Homeಮುಖಪುಟಓಶೋ ಕಂಡಂತೆ ವಿವೇಕಾನಂದರು

ಓಶೋ ಕಂಡಂತೆ ವಿವೇಕಾನಂದರು

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ವಿಶೇಷ ಲೇಖನ

- Advertisement -
- Advertisement -

ಭಾರತದ ಚರಿತ್ರೆಯಲ್ಲಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಎಂದಿಗೂ ಚರ್ಚೆಯ ವಿಷಯವಾಗಿವೆ. ಸ್ವಾಮಿ ವಿವೇಕಾನಂದರ ಹೆಸರನ್ನು ಎಡ ಹಾಗೂ ಬಲ ಪಂಥದ ರಾಜಕಾರಣಗಳೆರಡೂ ಬಳಸುತ್ತವೆ. ವಿವೇಕಾನಂದರ ವಿಚಾರಧಾರೆಗಳು ಎಂದಿಗೂ ಜನಪರ, ಮತೀಯವಾದಿಗಳ ವಿರುದ್ಧವಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ‌ಇದರಾಚೆಗೆ ಸ್ವಾಮಿ ವಿವೇಕಾನಂದರ ಅನುಭಾವದ ನೆಲೆಗಳು ಪ್ರಸ್ತುತ ಕಾಲಘಟ್ಟದಲ್ಲಿ ಚರ್ಚೆಯ ವಿಷಯವಾಗಿಲ್ಲ. ಅನುಭಾವಕ್ಕಿಂತ ರಾಜಕಾರಣವೇ ಮುಖ್ಯವಾಗಿರುವ ಕಾಲಘಟ್ಟದಲ್ಲಿ ನಾವು ಇರುವುದರಿಂದ ಇದೆಲ್ಲವೂ ಸಾಮಾನ್ಯವೂ ಇರಬಹುದು.

ಸ್ವಾಮಿ ವಿವೇಕಾನಂದರ ವೈಚಾರಿಕತೆಯ ಪ್ರಖರತೆಗೂ ಅನುಭಾವದ ವಿಚಾರಕ್ಕೂ ಇರುವ ಸಂಬಂಧಗಳನ್ನು ವಿವಾದಿತ ಅನುಭಾವಿಯೆಂದೇ ಗುರುತಿಸಲಾದ ಓಶೋ ರಜನೀಶರು ಮಾತನಾಡುತ್ತಾರೆ. ‘ಧ್ಯಾನಸಿದ್ಧ’ನಾಗಿಯೇ ಉಳಿದ ಸ್ವಾಮಿ ವಿವೇಕಾನಂದರು ಕೊನೆಯ ದಿನದವರೆಗೆ ಅನುಭಾವವನ್ನು ದಕ್ಕಿಸಿಕೊಳ್ಳಲಿಲ್ಲ ಎಂದು ಓಶೋ ಅಭಿಪ್ರಾಯಪಡುತ್ತಾರೆ.

ಬರಹಗಾರ ಡಾ.ಟಿ.ಎನ್‌.ವಾಸುದೇವ ಮೂರ್ತಿಯವರು ಸಂಗ್ರಹಿಸಿ ಅನುವಾದ ಮಾಡಿರುವ ‘ಅಧ್ಯಾತ್ಮದ ಮಧ್ಯೆ ಬಿಡುವು’ ಮತ್ತು ‘ಧ್ಯಾನಸಿದ್ಧ’ ಕೃತಿಗಳಲ್ಲಿ ಈ ವಿಚಾರಗಳು ಸಿಗುತ್ತವೆ. ರಾಮಕೃಷ್ಣ ಪರಮಹಂಸರ ಮುಖವಾಣಿಯಾಗಿ ವಿವೇಕಾನಂದರು ನುಡಿದರು ಎಂದು ಓಶೋ ಪ್ರತಿಪಾದಿಸುತ್ತಾರೆ.

