Homeಮುಖಪುಟನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರಲ್ಲಿ ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು.

- Advertisement -
- Advertisement -

ಇತ್ತೀಚೆಗೆ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟ “ಕೇಸರಿ ನಮ್ಮ ಅಸಲಿ ರಾಷ್ಟ್ರಧ್ವಜ, ಮತ್ತೆ ಮುಸ್ಲಿಮರು ಗಲಾಟೆ ಮಾಡಿದ್ದಕ್ಕೆ ಒಂದು ಹಸಿರು ಬಟ್ಟೆಯ ತುಂಡನ್ನು ಅದಕ್ಕೆ ಜೋಡಿಸಿದ್ದು” ಎಂದು  ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅಲ್ಲಿದ್ದ 90% ಮಂದಿ ಕುರುಡಾಗಿ ನಂಬಿರುತ್ತಾರೆ.ಯಾಕೆಂದರೆ ಆತನ ಭಾಷಣ ಆಲಿಸಲು ಹೋಗುವವರೆಲ್ಲಾ ಯೋಚಿಸಿ ಪರಾಮರ್ಶಿಸುವ ಗುಣ ಉಳ್ಳವರಲ್ಲ. ಇನ್ನು ಮಾಧ್ಯಮಗಳು ಸಹ ಅದನ್ನೆ ಪ್ರಸಾರ ಮಾಡುತ್ತಿವೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜದ ಮತ್ತು ರಾಷ್ಟ್ರೀಯ ಲಾಂಛನ ವಿನ್ಯಾಸದ ನಿಜವಾದ ಕತೆಯನ್ನು ಹೆಚ್ಚೆಚ್ಚು ಪ್ರಚಾರ ಮಾಡಬೇಕಾದುದು ಕಾಲದ ಜರೂರು ಕೂಡಾ.

ರಾಷ್ಟ್ರ ಧ್ವಜದ ಬಣ್ಣಗಳು ಯಾವುದೇ ಧರ್ಮ ಜಾತಿ ಪಂಗಡವನ್ನು ಸಂಕೇತಿಸುವುದಿಲ್ಲ.ಕೇಸರಿ ಹಿಂದೂ ಅಲ್ಲ, ಹಸಿರು ಮುಸ್ಲಿಂ ಕೂಡಾ ಅಲ್ಲ. ಬದಲಿಗೆ;

  • ಕೇಸರಿ ತ್ಯಾಗದ ಸಂಕೇತ.
  • ಬಿಳಿ ಶಾಂತಿಯ ಸಂಕೇತ.
  • ಹಸಿರು ಸಮೃದ್ಧಿಯ ಸಂಕೇತ.

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರ ಬಣ್ಣ ಈಗಿನ ರಾಷ್ಟ್ರಧ್ವಜದ ಬಣ್ಣವನ್ನು ಹೋಲುತ್ತಿತ್ತು. ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು. ಅದನ್ನೇ ರಾಷ್ಟ್ರಧ್ಚಜ ಮಾಡುವ ಬಗ್ಗೆ ಆಗಿನ ಅನೇಕ ಮುಖಂಡರ ಒಲವಿತ್ತು. ಆದರೆ ಅದಕ್ಕೆ ಭಿನ್ನಮತ ಬಂದಾಗ ಡಾ. ಬಾಬು ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ಫ್ಲ್ಯಾಗ್ ಕಮಿಟಿಯೊಂದನ್ನು ರೂಪಿಸಲಾಯಿತು.

ಈ ಸಮಿತಿಯಲ್ಲಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಿದ್ದ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರೂ ಸದಸ್ಯರಾಗಿದ್ದರು. ಬದ್ರುದ್ದೀನ್ ತಯ್ಯ‌ಬ್‌ಜಿ ಅವರಿಗೆ ದೇಶ ವಿಭಜನೆಯ ಕಾರ್ಯಾಚರಣೆ ನಡೆಯುತ್ತಿದ್ದಾಗ ನೀವು ಪಾಕಿಸ್ತಾನಕ್ಕೆ ಬರಬೇಕೆಂದೂ, ನಿಮಗೆ ಪಾಕಿಸ್ತಾನದಲ್ಲಿ ಉನ್ನತವಾದ ಸ್ಥಾನಮಾನ ನೀಡಲಾಗುವುದೆಂದೂ ಮುಸ್ಲಿಮ್ ಲೀಗಿನ ಮುಖಂಡರು ಆಹ್ವಾನ ನೀಡಿದ್ದರು. ಅದಕ್ಕೆ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರು ಮುಸ್ಲಿಂ ಲೀಗ್ ಮುಖಂಡರಿಗೆ ತನ್ನ ನಿಲುವನ್ನು ಸ್ಪಷ್ಟವಾಗಿ ವಿವರಿಸುವ ಪತ್ರದ ಮೂಲಕ ಉತ್ತರ ನೀಡಿದರು. ಅದರ ಸಾರಾಂಶ ಹೀಗಿದೆ.

