Homeನಿಜವೋ ಸುಳ್ಳೋFact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

Fact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

- Advertisement -
- Advertisement -

ಲಂಡನ್ ಮೂಲದ ಎಕ್ಸ್‌ಪ್ರೆಸ್.ಕೊ.ಯುಕೆ ಎಂಬ ಪತ್ರಿಕೆ ಏಪ್ರಿಲ್ 20 ರಂದು ವಿವಾದಾತ್ಮಕ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಕೊರೊನಾ ಹಾನಿಗೆ ಪರಿಹಾರವಾಗಿ ಚೀನಾ ದೇಶವು ಜರ್ಮನಿಗೆ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಬರೆಯಲಾಗಿತ್ತು.ಅದಲ್ಲದೆ ಇದರ ನಂತರ ಹಲವಾರು ಮಾಧ್ಯಮಗಳು ಇದೇ ರೀತಿಯ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದ್ದವು. ಇಂಡಿಯಾ ಟಿವಿ ನ್ಯೂಸ್, ದಿ ಔಟ್‌ಲುಕ್, ಒರಿಸ್ಸಾ ಪೋಸ್ಟ್, ಅಮರ್ ಉಜಲಾ, ಪಂಜಾಬ್ ಕೇಸರಿ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಯನ್ನು ಪ್ರಕಟಿಸಿದ ಪ್ರಮುಖ ಪತ್ರಿಕೆಗಳಾಗಿವೆ. ಆದರೆ ದಿ ಔಟ್‌ಲುಕ್ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಗಳು ಮಾತ್ರ ವರದಿ ಮೂಲವನ್ನು ಐಎಎನ್‌ಎಸ್ ಎಂದು ಉಲ್ಲೇಖಿಸಿದೆ.

ಬಲಪಂಥೀಯ ಪ್ರಚಾರ ವೆಬ್‌ಸೈಟ್ ಒಪಿ ಇಂಡಿಯಾಕ್ಕಾಗಿ ಬರೆಯುವ ಅಶುತೋಷ್ ಮುಗ್ಲಿಕರ್ (ಆರ್ಕೈವ್ ಲಿಂಕ್) ಮತ್ತು ಡೆಮಾಕ್ರಸಿ ನ್ಯೂಸ್ ಲೈವ್‌ನಲ್ಲಿ ಮುಖ್ಯ ಸಂಪಾದಕ ರೋಹಿತ್ ಗಾಂಧಿ (ಆರ್ಕೈವ್ ಲಿಂಕ್) ಅವರು ಏಪ್ರಿಲ್ 20 ರಂದು ದಿ ಎಕ್ಸ್‌ಪ್ರೆಸ್ ವರದಿಯಲ್ಲಿನ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಗ್ಲಿಕರ್ ಅವರ ಟ್ವೀಟ್ ಅನ್ನು ಇದುವರೆಗೆ 850 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.ಫ್ಯಾಕ್ಟ್-ಚೆಕ್

ದಿ ಎಕ್ಸ್‌ಪ್ರೆಸ್‌ನ ಶೀರ್ಷಿಕೆಯೂ ಓದುಗರನ್ನು ತಪ್ಪುದಾರಿಗೆಳೆಯುವಂತಿದೆ. ಲೇಖನದ ಮೊದಲ ಸಾಲು ಹೀಗಿದೆ, “ಕೊರೊನಾ ಸಾಂಕ್ರಾಮಿಕದಿಂದಾಗಿ ಚೀನಾದ ವಿರುದ್ಧ ಜರ್ಮನಿ ಸಿಟ್ಟಿಗೆದ್ದಿದೆ. ಹಾನಿಯ ನಷ್ಟ ಪರಿಹಾರವಾಗಿ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಟ್ಯಾಬ್ಲಾಡ್‌ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಅಂತಹ ಬಿಲ್‌ ಅನ್ನು ಜರ್ಮನಿ ಕಳಿಸಿಲ್ಲ ಎಂದು ಕೊನೆಯಲ್ಲಿ ಬರೆದಿದೆ.

25 ಗಂಟೆಗಳ ನಂತರ ದಿ ಎಕ್ಸ್‌ಪ್ರೆಸ್ ತಪ್ಪಾದ ಶೀರ್ಷಿಕೆಯನ್ನು ಬದಲಾಯಿಸಿತು. ವೆಬ್‌ಸೈಟ್‌ನ ಪ್ರಕಾರ, ಈ ಲೇಖನವು ‘ವಿಶ್ವ’ ವಿಭಾಗದಲ್ಲಿ ಹೆಚ್ಚು ಓದಿದ ಲೇಖನವಾಗಿತ್ತು ಎಂಬುದನ್ನು ಗಮನಿಸಬೇಕು.

