Homeಮುಖಪುಟಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ಸುಶಾಂತ್‌ಸಿಂಗ್ ರಜಪೂತ್ ಸಾವು, ಕೇವಲ ಒಂದು ತಿಂಗಳಲ್ಲಿ ಬಾಲಿವುಡ್‌ಅನ್ನು ಬೆಚ್ಚಿಬೀಳಿಸಿದ ಐದನೇ ಘಟನೆ. ತೆರೆಮೇಲೆ ಮಿಂಚಬೇಕಿದ್ದ ನಾಲ್ಕು ಪ್ರತಿಭೆಗಳು, ನೋಡ ನೋಡುತ್ತಿದ್ದಂತೆಯೇ ಆಗಸಕ್ಕೆ ಚಿಮ್ಮಿ ನಕ್ಷತ್ರಗಳಾಗಿ ಮಿನುಗುತ್ತಿವೆ.

- Advertisement -
- Advertisement -

ಸಮಸ್ಯೆ ಎದುರಾದಾಗ ಅದನ್ನ ಎದುರಿಸಿ ನಿಲ್ಲಬೇಕು.. ಗೆಲ್ಲಬೇಕು.. ಅದನ್ನ ಹೊರತು ಸಾವಿಗೆ ಶರಣಾಗೋದು ಪರಿಹಾರವಲ್ಲ.. ಹೀಗಂತ ಛಿಚ್ಚೋರೆ ಸಿನಿಮಾದ ತನ್ನ ಪಾತ್ರದ ಮೂಲಕ ಲಕ್ಷಾಂತರ ಜನರಿಗೆ ಸಂದೇಶ ಸಾರಿದ ಬಾಲಿವುಡ್ ನಟ ಸುಶಾಂತ್‌ಸಿಂಗ್  ರಜಪೂತ್. ಆದರೆ ಅವರೇ ನಿಜಜೀವನದಲ್ಲಿ ಕಷ್ಟಗಳನ್ನು ಎದುರಿಸಲಾಗದೇ, ಸೋಲನ್ನು ಒಪ್ಪಿಕೊಳ್ಳಲಾಗದೇ, ಭವಿಷ್ಯದ ಭಯದಲ್ಲಿ ನೇಣಿಗೆ ಶರಣಾಗಿದ್ದಾರೆ.

ಕೊರೊನಾ ಕಾಲ ನಿಜಕ್ಕೂ ದುರಂತಮಯ. ಬದುಕಿ ಬಾಳಬೇಕಿದ್ದವರನ್ನೆಲ್ಲಾ ಬಲಿ ಪಡೆಯುತ್ತಿದೆ.. ಕಳೆದ ಭಾನುವಾರ ಕನ್ನಡದ ಚಿರಂಜೀವಿ ಸರ್ಜಾ.. ವಯಸ್ಸಲ್ಲದ ವಯಸ್ಸಲ್ಲಿ ವಿಧಿಯಾಟಕ್ಕೆ ಸೋತು ಉಸಿರು ಚೆಲ್ಲಿದರು.. ಈ ವಾರ ಅದೇ ಸಮಯಕ್ಕೆ ಸುಶಾಂತ್‌ಸಿಂಗ್ ರಜಪೂತ್ ಬಾಲಿವುಡ್‌ನ ಸ್ಫುರದ್ರೂಪಿ.. 34 ವರ್ಷದ ಯುವ ನಟ ಬಿ-ಟೌನ್‌ನ ಎಮರ್ಜಿಂಗ್ ಸ್ಟಾರ್. ಇಂತಹ ಈ ನಟ ವಯಸ್ಸಲ್ಲದ ವಯಸ್ಸಲ್ಲಿ ಸಾವಿನ ಮನೆಯ ಬಾಗಿಲು ತಟ್ಟಿದ್ದಾನೆ. ಬಾಳಿ ಬೆಳಗಬೇಕಾದವನು ಪಯಣದ ಅರ್ಧಕ್ಕೇ ಸಾಕೆಂದು ಹೊರಟಿದ್ದಾನೆ.

