Homeಮುಖಪುಟಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ.

- Advertisement -
- Advertisement -

ಸುಶಾಂತ್ ಸಿಂಗ್ ಎಂಬ ಬಾಲಿವುಡ್ ಪ್ರತಿಭೆಯ ಸಾವಿನ ಸುದ್ದಿ ಗೊತ್ತಾದ ಕೂಡಲೇ, ನನ್ನ ತಲೆಯಲ್ಲಿ ಬಂದಿದ್ದು ನನಗೂ ಮತ್ತು ಅವನ ನಡುವಿನ ಕಾಮನ್ ಫ್ರೆಂಡ್ಸ್. ಅವರನ್ನು ಕರೆ ಮಾಡಿ ಅವನ್ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಬೇಕೆನಿಸಿತು. ಆದರೆ, ನಾನು ಯಾರಿಗೂ ಫೋನ್ ಮಾಡಲಿಲ್ಲ. ಅವರೇನೇ ಹೇಳಿದರೂ, ಅದು ನನ್ನ ಕುತೂಹಲವನ್ನು ಒಂದಿಷ್ಟು ತಣಿಸುತ್ತಿತ್ತೇ ಹೊರತು ಅದರಿಂದ ಮತ್ತೇನೂ ಆಗುತ್ತಿದ್ದಿಲ್ಲ. ಸುಶಾಂತ್‌ನ ಸಾವಿನ ಸುತ್ತ ಏನಾಯಿತು, ಆ ನಟನ ಮಾನಸಿಕ ಸ್ಥಿತಿ ಹೇಗಿತ್ತು, ಯಾವ್ಯಾವ ಒತ್ತಡಗಳಿದ್ದವು, ಅದಕ್ಕೆ ಏನು ಮಾಡಬೇಕಾಗಿತ್ತು ಎಂದು ಹೇಳಲು ನಾನು ಮನೋವಿಜ್ಞಾನದ ತಜ್ಞನೂ ಅಲ್ಲ.

ಅದೇ ಇಂಡಸ್ಟ್ರಿಯಲ್ಲಿ ನಾನೂ ಸುಮಾರು ಒಂದೂವರೆ ದಶಕ ಕಳೆದಿದ್ದರಿಂದ, ಅಲ್ಲಿಯ ಒತ್ತಡಗಳೇನು ಎಂಬುದುನ್ನು ಖುದ್ದಾಗಿ ಅನುಭವಿಸಿದ್ದೇನೆ; ಅದನ್ನೇ ಹಂಚಿಕೊಳ್ಳುವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಂಬಯಿ ಎಂಬ ಮಾಯಾನಗರಿಗೆ ಹೋದೆ. ಒಂದಿಷ್ಟು ದಿನಗಳಲ್ಲಿ ಸ್ವಾಭಾವಿಕವಾಗಿಯೇ ನನ್ನ ಹಾಗೇ ಬೇರೆ ಬೇರೆ ಊರುಗಳಿಂದ ಬಂದವರು ಜೊತೆಗೂಡಿದೆವು. ಚಿತ್ರರಂಗ ಕಾರ್ಯನಿರ್ವಹಿಸುವ ವಿಧಾನವನ್ನು ಗ್ರಹಿಸದೇ ಹೋದ ಅನೇಕರು, ಮುಂಬಯಿಯನ್ನು, ಚಿತ್ರರಂಗವನ್ನೂ ಟೀಕಿಸಿ, ಸಿನಿಕರಾದರು. ಅದರಲ್ಲಿ ಹೆಚ್ಚಿನವರು ಯಾರಿಗೂ ಗೋಚರವಾಗದಂತೆ ಮರಳಿ ಮನೆಗೆ ಹೋದರೆ ಇನ್ನೂ ಕೆಲವರು ತಮ್ಮನ್ನು ತಾವು ಇಂಡಸ್ಟ್ರಿಗೆ ಅಳವಡಿಸಲು ಪ್ರಯತ್ನಿಸುತ್ತ ಇನ್ನಷ್ಟು ಕಾಲ ದೂಡಿದರು.

