Homeಮುಖಪುಟನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರಲ್ಲಿ ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು.

- Advertisement -
- Advertisement -

ಇತ್ತೀಚೆಗೆ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟ “ಕೇಸರಿ ನಮ್ಮ ಅಸಲಿ ರಾಷ್ಟ್ರಧ್ವಜ, ಮತ್ತೆ ಮುಸ್ಲಿಮರು ಗಲಾಟೆ ಮಾಡಿದ್ದಕ್ಕೆ ಒಂದು ಹಸಿರು ಬಟ್ಟೆಯ ತುಂಡನ್ನು ಅದಕ್ಕೆ ಜೋಡಿಸಿದ್ದು” ಎಂದು  ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅಲ್ಲಿದ್ದ 90% ಮಂದಿ ಕುರುಡಾಗಿ ನಂಬಿರುತ್ತಾರೆ.ಯಾಕೆಂದರೆ ಆತನ ಭಾಷಣ ಆಲಿಸಲು ಹೋಗುವವರೆಲ್ಲಾ ಯೋಚಿಸಿ ಪರಾಮರ್ಶಿಸುವ ಗುಣ ಉಳ್ಳವರಲ್ಲ. ಇನ್ನು ಮಾಧ್ಯಮಗಳು ಸಹ ಅದನ್ನೆ ಪ್ರಸಾರ ಮಾಡುತ್ತಿವೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜದ ಮತ್ತು ರಾಷ್ಟ್ರೀಯ ಲಾಂಛನ ವಿನ್ಯಾಸದ ನಿಜವಾದ ಕತೆಯನ್ನು ಹೆಚ್ಚೆಚ್ಚು ಪ್ರಚಾರ ಮಾಡಬೇಕಾದುದು ಕಾಲದ ಜರೂರು ಕೂಡಾ.

ರಾಷ್ಟ್ರ ಧ್ವಜದ ಬಣ್ಣಗಳು ಯಾವುದೇ ಧರ್ಮ ಜಾತಿ ಪಂಗಡವನ್ನು ಸಂಕೇತಿಸುವುದಿಲ್ಲ.ಕೇಸರಿ ಹಿಂದೂ ಅಲ್ಲ, ಹಸಿರು ಮುಸ್ಲಿಂ ಕೂಡಾ ಅಲ್ಲ. ಬದಲಿಗೆ;

  • ಕೇಸರಿ ತ್ಯಾಗದ ಸಂಕೇತ.
  • ಬಿಳಿ ಶಾಂತಿಯ ಸಂಕೇತ.
  • ಹಸಿರು ಸಮೃದ್ಧಿಯ ಸಂಕೇತ.

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರ ಬಣ್ಣ ಈಗಿನ ರಾಷ್ಟ್ರಧ್ವಜದ ಬಣ್ಣವನ್ನು ಹೋಲುತ್ತಿತ್ತು. ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು. ಅದನ್ನೇ ರಾಷ್ಟ್ರಧ್ಚಜ ಮಾಡುವ ಬಗ್ಗೆ ಆಗಿನ ಅನೇಕ ಮುಖಂಡರ ಒಲವಿತ್ತು. ಆದರೆ ಅದಕ್ಕೆ ಭಿನ್ನಮತ ಬಂದಾಗ ಡಾ. ಬಾಬು ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ಫ್ಲ್ಯಾಗ್ ಕಮಿಟಿಯೊಂದನ್ನು ರೂಪಿಸಲಾಯಿತು.

ಈ ಸಮಿತಿಯಲ್ಲಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಿದ್ದ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರೂ ಸದಸ್ಯರಾಗಿದ್ದರು. ಬದ್ರುದ್ದೀನ್ ತಯ್ಯ‌ಬ್‌ಜಿ ಅವರಿಗೆ ದೇಶ ವಿಭಜನೆಯ ಕಾರ್ಯಾಚರಣೆ ನಡೆಯುತ್ತಿದ್ದಾಗ ನೀವು ಪಾಕಿಸ್ತಾನಕ್ಕೆ ಬರಬೇಕೆಂದೂ, ನಿಮಗೆ ಪಾಕಿಸ್ತಾನದಲ್ಲಿ ಉನ್ನತವಾದ ಸ್ಥಾನಮಾನ ನೀಡಲಾಗುವುದೆಂದೂ ಮುಸ್ಲಿಮ್ ಲೀಗಿನ ಮುಖಂಡರು ಆಹ್ವಾನ ನೀಡಿದ್ದರು. ಅದಕ್ಕೆ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರು ಮುಸ್ಲಿಂ ಲೀಗ್ ಮುಖಂಡರಿಗೆ ತನ್ನ ನಿಲುವನ್ನು ಸ್ಪಷ್ಟವಾಗಿ ವಿವರಿಸುವ ಪತ್ರದ ಮೂಲಕ ಉತ್ತರ ನೀಡಿದರು. ಅದರ ಸಾರಾಂಶ ಹೀಗಿದೆ.