ಸುಶಾಂತ್‌ಸಿಂಗ್ ರಜಪೂತ್ ಬಿಹಾರದ ಪಾಟ್ನಾ ಮೂಲದವನು. ಕಲಾವಿದನಾಗಬೇಕು ಅಂತ ಮಾಯನಗರಿ ಮುಂಬೈಗೆ ಕಾಲಿಟ್ಟು, ಕಿರುತೆರೆ ಧಾರಾವಾಹಿ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡನು.. ಪವಿತ್ರ ರಿಶ್ತಾ ಧಾರಾವಾಹಿ ಸುಶಾಂತ್‌ನನ್ನ ಭಾರತದಾದ್ಯಂತ ಮನೆ ಮನೆಗೂ ತಲುಪಿಸಿತ್ತು. ಕೆಲವೇ ವರ್ಷಗಳಲ್ಲಿ ಕಿರುತೆರೆಯಲ್ಲಿ ಸೂಪರ್ ಸ್ಟ್ಟಾರ್ ಆದ್ರು ಸುಶಾಂತ್. ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವಾಗಲೇ, ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕನಾಗಿಯೂ ಜನಮನ ಸೆಳೆದ ಸುಶಾಂತ್, ಅದ್ಭುತ ಡ್ಯಾನ್ಸರ್ ಸಹ ಆಗಿದ್ದರು. ಇನ್ನು ನೋಡಿದ ತಕ್ಷಣ ಹೀರೋ ಮೆಟೆರಿಯಲ್ಲು ಅನಿಸಿಕೊಳ್ಳೋ ಸ್ಫುರದ್ರೂಪ, ಅದ್ಭುತ ಮೈಕಟ್ಟು ಸುಶಾಂತ್‌ಗೆ ಬಾಲಿವುಡ್ ಚಿತ್ರರಂಗ ರೆಡ್ ಕಾರ್ಪೆಟ್ ಹಾಸಿ ಕರೆಯುವಂತೆ ಮಾಡ್ತು. ಅದರಂತೆ 2013ರಲ್ಲಿ ಕಾಯ್ ಪೋಚೆ ಸಿನಿಮಾ ಮೂಲಕ ನಾಯಕ ನಟನಾಗಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.

ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ ಸುಶಾಂತ್, ಅದ್ಭುತ ನಟನೆಯನ್ನ ನೀಡಿದ್ದ. ಆ ನಂತರ ಈ ಚೆಲುವ ಹಿಂತಿರುಗಿ ನೋಡಲೇ ಇಲ್ಲ.. ಸಾಲು ಸಾಲು ಸಿನಿಮಾಗಳು ಸುಶಾಂತ್‌ನನ್ನ ಅರಸಿಬಂದವು.. ಅದರಲ್ಲೂ ಧೋನಿ ಜೀವನಾಧರಿತ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಸುಶಾಂತ್ ಕೆರಿಯರ್‌ನ ಟರ್ನಿಂಗ್ ಪಾಯಿಂಟ್. ಎಂ.ಎಸ್.ಧೋನಿಯಾಗಿ ಮನೋಜ್ಞ ಅಭಿನಯ ನೀಡಿದ್ದ ಸುಶಾಂತ್, ಧೋನಿ ಸಿನಿಮಾದಲ್ಲಿನ ಆತನ ನಟನೆ ನೋಡುವಾಗ, ನಿಜವಾಗಿಯೂ ಧೋನಿಯನ್ನೇ ತೆರೆಮೇಲೆ ನೋಡ್ತಿದ್ದಿವೆನೋ ಎಂಬಂತೆ ಪಾತ್ರವನ್ನ ಆವರಿಸಿಕೊಂಡಿದ್ದ.. ತನ್ನದೇ ಆದ ಸ್ಟೈಲ್‌ನಲ್ಲಿ ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್, ಮ್ಯಾನರಿಸಂನಿಂದ ದಿನ ಬೆಳಗಾಗೋ ಅಷ್ಟರಲ್ಲಿ ಸುಶಾಂತ್ ಸೂಪರ್ ಸ್ಟಾರ್ ಆಗಿ ಹೋಗಿದ್ದ.. ಎಷ್ಟೋ ಅಭಿಮಾನಿಗಳು ಸುಶಾಂತ್‌ನನ್ನ ಧೋನಿ ಪಾತ್ರದ ಮೂಲಕವೇ ಗುರುತಿಸುವಂತೆ ಛಾಪು ಮೂಡಿಸಿದ್ದ..

