Homeಕರ್ನಾಟಕಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಂಚೇಗೌಡ ಎಂಬುವವರು 1982/83ರಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.

- Advertisement -
- Advertisement -

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ನೆಲದ ಹಕ್ಕಿಗಾಗಿ 183ದಿನಗಳಿಂದ PTCL ಕಾಯ್ದೆ ಸಮರ್ಪಕವಾಗಿ ಜಾರಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಇದುವರೆಗೂ ಈ ವಿಷಯ ಕುರಿತು ಸರ್ಕಾರ ದ ಜೊತೆ ಅಂದಿನಿಂದ ಇಂದಿನ ವರೆಗೂ ಯಾವ ಮಂತ್ರಿ ಶಾಸಕರು ಭೇಟಿ ನೀಡಿಲ್ಲ ಎಂಬುದು ದುರಂತ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೋಷಿತ ಜನರ ಜೀವನ ನಿರ್ವಹಣೆಗೆ ಇದ್ದ ಜಮೀನುಗಳನ್ನ ಕೆಲವು ಮುಂದುವರೆದ ಜಾತಿ ಜನ ಆಸೆ ಆಮಿಷಗಳನ್ನು ತೋರಿಸಿ, ಬಗ್ಗದಿದ್ದರೆ ದೌರ್ಜನ್ಯವೆಸಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಶೋಷಿತರು ಇದ್ದ ಭೂಮಿ ಕಳೆದುಕೊಂಡು ಭೂ ಹೀನರಾಗಿದ್ದಾರೆ. ಇದನ್ನು ಮನಗಂಡ ಅಂದಿನ ಮಂತ್ರಿ ಶ್ರೀ ಬಸವಲಿಂಗಪ್ಪ ಮತ್ತು ರಾಜ್ಯ ಸರ್ಕಾರ 1978 ತಾ 18/12/1978ರಲ್ಲಿ ಸಂವಿಧಾನ ದ ಆರ್ಟಿಕಲ್ 31ಸಿ ಮತ್ತು 46ರ ರೀತ್ಯ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಭೂ ಪರೆಬಾರೆ) ಕಾಯ್ದೆ ಜಾರಿಗೆ ತಂತು. ಈ ಕಾಯ್ದೆಯು 1979ರ ಜನವರಿಯಿಂದ ಜಾರಿಗೆ ತಯಾರಾಗಿದೆ.

ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರು ಸರ್ಕಾರಿ ಸಾಗುವಳಿದಾರರ ಭೂಮಿ ಹಾಗೂ ಇನಾಂ ಮಂಜೂರು ಭೂಮಿಗಳನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದ್ದರೂ ಅಂತಹ ಭೂಮಿ ಮಂಜೂರುದಾರರು ಅಥವ ಅವರ ವಾರಸುದಾರರು ಸಂಬಂಧಿಸಿದ ಎ ಸಿ (ಉಪ ವಿಭಾಗ ಅಧಿಕಾರಿಗಳಿಗೆ) ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಈ ಕಾಯ್ದೆ ಪ್ರಕಾರ ತಮ್ಮ ಭೂಮಿಯನ್ನು ವಾಪಸ್ ಪಡೆದು ಕೊಳ್ಳುವ ಹಕ್ಕು ಕೊಡಲಾಗಿದೆ.

ಈ ಕಾಯ್ದೆ ಇದ್ದಾಗ್ಯೂ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನ ಪರಬಾರೆ ಮಾಡಲಾಗಿದೆ. ಒಂದು ಅಂದಾಜಿನಿನಂತೆ ಹತ್ತು ಸಾವಿರ ಎಕರೆ ಭೂಮಿ ಮಾರಾಟಗೊಂಡಿದೆ. ಇದುವರೆಗೂ ಸಂಬಂಧ ಸಲ್ಲಿಸಿದ್ದ 1150 ಪ್ರಕರಣಗಳು ಇತ್ಯರ್ಥಗೊಂಡು ಮಾರಿದ್ದ ಭೂಮಿ ವಾಪಸ್ ಪಡೆಯಲಾಗಿದೆ.

