Homeಮುಖಪುಟನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರಲ್ಲಿ ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು.

- Advertisement -
- Advertisement -

ಇತ್ತೀಚೆಗೆ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟ “ಕೇಸರಿ ನಮ್ಮ ಅಸಲಿ ರಾಷ್ಟ್ರಧ್ವಜ, ಮತ್ತೆ ಮುಸ್ಲಿಮರು ಗಲಾಟೆ ಮಾಡಿದ್ದಕ್ಕೆ ಒಂದು ಹಸಿರು ಬಟ್ಟೆಯ ತುಂಡನ್ನು ಅದಕ್ಕೆ ಜೋಡಿಸಿದ್ದು” ಎಂದು  ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅಲ್ಲಿದ್ದ 90% ಮಂದಿ ಕುರುಡಾಗಿ ನಂಬಿರುತ್ತಾರೆ.ಯಾಕೆಂದರೆ ಆತನ ಭಾಷಣ ಆಲಿಸಲು ಹೋಗುವವರೆಲ್ಲಾ ಯೋಚಿಸಿ ಪರಾಮರ್ಶಿಸುವ ಗುಣ ಉಳ್ಳವರಲ್ಲ. ಇನ್ನು ಮಾಧ್ಯಮಗಳು ಸಹ ಅದನ್ನೆ ಪ್ರಸಾರ ಮಾಡುತ್ತಿವೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜದ ಮತ್ತು ರಾಷ್ಟ್ರೀಯ ಲಾಂಛನ ವಿನ್ಯಾಸದ ನಿಜವಾದ ಕತೆಯನ್ನು ಹೆಚ್ಚೆಚ್ಚು ಪ್ರಚಾರ ಮಾಡಬೇಕಾದುದು ಕಾಲದ ಜರೂರು ಕೂಡಾ.

ರಾಷ್ಟ್ರ ಧ್ವಜದ ಬಣ್ಣಗಳು ಯಾವುದೇ ಧರ್ಮ ಜಾತಿ ಪಂಗಡವನ್ನು ಸಂಕೇತಿಸುವುದಿಲ್ಲ.ಕೇಸರಿ ಹಿಂದೂ ಅಲ್ಲ, ಹಸಿರು ಮುಸ್ಲಿಂ ಕೂಡಾ ಅಲ್ಲ. ಬದಲಿಗೆ;

  • ಕೇಸರಿ ತ್ಯಾಗದ ಸಂಕೇತ.
  • ಬಿಳಿ ಶಾಂತಿಯ ಸಂಕೇತ.
  • ಹಸಿರು ಸಮೃದ್ಧಿಯ ಸಂಕೇತ.

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರ ಬಣ್ಣ ಈಗಿನ ರಾಷ್ಟ್ರಧ್ವಜದ ಬಣ್ಣವನ್ನು ಹೋಲುತ್ತಿತ್ತು. ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು. ಅದನ್ನೇ ರಾಷ್ಟ್ರಧ್ಚಜ ಮಾಡುವ ಬಗ್ಗೆ ಆಗಿನ ಅನೇಕ ಮುಖಂಡರ ಒಲವಿತ್ತು. ಆದರೆ ಅದಕ್ಕೆ ಭಿನ್ನಮತ ಬಂದಾಗ ಡಾ. ಬಾಬು ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ಫ್ಲ್ಯಾಗ್ ಕಮಿಟಿಯೊಂದನ್ನು ರೂಪಿಸಲಾಯಿತು.

ಈ ಸಮಿತಿಯಲ್ಲಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಿದ್ದ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರೂ ಸದಸ್ಯರಾಗಿದ್ದರು. ಬದ್ರುದ್ದೀನ್ ತಯ್ಯ‌ಬ್‌ಜಿ ಅವರಿಗೆ ದೇಶ ವಿಭಜನೆಯ ಕಾರ್ಯಾಚರಣೆ ನಡೆಯುತ್ತಿದ್ದಾಗ ನೀವು ಪಾಕಿಸ್ತಾನಕ್ಕೆ ಬರಬೇಕೆಂದೂ, ನಿಮಗೆ ಪಾಕಿಸ್ತಾನದಲ್ಲಿ ಉನ್ನತವಾದ ಸ್ಥಾನಮಾನ ನೀಡಲಾಗುವುದೆಂದೂ ಮುಸ್ಲಿಮ್ ಲೀಗಿನ ಮುಖಂಡರು ಆಹ್ವಾನ ನೀಡಿದ್ದರು. ಅದಕ್ಕೆ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರು ಮುಸ್ಲಿಂ ಲೀಗ್ ಮುಖಂಡರಿಗೆ ತನ್ನ ನಿಲುವನ್ನು ಸ್ಪಷ್ಟವಾಗಿ ವಿವರಿಸುವ ಪತ್ರದ ಮೂಲಕ ಉತ್ತರ ನೀಡಿದರು. ಅದರ ಸಾರಾಂಶ ಹೀಗಿದೆ.