ಈ ವಿಷಯದ ಕುರಿತು ಫ್ಯಾಕ್‌ ಚೆಕೆ ನಡೆಸಿದಾಗ ಥಾಯ್ಬಾವೊ ಎಂಬ ವಿಯೆಟ್ನಾಮಿ ಬ್ಲಾಗ್ ಒಂದು ಲೇಖನವನ್ನು ಪ್ರಕಟಿಸಿರುವುದನ್ನು ಕಂಡುಬಂದಿದೆ. ಇದು ಚೀನಾಕ್ಕೆ ರಶೀತಿಯನ್ನು ಮಾಡಿರುವ ‘ಬಿಲ್ಡ್’ ಪತ್ರಿಕೆಯ ವರದಿಯ ಸ್ಕ್ರೀನ್‌ಶಾಟ್ (ಕೆಳಗೆ ಚಿತ್ರವಿದೆ) ಒಳಗೊಂಡಿತ್ತು. ಏಪ್ರಿಲ್ 15 ರಂದು ಬಿಲ್ಡ್ ಕೆಳಗಿನ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಅದೇ ಶೀರ್ಷಿಕೆಯೊಂದಿಗೆ ಒಂದು ಲೇಖನವನ್ನು ಪ್ರಕಟಿಸಿತ್ತು, ಅದರಲ್ಲಿ ‘ಚೀನಾ ಈಗಾಗಲೇ ನಮಗೆ ನೀಡಬೇಕಾಗಿರುವುದು’ ಎಂದು ಬರೆದಿತ್ತು.

ಏಪ್ರಿಲ್ 18 ರಂದು, ಜರ್ಮನಿ ಮೂಲದ ನ್ಯೂಸ್ ಚಾನೆಲ್ ಡಿಡಬ್ಲ್ಯೂ, ಬಿಲ್ಡ್ ವರದಿಯ ರಶೀತಿಯನ್ನು ಪ್ರದರ್ಶಿಸುವ ಯೂಟ್ಯೂಬ್ ವರದಿಯನ್ನು ಪ್ರಕಟಿಸಿತು. ವರದಿಯ ಪ್ರಕಾರ ಲೇಖನವನ್ನು ಏಪ್ರಿಲ್ 15 ರಂದು (ಬುಧವಾರ) ಪ್ರಕಟಿಸಲಾಗಿದೆ.

ರಶೀತಿಯಲ್ಲಿನ ಕೆಲವು ವಿಷಯಗಳನ್ನು ಡಿಡಬ್ಲ್ಯೂ ವರದಿ ಮಾಡಿದೆ – ಪ್ರವಾಸೋದ್ಯಮದಲ್ಲಿ 24 ಬಿಲಿಯನ್ ಪೌಂಡ್ ಆದಾಯ ನಷ್ಟ, ಚಲನಚಿತ್ರೋದ್ಯಮಕ್ಕೆ 27.2 ಬಿಲಿಯನ್ ಪೌಂಡ್ ಆದಾಯ ನಷ್ಟ, ಜರ್ಮನ್ ವಿಮಾನಯಾನ ಲುಫ್ಥಾನ್ಸ ಗಂಟೆಗೆ 1 ಮಿಲಿಯನ್ ಪೌಂಡ್ ನಷ್ಟ ಮತ್ತು ಸಣ್ಣ ಉದ್ಯಮಗಳಿಗೆ 50 ಬಿಲಿಯನ್ ಪೌಂಡ್ ನಷ್ಟ ಎಂದು ಸೂಚಿಸಿದೆ.

ಇದಲ್ಲದೆ, ಯುಕೆ ಮೂಲದ ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಫುಲ್ ಫ್ಯಾಕ್ಟ್ ಏಪ್ರಿಲ್ 20 ರಂದು ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್ ಸಂದರ್ಶನದಲ್ಲಿ ಬಿಲ್ಡ್ ಚೀನಾದಿಂದ ಹಣಕ್ಕೆ ಬೇಡಿಕೆಯೂ ಭ್ರಮೆ ಎಂದಿದ್ದಾರೆ ಎಂದು ವರದಿ ಮಾಡಿದೆ.

ಏಪ್ರಿಲ್ 15 ರಂದು, ಬರ್ಲಿನ್‌ನ ಚೀನೀ ರಾಯಭಾರ ಕಚೇರಿಯು ಮಾಧ್ಯಮಗಳ ಆರೋಪಗಳಿಗೆ ಬಿಲ್ಡ್‌ನ ಸಂಪಾದಕ ಮುಖ್ಯಸ್ಥ ಜೂಲಿಯನ್ ರೀಚೆಲ್ಟ್‌ಗೆ ಬಹಿರಂಗ ಪತ್ರ ಬರೆದು ಪ್ರತಿಕ್ರಿಯಿಸಿತು. ಚೀನಾದ ರಾಯಭಾರ ಕಚೇರಿಯ ವಕ್ತಾರ ಟಾವೊ ಲಿಲಿ ಮಾತನಾಡಿ ಚೀನಾದ ನಾಯಕತ್ವವು ಪ್ರಮುಖ ಮಾಹಿತಿಯನ್ನು ವಾರಗಳವರೆಗೆ ಮುಚ್ಚಿಟ್ಟಿತ್ತು ಎಂಬ ಆರೋಪವನ್ನು ಅಲ್ಲಗೆಲೆದಿದ್ದಾರೆ.