ಬದ್ರುದ್ದೀನ್ ತಯ್ಯ್‌ಬ್‌ಜಿ ಮತ್ತು ಸುರಯ್ಯಾ ತಯ್ಯ್‌ಬ್‌ಜಿ

“ಪಾಕಿಸ್ತಾನದ ಜೊತೆಗೆ ಬಂದರೆ ನನಗೆ ನೀವು ಉನ್ನತ ಸ್ಥಾನಮಾನವೇನೋ ನೀಡಬಹುದು. ಆದರೆ ನಾನು ಧರ್ಮಾಧಾರಿತ ರಾಷ್ಟ್ರದಲ್ಲಿ ಇರಬಯಸುವುದಿಲ್ಲ. ಅಲ್ಲದೆ ನಾನು ಮುಸ್ಲಿಂ ‌ಲೀಗ್‌ನ ಸಿದ್ಧಾಂತವನ್ನು ಒಪ್ಪುವುದಿಲ್ಲ. ನಾನು ಯಾವುದೇ ಕಾರಣಕ್ಕೂ ನನ್ನ ಮಾತೃಭೂಮಿ ತೊರೆದು ಬರಲಾರೆ. ಇನ್ನು ಮನವೊಲಿಸುವ ಪ್ರಯತ್ನ ಮುಂದುವರಿಸದಿರಿ”

ಫ್ಯ್ಲಾಗ್ ಕಮಿಟಿ ಧ್ವಜದ ವಿನ್ಯಾಸಗಳನ್ನು ಮತ್ತು ರಾಷ್ಟ್ರೀಯ ಲಾಂಛನದ ವಿನ್ಯಾಸಗಳನ್ನು ತಯಾರಿಸಿ ಕಳುಹಿಸುವಂತೆ ಎಲ್ಲಾ ಶಾಲೆಗಳಿಗೆ ಪತ್ರಗಳನ್ನು ಕಳುಹಿಸಿತು. ಜವಾಹರ್‌ಲಾಲ್ ನೆಹರೂ ಅವರು ಬದ್ರುದ್ದೀನ್ ತಯ್ಯ್‌ಬ್‌ಜಿ ಅವರನ್ನು ಕರೆದು,“ಬದ್ರ್.. ನೀವಿದರಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಮತ್ತು ವಿನ್ಯಾಸದಲ್ಲಿ ನಿಮ್ಮ ಪ್ರಮುಖ ಪಾತ್ರವನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದರು.

ಬದ್ರುದ್ದೀನ್ ತಯ್ಯ‌ಬ್‌ಜಿಯವರ ಪತ್ನಿ ಸುರಯ್ಯಾ ತಯ್ಯ್‌ಬ್‌ಜಿ ಆ ಕಾಲದ ಪ್ರಸಿದ್ಧ ಲೇಖಕಿಯಾಗಿದ್ದರು. ಧ್ವಜ ವಿನ್ಯಾಸ ಮತ್ತು ಲಾಂಛನ ವಿನ್ಯಾಸ ಕಾರ್ಯದಲ್ಲಿ ಅವರು ಗಂಭೀರವಾಗಿ ತೊಡಗಿಸಿಕೊಂಡರು. ಅವರು ಕೇಸರಿ ಬಿಳಿ ಹಸಿರು ಮತ್ತು ಮಧ್ಯೆ ಕಪ್ಪು ಬಣ್ಣದ ಅಶೋಕ ಚಕ್ರವಿರುವ ವಿನ್ಯಾಸವನ್ನು ತಯಾರಿಸಿ ಕಳುಹಿಸಿದರು. ಮತ್ತು ನಾಲ್ಕು ಸಿಂಹಗಳ ಮುಖವನ್ನು ರಾಷ್ಟ್ರೀಯ ಲಾಂಛನದ ಆಯ್ಕೆಗೆ ಕಳುಹಿಸಿದರು.

