Homeಮುಖಪುಟಬೇಡಿಕೆ ಕುಸಿತ - ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ - ಐ.ವಿ.ಗೌಲ್

ಬೇಡಿಕೆ ಕುಸಿತ – ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ – ಐ.ವಿ.ಗೌಲ್

- Advertisement -
- Advertisement -

ಮೊನ್ನೆ ಬಂದ ಮೂರು ಸಿನಿಮಾಗಳು ತಲಾ 120 ಕೋಟಿ ರೂಪಾಯಿ ಗಳಿಸಿವೆ. ಹೀಗಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ಯಾವುದೇ ತೊಂದರೆ ಆಗಿಲ್ಲ.

ಯುವ ಜನರಿಗೆ ಹೊಸ ವಿನ್ಯಾಸದ ಬಟ್ಟೆಗಳು ಬೇಕಾಗಿವೆ ಆದ್ದರಿಂದ ಅವರು ಹೊಸ ಬಟ್ಟೆ ಖರೀದಿಸುತ್ತಿಲ್ಲ.
ಮಧ್ಯ ವಯಸ್ಕರು ಓಲಾ, ಊಬರ್‌ಗಳಲ್ಲಿ ಓಡಾಡುತ್ತಿರುವುದರಿಂದ ಕಾರು, ಬೈಕು, ಟ್ರಕ್ಕು, ಟ್ರ್ಯಾಕ್ಟರು ಮಾರಾಟವಾಗುತ್ತಿಲ್ಲ

ಜಿಎಸ್‍ಟಿ ಸರಿಯಿಲ್ಲ. ಅದರಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ತೆರಿಗೆ ಸಂಗ್ರಹ ಸರಿಯಾಗಬಹುದೆಂದು ಅಂದುಕೊಂಡಿದ್ದೆವು. ಆಗಲಿಲ್ಲ, ಸಾರಿ. ಆದರೆ ಏನು ಮಾಡುವುದು, ಅದು ದೇಶದ ಕಾನೂನು. ಪಾಲಿಸಲೇ ಬೇಕು.

ಇಂತಹ ಮುತ್ತಿನ ಹಾರದಂತಹ ಮಾತುಗಳು ನಮ್ಮ ಕಿವಿ ತುಂಬಿ ನಮಗೆ ಕರ್ಣಾನಂದವಾಗುತ್ತಿದೆ.
ಇವನ್ನು ಯಾರು ಯಾರಿಗೆ ಹೇಳಿದರು ಎನ್ನುವ ಪ್ರಶ್ನೆಗಳಿಗೆ ಪಾಸಿಂಗ್ ಮಾರ್ಕೂ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಒಟ್ಟಿನಲ್ಲಿ ಈಗ ಇಡೀ ದೇಶದ ತುಂಬ ಆರ್ಥಿಕ ಪರಿಸ್ಥಿತಿಯ ಸುದ್ದಿ. ಅರ್ಥದ ಸುದ್ದಿ ಹಾಗೂ ಅದರ ಅರ್ಥದ ಸುದ್ದಿ.
ಬರೀ ಅರ್ಥಾರ್ಥದ ಮಾತು.
ಯಾಕೆ?
ಹಿಗ್ಸ – ಬಾಸಾನ್ ಎಂಬ ಪರಮಾಣು ಭಾಗವನ್ನು, ದೇವ ಕಣ ಎಂದು ಕನ್ನಡ ಪತ್ರಿಕೆಗಳ ಭಾಷಾಂತರಕಾರರಿಂದ ಕರೆಯಲ್ಪಟ್ಟ ಅಣುವಿನ ತುಂಡಿನ ಬಗ್ಗೆ ಸಂಶೋಧಿಸಿದ ವಿಜ್ಞಾನಿ ಹಿಗ್ಸ ಅವರನ್ನು ಬ್ರಿಟಿಷ್ ಟಿವಿ ಚಾನಲ್ ಒಂದು ಮಾತಾಡಿಸಿತು.

ಈ ದೇವಕಣದ ಬಗ್ಗೆ ನೀವು ಸರಳ ಭಾಷೆಯಲ್ಲಿ 30 ಸೆಕೆಂಡುಗಳಲ್ಲಿ ಎಲ್ಲರೂ ತಿಳಿಯುವಂತೆ ಹೇಳಬಲ್ಲಿರಾ ಎಂದು ಸಂದರ್ಶಕ ಕೇಳಿದ.

