Homeಮುಖಪುಟಸುಚಿತ್ರ ಫಿಲ್ಮ್‌ ಸೊಸೈಟಿ ಉಳಿವಿಗಾಗಿ ಮೌನಪ್ರತಿಭಟನೆ: ಕಾನೂನು ಸಮರಕ್ಕೆ ನಿರ್ಧಾರ

ಸುಚಿತ್ರ ಫಿಲ್ಮ್‌ ಸೊಸೈಟಿ ಉಳಿವಿಗಾಗಿ ಮೌನಪ್ರತಿಭಟನೆ: ಕಾನೂನು ಸಮರಕ್ಕೆ ನಿರ್ಧಾರ

- Advertisement -
- Advertisement -

ಭಾರತದ ಪ್ರತಿಷ್ಟಿತ ಫಿಲ್ಮ್‌ ಸೊಸೈಟಿಗಳಲ್ಲಿ ಒಂದಾದ ಇದೇ ವರ್ಷ ಸುವರ್ಣ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಸುಚಿತ್ರ ಫಿಲ್ಮ್‌ ಸೊಸೈಟಿಯ ಉಳಿವಿಗಾಗಿ ಚಲನಚಿತ್ರ ಕ್ಷೇತ್ರದ ಗಣ್ಯರು, ಸಾಹಿತಿಗಳು, ಕಲಾವಿದರು ಬೆಂಗಳೂರಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸುಚಿತ್ರ ಸಿನಿಮಾ ಮತ್ತು ಕಲ್ಚರಲ್‌ ಅಕಾಡೆಮಿ, ಫಿಲ್ಮ್‌ ಸೊಸೈಟಿ ಎದುರು ಸೇರಿದ ಚಿತ್ರಕರ್ಮಿಗಳು, ಸೋನೆ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿದರು. ಸುಚಿತ್ರ ಫಿಲ್ಮ್‌‌ ಸೊಸೈಟಿಯನ್ನು ಹೊರದೂಡಲು ಸುಚಿತ್ರ ಟ್ರಸ್ಟ್‌ ಯತ್ನಿಸುತ್ತಿರುವುದನ್ನು ಖಂಡಿಸಿದರು.

ಫಿಲ್ಮ್‌ ಸೊಸೈಟಿಯ ಅಧ್ಯಕ್ಷರು ಟ್ರಸ್ಟ್ ಶಾಶ್ವತ ಸದಸ್ಯರಾಗಿಯೇ ಮುಂದುವರಿಯಬೇಕು. ಸುಚಿತ್ರ ಪ್ರಾಂಗಣದಲ್ಲಿ ನಡೆಸಲಾಗುವ ಚಟುವಟಿಕೆಗಳಲ್ಲಿ ಫಿಲ್ಮ್‌‌ ಸೊಸೈಟಿಗೆ ಪ್ರಾತಿನಿಧ್ಯ ಇರಬೇಕು. ಸುಚಿತ್ರ ಫಿಲ್ಮ್‌ ಸೊಸೈಟಿಯ ಕಾರ್ಯಕಾರಿ ಸದಸ್ಯರುಗಳೊಂದಿಗೆ ಸೇರಿ ಸಭೆ ನಡೆಸಿ ಬಾಡಿಗೆ ದರ ವಿಧಿಸುವುದರ ಬಗ್ಗೆ ಚರ್ಚೆ ನಡೆಸಬೇಕು. ಟ್ರಸ್ಟ್‌‌ ಹುಟ್ಟಿಗೆ ಕಾರಣವಾದ ಸುಚಿತ್ರ ಫಿಲ್ಮ್‌‌ ಸೊಸೈಟಿಯು ಯಾವುದೇ ಅಡೆ ತಡೆ ಇಲ್ಲದೇ ಸುಚಿತ್ರ ಪ್ರಾಂಗಣದಲ್ಲಿ ಚಟುವಟಿಕೆಗಳನ್ನು ನಡೆಸುವಂತಾಗಬೇಕು ಎಂದು ಆಗ್ರಹಿಸಲಾಯಿತು.

ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸುರೇಶ್ ಹೆಬ್ಳಿಕರ್‌, ಡಾ.ವಿಜಯಮ್ಮ, ವಿವೇಕ್‌ ಶ್ಯಾನ್‌ಭಾಗ್‌, ಸಿರಿಮನೆ ನಾಗರಾಜ್‌, ರವೀಂದ್ರನಾಥ್‌ ಗುರು, ಕೃಷ್ಣಮೂರ್ತಿ ಸಿ.ಆರ್‌., ದೀಪಾ ಗಣೇಶ್‌, ಬಿ.ಎಸ್‌.ಮನೋಹರ್‌, ಗಣೇಶ್‌ ಶೆಣೈ, ಮುರಳಿ ಪಿ.ಬಿ., ರಮೇಶ್‌ ಶಿವಮೊಗ್ಗ, ಸಿ.ಎಸ್.ಕೃಷ್ಣಪ್ರಸಾದ್‌, ಸುರೇಂದ್ರ, ವಿಮಲಾ, ವೀರಸಂಗಯ್ಯ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಹಾಜರಿದ್ದು, ಹೋರಾಟವನ್ನು ಬೆಂಬಲಿಸಿದರು. ಪ್ರತಿಭಟನೆಯನ್ನು ತಡೆಯಲು ಪೊಲೀಸರು ಯತ್ನಿಸಿರುವ ಘಟನೆಯೂ ನಡೆಯಿತು.

ಇದನ್ನೂ ಓದಿರಿ: ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

ಬೆಳಿಗ್ಗೆ 10.20ಕ್ಕೆ ಮೌನಪ್ರತಿಭಟನೆ ಆರಂಭವಾಯಿತು. 11.40 ಮಳೆ ಬರಲು ಶುರುವಾಯಿತು. ಆ ಸಂದರ್ಭದಲ್ಲಿ ಮಾತನಾಡಿದ ಫಿಲ್ಮ್‌ ಸೊಸೈಟಿಯ ಅಧ್ಯಕ್ಷರಾದ ಬಿ.ಸುರೇಶ್ ಅವರು, ಸುಚಿತ್ರ ಟ್ರಸ್ಟ್‌ ಮಾಡಿರುವ ಅನ್ಯಾಯವನ್ನು ಪ್ರಸ್ತಾಪಿಸಿದರು. ಟ್ರಸ್ಟ್‌ನ ಯಾವುದೇ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಲಿಲ್ಲ. ಕಾನೂನು ಸಮರ ನಡೆಸುವುದಾಗಿ ಬಿ.ಸುರೇಶ್ ತಿಳಿಸಿದರು.

ಬೆಂಗಳೂರಿನ ಚಾಮರಾಜಪೇಟೆಯ ಚಿಕ್ಕಕೋಣೆಯಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯು 1971ರಲ್ಲಿ ಕೆಲವು ಸಿನೆಮಾ ಆಸಕ್ತರು ಸೇರಿ ಆರಂಭಿಸಿದರು. ಸಿನೆಮಾ ಪ್ರದರ್ಶನಕ್ಕಾಗಿ ವಿವಿಧ ಚಿತ್ರಮಂದಿರಗಳನ್ನು ಹುಡುಕಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾಗ ಕರ್ನಾಟಕ ಸರ್ಕಾರವು ಬನಶಂಕರಿಯಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಒಂದು ಸ್ವಂತ ಚಿತ್ರಮಂದಿರವನ್ನು ಕಟ್ಟಿಕೊಳ್ಳಲು ಒಂದು ಸಿಎ ನಿವೇಶನವನ್ನು ಬಿಡಿಎ ಮುಖಾಂತರ ಗುತ್ತಿಗೆ ಆಧಾರದಲ್ಲಿ ಕೊಡಿಸಿತು. ನಿವೇಶನವನ್ನು ನೋಡಿಕೊಳ್ಳಲು ಒಂದು ಟ್ರಸ್ಟ್‌ ಮಾಡಿಕೊಳ್ಳಬೇಕೆಂದು ಸರ್ಕಾರ ಸೂಚಿಸಿತು. ಅದಕ್ಕನುಸಾರವಾಗಿ ಸುಚಿತ್ರ ಫಿಲ್ಮ್‌‌ ಸೊಸೈಟಿಯು 1979ರಲ್ಲಿ ಸುಚಿತ್ರ ಸಿನೆಮಾ ಅಕಾಡೆಮಿ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿತು.