‘ಅಧ್ಯಾತ್ಮದ ಮಧ್ಯೆ ಬಿಡುವು’ ಕೃತಿಯ ‘ಸ್ವಾಮಿ ವಿವೇಕಾನಂದ’ ಅಧ್ಯಾಯ ಬಹುವಾಗಿ ಸೆಳೆಯುತ್ತದೆ. ಇಲ್ಲಿ ದಾಖಲಾಗಿರುವ ಓಶೋ ಅವರ ಕೆಲವು ಮಾತುಗಳನ್ನು ಆಯ್ದು ಇಲ್ಲಿ ನೀಡಲಾಗಿದೆ.

‘‘ವಿವೇಕಾನಂದರು, ಮೂಲತಃ ಅನುಭಾವಿಯಲ್ಲ. ಅವರ ಮಾತುಗಳಲ್ಲಿ ದಿಟ್ಟತನವಿದೆ. ಅವರಿಗೆ ಆತ್ಮಜ್ಞಾನ ಲಭಿಸಲಿಲ್ಲ. ರಾಮಕೃಷ್ಣ ಪರಮಹಂಸರಿಗೆ ಆತ್ಮಜ್ಞಾನ ಲಭಿಸಿತ್ತು. ಒಮ್ಮೆ ಸಮಾಧಿ ಸ್ಥಿತಿಗೆ ಹೋದಮೇಲೆ ಅವರಿಗೆ ಮಾತಾಡಲು ಆಗುತ್ತಿರಲಿಲ್ಲ. ಆದರೆ ತಮಗೆ ಉಂಟಾದ ಅನುಭವವನ್ನು ಇಡೀ ಜಗತ್ತಿಗೆ ತಿಳಿಸುವ ಇಚ್ಛೆಯಿತ್ತು. ತಿಳಿಸುವ ವಾಕ್ಚಾತುರ್ಯವಿರಲಿಲ್ಲ. ಹೀಗಾಗಿ ಅವರಿಗೊಂದು ಮುಖವಾಣಿ ಬೇಕಾಗಿತ್ತು. ವಿವೇಕಾನಂದರು ಆ ಕೆಲಸವನ್ನು ಮಾಡಿದರು. ವಿವೇಕಾನಂದರು ತಮ್ಮ ಕೊನೆಯ ದಿನಗಳ ಕೆಲವು ಪತ್ರಗಳಲ್ಲಿ, ‘ನಾನು ಇಲ್ಲಿಯವರೆಗೂ ಬೇರೆಯವರ ಅನುಭವಗಳನ್ನೇ ಹೇಳುತ್ತಿರುವೆ’ ಎಂದು ಬರೆದುಕೊಂಡಿದ್ದಾರೆ. ಆತ್ಮಾನುಭವ ದೊರಕದೆ ಕೊನೆವರೆಗೂ ಸಂಕಟಪಡುತ್ತಾರೆ.’’

