Homeಮುಖಪುಟಬೇಡಿಕೆ ಕುಸಿತ - ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ - ಐ.ವಿ.ಗೌಲ್

ಬೇಡಿಕೆ ಕುಸಿತ – ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ – ಐ.ವಿ.ಗೌಲ್

- Advertisement -
- Advertisement -

ಮೊನ್ನೆ ಬಂದ ಮೂರು ಸಿನಿಮಾಗಳು ತಲಾ 120 ಕೋಟಿ ರೂಪಾಯಿ ಗಳಿಸಿವೆ. ಹೀಗಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ಯಾವುದೇ ತೊಂದರೆ ಆಗಿಲ್ಲ.

ಯುವ ಜನರಿಗೆ ಹೊಸ ವಿನ್ಯಾಸದ ಬಟ್ಟೆಗಳು ಬೇಕಾಗಿವೆ ಆದ್ದರಿಂದ ಅವರು ಹೊಸ ಬಟ್ಟೆ ಖರೀದಿಸುತ್ತಿಲ್ಲ.
ಮಧ್ಯ ವಯಸ್ಕರು ಓಲಾ, ಊಬರ್‌ಗಳಲ್ಲಿ ಓಡಾಡುತ್ತಿರುವುದರಿಂದ ಕಾರು, ಬೈಕು, ಟ್ರಕ್ಕು, ಟ್ರ್ಯಾಕ್ಟರು ಮಾರಾಟವಾಗುತ್ತಿಲ್ಲ

ಜಿಎಸ್‍ಟಿ ಸರಿಯಿಲ್ಲ. ಅದರಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ತೆರಿಗೆ ಸಂಗ್ರಹ ಸರಿಯಾಗಬಹುದೆಂದು ಅಂದುಕೊಂಡಿದ್ದೆವು. ಆಗಲಿಲ್ಲ, ಸಾರಿ. ಆದರೆ ಏನು ಮಾಡುವುದು, ಅದು ದೇಶದ ಕಾನೂನು. ಪಾಲಿಸಲೇ ಬೇಕು.

ಇಂತಹ ಮುತ್ತಿನ ಹಾರದಂತಹ ಮಾತುಗಳು ನಮ್ಮ ಕಿವಿ ತುಂಬಿ ನಮಗೆ ಕರ್ಣಾನಂದವಾಗುತ್ತಿದೆ.
ಇವನ್ನು ಯಾರು ಯಾರಿಗೆ ಹೇಳಿದರು ಎನ್ನುವ ಪ್ರಶ್ನೆಗಳಿಗೆ ಪಾಸಿಂಗ್ ಮಾರ್ಕೂ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಒಟ್ಟಿನಲ್ಲಿ ಈಗ ಇಡೀ ದೇಶದ ತುಂಬ ಆರ್ಥಿಕ ಪರಿಸ್ಥಿತಿಯ ಸುದ್ದಿ. ಅರ್ಥದ ಸುದ್ದಿ ಹಾಗೂ ಅದರ ಅರ್ಥದ ಸುದ್ದಿ.
ಬರೀ ಅರ್ಥಾರ್ಥದ ಮಾತು.
ಯಾಕೆ?
ಹಿಗ್ಸ – ಬಾಸಾನ್ ಎಂಬ ಪರಮಾಣು ಭಾಗವನ್ನು, ದೇವ ಕಣ ಎಂದು ಕನ್ನಡ ಪತ್ರಿಕೆಗಳ ಭಾಷಾಂತರಕಾರರಿಂದ ಕರೆಯಲ್ಪಟ್ಟ ಅಣುವಿನ ತುಂಡಿನ ಬಗ್ಗೆ ಸಂಶೋಧಿಸಿದ ವಿಜ್ಞಾನಿ ಹಿಗ್ಸ ಅವರನ್ನು ಬ್ರಿಟಿಷ್ ಟಿವಿ ಚಾನಲ್ ಒಂದು ಮಾತಾಡಿಸಿತು.

ಈ ದೇವಕಣದ ಬಗ್ಗೆ ನೀವು ಸರಳ ಭಾಷೆಯಲ್ಲಿ 30 ಸೆಕೆಂಡುಗಳಲ್ಲಿ ಎಲ್ಲರೂ ತಿಳಿಯುವಂತೆ ಹೇಳಬಲ್ಲಿರಾ ಎಂದು ಸಂದರ್ಶಕ ಕೇಳಿದ.

