Homeಮುಖಪುಟಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ.

- Advertisement -
- Advertisement -

ಸುಶಾಂತ್ ಸಿಂಗ್ ಎಂಬ ಬಾಲಿವುಡ್ ಪ್ರತಿಭೆಯ ಸಾವಿನ ಸುದ್ದಿ ಗೊತ್ತಾದ ಕೂಡಲೇ, ನನ್ನ ತಲೆಯಲ್ಲಿ ಬಂದಿದ್ದು ನನಗೂ ಮತ್ತು ಅವನ ನಡುವಿನ ಕಾಮನ್ ಫ್ರೆಂಡ್ಸ್. ಅವರನ್ನು ಕರೆ ಮಾಡಿ ಅವನ್ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಬೇಕೆನಿಸಿತು. ಆದರೆ, ನಾನು ಯಾರಿಗೂ ಫೋನ್ ಮಾಡಲಿಲ್ಲ. ಅವರೇನೇ ಹೇಳಿದರೂ, ಅದು ನನ್ನ ಕುತೂಹಲವನ್ನು ಒಂದಿಷ್ಟು ತಣಿಸುತ್ತಿತ್ತೇ ಹೊರತು ಅದರಿಂದ ಮತ್ತೇನೂ ಆಗುತ್ತಿದ್ದಿಲ್ಲ. ಸುಶಾಂತ್‌ನ ಸಾವಿನ ಸುತ್ತ ಏನಾಯಿತು, ಆ ನಟನ ಮಾನಸಿಕ ಸ್ಥಿತಿ ಹೇಗಿತ್ತು, ಯಾವ್ಯಾವ ಒತ್ತಡಗಳಿದ್ದವು, ಅದಕ್ಕೆ ಏನು ಮಾಡಬೇಕಾಗಿತ್ತು ಎಂದು ಹೇಳಲು ನಾನು ಮನೋವಿಜ್ಞಾನದ ತಜ್ಞನೂ ಅಲ್ಲ.

ಅದೇ ಇಂಡಸ್ಟ್ರಿಯಲ್ಲಿ ನಾನೂ ಸುಮಾರು ಒಂದೂವರೆ ದಶಕ ಕಳೆದಿದ್ದರಿಂದ, ಅಲ್ಲಿಯ ಒತ್ತಡಗಳೇನು ಎಂಬುದುನ್ನು ಖುದ್ದಾಗಿ ಅನುಭವಿಸಿದ್ದೇನೆ; ಅದನ್ನೇ ಹಂಚಿಕೊಳ್ಳುವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಂಬಯಿ ಎಂಬ ಮಾಯಾನಗರಿಗೆ ಹೋದೆ. ಒಂದಿಷ್ಟು ದಿನಗಳಲ್ಲಿ ಸ್ವಾಭಾವಿಕವಾಗಿಯೇ ನನ್ನ ಹಾಗೇ ಬೇರೆ ಬೇರೆ ಊರುಗಳಿಂದ ಬಂದವರು ಜೊತೆಗೂಡಿದೆವು. ಚಿತ್ರರಂಗ ಕಾರ್ಯನಿರ್ವಹಿಸುವ ವಿಧಾನವನ್ನು ಗ್ರಹಿಸದೇ ಹೋದ ಅನೇಕರು, ಮುಂಬಯಿಯನ್ನು, ಚಿತ್ರರಂಗವನ್ನೂ ಟೀಕಿಸಿ, ಸಿನಿಕರಾದರು. ಅದರಲ್ಲಿ ಹೆಚ್ಚಿನವರು ಯಾರಿಗೂ ಗೋಚರವಾಗದಂತೆ ಮರಳಿ ಮನೆಗೆ ಹೋದರೆ ಇನ್ನೂ ಕೆಲವರು ತಮ್ಮನ್ನು ತಾವು ಇಂಡಸ್ಟ್ರಿಗೆ ಅಳವಡಿಸಲು ಪ್ರಯತ್ನಿಸುತ್ತ ಇನ್ನಷ್ಟು ಕಾಲ ದೂಡಿದರು.

