Homeಮುಖಪುಟಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ.

- Advertisement -
- Advertisement -

ಸುಶಾಂತ್ ಸಿಂಗ್ ಎಂಬ ಬಾಲಿವುಡ್ ಪ್ರತಿಭೆಯ ಸಾವಿನ ಸುದ್ದಿ ಗೊತ್ತಾದ ಕೂಡಲೇ, ನನ್ನ ತಲೆಯಲ್ಲಿ ಬಂದಿದ್ದು ನನಗೂ ಮತ್ತು ಅವನ ನಡುವಿನ ಕಾಮನ್ ಫ್ರೆಂಡ್ಸ್. ಅವರನ್ನು ಕರೆ ಮಾಡಿ ಅವನ್ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಬೇಕೆನಿಸಿತು. ಆದರೆ, ನಾನು ಯಾರಿಗೂ ಫೋನ್ ಮಾಡಲಿಲ್ಲ. ಅವರೇನೇ ಹೇಳಿದರೂ, ಅದು ನನ್ನ ಕುತೂಹಲವನ್ನು ಒಂದಿಷ್ಟು ತಣಿಸುತ್ತಿತ್ತೇ ಹೊರತು ಅದರಿಂದ ಮತ್ತೇನೂ ಆಗುತ್ತಿದ್ದಿಲ್ಲ. ಸುಶಾಂತ್‌ನ ಸಾವಿನ ಸುತ್ತ ಏನಾಯಿತು, ಆ ನಟನ ಮಾನಸಿಕ ಸ್ಥಿತಿ ಹೇಗಿತ್ತು, ಯಾವ್ಯಾವ ಒತ್ತಡಗಳಿದ್ದವು, ಅದಕ್ಕೆ ಏನು ಮಾಡಬೇಕಾಗಿತ್ತು ಎಂದು ಹೇಳಲು ನಾನು ಮನೋವಿಜ್ಞಾನದ ತಜ್ಞನೂ ಅಲ್ಲ.

ಅದೇ ಇಂಡಸ್ಟ್ರಿಯಲ್ಲಿ ನಾನೂ ಸುಮಾರು ಒಂದೂವರೆ ದಶಕ ಕಳೆದಿದ್ದರಿಂದ, ಅಲ್ಲಿಯ ಒತ್ತಡಗಳೇನು ಎಂಬುದುನ್ನು ಖುದ್ದಾಗಿ ಅನುಭವಿಸಿದ್ದೇನೆ; ಅದನ್ನೇ ಹಂಚಿಕೊಳ್ಳುವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಂಬಯಿ ಎಂಬ ಮಾಯಾನಗರಿಗೆ ಹೋದೆ. ಒಂದಿಷ್ಟು ದಿನಗಳಲ್ಲಿ ಸ್ವಾಭಾವಿಕವಾಗಿಯೇ ನನ್ನ ಹಾಗೇ ಬೇರೆ ಬೇರೆ ಊರುಗಳಿಂದ ಬಂದವರು ಜೊತೆಗೂಡಿದೆವು. ಚಿತ್ರರಂಗ ಕಾರ್ಯನಿರ್ವಹಿಸುವ ವಿಧಾನವನ್ನು ಗ್ರಹಿಸದೇ ಹೋದ ಅನೇಕರು, ಮುಂಬಯಿಯನ್ನು, ಚಿತ್ರರಂಗವನ್ನೂ ಟೀಕಿಸಿ, ಸಿನಿಕರಾದರು. ಅದರಲ್ಲಿ ಹೆಚ್ಚಿನವರು ಯಾರಿಗೂ ಗೋಚರವಾಗದಂತೆ ಮರಳಿ ಮನೆಗೆ ಹೋದರೆ ಇನ್ನೂ ಕೆಲವರು ತಮ್ಮನ್ನು ತಾವು ಇಂಡಸ್ಟ್ರಿಗೆ ಅಳವಡಿಸಲು ಪ್ರಯತ್ನಿಸುತ್ತ ಇನ್ನಷ್ಟು ಕಾಲ ದೂಡಿದರು.