‘‘ರಾಮಕೃಷ್ಣರಿಗೆ ತನ್ನಂತೆಯೇ ತನ್ನ ಶಿಷ್ಯ ಸಮಾಧಿ ಸ್ಥಿತಿಗೆ ಹೋದರೆ ಮೌನವಾಗುತ್ತಾನೆಂಬ ಭಯವಿತ್ತು. ಸಮಾಧಿ ಸ್ಥಿತಿಗೆ ಸಂದ ನಂತರವೂ ತಮ್ಮ ಕೆಲಸವನ್ನು ಮುಂದುವರೆಸಿರುವ ಜ್ಞಾನಿಗಳು ಲೋಕದಲ್ಲಿದ್ದರು ಎಂಬುದು ರಾಮಕೃಷ್ಣರಿಗೆ ತಿಳಿದಿರಲಿಲ್ಲವೆನಿಸುತ್ತದೆ. ಹೀಗಾಗಿಯೇ ವಿವೇಕಾನಂದರು ಸಮಾಧಿ ಸ್ಥಿತಿಗೆ ಹೋಗದಂತೆ ತಡೆದರು. ಜೀವಿತದ ಕೊನೆಯ ಮೂರು ದಿನಗಳಿರುವಾಗ ನನ್ನ ಬಳಿ ಇರುವ ಆತ್ಮಾನುಭವದ ಕೀಲಿಕೈ ದೊರಕುತ್ತದೆಂದು ನುಡಿದರು. ವಿವೇಕಾನಂದರು ಇಂತಹ ಯಾವುದೇ ದಿವ್ಯಾನುಭವವನ್ನು ಹೊಂದದೆ ನುಡಿಯುತ್ತಿದ್ದ ಕಾರಣ, ಅವರ ಮಾತುಗಳು ತರ್ಕಬದ್ಧವಾಗಿರುತ್ತಿದ್ದವು. ದಿಟ್ಟತನದಿಂದ ಕೂಡಿರುತ್ತಿತ್ತು. ಹೆಚ್ಚೆಂದರೆ ವಿವೇಕಾನಂದ ಒಬ್ಬ ಪ್ರವಾದಿ ಮಾತ್ರ. ರಾಮಕೃಷ್ಣರ ಸಂದೇಶವನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ದ ಒಬ್ಬ ಅಂಚೆಯವನು ಮಾತ್ರ. ತನ್ನೊಳಗಿನ ಕೊರತೆಯನ್ನು ತುಂಬಿಕೊಳ್ಳಲು ತಮ್ಮ ಮಾತುಗಳಿಗೆ ದಿಟ್ಟತನದ ವೇಷ ತೊಡಿಸುತ್ತಿದ್ದರು. ವಿವೇಕಾನಂದರಂತೆ ಧೀರವಾಣಿಯನ್ನು ನುಡಿಯಲು ಬುದ್ಧನಂಥವನಿಗೆ ಎಂದಿಗೂ ಸಾಧ್ಯವಾಗುವುದಿಲ್ಲ.’’

ಸ್ವಾಮಿ ವಿವೇಕಾನಂದರ ಧರ್ಮ ಸಮನ್ವತೆಯ ಸಿದ್ಧಾಂತದ ಕುರಿತೂ ಓಶೋ ಟೀಕಾ ಪ್ರಹಾರ ಮಾಡಿದ್ದಾರೆ. ‘‘ವಿವೇಕಾನಂದ ಮಹಾ ಚಾಣಕ್ಷ. ಕ್ರಿಶ್ಚಿಯನ್ನರು ನೆರೆದಿರುತ್ತಿದ್ದ ಸಭೆಗಳಲ್ಲಿ ಆತ ಯೇಸುಕ್ರಿಸ್ತನನ್ನು ಕೊಂಡಾಡುತ್ತಿದ್ದ. ಕ್ರಿಸ್ತನನ್ನು ತೀಕ್ಷ್ಣವಾಗಿ ವಿಮರ್ಶೆ ಮಾಡುವ ಧೈರ್ಯ ಅವನಿಗಿರಲಿಲ್ಲ. ನನ್ನ ಕಣ್ಣಿಗೆ ಒಳಿತು ಕಂಡರೆ ಹೊಗಳುತ್ತೇನೆ. ಜತೆಗೆ ವಿಮರ್ಶೆ ಮಾಡುವ ಅಧಿಕಾರವನ್ನು ಎಂದೂ ಬಿಟ್ಟುಕೊಡುವುದಿಲ್ಲ. ಆತ ಬೌದ್ಧರ ಸಭೆಗಳಲ್ಲಿ ಮಾತಾನಾಡುವಾಗ ತಪ್ಪಿಯೂ ಬೌದ್ಧರನ್ನು ಮತ್ತು ಬೌದ್ಧರ ಗ್ರಂಥಗಳನ್ನು ಟೀಕಿಸುತ್ತಿರಲಿಲ್ಲ. ತಾನು ಸ್ಥಾಪಿಸಿದ ರಾಮಕೃಷ್ಣ ಮಠದಲ್ಲಿ ಎಲ್ಲಾ ಧರ್ಮಗಳ ಸಮನ್ವಯಕ್ಕೆ ಪ್ರಯತ್ನ ಮಾಡಿದ. ನಾನಾದರೂ ಧರ್ಮಗಳ ಸಮನ್ವಯವೆಂಬುದು ‘ಸುಳ್ಳುಗಳ ಸಮನ್ವಯ’ವೆಂದು ಲೇವಡಿ ಮಾಡಿದ್ದೇನೆ. ಇವನ್ನೆಲ್ಲಾ ಏತಕ್ಕಾಗಿ ಸಮನ್ವಯ ಮಾಡಬೇಕು? ಪರರನ್ನು ದ್ವೇಷಿಸದೆ, ಜೀವವಿರೋಧಿ ಧೋರಣೆಯನ್ನು ಬೆಳೆಸಿಕೊಳ್ಳದೆ ಬಾಳ್ವೆ ಮಾಡಿದರೆ ಸಾಲದೆ? ಇಂಥದೊಂದು ಮಾನವೀಯ ಬದುಕಿಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿ ಹಣೆಪಟ್ಟಿಗಳನ್ನು ನೀಡಬೇಕೆ? ಇಡೀ ಜಗತ್ತು ಇಂಥದೊಂದು ಬಾಳ್ವೆ ಮಾಡುವ ಗುಣ ಬೆಳೆಸಿಕೊಂಡು ಧಾರ್ಮಿಕವಾಗಬೇಕೇ ವಿನಃ ಈ ಹಣೆಪಟ್ಟಿಯ ಧರ್ಮಗಳು ಬೇಕಿಲ್ಲ. ಎಲ್ಲಾ ಧರ್ಮಗಳು ಅಳಿಸಿ ಹೋಗಬೇಕೆಂದು ನಾನು ಕರೆ ನೀಡಿದ್ದೇನೆ. ಹೀಗಾಗಿ ಯಾವ ಧರ್ಮಗಳಿಗೂ ನನ್ನನ್ನು ಕಂಡರಾಗುತ್ತಿಲ್ಲ’’ ಎಂದು ಓಶೋ ಹೇಳುತ್ತಾರೆ.