ನಾನು ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದ ಒಂದು ಪ್ರೊಡಕ್ಷನ್ ಹೌಸ್‌ನಲ್ಲಿ ಇನ್‌ಹೌಸ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಸೇರಿಕೊಂಡಿದ್ದೆ. ಮೊದಲ ಕೆಲ ತಿಂಗಳು ನಾನು ಆಯ್ಕೆ ಮಾಡುತ್ತಿದ್ದ ನಟರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು ನನ್ನ ಬಾಸ್‌ಗಳು. ನಿಧಾನವಾಗಿ ಅವರಿಗೆ ಎಂತಹ ‘ನಟ’ರು ಬೇಕೋ ಅಂತಹ ನಟರನ್ನೇ ಆಯ್ಕೆ ಮಾಡಿ, ಶಾರ್ಟ್ಲಿಸ್ಟ್ ಮಾಡಲು ಪ್ರಾರಂಭಿಸಿದೆ. ಆದರೂ, ನಾನು ಆಯಾ ನಟರನ್ನು ನಿಜವಾಗಿಯೂ ಯಾವ ಕಾರಣಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂಬುದು ನನಗೇ ಗೊತ್ತಿದ್ದಿಲ್ಲ. ಅದಕ್ಕೆ ಕಾರಣ ಹುಡುಕಲು ಪ್ರಾರಂಭಿಸಿದೆ. ಉತ್ತರ ಸಿಗುವುದು ತಡವಾಗಲಿಲ್ಲ. ನಾನು ಕಂಡುಕೊಂಡ ಉತ್ತರ: ನಾನು ನಟರನ್ನು ಆಯ್ಕೆ ಮಾಡುತ್ತಿದ್ದ ನಟರಲ್ಲಿ ಹೆಚ್ಚಿನವರು ಕಾರಿನಲ್ಲಿ ಬರುವವರಾಗಿದ್ದರು. ಮುಂಬಯಿಯ ಸೆಕೆಯಲ್ಲಿ ಬಸ್ಸೋ, ಟ್ರೇನೋ ಹಿಡಿದು, ಅಂಧೇರಿಗೆ ಬಂದು ಅಲ್ಲಿಂದ ಒಂದಿಷ್ಟು ದೂರ ನಡೆದುಕೊಂಡು ಬರುವವರ ಮುಖ ನೋಡಿ, ಅವರ ಆಡಿಷನ್ ಮಾಡಲು ‘ಮನಸ್ಸಾದರೂ ಹೇಗೆ ಆದೀತು’?

ನಾವುಗಳೂ ಮೊದಲ ಅನೇಕ ವರ್ಷ ಟ್ರೇನ್ ಮತ್ತು ಕಾಲ್ನಡಿಗೆಯನ್ನು ನಂಬಿಕೊಂಡವರೆ. ಎಲ್ಲೋ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾದೊಡನೇ ಆಡಿಷನ್‌ಗಾಗಿ ಸರದಿಯಲ್ಲಿ ಕಾದು, ‘ಇಲ್ಲ ನೀವು ಈ ರೋಲ್‌ಗೆ ಫಿಟ್ ಆಗುವುದಿಲ್ಲ’ ಎಂಬುದನ್ನು ಕೇಳಿಸಿಕೊಂಡಾಗ, ಇಂದಿನ ಸ್ಟ್ರಗಲ್ ಮಾಡಿದೆನಲ್ಲ ಎಂಬ ‘ಗುಡ್ ಫೀಲಿಂಗ್’ನೊಂದಿಗೆ ಮರಳುತ್ತಿದ್ದೆವು. ಕ್ರಮೇಣ, ನಾವು ಹೀರೋ ಆಗಲು ಸಾಧ್ಯವಿಲ್ಲ ಎಂಬ ತಥ್ಯ ಹೆಚ್ಚಿನವರಿಗೆ ಒಂದೆರಡು ವರ್ಷಗಳಲ್ಲಿ ತಿಳಿಯುತ್ತಿತ್ತು. ಹೇಗಾದರೂ ಮಾಡಿ ಯಾವುದೋ ಒಂದು ರೋಲ್ ಸಿಕ್ಕರೆ ಸಾಕು ಎಂದು ಸ್ಟ್ರಗಲ್ ಮುಂದುವರೆಯುತ್ತಿತ್ತು. ಇನ್ನಿತರರು ನಾಟಕದ ಗುಂಪಿಗೆ ಸೇರಿ, ಅಲ್ಲಿಯೇ ಮಾನಸಿಕ ನೆಲೆ ಕಂಡುಕೊಳ್ಳುತ್ತಿದ್ದರು.

ಇಂಡಸ್ಟ್ರಿಯಲ್ಲೂ ಜಾಹೀರಾತುಗಳ ಮತ್ತು ಧಾರಾವಾಹಿಗಳ ಜಗತ್ತು ಸಿನಿಮಾ ಜಗತ್ತಿಗಿಂತ ಒಂದಿಷ್ಟು ನೇರ. ಅಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದರೂ, ಆಡಿಷನ್ ಕೊಡುವ, ಅದರಲ್ಲಿ ಶಾರ್ಟ್ಲಿಸ್ಟ್ ಆಗುವ ಅವಕಾಶ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಸುಶಾಂತ್‌ನಂತವರು ಟಿವಿ ಧಾರಾವಾಹಿಗೆ ಹೇಳಿ ಮಾಡಿಸಿದಂಥವರು.