ಧೋನಿ ಸಿನಿಮಾದ ನಂತರ ಸುಶಾಂತ್ ಬದುಕು ಬದಲಾಗಿ ಹೋಗಿತ್ತು.. ದೊಡ್ಡ ದೊಡ್ಡ ಬಜೆಟ್‌ನ ಕಮರ್ಷಿಯಲ್ ಸಿನಿಮಾಗಳು ಸುಶಾಂತ್‌ನ ಆಧರಿಸಿ ನಿರ್ಮಾಣವಾದವು.. ತೆಲುಗಿನ ದೊಡ್ಡ ಸಿನಿಮಾ ಮಗಧೀರ ಬಾಲಿವುಡ್‌ಗೆ ಸುಶಾಂತ್ ನಟನೆಯಲ್ಲಿ ರಿಮೇಕ್ ಆಯ್ತು. ರಾಬ್ತಾ ದೊಡ್ಡ ಮಟ್ಟದ ಯಶಸ್ಸು ಗಳಿಸದಿದ್ದರೂ, ಬಿಡುಗಡೆಗೂ ಮುಂಚೆ ಸಾಕಷ್ಟು ಸೌಂಡ್ ಮಾಡ್ತು.. ಹಾಗೆ ಸುಶಾಂತ್‌ಗೆ ಕೇದಾರ್ನಾಥ್ ಸಿನಿಮಾ ಸಹ ದೊಡ್ಡ ಹೆಸರು ತಂದುಕೊಡ್ತು… ಬಾಕ್ಸಾಫಿಸ್‌ನಲ್ಲಿ ಈ ಸಿನಿಮಾ ಅನಿರೀಕ್ಷಿತ ಯಶಸ್ಸು ಗಳಿಸ್ತು. ಕಳೆದ ವರ್ಷ ಸುಶಾಂತ್ ನಟನೆಯಲ್ಲಿ ಛಿಚ್ಚೋರೆ ಸಿನಿಮಾ ಬಿಡುಗಡೆಯಾಯ್ತು.. ಈ ಸಿನಿಮಾ ಸಹ ಸೂಪರ್‌ ಹಿಟ್ ಎನಿಸಿಕೊಳ್ತು.. ಬಾಕ್ಸಾಫಿಸ್‌ನಲ್ಲಿ ನೂರು ಕೋಟಿ ಹಣ ಗಳಿಸೋ ಮೂಲಕ ಸುಶಾಂತ್‌ಗೆ ಸ್ಟಾರ್ ಪಟ್ಟ ತಂದುಕೊಡ್ತು.. ಸುಶಾಂತ್ ಒಬ್ಬ ಅದ್ಭುತ ನಟ ಅನ್ನೋದ್ರಲ್ಲಿ ಅನುಮಾನನೇ ಇಲ್ಲ.. ಯಾವುದೇ ಪಾತ್ರಕ್ಕೂ ನ್ಯಾಯ ಸಲ್ಲಿಸಬಲ್ಲ ಛಾತಿ ಸುಶಾಂತ್‌ರಲ್ಲಿತ್ತು.. ಆದರೆ ರಿಯಲ್ ಲೈಫ್ ಕ್ಯಾರೆಕ್ಟರ್‌ನ ಅದ್ಬುತ ಮಾಡೋದ್ರಲ್ಲಿ ಸುಶಾಂತ್ ವಿಫಲನಾಗಿದ್ದ..