ಅನುಭಾವಿಯಲ್ಲಿ ವೀರಾವೇಶದ ಮಾತುಗಳು ಬರುವುದಿಲ್ಲ ಎಂಬುದು ಓಶೋ ವಾದ. ವೀರಾವೇಶದ ಮಾತುಗಳನ್ನಾಡುವವರು ಯುವಜನತೆಗೆ ಐಕಾನ್ ಆಗುವುದು ಸಾಮಾನ್ಯ. ಹೀಗಾಗಿಯೇ ವಿಭಿನ್ನ ರಾಜಕೀಯ ಧುರೀಣರಿಗೆ ವಿವೇಕಾನಂದರು ಓಟ್‌ಬ್ಯಾಂಕ್‌ಗೆ ಅಸ್ತ್ರವಾಗುತ್ತಾರೆ. ಇಡೀ ಭಾರತದ ಇತಿಹಾಸದಲ್ಲಿ ರಾಜಕೀಯ ಮಟ್ಟದಲ್ಲಿ ಅತಿಹೆಚ್ಚು ಚರ್ಚೆಯಾಗುವ ಅಧ್ಯಾತ್ಮಿಕ ವ್ಯಕ್ತಿಯೆಂದರೆ ಸ್ವಾಮಿವಿವೇಕಾನಂದರು.

‘ಧ್ಯಾನಸಿದ್ಧ’ ಕೃತಿಯಲ್ಲಿ ದಾಖಲಾಗಿರುವ ಪ್ರಶ್ನೋತ್ತರವೊಂದು ಹೀಗಿದೆ:

ಪ್ರಶ್ನೆ: ಹಾಗಿದ್ದರೆ ರಾಮಕೃಷ್ಣರು ವಿವೇಕಾನಂದರನ್ನು ತನ್ನ ಉದ್ದೇಶಕ್ಕಾಗಿ ಬಳಸಿಕೊಂಡರು ಎನ್ನಬಹುದೇ?

