Homeಕರ್ನಾಟಕಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಂಚೇಗೌಡ ಎಂಬುವವರು 1982/83ರಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.

- Advertisement -
- Advertisement -

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ನೆಲದ ಹಕ್ಕಿಗಾಗಿ 183ದಿನಗಳಿಂದ PTCL ಕಾಯ್ದೆ ಸಮರ್ಪಕವಾಗಿ ಜಾರಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಇದುವರೆಗೂ ಈ ವಿಷಯ ಕುರಿತು ಸರ್ಕಾರ ದ ಜೊತೆ ಅಂದಿನಿಂದ ಇಂದಿನ ವರೆಗೂ ಯಾವ ಮಂತ್ರಿ ಶಾಸಕರು ಭೇಟಿ ನೀಡಿಲ್ಲ ಎಂಬುದು ದುರಂತ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೋಷಿತ ಜನರ ಜೀವನ ನಿರ್ವಹಣೆಗೆ ಇದ್ದ ಜಮೀನುಗಳನ್ನ ಕೆಲವು ಮುಂದುವರೆದ ಜಾತಿ ಜನ ಆಸೆ ಆಮಿಷಗಳನ್ನು ತೋರಿಸಿ, ಬಗ್ಗದಿದ್ದರೆ ದೌರ್ಜನ್ಯವೆಸಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಶೋಷಿತರು ಇದ್ದ ಭೂಮಿ ಕಳೆದುಕೊಂಡು ಭೂ ಹೀನರಾಗಿದ್ದಾರೆ. ಇದನ್ನು ಮನಗಂಡ ಅಂದಿನ ಮಂತ್ರಿ ಶ್ರೀ ಬಸವಲಿಂಗಪ್ಪ ಮತ್ತು ರಾಜ್ಯ ಸರ್ಕಾರ 1978 ತಾ 18/12/1978ರಲ್ಲಿ ಸಂವಿಧಾನ ದ ಆರ್ಟಿಕಲ್ 31ಸಿ ಮತ್ತು 46ರ ರೀತ್ಯ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಭೂ ಪರೆಬಾರೆ) ಕಾಯ್ದೆ ಜಾರಿಗೆ ತಂತು. ಈ ಕಾಯ್ದೆಯು 1979ರ ಜನವರಿಯಿಂದ ಜಾರಿಗೆ ತಯಾರಾಗಿದೆ.

ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರು ಸರ್ಕಾರಿ ಸಾಗುವಳಿದಾರರ ಭೂಮಿ ಹಾಗೂ ಇನಾಂ ಮಂಜೂರು ಭೂಮಿಗಳನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದ್ದರೂ ಅಂತಹ ಭೂಮಿ ಮಂಜೂರುದಾರರು ಅಥವ ಅವರ ವಾರಸುದಾರರು ಸಂಬಂಧಿಸಿದ ಎ ಸಿ (ಉಪ ವಿಭಾಗ ಅಧಿಕಾರಿಗಳಿಗೆ) ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಈ ಕಾಯ್ದೆ ಪ್ರಕಾರ ತಮ್ಮ ಭೂಮಿಯನ್ನು ವಾಪಸ್ ಪಡೆದು ಕೊಳ್ಳುವ ಹಕ್ಕು ಕೊಡಲಾಗಿದೆ.

ಈ ಕಾಯ್ದೆ ಇದ್ದಾಗ್ಯೂ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನ ಪರಬಾರೆ ಮಾಡಲಾಗಿದೆ. ಒಂದು ಅಂದಾಜಿನಿನಂತೆ ಹತ್ತು ಸಾವಿರ ಎಕರೆ ಭೂಮಿ ಮಾರಾಟಗೊಂಡಿದೆ. ಇದುವರೆಗೂ ಸಂಬಂಧ ಸಲ್ಲಿಸಿದ್ದ 1150 ಪ್ರಕರಣಗಳು ಇತ್ಯರ್ಥಗೊಂಡು ಮಾರಿದ್ದ ಭೂಮಿ ವಾಪಸ್ ಪಡೆಯಲಾಗಿದೆ.