ಈ ಸಾವು ನ್ಯಾಯವೇ?

ಸಿನಿಮಾ ಸೆಲೆಬ್ರಿಟಿಗಳಿಗೆ, ಅದ್ರಲ್ಲೂ ಸ್ಟಾರ್ ಪಟ್ಟಕ್ಕೇರಿರುವ ಹೀರೋಗಳಿಗೆ ಎಂತಹಾ ಸಮಸ್ಯೆ ಇರಲು ಸಾಧ್ಯ. ಕೈತುಂಬಾ ದುಡ್ಡು, ನೇಮ್, ಫೇಮ್ ಎಲ್ಲವೂ ಇರುತ್ತಲ್ಲಾ ಅನ್ನೋರೇ ಹೆಚ್ಚು. ಆದ್ರೆ ಈ ಸೆಲೆಬ್ರಿಟಿ ಸ್ಟೇಟಸ್, ಸ್ಟಾರ್ ಪಟ್ಟವೇ ಕೆಲವೊಮ್ಮೆ ಜೀವಕ್ಕೆ, ಜೀವನಕ್ಕೆ ಮುಳುವಾಗುತ್ತವೆ. ಬಾಲಿವುಡ್‌ನಲ್ಲಿ ಭವ್ಯ ಭವಿಷ್ಯ ನಿರ್ಮಿಸಿಕೊಳ್ಳುತ್ತಿದ್ದಾಗ, 34ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟಕ್ಕೇರಿದಾತ, ಏಳು ವರ್ಷಗಳಲ್ಲಿ 11 ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದಾತ, ತನ್ನ ನಟನೆಯ ಮೂಲಕವೇ ಭಾರತದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾತ, ಒಬ್ಬ ನಟನಿಗೆ ಇನ್ನೆಂತಹಾ ಸಮಸ್ಯೆ ಇರಬಹುದು? ಕೋಟ್ಯಂತರ ಜನರ ಕನಸನ್ನು, ತಾನು ನನಸು ಮಾಡಿಕೊಂಡು ಜೀವಿಸುತ್ತಿದ್ದಾತ ನಟನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಸಂಕಷ್ಟ ಎದುರಾಗಿರಬಹುದು?