`ಇಲ್ಲ. ಸಾಧ್ಯವಿಲ್ಲ` ಎಂದು ಅವರು ಹೇಳಿದರು. ಇಬ್ಬರೂ ನಕ್ಕರು.
ಈಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಯನ್ನು ಸರಳವಾಗಿ, ಎಲ್ಲರಿಗೂ ತಿಳಿಯುಂತೆ, ಕೆಲವೇ ಶಬ್ದಗಳಲ್ಲಿ ತಿಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಆರ್ಥಿಕ ತಜ್ಞರು ಇಲ್ಲ, ಸಾಧ್ಯವೇ ಇಲ್ಲ ಅಂತ ಹೇಳಬಹುದೇನೋ. ಪ್ರಶ್ನೆ ಕೇಳಿದವರು, ಉತ್ತರ ಕೊಟ್ಟವರು, ಇಬ್ಬರೂ ನಗಲಾರದೇ ಮಾತು ಮುಗಿಸಬಹುದೇನೋ.

ನಮ್ಮ ವಾರ್ಷಿಕ ಬೆಳವಣಿಗೆಯ ದರ ಕಡಿಮೆ ಆಗಿರುವುದಕ್ಕೂ, ನಿರುದ್ಯೋಗ ಬೆಳೆಯುತ್ತಿರುವುದಕ್ಕೂ, ಸಾಲ ಹೆಚ್ಚಾಗಿ, ಉತ್ಪನ್ನ ಕಡಿಮೆಯಾಗಿ ಷೇರು ಮಾರುಕಟ್ಟೆ ನಷ್ಟ ಅನುಭವಿಸುತ್ತಿರುವುದಕ್ಕೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲು ನಮ್ಮ ರಫ್ತು ಭಾಗೀದಾರಿಕೆ ಕಡಿಮೆ ಆಗುತ್ತಿರುವುದಕ್ಕೂ ಅನೇಕ ಕಾರಣಗಳಿರಬಹುದು.
ತಿಳಿದವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿರಬಹುದು. ತಮ್ಮ ವಾದವನ್ನು ಬೆಂಬಲಿಸಲು ಅವರು ತಮ್ಮದೇ ಆದ ಸಿದ್ಧಾಂತಗಳನ್ನು ನೆಚ್ಚಿಕೊಂಡಿರಬಹುದು.

ಅಂತಹ ಅನೇಕ ವಾದಗಳಲ್ಲಿ ಒಂದು `ಡಿಮಾಂಡ್ ಸ್ಲಂಪ್` ಅಥವಾ `ಬೇಡಿಕೆ ಕುಸಿತದ` ಸಿದ್ಧಾಂತ.
ಅದು ಸರಿಯೋ ತಪ್ಪೋ ಎನ್ನುವ ಮಾತಿಗೆ ಹೋಗದೇ ಇಲ್ಲಿ ನೋಡೋಣ.

ಇದರ ಸರಳಾರ್ಥವೆಂದರೆ ಜನರ ದುಡ್ಡು ಮಾರುಕಟ್ಟೆಯಲ್ಲಿ ಖರ್ಚಾಗುತ್ತಿಲ್ಲ. ಜನ ಖರೀದಿ ಮಾಡುತ್ತಿಲ್ಲ. ಇರಲಾರದವರಿಗೆ ದುಡ್ಡು ಹುಟ್ಟುತ್ತಿಲ್ಲ, ಇದ್ದವರಿಗೆ ಮುಂದೇನಾಗಬಹುದೋ ಎಂಬ ಆತಂಕದಿಂದ ಸುಮ್ಮನಿದ್ದಾರೆ. ಒಂದರಿಂದ ಶುರುವಾದ ಸೋಂಕು ಇನ್ನೊಂದಕ್ಕೆ ಹರಡುವಂತೆ, ಒಂದು ಕ್ಷೇತ್ರದ ಹಿಂಜರಿತ ಇನ್ನೊಂದು ಕ್ಷೇತ್ರಕ್ಕೆ ಹರಡಿ ಇಡೀ ದೇಶವನ್ನು ಆವರಿಸಿಕೊಂಡಿದೆ ಎನ್ನುವರಿದ್ದಾರೆ.
ಅವರ ಪ್ರಕಾರ ಇದರ ಮೂಲ ಕಾರಣಗಳು ಇವು.

ಮೊದಲನೇಯದಾಗಿ ದುಡಿಯುವ ಜನರ ಕೈಗೆ ಕೆಲಸ ಕೊಟ್ಟು ಸಂಪತ್ತು ಸೃಷ್ಟಿಸುವುದನ್ನು ಬಿಟ್ಟು ಬಂಡವಾಳ ಮೂಲಗಳು ನೌಕರರ ಸಂಖ್ಯೆಯನ್ನು ಕಮ್ಮಿ ಮಾಡಿ ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಏಕೈಕ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಸೃಷ್ಟಿಸಿದ್ದು.

