Homeಕರ್ನಾಟಕಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಂಚೇಗೌಡ ಎಂಬುವವರು 1982/83ರಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.

- Advertisement -
- Advertisement -

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ನೆಲದ ಹಕ್ಕಿಗಾಗಿ 183ದಿನಗಳಿಂದ PTCL ಕಾಯ್ದೆ ಸಮರ್ಪಕವಾಗಿ ಜಾರಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಇದುವರೆಗೂ ಈ ವಿಷಯ ಕುರಿತು ಸರ್ಕಾರ ದ ಜೊತೆ ಅಂದಿನಿಂದ ಇಂದಿನ ವರೆಗೂ ಯಾವ ಮಂತ್ರಿ ಶಾಸಕರು ಭೇಟಿ ನೀಡಿಲ್ಲ ಎಂಬುದು ದುರಂತ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೋಷಿತ ಜನರ ಜೀವನ ನಿರ್ವಹಣೆಗೆ ಇದ್ದ ಜಮೀನುಗಳನ್ನ ಕೆಲವು ಮುಂದುವರೆದ ಜಾತಿ ಜನ ಆಸೆ ಆಮಿಷಗಳನ್ನು ತೋರಿಸಿ, ಬಗ್ಗದಿದ್ದರೆ ದೌರ್ಜನ್ಯವೆಸಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಶೋಷಿತರು ಇದ್ದ ಭೂಮಿ ಕಳೆದುಕೊಂಡು ಭೂ ಹೀನರಾಗಿದ್ದಾರೆ. ಇದನ್ನು ಮನಗಂಡ ಅಂದಿನ ಮಂತ್ರಿ ಶ್ರೀ ಬಸವಲಿಂಗಪ್ಪ ಮತ್ತು ರಾಜ್ಯ ಸರ್ಕಾರ 1978 ತಾ 18/12/1978ರಲ್ಲಿ ಸಂವಿಧಾನ ದ ಆರ್ಟಿಕಲ್ 31ಸಿ ಮತ್ತು 46ರ ರೀತ್ಯ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಭೂ ಪರೆಬಾರೆ) ಕಾಯ್ದೆ ಜಾರಿಗೆ ತಂತು. ಈ ಕಾಯ್ದೆಯು 1979ರ ಜನವರಿಯಿಂದ ಜಾರಿಗೆ ತಯಾರಾಗಿದೆ.

ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರು ಸರ್ಕಾರಿ ಸಾಗುವಳಿದಾರರ ಭೂಮಿ ಹಾಗೂ ಇನಾಂ ಮಂಜೂರು ಭೂಮಿಗಳನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದ್ದರೂ ಅಂತಹ ಭೂಮಿ ಮಂಜೂರುದಾರರು ಅಥವ ಅವರ ವಾರಸುದಾರರು ಸಂಬಂಧಿಸಿದ ಎ ಸಿ (ಉಪ ವಿಭಾಗ ಅಧಿಕಾರಿಗಳಿಗೆ) ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಈ ಕಾಯ್ದೆ ಪ್ರಕಾರ ತಮ್ಮ ಭೂಮಿಯನ್ನು ವಾಪಸ್ ಪಡೆದು ಕೊಳ್ಳುವ ಹಕ್ಕು ಕೊಡಲಾಗಿದೆ.

ಈ ಕಾಯ್ದೆ ಇದ್ದಾಗ್ಯೂ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನ ಪರಬಾರೆ ಮಾಡಲಾಗಿದೆ. ಒಂದು ಅಂದಾಜಿನಿನಂತೆ ಹತ್ತು ಸಾವಿರ ಎಕರೆ ಭೂಮಿ ಮಾರಾಟಗೊಂಡಿದೆ. ಇದುವರೆಗೂ ಸಂಬಂಧ ಸಲ್ಲಿಸಿದ್ದ 1150 ಪ್ರಕರಣಗಳು ಇತ್ಯರ್ಥಗೊಂಡು ಮಾರಿದ್ದ ಭೂಮಿ ವಾಪಸ್ ಪಡೆಯಲಾಗಿದೆ.