ನಗರಪ್ರದೇಶಗಳ ಅಂದರೆ ಬೆಂಗಳೂರು ಸುತ್ತಮುತ್ತ ಹಾಗೂ ಜಿಲ್ಲಾ ಕೇಂದ್ರಗಳ ಸುತ್ತ ಬೆಲೆ ಬಾಳುವ ದಲಿತರ ಜಮೀನು ಗಳನ್ನ ಪುಸಲಾಯಿಸಿ ಒಂದಷ್ಟು ಹೆಚ್ಚು ಹಣ ನೀಡಿ ಖರೀದಿಸಿರುವ ಭೂ ಮಾಫಿಯ ರಾಜಕಾರಣಿಗಳು, ಬಂಡವಾಳಿಗರು ಈ ಕಾಯ್ದೆ ಪ್ರಕಾರ ವಾಪಸ್ ಜಮೀನು ಪಡೆದುಕೊಳ್ಳುವ ಆಲೋಚನೆ ಮಾಡದಂತೆ ದಲಿತರಿಗೆ ಕೆಲವು ಪುಡಾರಿಗಳ ಬೆದರಿಕೆ ಮತ್ತು ಕೆಲವು ಸ್ವಯಂ ಘೋಷಿತವಾದ ದಲಿತ ಸಂಘಟನೆಗಳ ಮುಖಂಡರ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ತರಾತುರಿಯಲ್ಲಿ ಕಂದಾಯ ಇಲಾಖೆ ಎ ಸಿ, ಡಿ ಸಿ ಗಳ ಜೊತೆ ಶಾಮೀಲಾಗಿ ಈ PTCL ಕಾಯ್ದೆಯನ್ನ ಹಣದ ಹಗ್ಗದಿಂದ ಬಂಧಿಸಿದ್ದಾರೆ.

ಮಂಚೇಗೌಡ ಎಂಬುವವರು 1982/83ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಅವರು 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನ ತಿರಸ್ಕಾರ ಮಾಡಿ PTCL ಕಾಯ್ದೆ 1963 ಕಾಯ್ದೆಗೆ ಒಳಪಡುವುದಿಲ್ಲ ಎಂದಿದೆ.

ಈ ಕಾಯ್ದೆ ಮೊದಲು 1984 ನಂತರ 2ನೇ ಬಾರಿ 1992 ಮುಂದುವರೆದು 2012ರ ಸುತ್ತೋಲೆಗಳ ಮೂಲಕ ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಗಳು ಮೂಲ ಮಂಜೂರುದಾರರಿಗೆ ಭೂಮಿಯನ್ನ ಪುನರ್ ಸ್ಥಾಪಿಸಲು ನಿಯಮ ರೂಪಿಸಿದೆ. ಹೀಗಿರುವಾಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಅಧಿಕಾರಿಗಳು ಇದನ್ನ ಮನೆಗಾಣದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಹಟ್ಟಿ ಗ್ರಾಮದ ಸರ್ವೆ ನಂ 24ಮತ್ತು 24/ಎ ವಿಷಯ ಅಂದರೆ ಖರೀದಿದಾರ ನೆಕ್ಕುಂಟಿ ರಾಜಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 28/10/2017ರಂದು ಚೆಂದಿಲಾಲ್ ಕೇಸ್ ಬಿಹಾರದ ಜನರಲ್ ಕೇಸ್ ಅನ್ನು ಉದಾಹರಣೆ ನೀಡಿ ಇದು 25ವರ್ಷದ ಹಿಂದೆ ಪರೆಬಾರೆ ಆಗಿದೆ. ಹಾಗಾಗಿ 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿ ಮಾರಾಟ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಆದರೆ ಮಂಚೇಗೌಡರ ವಿಷಯದಲ್ಲಿ 1984ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಮತ್ತು ನೆಕ್ಕುಂಟಿ ಪ್ರಕರಣದ ಸರ್ವೆನಂಬರ್ ಬೇರೆ ಬೇರೆ ಇದೆ ಎಂದು ಎ ಸಿ, ಡಿ ಸಿ ಆದೇಶ ಹೊರಡಿಸಿದ ಬಗ್ಗೆ ಸುಪ್ರೀಂಕೋರ್ಟ್ಗೆ ಸರ್ಕಾರದ ಪರ ವಕೀಲರು ಸರಿಯಾಗಿ ದಾಖಲಿಸದೆ ಈ ತೀರ್ಪು ನೀಡಿದೆ. ಇದನ್ನ ಹಿಡಿದುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೈಸೂರು ಇನ್ನೂ ಬೇರೆ ಬೇರೆ ಕಡೆ PTCL ಕಾಯ್ದೆ ವಿರುದ್ಧ ಡಿ.ಸಿ ಕೋರ್ಟುಗಳು ತೀರ್ಪು ನೀಡಲಾಗುತ್ತಿದೆ.

