Homeಮುಖಪುಟನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರಲ್ಲಿ ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು.

- Advertisement -
- Advertisement -

ಇತ್ತೀಚೆಗೆ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟ “ಕೇಸರಿ ನಮ್ಮ ಅಸಲಿ ರಾಷ್ಟ್ರಧ್ವಜ, ಮತ್ತೆ ಮುಸ್ಲಿಮರು ಗಲಾಟೆ ಮಾಡಿದ್ದಕ್ಕೆ ಒಂದು ಹಸಿರು ಬಟ್ಟೆಯ ತುಂಡನ್ನು ಅದಕ್ಕೆ ಜೋಡಿಸಿದ್ದು” ಎಂದು  ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅಲ್ಲಿದ್ದ 90% ಮಂದಿ ಕುರುಡಾಗಿ ನಂಬಿರುತ್ತಾರೆ.ಯಾಕೆಂದರೆ ಆತನ ಭಾಷಣ ಆಲಿಸಲು ಹೋಗುವವರೆಲ್ಲಾ ಯೋಚಿಸಿ ಪರಾಮರ್ಶಿಸುವ ಗುಣ ಉಳ್ಳವರಲ್ಲ. ಇನ್ನು ಮಾಧ್ಯಮಗಳು ಸಹ ಅದನ್ನೆ ಪ್ರಸಾರ ಮಾಡುತ್ತಿವೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜದ ಮತ್ತು ರಾಷ್ಟ್ರೀಯ ಲಾಂಛನ ವಿನ್ಯಾಸದ ನಿಜವಾದ ಕತೆಯನ್ನು ಹೆಚ್ಚೆಚ್ಚು ಪ್ರಚಾರ ಮಾಡಬೇಕಾದುದು ಕಾಲದ ಜರೂರು ಕೂಡಾ.

ರಾಷ್ಟ್ರ ಧ್ವಜದ ಬಣ್ಣಗಳು ಯಾವುದೇ ಧರ್ಮ ಜಾತಿ ಪಂಗಡವನ್ನು ಸಂಕೇತಿಸುವುದಿಲ್ಲ.ಕೇಸರಿ ಹಿಂದೂ ಅಲ್ಲ, ಹಸಿರು ಮುಸ್ಲಿಂ ಕೂಡಾ ಅಲ್ಲ. ಬದಲಿಗೆ;

  • ಕೇಸರಿ ತ್ಯಾಗದ ಸಂಕೇತ.
  • ಬಿಳಿ ಶಾಂತಿಯ ಸಂಕೇತ.
  • ಹಸಿರು ಸಮೃದ್ಧಿಯ ಸಂಕೇತ.

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರ ಬಣ್ಣ ಈಗಿನ ರಾಷ್ಟ್ರಧ್ವಜದ ಬಣ್ಣವನ್ನು ಹೋಲುತ್ತಿತ್ತು. ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು. ಅದನ್ನೇ ರಾಷ್ಟ್ರಧ್ಚಜ ಮಾಡುವ ಬಗ್ಗೆ ಆಗಿನ ಅನೇಕ ಮುಖಂಡರ ಒಲವಿತ್ತು. ಆದರೆ ಅದಕ್ಕೆ ಭಿನ್ನಮತ ಬಂದಾಗ ಡಾ. ಬಾಬು ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ಫ್ಲ್ಯಾಗ್ ಕಮಿಟಿಯೊಂದನ್ನು ರೂಪಿಸಲಾಯಿತು.

ಈ ಸಮಿತಿಯಲ್ಲಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಿದ್ದ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರೂ ಸದಸ್ಯರಾಗಿದ್ದರು. ಬದ್ರುದ್ದೀನ್ ತಯ್ಯ‌ಬ್‌ಜಿ ಅವರಿಗೆ ದೇಶ ವಿಭಜನೆಯ ಕಾರ್ಯಾಚರಣೆ ನಡೆಯುತ್ತಿದ್ದಾಗ ನೀವು ಪಾಕಿಸ್ತಾನಕ್ಕೆ ಬರಬೇಕೆಂದೂ, ನಿಮಗೆ ಪಾಕಿಸ್ತಾನದಲ್ಲಿ ಉನ್ನತವಾದ ಸ್ಥಾನಮಾನ ನೀಡಲಾಗುವುದೆಂದೂ ಮುಸ್ಲಿಮ್ ಲೀಗಿನ ಮುಖಂಡರು ಆಹ್ವಾನ ನೀಡಿದ್ದರು. ಅದಕ್ಕೆ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರು ಮುಸ್ಲಿಂ ಲೀಗ್ ಮುಖಂಡರಿಗೆ ತನ್ನ ನಿಲುವನ್ನು ಸ್ಪಷ್ಟವಾಗಿ ವಿವರಿಸುವ ಪತ್ರದ ಮೂಲಕ ಉತ್ತರ ನೀಡಿದರು. ಅದರ ಸಾರಾಂಶ ಹೀಗಿದೆ.