ನಗರಪ್ರದೇಶಗಳ ಅಂದರೆ ಬೆಂಗಳೂರು ಸುತ್ತಮುತ್ತ ಹಾಗೂ ಜಿಲ್ಲಾ ಕೇಂದ್ರಗಳ ಸುತ್ತ ಬೆಲೆ ಬಾಳುವ ದಲಿತರ ಜಮೀನು ಗಳನ್ನ ಪುಸಲಾಯಿಸಿ ಒಂದಷ್ಟು ಹೆಚ್ಚು ಹಣ ನೀಡಿ ಖರೀದಿಸಿರುವ ಭೂ ಮಾಫಿಯ ರಾಜಕಾರಣಿಗಳು, ಬಂಡವಾಳಿಗರು ಈ ಕಾಯ್ದೆ ಪ್ರಕಾರ ವಾಪಸ್ ಜಮೀನು ಪಡೆದುಕೊಳ್ಳುವ ಆಲೋಚನೆ ಮಾಡದಂತೆ ದಲಿತರಿಗೆ ಕೆಲವು ಪುಡಾರಿಗಳ ಬೆದರಿಕೆ ಮತ್ತು ಕೆಲವು ಸ್ವಯಂ ಘೋಷಿತವಾದ ದಲಿತ ಸಂಘಟನೆಗಳ ಮುಖಂಡರ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ತರಾತುರಿಯಲ್ಲಿ ಕಂದಾಯ ಇಲಾಖೆ ಎ ಸಿ, ಡಿ ಸಿ ಗಳ ಜೊತೆ ಶಾಮೀಲಾಗಿ ಈ PTCL ಕಾಯ್ದೆಯನ್ನ ಹಣದ ಹಗ್ಗದಿಂದ ಬಂಧಿಸಿದ್ದಾರೆ.

ಮಂಚೇಗೌಡ ಎಂಬುವವರು 1982/83ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಅವರು 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನ ತಿರಸ್ಕಾರ ಮಾಡಿ PTCL ಕಾಯ್ದೆ 1963 ಕಾಯ್ದೆಗೆ ಒಳಪಡುವುದಿಲ್ಲ ಎಂದಿದೆ.

ಈ ಕಾಯ್ದೆ ಮೊದಲು 1984 ನಂತರ 2ನೇ ಬಾರಿ 1992 ಮುಂದುವರೆದು 2012ರ ಸುತ್ತೋಲೆಗಳ ಮೂಲಕ ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಗಳು ಮೂಲ ಮಂಜೂರುದಾರರಿಗೆ ಭೂಮಿಯನ್ನ ಪುನರ್ ಸ್ಥಾಪಿಸಲು ನಿಯಮ ರೂಪಿಸಿದೆ. ಹೀಗಿರುವಾಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಅಧಿಕಾರಿಗಳು ಇದನ್ನ ಮನೆಗಾಣದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಹಟ್ಟಿ ಗ್ರಾಮದ ಸರ್ವೆ ನಂ 24ಮತ್ತು 24/ಎ ವಿಷಯ ಅಂದರೆ ಖರೀದಿದಾರ ನೆಕ್ಕುಂಟಿ ರಾಜಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 28/10/2017ರಂದು ಚೆಂದಿಲಾಲ್ ಕೇಸ್ ಬಿಹಾರದ ಜನರಲ್ ಕೇಸ್ ಅನ್ನು ಉದಾಹರಣೆ ನೀಡಿ ಇದು 25ವರ್ಷದ ಹಿಂದೆ ಪರೆಬಾರೆ ಆಗಿದೆ. ಹಾಗಾಗಿ 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿ ಮಾರಾಟ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಆದರೆ ಮಂಚೇಗೌಡರ ವಿಷಯದಲ್ಲಿ 1984ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಮತ್ತು ನೆಕ್ಕುಂಟಿ ಪ್ರಕರಣದ ಸರ್ವೆನಂಬರ್ ಬೇರೆ ಬೇರೆ ಇದೆ ಎಂದು ಎ ಸಿ, ಡಿ ಸಿ ಆದೇಶ ಹೊರಡಿಸಿದ ಬಗ್ಗೆ ಸುಪ್ರೀಂಕೋರ್ಟ್ಗೆ ಸರ್ಕಾರದ ಪರ ವಕೀಲರು ಸರಿಯಾಗಿ ದಾಖಲಿಸದೆ ಈ ತೀರ್ಪು ನೀಡಿದೆ. ಇದನ್ನ ಹಿಡಿದುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೈಸೂರು ಇನ್ನೂ ಬೇರೆ ಬೇರೆ ಕಡೆ PTCL ಕಾಯ್ದೆ ವಿರುದ್ಧ ಡಿ.ಸಿ ಕೋರ್ಟುಗಳು ತೀರ್ಪು ನೀಡಲಾಗುತ್ತಿದೆ.

ಇದು ಕಾಯ್ದೆ 1978ರ ಕಲಂ5(1)ಎ ರಂತೆ 1964ರ ಕಲಂ(39)ವಿವರಣೆಯನ್ನ ಎ ಸಿ, ಡಿ ಸಿ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ನೆಕ್ಕುಂಟಿ ಪ್ರಕರಣವನ್ನು ಮುಂದಿಡುವ ಎ ಸಿ ಮತ್ತು ಡಿ ಸಿ ಅಧಿಕಾರಿಗಳು 2019ರ ಸುಪ್ರೀಂಕೋರ್ಟ್ ದಲಿತ ರೈತರ ಪರವಾದ ತೀರ್ಪು ನೀಡಿದ್ದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಜಾರ್ಖಂಡ್ SC/ST ಜಮೀನು ಕಾಯ್ದೆ ಪ್ರಕಾರ 3/3/2020 ರ(SAR CIV 42644)ತೀರ್ಪು ನೀಡಿದೆ. ಇದನ್ನ ಯಾಕೆ ಅಧಿಕಾರಿಗಳು ಪರಿಗಣಿಸುತ್ತಿಲ್ಲ? ಇದು ಇಂಡಿಯನ್ ಲಿಮಿಟೇಷನ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಇದನ್ನ ತಿಳಿಯದ ಎ ಸಿ, ಡಿ ಸಿ ಅಧಿಕಾರಿಗಳು ಭೂ ಮಾಲೀಕರು, ಮಾಫಿಯ ರಾಜಕಾರಣಿಗಳ ಮತ್ತು ತಮ್ಮ ಹೊತ್ತಿನ ಕೂಳಿಗೆ ತಮ್ಮವರನ್ನೆ ಬಡಿದು ತಿನ್ನಲು ನಿಂತಿರುವ ಲೆಟರ್ ಪ್ಯಾಡ್ ಸ್ವಯಂ ಘೋಷಿತ ಏಜೆಂಟ್ ಗಳಿಂದ ಇಂದು ಈ PTCL ಕಾಯ್ದೆ ಜಾರಿಯಾಗದೆ ನಿಂತಿದೆ.

ನೆಕ್ಕಂಟಿ ಕೇಸ್ ನಿಂದ ಇಲ್ಲಿಯತನಕ ಸುಮಾರು 25 ಸಾವಿರ ಕೇಸ್‌ಗಳನ್ನು ಡಿಸಿಗಳು ವಜಾಗೊಳಿಸಿದ್ದಾರೆ. ಇನ್ನೂ ಬಾಕಿ 20 ಸಾವಿರ ಕೇಸ್‌ಗಳು ವಿಚಾರಣೆಯಲ್ಲಿವೆ. ಹಾಗಾಗಿ ದಲಿತರು 2 ಲಕ್ಷ ಎಕರೆಗಿಂತ ಹೆಚ್ಚಿನ ಭೂಮಿ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಜೀವನ ನಾಶವಾಗಿದೆ.  ವಿಶೇಷ ಕಾಯ್ದೆಯಾಗಿರುವುದರಿಂದ ಕಾಲಮಿತಿ ಅನ್ವಯಿಸುವುದಿಲ್ಲ. ಆದರೂ ಬಲಾಢ್ಯರ ಕುತಂತ್ರದಿಂದ ಇದಕ್ಕೆಲ್ಲ ನೇರ ಕಾರಣ ಕಂದಾಯ ಇಲಾಖೆಯ ನೋಂದಣಿಧಿಕಾರಿಗಳು, VA, RI, ತಹಸೀಲ್ದಾರ್ ಸೇರಿಕೊಂಡು ದಲಿತರಿಗೆ ಕೊಳ್ಳಿ ಇಡುತ್ತಿದ್ದಾರೆ.

PTCL ಕಾಯ್ದೆಗೆ 10.12.11ಕಾಲಂ ರಂತೆ ಯಾವ ಕಾಲ ಮಿತಿ ಇದಕ್ಕೆ ಅನ್ವಯವಾಗುವುದಿಲ್ಲ.
ಎ ಸಿ ಗೆ ಅರ್ಜಿ ಹಾಕಿ ನಂತರ ಮೇಲ್ಮನವಿಗೆ 90 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಮಿತಿ ಇದೆ. ಹಾಗೆ ಕಾಲ ಮಿತಿಗೆ ಕಾರಣ ತಿಳಿಸಿ ಮುಂದುವರೆಯಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಶೋಷಿತರ ದಲಿತರ ಪರ ಕಾಳಜಿಯುಳ್ಳ ಸಂಘಟಕರು ಈ ಹೋರಾಟದ ಪರ ನಿಲ್ಲಬೇಕು. ಒಂದಷ್ಟು ಈ ವಿಷಯ ಕುರಿತು ಅಧ್ಯಯನ ಮಾಡಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರಕ್ಕೆ ಈ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಒತ್ತಡ ತಂದು ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ಭೂಮಿ ವಾಪಸ್ ಕೊಡಿಸಲು ಎಲ್ಲಾ ಹೋರಾಟಗಾರರು ಮುಂದಾಗಬೇಕು. ಚುನಾವಣೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದಂತೆ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 183 ದಿನಗಳಿಂದ ನಡೆಯುತ್ತಿರುವ ಭೂ ಹೀನ ಬಡವರ ಹೆಗಲಿಗೆ ಹೆಗಲೊಡ್ಡೋಣ.

ಕಂದೇಗಾಲ ಶ್ರೀನಿವಾಸ
ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಬೆಂಗಳೂರು

ಇದನ್ನೂ ಓದಿ; ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...