ಬದ್ರುದ್ದೀನ್ ತಯ್ಯ್‌ಬ್‌ಜಿ ಮತ್ತು ಸುರಯ್ಯಾ ತಯ್ಯ್‌ಬ್‌ಜಿ

“ಪಾಕಿಸ್ತಾನದ ಜೊತೆಗೆ ಬಂದರೆ ನನಗೆ ನೀವು ಉನ್ನತ ಸ್ಥಾನಮಾನವೇನೋ ನೀಡಬಹುದು. ಆದರೆ ನಾನು ಧರ್ಮಾಧಾರಿತ ರಾಷ್ಟ್ರದಲ್ಲಿ ಇರಬಯಸುವುದಿಲ್ಲ. ಅಲ್ಲದೆ ನಾನು ಮುಸ್ಲಿಂ ‌ಲೀಗ್‌ನ ಸಿದ್ಧಾಂತವನ್ನು ಒಪ್ಪುವುದಿಲ್ಲ. ನಾನು ಯಾವುದೇ ಕಾರಣಕ್ಕೂ ನನ್ನ ಮಾತೃಭೂಮಿ ತೊರೆದು ಬರಲಾರೆ. ಇನ್ನು ಮನವೊಲಿಸುವ ಪ್ರಯತ್ನ ಮುಂದುವರಿಸದಿರಿ”

ಫ್ಯ್ಲಾಗ್ ಕಮಿಟಿ ಧ್ವಜದ ವಿನ್ಯಾಸಗಳನ್ನು ಮತ್ತು ರಾಷ್ಟ್ರೀಯ ಲಾಂಛನದ ವಿನ್ಯಾಸಗಳನ್ನು ತಯಾರಿಸಿ ಕಳುಹಿಸುವಂತೆ ಎಲ್ಲಾ ಶಾಲೆಗಳಿಗೆ ಪತ್ರಗಳನ್ನು ಕಳುಹಿಸಿತು. ಜವಾಹರ್‌ಲಾಲ್ ನೆಹರೂ ಅವರು ಬದ್ರುದ್ದೀನ್ ತಯ್ಯ್‌ಬ್‌ಜಿ ಅವರನ್ನು ಕರೆದು,“ಬದ್ರ್.. ನೀವಿದರಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಮತ್ತು ವಿನ್ಯಾಸದಲ್ಲಿ ನಿಮ್ಮ ಪ್ರಮುಖ ಪಾತ್ರವನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದರು.

ಬದ್ರುದ್ದೀನ್ ತಯ್ಯ‌ಬ್‌ಜಿಯವರ ಪತ್ನಿ ಸುರಯ್ಯಾ ತಯ್ಯ್‌ಬ್‌ಜಿ ಆ ಕಾಲದ ಪ್ರಸಿದ್ಧ ಲೇಖಕಿಯಾಗಿದ್ದರು. ಧ್ವಜ ವಿನ್ಯಾಸ ಮತ್ತು ಲಾಂಛನ ವಿನ್ಯಾಸ ಕಾರ್ಯದಲ್ಲಿ ಅವರು ಗಂಭೀರವಾಗಿ ತೊಡಗಿಸಿಕೊಂಡರು. ಅವರು ಕೇಸರಿ ಬಿಳಿ ಹಸಿರು ಮತ್ತು ಮಧ್ಯೆ ಕಪ್ಪು ಬಣ್ಣದ ಅಶೋಕ ಚಕ್ರವಿರುವ ವಿನ್ಯಾಸವನ್ನು ತಯಾರಿಸಿ ಕಳುಹಿಸಿದರು. ಮತ್ತು ನಾಲ್ಕು ಸಿಂಹಗಳ ಮುಖವನ್ನು ರಾಷ್ಟ್ರೀಯ ಲಾಂಛನದ ಆಯ್ಕೆಗೆ ಕಳುಹಿಸಿದರು.