ಬಾಲಿವುಡ್ ನಟ ಸುಶಾಂತ್‌ಸಿಂಗ್  ರಜಪೂತ್ ಸಾವು ಇಂತಹ ನೂರೆಂಟು ಪ್ರಶ್ನೆಗಳನ್ನು ಮೂಡಿಸಿದೆ. ಆದರೆ ಕೊರೊನಾ ಕಾಲದಲ್ಲೇ ಯಾರಿಗೇನೂ ಹೇಳದೇ, ತಮ್ಮ ಪಾಡಿಗೆ ತಾವು ಹೊರಟ ಸುಶಾಂತ್‌ರಿAದ ಮಾತ್ರ ಯಾವುದಕ್ಕೂ ಉತ್ತರವಿಲ್ಲ. ಉತ್ತರ ಅಂದ್ರೆ ಅದೊಂದೇ, ಹಾಸಿಗೆ ಮೇಲೆ ಮಲಗಿರುವ ಅವರ ನಿಶ್ಚಲ ದೇಹ. ಬಾಲಿವುಡ್ ಮೂಲಗಳ ಪ್ರಕಾರ ಸುಶಾಂತ್‌ಸಿಂಗ್  ರಜಪೂತ್ ಕೆಲ ತಿಂಗಳಿನಿAದ ಮಾನಸಿಕ ಖಿನ್ನತೆ, ಅರ್ಥಾತ್ ಡಿಪ್ರೆಷನ್ನಿಂದ ಬಳಲುತ್ತಿದ್ದರಂತೆ. ಅದಕ್ಕೆ ಪ್ರಮುಖ ಕಾರಣ ಕಳೆದ ವರ್ಷ ಛಿಛೋರೆ ಹಾಗೂ ಸೋನ್ಚಿಡಿಯಾ ಸಿನಿಮಾಗಳಲ್ಲಿ ಮಿಂಚಿದ್ದ ಅವರ ಬಳಿ ಈಗ ಅವಕಾಶಗಳೇ ಇರಲಿಲ್ಲ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಪ್ರತಿಭಾನ್ವಿತ ನಟ, ಬಾಲಿವುಡ್‌ನಲ್ಲಿ ದೊಡ್ಡ ಸೂಪರ್‌ಸ್ಟಾರ್ ಆಗುವ ಕನಸು ಕಂಡಿದ್ದ ಆಕ್ಟರ್ ಸುಶಾಂತ್. ಅವರು ನಟಿಸಬೇಕಿದ್ದ ಡ್ರೈವ್ ಎಂಬ ಸಿನಿಮಾ ಬಜೆಟ್ ಕಾರಣದಿಂದಾಗಿ ಅರ್ಧಕ್ಕೇ ನಿಂತಿತ್ತು. ಚಂದಾಮಾಮಾ ದೂರ್ ಕೇ ಎಂಬ ಅನೌನ್ಸ್ ಆಗಿದ್ದ ಮತ್ತೊಂದು ಸಿನಿಮಾ ಶುರುನೇ ಆಗಲಿಲ್ಲ. ದಿಲ್ ಬೇಚಾರಾ ಎಂಬ ಚಿತ್ರವನ್ನು ಹೊರತುಪಡಿಸಿದ್ರೆ ಸುಶಾಂತ್‌ಗೆ ಮುಂದೇನು ಅನ್ನೋ ಪ್ರಶ್ನೆಗೆ ಉತ್ತರವಿರಲಿಲ್ಲ.

ಇನ್ನು ನನ್ನ ಕರಿಯರ್ ಮುಗಿದೇಹೋಯ್ತು ಎಂಬ ಆತಂಕದಲ್ಲಿದ್ದ ಅದೇ ಯೋಚನೆಯಲ್ಲಿ ಸುಶಾಂತ್ ಕೆಲ ತಿಂಗಳಿನಿಂದ ಡಿಪ್ರೆಷನ್‌ಗೂ ಜಾರಿದ್ದರು ಎನ್ನಲಾಗಿದೆ. ವಿನಾಕಾರಣ ಸಿಟ್ಟಾಗಿಬಿಡುತ್ತಿದ್ದ ಅವರು ಕೆಲ ಚಿತ್ರತಂಡದವರ ಜತೆ ಜಗಳ ಕೂಡ ಆಡಿದ್ದರಂತೆ. ಇನ್ನು ಚಾಲ್ತಿಯಲ್ಲಿಲ್ಲ ಅನ್ನೋ ಕಾರಣಕ್ಕೆ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಸುಶಾಂತ್‌ಗೆ ನಾಟ್ ರೀಚೆಬಲ್ ಆಗಿದ್ದರು ಎನ್ನಲಾಗಿದೆ. ಈ ಎಲ್ಲಾ ಹತಾಶೆಗಳಿಂದ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರಂತೆ.

