Homeಮುಖಪುಟಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?

ಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?

- Advertisement -
- Advertisement -

ಹಿಂದೆಂದೂ ಕೇಳದ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರೈತ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿ ಮೂದಲಿಸುವ ಸಂಪ್ರದಾಯ ನಾವು ಕಾಣುತ್ತಿದ್ದೇವೆ. ಇವರು ಹೊಲಕ್ಕೆ ಬೆಂಕಿಹಚ್ಚಿ ನಮ್ಮ ನಗರಗಳನ್ನು ಮಾಲಿನ್ಯಗೊಳಿಸುವ ಅಪರಾಧಿಗಳು, ಬೇಡದ ಭತ್ತ, ಗೋಧಿ ಬೆಳೆದು ಮಣ್ಣಿನ ಫಲವತ್ತತೆ ಮತ್ತು ನೀರನ್ನು ಹಾಳುಗೆಡವುವವರು, ಸೋಮಾರಿ ಸಮುದಾಯದವರು, ಸ್ವಂತ ಬುದ್ಧಿ ಇಲ್ಲದೆ ಇತರರು ಹೇಳಿದ ಹಾಗೆ ನಡೆದುಕೊಳ್ಳುತ್ತಿರುವವರು, ಹೀಗೆಲ್ಲಾ ಕಳೆದ ಒಂದು ವರ್ಷದಿಂದ ನಾವು ಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ನೇರವಾಗಿ ನಿಂದಿಸುವವರನ್ನು ಗಮನಿಸುತ್ತಿದ್ದೇವೆ. ನೇರವಾಗಿ ಏಕೆಂದರೆ, ನಾಗರಿಕರೆನ್ನುವ ಪ್ರಜ್ಞಾವಂತರೆನ್ನುವ ಈ ಸಮುದಾಯಕ್ಕೆ ನೇಗಿಲಯೋಗಿಯ ಬಗ್ಗೆ ಕಿಂಚಿತ್ತಾದರೂ, ಒಳಗಿಂದೊಳಗಾದರೂ ಗೌರವ ಇರಲಿಲ್ಲವೇ ಎಂಬ ಪ್ರಶ್ನೆ ಇತ್ತೀಚೆಗೆ ಏಳುತ್ತಿದೆ. ಅಷ್ಟೇ ಏಕೆ? ಒಟ್ಟಾರೆ ದುಡಿಯುವ ವರ್ಗದ ಬಗ್ಗೆ ’ಅದು ಅವನ ಕರ್ಮ’ ಎಂದೇ ಪರಿಗಣಿಸುವಂತೆ ಈ ವರ್ಗ ಬೆಳೆದಿದೆ.

ಶ್ರೇಣೀಕೃತವರ್ಗದಲ್ಲಿ ಬೆವರಿನ ಹನಿ ಹೆಚ್ಚಾದಂತೆಲ್ಲಾ ಬೈಗುಳ ಮತ್ತು ನಿಂದನೆಗೆ ಒಳಪಟ್ಟಿರುವುದನ್ನು ಗಮನಿಸಬಹುದು. ಇದನ್ನು `ascendancy of respect and descendancy of disrespect in the ladder’ ಎಂದು ಅಂಬೇಡ್ಕರ್ ಗಮನಿಸಿದ್ದರು. ಮಹಾತ್ಮ ಗಾಂಧಿ ರೈತನನ್ನು ಒಬ್ಬ ಖಗೋಳಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಹವಾಮಾನತಜ್ಞ, ಆಹಾರತಜ್ಞ, ಪರಿಸರತಜ್ಞ, ಭೂವಿಜ್ಞಾನಿ ಎಂದೆಲ್ಲಾ ಬಣ್ಣಿಸಿದ್ದರು. ಡಾ.ರಿಚಾರಿಯಾ ಹೇಳುವಂತೆ ನಮ್ಮೊಳಗಿನ ಅತ್ಯಂತ ಪ್ರಜ್ಞಾವಂತ ತಳಿವಿಜ್ಞಾನದ ತಜ್ಞ ಎಂದರೆ ರೈತ ಎಂಬ ಮಾತು ಗಮನಾರ್ಹವಾದದ್ದು. ಆಯುರ್ವೇದ ವೈದ್ಯ ಹಾಗೂ ಗ್ರಂಥಕರ್ತ ಚರಕ ತನ್ನ ’ಚರಕ ಸಂಹಿತ’ದಲ್ಲಿ ಕೆಲವು ಔಷಧೀಯ ಸಸ್ಯಗಳ ಬಗ್ಗೆ ವಿವರಿಸತ್ತಾ, “ಇನ್ನೂ ಹೆಚ್ಚು ತಿಳಿಯಬೇಕಿದ್ದರೆ ಕುರಿ ಮೇಯಿಸುವವರನ್ನು ಕೇಳಿ” ಎನ್ನುತ್ತಾನೆ.