ಅದಾಗಲೇ ನೂರಾರು ಧ್ವಜ ವಿನ್ಯಾಸಗಳು ಮತ್ತು‌ ಲಾಂಛನ ವಿನ್ಯಾಸಗಳು ಆಯ್ಕೆ ಕೋರಿ ಬಂದಿತ್ತು.
ಹೆಚ್ಚಿನವುಗಳಲ್ಲಿ ಬ್ರಿಟಿಷ್ ಧ್ವಜ ಮತ್ತು‌ ಲಾಂಛನದ ಪ್ರಭಾವ ಎದ್ದು ಕಾಣುತ್ತಿದ್ದವು. ಅವುಗಳನ್ನೆಲ್ಲಾ ಫ್ಲ್ಯಾಗ್ ಕಮಿಟಿ ತಿರಸ್ಕರಿಸಿತು. ಕೊನೆಯ ಸುತ್ತಿಗೆ ಕೆಲವನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಸುರಯ್ಯಾ ತಯ್ಯ್‌ಬ್‌ಜಿ ವಿನ್ಯಾಸಗೊಳಿಸಿದ ಧ್ವಜ ಸರ್ವಾನುಮತದ ಆಯ್ಕೆಯಾಯಿತು. ಗಾಂಧೀಜಿಯವರು ಅದರಲ್ಲೊಂದು ಪುಟ್ಟ ಬದಲಾವಣೆ ಮಾಡಿದರು. ಸುರಯ್ಯಾ ಅವರ ವಿನ್ಯಾಸದಲ್ಲಿ ಅಶೋಕ ಚಕ್ರವು ಕಪ್ಪು ಬಣ್ಣದಲ್ಲಿತ್ತು, ಗಾಂಧೀಜಿ ಅದಕ್ಕೆ ನೀಲಿ ಬಣ್ಣ ಕೊಡುವಂತೆ ಸಲಹೆ ನೀಡಿದರು.

ರಾಷ್ಟ್ರೀಯ ಲಾಂಛನಕ್ಕೆ ಹುಲಿ, ಚಿರತೆ, ಕರಡಿ, ಹಂಸ ಮುಂತಾದ ಪ್ರಾಣಿ ಪಕ್ಷಿಗಳ ವಿನ್ಯಾಸವಿರುವವುಗಳು ಕೂಡಾ ಸುರಯ್ಯಾ ತಯ್ಯ್‌ಬ್‌ಜಿ ಅವರ ವಿನ್ಯಾಸದ ಜೊತೆಗೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿತ್ತು. ಅಂತಿಮವಾಗಿ ಸುರಯ್ಯಾ ತಯ್ಯಬ್‌ಜಿ ಅವರು ವಿನ್ಯಾಸಗೊಳಿಸಿದ ನಾಲ್ಕು ಸಿಂಹಗಳು ರಾಷ್ಟ್ರೀಯ ಲಾಂಛನವಾಗಿ ಆಯ್ಕೆಗೊಂಡಿತು. ಭಾರತ ಸರಕಾರದ ಯಾವುದೇ ಪತ್ರದಲ್ಲಿರುವ ಮತ್ತು ಧ್ವಜ ಸ್ಥಂಭದ ಬುಡದಲ್ಲಿ ನಾಲ್ಕು‌ ಸಿಂಹಗಳ ಚಿಹ್ನೆ ಸುರಯ್ಯಾ ತಯ್ಯ್‌ಬ್‌ಜಿ ಅವರು ವಿನ್ಯಾಸಗೊಳಿಸಿದ್ದು. 1947ರಲ್ಲಿ ಇದನ್ನು ಭಾರತ ಸರಕಾರ ಆಯ್ಕೆ ಮಾಡುವಾಗ ಸುರಯ್ಯಾರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಇದು ಆಗಿನ ಮುಸ್ಲಿಮರ ರಾಷ್ಟ್ರೀಯತೆ, ಮುಸ್ಲಿಮರ ದೇಶಪ್ರೇಮವನ್ನು ತೋರಿಸುತ್ತದೆ. ಈ ದೇಶ ಕಟ್ಟಲು ನಮ್ಮ ಹಿರಿಯರು ಕೊಟ್ಟ ಕೊಡುಗೆ, ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

(ಆಧಾರ : ದಿ ವೈರ್‌ನಲ್ಲಿ ಸುರಯ್ಯಾ- ಬದ್ರುದ್ದೀನ್ ದಂಪತಿಗಳ ಪುತ್ರಿ ಲೈಲಾ ತಯ್ಯ್‌ಬ್‌ಜಿ 2018ರಲ್ಲಿ ಬರೆದ ಲೇಖನ)

ಇದನ್ನೂ ಓದಿ: ಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...