ಓಶೋ: ಬಳಸಿಕೊಂಡಿದ್ದೇನೋ ನಿಜ, ಆದರೆ ‘ಬಳಸಿಕೊಂಡರು’ ಎಂಬ ಪದದಲ್ಲಿ ತುಂಬ ನೀಚಾರ್ಥದ ಧ್ವನಿಯಿದೆ. ಆ ಧ್ವನಿಯಲ್ಲಿ ಆ ಪ್ರಸಂಗವನ್ನು ಗ್ರಹಿಸಬಾರದು. ವಿವೇಕಾನಂದರ ಮೂಲಕ ಅನ್ಯರಿಗೆ ಶ್ರೇಯಸ್ಸಾಗಲಿ ಎಂಬುದು ಶ್ರೀರಾಮಕೃಷ್ಣರ ಆಶಯವಾಗಿತ್ತು. ತಮ್ಮ ಯಾವುದೋ ಸ್ವಾರ್ಥಕ್ಕಾಗಿ ಅವರು ವಿವೇಕಾನಂದರನ್ನು ಶೋಷಣೆ ಮಾಡಲಿಲ್ಲ. ಸದ್ಬಳಕೆಗೂ ಶೋಷಣೆಗೂ ವ್ಯತ್ಯಾಸವಿದೆ. ಅನ್ಯರನ್ನು ವ್ಯಕ್ತಿಗತ ಉದ್ದೇಶಕ್ಕಾಗಿ ಬಳಸುವುದನ್ನು ಶೋಷಣೆ ಎನ್ನಬಹುದು. ಆದರೆ ಶ್ರೀರಾಮಕೃಷ್ಣರ ಮಹಾ ಕರುಣೆಯನ್ನು ಶೋಷಣೆಯೆಂದು ಕರೆಯಲಾಗದು.

– ರಾಮಕೃಷ್ಣರು ಅವರಿಗೆ ಸಮಾಧಿಯ ಒಳನೋಟ ನೀಡಿ ಬಳಿಕ ಅದರ ಕೀಲಿಕೈಯನ್ನು ತನ್ನ ಬಳಿ ಇರಿಸಿಕೊಂಡರೇನೋ ಸರಿ. ಆದರೆ ಆ ಒಳನೋಟವನ್ನಾಗಲಿ ಅಥವಾ ಅದರ ಕೀಲಿಕೈಯನ್ನಾಗಲಿ ವಿವೇಕಾನಂದರಿಗೆ ನೀಡದೆ ಹೋಗಿದ್ದರೆ ಅವರು ನೇರವಾಗಿ ನಿರ್ವಿಕಲ್ಪ ಸಮಾಧಿಗೆ ಸಂದುಬಿಡುತ್ತಿದ್ದರು ಎಂದು ಖಾತರಿಯಾಗಿ ಹೇಳಲು ನಮ್ಮಿಂದಾಗುವುದೇ? ಒಬ್ಬ ಆತ್ಮಜ್ಞಾನಿ ಮಾತ್ರ ಅಂತಹ ಪ್ರಶ್ನೆಗಳಿಗೆ ಉತ್ತರಿಸಬಲ್ಲ. ನಾನೇನೋ ವಿವೇಕಾನಂದರಿಗೆ ಇನ್ನೂ ಬೇಗನೆ ಸಮಾಧಿ ಸಿದ್ದಿಸುತ್ತಿತ್ತು ಎನ್ನಬಹುದು ಆದರೆ ಅಂತಹ ಹೇಳಿಕೆಗಳಿಗೆ ಪುರಾವೆಗಳನ್ನು ಎಲ್ಲಿಂದ ತಂದು ತೋರಿಸಬಹುದು?

