Homeಮುಖಪುಟಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?

ಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?

- Advertisement -
- Advertisement -

ಹಿಂದೆಂದೂ ಕೇಳದ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರೈತ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿ ಮೂದಲಿಸುವ ಸಂಪ್ರದಾಯ ನಾವು ಕಾಣುತ್ತಿದ್ದೇವೆ. ಇವರು ಹೊಲಕ್ಕೆ ಬೆಂಕಿಹಚ್ಚಿ ನಮ್ಮ ನಗರಗಳನ್ನು ಮಾಲಿನ್ಯಗೊಳಿಸುವ ಅಪರಾಧಿಗಳು, ಬೇಡದ ಭತ್ತ, ಗೋಧಿ ಬೆಳೆದು ಮಣ್ಣಿನ ಫಲವತ್ತತೆ ಮತ್ತು ನೀರನ್ನು ಹಾಳುಗೆಡವುವವರು, ಸೋಮಾರಿ ಸಮುದಾಯದವರು, ಸ್ವಂತ ಬುದ್ಧಿ ಇಲ್ಲದೆ ಇತರರು ಹೇಳಿದ ಹಾಗೆ ನಡೆದುಕೊಳ್ಳುತ್ತಿರುವವರು, ಹೀಗೆಲ್ಲಾ ಕಳೆದ ಒಂದು ವರ್ಷದಿಂದ ನಾವು ಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ನೇರವಾಗಿ ನಿಂದಿಸುವವರನ್ನು ಗಮನಿಸುತ್ತಿದ್ದೇವೆ. ನೇರವಾಗಿ ಏಕೆಂದರೆ, ನಾಗರಿಕರೆನ್ನುವ ಪ್ರಜ್ಞಾವಂತರೆನ್ನುವ ಈ ಸಮುದಾಯಕ್ಕೆ ನೇಗಿಲಯೋಗಿಯ ಬಗ್ಗೆ ಕಿಂಚಿತ್ತಾದರೂ, ಒಳಗಿಂದೊಳಗಾದರೂ ಗೌರವ ಇರಲಿಲ್ಲವೇ ಎಂಬ ಪ್ರಶ್ನೆ ಇತ್ತೀಚೆಗೆ ಏಳುತ್ತಿದೆ. ಅಷ್ಟೇ ಏಕೆ? ಒಟ್ಟಾರೆ ದುಡಿಯುವ ವರ್ಗದ ಬಗ್ಗೆ ’ಅದು ಅವನ ಕರ್ಮ’ ಎಂದೇ ಪರಿಗಣಿಸುವಂತೆ ಈ ವರ್ಗ ಬೆಳೆದಿದೆ.

ಶ್ರೇಣೀಕೃತವರ್ಗದಲ್ಲಿ ಬೆವರಿನ ಹನಿ ಹೆಚ್ಚಾದಂತೆಲ್ಲಾ ಬೈಗುಳ ಮತ್ತು ನಿಂದನೆಗೆ ಒಳಪಟ್ಟಿರುವುದನ್ನು ಗಮನಿಸಬಹುದು. ಇದನ್ನು `ascendancy of respect and descendancy of disrespect in the ladder’ ಎಂದು ಅಂಬೇಡ್ಕರ್ ಗಮನಿಸಿದ್ದರು. ಮಹಾತ್ಮ ಗಾಂಧಿ ರೈತನನ್ನು ಒಬ್ಬ ಖಗೋಳಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಹವಾಮಾನತಜ್ಞ, ಆಹಾರತಜ್ಞ, ಪರಿಸರತಜ್ಞ, ಭೂವಿಜ್ಞಾನಿ ಎಂದೆಲ್ಲಾ ಬಣ್ಣಿಸಿದ್ದರು. ಡಾ.ರಿಚಾರಿಯಾ ಹೇಳುವಂತೆ ನಮ್ಮೊಳಗಿನ ಅತ್ಯಂತ ಪ್ರಜ್ಞಾವಂತ ತಳಿವಿಜ್ಞಾನದ ತಜ್ಞ ಎಂದರೆ ರೈತ ಎಂಬ ಮಾತು ಗಮನಾರ್ಹವಾದದ್ದು. ಆಯುರ್ವೇದ ವೈದ್ಯ ಹಾಗೂ ಗ್ರಂಥಕರ್ತ ಚರಕ ತನ್ನ ’ಚರಕ ಸಂಹಿತ’ದಲ್ಲಿ ಕೆಲವು ಔಷಧೀಯ ಸಸ್ಯಗಳ ಬಗ್ಗೆ ವಿವರಿಸತ್ತಾ, “ಇನ್ನೂ ಹೆಚ್ಚು ತಿಳಿಯಬೇಕಿದ್ದರೆ ಕುರಿ ಮೇಯಿಸುವವರನ್ನು ಕೇಳಿ” ಎನ್ನುತ್ತಾನೆ.

