Homeನಿಜವೋ ಸುಳ್ಳೋFact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

Fact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

- Advertisement -
- Advertisement -

ಲಂಡನ್ ಮೂಲದ ಎಕ್ಸ್‌ಪ್ರೆಸ್.ಕೊ.ಯುಕೆ ಎಂಬ ಪತ್ರಿಕೆ ಏಪ್ರಿಲ್ 20 ರಂದು ವಿವಾದಾತ್ಮಕ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಕೊರೊನಾ ಹಾನಿಗೆ ಪರಿಹಾರವಾಗಿ ಚೀನಾ ದೇಶವು ಜರ್ಮನಿಗೆ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಬರೆಯಲಾಗಿತ್ತು.ಅದಲ್ಲದೆ ಇದರ ನಂತರ ಹಲವಾರು ಮಾಧ್ಯಮಗಳು ಇದೇ ರೀತಿಯ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದ್ದವು. ಇಂಡಿಯಾ ಟಿವಿ ನ್ಯೂಸ್, ದಿ ಔಟ್‌ಲುಕ್, ಒರಿಸ್ಸಾ ಪೋಸ್ಟ್, ಅಮರ್ ಉಜಲಾ, ಪಂಜಾಬ್ ಕೇಸರಿ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಯನ್ನು ಪ್ರಕಟಿಸಿದ ಪ್ರಮುಖ ಪತ್ರಿಕೆಗಳಾಗಿವೆ. ಆದರೆ ದಿ ಔಟ್‌ಲುಕ್ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಗಳು ಮಾತ್ರ ವರದಿ ಮೂಲವನ್ನು ಐಎಎನ್‌ಎಸ್ ಎಂದು ಉಲ್ಲೇಖಿಸಿದೆ.

ಬಲಪಂಥೀಯ ಪ್ರಚಾರ ವೆಬ್‌ಸೈಟ್ ಒಪಿ ಇಂಡಿಯಾಕ್ಕಾಗಿ ಬರೆಯುವ ಅಶುತೋಷ್ ಮುಗ್ಲಿಕರ್ (ಆರ್ಕೈವ್ ಲಿಂಕ್) ಮತ್ತು ಡೆಮಾಕ್ರಸಿ ನ್ಯೂಸ್ ಲೈವ್‌ನಲ್ಲಿ ಮುಖ್ಯ ಸಂಪಾದಕ ರೋಹಿತ್ ಗಾಂಧಿ (ಆರ್ಕೈವ್ ಲಿಂಕ್) ಅವರು ಏಪ್ರಿಲ್ 20 ರಂದು ದಿ ಎಕ್ಸ್‌ಪ್ರೆಸ್ ವರದಿಯಲ್ಲಿನ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಗ್ಲಿಕರ್ ಅವರ ಟ್ವೀಟ್ ಅನ್ನು ಇದುವರೆಗೆ 850 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.ಫ್ಯಾಕ್ಟ್-ಚೆಕ್

ದಿ ಎಕ್ಸ್‌ಪ್ರೆಸ್‌ನ ಶೀರ್ಷಿಕೆಯೂ ಓದುಗರನ್ನು ತಪ್ಪುದಾರಿಗೆಳೆಯುವಂತಿದೆ. ಲೇಖನದ ಮೊದಲ ಸಾಲು ಹೀಗಿದೆ, “ಕೊರೊನಾ ಸಾಂಕ್ರಾಮಿಕದಿಂದಾಗಿ ಚೀನಾದ ವಿರುದ್ಧ ಜರ್ಮನಿ ಸಿಟ್ಟಿಗೆದ್ದಿದೆ. ಹಾನಿಯ ನಷ್ಟ ಪರಿಹಾರವಾಗಿ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಟ್ಯಾಬ್ಲಾಡ್‌ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಅಂತಹ ಬಿಲ್‌ ಅನ್ನು ಜರ್ಮನಿ ಕಳಿಸಿಲ್ಲ ಎಂದು ಕೊನೆಯಲ್ಲಿ ಬರೆದಿದೆ.

25 ಗಂಟೆಗಳ ನಂತರ ದಿ ಎಕ್ಸ್‌ಪ್ರೆಸ್ ತಪ್ಪಾದ ಶೀರ್ಷಿಕೆಯನ್ನು ಬದಲಾಯಿಸಿತು. ವೆಬ್‌ಸೈಟ್‌ನ ಪ್ರಕಾರ, ಈ ಲೇಖನವು ‘ವಿಶ್ವ’ ವಿಭಾಗದಲ್ಲಿ ಹೆಚ್ಚು ಓದಿದ ಲೇಖನವಾಗಿತ್ತು ಎಂಬುದನ್ನು ಗಮನಿಸಬೇಕು.