ನಾನು ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದ ಒಂದು ಪ್ರೊಡಕ್ಷನ್ ಹೌಸ್‌ನಲ್ಲಿ ಇನ್‌ಹೌಸ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಸೇರಿಕೊಂಡಿದ್ದೆ. ಮೊದಲ ಕೆಲ ತಿಂಗಳು ನಾನು ಆಯ್ಕೆ ಮಾಡುತ್ತಿದ್ದ ನಟರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು ನನ್ನ ಬಾಸ್‌ಗಳು. ನಿಧಾನವಾಗಿ ಅವರಿಗೆ ಎಂತಹ ‘ನಟ’ರು ಬೇಕೋ ಅಂತಹ ನಟರನ್ನೇ ಆಯ್ಕೆ ಮಾಡಿ, ಶಾರ್ಟ್ಲಿಸ್ಟ್ ಮಾಡಲು ಪ್ರಾರಂಭಿಸಿದೆ. ಆದರೂ, ನಾನು ಆಯಾ ನಟರನ್ನು ನಿಜವಾಗಿಯೂ ಯಾವ ಕಾರಣಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂಬುದು ನನಗೇ ಗೊತ್ತಿದ್ದಿಲ್ಲ. ಅದಕ್ಕೆ ಕಾರಣ ಹುಡುಕಲು ಪ್ರಾರಂಭಿಸಿದೆ. ಉತ್ತರ ಸಿಗುವುದು ತಡವಾಗಲಿಲ್ಲ. ನಾನು ಕಂಡುಕೊಂಡ ಉತ್ತರ: ನಾನು ನಟರನ್ನು ಆಯ್ಕೆ ಮಾಡುತ್ತಿದ್ದ ನಟರಲ್ಲಿ ಹೆಚ್ಚಿನವರು ಕಾರಿನಲ್ಲಿ ಬರುವವರಾಗಿದ್ದರು. ಮುಂಬಯಿಯ ಸೆಕೆಯಲ್ಲಿ ಬಸ್ಸೋ, ಟ್ರೇನೋ ಹಿಡಿದು, ಅಂಧೇರಿಗೆ ಬಂದು ಅಲ್ಲಿಂದ ಒಂದಿಷ್ಟು ದೂರ ನಡೆದುಕೊಂಡು ಬರುವವರ ಮುಖ ನೋಡಿ, ಅವರ ಆಡಿಷನ್ ಮಾಡಲು ‘ಮನಸ್ಸಾದರೂ ಹೇಗೆ ಆದೀತು’?

ನಾವುಗಳೂ ಮೊದಲ ಅನೇಕ ವರ್ಷ ಟ್ರೇನ್ ಮತ್ತು ಕಾಲ್ನಡಿಗೆಯನ್ನು ನಂಬಿಕೊಂಡವರೆ. ಎಲ್ಲೋ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾದೊಡನೇ ಆಡಿಷನ್‌ಗಾಗಿ ಸರದಿಯಲ್ಲಿ ಕಾದು, ‘ಇಲ್ಲ ನೀವು ಈ ರೋಲ್‌ಗೆ ಫಿಟ್ ಆಗುವುದಿಲ್ಲ’ ಎಂಬುದನ್ನು ಕೇಳಿಸಿಕೊಂಡಾಗ, ಇಂದಿನ ಸ್ಟ್ರಗಲ್ ಮಾಡಿದೆನಲ್ಲ ಎಂಬ ‘ಗುಡ್ ಫೀಲಿಂಗ್’ನೊಂದಿಗೆ ಮರಳುತ್ತಿದ್ದೆವು. ಕ್ರಮೇಣ, ನಾವು ಹೀರೋ ಆಗಲು ಸಾಧ್ಯವಿಲ್ಲ ಎಂಬ ತಥ್ಯ ಹೆಚ್ಚಿನವರಿಗೆ ಒಂದೆರಡು ವರ್ಷಗಳಲ್ಲಿ ತಿಳಿಯುತ್ತಿತ್ತು. ಹೇಗಾದರೂ ಮಾಡಿ ಯಾವುದೋ ಒಂದು ರೋಲ್ ಸಿಕ್ಕರೆ ಸಾಕು ಎಂದು ಸ್ಟ್ರಗಲ್ ಮುಂದುವರೆಯುತ್ತಿತ್ತು. ಇನ್ನಿತರರು ನಾಟಕದ ಗುಂಪಿಗೆ ಸೇರಿ, ಅಲ್ಲಿಯೇ ಮಾನಸಿಕ ನೆಲೆ ಕಂಡುಕೊಳ್ಳುತ್ತಿದ್ದರು.

ಇಂಡಸ್ಟ್ರಿಯಲ್ಲೂ ಜಾಹೀರಾತುಗಳ ಮತ್ತು ಧಾರಾವಾಹಿಗಳ ಜಗತ್ತು ಸಿನಿಮಾ ಜಗತ್ತಿಗಿಂತ ಒಂದಿಷ್ಟು ನೇರ. ಅಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದರೂ, ಆಡಿಷನ್ ಕೊಡುವ, ಅದರಲ್ಲಿ ಶಾರ್ಟ್ಲಿಸ್ಟ್ ಆಗುವ ಅವಕಾಶ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಸುಶಾಂತ್‌ನಂತವರು ಟಿವಿ ಧಾರಾವಾಹಿಗೆ ಹೇಳಿ ಮಾಡಿಸಿದಂಥವರು.

