Homeಅಂಕಣಗಳುಇವರು ನಮ್ಮ ಪ್ರತಿನಿಧಿಗಳು ಮತ್ತು ನಾವು ಇಂತವರಿಗೆ ಪ್ರಭುಗಳು!

ಇವರು ನಮ್ಮ ಪ್ರತಿನಿಧಿಗಳು ಮತ್ತು ನಾವು ಇಂತವರಿಗೆ ಪ್ರಭುಗಳು!

- Advertisement -
- Advertisement -

ಅಂದು ಒಂದು ಬಿಸಿಗಾಳಿ ತುಂಬಿದ ಬಲೂನ್ ಕೆಳಗೆ ನಿಂತಿರುವ ಜನ ಕತ್ತೆತ್ತಿ ಅದರ ಹಾರಾಟವನ್ನು ನೋಡುತ್ತಿದ್ದರೆ. ಇಲ್ಲಿ ಅವರ ಜೇಬುಗಳಿಗೆ ಕತ್ತರಿ ಬೀಳುತ್ತಿರುತ್ತೆ. ಆ ಬಲೂನು ಐದು ವರ್ಷಗಳಿಗೊಮ್ಮೆ ಕೆಳಗಿಳಿದು ಬಂದು ಯಾರಾದರೂ ಒಳಕ್ಕೆ ಬರಬಹುದೆಂದು ಆಹ್ವಾನಿಸುತ್ತದೆ. ಆದರೆ ನಮ್ಮ ಜನರ್ಯಾರಿಗೂ ಆ ಸಾಮಥ್ರ್ಯವಿಲ್ಲದಿರುವುದರಿಂದ ಮತ್ತೆ ಹಳಬರನ್ನೇ ಹತ್ತಿಸಿಕೊಂಡು ಮೇಲಕ್ಕೆ ಹಾರುತ್ತದೆ. (ನಮ್ಮ ಜನರ ಜೇಬುಗಳಿಗೆ ಕತ್ತರಿ ಬೀಳುವುದಂತೂ ಮುಂದುವರೆಯುತ್ತದೆ)
ಇಲ್ಲಿ ಮಾತನಾಡುತ್ತಿರುವುದದು ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಎನ್ನುವುದು ಯಾರಿಗಾದರೂ ಅರ್ಥವಾಗುವಂತದ್ದು. ಈ ಮಾತುಗಳನ್ನು ಆಡಿರುವುದು ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿದ್ದ ಪ್ರಮುಖ ಇಂಗ್ಲೀಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ. 1930ರಲ್ಲಿ ಪ್ರಕಟವಾದ ತನ್ನ ‘ದಿ ಆಪಲ್ ಲಾಟ್’ ಎನ್ನುವ ವಿಡಂಬನಾ ನಾಟಕಕ್ಕೆ ತಾನೇ ಬರೆದ ಸುದೀರ್ಘ ಮುನ್ನುಡಿಯಲ್ಲಿ ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಕುರಿತು ಆಡಿದ ಮಾತುಗಳಿವು.

ಜಾರ್ಜ್ ಬರ್ನಾರ್ಡ್ ಷಾ

ಇಪ್ಪತ್ತೊಂದನೆ ಶತಮಾನದ ಈ ದಿನಗಳಿಗೂ ಈ ಮಾತುಗಳು ಹೇಗೆ ಅನ್ವಯಿಸುತ್ತದೆ ಎನ್ನುವುದೇ ಸೋಜಿಗ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ಸಿಕ್ಕ ಅಧಿಕಾರವನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕೆಂದು ಉತ್ತರದಲ್ಲಿ ರಾಮನನ್ನು, ದಕ್ಷಿಣದಲ್ಲಿ ಅಯ್ಯಪ್ಪನನ್ನು ಬಳಸಿಕೊಳ್ಳುತ್ತಲೇ ಸಾಮಾನ್ಯ ಜನತೆಗೆ ತನ್ನ ದೇಶಪ್ರೇಮದ ಬಗ್ಗೆ ಮಂಕು ಬೂದಿ ಎರಚುತ್ತ ಚುನಾವಣೆಗಳ ಸಿದ್ದತೆಯಲ್ಲಿದೆ. ಜನರು ಇಂಥಾ ರಾಜಕಾರಣದ ಪ್ರಹಸನದ ಅಂಕಗಳನ್ನು ವೀಕ್ಷಿಸುತ್ತ ಮನರಂಜನೆ ಪಡೆಯುತ್ತಿದ್ದಾರೆ.