ವಿಶ್ವವನ್ನೇ ಒಂದು ಮಾರುಕಟ್ಟೆ ಮಾಡುವ ಉದ್ದೇಶದಿಂದ ಸೃಜಿಸಲಾದ ವಿಶ್ವ ಬ್ಯಾಂಕು, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರದೇಶವಾರು ಮಾರುಕಟ್ಟೆ ಒಪ್ಪಂದಗಳು, ಇವೆಲ್ಲ ಸೇರಿ ಯಾವುದೇ ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಹೋದದ್ದು. ಈ ಗುಂಪುಗಳ ಕೆಲವು ಸದಸ್ಯರಾಷ್ಟ್ರಗಳ ಬಲಹೀನತೆಗಳು ಎಲ್ಲ ಸದಸ್ಯರನ್ನೂ, ಸದಸ್ಯರಲ್ಲದವರನ್ನೂ ಕಾಡಲು ಆರಂಭಿಸಿದ್ದು.

ಬ್ಯಾಂಕಿಂಗ್, ವಿಮೆ, ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಇತ್ಯಾದಿ ಕೆಲ ಕ್ಷೇತ್ರಗಳ ಸಂಸ್ಥೆಗಳ ಅತಿ ಮೌಲ್ಯೀಕರಣ ಓವರ್ ವ್ಯಾಲುಏಷನ್. ಇವುಗಳಿಗೆ ತಾವು ಅರಗಿಸಿಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಬಂಡವಾಳ ಹರಿದು ಬಂದು, ನಿರೀಕ್ಷಿತ ಲಾಭ ಅಥವಾ ಉತ್ಪನ್ನ ಬರದೇ ಹೋದದ್ದು
ಕೊಳ್ಳುಬಾಕುತನ ಅತಿಯಾಗಿ ಜನ ಖರೀದಿಸಲು ಸಾಧ್ಯವಿದ್ದಕ್ಕಿಂತ ಹೆಚ್ಚು ಉತ್ಪಾದನೆ ಆಗಿ ಸಾಮಾನುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗದೇ ಉಳಿದಿರುವುದು
ಇತ್ಯಾದಿ

ಇದರ ಉಪಾಯಗಳೇನು?
ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್, ಶ್ರೀನಿವಾಸ್ ರಾಘವನ್ ಮತ್ತು ಇತರರು ಮೊನ್ನೆ ಒಂದು ವಿಚಾರ ಸಂಕಿರಣದಲ್ಲಿ ಹೇಳಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಕ್ಷೇತ್ರದಲ್ಲಿ ಖರ್ಚನ್ನು ಹೆಚ್ಚಿಸಿ, ಸರಕಾರಿ ಉದ್ದಿಮೆಗಳನ್ನು ಚುರುಕಾಗಿಸಿ, ಉದ್ಯೋಗ ಖಾತ್ರಿ ಯಂತಹ ಯೋಜನೆಗಳಿಂದ ಹಳ್ಳಿಗಳ ಜನರ ಕೈಯಲ್ಲಿ ಹೆಚ್ಚಿನ ಹಣ ಹರಿಯುವಂತೆ ಮಾಡುವುದು, ಒಂದು ಉಪಾಯ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿ ಮುಂತಾದ ಕ್ಷೇತ್ರಗಳಲ್ಲಿ ಸರಕಾರಿ ಖರ್ಚನ್ನು ಹೆಚ್ಚಿಸುವುದು ಇನ್ನೊಂದು ಉಪಾಯ
ಭಾರತೀಯ ಅರ್ಥವ್ಯವಸ್ಥೆ ತೇಜಿ ಇರುವ ಚುರುಕಾದ, ಲಾಭ ಗಳಿಸಿಕೊಳ್ಳಬಲ್ಲಂತಹ ವ್ಯವಸ್ಥೆ ಎಂದು ಹೂಡಿಕೆದಾರರಿರಗೆ ಮನವರಿಕೆ ಮಾಡಿಕೊಡುವಂತಹ ಆತ್ಮ ವಿಶ್ವಾಸ ಹೆಚ್ಚಿಸುವ ಕ್ರಮ ಕೈಗೊಳ್ಳುವುದು ಇತ್ಯಾದಿ.