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ. ಇರ್ಫಾನ್, ನವಾಜುದ್ದಿನ್ ಸಿದ್ದಿಕಿ, ರಾಜ್‌ಕುಮಾರ್ ರಾವ್‌ನಂತವರೆಲ್ಲ ಪ್ರತಿಷ್ಠಿತ ಸಂಸ್ಥೆಗಳಿಂದ ಬಂದವರು. ಅವರು ಮುಂಬಯಿಗೆ ಕಾಲಿಟ್ಟಾಗ ಅವರನ್ನು ತರಬೇತುಗೊಳಿಸಲು ರೆಕಮೆಂಡ್ ಮಾಡಲು ಸೀನಿಯರ್‌ಗಳ ಒಂದು ತಂಡವಿರುತ್ತೆ. ಅದರಲ್ಲೂ ಅನೇಕರಿಗೆ ಸಿನೆಮಾ ಇಂಡಸ್ಟ್ರಿಯಲ್ಲಿ ನಿಲ್ಲಲಾಗುವುದಿಲ್ಲ.

ಇದು ಇಂಡಸ್ಟ್ರಿಯನ್ನು ಭೇದಿಸಲಾಗದವರ ಕಥೆಯಾದರೆ, ಭೇದಿಸಿದವರ ಕಥೆಯೇ ಬೇರೆ.

ತಮ್ಮ ಅದೃಷ್ಟ, ಲುಕ್, ಪ್ರತಿಭೆ ಮತ್ತು ಇತರ ಕಾಣದ ಕಾರಣಗಳಿಂದ ಇಂಡಸ್ಟ್ರಿಯಲ್ಲಿ ನೆಲೆಯೂರಿದರೂ, ಅವರ ಗೋಳು ಕಡಿಮೆಯಾಗುವುದಿಲ್ಲ. ಅದಕ್ಕೆ ಒಬ್ಬ ಸೀನಿಯರ್ ಹೇಳಿದ ಒಂದು ಮಾತನ್ನು ಉಲ್ಲೇಖಿಸುತ್ತೇನೆ; ಓಂ ಪುರಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು, ಅವರು ಚಾರ್ಲಿ ವಿಲ್ಸನ್ಸ್ ವಾರ್ ಎಂಬ ಹಾಲಿವುಡ್ ಚಿತ್ರದಲ್ಲಿ ವಿಶ್ವವಿಖ್ಯಾತ ನಟ ಟಾಮ್ ಹ್ಯಾಂಕ್ಸ್‌ನೊಂದಿಗೆ ಅಭಿನಯಿಸಿದರು. ಚಿತ್ರೀಕರಣದ ನಂತರ ಟಾಮ್ ಹ್ಯಾಂಕ್ಸ್ ಮನೆಗೆ ಅತಿಥಿಯಾಗಿ ಹೋಗಿದ್ದರಂತೆ ಓಮ್ ಪುರಿ. ಆದರೆ, ಓಂ ಪುರಿಯಂತಹ ನಟರಿಗೆ ಯಾವುದಾದರೂ ಬಾಲಿವುಡ್ ಸ್ಟಾರ್‌ಗಳ ಮನೆಗೆ ಆಹ್ವಾನವಿತ್ತಾ? ಇಲ್ಲ. ಅವರೆಂದೂ ಹೊರಗಿನವರೆ, ಕ್ಯಾರೆಕ್ಟರ್ ರೋಲ್‌ಗಳನ್ನು ಮಾಡುವವರು, ಆರ್ಟ್ ಸಿನೆಮಾ ಮಾಡುವವರು.