ಇಷ್ಟು ಸಾಲದು ಎಂಬಂತೆ ಕಳೆದ ಎರಡೂವರೆ ತಿಂಗಳಿನಿಂದ ಕರೊನಾದಿಂದಾಗಿ ಲಾಕ್‌ಡೌನ್ ಘೋಷಿಸಿದ್ದು ಗೊತ್ತೇಯಿದೆ. ಅಲ್ಲಿಗೆ ಮನೆಯಲ್ಲೇ ಮತ್ತಷ್ಟು ಒಂಟಿಯಾಗಿದ್ದಾರೆ. ಅಪ್ಪ ದೂರದ ಪಾಟ್ನಾದಲ್ಲಿದ್ದರೆ, ಮುಂಬೈನ ಮನೆಯಲ್ಲಿ ಸುಶಾಂತ್ ಒಬ್ಬರೇ ಆಗಿದ್ದಾರೆ. ಮೊದಲೇ ಕೆಲಸವಿಲ್ಲ ಎಂಬ ಡಿಪ್ರೆಷನ್ ಅದರ ಜತೆಗೆ ಒಂಟಿತನ, ಅವರನ್ನು ಮತ್ತಷ್ಟು ಘಾಸಿಯಾಗಿಸಿದೆ. ಇನ್ನು ಸುಶಾಂತ್ ಅವರು ತುಂಬಾ ಡಿಸ್ಟರ್ಬ್ ಆಗಿದ್ದರು ಅನ್ನೋಕೆ ಅವರ ಸೋಷಿಯಲ್ ಮೀಡಿಯಾದಲ್ಲಿ ಅವರ ಅನುಪಸ್ಥಿತಿಯೇ ಸಾಕ್ಷಿ. ಲಾಕ್ಡೌನ್ ಸಮಯದಲ್ಲಿ ಎಲ್ಲ ಸೆಲೆಬ್ರಿಟಿಗಳೂ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆದರೆ ಸುಶಾಂತ್ ಅಲ್ಲೂ ಮೌನವಾಗಿದ್ದರು. ಅವರು ಟ್ವಿಟರ್‌ನಲ್ಲಿ ಕೊನೆಯ ಬಾರಿಗೆ ಪೋಸ್ಟ್ ಮಾಡಿರೋದು 6 ತಿಂಗಳ ಹಿಂದೆ. ಅದೂ 2019ರ ಡಿಸೆಂಬರ್‌ನಲ್ಲಿ. ಇನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಕೊನೆಯ ಪೋಸ್ಟ್ ಇದೇ ಜೂನ್ 3ರಂದು. 2002ರಲ್ಲಿ ಮರಣವನ್ನಪ್ಪಿದ್ದ ತಮ್ಮ ತಾಯಿಯನ್ನು ನೆನೆದು ಅವರ ಫೋಟೋ ಶೇರ್ ಮಾಡಿದ್ದರು ಸುಶಾಂತ್.

ಸುಶಾಂತ್‌ಸಿಂಗ್ ರಜಪೂತ್ ಸಾವು, ಕೇವಲ ಒಂದು ತಿಂಗಳಲ್ಲಿ ಬಾಲಿವುಡ್‌ಅನ್ನು ಬೆಚ್ಚಿಬೀಳಿಸಿದ ಐದನೇ ಘಟನೆ. ತೆರೆಮೇಲೆ ಮಿಂಚಬೇಕಿದ್ದ ನಾಲ್ಕು ಪ್ರತಿಭೆಗಳು, ನೋಡ ನೋಡುತ್ತಿದ್ದಂತೆಯೇ ಆಗಸಕ್ಕೆ ಚಿಮ್ಮಿ ನಕ್ಷತ್ರಗಳಾಗಿ ಮಿನುಗುತ್ತಿವೆ. ಅದರಲ್ಲಂತೂ ಸುಶಾಂತ್ ಅಕಾಲಿಕ ಮರಣ ಈ ಸಾವು ನ್ಯಾಯವೇ ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಪದೇ ಪದೇ ಕೇಳುವಂತೆ ಮಾಡಿದೆ.

ಕಳೆದ ಒಂದು ತಿಂಗಳಲ್ಲಿ ನಟ ಇರ್ಫಾನ್ ಖಾನ್, ರಿಶಿ ಕಪೂರ್, ಸಂಗೀತ ನಿರ್ದೇಶಕ ವಾಜಿದ್ ಖಾನ್ ಸಾವುಗಳು ಬಾಲಿವುಡ್‌ಗೆ ಬಿರುಗಾಳಿಯಂತೆ ಅಪ್ಪಳಿಸಿದ್ದವು. ಅದರ ಬೆನ್ನಲ್ಲೇ ಇದೇ ಜೂನ್ 9ರಂದು ಸುಶಾಂತ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮುಂಬೈನಲ್ಲೇ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಸಹ ಸುಶಾಂತ್ ಕೂಡ ಮೌನವಹಿಸಿದ್ದರು.