ಚೀನಾ ಮಾಹಿತಿಯನ್ನು ಮರೆಮಾಡಲಿಲ್ಲ ಎಂದು ಪ್ರತಿಪಾದಿಸಲು ಲಿಲಿ ವಿಶ್ವ ಆರೋಗ್ಯ ಸಂಸ್ಥೆಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಪ್ರಮುಖ ಘಟನೆಗಳ ಸಮಯವನ್ನು ತೋರಿಸುತ್ತದೆ. ಈ ಬಗ್ಗೆ ಲಿಲಿ ಬಿಲ್ಡ್ ಪತ್ರಿಕೋದ್ಯಮದ ಬದ್ದತೆಯನ್ನು ಪ್ರಶ್ನಿಸಿ, ಅದು ರಾಷ್ಟ್ರೀಯತೆ, ಪೂರ್ವಾಗ್ರಹ ಮತ್ತು ಸೆನೋಫೋಬಿಯಾವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರು.

ಎರಡು ದಿನಗಳ ನಂತರ ಬಿಲ್ಡ್ ಸಂಪಾದಕ ರೀಚೆಲ್ಟ್ ಅವರು ಲಿಲಿಯ ಬರೆದ ಬಹಿರಂಗ ಪತ್ರಕ್ಕೆ ಮೌಖಿಕವಾಗಿ 3 ನಿಮಿಷಗಳ ವೀಡಿಯೊದಲ್ಲಿ ಪ್ರತಿಕ್ರಿಯಿಸಿ, ವೀಡಿಯೊದಲ್ಲಿ, ಅವರು ಚೀನಾದ ಆಂತರಿಕ ನೀತಿಗಳಾದ ಕಣ್ಗಾವಲು ಮತ್ತು ಸೆನ್ಸಾರ್ಶಿಪ್ ಅನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ “ನಿಮ್ಮ ನಿಯಮವನ್ನು ಟೀಕಿಸುವ ಪ್ರತಿಯೊಂದು ಪತ್ರಿಕೆ ಮತ್ತು ವೆಬ್‌ಸೈಟ್‌ಗಳನ್ನು ನೀವು ಮುಚ್ಚುತ್ತೀರಿ, ಆದರೆ ಬಾವಲಿ ಸೂಪ್ ಮಾರಾಟವಾಗುವ ಸ್ಟಾಲ್‌ಗಳನ್ನಲ್ಲ. ನಿಮ್ಮ ಜನರನ್ನು ನೀವು ಮೇಲ್ವಿಚಾರಣೆ ಮಾಡುತ್ತಿಲ್ಲ, ಆದರೆ ಅವರಿಗೆ ನೀವು ಅಪಾಯವನ್ನುಂಟುಮಾಡುತ್ತಿರುವಿರಿ ಜೊತೆಗೆ ಪ್ರಪಂಚದ ಉಳಿದ ಭಾಗಗಳಿಗೂ” ಎಂದಿದ್ದಾರೆ.

China‘s embassy in Berlin wrote me an open letter because they weren‘t too happy with our Corona coverage. I responded.

Posted by Julian Reichelt on Saturday, April 18, 2020

ಆದ್ದರಿಂದ, ಲಂಡನ್ ಮೂಲದ ದಿ ಎಕ್ಸ್‌ಪ್ರೆಸ್ ವರದಿಯ ನಂತರ ಹಲವಾರು ಭಾರತೀಯ ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ವರದಿಯನ್ನು ಮಾಡಿವೆ. ಇದು ಕೊರೊನಾದಿಂದಾಗಿ ಜರ್ಮನಿಯೂ ಚೀನಾದಿಂದ ಪರಿಹಾರವನ್ನು ಬಯಸುತ್ತಿದೆ ಎಂದು ಸೂಚಿಸುತ್ತದೆ. ಸತ್ಯವೇನೆಂದರೆ, ಜರ್ಮನ್ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಒಂದು ತನ್ನ ಅಭಿಪ್ರಾಯದ ತುಣುಕನ್ನು ಪ್ರಕಟಿಸಿ, ಕೊರೊನಾ ವೈರಸ್‌ನಿಂದ ಉಂಟಾದ ಹಾನಿಗಳಿಗೆ ಚೀನಾವನ್ನು ಹೊಣೆಗಾರನ್ನಾಗಿಸುವ ಒಂದು ವಿಚಾರವನ್ನು ಒಳಗೊಂಡಿದೆ. ಅದು ಸುಳ್ಳಾಗಿದ್ದು ಅಂತಹ ಸಾಕ್ಷ್ಯಗಳು ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...