ಆ ನಾಯಕರು ತಾವು ಮಾತ್ರ ದೇಶಭಕ್ತರು ತಮ್ಮನು ವಿರೋಧಿಸುವವರು ದೇಶದ್ರೋಹಿಗಳು ಎಂದು ಬಿಂಬಿಸುತ್ತಾ ಆಗಾಗ ವೀರಾವೇಶದ ಮಾತುಗಳನ್ನೂ, ಆ ಮಾತುಗಳನ್ನಾಡುವ ಭರದಲ್ಲಿ ಹಾಸ್ಯಸ್ಪದ ಸುಳ್ಳುಗಳನ್ನೂ ಜನರಿಗೆ ಮೊಗೆಮೊಗೆದು ಹಂಚುತ್ತಿದ್ದಾರೆ. ಇದುವರೆಗು ಒಬ್ಬರ ವಿರುದ್ಧ ಒಬ್ಬರು ಕತ್ತಿಮಸೆಯುತ್ತಿದ್ದ ಆ ಪಕ್ಷದ ರಾಜಕೀಯ ವಿರೋಧಿಗಳು ಈಗ ಒಟ್ಟಾಗಿ ಕೈಕೈ ಜೋಡಿಸಿ ಮುಂದಿನ ಚುನಾವಣೆಗಳಲ್ಲಿ ಈ ಅಧಿಕಾರಸ್ಥರು ಧೂಳೀಪಟವಾಗುವುದರಲ್ಲಿ ಅನುಮಾನವಿಲ್ಲವೆಂದು ಡಂಗೂರ ಸಾರುತ್ತಿದ್ದಾರೆ.
ಇನ್ನ ರಾಜ್ಯ ಮಟ್ಟದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಕ್ರುದ್ಧರಾದ ದೇಶಭಕ್ತ(!) ನಾಯಕರುಗಳು ಸರ್ಕಾರವನ್ನು ಹೇಗಾದರೂ ಬೀಳಿಸಿ ಗದ್ದುಗೆ ಏರಬೇಕೆಂದು ಹವಣಿಸಿ ಪ್ರಜಾಪ್ರಭುತ್ವವೇ ತಲೆತಗ್ಗಿಸುವಂತೆ ಆಡಬಾರದ ಆಟ ಆಡುತ್ತಿದ್ದಾರೆ. ಅದಕ್ಕಾಗಿ ಸಾಮ, ದಾನ, ಭೇದ, ದಂಡೋಪಾಯಗಳೆಲ್ಲವನ್ನು ಪ್ರಯೋಗಿಸುತ್ತಿದ್ದರೂ ಆ ಪ್ರಯತ್ನಗಳು ಕೈಗೂಡದೆ ಹತಾಶರಾಗಿದ್ದಾರೆ. ಇಂಥ ನಾಟಕದ ದೃಶ್ಯಗಳಲ್ಲಿ ಇದುವರಿಗೂ ರಾಜಕೀಯ ರಂಗದಿಂದಲೇ ಮಾಯವಾಗಿದ್ದ ಮಾಜಿ ಮುಖ್ಯಮಂತ್ರಿಗಳು, ಒಂದು ರಿಪಬ್ಲಿಕ್‍ನ ಧಣಿಗಳು ಮರು ಪ್ರವೇಶ ಮಾಡಲು ಹಾತೊರೆಯುತ್ತಿದ್ದಾರೆ. ಆಳುವ ಪಕ್ಷದ ಕೆಲವರು ತಾವು ಹುಟ್ಟಿರುವುದೇ ಮಂತ್ರಿಯಾಗಬೇಕೆಂದು ಅದಾಗದಿದ್ದರೆ ತಮಗೆ ಅಸ್ತಿತ್ವವಿಲ್ಲವೇನೋ ಎಂಬುವಂತೆ ನರಳಾಡುತ್ತಿದ್ದಾರೆ. ಮಂತ್ರಿಗಿರಿಗಾಗಿ ಎಲ್ಲ ರೀತಿಯ ತಿಪ್ಪರಲಾಗಗಳನ್ನೂ ಹಾಕುತ್ತಿದ್ದಾರೆ.