ಸಾಮಾನ್ಯವಾಗಿ ಗ್ರಾಮಾಂತರದ ಉತ್ಪಾದಕ ಮತ್ತು ನಗರದ ಗ್ರಾಹಕ ಎನ್ನುವುದಾಗಿ ಹೇಳುವುದುಂಟು. ಆದರೆ ನೀವು ನಿಜವಾಗಿಯೂ ಆರೋಗ್ಯವಂತರಾಗಿ ಬದುಕಬೇಕಿದ್ದರೆ ನಿಮಗೆ ಒಬ್ಬ ರೈತ ಸ್ನೇಹಿತನಾಗಿರಬೇಕು ಎಂದು ಪರಿಗಣಿಸುತ್ತಾರೆ. ಇದು ಕೇವಲ ಹೊಲ-ಗದ್ದೆಗಳ ನೈಜ ಪರಿಸ್ಥಿತಿಯ ಅರಿವಷ್ಟೇ ಅಲ್ಲ, ತನ್ನ ಅನ್ನದ ಹಿಂದಿನ ದುಡಿದ ಕೈಗಳ ಪರಿಚಯ ಮತ್ತು ಆತ್ಮೀಯತೆ, ನಮ್ಮನ್ನು ಭೌತಿಕವಾಗಿ ಸದೃಢಗೊಳಿಸುವುದಲ್ಲದೆ, ಮಾನಸಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಕೂಡಾ ಗಟ್ಟಿಗೊಳಿಸಬಲ್ಲುದು. ಬುದ್ಧನ ಕರುಣೆ ಮತ್ತು ಮೈತ್ರಿಗೆ ಈ ಪ್ರಕ್ರಿಯೆಯಿಂದ ಅವಕಾಶವುಂಟು. ಅಮೆರಿಕದಲ್ಲಿ ಇತ್ತೀಚೆಗೆ ಪ್ರತಿಯೊಂದು ನಗರಗಳಲ್ಲಿಯೂ ರೈತರ ಮಾರುಕಟ್ಟೆಗಳಿವೆ. ವಾಷಿಂಗ್‌ಟನ್‌ನಲ್ಲಿ ಹೌಸ್ ಆಫ್ ಕಾಂಗ್ರೆಸ್ ಮತ್ತು ವೈಟ್ ಹೌಸ್ ಅಕ್ಕಪಕ್ಕದಲ್ಲಿಯೇ ರೈತರ ಮಾರುಕಟ್ಟೆಗಳನ್ನು ಗಮನಿಸಬಹುದು. ಇಡೀ ದೇಶದಲ್ಲಿ ಬಂಡವಾಳಶಾಹಿ ವಾಲ್‌ಮಾರ್ಟ್‌ನಂತಹ ದೈತ್ಯ ಸಗಟು ವ್ಯಾಪಾರಿಗಳಿದ್ದರೂ ಸಮುದಾಯ ರೈತರನ್ನು ಬೆಂಬಲಿಸಿ ನೇರವಾಗಿ ರೈತರೊಂದಿಗೆ ಮಾತುಕತೆಯಾಡಿ ತಮಗೆ ಬೇಕಾದ ಹಣ್ಣುಹಂಪಲನ್ನು ಅವರಿಂದ ಕೊಂಡುಕೊಳ್ಳುವುದನ್ನು ಗಮನಿಸಬೇಕಾಗಿರುವಂತದ್ದು. ನಮ್ಮಲ್ಲಿ ರೈತನಿಂದ ಅತ್ಯಂತ ಕಮ್ಮಿ ಬೆಲೆಯಲ್ಲಿ ಹೇಗಾದರೂ ಕೊಂಡು, ಹೆಚ್ಚು ಲಾಭಗಳಿಸುವ ಆಹಾರ ಉದ್ಯಮಗಳೇ ಹೆಚ್ಚು. ಕಡಿಮೆ ಬೆಲೆಯಲ್ಲಿ ಕೊಳ್ಳುವುದೇ ಲಾಭಕ್ಕೆ ಮೂಲ ಆಧಾರ. ಇದೇ ಹೊಸ ಕಾನೂನುಗಳನ್ನು ಸೃಷ್ಟಿಸಿರುವುದಕ್ಕೆ ಇರುವ ಮೂಲ ಉದ್ದೇಶ. ಇದನ್ನು ಇನ್ನೊಂದು ರೀತಿಯಲ್ಲಿ produce heap, sell cheap ಎನ್ನಲಾಗಿದೆ.