ಸೆಲೆಬ್ರಿಟಿಗಳ ಆತ್ಮಹತ್ಯೆಗೆ ಕಾರಣ ಹಲವು?

ಕೆಲ ದಿನಗಳ ಹಿಂದಷ್ಟೇ ಲಾಕ್‌ಡೌನ್‌ನಿಂದಾಗಿ ಕೆಲಸ ಸಿಗದೇ ಇಬ್ಬರು ಬಾಲಿವುಡ್ ನಟ, ನಟಿಯರು ಆತ್ಮಹತ್ಯೆಗೆ ಶರಣಾಗಿದ್ದರು. ಮನ್ಮೀತ್ ಗ್ರೇವಾಲ್ ಹಾಗೂ ಪ್ರೇಕ್ಷಾ ಮೆಹ್ತಾ, ಮುಂದೆ ನಮ್ಮ ಕಥೆ ಮುಗಿದೇ ಹೋಯ್ತು ಅನ್ನೋ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಾಲಿವುಡ್‌ನ ಲೆಜೆಂಡರಿ ನಟ ಗುರುದತ್ 1964ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾದಕ ಚೆಲುವೆ ಐಟಂ ಸ್ಪೆಷಲಿಸ್ಟ್ ಸಿಲ್ಕ್ ಸ್ಮಿತಾ ಕೂಡ ನೇಣಿಗೆ ಶರಣಾಗಿದ್ದರು. ಅದೇ ರೀತಿ ಹಲವಾರು ಕಾರಣಗಳಿಗೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. 2019ರಲ್ಲಿ ಬಾಲಿವುಡ್ ನಟ ಕುಶಾಲಿ ಪಂಜಾಬ್ ಕೂಡ ಡಿಪ್ರೆಷನ್ನಿಂದ ಆತ್ಮಹತ್ಯೆಗೆ ಶರಣಾಗಿದ್ದ. ಬಾಲಿವುಡ್ ಹಿರಿಯ ನಟ ಜೀತೇಂದ್ರರ ಸಂಬಂಧಿ ನಿತಿನ್ ಕಪೂರ್ 2017ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕನ್ನಡದಲ್ಲಿ ಮಂಜುಳಾ, ಕಲ್ಪನಾರಂತಹ ದೊಡ್ಡ ನಟಿಯರಿಂದ ಇತ್ತೀಚೆಗೆ ಪ್ರಾಣ ಕಳೆದುಕೊಂಡ ಕಿರುತೆರೆ ನಟಿ ಚಂದನಾವರೆಗೆ ಹಲವರು, ಪ್ರತ್ಯುಷಾ ಬ್ಯಾನರ್ಜೀ, ಸಾಯಿ ಪ್ರಶಾಂತ್, ಶಿಖಾ ಜೋಷಿ, ತಮಿಳು ನಟ ರಂಗನಾಥ್, ಜಿಯಾ ಖಾನ್, ಮಲಯಾಳಂ ನಟರಾದ ಶ್ರೀನಾಥ್ ಮತ್ತು ಸಂತೋಷ್ ಜೋಗಿ, ಕುಣಾಲ್ ಸಿಂಗ್, ಮಯೂರಿ, ಮೋಣಲ್ ನವಲ್.. ಹೀಗೆ ಸಾಗುತ್ತದೆ ಲಿಸ್ಟ್.


ಇದನ್ನೂ ಓದಿ: ಪತ್ರಿಕಾ ನೀತಿ ಧಿಕ್ಕರಿಸಿ ಸುಶಾಂತ್ ಮೃತದೇಹದ ಚಿತ್ರ ಪ್ರಕಟಣೆ ಸಮರ್ಥಿಸಿಕೊಂಡ ’ಗುಜರಾತ್ ಸಮಾಚಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...