ನಾನು ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದ ಒಂದು ಪ್ರೊಡಕ್ಷನ್ ಹೌಸ್‌ನಲ್ಲಿ ಇನ್‌ಹೌಸ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಸೇರಿಕೊಂಡಿದ್ದೆ. ಮೊದಲ ಕೆಲ ತಿಂಗಳು ನಾನು ಆಯ್ಕೆ ಮಾಡುತ್ತಿದ್ದ ನಟರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು ನನ್ನ ಬಾಸ್‌ಗಳು. ನಿಧಾನವಾಗಿ ಅವರಿಗೆ ಎಂತಹ ‘ನಟ’ರು ಬೇಕೋ ಅಂತಹ ನಟರನ್ನೇ ಆಯ್ಕೆ ಮಾಡಿ, ಶಾರ್ಟ್ಲಿಸ್ಟ್ ಮಾಡಲು ಪ್ರಾರಂಭಿಸಿದೆ. ಆದರೂ, ನಾನು ಆಯಾ ನಟರನ್ನು ನಿಜವಾಗಿಯೂ ಯಾವ ಕಾರಣಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂಬುದು ನನಗೇ ಗೊತ್ತಿದ್ದಿಲ್ಲ. ಅದಕ್ಕೆ ಕಾರಣ ಹುಡುಕಲು ಪ್ರಾರಂಭಿಸಿದೆ. ಉತ್ತರ ಸಿಗುವುದು ತಡವಾಗಲಿಲ್ಲ. ನಾನು ಕಂಡುಕೊಂಡ ಉತ್ತರ: ನಾನು ನಟರನ್ನು ಆಯ್ಕೆ ಮಾಡುತ್ತಿದ್ದ ನಟರಲ್ಲಿ ಹೆಚ್ಚಿನವರು ಕಾರಿನಲ್ಲಿ ಬರುವವರಾಗಿದ್ದರು. ಮುಂಬಯಿಯ ಸೆಕೆಯಲ್ಲಿ ಬಸ್ಸೋ, ಟ್ರೇನೋ ಹಿಡಿದು, ಅಂಧೇರಿಗೆ ಬಂದು ಅಲ್ಲಿಂದ ಒಂದಿಷ್ಟು ದೂರ ನಡೆದುಕೊಂಡು ಬರುವವರ ಮುಖ ನೋಡಿ, ಅವರ ಆಡಿಷನ್ ಮಾಡಲು ‘ಮನಸ್ಸಾದರೂ ಹೇಗೆ ಆದೀತು’?

ನಾವುಗಳೂ ಮೊದಲ ಅನೇಕ ವರ್ಷ ಟ್ರೇನ್ ಮತ್ತು ಕಾಲ್ನಡಿಗೆಯನ್ನು ನಂಬಿಕೊಂಡವರೆ. ಎಲ್ಲೋ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾದೊಡನೇ ಆಡಿಷನ್‌ಗಾಗಿ ಸರದಿಯಲ್ಲಿ ಕಾದು, ‘ಇಲ್ಲ ನೀವು ಈ ರೋಲ್‌ಗೆ ಫಿಟ್ ಆಗುವುದಿಲ್ಲ’ ಎಂಬುದನ್ನು ಕೇಳಿಸಿಕೊಂಡಾಗ, ಇಂದಿನ ಸ್ಟ್ರಗಲ್ ಮಾಡಿದೆನಲ್ಲ ಎಂಬ ‘ಗುಡ್ ಫೀಲಿಂಗ್’ನೊಂದಿಗೆ ಮರಳುತ್ತಿದ್ದೆವು. ಕ್ರಮೇಣ, ನಾವು ಹೀರೋ ಆಗಲು ಸಾಧ್ಯವಿಲ್ಲ ಎಂಬ ತಥ್ಯ ಹೆಚ್ಚಿನವರಿಗೆ ಒಂದೆರಡು ವರ್ಷಗಳಲ್ಲಿ ತಿಳಿಯುತ್ತಿತ್ತು. ಹೇಗಾದರೂ ಮಾಡಿ ಯಾವುದೋ ಒಂದು ರೋಲ್ ಸಿಕ್ಕರೆ ಸಾಕು ಎಂದು ಸ್ಟ್ರಗಲ್ ಮುಂದುವರೆಯುತ್ತಿತ್ತು. ಇನ್ನಿತರರು ನಾಟಕದ ಗುಂಪಿಗೆ ಸೇರಿ, ಅಲ್ಲಿಯೇ ಮಾನಸಿಕ ನೆಲೆ ಕಂಡುಕೊಳ್ಳುತ್ತಿದ್ದರು.

ಇಂಡಸ್ಟ್ರಿಯಲ್ಲೂ ಜಾಹೀರಾತುಗಳ ಮತ್ತು ಧಾರಾವಾಹಿಗಳ ಜಗತ್ತು ಸಿನಿಮಾ ಜಗತ್ತಿಗಿಂತ ಒಂದಿಷ್ಟು ನೇರ. ಅಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದರೂ, ಆಡಿಷನ್ ಕೊಡುವ, ಅದರಲ್ಲಿ ಶಾರ್ಟ್ಲಿಸ್ಟ್ ಆಗುವ ಅವಕಾಶ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಸುಶಾಂತ್‌ನಂತವರು ಟಿವಿ ಧಾರಾವಾಹಿಗೆ ಹೇಳಿ ಮಾಡಿಸಿದಂಥವರು.