ಬದ್ರುದ್ದೀನ್ ತಯ್ಯ್‌ಬ್‌ಜಿ ಮತ್ತು ಸುರಯ್ಯಾ ತಯ್ಯ್‌ಬ್‌ಜಿ

“ಪಾಕಿಸ್ತಾನದ ಜೊತೆಗೆ ಬಂದರೆ ನನಗೆ ನೀವು ಉನ್ನತ ಸ್ಥಾನಮಾನವೇನೋ ನೀಡಬಹುದು. ಆದರೆ ನಾನು ಧರ್ಮಾಧಾರಿತ ರಾಷ್ಟ್ರದಲ್ಲಿ ಇರಬಯಸುವುದಿಲ್ಲ. ಅಲ್ಲದೆ ನಾನು ಮುಸ್ಲಿಂ ‌ಲೀಗ್‌ನ ಸಿದ್ಧಾಂತವನ್ನು ಒಪ್ಪುವುದಿಲ್ಲ. ನಾನು ಯಾವುದೇ ಕಾರಣಕ್ಕೂ ನನ್ನ ಮಾತೃಭೂಮಿ ತೊರೆದು ಬರಲಾರೆ. ಇನ್ನು ಮನವೊಲಿಸುವ ಪ್ರಯತ್ನ ಮುಂದುವರಿಸದಿರಿ”

ಫ್ಯ್ಲಾಗ್ ಕಮಿಟಿ ಧ್ವಜದ ವಿನ್ಯಾಸಗಳನ್ನು ಮತ್ತು ರಾಷ್ಟ್ರೀಯ ಲಾಂಛನದ ವಿನ್ಯಾಸಗಳನ್ನು ತಯಾರಿಸಿ ಕಳುಹಿಸುವಂತೆ ಎಲ್ಲಾ ಶಾಲೆಗಳಿಗೆ ಪತ್ರಗಳನ್ನು ಕಳುಹಿಸಿತು. ಜವಾಹರ್‌ಲಾಲ್ ನೆಹರೂ ಅವರು ಬದ್ರುದ್ದೀನ್ ತಯ್ಯ್‌ಬ್‌ಜಿ ಅವರನ್ನು ಕರೆದು,“ಬದ್ರ್.. ನೀವಿದರಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಮತ್ತು ವಿನ್ಯಾಸದಲ್ಲಿ ನಿಮ್ಮ ಪ್ರಮುಖ ಪಾತ್ರವನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದರು.

ಬದ್ರುದ್ದೀನ್ ತಯ್ಯ‌ಬ್‌ಜಿಯವರ ಪತ್ನಿ ಸುರಯ್ಯಾ ತಯ್ಯ್‌ಬ್‌ಜಿ ಆ ಕಾಲದ ಪ್ರಸಿದ್ಧ ಲೇಖಕಿಯಾಗಿದ್ದರು. ಧ್ವಜ ವಿನ್ಯಾಸ ಮತ್ತು ಲಾಂಛನ ವಿನ್ಯಾಸ ಕಾರ್ಯದಲ್ಲಿ ಅವರು ಗಂಭೀರವಾಗಿ ತೊಡಗಿಸಿಕೊಂಡರು. ಅವರು ಕೇಸರಿ ಬಿಳಿ ಹಸಿರು ಮತ್ತು ಮಧ್ಯೆ ಕಪ್ಪು ಬಣ್ಣದ ಅಶೋಕ ಚಕ್ರವಿರುವ ವಿನ್ಯಾಸವನ್ನು ತಯಾರಿಸಿ ಕಳುಹಿಸಿದರು. ಮತ್ತು ನಾಲ್ಕು ಸಿಂಹಗಳ ಮುಖವನ್ನು ರಾಷ್ಟ್ರೀಯ ಲಾಂಛನದ ಆಯ್ಕೆಗೆ ಕಳುಹಿಸಿದರು.