ಅದಾಗಲೇ ನೂರಾರು ಧ್ವಜ ವಿನ್ಯಾಸಗಳು ಮತ್ತು‌ ಲಾಂಛನ ವಿನ್ಯಾಸಗಳು ಆಯ್ಕೆ ಕೋರಿ ಬಂದಿತ್ತು.
ಹೆಚ್ಚಿನವುಗಳಲ್ಲಿ ಬ್ರಿಟಿಷ್ ಧ್ವಜ ಮತ್ತು‌ ಲಾಂಛನದ ಪ್ರಭಾವ ಎದ್ದು ಕಾಣುತ್ತಿದ್ದವು. ಅವುಗಳನ್ನೆಲ್ಲಾ ಫ್ಲ್ಯಾಗ್ ಕಮಿಟಿ ತಿರಸ್ಕರಿಸಿತು. ಕೊನೆಯ ಸುತ್ತಿಗೆ ಕೆಲವನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಸುರಯ್ಯಾ ತಯ್ಯ್‌ಬ್‌ಜಿ ವಿನ್ಯಾಸಗೊಳಿಸಿದ ಧ್ವಜ ಸರ್ವಾನುಮತದ ಆಯ್ಕೆಯಾಯಿತು. ಗಾಂಧೀಜಿಯವರು ಅದರಲ್ಲೊಂದು ಪುಟ್ಟ ಬದಲಾವಣೆ ಮಾಡಿದರು. ಸುರಯ್ಯಾ ಅವರ ವಿನ್ಯಾಸದಲ್ಲಿ ಅಶೋಕ ಚಕ್ರವು ಕಪ್ಪು ಬಣ್ಣದಲ್ಲಿತ್ತು, ಗಾಂಧೀಜಿ ಅದಕ್ಕೆ ನೀಲಿ ಬಣ್ಣ ಕೊಡುವಂತೆ ಸಲಹೆ ನೀಡಿದರು.

ರಾಷ್ಟ್ರೀಯ ಲಾಂಛನಕ್ಕೆ ಹುಲಿ, ಚಿರತೆ, ಕರಡಿ, ಹಂಸ ಮುಂತಾದ ಪ್ರಾಣಿ ಪಕ್ಷಿಗಳ ವಿನ್ಯಾಸವಿರುವವುಗಳು ಕೂಡಾ ಸುರಯ್ಯಾ ತಯ್ಯ್‌ಬ್‌ಜಿ ಅವರ ವಿನ್ಯಾಸದ ಜೊತೆಗೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿತ್ತು. ಅಂತಿಮವಾಗಿ ಸುರಯ್ಯಾ ತಯ್ಯಬ್‌ಜಿ ಅವರು ವಿನ್ಯಾಸಗೊಳಿಸಿದ ನಾಲ್ಕು ಸಿಂಹಗಳು ರಾಷ್ಟ್ರೀಯ ಲಾಂಛನವಾಗಿ ಆಯ್ಕೆಗೊಂಡಿತು. ಭಾರತ ಸರಕಾರದ ಯಾವುದೇ ಪತ್ರದಲ್ಲಿರುವ ಮತ್ತು ಧ್ವಜ ಸ್ಥಂಭದ ಬುಡದಲ್ಲಿ ನಾಲ್ಕು‌ ಸಿಂಹಗಳ ಚಿಹ್ನೆ ಸುರಯ್ಯಾ ತಯ್ಯ್‌ಬ್‌ಜಿ ಅವರು ವಿನ್ಯಾಸಗೊಳಿಸಿದ್ದು. 1947ರಲ್ಲಿ ಇದನ್ನು ಭಾರತ ಸರಕಾರ ಆಯ್ಕೆ ಮಾಡುವಾಗ ಸುರಯ್ಯಾರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಇದು ಆಗಿನ ಮುಸ್ಲಿಮರ ರಾಷ್ಟ್ರೀಯತೆ, ಮುಸ್ಲಿಮರ ದೇಶಪ್ರೇಮವನ್ನು ತೋರಿಸುತ್ತದೆ. ಈ ದೇಶ ಕಟ್ಟಲು ನಮ್ಮ ಹಿರಿಯರು ಕೊಟ್ಟ ಕೊಡುಗೆ, ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

(ಆಧಾರ : ದಿ ವೈರ್‌ನಲ್ಲಿ ಸುರಯ್ಯಾ- ಬದ್ರುದ್ದೀನ್ ದಂಪತಿಗಳ ಪುತ್ರಿ ಲೈಲಾ ತಯ್ಯ್‌ಬ್‌ಜಿ 2018ರಲ್ಲಿ ಬರೆದ ಲೇಖನ)

ಇದನ್ನೂ ಓದಿ: ಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....