`ಇಲ್ಲ. ಸಾಧ್ಯವಿಲ್ಲ` ಎಂದು ಅವರು ಹೇಳಿದರು. ಇಬ್ಬರೂ ನಕ್ಕರು.
ಈಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಯನ್ನು ಸರಳವಾಗಿ, ಎಲ್ಲರಿಗೂ ತಿಳಿಯುಂತೆ, ಕೆಲವೇ ಶಬ್ದಗಳಲ್ಲಿ ತಿಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಆರ್ಥಿಕ ತಜ್ಞರು ಇಲ್ಲ, ಸಾಧ್ಯವೇ ಇಲ್ಲ ಅಂತ ಹೇಳಬಹುದೇನೋ. ಪ್ರಶ್ನೆ ಕೇಳಿದವರು, ಉತ್ತರ ಕೊಟ್ಟವರು, ಇಬ್ಬರೂ ನಗಲಾರದೇ ಮಾತು ಮುಗಿಸಬಹುದೇನೋ.

ನಮ್ಮ ವಾರ್ಷಿಕ ಬೆಳವಣಿಗೆಯ ದರ ಕಡಿಮೆ ಆಗಿರುವುದಕ್ಕೂ, ನಿರುದ್ಯೋಗ ಬೆಳೆಯುತ್ತಿರುವುದಕ್ಕೂ, ಸಾಲ ಹೆಚ್ಚಾಗಿ, ಉತ್ಪನ್ನ ಕಡಿಮೆಯಾಗಿ ಷೇರು ಮಾರುಕಟ್ಟೆ ನಷ್ಟ ಅನುಭವಿಸುತ್ತಿರುವುದಕ್ಕೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲು ನಮ್ಮ ರಫ್ತು ಭಾಗೀದಾರಿಕೆ ಕಡಿಮೆ ಆಗುತ್ತಿರುವುದಕ್ಕೂ ಅನೇಕ ಕಾರಣಗಳಿರಬಹುದು.
ತಿಳಿದವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿರಬಹುದು. ತಮ್ಮ ವಾದವನ್ನು ಬೆಂಬಲಿಸಲು ಅವರು ತಮ್ಮದೇ ಆದ ಸಿದ್ಧಾಂತಗಳನ್ನು ನೆಚ್ಚಿಕೊಂಡಿರಬಹುದು.

ಅಂತಹ ಅನೇಕ ವಾದಗಳಲ್ಲಿ ಒಂದು `ಡಿಮಾಂಡ್ ಸ್ಲಂಪ್` ಅಥವಾ `ಬೇಡಿಕೆ ಕುಸಿತದ` ಸಿದ್ಧಾಂತ.
ಅದು ಸರಿಯೋ ತಪ್ಪೋ ಎನ್ನುವ ಮಾತಿಗೆ ಹೋಗದೇ ಇಲ್ಲಿ ನೋಡೋಣ.

ಇದರ ಸರಳಾರ್ಥವೆಂದರೆ ಜನರ ದುಡ್ಡು ಮಾರುಕಟ್ಟೆಯಲ್ಲಿ ಖರ್ಚಾಗುತ್ತಿಲ್ಲ. ಜನ ಖರೀದಿ ಮಾಡುತ್ತಿಲ್ಲ. ಇರಲಾರದವರಿಗೆ ದುಡ್ಡು ಹುಟ್ಟುತ್ತಿಲ್ಲ, ಇದ್ದವರಿಗೆ ಮುಂದೇನಾಗಬಹುದೋ ಎಂಬ ಆತಂಕದಿಂದ ಸುಮ್ಮನಿದ್ದಾರೆ. ಒಂದರಿಂದ ಶುರುವಾದ ಸೋಂಕು ಇನ್ನೊಂದಕ್ಕೆ ಹರಡುವಂತೆ, ಒಂದು ಕ್ಷೇತ್ರದ ಹಿಂಜರಿತ ಇನ್ನೊಂದು ಕ್ಷೇತ್ರಕ್ಕೆ ಹರಡಿ ಇಡೀ ದೇಶವನ್ನು ಆವರಿಸಿಕೊಂಡಿದೆ ಎನ್ನುವರಿದ್ದಾರೆ.
ಅವರ ಪ್ರಕಾರ ಇದರ ಮೂಲ ಕಾರಣಗಳು ಇವು.

ಮೊದಲನೇಯದಾಗಿ ದುಡಿಯುವ ಜನರ ಕೈಗೆ ಕೆಲಸ ಕೊಟ್ಟು ಸಂಪತ್ತು ಸೃಷ್ಟಿಸುವುದನ್ನು ಬಿಟ್ಟು ಬಂಡವಾಳ ಮೂಲಗಳು ನೌಕರರ ಸಂಖ್ಯೆಯನ್ನು ಕಮ್ಮಿ ಮಾಡಿ ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಏಕೈಕ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಸೃಷ್ಟಿಸಿದ್ದು.