ಬ್ರಾಂಡೆಡ್ ಆಹಾರ ಜಗತ್ತಿನಲ್ಲಿ ಬ್ರಾಂಡ್ ವಾಷಿಂಗ್ ಮುಖ್ಯವಾಗುತ್ತದೆ ಹೊರತು, ಜನರ ಸಾಮಾನ್ಯ ಒಳಿತಿನ ಹಿಂದೆ ಮುಂದೆ ಗಮನಿಸುವುದಿಲ್ಲ. ಒಂದು ತೆಂಗಿನ ಎಣ್ಣೆಯ ಬ್ರಾಂಡ್‌ನ ಮೌಲ್ಯ ಭಾರತದಲ್ಲಿ ಇಡೀ ತೆಂಗಿನ ಉದ್ಯಮಕ್ಕಿಂತ ಹೆಚ್ಚಾಗಿರುವುದನ್ನು ಗಮನಿಸಿದರೆ ಇದರ ಅರಿವು ಉಂಟಾಗಬಹುದು. ಅಥವಾ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಭರಿತ ಬ್ರಾಂಡ್ ಆರೋಗ್ಯಕ್ಕೆ ಮಾರಕವಾದ ಒಂದು ಲಘುಪೇಯ ಎನ್ನುವುದು ನಮ್ಮಕಾಲದ ವಾಸ್ತವ. ಅದಕ್ಕೆ ಬರುವ ಸಕ್ಕರೆ ರೈತನ ಕಬ್ಬಿನದಲ್ಲ, ಅದು ಮೆಕ್ಕೆ ಜೋಳ ಹಾಗೂ ಕೃತಕವಾಗಿ ರಾಸಾಯನಿಕಗಳ ಬಳಕೆಯಿಂದ ತಯಾರಾದ ಸಕ್ಕರೆ.

ನಾವು ಬಳಸುವ ಹಾಲು, ನಾವು ಬಳಸುವ ಬ್ರಾಂಡ್ ಮೂಲಕವೇ ತಿಳಿದಿರುತ್ತದೆಯೇ ಹೊರತು ಅದು ಯಾವ ಜಾತಿಯ ಹಸುವಿನಿಂದ ಬಂತು, ಎಮ್ಮೆಯದೋ ಹಸುವಿನದೋ, ವಿದೇಶೀ ತಳಿಯೋ ಅಥವಾ ಸ್ಥಳೀಯ ತಳಿಯೋ, ಒಂದೂ ತಿಳಿಯದು. ನಮ್ಮದೇ ತಳಿಗಳಾದ ಮಲೆನಾಡು ಗಿಡ್ಡ, ಹಳಿಕರ್, ಅಮೃತ್ ಮಹಲ್ ಹೆಸರನ್ನು ನಾವು ಎಲ್ಲಿಯೂ ಗಮನಿಸುವುದಿಲ್ಲ. ಹಾಗಾಗಿ ಗುಣಕ್ಕಿಂತ ಗಾತ್ರವೇ ಹೆಚ್ಚು ಮುಖ್ಯವಾಗಿದೆ. ರೈತ ಸಮುದಾಯಕ್ಕಿಂತ ಬ್ರಾಂಡ್ ಮುಖ್ಯವಾಗಿವೆ. ಅದಕ್ಕಾಗಿಯೇ ಕೆಲವರು ಹೇಳುವುದು ‘we are going from self-reliance to total Reliance.’

ಈ ಹಿನ್ನೆಲೆಯಲ್ಲಿ ರೈತ ಹೋರಾಟ ಮತ್ತು ಈಗ ಜಾರಿಯಾಗಿರುವ ಕರಾಳ ಕೃಷಿ ಕಾಯ್ದೆಗಳು ವಜಾ ಆಗಬೇಕಿರುವ ಪ್ರಾಮುಖ್ಯತೆಯನ್ನು ನಾವು ಅರಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಬಳಕೆದಾರ ರೈತನ ಜೊತೆಗೆ ನೇರ ಸಂಬಂಧ ಹೊಂದಿ ಎಲ್ಲರ ಸಾಮಾನ್ಯ ಒಳಿತಿನ ಕಡೆಗೆ ಹೆಜ್ಜೆ ಹಾಕುವುದಕ್ಕೆ ಸಾಧ್ಯವಿದೆ.

ಕೆ.ಸಿ. ರಘು

ಕೆ. ಸಿ. ರಘು
ಆಹಾರ ತಜ್ಞರು


ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ಷುಲ್ಲಕ ಕಾರಣಕ್ಕೆ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಿರಿಯ ವಯಸ್ಕರು ಸೇರಿದಂತೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ದುಷ್ಕರ್ಮಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 15ರಂದು ಜಿಲ್ಲೆಯ ರುದಾಯನ್ ಪಟ್ಟಣದಲ್ಲಿ...

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...