ಈ ನೆಲದ ಅರ್ಥಶಾಸ್ತ್ರಜ್ಞ ಡಾ. ಡಿ. ಎಂ ನಂಜುಂಡಪ್ಪ ನವರ ಮಾತಿನಂತೆ ಭಾರತದ ಎಲ್ಲಾ ಸಮಸ್ಯೆಗಳಿಗೆ ಇರುವ ಉಪಾಯಗಳು ಸರಳ. ಜನರ ದುಡಿಮೆಗೆ ತಕ್ಕ ಪ್ರತಿಫಲ ದೊರಕಬೇಕು, ಅವರು ಹೆಚ್ಚಿನ ಹಣ ಉಳಿಸಬೇಕು, ಹಾಗೂ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಕುಗ್ಗದಂತೆ ನೋಡುವುದು ಎಂಬ ಅವರ ಮಾತು ನಮ್ಮನ್ನು ಉಳಿಸೀತು.

ವಿಶ್ವ ಕಂಡ ಅತ್ಯಂತ ದೊಡ್ಡ ಆರ್ಥಿಕ ಹಿಂಜರಿತ ವೆನ್ನಲಾಗುವ ಗ್ರೇಟ್ ಡಿಪ್ರೆಷನ್ ಅಮೇರಿಕೆ ಯನ್ನು 1930ರ ದಶಕದಲ್ಲಿ ಕಾಡಿತು. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡ ದೇಶ ಇತರರ ಕಣ್ಣಲ್ಲಿ ಸಣ್ಣವರಾಗಬೇಕಾಗಿ ಬಂತು.
ಅದನ್ನು ನಿಭಾಯಿಸಿ ಅಮೇರಿಕೆಯ ಆರ್ಥಿಕತೆಯನ್ನೂ ಹಾಗೂ ಅದರೊಟ್ಟಿಗೆ ವಿಶ್ವದ ಆರ್ಥಿಕತೆಯನ್ನು ಸಂಭಾಳಿಸಿದ ನಾಯಕ ಎಂದು ಅಮೇರಿಕೆಯ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸವೆಲ್ಟ್ ನನ್ನು ಗುರುತಿಸಲಾಗುತ್ತದೆ.
ಅವನ ಒಂದು ಮಾತು ಇಲ್ಲಿ ನೆನಪಾಗುತ್ತದೆ.

ರೂಸವೆಲ್ಟ್ ಅವರು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ ಅಮೇರಿಕನ್ನರು ಖರೀದಿ ಮಾಡಬೇಕು. ಅವರ ಖರೀದಿ ಯೊಂದೇ ನಮ್ಮನ್ನು ಉಳಿಸಲು ಸಾಧ್ಯ ಎಂದರು. ಆಗ ಲಿಂಡಾ ಜೇಮ್ಸ್ ಎಂಬ ಪತ್ರಕರ್ತರೊಬ್ಬರು ಏನನ್ನು ಖರೀದಿಸಬೇಕು ಎಂದು ಕೇಳಿದರಂತೆ. `ಏನಾದರೂ ಆಗಬಹುದು` ಅಂತ ಅಧ್ಯಕ್ಷರು ಉತ್ತರಿಸಿದರಂತೆ. ಮರುದಿನ ಪತ್ರಿಕೆಗಳಲ್ಲಿ `ಬೈ ಎನಿಥಿಂಗ್. ದ್ಯಾಟ್ ಈಸ್ ದ ನ್ಯೂ ಡೀಲ್’ (`ಏನನ್ನಾದರೂ ಖರೀದಿಸಿ. ಅದೊಂದೇ ಉಪಾಯ`) ಎಂಬ ಶೀರ್ಷಿಕೆ ರಾರಾಜಿಸಿತ್ತಂತೆ.

ಅವರ ಈ ಮಾತಿನಿಂದಲೇ ಕೊಳ್ಳುಬಾಕತನದ ಪರಿ ಆರಂಭವಾಯಿತು ಎನ್ನುವವರೂ ಇದ್ದಾರೆ.

ಇಂದಿನ ಭಾರತದ ವಿಷಯಕ್ಕೆ ಬಂದರೆ ಏನಾದರೂ ಆಗಿ ಮಾರುಕಟ್ಟೆ ಚೇತರಿಸಿಕೊಂಡರೆ ಸಾಕು. ಏನಾದರೂ ಆಗಲಿ ಅನ್ನುವವರಿದ್ದಾರೆ. ಅಷ್ಟೊಂದು ಪರಾಕಾಷ್ಟೆ ಬೇಡ.

ಚೇತರಿಕೆ ಆಗಲಿ, ಅದರೊಂದಿಗೆ ಸ್ವಲ್ಪ ಕೂಳುಬಾಕತನ ಕಮ್ಮಿಯಾಗಲಿ ಅಂತಲೂ ಅನ್ನಿಸುತ್ತದೆ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...