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ. ಇರ್ಫಾನ್, ನವಾಜುದ್ದಿನ್ ಸಿದ್ದಿಕಿ, ರಾಜ್‌ಕುಮಾರ್ ರಾವ್‌ನಂತವರೆಲ್ಲ ಪ್ರತಿಷ್ಠಿತ ಸಂಸ್ಥೆಗಳಿಂದ ಬಂದವರು. ಅವರು ಮುಂಬಯಿಗೆ ಕಾಲಿಟ್ಟಾಗ ಅವರನ್ನು ತರಬೇತುಗೊಳಿಸಲು ರೆಕಮೆಂಡ್ ಮಾಡಲು ಸೀನಿಯರ್‌ಗಳ ಒಂದು ತಂಡವಿರುತ್ತೆ. ಅದರಲ್ಲೂ ಅನೇಕರಿಗೆ ಸಿನೆಮಾ ಇಂಡಸ್ಟ್ರಿಯಲ್ಲಿ ನಿಲ್ಲಲಾಗುವುದಿಲ್ಲ.

ಇದು ಇಂಡಸ್ಟ್ರಿಯನ್ನು ಭೇದಿಸಲಾಗದವರ ಕಥೆಯಾದರೆ, ಭೇದಿಸಿದವರ ಕಥೆಯೇ ಬೇರೆ.

ತಮ್ಮ ಅದೃಷ್ಟ, ಲುಕ್, ಪ್ರತಿಭೆ ಮತ್ತು ಇತರ ಕಾಣದ ಕಾರಣಗಳಿಂದ ಇಂಡಸ್ಟ್ರಿಯಲ್ಲಿ ನೆಲೆಯೂರಿದರೂ, ಅವರ ಗೋಳು ಕಡಿಮೆಯಾಗುವುದಿಲ್ಲ. ಅದಕ್ಕೆ ಒಬ್ಬ ಸೀನಿಯರ್ ಹೇಳಿದ ಒಂದು ಮಾತನ್ನು ಉಲ್ಲೇಖಿಸುತ್ತೇನೆ; ಓಂ ಪುರಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು, ಅವರು ಚಾರ್ಲಿ ವಿಲ್ಸನ್ಸ್ ವಾರ್ ಎಂಬ ಹಾಲಿವುಡ್ ಚಿತ್ರದಲ್ಲಿ ವಿಶ್ವವಿಖ್ಯಾತ ನಟ ಟಾಮ್ ಹ್ಯಾಂಕ್ಸ್‌ನೊಂದಿಗೆ ಅಭಿನಯಿಸಿದರು. ಚಿತ್ರೀಕರಣದ ನಂತರ ಟಾಮ್ ಹ್ಯಾಂಕ್ಸ್ ಮನೆಗೆ ಅತಿಥಿಯಾಗಿ ಹೋಗಿದ್ದರಂತೆ ಓಮ್ ಪುರಿ. ಆದರೆ, ಓಂ ಪುರಿಯಂತಹ ನಟರಿಗೆ ಯಾವುದಾದರೂ ಬಾಲಿವುಡ್ ಸ್ಟಾರ್‌ಗಳ ಮನೆಗೆ ಆಹ್ವಾನವಿತ್ತಾ? ಇಲ್ಲ. ಅವರೆಂದೂ ಹೊರಗಿನವರೆ, ಕ್ಯಾರೆಕ್ಟರ್ ರೋಲ್‌ಗಳನ್ನು ಮಾಡುವವರು, ಆರ್ಟ್ ಸಿನೆಮಾ ಮಾಡುವವರು.