ಬದ್ರುದ್ದೀನ್ ತಯ್ಯ್‌ಬ್‌ಜಿ ಮತ್ತು ಸುರಯ್ಯಾ ತಯ್ಯ್‌ಬ್‌ಜಿ

“ಪಾಕಿಸ್ತಾನದ ಜೊತೆಗೆ ಬಂದರೆ ನನಗೆ ನೀವು ಉನ್ನತ ಸ್ಥಾನಮಾನವೇನೋ ನೀಡಬಹುದು. ಆದರೆ ನಾನು ಧರ್ಮಾಧಾರಿತ ರಾಷ್ಟ್ರದಲ್ಲಿ ಇರಬಯಸುವುದಿಲ್ಲ. ಅಲ್ಲದೆ ನಾನು ಮುಸ್ಲಿಂ ‌ಲೀಗ್‌ನ ಸಿದ್ಧಾಂತವನ್ನು ಒಪ್ಪುವುದಿಲ್ಲ. ನಾನು ಯಾವುದೇ ಕಾರಣಕ್ಕೂ ನನ್ನ ಮಾತೃಭೂಮಿ ತೊರೆದು ಬರಲಾರೆ. ಇನ್ನು ಮನವೊಲಿಸುವ ಪ್ರಯತ್ನ ಮುಂದುವರಿಸದಿರಿ”

ಫ್ಯ್ಲಾಗ್ ಕಮಿಟಿ ಧ್ವಜದ ವಿನ್ಯಾಸಗಳನ್ನು ಮತ್ತು ರಾಷ್ಟ್ರೀಯ ಲಾಂಛನದ ವಿನ್ಯಾಸಗಳನ್ನು ತಯಾರಿಸಿ ಕಳುಹಿಸುವಂತೆ ಎಲ್ಲಾ ಶಾಲೆಗಳಿಗೆ ಪತ್ರಗಳನ್ನು ಕಳುಹಿಸಿತು. ಜವಾಹರ್‌ಲಾಲ್ ನೆಹರೂ ಅವರು ಬದ್ರುದ್ದೀನ್ ತಯ್ಯ್‌ಬ್‌ಜಿ ಅವರನ್ನು ಕರೆದು,“ಬದ್ರ್.. ನೀವಿದರಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಮತ್ತು ವಿನ್ಯಾಸದಲ್ಲಿ ನಿಮ್ಮ ಪ್ರಮುಖ ಪಾತ್ರವನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದರು.

ಬದ್ರುದ್ದೀನ್ ತಯ್ಯ‌ಬ್‌ಜಿಯವರ ಪತ್ನಿ ಸುರಯ್ಯಾ ತಯ್ಯ್‌ಬ್‌ಜಿ ಆ ಕಾಲದ ಪ್ರಸಿದ್ಧ ಲೇಖಕಿಯಾಗಿದ್ದರು. ಧ್ವಜ ವಿನ್ಯಾಸ ಮತ್ತು ಲಾಂಛನ ವಿನ್ಯಾಸ ಕಾರ್ಯದಲ್ಲಿ ಅವರು ಗಂಭೀರವಾಗಿ ತೊಡಗಿಸಿಕೊಂಡರು. ಅವರು ಕೇಸರಿ ಬಿಳಿ ಹಸಿರು ಮತ್ತು ಮಧ್ಯೆ ಕಪ್ಪು ಬಣ್ಣದ ಅಶೋಕ ಚಕ್ರವಿರುವ ವಿನ್ಯಾಸವನ್ನು ತಯಾರಿಸಿ ಕಳುಹಿಸಿದರು. ಮತ್ತು ನಾಲ್ಕು ಸಿಂಹಗಳ ಮುಖವನ್ನು ರಾಷ್ಟ್ರೀಯ ಲಾಂಛನದ ಆಯ್ಕೆಗೆ ಕಳುಹಿಸಿದರು.