ಸಾಮಾನ್ಯವಾಗಿ ಗ್ರಾಮಾಂತರದ ಉತ್ಪಾದಕ ಮತ್ತು ನಗರದ ಗ್ರಾಹಕ ಎನ್ನುವುದಾಗಿ ಹೇಳುವುದುಂಟು. ಆದರೆ ನೀವು ನಿಜವಾಗಿಯೂ ಆರೋಗ್ಯವಂತರಾಗಿ ಬದುಕಬೇಕಿದ್ದರೆ ನಿಮಗೆ ಒಬ್ಬ ರೈತ ಸ್ನೇಹಿತನಾಗಿರಬೇಕು ಎಂದು ಪರಿಗಣಿಸುತ್ತಾರೆ. ಇದು ಕೇವಲ ಹೊಲ-ಗದ್ದೆಗಳ ನೈಜ ಪರಿಸ್ಥಿತಿಯ ಅರಿವಷ್ಟೇ ಅಲ್ಲ, ತನ್ನ ಅನ್ನದ ಹಿಂದಿನ ದುಡಿದ ಕೈಗಳ ಪರಿಚಯ ಮತ್ತು ಆತ್ಮೀಯತೆ, ನಮ್ಮನ್ನು ಭೌತಿಕವಾಗಿ ಸದೃಢಗೊಳಿಸುವುದಲ್ಲದೆ, ಮಾನಸಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಕೂಡಾ ಗಟ್ಟಿಗೊಳಿಸಬಲ್ಲುದು. ಬುದ್ಧನ ಕರುಣೆ ಮತ್ತು ಮೈತ್ರಿಗೆ ಈ ಪ್ರಕ್ರಿಯೆಯಿಂದ ಅವಕಾಶವುಂಟು. ಅಮೆರಿಕದಲ್ಲಿ ಇತ್ತೀಚೆಗೆ ಪ್ರತಿಯೊಂದು ನಗರಗಳಲ್ಲಿಯೂ ರೈತರ ಮಾರುಕಟ್ಟೆಗಳಿವೆ. ವಾಷಿಂಗ್‌ಟನ್‌ನಲ್ಲಿ ಹೌಸ್ ಆಫ್ ಕಾಂಗ್ರೆಸ್ ಮತ್ತು ವೈಟ್ ಹೌಸ್ ಅಕ್ಕಪಕ್ಕದಲ್ಲಿಯೇ ರೈತರ ಮಾರುಕಟ್ಟೆಗಳನ್ನು ಗಮನಿಸಬಹುದು. ಇಡೀ ದೇಶದಲ್ಲಿ ಬಂಡವಾಳಶಾಹಿ ವಾಲ್‌ಮಾರ್ಟ್‌ನಂತಹ ದೈತ್ಯ ಸಗಟು ವ್ಯಾಪಾರಿಗಳಿದ್ದರೂ ಸಮುದಾಯ ರೈತರನ್ನು ಬೆಂಬಲಿಸಿ ನೇರವಾಗಿ ರೈತರೊಂದಿಗೆ ಮಾತುಕತೆಯಾಡಿ ತಮಗೆ ಬೇಕಾದ ಹಣ್ಣುಹಂಪಲನ್ನು ಅವರಿಂದ ಕೊಂಡುಕೊಳ್ಳುವುದನ್ನು ಗಮನಿಸಬೇಕಾಗಿರುವಂತದ್ದು. ನಮ್ಮಲ್ಲಿ ರೈತನಿಂದ ಅತ್ಯಂತ ಕಮ್ಮಿ ಬೆಲೆಯಲ್ಲಿ ಹೇಗಾದರೂ ಕೊಂಡು, ಹೆಚ್ಚು ಲಾಭಗಳಿಸುವ ಆಹಾರ ಉದ್ಯಮಗಳೇ ಹೆಚ್ಚು. ಕಡಿಮೆ ಬೆಲೆಯಲ್ಲಿ ಕೊಳ್ಳುವುದೇ ಲಾಭಕ್ಕೆ ಮೂಲ ಆಧಾರ. ಇದೇ ಹೊಸ ಕಾನೂನುಗಳನ್ನು ಸೃಷ್ಟಿಸಿರುವುದಕ್ಕೆ ಇರುವ ಮೂಲ ಉದ್ದೇಶ. ಇದನ್ನು ಇನ್ನೊಂದು ರೀತಿಯಲ್ಲಿ produce heap, sell cheap ಎನ್ನಲಾಗಿದೆ.