ವಿಶ್ವವನ್ನೇ ಒಂದು ಮಾರುಕಟ್ಟೆ ಮಾಡುವ ಉದ್ದೇಶದಿಂದ ಸೃಜಿಸಲಾದ ವಿಶ್ವ ಬ್ಯಾಂಕು, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರದೇಶವಾರು ಮಾರುಕಟ್ಟೆ ಒಪ್ಪಂದಗಳು, ಇವೆಲ್ಲ ಸೇರಿ ಯಾವುದೇ ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಹೋದದ್ದು. ಈ ಗುಂಪುಗಳ ಕೆಲವು ಸದಸ್ಯರಾಷ್ಟ್ರಗಳ ಬಲಹೀನತೆಗಳು ಎಲ್ಲ ಸದಸ್ಯರನ್ನೂ, ಸದಸ್ಯರಲ್ಲದವರನ್ನೂ ಕಾಡಲು ಆರಂಭಿಸಿದ್ದು.

ಬ್ಯಾಂಕಿಂಗ್, ವಿಮೆ, ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಇತ್ಯಾದಿ ಕೆಲ ಕ್ಷೇತ್ರಗಳ ಸಂಸ್ಥೆಗಳ ಅತಿ ಮೌಲ್ಯೀಕರಣ ಓವರ್ ವ್ಯಾಲುಏಷನ್. ಇವುಗಳಿಗೆ ತಾವು ಅರಗಿಸಿಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಬಂಡವಾಳ ಹರಿದು ಬಂದು, ನಿರೀಕ್ಷಿತ ಲಾಭ ಅಥವಾ ಉತ್ಪನ್ನ ಬರದೇ ಹೋದದ್ದು
ಕೊಳ್ಳುಬಾಕುತನ ಅತಿಯಾಗಿ ಜನ ಖರೀದಿಸಲು ಸಾಧ್ಯವಿದ್ದಕ್ಕಿಂತ ಹೆಚ್ಚು ಉತ್ಪಾದನೆ ಆಗಿ ಸಾಮಾನುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗದೇ ಉಳಿದಿರುವುದು
ಇತ್ಯಾದಿ

ಇದರ ಉಪಾಯಗಳೇನು?
ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್, ಶ್ರೀನಿವಾಸ್ ರಾಘವನ್ ಮತ್ತು ಇತರರು ಮೊನ್ನೆ ಒಂದು ವಿಚಾರ ಸಂಕಿರಣದಲ್ಲಿ ಹೇಳಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಕ್ಷೇತ್ರದಲ್ಲಿ ಖರ್ಚನ್ನು ಹೆಚ್ಚಿಸಿ, ಸರಕಾರಿ ಉದ್ದಿಮೆಗಳನ್ನು ಚುರುಕಾಗಿಸಿ, ಉದ್ಯೋಗ ಖಾತ್ರಿ ಯಂತಹ ಯೋಜನೆಗಳಿಂದ ಹಳ್ಳಿಗಳ ಜನರ ಕೈಯಲ್ಲಿ ಹೆಚ್ಚಿನ ಹಣ ಹರಿಯುವಂತೆ ಮಾಡುವುದು, ಒಂದು ಉಪಾಯ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿ ಮುಂತಾದ ಕ್ಷೇತ್ರಗಳಲ್ಲಿ ಸರಕಾರಿ ಖರ್ಚನ್ನು ಹೆಚ್ಚಿಸುವುದು ಇನ್ನೊಂದು ಉಪಾಯ
ಭಾರತೀಯ ಅರ್ಥವ್ಯವಸ್ಥೆ ತೇಜಿ ಇರುವ ಚುರುಕಾದ, ಲಾಭ ಗಳಿಸಿಕೊಳ್ಳಬಲ್ಲಂತಹ ವ್ಯವಸ್ಥೆ ಎಂದು ಹೂಡಿಕೆದಾರರಿರಗೆ ಮನವರಿಕೆ ಮಾಡಿಕೊಡುವಂತಹ ಆತ್ಮ ವಿಶ್ವಾಸ ಹೆಚ್ಚಿಸುವ ಕ್ರಮ ಕೈಗೊಳ್ಳುವುದು ಇತ್ಯಾದಿ.

