Homeನಿಜವೋ ಸುಳ್ಳೋFact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

Fact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

- Advertisement -
- Advertisement -

ಲಂಡನ್ ಮೂಲದ ಎಕ್ಸ್‌ಪ್ರೆಸ್.ಕೊ.ಯುಕೆ ಎಂಬ ಪತ್ರಿಕೆ ಏಪ್ರಿಲ್ 20 ರಂದು ವಿವಾದಾತ್ಮಕ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಕೊರೊನಾ ಹಾನಿಗೆ ಪರಿಹಾರವಾಗಿ ಚೀನಾ ದೇಶವು ಜರ್ಮನಿಗೆ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಬರೆಯಲಾಗಿತ್ತು.ಅದಲ್ಲದೆ ಇದರ ನಂತರ ಹಲವಾರು ಮಾಧ್ಯಮಗಳು ಇದೇ ರೀತಿಯ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದ್ದವು. ಇಂಡಿಯಾ ಟಿವಿ ನ್ಯೂಸ್, ದಿ ಔಟ್‌ಲುಕ್, ಒರಿಸ್ಸಾ ಪೋಸ್ಟ್, ಅಮರ್ ಉಜಲಾ, ಪಂಜಾಬ್ ಕೇಸರಿ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಯನ್ನು ಪ್ರಕಟಿಸಿದ ಪ್ರಮುಖ ಪತ್ರಿಕೆಗಳಾಗಿವೆ. ಆದರೆ ದಿ ಔಟ್‌ಲುಕ್ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಗಳು ಮಾತ್ರ ವರದಿ ಮೂಲವನ್ನು ಐಎಎನ್‌ಎಸ್ ಎಂದು ಉಲ್ಲೇಖಿಸಿದೆ.

ಬಲಪಂಥೀಯ ಪ್ರಚಾರ ವೆಬ್‌ಸೈಟ್ ಒಪಿ ಇಂಡಿಯಾಕ್ಕಾಗಿ ಬರೆಯುವ ಅಶುತೋಷ್ ಮುಗ್ಲಿಕರ್ (ಆರ್ಕೈವ್ ಲಿಂಕ್) ಮತ್ತು ಡೆಮಾಕ್ರಸಿ ನ್ಯೂಸ್ ಲೈವ್‌ನಲ್ಲಿ ಮುಖ್ಯ ಸಂಪಾದಕ ರೋಹಿತ್ ಗಾಂಧಿ (ಆರ್ಕೈವ್ ಲಿಂಕ್) ಅವರು ಏಪ್ರಿಲ್ 20 ರಂದು ದಿ ಎಕ್ಸ್‌ಪ್ರೆಸ್ ವರದಿಯಲ್ಲಿನ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಗ್ಲಿಕರ್ ಅವರ ಟ್ವೀಟ್ ಅನ್ನು ಇದುವರೆಗೆ 850 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.ಫ್ಯಾಕ್ಟ್-ಚೆಕ್

ದಿ ಎಕ್ಸ್‌ಪ್ರೆಸ್‌ನ ಶೀರ್ಷಿಕೆಯೂ ಓದುಗರನ್ನು ತಪ್ಪುದಾರಿಗೆಳೆಯುವಂತಿದೆ. ಲೇಖನದ ಮೊದಲ ಸಾಲು ಹೀಗಿದೆ, “ಕೊರೊನಾ ಸಾಂಕ್ರಾಮಿಕದಿಂದಾಗಿ ಚೀನಾದ ವಿರುದ್ಧ ಜರ್ಮನಿ ಸಿಟ್ಟಿಗೆದ್ದಿದೆ. ಹಾನಿಯ ನಷ್ಟ ಪರಿಹಾರವಾಗಿ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಟ್ಯಾಬ್ಲಾಡ್‌ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಅಂತಹ ಬಿಲ್‌ ಅನ್ನು ಜರ್ಮನಿ ಕಳಿಸಿಲ್ಲ ಎಂದು ಕೊನೆಯಲ್ಲಿ ಬರೆದಿದೆ.

25 ಗಂಟೆಗಳ ನಂತರ ದಿ ಎಕ್ಸ್‌ಪ್ರೆಸ್ ತಪ್ಪಾದ ಶೀರ್ಷಿಕೆಯನ್ನು ಬದಲಾಯಿಸಿತು. ವೆಬ್‌ಸೈಟ್‌ನ ಪ್ರಕಾರ, ಈ ಲೇಖನವು ‘ವಿಶ್ವ’ ವಿಭಾಗದಲ್ಲಿ ಹೆಚ್ಚು ಓದಿದ ಲೇಖನವಾಗಿತ್ತು ಎಂಬುದನ್ನು ಗಮನಿಸಬೇಕು.