ಈ ವಿಷಯದ ಕುರಿತು ಫ್ಯಾಕ್‌ ಚೆಕೆ ನಡೆಸಿದಾಗ ಥಾಯ್ಬಾವೊ ಎಂಬ ವಿಯೆಟ್ನಾಮಿ ಬ್ಲಾಗ್ ಒಂದು ಲೇಖನವನ್ನು ಪ್ರಕಟಿಸಿರುವುದನ್ನು ಕಂಡುಬಂದಿದೆ. ಇದು ಚೀನಾಕ್ಕೆ ರಶೀತಿಯನ್ನು ಮಾಡಿರುವ ‘ಬಿಲ್ಡ್’ ಪತ್ರಿಕೆಯ ವರದಿಯ ಸ್ಕ್ರೀನ್‌ಶಾಟ್ (ಕೆಳಗೆ ಚಿತ್ರವಿದೆ) ಒಳಗೊಂಡಿತ್ತು. ಏಪ್ರಿಲ್ 15 ರಂದು ಬಿಲ್ಡ್ ಕೆಳಗಿನ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಅದೇ ಶೀರ್ಷಿಕೆಯೊಂದಿಗೆ ಒಂದು ಲೇಖನವನ್ನು ಪ್ರಕಟಿಸಿತ್ತು, ಅದರಲ್ಲಿ ‘ಚೀನಾ ಈಗಾಗಲೇ ನಮಗೆ ನೀಡಬೇಕಾಗಿರುವುದು’ ಎಂದು ಬರೆದಿತ್ತು.

ಏಪ್ರಿಲ್ 18 ರಂದು, ಜರ್ಮನಿ ಮೂಲದ ನ್ಯೂಸ್ ಚಾನೆಲ್ ಡಿಡಬ್ಲ್ಯೂ, ಬಿಲ್ಡ್ ವರದಿಯ ರಶೀತಿಯನ್ನು ಪ್ರದರ್ಶಿಸುವ ಯೂಟ್ಯೂಬ್ ವರದಿಯನ್ನು ಪ್ರಕಟಿಸಿತು. ವರದಿಯ ಪ್ರಕಾರ ಲೇಖನವನ್ನು ಏಪ್ರಿಲ್ 15 ರಂದು (ಬುಧವಾರ) ಪ್ರಕಟಿಸಲಾಗಿದೆ.

ರಶೀತಿಯಲ್ಲಿನ ಕೆಲವು ವಿಷಯಗಳನ್ನು ಡಿಡಬ್ಲ್ಯೂ ವರದಿ ಮಾಡಿದೆ – ಪ್ರವಾಸೋದ್ಯಮದಲ್ಲಿ 24 ಬಿಲಿಯನ್ ಪೌಂಡ್ ಆದಾಯ ನಷ್ಟ, ಚಲನಚಿತ್ರೋದ್ಯಮಕ್ಕೆ 27.2 ಬಿಲಿಯನ್ ಪೌಂಡ್ ಆದಾಯ ನಷ್ಟ, ಜರ್ಮನ್ ವಿಮಾನಯಾನ ಲುಫ್ಥಾನ್ಸ ಗಂಟೆಗೆ 1 ಮಿಲಿಯನ್ ಪೌಂಡ್ ನಷ್ಟ ಮತ್ತು ಸಣ್ಣ ಉದ್ಯಮಗಳಿಗೆ 50 ಬಿಲಿಯನ್ ಪೌಂಡ್ ನಷ್ಟ ಎಂದು ಸೂಚಿಸಿದೆ.

ಇದಲ್ಲದೆ, ಯುಕೆ ಮೂಲದ ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಫುಲ್ ಫ್ಯಾಕ್ಟ್ ಏಪ್ರಿಲ್ 20 ರಂದು ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್ ಸಂದರ್ಶನದಲ್ಲಿ ಬಿಲ್ಡ್ ಚೀನಾದಿಂದ ಹಣಕ್ಕೆ ಬೇಡಿಕೆಯೂ ಭ್ರಮೆ ಎಂದಿದ್ದಾರೆ ಎಂದು ವರದಿ ಮಾಡಿದೆ.

ಏಪ್ರಿಲ್ 15 ರಂದು, ಬರ್ಲಿನ್‌ನ ಚೀನೀ ರಾಯಭಾರ ಕಚೇರಿಯು ಮಾಧ್ಯಮಗಳ ಆರೋಪಗಳಿಗೆ ಬಿಲ್ಡ್‌ನ ಸಂಪಾದಕ ಮುಖ್ಯಸ್ಥ ಜೂಲಿಯನ್ ರೀಚೆಲ್ಟ್‌ಗೆ ಬಹಿರಂಗ ಪತ್ರ ಬರೆದು ಪ್ರತಿಕ್ರಿಯಿಸಿತು. ಚೀನಾದ ರಾಯಭಾರ ಕಚೇರಿಯ ವಕ್ತಾರ ಟಾವೊ ಲಿಲಿ ಮಾತನಾಡಿ ಚೀನಾದ ನಾಯಕತ್ವವು ಪ್ರಮುಖ ಮಾಹಿತಿಯನ್ನು ವಾರಗಳವರೆಗೆ ಮುಚ್ಚಿಟ್ಟಿತ್ತು ಎಂಬ ಆರೋಪವನ್ನು ಅಲ್ಲಗೆಲೆದಿದ್ದಾರೆ.