ಬ್ರಾಂಡೆಡ್ ಆಹಾರ ಜಗತ್ತಿನಲ್ಲಿ ಬ್ರಾಂಡ್ ವಾಷಿಂಗ್ ಮುಖ್ಯವಾಗುತ್ತದೆ ಹೊರತು, ಜನರ ಸಾಮಾನ್ಯ ಒಳಿತಿನ ಹಿಂದೆ ಮುಂದೆ ಗಮನಿಸುವುದಿಲ್ಲ. ಒಂದು ತೆಂಗಿನ ಎಣ್ಣೆಯ ಬ್ರಾಂಡ್‌ನ ಮೌಲ್ಯ ಭಾರತದಲ್ಲಿ ಇಡೀ ತೆಂಗಿನ ಉದ್ಯಮಕ್ಕಿಂತ ಹೆಚ್ಚಾಗಿರುವುದನ್ನು ಗಮನಿಸಿದರೆ ಇದರ ಅರಿವು ಉಂಟಾಗಬಹುದು. ಅಥವಾ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಭರಿತ ಬ್ರಾಂಡ್ ಆರೋಗ್ಯಕ್ಕೆ ಮಾರಕವಾದ ಒಂದು ಲಘುಪೇಯ ಎನ್ನುವುದು ನಮ್ಮಕಾಲದ ವಾಸ್ತವ. ಅದಕ್ಕೆ ಬರುವ ಸಕ್ಕರೆ ರೈತನ ಕಬ್ಬಿನದಲ್ಲ, ಅದು ಮೆಕ್ಕೆ ಜೋಳ ಹಾಗೂ ಕೃತಕವಾಗಿ ರಾಸಾಯನಿಕಗಳ ಬಳಕೆಯಿಂದ ತಯಾರಾದ ಸಕ್ಕರೆ.

ನಾವು ಬಳಸುವ ಹಾಲು, ನಾವು ಬಳಸುವ ಬ್ರಾಂಡ್ ಮೂಲಕವೇ ತಿಳಿದಿರುತ್ತದೆಯೇ ಹೊರತು ಅದು ಯಾವ ಜಾತಿಯ ಹಸುವಿನಿಂದ ಬಂತು, ಎಮ್ಮೆಯದೋ ಹಸುವಿನದೋ, ವಿದೇಶೀ ತಳಿಯೋ ಅಥವಾ ಸ್ಥಳೀಯ ತಳಿಯೋ, ಒಂದೂ ತಿಳಿಯದು. ನಮ್ಮದೇ ತಳಿಗಳಾದ ಮಲೆನಾಡು ಗಿಡ್ಡ, ಹಳಿಕರ್, ಅಮೃತ್ ಮಹಲ್ ಹೆಸರನ್ನು ನಾವು ಎಲ್ಲಿಯೂ ಗಮನಿಸುವುದಿಲ್ಲ. ಹಾಗಾಗಿ ಗುಣಕ್ಕಿಂತ ಗಾತ್ರವೇ ಹೆಚ್ಚು ಮುಖ್ಯವಾಗಿದೆ. ರೈತ ಸಮುದಾಯಕ್ಕಿಂತ ಬ್ರಾಂಡ್ ಮುಖ್ಯವಾಗಿವೆ. ಅದಕ್ಕಾಗಿಯೇ ಕೆಲವರು ಹೇಳುವುದು ‘we are going from self-reliance to total Reliance.’

ಈ ಹಿನ್ನೆಲೆಯಲ್ಲಿ ರೈತ ಹೋರಾಟ ಮತ್ತು ಈಗ ಜಾರಿಯಾಗಿರುವ ಕರಾಳ ಕೃಷಿ ಕಾಯ್ದೆಗಳು ವಜಾ ಆಗಬೇಕಿರುವ ಪ್ರಾಮುಖ್ಯತೆಯನ್ನು ನಾವು ಅರಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಬಳಕೆದಾರ ರೈತನ ಜೊತೆಗೆ ನೇರ ಸಂಬಂಧ ಹೊಂದಿ ಎಲ್ಲರ ಸಾಮಾನ್ಯ ಒಳಿತಿನ ಕಡೆಗೆ ಹೆಜ್ಜೆ ಹಾಕುವುದಕ್ಕೆ ಸಾಧ್ಯವಿದೆ.

ಕೆ.ಸಿ. ರಘು

ಕೆ. ಸಿ. ರಘು
ಆಹಾರ ತಜ್ಞರು


ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...