ಈ ವಿಷಯದ ಕುರಿತು ಫ್ಯಾಕ್‌ ಚೆಕೆ ನಡೆಸಿದಾಗ ಥಾಯ್ಬಾವೊ ಎಂಬ ವಿಯೆಟ್ನಾಮಿ ಬ್ಲಾಗ್ ಒಂದು ಲೇಖನವನ್ನು ಪ್ರಕಟಿಸಿರುವುದನ್ನು ಕಂಡುಬಂದಿದೆ. ಇದು ಚೀನಾಕ್ಕೆ ರಶೀತಿಯನ್ನು ಮಾಡಿರುವ ‘ಬಿಲ್ಡ್’ ಪತ್ರಿಕೆಯ ವರದಿಯ ಸ್ಕ್ರೀನ್‌ಶಾಟ್ (ಕೆಳಗೆ ಚಿತ್ರವಿದೆ) ಒಳಗೊಂಡಿತ್ತು. ಏಪ್ರಿಲ್ 15 ರಂದು ಬಿಲ್ಡ್ ಕೆಳಗಿನ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಅದೇ ಶೀರ್ಷಿಕೆಯೊಂದಿಗೆ ಒಂದು ಲೇಖನವನ್ನು ಪ್ರಕಟಿಸಿತ್ತು, ಅದರಲ್ಲಿ ‘ಚೀನಾ ಈಗಾಗಲೇ ನಮಗೆ ನೀಡಬೇಕಾಗಿರುವುದು’ ಎಂದು ಬರೆದಿತ್ತು.

ಏಪ್ರಿಲ್ 18 ರಂದು, ಜರ್ಮನಿ ಮೂಲದ ನ್ಯೂಸ್ ಚಾನೆಲ್ ಡಿಡಬ್ಲ್ಯೂ, ಬಿಲ್ಡ್ ವರದಿಯ ರಶೀತಿಯನ್ನು ಪ್ರದರ್ಶಿಸುವ ಯೂಟ್ಯೂಬ್ ವರದಿಯನ್ನು ಪ್ರಕಟಿಸಿತು. ವರದಿಯ ಪ್ರಕಾರ ಲೇಖನವನ್ನು ಏಪ್ರಿಲ್ 15 ರಂದು (ಬುಧವಾರ) ಪ್ರಕಟಿಸಲಾಗಿದೆ.

ರಶೀತಿಯಲ್ಲಿನ ಕೆಲವು ವಿಷಯಗಳನ್ನು ಡಿಡಬ್ಲ್ಯೂ ವರದಿ ಮಾಡಿದೆ – ಪ್ರವಾಸೋದ್ಯಮದಲ್ಲಿ 24 ಬಿಲಿಯನ್ ಪೌಂಡ್ ಆದಾಯ ನಷ್ಟ, ಚಲನಚಿತ್ರೋದ್ಯಮಕ್ಕೆ 27.2 ಬಿಲಿಯನ್ ಪೌಂಡ್ ಆದಾಯ ನಷ್ಟ, ಜರ್ಮನ್ ವಿಮಾನಯಾನ ಲುಫ್ಥಾನ್ಸ ಗಂಟೆಗೆ 1 ಮಿಲಿಯನ್ ಪೌಂಡ್ ನಷ್ಟ ಮತ್ತು ಸಣ್ಣ ಉದ್ಯಮಗಳಿಗೆ 50 ಬಿಲಿಯನ್ ಪೌಂಡ್ ನಷ್ಟ ಎಂದು ಸೂಚಿಸಿದೆ.

ಇದಲ್ಲದೆ, ಯುಕೆ ಮೂಲದ ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಫುಲ್ ಫ್ಯಾಕ್ಟ್ ಏಪ್ರಿಲ್ 20 ರಂದು ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್ ಸಂದರ್ಶನದಲ್ಲಿ ಬಿಲ್ಡ್ ಚೀನಾದಿಂದ ಹಣಕ್ಕೆ ಬೇಡಿಕೆಯೂ ಭ್ರಮೆ ಎಂದಿದ್ದಾರೆ ಎಂದು ವರದಿ ಮಾಡಿದೆ.

ಏಪ್ರಿಲ್ 15 ರಂದು, ಬರ್ಲಿನ್‌ನ ಚೀನೀ ರಾಯಭಾರ ಕಚೇರಿಯು ಮಾಧ್ಯಮಗಳ ಆರೋಪಗಳಿಗೆ ಬಿಲ್ಡ್‌ನ ಸಂಪಾದಕ ಮುಖ್ಯಸ್ಥ ಜೂಲಿಯನ್ ರೀಚೆಲ್ಟ್‌ಗೆ ಬಹಿರಂಗ ಪತ್ರ ಬರೆದು ಪ್ರತಿಕ್ರಿಯಿಸಿತು. ಚೀನಾದ ರಾಯಭಾರ ಕಚೇರಿಯ ವಕ್ತಾರ ಟಾವೊ ಲಿಲಿ ಮಾತನಾಡಿ ಚೀನಾದ ನಾಯಕತ್ವವು ಪ್ರಮುಖ ಮಾಹಿತಿಯನ್ನು ವಾರಗಳವರೆಗೆ ಮುಚ್ಚಿಟ್ಟಿತ್ತು ಎಂಬ ಆರೋಪವನ್ನು ಅಲ್ಲಗೆಲೆದಿದ್ದಾರೆ.