ಅದೇ ಸಮಯದಲ್ಲಿ, ಸಂಜಯ್ ಲೀಲಾ ಭನ್ಸಾಲಿ ಎಂಬ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅನಿಲ್ ಕಪೂರ್‌ನ ಮಗಳು ಮತ್ತು ರಿಷಿ ಕಪೂರ್‌ನ ಮಗನನ್ನು ಹೀರೊ, ಹೀರೊಯಿನ್ ಆಗಿ ಮಾಡುತ್ತಾನೆ. ಜೆ.ಪಿ.ದತ್ತಾ ಎಂಬ ಯಶಸ್ವಿ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅಮಿತಾಭ್ ಬಚ್ಚನ್‌ನ ಮಗ ಮತ್ತು ರಾಜ್‌ಕಪೂರ್‌ನ ಮೊಮ್ಮಗಳನ್ನು ಹೀರೊ, ಹೀರೋಯಿನ್ ಆಗುತ್ತಾರೆ. ಇದು ಮಾಮೂಲು. ಇಷ್ಟು ದೊಡ್ಡ ನಿರ್ದೇಶಕರಾದ ಇವರೇಕೇ ಸ್ಟಾರ್‌ಸನ್, ಸ್ಟಾರ್‌ಡಾಟರ್‌ಗಳನ್ನು ಲಾಂಚ್ ಮಾಡುತ್ತಾರೆ ಎಂದು ಈ ನಿರ್ದೇಶಕರ ಬಗ್ಗೆ ಸಿಟ್ಟು ಬರುತ್ತಿತ್ತು. ಆದರೆ ಅದು ವ್ಯವಸ್ಥೆ; ಅಲ್ಲಿ ಬದುಕುಳಿಯಬೇಕಾದರೆ, ಅಲ್ಲಿಯ ನಿಯಮಗಳನ್ನು ಪಾಲಿಸಲೇಬೇಕು. ಯಾವ ಹೀರೋ ಅಥವಾ ಹೀರೋಯಿನ್ ಮನಬಿಚ್ಚಿ ಮಾತನಾಡುವಂತಿಲ್ಲ. ಅವರ ಎಲ್ಲಾ ಸಂದರ್ಶನಗಳನ್ನು ಮೊದಲೇ ಪ್ಲಾನ್ ಮಾಡಲಾಗುತ್ತೆ; ಅವರು ಸಂದರ್ಶನಗಳನ್ನು ಕೊಡುವುದೂ ಅವರ ಚಿತ್ರಗಳ ಬಿಡುಗಡೆಗೆ ಮುನ್ನ ಮಾತ್ರ. ಹಾಗಾಗಿ ಕೇವಲ ‘ಪಾಸಿಟಿವ್’ ಆಗಿರುವ ವಿಷಯಗಳನ್ನೇ ಹೇಳಬೇಕಾಗುತ್ತೆ. ಸಂದರ್ಶನದ ಈ ನಿಯಮವನ್ನು ಮುರಿಯುವಂತಿಲ್ಲ. ಏಕೆಂದರೆ ಬಹಿಷ್ಕಾರ ಎಂಬುದು ತೂಗುವ ಕತ್ತಿ ಅವರ ತಲೆಯ ಮೇಲೆ ಸದಾಕಾಲ ತೂಗುತ್ತಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಬಂದ ಹೀರೋಗಳನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಸ್ಟಾರ್‌ಸನ್‌ಗಳೇ. ಸ್ವಾಭಾವಿಕವಾಗಿಯೇ ಹೊರಗಿನವರನ್ನು ಇವರು ಸಹಿಸಿಕೊಳ್ಳುವುದಿಲ್ಲ. ಸುಶಾಂತ್ ಸಿಂಗ್ ನಿಧನದ ನಂತರ ಬಂದ ಸಂತಾಪಗಳ ಮಹಾಪೂರವನ್ನು ನೋಡಿ ಸಿಟ್ಟಿಗೆದ್ದು, ಚಿತ್ರರಂಗದ ಹಿಪಾಕ್ರಸಿಯನ್ನು ತೋರಿಸಿ ಇಷ್ಟೆಲ್ಲ ಸುಳ್ಳು ಹೇಳುವ ಬದಲಿಗೆ ಒಂದು ದಿನದ ಮೌನಾಚರಣೆ ಆಚರಿಸಿ ಎಂದು ಹೇಳಿದ್ದೂ ಒಬ್ಬ ಸ್ಟಾರ್‌ಸನ್, ಸೈಫ್ ಅಲಿ ಖಾನ್.

#ಮೀಟೂ ಎಂಬ ಚಳವಳಿ ಇಂಡಸ್ಟ್ರಿಯಲ್ಲಿ ‘ಸ್ವಾಭಾವಿಕ’ವಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಬೆಳಕು ಚೆಲ್ಲಿತು. ಸುಶಾಂತ್ ಸಿಂಗ್ ಎಂಬ ಪ್ರತಿಭಾವಂತ ನಟನ ಸಾವು ಬಾಲಿವುಡ್ ನ ಕರಾಳ ಒಳಜಗತ್ತು, ಅದರ ಕಟ್ಟುನಿಟ್ಟಾದ ನಿಯಮಗಳು, ಶೋಷಣೆ ಮತ್ತು ಚಿತ್ರರಂಗವನ್ನು ಭೇದಿಸಿದ ಪ್ರತಿಭೆಗಳು ಎದುರಿಸಬೇಕಾದ ಸಮಸ್ಯೆಗಳನ್ನು ಬೆಳಕಿಗೆ ತರಬಹುದು ಎಂದು ಆಶಿಸಬಹುದಷ್ಟೆ.


ಇದನ್ನೂ ಓದಿ: ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...