ಶ್ರೀರಾಮಕೃಷ್ಣರು ವಿವೇಕಾನಂದರಿಗೆ “ನೀನು ಸಾಯಲು ಮೂರು ದಿವಸಗಳಿವೆ ಎನ್ನುವಾಗ ನಾನು ಸಮಾಧಿಯ ಕೀಲಿಕೈಯನ್ನು ಹಿಂದಿರುಗಿಸುವೆನು” ಎಂದಿದ್ದರು. ಇದರರ್ಥ ವಿವೇಕಾನಂದರು ತಮ್ಮ ಆಯುಷ್ಯದ ಕೊನೆಯ ಹಂತದಲ್ಲಿ ಸಮಾಧಿ ಹೊಂದುವರು ಎಂಬುದು ರಾಮಕೃಷ್ಣರಿಗೆ ತಿಳಿದಿತ್ತು. ಇನ್ನು ಕೀಲಿಕೈಯನ್ನು ಹಿಂದಿರುಗಿಸುವ ವಿಚಾರಕ್ಕೆ ಬಂದರೆ ವಿವೇಕಾನಂದರಿಗೆ ಮರಣ ಸನ್ನಿಹಿತವಾದಾಗ ರಾಮಕೃಷ್ಣರು ಎಲ್ಲಿ ಬದುಕಿದ್ದರು? ಆದರೆ ಅವರು ಹೇಳಿದಂತೆ ಸಾಯಲು ಮೂರು ದಿವಸಗಳಿವೆ ಎನ್ನುವಾಗ ಅವರಿಗೆ ಕೀಲಿಕೈಯನ್ನು ಹಿಂದಿರುಗಿಸಲಾಯಿತು.

ಎಷ್ಟೋ ಸಲ ನಮ್ಮ ಬಗ್ಗೆ ನಮಗೆ ತಿಳಿದಿರುವುದಿಲ್ಲ, ಆದರೆ ತನ್ನ ಅಂತರಾತ್ಮದೊಂದಿಗೆ ಒಂದಾದ ಒಬ್ಬ ಆತ್ಮಾನುಭವಿ ನಮ್ಮನ್ನು ಆಮೂಲಾಗ್ರವಾಗಿ ಅರಿತಿರಬಲ್ಲ. ನಮ್ಮ ಆಂತರ್ಯವೇನು, ನಮ್ಮ ಸಾಮರ್ಥ್ಯವೇನು ಎಂಬುದನ್ನು ಅವನು ತನ್ನ ಸ್ಪೋಪಜ್ಞತೆಯಿಂದಲೇ ಕಂಡುಕೊಳ್ಳಬಲ್ಲ. ನಮ್ಮ ಸಾಧನೆಯ ತೀವ್ರತೆಯನ್ನು ಅಂದಾಜಿಸಿ ನಾವು ಯಾವ ನಿರ್ದಿಷ್ಟ ಗಳಿಗೆಯಲ್ಲಿ ಆತ್ಮಾನುಭವ ಹೊಂದಬಲ್ಲೆವು ಎಂಬುದನ್ನೂ ಅವನು ಕರಾರುವಾಕ್ಕಾಗಿ ನುಡಿದುಬಿಡಬಲ್ಲ. ನೀವು ಪರ್ವತದ ತುದಿಯನ್ನು ತಲುಪಲು ಹೊರಟಿರುವಿರಿ ಎಂದಿಟ್ಟುಕೊಳ್ಳೋಣ. ಆ ಪರ್ವತ ಎಷ್ಟು ದೂರವಿದೆ, ಮಧ್ಯೆ ಏನೆಲ್ಲ ಅಡೆತಡೆಗಳಿವೆ ಎಂದು ತಿಳಿದಿರುವ ನಾನು ನಿಮ್ಮ ನಡಿಗೆಯ ವೇಗವನ್ನು ಅಂದಾಜಿಸಿ “ನೀನು ಮೂರು ತಿಂಗಳಲ್ಲಿ ಶಿಖರಾಗ್ರ ತಲುಪುವೆ” ಎಂದು ಭವಿಷ್ಯವಾಣಿ ನುಡಿಯಲು ಸಾಧ್ಯವಿದೆ. ಎತ್ತರದ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಹಾದಿಯನ್ನು ಒಮ್ಮೆ ತೋರಿಸಿ ನನ್ನ ಭವಿಷ್ಯವಾಣಿಯನ್ನು ನಿಮಗೆ ಖಾತರಿಪಡಿಸಲೂ ಸಹ ಸಾಧ್ಯವಿದೆ. ಇದನ್ನೆಲ್ಲ ಬಳಕೆ, ಶೋಷಣೆ ಎಂಬ ಪರಿಭಾಷೆಯಲ್ಲಿ ಅರ್ಥೈಸಲು ಬರುವುದಿಲ್ಲ. ಇವೆಲ್ಲ ಹೊರಗಿನಿಂದ ಕಂಡರಿತು ತೀರ್ಮಾನಿಸುವಷ್ಟು ಸರಳವಾದ ವಿಷಯಗಳೂ ಅಲ್ಲ.