ಚೀನಾ ಮಾಹಿತಿಯನ್ನು ಮರೆಮಾಡಲಿಲ್ಲ ಎಂದು ಪ್ರತಿಪಾದಿಸಲು ಲಿಲಿ ವಿಶ್ವ ಆರೋಗ್ಯ ಸಂಸ್ಥೆಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಪ್ರಮುಖ ಘಟನೆಗಳ ಸಮಯವನ್ನು ತೋರಿಸುತ್ತದೆ. ಈ ಬಗ್ಗೆ ಲಿಲಿ ಬಿಲ್ಡ್ ಪತ್ರಿಕೋದ್ಯಮದ ಬದ್ದತೆಯನ್ನು ಪ್ರಶ್ನಿಸಿ, ಅದು ರಾಷ್ಟ್ರೀಯತೆ, ಪೂರ್ವಾಗ್ರಹ ಮತ್ತು ಸೆನೋಫೋಬಿಯಾವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರು.

ಎರಡು ದಿನಗಳ ನಂತರ ಬಿಲ್ಡ್ ಸಂಪಾದಕ ರೀಚೆಲ್ಟ್ ಅವರು ಲಿಲಿಯ ಬರೆದ ಬಹಿರಂಗ ಪತ್ರಕ್ಕೆ ಮೌಖಿಕವಾಗಿ 3 ನಿಮಿಷಗಳ ವೀಡಿಯೊದಲ್ಲಿ ಪ್ರತಿಕ್ರಿಯಿಸಿ, ವೀಡಿಯೊದಲ್ಲಿ, ಅವರು ಚೀನಾದ ಆಂತರಿಕ ನೀತಿಗಳಾದ ಕಣ್ಗಾವಲು ಮತ್ತು ಸೆನ್ಸಾರ್ಶಿಪ್ ಅನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ “ನಿಮ್ಮ ನಿಯಮವನ್ನು ಟೀಕಿಸುವ ಪ್ರತಿಯೊಂದು ಪತ್ರಿಕೆ ಮತ್ತು ವೆಬ್‌ಸೈಟ್‌ಗಳನ್ನು ನೀವು ಮುಚ್ಚುತ್ತೀರಿ, ಆದರೆ ಬಾವಲಿ ಸೂಪ್ ಮಾರಾಟವಾಗುವ ಸ್ಟಾಲ್‌ಗಳನ್ನಲ್ಲ. ನಿಮ್ಮ ಜನರನ್ನು ನೀವು ಮೇಲ್ವಿಚಾರಣೆ ಮಾಡುತ್ತಿಲ್ಲ, ಆದರೆ ಅವರಿಗೆ ನೀವು ಅಪಾಯವನ್ನುಂಟುಮಾಡುತ್ತಿರುವಿರಿ ಜೊತೆಗೆ ಪ್ರಪಂಚದ ಉಳಿದ ಭಾಗಗಳಿಗೂ” ಎಂದಿದ್ದಾರೆ.

China‘s embassy in Berlin wrote me an open letter because they weren‘t too happy with our Corona coverage. I responded.

Posted by Julian Reichelt on Saturday, April 18, 2020

ಆದ್ದರಿಂದ, ಲಂಡನ್ ಮೂಲದ ದಿ ಎಕ್ಸ್‌ಪ್ರೆಸ್ ವರದಿಯ ನಂತರ ಹಲವಾರು ಭಾರತೀಯ ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ವರದಿಯನ್ನು ಮಾಡಿವೆ. ಇದು ಕೊರೊನಾದಿಂದಾಗಿ ಜರ್ಮನಿಯೂ ಚೀನಾದಿಂದ ಪರಿಹಾರವನ್ನು ಬಯಸುತ್ತಿದೆ ಎಂದು ಸೂಚಿಸುತ್ತದೆ. ಸತ್ಯವೇನೆಂದರೆ, ಜರ್ಮನ್ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಒಂದು ತನ್ನ ಅಭಿಪ್ರಾಯದ ತುಣುಕನ್ನು ಪ್ರಕಟಿಸಿ, ಕೊರೊನಾ ವೈರಸ್‌ನಿಂದ ಉಂಟಾದ ಹಾನಿಗಳಿಗೆ ಚೀನಾವನ್ನು ಹೊಣೆಗಾರನ್ನಾಗಿಸುವ ಒಂದು ವಿಚಾರವನ್ನು ಒಳಗೊಂಡಿದೆ. ಅದು ಸುಳ್ಳಾಗಿದ್ದು ಅಂತಹ ಸಾಕ್ಷ್ಯಗಳು ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...