ಅದೇ ಸಮಯದಲ್ಲಿ, ಸಂಜಯ್ ಲೀಲಾ ಭನ್ಸಾಲಿ ಎಂಬ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅನಿಲ್ ಕಪೂರ್‌ನ ಮಗಳು ಮತ್ತು ರಿಷಿ ಕಪೂರ್‌ನ ಮಗನನ್ನು ಹೀರೊ, ಹೀರೊಯಿನ್ ಆಗಿ ಮಾಡುತ್ತಾನೆ. ಜೆ.ಪಿ.ದತ್ತಾ ಎಂಬ ಯಶಸ್ವಿ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅಮಿತಾಭ್ ಬಚ್ಚನ್‌ನ ಮಗ ಮತ್ತು ರಾಜ್‌ಕಪೂರ್‌ನ ಮೊಮ್ಮಗಳನ್ನು ಹೀರೊ, ಹೀರೋಯಿನ್ ಆಗುತ್ತಾರೆ. ಇದು ಮಾಮೂಲು. ಇಷ್ಟು ದೊಡ್ಡ ನಿರ್ದೇಶಕರಾದ ಇವರೇಕೇ ಸ್ಟಾರ್‌ಸನ್, ಸ್ಟಾರ್‌ಡಾಟರ್‌ಗಳನ್ನು ಲಾಂಚ್ ಮಾಡುತ್ತಾರೆ ಎಂದು ಈ ನಿರ್ದೇಶಕರ ಬಗ್ಗೆ ಸಿಟ್ಟು ಬರುತ್ತಿತ್ತು. ಆದರೆ ಅದು ವ್ಯವಸ್ಥೆ; ಅಲ್ಲಿ ಬದುಕುಳಿಯಬೇಕಾದರೆ, ಅಲ್ಲಿಯ ನಿಯಮಗಳನ್ನು ಪಾಲಿಸಲೇಬೇಕು. ಯಾವ ಹೀರೋ ಅಥವಾ ಹೀರೋಯಿನ್ ಮನಬಿಚ್ಚಿ ಮಾತನಾಡುವಂತಿಲ್ಲ. ಅವರ ಎಲ್ಲಾ ಸಂದರ್ಶನಗಳನ್ನು ಮೊದಲೇ ಪ್ಲಾನ್ ಮಾಡಲಾಗುತ್ತೆ; ಅವರು ಸಂದರ್ಶನಗಳನ್ನು ಕೊಡುವುದೂ ಅವರ ಚಿತ್ರಗಳ ಬಿಡುಗಡೆಗೆ ಮುನ್ನ ಮಾತ್ರ. ಹಾಗಾಗಿ ಕೇವಲ ‘ಪಾಸಿಟಿವ್’ ಆಗಿರುವ ವಿಷಯಗಳನ್ನೇ ಹೇಳಬೇಕಾಗುತ್ತೆ. ಸಂದರ್ಶನದ ಈ ನಿಯಮವನ್ನು ಮುರಿಯುವಂತಿಲ್ಲ. ಏಕೆಂದರೆ ಬಹಿಷ್ಕಾರ ಎಂಬುದು ತೂಗುವ ಕತ್ತಿ ಅವರ ತಲೆಯ ಮೇಲೆ ಸದಾಕಾಲ ತೂಗುತ್ತಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಬಂದ ಹೀರೋಗಳನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಸ್ಟಾರ್‌ಸನ್‌ಗಳೇ. ಸ್ವಾಭಾವಿಕವಾಗಿಯೇ ಹೊರಗಿನವರನ್ನು ಇವರು ಸಹಿಸಿಕೊಳ್ಳುವುದಿಲ್ಲ. ಸುಶಾಂತ್ ಸಿಂಗ್ ನಿಧನದ ನಂತರ ಬಂದ ಸಂತಾಪಗಳ ಮಹಾಪೂರವನ್ನು ನೋಡಿ ಸಿಟ್ಟಿಗೆದ್ದು, ಚಿತ್ರರಂಗದ ಹಿಪಾಕ್ರಸಿಯನ್ನು ತೋರಿಸಿ ಇಷ್ಟೆಲ್ಲ ಸುಳ್ಳು ಹೇಳುವ ಬದಲಿಗೆ ಒಂದು ದಿನದ ಮೌನಾಚರಣೆ ಆಚರಿಸಿ ಎಂದು ಹೇಳಿದ್ದೂ ಒಬ್ಬ ಸ್ಟಾರ್‌ಸನ್, ಸೈಫ್ ಅಲಿ ಖಾನ್.

#ಮೀಟೂ ಎಂಬ ಚಳವಳಿ ಇಂಡಸ್ಟ್ರಿಯಲ್ಲಿ ‘ಸ್ವಾಭಾವಿಕ’ವಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಬೆಳಕು ಚೆಲ್ಲಿತು. ಸುಶಾಂತ್ ಸಿಂಗ್ ಎಂಬ ಪ್ರತಿಭಾವಂತ ನಟನ ಸಾವು ಬಾಲಿವುಡ್ ನ ಕರಾಳ ಒಳಜಗತ್ತು, ಅದರ ಕಟ್ಟುನಿಟ್ಟಾದ ನಿಯಮಗಳು, ಶೋಷಣೆ ಮತ್ತು ಚಿತ್ರರಂಗವನ್ನು ಭೇದಿಸಿದ ಪ್ರತಿಭೆಗಳು ಎದುರಿಸಬೇಕಾದ ಸಮಸ್ಯೆಗಳನ್ನು ಬೆಳಕಿಗೆ ತರಬಹುದು ಎಂದು ಆಶಿಸಬಹುದಷ್ಟೆ.


ಇದನ್ನೂ ಓದಿ: ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...