ಅಕಾಡೆಮಿಯ ಪ್ರಾರಂಭದ ಟ್ರಸ್ಟಿಗಳು ಬಹುತೇಕ ಸುಚಿತ್ರ ಫಿಲ್ಮ್‌‌ ಸೊಸೈಟಿಯಿಂದ ಬಂದವರೇ ಆಗಿದ್ದರಿಂದ ಎರಡೂ ಸಂಸ್ಥೆಗಳು ಅಂದಿನಿಂದಲೂ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾ ಬಂದಿದ್ದವು. ಸುಚಿತ್ರ ಟ್ರಸ್ಟ್‌ ಹಾಗೂ ಸೊಸೈಟಿ ಕಾಲಕಾಲಕ್ಕೆ ಬದಲಾವಣೆಗಳನ್ನೂ ಕಂಡಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸುಚಿತ್ರ ಟ್ರಸ್ಟ್‌, ಸೊಸೈಟಿಯನ್ನು ಹೊರಗೆ ಇಡುವ ಪ್ರಯತ್ನಗಳನ್ನು ಮಾಡುತ್ತಿರುವುದು ವಿವಾದಗಳಿಗೆ ಕಾರಣವಾಗಿದೆ. ಟ್ರಸ್ಟ್‌ ಹುಟ್ಟಿಗೆ ಕಾರಣವಾದ ಸೊಸೈಟಿಯನ್ನೇ ಹೊರದಬ್ಬಲು ಯತ್ನಿಸಲಾಗುತ್ತಿದೆ ಎಂದು ಸೊಸೈಟಿಯ ಸದಸ್ಯರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಸುರೇಶ್‌, “2015ರವರೆಗೆ ಸುಚಿತ್ರ ಟ್ರಸ್ಟ್‌‌ನ ಆಡಳಿತಾತ್ಮಕ ವೆಚ್ಚವನ್ನು ಸುಚಿತ್ರ ಫಿಲ್ಮ್‌‌ ಸೊಸೈಟಿಯೇ ಭಾಗಶಃ ಭರಿಸುತ್ತಿದ್ದುದರಿಂದ ಅಕಾಡೆಮಿಯು ಫಿಲ್ಮ್‌ ಸೊಸೈಟಿಗೆ ಚಿತ್ರಪ್ರದರ್ಶನಕ್ಕೆ ಸಭಾಂಗಣದ ಬಾಡಿಗೆ ಕೇಳುತ್ತಿರಲಿಲ್ಲ. ಸುಚಿತ್ರ ಅಕಾಡೆಮಿಯು 2015ರಲ್ಲಿ ಪುರವಂಕರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು, ಆ ಸಂಸ್ಥೆಯಿಂದ ಸಿಎಸ್‌ಆರ್‌ ನಿಧಿ ಮೂಲಕ ದೇಣಿಗೆಯನ್ನು ಪಡೆದು ಕಟ್ಟಡವನ್ನು ನವೀಕರಣ ಮಾಡಿತು. ಆಗ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್‌‌ ಅಕಾಡೆಮಿ ಎಂದಿದ್ದ ಟ್ರಸ್ಟ್ ಹೆಸರನ್ನು ಪುರವಂಕರ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಎಂದು ಬದಲಾಯಿಸಲಾಯಿತು. ಆವರೆಗೆ ಟ್ರಸ್ಟ್‌‌ನ ಖಾಯಂ ಸದಸ್ಯತ್ವ ಇದ್ದ ಸುಚಿತ್ರ ಫಿಲ್ಮ್‌‌ ಸೊಸೈಟಿಯ ಅಧ್ಯಕ್ಷರನ್ನು ಆಹ್ವಾನಿತರು ಎಂದು ಬದಲಿಸಲಾಯಿತು. ಅಲ್ಲದೇ ಸೋಸೈಟಿಯ ಅಧ್ಯಕ್ಷರನ್ನು ಯಾವುದೇ ಸೂಚನೆ ಇಲ್ಲದೆ ಟ್ರಸ್ಟ್‌ನಿಂದ ಹೊರಹಾಕಲಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಬಿ.ಸುರೇಶ್‌‌ ಮಾತನಾಡಿದರು.

“ನಂತರದ ಬೆಳವಣಿಗೆಯಲ್ಲಿ ಸುಚಿತ್ರ ಟ್ರಸ್ಟ್ ಸಭಾಂಗಣಗಳ ಬಾಡಿಗೆ ದರ ಹೆಚ್ಚಳ ಮಾಡಿದೆ, ಸುಚಿತ್ರ ಫಿಲ್ಮ್‌‌ ಸೊಸೈಟಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಹಿಂಪಡೆದಿದೆ, ಇದರಿಂದಾಗಿ ಸಭಾಂಗಣದ ಬಾಡಿಗೆಯು ಮೂರು ಪಟ್ಟು ಹೆಚ್ಚಾಗುತ್ತದೆ. ಸುಚಿತ್ರ ಫಿಲ್ಮ್‌ ಸೊಸೈಟಿಯ ಕಚೇರಿ ನಡೆಸಲು ಪ್ರತಿ ತಿಂಗಳು 50,000 ರೂ.ಗಳನ್ನು ದೇಣಿಗೆಯಾಗಿ ನೀಡಬೇಕೆಂದು ತಿಳಿಸಲಾಗಿದೆ. ಸದಸ್ಯತ್ವದ ಹಣದಲ್ಲಿಯೇ ನಡೆಯಬೇಕಾದ ಫಿಲ್ಮ್‌‌ ಸೊಸೈಟಿಗೆ ಈ ದುಬಾರೀ ದರ ಆಘಾತ ತಂದಿದೆ.  ಕಳೆದ 9 ತಿಂಗಳಿನಿಂದ ಫಿಲ್ಮ್‌ ಸೊಸೈಟಿಗೆ ಸುಚಿತ್ರ ಪ್ರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲಾಗದಂತಾಗಿದೆ” ಎಂದು ಹೇಳಿದರು.