ನಗರಪ್ರದೇಶಗಳ ಅಂದರೆ ಬೆಂಗಳೂರು ಸುತ್ತಮುತ್ತ ಹಾಗೂ ಜಿಲ್ಲಾ ಕೇಂದ್ರಗಳ ಸುತ್ತ ಬೆಲೆ ಬಾಳುವ ದಲಿತರ ಜಮೀನು ಗಳನ್ನ ಪುಸಲಾಯಿಸಿ ಒಂದಷ್ಟು ಹೆಚ್ಚು ಹಣ ನೀಡಿ ಖರೀದಿಸಿರುವ ಭೂ ಮಾಫಿಯ ರಾಜಕಾರಣಿಗಳು, ಬಂಡವಾಳಿಗರು ಈ ಕಾಯ್ದೆ ಪ್ರಕಾರ ವಾಪಸ್ ಜಮೀನು ಪಡೆದುಕೊಳ್ಳುವ ಆಲೋಚನೆ ಮಾಡದಂತೆ ದಲಿತರಿಗೆ ಕೆಲವು ಪುಡಾರಿಗಳ ಬೆದರಿಕೆ ಮತ್ತು ಕೆಲವು ಸ್ವಯಂ ಘೋಷಿತವಾದ ದಲಿತ ಸಂಘಟನೆಗಳ ಮುಖಂಡರ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ತರಾತುರಿಯಲ್ಲಿ ಕಂದಾಯ ಇಲಾಖೆ ಎ ಸಿ, ಡಿ ಸಿ ಗಳ ಜೊತೆ ಶಾಮೀಲಾಗಿ ಈ PTCL ಕಾಯ್ದೆಯನ್ನ ಹಣದ ಹಗ್ಗದಿಂದ ಬಂಧಿಸಿದ್ದಾರೆ.

ಮಂಚೇಗೌಡ ಎಂಬುವವರು 1982/83ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಅವರು 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನ ತಿರಸ್ಕಾರ ಮಾಡಿ PTCL ಕಾಯ್ದೆ 1963 ಕಾಯ್ದೆಗೆ ಒಳಪಡುವುದಿಲ್ಲ ಎಂದಿದೆ.

ಈ ಕಾಯ್ದೆ ಮೊದಲು 1984 ನಂತರ 2ನೇ ಬಾರಿ 1992 ಮುಂದುವರೆದು 2012ರ ಸುತ್ತೋಲೆಗಳ ಮೂಲಕ ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಗಳು ಮೂಲ ಮಂಜೂರುದಾರರಿಗೆ ಭೂಮಿಯನ್ನ ಪುನರ್ ಸ್ಥಾಪಿಸಲು ನಿಯಮ ರೂಪಿಸಿದೆ. ಹೀಗಿರುವಾಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಅಧಿಕಾರಿಗಳು ಇದನ್ನ ಮನೆಗಾಣದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಹಟ್ಟಿ ಗ್ರಾಮದ ಸರ್ವೆ ನಂ 24ಮತ್ತು 24/ಎ ವಿಷಯ ಅಂದರೆ ಖರೀದಿದಾರ ನೆಕ್ಕುಂಟಿ ರಾಜಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 28/10/2017ರಂದು ಚೆಂದಿಲಾಲ್ ಕೇಸ್ ಬಿಹಾರದ ಜನರಲ್ ಕೇಸ್ ಅನ್ನು ಉದಾಹರಣೆ ನೀಡಿ ಇದು 25ವರ್ಷದ ಹಿಂದೆ ಪರೆಬಾರೆ ಆಗಿದೆ. ಹಾಗಾಗಿ 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿ ಮಾರಾಟ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಆದರೆ ಮಂಚೇಗೌಡರ ವಿಷಯದಲ್ಲಿ 1984ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಮತ್ತು ನೆಕ್ಕುಂಟಿ ಪ್ರಕರಣದ ಸರ್ವೆನಂಬರ್ ಬೇರೆ ಬೇರೆ ಇದೆ ಎಂದು ಎ ಸಿ, ಡಿ ಸಿ ಆದೇಶ ಹೊರಡಿಸಿದ ಬಗ್ಗೆ ಸುಪ್ರೀಂಕೋರ್ಟ್ಗೆ ಸರ್ಕಾರದ ಪರ ವಕೀಲರು ಸರಿಯಾಗಿ ದಾಖಲಿಸದೆ ಈ ತೀರ್ಪು ನೀಡಿದೆ. ಇದನ್ನ ಹಿಡಿದುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೈಸೂರು ಇನ್ನೂ ಬೇರೆ ಬೇರೆ ಕಡೆ PTCL ಕಾಯ್ದೆ ವಿರುದ್ಧ ಡಿ.ಸಿ ಕೋರ್ಟುಗಳು ತೀರ್ಪು ನೀಡಲಾಗುತ್ತಿದೆ.