ಈ ನೆಲದ ಅರ್ಥಶಾಸ್ತ್ರಜ್ಞ ಡಾ. ಡಿ. ಎಂ ನಂಜುಂಡಪ್ಪ ನವರ ಮಾತಿನಂತೆ ಭಾರತದ ಎಲ್ಲಾ ಸಮಸ್ಯೆಗಳಿಗೆ ಇರುವ ಉಪಾಯಗಳು ಸರಳ. ಜನರ ದುಡಿಮೆಗೆ ತಕ್ಕ ಪ್ರತಿಫಲ ದೊರಕಬೇಕು, ಅವರು ಹೆಚ್ಚಿನ ಹಣ ಉಳಿಸಬೇಕು, ಹಾಗೂ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಕುಗ್ಗದಂತೆ ನೋಡುವುದು ಎಂಬ ಅವರ ಮಾತು ನಮ್ಮನ್ನು ಉಳಿಸೀತು.

ವಿಶ್ವ ಕಂಡ ಅತ್ಯಂತ ದೊಡ್ಡ ಆರ್ಥಿಕ ಹಿಂಜರಿತ ವೆನ್ನಲಾಗುವ ಗ್ರೇಟ್ ಡಿಪ್ರೆಷನ್ ಅಮೇರಿಕೆ ಯನ್ನು 1930ರ ದಶಕದಲ್ಲಿ ಕಾಡಿತು. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡ ದೇಶ ಇತರರ ಕಣ್ಣಲ್ಲಿ ಸಣ್ಣವರಾಗಬೇಕಾಗಿ ಬಂತು.
ಅದನ್ನು ನಿಭಾಯಿಸಿ ಅಮೇರಿಕೆಯ ಆರ್ಥಿಕತೆಯನ್ನೂ ಹಾಗೂ ಅದರೊಟ್ಟಿಗೆ ವಿಶ್ವದ ಆರ್ಥಿಕತೆಯನ್ನು ಸಂಭಾಳಿಸಿದ ನಾಯಕ ಎಂದು ಅಮೇರಿಕೆಯ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸವೆಲ್ಟ್ ನನ್ನು ಗುರುತಿಸಲಾಗುತ್ತದೆ.
ಅವನ ಒಂದು ಮಾತು ಇಲ್ಲಿ ನೆನಪಾಗುತ್ತದೆ.

ರೂಸವೆಲ್ಟ್ ಅವರು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ ಅಮೇರಿಕನ್ನರು ಖರೀದಿ ಮಾಡಬೇಕು. ಅವರ ಖರೀದಿ ಯೊಂದೇ ನಮ್ಮನ್ನು ಉಳಿಸಲು ಸಾಧ್ಯ ಎಂದರು. ಆಗ ಲಿಂಡಾ ಜೇಮ್ಸ್ ಎಂಬ ಪತ್ರಕರ್ತರೊಬ್ಬರು ಏನನ್ನು ಖರೀದಿಸಬೇಕು ಎಂದು ಕೇಳಿದರಂತೆ. `ಏನಾದರೂ ಆಗಬಹುದು` ಅಂತ ಅಧ್ಯಕ್ಷರು ಉತ್ತರಿಸಿದರಂತೆ. ಮರುದಿನ ಪತ್ರಿಕೆಗಳಲ್ಲಿ `ಬೈ ಎನಿಥಿಂಗ್. ದ್ಯಾಟ್ ಈಸ್ ದ ನ್ಯೂ ಡೀಲ್’ (`ಏನನ್ನಾದರೂ ಖರೀದಿಸಿ. ಅದೊಂದೇ ಉಪಾಯ`) ಎಂಬ ಶೀರ್ಷಿಕೆ ರಾರಾಜಿಸಿತ್ತಂತೆ.

ಅವರ ಈ ಮಾತಿನಿಂದಲೇ ಕೊಳ್ಳುಬಾಕತನದ ಪರಿ ಆರಂಭವಾಯಿತು ಎನ್ನುವವರೂ ಇದ್ದಾರೆ.

ಇಂದಿನ ಭಾರತದ ವಿಷಯಕ್ಕೆ ಬಂದರೆ ಏನಾದರೂ ಆಗಿ ಮಾರುಕಟ್ಟೆ ಚೇತರಿಸಿಕೊಂಡರೆ ಸಾಕು. ಏನಾದರೂ ಆಗಲಿ ಅನ್ನುವವರಿದ್ದಾರೆ. ಅಷ್ಟೊಂದು ಪರಾಕಾಷ್ಟೆ ಬೇಡ.

ಚೇತರಿಕೆ ಆಗಲಿ, ಅದರೊಂದಿಗೆ ಸ್ವಲ್ಪ ಕೂಳುಬಾಕತನ ಕಮ್ಮಿಯಾಗಲಿ ಅಂತಲೂ ಅನ್ನಿಸುತ್ತದೆ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...