Homeಅಂಕಣಗಳುಗಾಂಧಿ ಕಥನಕ್ಕೂ ಪ್ರಶಸ್ತಿ

ಗಾಂಧಿ ಕಥನಕ್ಕೂ ಪ್ರಶಸ್ತಿ

- Advertisement -
- Advertisement -

ಗಾಂಧೀಜಿಯನ್ನು ಕೊಂದವರನ್ನು ವೇದಿಕೆಯ ಮೇಲೆ ಸಮರ್ಥಿಸಿಕೊಳ್ಳುವವರನ್ನು ಮಟ್ಟಹಾಕದ, ಅಂತಹವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವವರು ದೇಶ ಆಳುತ್ತಿರುವ ಸಮಯದಲ್ಲಿ ಗಾಂಧೀಜಿ ಕುರಿತ ಪುಸ್ತಕ ಬರೆದವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಶ್ಯಾನೆ ಸಂಶಯಗಳಿಗೆ ಎಡೆಮಾಡಿಕೊಟ್ಟಿರುವುದಲ್ಲದೆ, ಸ್ವತಹ ಬರೆದವರಿಗೇ ಅಚ್ಚರಿ ಮೂಡಿಸಿದೆಯಲ್ಲಾ! ಯಾಕೆಂದರೆ, ಈ ಬಿಜೆಪಿ ಸರಕಾರ ಏನೇ ಮಾಡಿದರು ಅಲ್ಲೊಂದು ಸಂಚು ಅಂತರ್ಗತವಾಗಿ ಕೆಲಸ ಮಾಡಿರುತ್ತದೆ. ಇರಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಒಂದು ಸ್ವತಂತ್ರ ಸಂಸ್ಥೆ ಎಂಬ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಂದು ದೇಶದ ಸ್ವತಂತ್ರ ಸಂಸ್ಥೆಗಳು ಹಿಡಿದಿರುವ ದಾರಿ ನೋಡಿದರೆ ಸರ್ಕಾರದ ಕೈವಾಡಗಳ ಬಗ್ಗೆ ಅನುಮಾನ ಮೂಡದೇ ಇರದು.

ಇಂತಹ ಅನುಮಾನದಲ್ಲಿಯೇ ಯೋಚಿಸುವುದಾದರೆ ಈ ಸರ್ಕಾರಕ್ಕೆ ಮುಂದೆ ಗಾಂಧೀಜಿಯೂ ಬೇಕಾಗಬಹುದು. (ಸದ್ಯಕ್ಕೆ ವಿದೇಶಗಳಲ್ಲಿ ಹಾರ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ ಗಾಂಧಿ ಪ್ರೇಮ!). ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಕಥನ ಬರೆದವರ ಈವರೆಗಿನ ಬದುಕು ಮತ್ತು ಬರವಣಿಗೆಯನ್ನೂ ಪ್ರಶಸ್ತಿ ಕೊಟ್ಟವರು ಪರಿಗಣಿಸಿರಬಹುದು. ಅದರಲ್ಲಿ ಪ್ರಧಾನವಾಗಿ, ಬೋಫೋರ್ಸು ಹಗರಣದಷ್ಟೇ ಗಂಭೀರವಾದ ರಫೇಲ್ ಹಗರಣದ ಬಗ್ಗೆ ಗಾಂಧಿ ಕಥನದ ಲೇಖಕರು ಬರೆಯುತ್ತಾ ಈ ರಫೇಲ್ ಒಪ್ಪಂದವನ್ನು ಪ್ರಧಾನಿಯವರು ತ್ವರಿತವಾಗಿ ಮುಗಿಸಿದ್ದಾರೆ, ಇದರಲ್ಲಿ ಅವರ ಸ್ವಂತ ಹಿತಾಸಕ್ತಿ ಏನೂ ಇಲ್ಲ ಎಂದು ಬರೆದಾಗ, ಕ್ಯಾರವಾನ್ ಪತ್ರಿಕೆ ಮೂವತ್ತು ಪೇಜಿನಲ್ಲಿ ರಫೇಲ್ ಹಗರಣದ ವರದಿ ಪ್ರಕಟಿಸಿತ್ತು. ಮುಂದೆ ಇದೇ ಲೇಖಕರು ಬದಲಾಗುತ್ತಿರುವ ಆರೆಸ್ಸೆಸ್ ಎಂದು ವಕಾಲತ್ತು ವಹಿಸಿದರು. ಅದಾದ ಮೇಲೆ ತಮ್ಮ ಮನೆಯ ಮುಂದೆಯೇ ಮಹೇಂದ್ರ ಟಿಕಾಯತ್ ರೈತಚಳವಳಿ ಸಭೆ ಮಾಡಿದಾಗ, ಲೇಖಕರು ತಮ್ಮ ಅನಿಸಿಕೆ ಬಿಟ್ಟು, ರೈತನಾಯಕರಿಗೇ ಈ ಬಗ್ಗೆ ಬರೆಯಿರಿ ಎಂದು ಅಹ್ವಾನ ಕೊಟ್ಟರು. ಸದ್ಯದ ಎಡ ಬಲದ ಚರ್ಚೆಯಲ್ಲಿ ಗಾಂಧಿ ಕಥನಕಾರರು ಬಲಗಡೆಯಿದ್ದಾರೆಂದೂ, ಎಡ ಮತ್ತು ಬಲದ ನಡುವೆ ಹೃದಯವಿದ್ದು ಅದು ಎಡಭಾಗದಲ್ಲಿದೆ ಎಂದೂ, ಗಾಂಧಿ ಕಥನಕಾರರನ್ನು ಕಂಡರಾಗದವರ ಹೇಳಿಕೆ ಕೊಡುತ್ತಿದ್ದಾರೆಲ್ಲಾ ಥೂತ್ತೇರಿ.

ಗಾಂಧಿ ಎಂಬ ಮುಕುಟಮಣಿಯನ್ನು ಸ್ಪರ್ಶಿಸಿದವರಿಗೆಲ್ಲಾ ಒಳ್ಳೆಯದಾಗಿದೆ ಮತ್ತು ಪ್ರಶಸ್ತಿಗಳೂ ಬಂದಿವೆ. ಪ್ರಶಸ್ತಿ ಎಂದ ಮೇಲೆ ಅಲ್ಲೊಂದಿಷ್ಟು ಕಾಸು ಇದ್ದೇ ಇರುತ್ತದೆ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ಗಾಂಧಿ ಕಾರಣವಾಗಿ ಈ ದೇಶದಲ್ಲಿ ಶತಮಾನದಿಂದಲೂ ಅಸಂಖ್ಯಾತ ಜನರು ಪಾವನವಾಗಿದ್ದಾರೆ.
ಗಾಂಧೀಜಿಯವರ ನಂತರ ನಮ್ಮ ಸಮಾಜವಾದಿಗಳು ಅವರ ಮುಂದುವರಿಕೆಯಾಗಿ
ಗೋಚರಿಸಬೇಕಿತ್ತು. ಆದರೆ ನಮ್ಮ ಸಮಾಜವಾದಿಗಳು ಹೋರಾಡಿದ್ದು ತಮ್ಮಗಳ ವಿರುದ್ಧವೇ. ಹೀಗೆ ಎಲ್ಲರನ್ನ ಕಳೆದುಕೊಂಡು ಏಕಾಂತಗೊಂಡಿರುವ ಸಮಾಜವಾದಿಗಳಿಗೆ ಗಾಂಧಿಯೇ ದಿಕ್ಕಾಗಿದ್ದಾರೆ. ಗಾಂಧಿಯವರ ಕಥನ ರೂಪುಗೊಂಡು ಹೊಸ ಸಂವೇದನೆಯ ಗಾಳಿ ಬೀಸಿದ್ದರೂ, ಲೇಖಕರ ಪೂರ್ವಗ್ರಹಗಳು ಹಾಗೂ ಹಠಮಾರಿತನಗಳೇನಾದರೂ ಕಥನದಲ್ಲಿ ಸೂಕ್ಷ್ಮವಾಗಿ ಬೆರೆತು ಕೆಲಸ ಮಾಡಿವೆಯೇ ಎಂಬುದನ್ನು ಕಲಿತ ಸಮಾಜವಾದಿಗಳು ಪತ್ತೆಹಚ್ಚಿ ಹೇಳಬೇಕೆಂದು ಗಾಂಧಿವಾದಿಗಳ ಗೊಣಗಾಟವಾಗಿದೆಯಂತಲ್ಲಾ ಥೂತ್ತೆರಿ.