ಚೀನಾ ಮಾಹಿತಿಯನ್ನು ಮರೆಮಾಡಲಿಲ್ಲ ಎಂದು ಪ್ರತಿಪಾದಿಸಲು ಲಿಲಿ ವಿಶ್ವ ಆರೋಗ್ಯ ಸಂಸ್ಥೆಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಪ್ರಮುಖ ಘಟನೆಗಳ ಸಮಯವನ್ನು ತೋರಿಸುತ್ತದೆ. ಈ ಬಗ್ಗೆ ಲಿಲಿ ಬಿಲ್ಡ್ ಪತ್ರಿಕೋದ್ಯಮದ ಬದ್ದತೆಯನ್ನು ಪ್ರಶ್ನಿಸಿ, ಅದು ರಾಷ್ಟ್ರೀಯತೆ, ಪೂರ್ವಾಗ್ರಹ ಮತ್ತು ಸೆನೋಫೋಬಿಯಾವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರು.

ಎರಡು ದಿನಗಳ ನಂತರ ಬಿಲ್ಡ್ ಸಂಪಾದಕ ರೀಚೆಲ್ಟ್ ಅವರು ಲಿಲಿಯ ಬರೆದ ಬಹಿರಂಗ ಪತ್ರಕ್ಕೆ ಮೌಖಿಕವಾಗಿ 3 ನಿಮಿಷಗಳ ವೀಡಿಯೊದಲ್ಲಿ ಪ್ರತಿಕ್ರಿಯಿಸಿ, ವೀಡಿಯೊದಲ್ಲಿ, ಅವರು ಚೀನಾದ ಆಂತರಿಕ ನೀತಿಗಳಾದ ಕಣ್ಗಾವಲು ಮತ್ತು ಸೆನ್ಸಾರ್ಶಿಪ್ ಅನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ “ನಿಮ್ಮ ನಿಯಮವನ್ನು ಟೀಕಿಸುವ ಪ್ರತಿಯೊಂದು ಪತ್ರಿಕೆ ಮತ್ತು ವೆಬ್‌ಸೈಟ್‌ಗಳನ್ನು ನೀವು ಮುಚ್ಚುತ್ತೀರಿ, ಆದರೆ ಬಾವಲಿ ಸೂಪ್ ಮಾರಾಟವಾಗುವ ಸ್ಟಾಲ್‌ಗಳನ್ನಲ್ಲ. ನಿಮ್ಮ ಜನರನ್ನು ನೀವು ಮೇಲ್ವಿಚಾರಣೆ ಮಾಡುತ್ತಿಲ್ಲ, ಆದರೆ ಅವರಿಗೆ ನೀವು ಅಪಾಯವನ್ನುಂಟುಮಾಡುತ್ತಿರುವಿರಿ ಜೊತೆಗೆ ಪ್ರಪಂಚದ ಉಳಿದ ಭಾಗಗಳಿಗೂ” ಎಂದಿದ್ದಾರೆ.

China‘s embassy in Berlin wrote me an open letter because they weren‘t too happy with our Corona coverage. I responded.

Posted by Julian Reichelt on Saturday, April 18, 2020

ಆದ್ದರಿಂದ, ಲಂಡನ್ ಮೂಲದ ದಿ ಎಕ್ಸ್‌ಪ್ರೆಸ್ ವರದಿಯ ನಂತರ ಹಲವಾರು ಭಾರತೀಯ ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ವರದಿಯನ್ನು ಮಾಡಿವೆ. ಇದು ಕೊರೊನಾದಿಂದಾಗಿ ಜರ್ಮನಿಯೂ ಚೀನಾದಿಂದ ಪರಿಹಾರವನ್ನು ಬಯಸುತ್ತಿದೆ ಎಂದು ಸೂಚಿಸುತ್ತದೆ. ಸತ್ಯವೇನೆಂದರೆ, ಜರ್ಮನ್ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಒಂದು ತನ್ನ ಅಭಿಪ್ರಾಯದ ತುಣುಕನ್ನು ಪ್ರಕಟಿಸಿ, ಕೊರೊನಾ ವೈರಸ್‌ನಿಂದ ಉಂಟಾದ ಹಾನಿಗಳಿಗೆ ಚೀನಾವನ್ನು ಹೊಣೆಗಾರನ್ನಾಗಿಸುವ ಒಂದು ವಿಚಾರವನ್ನು ಒಳಗೊಂಡಿದೆ. ಅದು ಸುಳ್ಳಾಗಿದ್ದು ಅಂತಹ ಸಾಕ್ಷ್ಯಗಳು ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...