ಈ ನಾಟಕಗಳ ನಡುವೆ ಇವರನ್ನು ಆರಿಸಿದ ಜನ ಏನು ಮಾಡುತ್ತಿದ್ದಾರೆ? ಈ ಪ್ರಹಸನಗಳಲ್ಲಿ ಮೂಕಪ್ರೇಕ್ಷಕರಾಗಿರುವುದು ಬಿಟ್ಟರೆ ಬೇರೇನೂ ಪಾತ್ರವಿಲ್ಲ ಅವರಿಗೆ.
ಉತ್ತರ ಕರ್ನಾಟಕದ ಜನ ಕೆಲಸವನ್ನರಸಿ ಕಿಕ್ಕಿರಿದ ಬಸ್ಸು, ರೈಲು, ಟೆಂಪೋಗಳಲ್ಲಿ ದೂರದ ಊರುಗಳಿಗೆ ಹೊರಟರೆ ಅವರ ಪ್ರತಿನಿಧಿಗಳು ಐಷಾರಾಮಿ ಬಸ್ಸುಗಳಲ್ಲಿ ಪಂಚಾತಾರಾ ಹೊಟೇಲುಗಳು, ರೆಸಾರ್ಟುಗಳ ಕಡೆಗೆ ನುಗ್ಗುತ್ತಿದ್ದಾರೆ. ಸಾಮಾನ್ಯ ಜನರ ಜೇಬುಗಳಿಗೆ ಮಾತ್ರವಲ್ಲ ಅವರ ಜೀವಗಳಿಗೇ ಕತ್ತರಿ ಪೆಟ್ಟುಗಳು ಬೀಳುತ್ತಿದ್ದರೂ ನಮ್ಮದು ಮಹಾನ್ ಪ್ರಜಾಪ್ರಭುತ್ವವೆಂದು ಪರಾಕು ಹೇಳುವವರಿಗೇನು ಕಡಿಮೆ ಇಲ್ಲ.
ಇಂಥ ಪ್ರಭೃತಿಗಳ ಸಂಖ್ಯೆಯೇ ಹೆಚ್ಚಾಗಿರುವುದನ್ನು ನೋಡಿ ಮುನಿಸಿಕೊಂಡು ಮತದಾನವೇ ಮಾಡುವುದಿಲ್ಲ ಎನ್ನುವವರನ್ನು ಈ ಪರಾಕು ವೀರರು ನಾಲಾಯಕ್ಕುಗಳು ಎಂದು ಮೂದಲಿಸುತ್ತಾರೆ. ಹೌದು, ಮತದಾನ ನಮ್ಮೆಲ್ಲರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಸಮರ್ಥರನ್ನು ಆರಿಸಲು ಅದು ಅಸ್ತ್ರವೂ ಹೌದು. ಆದರೆ ಪ್ರಶ್ನೆಯೇನೆಂದರೆ ಯಾವ ಸಮರ್ಥರಿಗೆ ಯಾವ ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿವೆ. ಟಿಕೇಟು ವಿತರಣೆ ಎನ್ನುವುದೇ ದೊಡ್ಡ ದಂಧೆಯಾಗಿ ಹೋಗಿದೆ. ಸರಿ, ಆ ಅಸ್ತ್ರವನ್ನು ಬಳಸಿಕೊಂಡು ಮತದಾನ ಮಾಡಿದ್ದರಿಂದಲೇ ಅಲ್ಲವೇ ಈಗಿನ ಜನಪ್ರತಿನಿಧಿಗಳು ಆಯ್ಕೆಯಾಗಿರೋದು. ಹಾಗೆ ಆಯ್ಕೆಯಾದವರು ಮಾಡುತ್ತಿರುವುದೇನು? ಅದೇ ರೆಸಾರ್ಟ್ ರಾಜಕಾರಣ, ಅದೇ ಅಧಿಕಾರ ಹಪಾಹಪಿ, ಅದೇ ಕಾಲೆಳೆದಾಟ, ಅದೇ ಕೋಮುವಿಧ್ವಂಸ!
ಪ್ರಜೆಯೇ ಪ್ರಭು ಎನ್ನುತ್ತದೆ ನಮ್ಮ ಪ್ರಜಾಪ್ರಭುತ್ವ. ಆದರೆ ಯಾವತ್ತಾದರು ಪ್ರಜೆ ಪ್ರಭುವಾಗಿ ಹಕ್ಕು ಚಲಾಯಿಸುವ ಅವಕಾಶ ಕೂಡಿಬಂದಿದೆಯಾ? ಎಲೆಕ್ಷನ್ ಸಮಯದಲ್ಲೂ ಆತ ಹಣ, ಹೆಂಡದ ಋಣಕ್ಕೆ ವರ್ತಿಸಬೇಕಾದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಚುನಾವಣೆ ಅನ್ನುವುದೇನಿದ್ದರು ನಮ್ಮದಲ್ಲ, ಅದು ಆ ರಾಜಕಾರಣಿಗೂ ಈ ರಾಜಕಾರಣಿಗೂ ನಡುವೆ ನಡೆಯುವ ಭರ್ಜರಿ ಪೈಪೋಟಿ. ನಮ್ಮದೇನಿದ್ದರು ಆ ಪೈಪೋಟಿಯಲ್ಲಿ ಒಂದಷ್ಟು ಫಾಯಿದೆ ಮಾಡಿಕೊಂಡರೆ ಮುಗಿಯಿತು ಎನ್ನುವ ಮನಸ್ಥಿತಿಗಳಿಗೆ `ಮತದಾನ ನಮ್ಮ ಹಕ್ಕು’ ಎನ್ನುವ ಉಪದೇಶವೂ ನೋಟಿನ ರೂಪದಲ್ಲಿಯೇ ಕಾಣಿಸಿದರೂ ಅಚ್ಚರಿಯಿಲ್ಲ.
ಪ್ರಜಾಪ್ರಭುತ್ವ ಮತ್ತು ಮತದಾನದ ಸುತ್ತ ಇಂಥಾ ಚರ್ಚೆಗಳು ಶುರುವಾಗುತ್ತಿರೋದನ್ನು ಮತ್ತು ಅದು ಈಗಿರುವ ಭ್ರಷ್ಟ ರಾಜಕಾರಣ ವ್ಯವಸ್ಥೆಗೆ ಮಾರಕವಾಗಬಲ್ಲಷ್ಟು ಶಕ್ತವಾಗಿರುವುದನ್ನು ಸುಮ್ಮನಾಗಿಸಲು `ನೋಟಾ’ ಎನ್ನುವ ಲಾಲಿಪಪ್ಪನ್ನು ಜನರ ಕೈಗಿಡಲಾಗಿದೆ. ಅದು ಲಾಲಿಪಪ್ ಅಲ್ಲದೆ ಮತ್ತೇನೂ ಅಲ್ಲ. ಮತದಾನದ ವಿರುದ್ಧ ಮುನಿಸಿಕೊಂಡವರನ್ನು ತೆಪ್ಪಗಾಗಿಸುವ ತಂತ್ರದಂತೆ ಅದು ಬಳಕೆಯಾಗುತ್ತಿದೆ. ದೇಶದ ಇತಿಹಾಸದಲ್ಲೇ ಆ `ನೋಟಾ’ ರಾಜಕಾರಣಿಗಳ ಅಬ್ಬರದ ನಡುವೆ ಪ್ರಜೆಗಳನ್ನು ಹೀರೋ ಆಗಿಸಿದ ಒಂದೇಒಂದು ನಿದರ್ಶನವಿಲ್ಲ. ಆ ಕುರಿತು ಸ್ಪಷ್ಟ ಮಾರ್ಗಸೂಚಿಗಳು ಸರ್ಕಾರಗಳ ಬಳಿ ಇಲ್ಲ, ಜರನಲ್ಲಿ ಅವು ಜಾಗೃತಿಯನ್ನೂ ಮೂಡಿಸುತ್ತಿಲ್ಲ. `ಮತದಾನ ನಮ್ಮ ಹಕ್ಕು’ ಎನ್ನುವ ಮೂಲಕ ಪ್ರಸ್ತುತ ಚುನಾವಣಾ ವ್ಯವಸ್ಥೆಯ ವಿರುದ್ಧ ಜನರೊಳಗಿನ ಬಂಡಾಯ ಪ್ರಜ್ಞೆಯನ್ನು ಹತ್ತಿಕ್ಕುವ ಪ್ರಯತ್ನ ಒಂದು ಹುನ್ನಾರಕ್ಕಿಂತ ಕಡಿಮೆಯೇನಿಲ್ಲ ಅನಿಸುತ್ತದೆ.
ಅಪರೂಪಕ್ಕೆ ಯಾರಾದರೂ ಪ್ರಾಮಾಣಿಕರು ಸ್ವರ್ಧಿಸಿದರೆ ಅವರಿಗೆ ನೂರೋ, ಇನ್ನೂರೊ, ಹೆಚ್ಚೆಂದರೆ ಕೆಲವು ಸಾವಿರವೋ ಮತಗಳು ಮಾತ್ರ ಬೀಳುತ್ತವೆ. ಎಷ್ಟೋ ಕಡೆ ಈ ಪ್ರಾಮಾಣಿಕರಿಗಿಂತ `ನೋಟಾ’ ಮತಗಳೇ ಹೆಚ್ಚಿರುತ್ತವೆ. ಹಾಗಾದರೆ ಈ `ನೋಟಾ’ ಏನನ್ನು ಸಾಧಿಸಹೊರಟಿದೆ? ಅನ್ನೋ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಇದು ಕೇವಲ ಚುನಾವಣೆಯ ಸಂಗತಿ ಅಷ್ಟೇ. ಜನರನ್ನು ಹೀಗೆ `ನೈತಿಕ’ ನೆಪಗಳ ಮೂಲಕವೇ ಧ್ವಂಸ ಮಾಡಲು ಈ ರಾಜಕಾರಣಿಗಳು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ.
ಅದೇ ಕಾರಣಕ್ಕೆ `ಪ್ರಜಾಪ್ರಭುತ್ವ ಲೊಳಲೊಟ್ಟೆ’ ಎನ್ನುವ ಮಾತು ಈಗಾಗಲೇ ಜನರ ನಡುವೆ ಪ್ರಚಲಿತವಾಗಿದೆ. ಅಪ್ಪಿತಪ್ಪಿ ಈ ಮಾತು ನಿಜವಾಗಿಬಿಟ್ಟರೆ ದೇಶ ಹಲವು ಶತಮಾನಗಳ ಆಳಕ್ಕೆ ಕುಸಿಯುವುದರಲ್ಲಿ ಸಂಶಯವಿಲ್ಲ. ಹಾಗಾಗಿ ‘ನಾವು ದೇಶಕ್ಕಾಗಿ’ ಎದ್ದು ನಿಂತು ಸುಳ್ಳುರನ್ನೂ ಭ್ರಷ್ಟರನ್ನೂ ಮೂಲೆಗೆ ತಳ್ಳಿ ನಿಜವಾದ ಪ್ರಜಾತಂತ್ರದ ಸ್ಥಾಪನೆಗೆ ಕೈ ಹಾಕಬೇಕಿದೆ. ಆ ದಿಕ್ಕಿನಲ್ಲಿ ಯುವಜನರ ಪಾತ್ರ ದೊಡ್ಡದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...