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ. ಇರ್ಫಾನ್, ನವಾಜುದ್ದಿನ್ ಸಿದ್ದಿಕಿ, ರಾಜ್‌ಕುಮಾರ್ ರಾವ್‌ನಂತವರೆಲ್ಲ ಪ್ರತಿಷ್ಠಿತ ಸಂಸ್ಥೆಗಳಿಂದ ಬಂದವರು. ಅವರು ಮುಂಬಯಿಗೆ ಕಾಲಿಟ್ಟಾಗ ಅವರನ್ನು ತರಬೇತುಗೊಳಿಸಲು ರೆಕಮೆಂಡ್ ಮಾಡಲು ಸೀನಿಯರ್‌ಗಳ ಒಂದು ತಂಡವಿರುತ್ತೆ. ಅದರಲ್ಲೂ ಅನೇಕರಿಗೆ ಸಿನೆಮಾ ಇಂಡಸ್ಟ್ರಿಯಲ್ಲಿ ನಿಲ್ಲಲಾಗುವುದಿಲ್ಲ.

ಇದು ಇಂಡಸ್ಟ್ರಿಯನ್ನು ಭೇದಿಸಲಾಗದವರ ಕಥೆಯಾದರೆ, ಭೇದಿಸಿದವರ ಕಥೆಯೇ ಬೇರೆ.

ತಮ್ಮ ಅದೃಷ್ಟ, ಲುಕ್, ಪ್ರತಿಭೆ ಮತ್ತು ಇತರ ಕಾಣದ ಕಾರಣಗಳಿಂದ ಇಂಡಸ್ಟ್ರಿಯಲ್ಲಿ ನೆಲೆಯೂರಿದರೂ, ಅವರ ಗೋಳು ಕಡಿಮೆಯಾಗುವುದಿಲ್ಲ. ಅದಕ್ಕೆ ಒಬ್ಬ ಸೀನಿಯರ್ ಹೇಳಿದ ಒಂದು ಮಾತನ್ನು ಉಲ್ಲೇಖಿಸುತ್ತೇನೆ; ಓಂ ಪುರಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು, ಅವರು ಚಾರ್ಲಿ ವಿಲ್ಸನ್ಸ್ ವಾರ್ ಎಂಬ ಹಾಲಿವುಡ್ ಚಿತ್ರದಲ್ಲಿ ವಿಶ್ವವಿಖ್ಯಾತ ನಟ ಟಾಮ್ ಹ್ಯಾಂಕ್ಸ್‌ನೊಂದಿಗೆ ಅಭಿನಯಿಸಿದರು. ಚಿತ್ರೀಕರಣದ ನಂತರ ಟಾಮ್ ಹ್ಯಾಂಕ್ಸ್ ಮನೆಗೆ ಅತಿಥಿಯಾಗಿ ಹೋಗಿದ್ದರಂತೆ ಓಮ್ ಪುರಿ. ಆದರೆ, ಓಂ ಪುರಿಯಂತಹ ನಟರಿಗೆ ಯಾವುದಾದರೂ ಬಾಲಿವುಡ್ ಸ್ಟಾರ್‌ಗಳ ಮನೆಗೆ ಆಹ್ವಾನವಿತ್ತಾ? ಇಲ್ಲ. ಅವರೆಂದೂ ಹೊರಗಿನವರೆ, ಕ್ಯಾರೆಕ್ಟರ್ ರೋಲ್‌ಗಳನ್ನು ಮಾಡುವವರು, ಆರ್ಟ್ ಸಿನೆಮಾ ಮಾಡುವವರು.