ಇದು ಕಾಯ್ದೆ 1978ರ ಕಲಂ5(1)ಎ ರಂತೆ 1964ರ ಕಲಂ(39)ವಿವರಣೆಯನ್ನ ಎ ಸಿ, ಡಿ ಸಿ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ನೆಕ್ಕುಂಟಿ ಪ್ರಕರಣವನ್ನು ಮುಂದಿಡುವ ಎ ಸಿ ಮತ್ತು ಡಿ ಸಿ ಅಧಿಕಾರಿಗಳು 2019ರ ಸುಪ್ರೀಂಕೋರ್ಟ್ ದಲಿತ ರೈತರ ಪರವಾದ ತೀರ್ಪು ನೀಡಿದ್ದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಜಾರ್ಖಂಡ್ SC/ST ಜಮೀನು ಕಾಯ್ದೆ ಪ್ರಕಾರ 3/3/2020 ರ(SAR CIV 42644)ತೀರ್ಪು ನೀಡಿದೆ. ಇದನ್ನ ಯಾಕೆ ಅಧಿಕಾರಿಗಳು ಪರಿಗಣಿಸುತ್ತಿಲ್ಲ? ಇದು ಇಂಡಿಯನ್ ಲಿಮಿಟೇಷನ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಇದನ್ನ ತಿಳಿಯದ ಎ ಸಿ, ಡಿ ಸಿ ಅಧಿಕಾರಿಗಳು ಭೂ ಮಾಲೀಕರು, ಮಾಫಿಯ ರಾಜಕಾರಣಿಗಳ ಮತ್ತು ತಮ್ಮ ಹೊತ್ತಿನ ಕೂಳಿಗೆ ತಮ್ಮವರನ್ನೆ ಬಡಿದು ತಿನ್ನಲು ನಿಂತಿರುವ ಲೆಟರ್ ಪ್ಯಾಡ್ ಸ್ವಯಂ ಘೋಷಿತ ಏಜೆಂಟ್ ಗಳಿಂದ ಇಂದು ಈ PTCL ಕಾಯ್ದೆ ಜಾರಿಯಾಗದೆ ನಿಂತಿದೆ.

ನೆಕ್ಕಂಟಿ ಕೇಸ್ ನಿಂದ ಇಲ್ಲಿಯತನಕ ಸುಮಾರು 25 ಸಾವಿರ ಕೇಸ್‌ಗಳನ್ನು ಡಿಸಿಗಳು ವಜಾಗೊಳಿಸಿದ್ದಾರೆ. ಇನ್ನೂ ಬಾಕಿ 20 ಸಾವಿರ ಕೇಸ್‌ಗಳು ವಿಚಾರಣೆಯಲ್ಲಿವೆ. ಹಾಗಾಗಿ ದಲಿತರು 2 ಲಕ್ಷ ಎಕರೆಗಿಂತ ಹೆಚ್ಚಿನ ಭೂಮಿ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಜೀವನ ನಾಶವಾಗಿದೆ.  ವಿಶೇಷ ಕಾಯ್ದೆಯಾಗಿರುವುದರಿಂದ ಕಾಲಮಿತಿ ಅನ್ವಯಿಸುವುದಿಲ್ಲ. ಆದರೂ ಬಲಾಢ್ಯರ ಕುತಂತ್ರದಿಂದ ಇದಕ್ಕೆಲ್ಲ ನೇರ ಕಾರಣ ಕಂದಾಯ ಇಲಾಖೆಯ ನೋಂದಣಿಧಿಕಾರಿಗಳು, VA, RI, ತಹಸೀಲ್ದಾರ್ ಸೇರಿಕೊಂಡು ದಲಿತರಿಗೆ ಕೊಳ್ಳಿ ಇಡುತ್ತಿದ್ದಾರೆ.

PTCL ಕಾಯ್ದೆಗೆ 10.12.11ಕಾಲಂ ರಂತೆ ಯಾವ ಕಾಲ ಮಿತಿ ಇದಕ್ಕೆ ಅನ್ವಯವಾಗುವುದಿಲ್ಲ.
ಎ ಸಿ ಗೆ ಅರ್ಜಿ ಹಾಕಿ ನಂತರ ಮೇಲ್ಮನವಿಗೆ 90 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಮಿತಿ ಇದೆ. ಹಾಗೆ ಕಾಲ ಮಿತಿಗೆ ಕಾರಣ ತಿಳಿಸಿ ಮುಂದುವರೆಯಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಶೋಷಿತರ ದಲಿತರ ಪರ ಕಾಳಜಿಯುಳ್ಳ ಸಂಘಟಕರು ಈ ಹೋರಾಟದ ಪರ ನಿಲ್ಲಬೇಕು. ಒಂದಷ್ಟು ಈ ವಿಷಯ ಕುರಿತು ಅಧ್ಯಯನ ಮಾಡಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರಕ್ಕೆ ಈ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಒತ್ತಡ ತಂದು ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ಭೂಮಿ ವಾಪಸ್ ಕೊಡಿಸಲು ಎಲ್ಲಾ ಹೋರಾಟಗಾರರು ಮುಂದಾಗಬೇಕು. ಚುನಾವಣೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದಂತೆ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 183 ದಿನಗಳಿಂದ ನಡೆಯುತ್ತಿರುವ ಭೂ ಹೀನ ಬಡವರ ಹೆಗಲಿಗೆ ಹೆಗಲೊಡ್ಡೋಣ.

ಕಂದೇಗಾಲ ಶ್ರೀನಿವಾಸ
ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಬೆಂಗಳೂರು

ಇದನ್ನೂ ಓದಿ; ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...