ಇದು ಕಾಯ್ದೆ 1978ರ ಕಲಂ5(1)ಎ ರಂತೆ 1964ರ ಕಲಂ(39)ವಿವರಣೆಯನ್ನ ಎ ಸಿ, ಡಿ ಸಿ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ನೆಕ್ಕುಂಟಿ ಪ್ರಕರಣವನ್ನು ಮುಂದಿಡುವ ಎ ಸಿ ಮತ್ತು ಡಿ ಸಿ ಅಧಿಕಾರಿಗಳು 2019ರ ಸುಪ್ರೀಂಕೋರ್ಟ್ ದಲಿತ ರೈತರ ಪರವಾದ ತೀರ್ಪು ನೀಡಿದ್ದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಜಾರ್ಖಂಡ್ SC/ST ಜಮೀನು ಕಾಯ್ದೆ ಪ್ರಕಾರ 3/3/2020 ರ(SAR CIV 42644)ತೀರ್ಪು ನೀಡಿದೆ. ಇದನ್ನ ಯಾಕೆ ಅಧಿಕಾರಿಗಳು ಪರಿಗಣಿಸುತ್ತಿಲ್ಲ? ಇದು ಇಂಡಿಯನ್ ಲಿಮಿಟೇಷನ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಇದನ್ನ ತಿಳಿಯದ ಎ ಸಿ, ಡಿ ಸಿ ಅಧಿಕಾರಿಗಳು ಭೂ ಮಾಲೀಕರು, ಮಾಫಿಯ ರಾಜಕಾರಣಿಗಳ ಮತ್ತು ತಮ್ಮ ಹೊತ್ತಿನ ಕೂಳಿಗೆ ತಮ್ಮವರನ್ನೆ ಬಡಿದು ತಿನ್ನಲು ನಿಂತಿರುವ ಲೆಟರ್ ಪ್ಯಾಡ್ ಸ್ವಯಂ ಘೋಷಿತ ಏಜೆಂಟ್ ಗಳಿಂದ ಇಂದು ಈ PTCL ಕಾಯ್ದೆ ಜಾರಿಯಾಗದೆ ನಿಂತಿದೆ.

ನೆಕ್ಕಂಟಿ ಕೇಸ್ ನಿಂದ ಇಲ್ಲಿಯತನಕ ಸುಮಾರು 25 ಸಾವಿರ ಕೇಸ್‌ಗಳನ್ನು ಡಿಸಿಗಳು ವಜಾಗೊಳಿಸಿದ್ದಾರೆ. ಇನ್ನೂ ಬಾಕಿ 20 ಸಾವಿರ ಕೇಸ್‌ಗಳು ವಿಚಾರಣೆಯಲ್ಲಿವೆ. ಹಾಗಾಗಿ ದಲಿತರು 2 ಲಕ್ಷ ಎಕರೆಗಿಂತ ಹೆಚ್ಚಿನ ಭೂಮಿ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಜೀವನ ನಾಶವಾಗಿದೆ.  ವಿಶೇಷ ಕಾಯ್ದೆಯಾಗಿರುವುದರಿಂದ ಕಾಲಮಿತಿ ಅನ್ವಯಿಸುವುದಿಲ್ಲ. ಆದರೂ ಬಲಾಢ್ಯರ ಕುತಂತ್ರದಿಂದ ಇದಕ್ಕೆಲ್ಲ ನೇರ ಕಾರಣ ಕಂದಾಯ ಇಲಾಖೆಯ ನೋಂದಣಿಧಿಕಾರಿಗಳು, VA, RI, ತಹಸೀಲ್ದಾರ್ ಸೇರಿಕೊಂಡು ದಲಿತರಿಗೆ ಕೊಳ್ಳಿ ಇಡುತ್ತಿದ್ದಾರೆ.

PTCL ಕಾಯ್ದೆಗೆ 10.12.11ಕಾಲಂ ರಂತೆ ಯಾವ ಕಾಲ ಮಿತಿ ಇದಕ್ಕೆ ಅನ್ವಯವಾಗುವುದಿಲ್ಲ.
ಎ ಸಿ ಗೆ ಅರ್ಜಿ ಹಾಕಿ ನಂತರ ಮೇಲ್ಮನವಿಗೆ 90 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಮಿತಿ ಇದೆ. ಹಾಗೆ ಕಾಲ ಮಿತಿಗೆ ಕಾರಣ ತಿಳಿಸಿ ಮುಂದುವರೆಯಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಶೋಷಿತರ ದಲಿತರ ಪರ ಕಾಳಜಿಯುಳ್ಳ ಸಂಘಟಕರು ಈ ಹೋರಾಟದ ಪರ ನಿಲ್ಲಬೇಕು. ಒಂದಷ್ಟು ಈ ವಿಷಯ ಕುರಿತು ಅಧ್ಯಯನ ಮಾಡಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರಕ್ಕೆ ಈ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಒತ್ತಡ ತಂದು ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ಭೂಮಿ ವಾಪಸ್ ಕೊಡಿಸಲು ಎಲ್ಲಾ ಹೋರಾಟಗಾರರು ಮುಂದಾಗಬೇಕು. ಚುನಾವಣೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದಂತೆ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 183 ದಿನಗಳಿಂದ ನಡೆಯುತ್ತಿರುವ ಭೂ ಹೀನ ಬಡವರ ಹೆಗಲಿಗೆ ಹೆಗಲೊಡ್ಡೋಣ.

ಕಂದೇಗಾಲ ಶ್ರೀನಿವಾಸ
ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಬೆಂಗಳೂರು

ಇದನ್ನೂ ಓದಿ; ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...