ಅದೇ ಸಮಯದಲ್ಲಿ, ಸಂಜಯ್ ಲೀಲಾ ಭನ್ಸಾಲಿ ಎಂಬ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅನಿಲ್ ಕಪೂರ್‌ನ ಮಗಳು ಮತ್ತು ರಿಷಿ ಕಪೂರ್‌ನ ಮಗನನ್ನು ಹೀರೊ, ಹೀರೊಯಿನ್ ಆಗಿ ಮಾಡುತ್ತಾನೆ. ಜೆ.ಪಿ.ದತ್ತಾ ಎಂಬ ಯಶಸ್ವಿ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅಮಿತಾಭ್ ಬಚ್ಚನ್‌ನ ಮಗ ಮತ್ತು ರಾಜ್‌ಕಪೂರ್‌ನ ಮೊಮ್ಮಗಳನ್ನು ಹೀರೊ, ಹೀರೋಯಿನ್ ಆಗುತ್ತಾರೆ. ಇದು ಮಾಮೂಲು. ಇಷ್ಟು ದೊಡ್ಡ ನಿರ್ದೇಶಕರಾದ ಇವರೇಕೇ ಸ್ಟಾರ್‌ಸನ್, ಸ್ಟಾರ್‌ಡಾಟರ್‌ಗಳನ್ನು ಲಾಂಚ್ ಮಾಡುತ್ತಾರೆ ಎಂದು ಈ ನಿರ್ದೇಶಕರ ಬಗ್ಗೆ ಸಿಟ್ಟು ಬರುತ್ತಿತ್ತು. ಆದರೆ ಅದು ವ್ಯವಸ್ಥೆ; ಅಲ್ಲಿ ಬದುಕುಳಿಯಬೇಕಾದರೆ, ಅಲ್ಲಿಯ ನಿಯಮಗಳನ್ನು ಪಾಲಿಸಲೇಬೇಕು. ಯಾವ ಹೀರೋ ಅಥವಾ ಹೀರೋಯಿನ್ ಮನಬಿಚ್ಚಿ ಮಾತನಾಡುವಂತಿಲ್ಲ. ಅವರ ಎಲ್ಲಾ ಸಂದರ್ಶನಗಳನ್ನು ಮೊದಲೇ ಪ್ಲಾನ್ ಮಾಡಲಾಗುತ್ತೆ; ಅವರು ಸಂದರ್ಶನಗಳನ್ನು ಕೊಡುವುದೂ ಅವರ ಚಿತ್ರಗಳ ಬಿಡುಗಡೆಗೆ ಮುನ್ನ ಮಾತ್ರ. ಹಾಗಾಗಿ ಕೇವಲ ‘ಪಾಸಿಟಿವ್’ ಆಗಿರುವ ವಿಷಯಗಳನ್ನೇ ಹೇಳಬೇಕಾಗುತ್ತೆ. ಸಂದರ್ಶನದ ಈ ನಿಯಮವನ್ನು ಮುರಿಯುವಂತಿಲ್ಲ. ಏಕೆಂದರೆ ಬಹಿಷ್ಕಾರ ಎಂಬುದು ತೂಗುವ ಕತ್ತಿ ಅವರ ತಲೆಯ ಮೇಲೆ ಸದಾಕಾಲ ತೂಗುತ್ತಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಬಂದ ಹೀರೋಗಳನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಸ್ಟಾರ್‌ಸನ್‌ಗಳೇ. ಸ್ವಾಭಾವಿಕವಾಗಿಯೇ ಹೊರಗಿನವರನ್ನು ಇವರು ಸಹಿಸಿಕೊಳ್ಳುವುದಿಲ್ಲ. ಸುಶಾಂತ್ ಸಿಂಗ್ ನಿಧನದ ನಂತರ ಬಂದ ಸಂತಾಪಗಳ ಮಹಾಪೂರವನ್ನು ನೋಡಿ ಸಿಟ್ಟಿಗೆದ್ದು, ಚಿತ್ರರಂಗದ ಹಿಪಾಕ್ರಸಿಯನ್ನು ತೋರಿಸಿ ಇಷ್ಟೆಲ್ಲ ಸುಳ್ಳು ಹೇಳುವ ಬದಲಿಗೆ ಒಂದು ದಿನದ ಮೌನಾಚರಣೆ ಆಚರಿಸಿ ಎಂದು ಹೇಳಿದ್ದೂ ಒಬ್ಬ ಸ್ಟಾರ್‌ಸನ್, ಸೈಫ್ ಅಲಿ ಖಾನ್.

#ಮೀಟೂ ಎಂಬ ಚಳವಳಿ ಇಂಡಸ್ಟ್ರಿಯಲ್ಲಿ ‘ಸ್ವಾಭಾವಿಕ’ವಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಬೆಳಕು ಚೆಲ್ಲಿತು. ಸುಶಾಂತ್ ಸಿಂಗ್ ಎಂಬ ಪ್ರತಿಭಾವಂತ ನಟನ ಸಾವು ಬಾಲಿವುಡ್ ನ ಕರಾಳ ಒಳಜಗತ್ತು, ಅದರ ಕಟ್ಟುನಿಟ್ಟಾದ ನಿಯಮಗಳು, ಶೋಷಣೆ ಮತ್ತು ಚಿತ್ರರಂಗವನ್ನು ಭೇದಿಸಿದ ಪ್ರತಿಭೆಗಳು ಎದುರಿಸಬೇಕಾದ ಸಮಸ್ಯೆಗಳನ್ನು ಬೆಳಕಿಗೆ ತರಬಹುದು ಎಂದು ಆಶಿಸಬಹುದಷ್ಟೆ.


ಇದನ್ನೂ ಓದಿ: ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...