ಮೊನ್ನೆ ದಿವಸ ನಿರ್ಮಲಾ ಎಂಬ ನನ್ನ ಸನ್ಯಾಸಿನಿಗೆ ಯಾರೋ ಜ್ಯೋತಿಷಿ “ನಿನ್ನ ಆಯುಷ್ಯ ಐವತ್ತ ಮೂರನೆಯ ವಯಸ್ಸಿಗೆ ಮುಗಿಯುತ್ತದೆ” ಎಂದು ಭವಿಷ್ಯವಾಣಿ ನುಡಿದನಂತೆ. ನಾನು “ನೀನು ಐವತ್ತ ಮೂರಕ್ಕೆ ಖಂಡಿತ ಸಾಯುವುದಿಲ್ಲ” ಎಂದು ಅವಳಿಗೆ ಖಾತರಿಯಾಗಿ ಹೇಳಿದೆ. ಇದರರ್ಥ ನಾನು ಅವಳಿಗೆ ಆಯುಷ್ಯ ಅನುಗ್ರಹಿಸಿದೆ ಎಂದಲ್ಲ. ಐವತ್ತಮೂರು ತುಂಬಿದರೂ ಅವಳು ಗಟ್ಟಿಮುಟ್ಟಾಗೇ ಇರುವಳು ಎಂಬ ಖಾತರಿಯಂತೂ ನನಗಿದೆ. ನಾಳೆ ದಿನ ಅವಳಿಗೆ ಐವತ್ತಮೂರು ತುಂಬಿದಾಗ ಅವಳು ಎಲ್ಲ ನನ್ನ ಅನುಗ್ರಹ ಎಂದು ಹೇಳಿಕೊಂಡು ಓಡಾಡಬಹುದು. “ನನ್ನ ಸಾವಿಗೆ ಮೂರು ದಿವಸಗಳಿವೆ ಎನ್ನುವಾಗ ಅವರು ಸಮಾಧಿಯ ಕೀಲಿಕೈಯನ್ನು ನನಗೆ ಹಿಂದಿರುಗಿಸಿದರು” ಎಂದು ವಿವೇಕಾನಂದ ಹೇಳಿಕೊಂಡಿರಬಹುದು. ಆದರೆ ಕೀಲಿಕೈಯನ್ನು ಹಿಂದಿರುಗಿಸಲು ಅವರೆಲ್ಲಿ ಬದುಕುಳಿದಿದ್ದರು?

***

ಕೊನೆಯ ಮಾತು: ಟಿ.ಎನ್‌.ವಾಸುದೇವ ಮೂರ್ತಿಯವರು ಸಂಗ್ರಹಿಸಿರುವ ‘ಧ್ಯಾನಸಿದ್ಧ’ ಎಂಬ ಪುಟ್ಟ ಕೃತಿಯಲ್ಲಿ ಕೆಲವು ವಿಚಾರಗಳು ಪುನರಾವರ್ತನೆಯಾಗಿವೆ ಅನಿಸಿದರೂ ವಿವೇಕಾನಂದರ ಕುರಿತು ಬೇರೊಂದು ಒಳನೋಟವನ್ನು ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಓಶೋ ವಿಚಾರಗಳನ್ನು ಒಪ್ಪಲೇಬೇಕೆಂದೇನೂ ಇಲ್ಲ. ಓಶೋ ಅವರು ವಿವಾದಾತ್ಮಕ ಅನುಭಾವಿ ಎಂದು ಕರೆಸಿಕೊಂಡಿದ್ದಾರೆ. ಆದರೆ ಓಶೋ ವಿಚಾರಗಳನ್ನು ಅಷ್ಟು ಸುಲಭವಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ ಎಂಬುದೂ ಮುಖ್ಯವಾಗುತ್ತದೆ.


ಇದನ್ನೂ ಓದಿರಿ: ತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...