಎಂದು ಊಹಿಸಿಕೊಂಡಿದ್ದೆವು, ಅಲ್ಲಿ ಅವರ ಸರಳತೆಯನ್ನು ಕಂಡು ದಂಗಾದೆವು!

ನಂತರದ ಬಂಡಾಯ ಸಾಹಿತ್ಯದ ಒಡನಾಟದಲ್ಲಿ ಚಂಪಾ ತೀರಾ ಹತ್ತಿರವಾಗಿಬಿಟ್ಟರು. ನಾನು ’ಲಂಕೇಶ್ ಪತ್ರಿಕೆ’ಯಲ್ಲಿ ಬರೆಯಲು ಆರಂಭಿಸಿದ ಮೇಲಂತೂ ತೀರಾ ಆಪ್ತರಾಗಿ, ಅವರು ಲಂಕೇಶರ ಜತೆ ಜಗಳವಾಡಿಕೊಂಡು ಹೊರಹೋದ ಮೇಲೂ ಅವರ ನನ್ನ ಬಾಂಧವ್ಯ ಕಡಿಮೆಯಾಗಲಿಲ್ಲ. ಲಂಕೇಶರು ನಿಧನರಾದ ನಂತರ, ನಾವೆಲ್ಲ ’ಅಗ್ನಿ’ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ ಮೇಲೆ ಅಗ್ನಿ ಶ್ರೀಧರ್ ಮತ್ತಿತರ ಸಾಹಿತಿ ಹೋರಾಟಗಾರರೊಂದಿಗೆ ಅನೇಕ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಂಡೆವು, ಅದರಲ್ಲಿ ಪ್ರಮುಖ ಪಾತ್ರ ಚಂಪಾ ಅವರದೇ ಆಗಿತ್ತು.

ರಾಜಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ ಈ ಸಂಬಂಧ ನೆಡುಮಾರನ್ ಅವರನ್ನು ನೋಡಲು ಅಗ್ನಿ ಶ್ರೀಧರ್ ನೇತೃತ್ವದಲ್ಲಿ ದೇವನೂರು ಮಹದೇವ, ಅಗ್ರಹಾರ ಕೃಷ್ಣಮೂರ್ತಿ, ಎಲ್.ಹನುಮಂತಯ್ಯ ಮುಂತಾಗಿ ನಾವೆಲ್ಲ ಬಸ್ ಮಾಡಿಕೊಂಡು ಚೆನೈಗೆ ಹೋಗಿದ್ದೆವು. ಅದಕ್ಕೂ ಕ್ಯಾಪ್ಟನ್ ಚಂಪಾ ಅವರೇ ಆಗಿದ್ದರು.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದ ’ಅಕ್ಕ’ ಸಮ್ಮೇಳನಕ್ಕೆ ಅನೇಕ ಸಾಹಿತಿ ಕಲಾವಿದರೊಂದಿಗೆ ಚಂಪಾ, ಜನ್ನಿ, ನಾನು ಕೂಡ ಹೋಗಿದ್ದೆವು. ಅಲ್ಲೇ ನೆಲೆಸಿರುವ ಸಿರೂರ್ ಹನುಮಂತ ರೆಡ್ಡಿ ನಮ್ಮೊಂದಿಗೆ ಸೇರಿಕೊಂಡರು. ಗೋಷ್ಠಿಯೊಂದರಲ್ಲಿ ಎಸ್.ಎಲ್.ಬೈರಪ್ಪನವರನ್ನು ಹಾಡಿ ಹೊಗಳುವ ಭಜನಾ ಕಾರ್ಯಕ್ರಮವೊಂದು ನಡೆಯುತಿತ್ತು. “ಸರ್.. ನಿಮ್ಮ ’ಪರ್ವ’ ಕಾದಂಬರಿ ಮಹಾಭಾರತದ ಮರುಸೃಷ್ಟಿ.. ಕನ್ನಡದಲ್ಲಿ ಇಂತಹದೊಂದು ಬರುವುದು ಅಪರೂಪ.. ಇದೇ ರೀತಿ ರಾಮಾಯಣದ ಮರುಸೃಷ್ಟಿ ಮಾಡಿ ಸರ್.. ನಿಮ್ಮಿಂದ ಮಾತ್ರ ಇದು ಸಾದ್ಯ..” ಎಂದು ಒಬ್ಬ ವಟು ಹೇಳಿದಾಕ್ಷಣ ಬೇರೆಲ್ಲಾ ವಟುಗಳು ’ವಟವಟ’ ಎನ್ನತೊಡಗಿದವು. ಬೈರಪ್ಪನವರು “ರಾಮಾಯಣ ಮರುಸೃಷ್ಟಿ ಸಾಧವಾಗಲಾರದು..” ಎನ್ನುತಿದ್ದಂತೆ ಹಿಂದೆ ನಮ್ಮೊಂದಿಗೆ ಕುಂತಿದ್ದ ಚಂಪಾ “ನೀವ್ಯಾರೂ ಕುವೆಂಪು ಅವರ ರಾಮಾಯಣ ದರ್ಶನಂ ಓದಿಲ್ಲೇನ್ರಿ.. ಅದು ರಾಮಾಯಣದ ಮರುಸೃಷ್ಟಿ ಅಲ್ಲೇನು” ಎನ್ನುತಿದ್ದಂತೆ ಬೈರಪ್ಪನವರ ವಂದಿಮಾಗಧ ವಟುಗಳು ಮೌನವಾದರು. ನಾವು ಆ ಭಜನಾ ಕಾರ್ಯಕ್ರಮವನ್ನು ಪ್ರತಿಭಟಿಸಿ ಹೊರಬಂದೆವು. ಅಂದು ಇಡೀ ರಾತ್ರಿ ತೀರ್ಥಸೇವನೆ ಮಾಡುತ್ತಾ ಚಂಪಾ ಅವರ ಜೋಕುಗಳಿಗೆ ಮನಸಾರೆ ನಕ್ಕೆವು.

