Homeಕರ್ನಾಟಕಬಿಬಿಎಂಪಿ ಚುನಾವಣೆ ವಿಳಂಬ: ಅಧಿಕಾರಿಗಳದ್ದೇ ಆಡಳಿತ!

ಬಿಬಿಎಂಪಿ ಚುನಾವಣೆ ವಿಳಂಬ: ಅಧಿಕಾರಿಗಳದ್ದೇ ಆಡಳಿತ!

ಸರ್ಕಾರ ಸಾಂವಿಧಾನಿಕ ಪ್ರಕ್ರಿಯೆಯನ್ನು ಮಟ್ಟಹಾಕಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ದೂರಿವೆ.

- Advertisement -
- Advertisement -

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಅವಧಿ ಸೆ.10ಕ್ಕೆ ಕೊನೆಗೊಂಡಿದೆ. ನಿನ್ನೆಯಿಂದ ಅಧಿಕಾರಿಗಳ ಆಡಳಿತ ನಡೆಯುತ್ತಿದೆ. ಮುಂದಿನ ಅವಧಿಗೆ ಚುನಾವಣೆ ವಿಳಂಬವಾಗುವುದರ ಬಗ್ಗೆ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯದಲ್ಲಿವೆ.

ಇಷ್ಟೋತ್ತಿಗೆ ಬೆಂಗಳೂರು ರಾಜಕೀಯ ಚುನಾವಣ ಪ್ರಚಾರಗಳಿಗೆ ಸಾಕ್ಷಿಯಾಗುತ್ತಿತ್ತು. ಆದರೆ ನಗರದಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳು, ಮತದಾನವು ಕನಿಷ್ಠ ನಾಲ್ಕುರಿಂದ ಆರು ತಿಂಗಳು ವಿಳಂಬವಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಅತ್ಯಾಧುನಿಕ ಸರ್ಕಾರಿ ಶಾಲೆಗಳನ್ನುಉದ್ಘಾಟಿಸಿದ ಕೇರಳ ಸಿಎಂ ವಿಜಯನ್

ಗ್ರಾಮ ಪಂಚಾಯಿತಿ ಚುನಾವಣೆಯನ್ನು ರಾಜ್ಯ ಸರ್ಕಾರ ಈಗಾಗಲೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ, ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ ಸ್ಥಗಿತ ಮುಂದುವರೆದಿದೆ.

ಬಿಬಿಎಂಪಿ ಕೌನ್ಸಿಲ್ ಮತ್ತೆ ಚುನಾವಣೆಗಳನ್ನು ನಡೆಸುವವರೆಗೆ ಮೇಯರ್ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿತು. ಅದು ಎಲ್ಲಾ 198 ಕಾರ್ಪೊರೇಟರ್‌ಗಳಿಗೆ ಅವಧಿಯ ವಿಸ್ತರಣೆಯನ್ನು ನೀಡುತ್ತದೆ. ಆದರೆ ಸರ್ಕಾರ ಈ ಪ್ರಸ್ತಾಪವನ್ನು ಇನ್ನೂ ಒಪ್ಪಿಕೊಂಡಿಲ್ಲ. ಈ ವರ್ಷ ಚುನಾವಣೆ ನಡೆಸುವುದಿಲ್ಲ ಅಥವಾ ಯಾವಾಗ ಚುನಾವಣೆಗೆ ಸಿದ್ಧವಾಗಲಿದೆ ಎಂದು ರಾಜ್ಯ ಸರ್ಕಾರ ಬಹಿರಂಗವಾಗಿ ಹೇಳಿಲ್ಲ.

ಚುನಾವಣೆ ವಿಳಂಬದ ಬಗ್ಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಾರ್ಪೋರೇಟರ್‌ಗಳು ಕೋಪಗೊಂಡಿದ್ದು, ಸರ್ಕಾರ ಸಾಂವಿಧಾನಿಕ ಪ್ರಕ್ರಿಯೆಯನ್ನು ಮಟ್ಟಹಾಕಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಸೇವೆಗಳು ನಮ್ಮ ಭಾಷೆಯಲ್ಲಿಯೇ ಇರಲಿ: #ServeInMyLanguage ಟ್ವಿಟ್ಟರ್‌ ಟ್ರೆಂಡ್‌‌

“ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 224 ಕ್ಕೆ ಹೆಚ್ಚಿಸಬೇಕಿದೆ ಹಾಗಾಗಿ ವಿಳಂಬವಾಗುತ್ತಿದೆ ಎಂಬ ಕಾರಣವನ್ನು ಸರ್ಕಾರ ನೀಡುತ್ತಿದೆ. ಆದರೆ ವಿಳಂಬಕ್ಕೆ ಇದು ಮಾನ್ಯಮಾಡುವ ಕಾರಣವಲ್ಲ ”ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಹೇಳಿದರು.

ಚುನಾವಣೆಗಳು ಅತಿಯಾಗಿ ವಿಳಂಬವಾದರೆ ನ್ಯಾಯಾಲಯಕ್ಕೆ ಈ ವಿಷಯ ತಲುಪಬೇಕೆಂದು ರಾಜಕೀಯ ಮುಖಂಡರು ನಿರೀಕ್ಷಿಸಿದ್ದಾರೆ. 2010 ಮತ್ತು 2015 ಎರಡರಲ್ಲೂ ನ್ಯಾಯಾಲಯವು ಮಧ್ಯಪ್ರವೇಶಿಸಿ ರಾಜ್ಯವನ್ನು ಚುನಾವಣೆ ನಡೆಸಲು ಆದೇಶಿಸಿತು.

ಸದ್ಯ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ಅವರು ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿಸಮಿತಿಗಳ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು, ಮಳೆ ಆರ್ಭಟ, ಸಂಪನ್ಮೂಲ ಕೊರತೆ, ಪ್ರಗತಿ ಕಾಣದ ಕಾಮಗಾರಿಗಳು, ಕಸ ವಿಲೇವಾರಿ ಸಮಸ್ಯೆ, ಹೆಚ್ಚುತ್ತಿರುವ ಭ್ರಷ್ಟಾಚಾರ… ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ರಾಜಧಾನಿಯ ನಿವಾಸಿಗಳ ಮನಗೆಲ್ಲುವ ಸವಾಲು ಅಧಿಕಾರಿಗಳ ಮೇಲಿದೆ.


ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಚಾಲನೆ: ಅಕ್ಟೋಬರ್‌ನಿಂದ ಕೈಬೀಸಿ ಕರೆಯಲಿದೆ ಕೇರಳ..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ...