Homeಕರ್ನಾಟಕದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..

ದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..

- Advertisement -
- Advertisement -

‘ನನಿಗನ್ನುಸ್ತಾ ಅದೆ’ ಎಂದು ಗಡ್ಡ ಕೆರೆದ ವಾಟಿಸ್ಸೆ.
‘ಅದೇನನ್ನಸ್ತು ಹೇಳ್ಳ’ ಎಂದಳು ಜುಮ್ಮಿ.
‘ಈ ಕರೋನ ಅಷ್ಟು ಸುಲಬಾಗಿ ಹೋಗದಿಲ್ಲ ಕಣಕ್ಕ’.
‘ಯಾಕ್ಲ’.
‘ಯಾಕೆ ಅಂದ್ರೆ ಅದು ಅವರಿಸಿಗಳದ್ಕೂ ಮದ್ಲು ಇಡೀ ಇಂಡಿಯಾ ಲಾಕ್‍ಡವುನ್ ಅಂದ್ರು. ಅವುರೇಳಿದಂಗೆ ಕೇಳಿದೊ ಈಗ ಅದು ಜಾಸ್ತಿಯಾದ ಮ್ಯಾಲೆ ಲಾಕ್‍ಡವುನ್ ತಗದವುರೆ ಹಿಂಗಾದ್ರೆ ಯಂಗೋಯ್ತದೇ?’.
‘ಹೋಗದಿಲ್ಲ ಅಂತಿಯಾ’.
‘ಚಾನ್ಸೆಯಿಲ್ಲ ದಿನೇ ದಿನೇ ಜಾಸ್ತಿಯಾಯ್ತದೆ’.
‘ಸದ್ಯ ನಮ್ಮೂರಿಗೆ ಬರಲಿಲವಲ್ಲ ಹೇಳು’.
‘ಅಂಗೇಳಂಗೇಯಿಲ್ಲ ಕಣೆ. ಬೊಂಬಾಯಿಲಿರೋರು ಬಂದ್ರೇ ಅದು ಬತ್ತದೆ’.
‘ಮದ್ಲು ಬಂಬಾಯಿಲಿರೋರು ಬಂದಾಗ ಯೇಡಸ ತಂದ್ರು, ಈಗಿವುರು ಬಂದು ಕರೋನ ತತ್ತರಲ್ಲ ಹೇಳು’.
‘ಹೆದರುಬ್ಯಾಡ ಕಣಕ್ಕ ಕರೋನ ಕ್ಯೂರಬಲ್ಲು ಅದೇ ಏಡಸು ನಾನ್ ಕ್ಯೂರಬಲ್’.
‘ಅಂಗದ್ರೆ ಕರೋನ ಬಂದೋರು ಉಸಾರಾಗಿ ಮನಿಗೆದ್ದೊಯ್ತರೆ. ಅದೇ ಏಡಸಾದ್ರೆ ಚಟ್ಟಕಟ್ಟದೆಯ’.
‘ಮತ್ಯಾಕೆ ಹೆದ್ರಿಕಳದು ಬುಡ್ಳ’
‘ನಾನಂತೂ ಯಾವತ್ತು ಹೆದರಿಲ್ಲ ಕಣಕ್ಕ ಈ ಉಗ್ರಿನೆ ಹೆದರಿ ನಡಗ್ತನಂಗೆಯ’.
‘ಅದ್ಯಾಕ್ಲ ಹೆದರತಿ ಉಗ್ರಿ’.
‘ಕ್ವಾರಂಟೈನು ಮಾಡಿ ನಾಯಿ ನೋಡಿದಂಗೆ ನೋಡಿಕತ್ತರಂತೆ. ದೂರ ನಿಂತಗಂಡು ಬಿಸ್ಕತ್ತ ಯಸಿತರಂತೆ. ಅದ್ಕೆ ಕಣೆ’.
‘ಇನ್ನೆನು ನಿನಗೆ ತ್ವಡೆಮ್ಯಾಲೆ ಕುಂಡ್ರಿಸಿಗಂಡು ಉಣ್ಣುಸ್ತರ್ಲ. ಕಾಯಿಲೆ ಬಂದಾಗ ಯಲ್ಲಾನು ಅನುಬವುಸಬೇಕು’.
‘ಯಾವ ಕಾಯಿಲೆ ಬಂದ್ರು ಹೆದರಸೋ ಧೈರ್ಯ ಬರಬೇಕಾದ್ರೆ ವಳ್ಳೆ ಸರಕಾರ ಇರಬೇಕು ಕಣೆ. ಈ ಹಾಳು ಸರಕಾರ ಯಂಗದೆ ಅಂತೀ. ಇದಿಲ್ದೆಯಿದ್ರೆ ಯಂಗೋ ಚನ್ನಾಗಿರತಿದ್ದೊ’.
‘ಮಿಸ್ಟರ್ ಉಗ್ರಿ ಬಿಜೆಪಿ ಸರಕಾರ ಇರದೇ ಹಿಂಗಲವೇನೋ ಅದು ಗೊತ್ತಿಲವೆ ನಿನಗೆ’.
‘ಇರದೆ ಹಿಂಗೆ ಅಂದ್ರೆ’.
‘ಅಂದ್ರೆ ಈ ಸರಕಾರ ನಡೆಸೋರು ಪರಂಪರೆ ಜನ. ಪರಕೀಯರು ದಾಳಿ ಮಾಡಿ ಇಂಡಿಯಾ ದೇಸವ ಆಳತಾಯಿದ್ರೆ ಅವುರು ದೇವಸ್ಥಾನದಲ್ಲಿ ಭಜನೆ ಮಾಡಿಕೊಂಡು ಪ್ರಸಾದ ತಿಂತಾಯಿದ್ರಂತೆ. ಈಗ್ಲು ಅಂಗೇ ಅವುರೆ. ಕೊರೋನಾ ಬಂದ್ರೇನು, ಜನ ಸತ್ತರೆ ಅವುರಿಗೇನೂ. ಯಾವುದ್ಕು ಕೇರ್ ಮಾಡದಂಗೆ ತಾವು ಒಂದು ವರುಸದಲ್ಲಿ ಏನೇನು ಮಾಡಿದೊ ಅಂತ ಪುಸ್ತಕ ಬರದು ಹಂಚತಾಕುಂತವುರೆ ಇದಕೇನೇಳ್ತೀ’.
‘ಹೇಳದಿನ್ನೇನು ನೀನು ಮದ್ಲೆ ಹೇಳಿದಲ್ಲ ಅಂಗೆ ಆಗ್ಯಾದೆ’.
‘ಈಗ್ಯಾವುದೊ ಯಲಕ್ಸನ್ನ ಬಂದು ದ್ಯಾವೇಗೌಡ್ರು ನಿಂತವುರಂತಲ್ಲಾ ಯಾವುದ್ಲ’ ಎಂದಳು ಜುಮ್ಮಿ.
‘ಅದು ಧಾರುಣವಾದ ಯಲಕ್ಸನ್ನು ಕಣಕ್ಕ’.
‘ಅದ್ಯಾಕ್ಲ’.
‘ಪಾಪ ಆ ಉಮೇಸ್ ಕತ್ತಿ ಬಂಡಾಯದ ನಾಟಕ ಎಬ್ಬಿಸಿ ತನ್ನ ತಮ್ಮನಿಗೇ ಟಿಕೇಟು ಗ್ಯಾರಂಟಿ ಅಂತ ಕಾಯ್ತಾಯಿದ್ದ. ಇನ್ನು ಎಜುಕೇಷನ್ ಮಾರ್ವಾಡಿಯಂತಿರೊ ಕೋರೆ, ಈಗಾಗ್ಲೇ ಎಲ್ಡು ಸಲ ಆಗಿದ್ದು ಸಾಲ್ದು ಅಂತ ಮೂರ್ನೇ ಸಲಕ್ಕೂ ಯಡ್ಯೂರಪ್ಪನ ಜಪ ಮಾಡಿಕ್ಯಂಡು ಕುಂತಿದ್ದ. ಅಂತೋರಿಗೆಲ್ಲ ರಾಜ್ಯಸಭೆ ಸಿಗಲಿಲ್ಲ. ಅಂಗಾಗಿ ಅವುರ ಪಾಲಿಗೆ ಇದು ಧಾರುಣವಾದ ವಿಷಯ’.
‘ಮತ್ಯಾರಿಗೆ ಕೊಟ್ರು’.
‘ಬಿಜೆಪೀಲಿ ಯಾವುದೇ ಬೆನಿಫಿಟ್ ಕೊಡಬೇಕಾದ್ರು ಸಣ್ಣುಡಗರಿಂದ ಲಾಟಿ ಬೀಸಿರಬೇಕು. ಅಂಗಾಗಿ ಬೆಳಗಾವಿ ಈರಣ್ಣ, ರಾಯಚೂರು ಅಶೋಕ ಅನ್ನೊರ್ನ ಕ್ಯಾಂಡಿಡೇಟ್ ಮಾಡಿದ್ರು ಕಣಕ್ಕ. ಅವುರು ಹುಟ್ಟಿದಾಗಿಂದ ಲಾಟಿ ಬೀಸಿದ್ರಂತೆ’.
‘ಕಾಂಗ್ರೆಸ್ಸಿಂದ ಯಾರ್ಲ’.
‘ಕಾಂಗ್ರೆಸ್ಸಿಂದ ಖರಗೆ, ದ್ಯಾವೇಗೌಡ್ರು ಕಣಕ್ಕ. ಕಾಂಗ್ರೆಸ್ಸಲ್ಲಿ ಜಾಸ್ತಿ ಓಟಿದ್ದವಂತೆ ಅದ ದ್ಯಾವೇಗೌಡ್ರಿಗೆ ಕೊಡ್ತರೆ ಅಂಗಾಗಿ ದ್ಯಾವೇಗೌಡ್ರು ಅರ್ಧ ಕಾಂಗ್ರೆಸ್ಸು, ಅರ್ಧ ದಳದ ಕ್ಯಾಂಡೇಟು’.
‘ಈ ಯಂಬತ್ತೇಳನೇ ವಯಸಲ್ಲಿ ಅವುರಿಗೆ ಬೇಕಿತ್ತೆ’ ಎಂದ ಉಗ್ರಿ.
‘ಯಂಬತ್ತೇಳು ಅವರ ಶರೀರಕ್ಕಾಗ್ಯದೆ ಮನಸಿಗಲ್ಲ ಕಣೊ, ನೋಡಿವಿರು ಗೆದ್ದು ಪಾರ್ಲಿಮೆಂಟಿಗೆ ಯಂಗೆ ಇಬ್ಬರು ಭುಜ ಹಿಡಕಂಡೋಯ್ತರೆ ಅದ ನೋಡಕ್ಕೆ ಚಂದ’.


ಇದನ್ನು ಓದಿ: ನಮ್ಮೂರ ಡಾ.ಎಚ್ಚೆನ್‍ಗೆ ನೂರು: ವೈಯಕ್ತಿಕ ನೆನಪುಗಳ ಹಿನ್ನೆಲೆಯಲ್ಲೊಂದು ಸಾಮಾಜಿಕ ನೋಟ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...