ನಂತರದ ದಿನಗಳಲ್ಲಿ ಚಂಪಾ ಅವರೊಂದಿಗೆ ಅನೇಕ ಟಿ.ವಿ. ಡಿಬೇಟ್‌ಗಳಲ್ಲಿ ಭಾಗವಹಿಸುತ್ತಿದ್ದೆ.
ನಾವಿಬ್ಬರೂ ಸೇರಿದರಂತೂ ಚಡ್ಡಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದೆವು. ’ಲಿಂಗಾಯತ ಧರ್ಮ’ದ ಹೋರಾಟದಲ್ಲೂ ಇಬ್ಬರೂ ಜತೆಜತೆಯಾಗಿ ಅನೇಕ ಸಭೆಗಳಲ್ಲಿ ಪಾಲ್ಗೊಂಡೆವು. ಚಂಪಾ
ಕುರಿತು ಮಾತಾಡಲು ಬರೆಯಲು ಇನ್ನೂ ಸಾಕಷ್ಟಿದೆ, ಮುಂದೆ ಬರೆಯುತ್ತೇನೆ. ಕವಿ, ನಾಟಕಕಾರ, ಹೋರಾಟಗಾರರಾದ ಚಂಪಾ ನಮ್ಮಂತವರ ಸಾಕ್ಷಿಪ್ರಜ್ಞೆಯಾಗಿದ್ದರು. ಎಂದೂ ಎಲ್ಲೂ ರಾಜಿಯಾಗದ ತಮ್ಮ ಸಾಹಿತ್ಯ ಮತ್ತು ಹೋರಾಟಗಳಿಂದಾಗಿ ಸದಾ ಜೀವಂತವಾಗಿದ್ದ ಚಂಪಾರಿಗೆ ಸಾವಿಲ್ಲ, ಇನ್ನು ಮುಂದೆ ನಡೆಯುವ ಹೋರಾಟಗಳಲ್ಲೂ ಅವರು ನಮ್ಮೊಂದಿಗೆ-ನಮ್ಮೊಳಗೆ ಜೀವಂತವಾಗಿ ಇರುತ್ತಾರೆ.

ಸಿ.ಎಸ್.ದ್ವಾರಕಾನಾಥ್

ಸಿ.ಎಸ್.ದ್ವಾರಕಾನಾಥ್
ವೃತ್ತಿಯಿಂದ ವಕೀಲರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. ಲಂಕೇಶ್ ಪತ್ರಿಕೆಯ ಒಡನಾಡಿಯಾಗಿದ್ದ ದ್ವಾರಕಾನಾಥ್, ’ಮೂಕ ನಾಯಕ’, ’ಗಾಂಧಿಮಟ್ಟಿದ ನಾಡಿನಲ್ಲಿ’, ’ಸಾಕ್ರೆಟಿಸ್ ಮತ್ತಿತರ ಕಥೆಗಳು’ ಕೃತಿಗಳನ್ನು ರಚಿಸಿದ್ದಾರೆ.


ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...