“2021ರ ಮಾರ್ಚ್ 24ರವರೆಗೆ ಹಳೆಯ ದರದಲ್ಲಿ ಬಾಡಿಗೆಯನ್ನು ಕೊಟ್ಟಿದ್ದರೂ, ಪರಿಷ್ಕೃತ ದರದಂತೆ ಬಾಡಿಗೆಯನ್ನು ನೀಡಲು ಮತ್ತು ಸುಚಿತ್ರ ಕಚೇರಿಯ ಬಳಕೆಗಾಗಿ ತಿಂಗಳಿಗೆ 50,000 ರೂ. ನಂತೆ ಜನವರಿ 21ರಿಂದ, ಒಟ್ಟು 7 ಲಕ್ಷ ರೂಪಾಯಿಗಳನ್ನು ಕೊಡಲು ಪತ್ರ ಮುಖೇನ ಒತ್ತಾಯಿಸಲಾಗುತ್ತಿದೆ. (ಇದರಲ್ಲಿ ಫಿಲ್ಮ್‌ ಸೊಸೈಟಿಯು ಈ ಹಿಂದೆ ಕೋವಿಡ್ ಸಂಕಷ್ಟದ ಕಾಲದಲ್ಲಿ ನೀಡಿದ 2 ಲಕ್ಷ ರೂ.ಗಳ ಮುಂಗಡ ಹಣವನ್ನು ಸಹ ಮುರಿದುಕೊಳ್ಳಲಾಗಿದೆ.) ಜೊತೆಗೆ ಎರಡು ಲಾಯರ್ ನೋಟೀಸ್ ಸಹ ಸುಚಿತ್ರ ಫಿಲ್ಮ್‌ ಸೊಸೈಟಿಗೆ ಸುಚಿತ್ರ ಟ್ರಸ್ಟ್ ಕಳುಹಿಸಿದೆ” ಎಂದು ಮಾಹಿತಿ ನೀಡಿದರು.

“ಸುಚಿತ್ರ ಫಿಲ್ಮ್‌ ಸೊಸೈಟಿಯನ್ನು ಟ್ರಸ್ಟ್‌ ಜಾಗದಲ್ಲಿ ನಡೆಸುತ್ತಿದ್ದೀರಿ. ತಿಂಗಳಿಗೆ 50,000 ರೂಪಾಯಿ ಕೊಡಬೇಕು ಎಂದು ಲಾಯರ್‌ ನೋಟೀಸ್ ಕಳುಹಿಸಲಾಗಿದೆ. ವರ್ಷಕ್ಕೆ 6,00,000 ರೂಪಾಯಿ ಬಾಡಿಗೆಯನ್ನು ಕಟ್ಟಬೇಕಾಗುತ್ತದೆ. ಸುಚಿತ್ರ ಫಿಲ್ಮ್‌ ಸೊಸೈಟಿಗೆ ವರ್ಷಕ್ಕೆ ಬರುವ ಆದಾಯವೇ ನಾಲ್ಕು ಲಕ್ಷ ಅಥವಾ ನಾಲ್ಕೂವರೆ ಲಕ್ಷ ರೂ. ದಾಟುವುದಿಲ್ಲ. ಬರುವ ಹಣವನ್ನೆಲ್ಲ ಬಾಡಿಗೆ ಕಟ್ಟಿದರೆ ಕಾರ್ಯಕ್ರಮಗಳನ್ನು ಮಾಡುವುದು ಹೇಗೆ?” ಎಂದು ಪ್ರಶ್ನಿಸಿದರು.


ಇದನ್ನೂ ಓದಿರಿ: ಅಪ್ಪು ಫೋಟೋ ಮುಂದೆ ಶಾಂಪೇನ್ ಸಂಭ್ರಮ: ಕ್ಷಮೆಯಾಚಿಸಿದ ನಿರ್ದೇಶಕ, ನಟ, ನಟಿಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...