ಅದಾಗಲೇ ನೂರಾರು ಧ್ವಜ ವಿನ್ಯಾಸಗಳು ಮತ್ತು‌ ಲಾಂಛನ ವಿನ್ಯಾಸಗಳು ಆಯ್ಕೆ ಕೋರಿ ಬಂದಿತ್ತು.
ಹೆಚ್ಚಿನವುಗಳಲ್ಲಿ ಬ್ರಿಟಿಷ್ ಧ್ವಜ ಮತ್ತು‌ ಲಾಂಛನದ ಪ್ರಭಾವ ಎದ್ದು ಕಾಣುತ್ತಿದ್ದವು. ಅವುಗಳನ್ನೆಲ್ಲಾ ಫ್ಲ್ಯಾಗ್ ಕಮಿಟಿ ತಿರಸ್ಕರಿಸಿತು. ಕೊನೆಯ ಸುತ್ತಿಗೆ ಕೆಲವನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಸುರಯ್ಯಾ ತಯ್ಯ್‌ಬ್‌ಜಿ ವಿನ್ಯಾಸಗೊಳಿಸಿದ ಧ್ವಜ ಸರ್ವಾನುಮತದ ಆಯ್ಕೆಯಾಯಿತು. ಗಾಂಧೀಜಿಯವರು ಅದರಲ್ಲೊಂದು ಪುಟ್ಟ ಬದಲಾವಣೆ ಮಾಡಿದರು. ಸುರಯ್ಯಾ ಅವರ ವಿನ್ಯಾಸದಲ್ಲಿ ಅಶೋಕ ಚಕ್ರವು ಕಪ್ಪು ಬಣ್ಣದಲ್ಲಿತ್ತು, ಗಾಂಧೀಜಿ ಅದಕ್ಕೆ ನೀಲಿ ಬಣ್ಣ ಕೊಡುವಂತೆ ಸಲಹೆ ನೀಡಿದರು.

ರಾಷ್ಟ್ರೀಯ ಲಾಂಛನಕ್ಕೆ ಹುಲಿ, ಚಿರತೆ, ಕರಡಿ, ಹಂಸ ಮುಂತಾದ ಪ್ರಾಣಿ ಪಕ್ಷಿಗಳ ವಿನ್ಯಾಸವಿರುವವುಗಳು ಕೂಡಾ ಸುರಯ್ಯಾ ತಯ್ಯ್‌ಬ್‌ಜಿ ಅವರ ವಿನ್ಯಾಸದ ಜೊತೆಗೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿತ್ತು. ಅಂತಿಮವಾಗಿ ಸುರಯ್ಯಾ ತಯ್ಯಬ್‌ಜಿ ಅವರು ವಿನ್ಯಾಸಗೊಳಿಸಿದ ನಾಲ್ಕು ಸಿಂಹಗಳು ರಾಷ್ಟ್ರೀಯ ಲಾಂಛನವಾಗಿ ಆಯ್ಕೆಗೊಂಡಿತು. ಭಾರತ ಸರಕಾರದ ಯಾವುದೇ ಪತ್ರದಲ್ಲಿರುವ ಮತ್ತು ಧ್ವಜ ಸ್ಥಂಭದ ಬುಡದಲ್ಲಿ ನಾಲ್ಕು‌ ಸಿಂಹಗಳ ಚಿಹ್ನೆ ಸುರಯ್ಯಾ ತಯ್ಯ್‌ಬ್‌ಜಿ ಅವರು ವಿನ್ಯಾಸಗೊಳಿಸಿದ್ದು. 1947ರಲ್ಲಿ ಇದನ್ನು ಭಾರತ ಸರಕಾರ ಆಯ್ಕೆ ಮಾಡುವಾಗ ಸುರಯ್ಯಾರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಇದು ಆಗಿನ ಮುಸ್ಲಿಮರ ರಾಷ್ಟ್ರೀಯತೆ, ಮುಸ್ಲಿಮರ ದೇಶಪ್ರೇಮವನ್ನು ತೋರಿಸುತ್ತದೆ. ಈ ದೇಶ ಕಟ್ಟಲು ನಮ್ಮ ಹಿರಿಯರು ಕೊಟ್ಟ ಕೊಡುಗೆ, ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

(ಆಧಾರ : ದಿ ವೈರ್‌ನಲ್ಲಿ ಸುರಯ್ಯಾ- ಬದ್ರುದ್ದೀನ್ ದಂಪತಿಗಳ ಪುತ್ರಿ ಲೈಲಾ ತಯ್ಯ್‌ಬ್‌ಜಿ 2018ರಲ್ಲಿ ಬರೆದ ಲೇಖನ)

ಇದನ್ನೂ ಓದಿ: ಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...