ನಮ್ಮ ಕರ್ನಾಟಕದಲ್ಲಿ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವಿದೆಯಂತಲ್ಲಾ! ರಾಷ್ಟ್ರಮಟ್ಟದ ವಿರೋಧಿ ನಾಯಕರೆಲ್ಲಾ ಬಂದು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿಯಾಗಿಸಿ ಆಶೀರ್‍ವಾದ ಮಾಡಿ ಹೋದರು. ಇದೊಂತರ ಶ್ರೀಮಂತರ ಮದುವೆಗೆ ದೇಶದ ಗಣ್ಯರೆಲ್ಲಾ ಬಂದು ಭಾಗವಹಿಸಿದಂತಹ ಪ್ರಸಂಗ. ವರ ಮತ್ತು ವಧುವಿಗೆ ತಾಳೆಯಾಗದೆ, ತಾಜ್ ವೆಸ್ಟ್‌ಎಂಡ್ ಹೋಟೆಲಿನಲ್ಲಿ ಶುರುವಾದ ಸಂಸಾರ ಬಹಳದಿನ ಬಾಳಿಕೆ ಬರಲಿಲ್ಲ. ಹಾಡುಹಗಲೇ ಡೈವರ್ಸು ನಡೆದೇಹೋಯ್ತು. ಇದರ ಸತ್ಯಾಸತ್ಯತೆ ಗ್ರಹಿಸಲಾರದವರೆ ಅಂದಿನಿಂದಲೂ ವರಲುತ್ತ ಡೈವರ್ಸಿಗೆ ಕಾರಣರಾದವರನ್ನು ಹಾದಿಬೀದಿಯಲ್ಲಿ ಬೈಯುತ್ತ ಕಿರುಚುತ್ತಿರಬೇಕಾದರೆ, ಅವರ ಮಾತುಗಳೆಲ್ಲಾ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವನ್ನೇ ರೂಪಿಸುತ್ತಿದೆಯಂತಲ್ಲಾ. ಉದಾಹರಣೆಗೆ ರಾಜ್ಯದ ಕಂಟ್ರ್ಯಾಕ್ಟರುಗಳು ಈ ಆಳುವ ರಾಜಕಾರಣಗಳಿಗೆ ನಲವತ್ತು ಪರಸೆಂಟ್ ಕಮಿಶನ್ ಕೊಡಲಾಗುವುದಿಲ್ಲ ಎಂದು ಪತ್ರ ಬರೆದರು. ಕೂಡಲೇ ಕುಮಾರಣ್ಣ ಸದರಿ ಪರಸೆಂಟೇಜ್ ಸಿದ್ದರಾಮಯ್ಯನವರ ಕಾಲದಲ್ಲಿರಲಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ ಎಂದು ಸವಾಲೆಸೆದರು. ಹಾಗಾದರೆ ಕುಮಾರಣ್ಣ ತಾಜ್ ವೆಸ್ಟ್ ಹೋಟೆಲಿನಲ್ಲಿದ್ದಾಗ ಪರಸಂಟೇಜು ಸ್ಟಾಪಾಗಿತ್ತೇ ಎಂದು ರೇವಣ್ಣಾಭಿಮಾನಿಗಳ ಪ್ರಶ್ನೆಯಾಗಿದೆಯಂತಲ್ಲಾ? ಪರಸೆಂಟೇಜು ಕೊಟ್ಟುಕೊಟ್ಟು ಸುಸ್ತಾಗಿರುವ ಕಂಟ್ರ್ಯಾಕ್ಟರ್ ಪರವಾಗಿ ನಿಂತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕುಮಾರಣ್ಣ ಉಲ್ಟಾಹೊಡೆದು ವಿರೋಧಪಕ್ಷ ಕಾಂಗ್ರೆಸ್‌ಗೆ ಸರಿಯಾದ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದ್ದಾರಂತಲ್ಲಾ ಥೂತ್ತೇರಿ.

ದೀರ್ಘಕಾಲದಿಂದಲೂ ಎಲ್‌ಕೆಜಿಯ ಮಕ್ಕಳಿಗೂ ಹಿಂದಿ ಕಲಿಸುತ್ತಿರುವ ಅಪಾಯದ ಬಗ್ಗೆ ಕನ್ನಡಿಗರ ಒಟ್ಟಾರೆಯಾಗಿ ಗಂಭೀರ ಅರಿವು ಮೂಡಿಲ್ಲ. ತಮ್ಮ ಮಾತೃಭಾಷೆಯನ್ನ ಕೊಂದು ಹಿಂದಿ ಉಳಿಸಲು ಹೋರಾಡುತ್ತಿರುವ ದೃಶ್ಯ ಆತ್ಮಹತ್ಯಾತ್ಮಕವಾಗಿದೆಯೆಲ್ಲಾ ಎಂಬುದು ಕೂಡ. ಇನ್ನ ಬಿಜೆಪಿ ಸರಕಾರ ಬಂದ ಮೇಲೆ ಅದರ ಎಂದಿನ ಸಂಚಿನ ಫಲವಾಗಿ ನಮ್ಮ ರೈಲುಗಳ ಮೈಮೇಲಿಂದ ಕನ್ನಡ ಅಳಿಸಿಹೋಯ್ತು, ಮೈಲಿಗಲ್ಲಿನಿಂದಲೂ ಕನ್ನಡ ಹೋಗಿದೆ. ಗ್ರಾಮಾಂತರ ಪ್ರದೇಶದ ಹೋಟೆಲುಗಳ ಮೆನು ಕಾರ್ಡಿನಿಂದ ಕೂಡ ಕನ್ನಡ ಮರೆಯಾಗಿದೆ. ನಿಮ್ಮ ಯಾವುದೇ ಅಂಗಡಿ ಮುಂಗಟ್ಟು ಹೋಟೆಲು ಇತ್ಯಾದಿ ಕಟ್ಟಡಗಳ ಮೇಲೆ ಮಾತೃಭಾಷೆ ಪ್ರಧಾನವಾಗಿದ್ದು ಉಳಿದ ಭಾಷೆ ಸಣ್ಣದಾಗಿರಲಿ ಎಂಬ ಆದೇಶಕ್ಕೆ ಕೂಡ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆಯೆಲ್ಲಾ ಥೂತ್ತೆರಿ.


ಇದನ್ನೂ ಓದಿ: ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...