ಅದಾಗಲೇ ನೂರಾರು ಧ್ವಜ ವಿನ್ಯಾಸಗಳು ಮತ್ತು‌ ಲಾಂಛನ ವಿನ್ಯಾಸಗಳು ಆಯ್ಕೆ ಕೋರಿ ಬಂದಿತ್ತು.
ಹೆಚ್ಚಿನವುಗಳಲ್ಲಿ ಬ್ರಿಟಿಷ್ ಧ್ವಜ ಮತ್ತು‌ ಲಾಂಛನದ ಪ್ರಭಾವ ಎದ್ದು ಕಾಣುತ್ತಿದ್ದವು. ಅವುಗಳನ್ನೆಲ್ಲಾ ಫ್ಲ್ಯಾಗ್ ಕಮಿಟಿ ತಿರಸ್ಕರಿಸಿತು. ಕೊನೆಯ ಸುತ್ತಿಗೆ ಕೆಲವನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಸುರಯ್ಯಾ ತಯ್ಯ್‌ಬ್‌ಜಿ ವಿನ್ಯಾಸಗೊಳಿಸಿದ ಧ್ವಜ ಸರ್ವಾನುಮತದ ಆಯ್ಕೆಯಾಯಿತು. ಗಾಂಧೀಜಿಯವರು ಅದರಲ್ಲೊಂದು ಪುಟ್ಟ ಬದಲಾವಣೆ ಮಾಡಿದರು. ಸುರಯ್ಯಾ ಅವರ ವಿನ್ಯಾಸದಲ್ಲಿ ಅಶೋಕ ಚಕ್ರವು ಕಪ್ಪು ಬಣ್ಣದಲ್ಲಿತ್ತು, ಗಾಂಧೀಜಿ ಅದಕ್ಕೆ ನೀಲಿ ಬಣ್ಣ ಕೊಡುವಂತೆ ಸಲಹೆ ನೀಡಿದರು.

ರಾಷ್ಟ್ರೀಯ ಲಾಂಛನಕ್ಕೆ ಹುಲಿ, ಚಿರತೆ, ಕರಡಿ, ಹಂಸ ಮುಂತಾದ ಪ್ರಾಣಿ ಪಕ್ಷಿಗಳ ವಿನ್ಯಾಸವಿರುವವುಗಳು ಕೂಡಾ ಸುರಯ್ಯಾ ತಯ್ಯ್‌ಬ್‌ಜಿ ಅವರ ವಿನ್ಯಾಸದ ಜೊತೆಗೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿತ್ತು. ಅಂತಿಮವಾಗಿ ಸುರಯ್ಯಾ ತಯ್ಯಬ್‌ಜಿ ಅವರು ವಿನ್ಯಾಸಗೊಳಿಸಿದ ನಾಲ್ಕು ಸಿಂಹಗಳು ರಾಷ್ಟ್ರೀಯ ಲಾಂಛನವಾಗಿ ಆಯ್ಕೆಗೊಂಡಿತು. ಭಾರತ ಸರಕಾರದ ಯಾವುದೇ ಪತ್ರದಲ್ಲಿರುವ ಮತ್ತು ಧ್ವಜ ಸ್ಥಂಭದ ಬುಡದಲ್ಲಿ ನಾಲ್ಕು‌ ಸಿಂಹಗಳ ಚಿಹ್ನೆ ಸುರಯ್ಯಾ ತಯ್ಯ್‌ಬ್‌ಜಿ ಅವರು ವಿನ್ಯಾಸಗೊಳಿಸಿದ್ದು. 1947ರಲ್ಲಿ ಇದನ್ನು ಭಾರತ ಸರಕಾರ ಆಯ್ಕೆ ಮಾಡುವಾಗ ಸುರಯ್ಯಾರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಇದು ಆಗಿನ ಮುಸ್ಲಿಮರ ರಾಷ್ಟ್ರೀಯತೆ, ಮುಸ್ಲಿಮರ ದೇಶಪ್ರೇಮವನ್ನು ತೋರಿಸುತ್ತದೆ. ಈ ದೇಶ ಕಟ್ಟಲು ನಮ್ಮ ಹಿರಿಯರು ಕೊಟ್ಟ ಕೊಡುಗೆ, ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

(ಆಧಾರ : ದಿ ವೈರ್‌ನಲ್ಲಿ ಸುರಯ್ಯಾ- ಬದ್ರುದ್ದೀನ್ ದಂಪತಿಗಳ ಪುತ್ರಿ ಲೈಲಾ ತಯ್ಯ್‌ಬ್‌ಜಿ 2018ರಲ್ಲಿ ಬರೆದ ಲೇಖನ)

ಇದನ್ನೂ ಓದಿ: ಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...