“ಮಾಧ್ಯಮಗಳು ಬಿತ್ತರಿಸುತ್ತಿರುವುದನ್ನು ನೋಡಿದರೆ, ಅಲ್ಲಿ ಹೋರಾಟ ಮಾಡುತ್ತಿರುವವರು ರೈತರೇ ಅಲ್ಲ ಎನಿಸುತ್ತದೆ” ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ರೈತರ ಚಳವಳಿ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, “ನಮಗೆ ತಿಳಿದಂತೆ ಇಂದು ದೇಶದಲ್ಲಿ ನಡೆಯುತ್ತಿರುವುದು ರೈತರ ಚಳವಳಿ ಅಲ್ಲ. ಅದರ ಮುಖವಾಡದಲ್ಲಿ ಇನ್ನೇನೋ ನಡೆಯುತ್ತಿದೆ. ಇದು ಸರಿಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಅಬ್ಬರಿಸಲಿರುವ ‘ಅಸುರನ್’ – 72ನೇ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಪ್ರದರ್ಶನ
“ಪ್ರಧಾನಿಯವರು ಚಳುವಳಿ ನಿರತರನ್ನು ಮಾತುಕತೆಗೆ ಬರುವಂತೆ ಕರೆಯುತ್ತಲೇ ಇದ್ದಾರೆ. ಆದರೆ ಇದಕ್ಕೆ ಒಪ್ಪದೆ ಇನ್ನೇನೋ ಮಾಡಬೇಕು ಎಂದು ಅವರು ಹೇಳುತ್ತಿರುವುದರಿಂದ ಚಳುವಳಿ ದಿಕ್ಕು ತಪ್ಪಿದೆ. ಹೀಗಾಗಿ ಈ ಚಳುವಳಿಗೆ ನಮ್ಮ ಸಂಪೂರ್ಣ ಸಹಮತ ಇಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
“ಮಾಧ್ಯಮಗಳಲ್ಲಿ ಬಿತ್ತರವಾಗುವ ದೈನಂದಿನ ಸುದ್ಧಿ ನೋಡಿದರೆ ರೈತರೇ ಚಳವಳಿ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ನಮಗೆ ಸಂಶಯ ಇದೆ. ಮಾಧ್ಯಮಗಳನ್ನು ನೋಡಿ ಹೇಳುವುದಾದರೆ ಅಲ್ಲಿ ಹೋರಾಡುತ್ತಿರುವವರು ರೈತರೇ ಅಲ್ಲ ಎಂದೆನಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ‘7–8 ಲಕ್ಷ ರೈತರನ್ನು’ ಸೇರಿಸಲಾಗಿದೆ – ಅಣ್ಣಾಮಲೈ
ಹೋರಾಟಗಾರರು ಹೇಳುವ ಪ್ರಕಾರ,ಸುದ್ದಿ ಮಾಡುತ್ತಿರುವವರು ಮಾಧ್ಯಮದವರಲ್ಲ ಅವರು ಬಿಜೆಪಿಯವರು..
ರೈತರ ಚಳುವಳಿಗೆ ನಿಮ್ಮಂಥ ಮೂರ್ಖರ ಅವಶ್ಯಕತೆ ಇಲ್ಲ, ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿ ಹಾಗೂ ನಿಮ್ಮ ಇತಿ ಮಿತಿಗಳನ್ನು ಅರಿತು ಮಾತನಾಡಿದರೆ ಸರ್ವರಿಗೂ ಒಳಿತು….
ಇವ ಯಾವ ಸೀಮೆಯ ಸ್ವಾಮಿ?
ತನ್ನ ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಟಿವಿಯಲ್ಲಿ ನೋಡಿ ಉತ್ತರಿಸುವವ.
ಅಷ್ಟೊಂದು ಜವಾಬ್ದಾರಿ ಇದ್ದರೆ ಸ್ವತಃ ದೆಹಲಿಗೆ ಹೋಗಿ ಬರಬೇಕಿತ್ತು.
ಇವರು ಹೇಳುವ ಮಾಧ್ಯಮಗಳ ಕಾರ್ಯವೈಖರಿ ನೋಡಿದ್ರೆ ಅವು ಮಾಧ್ಯಮಗಳಾ ಅಥವಾ ಭಯೋದ್ಪಕರಾ ಅಂತ ಸಂಶಯ ಬರುತ್ದೆ. ಇವರಿಗೇನು ಸ್ವಂತ ಆಲೋಚನಾ ಶಕ್ತಿಯಿಲ್ಲವಾ ?
ಸ್ವಾಮಿಜಿ, ನೀವೂ ನಿಮ್ಮ ದಿವಂಗತ ಪೇಜಾವರ ಸ್ವಾಮಿಗಿಂತಾ ಭಿನ್ನರೇನಲ್ಲ . ನೀವೂ ಅರೆಸ್ಸೆಸ್ ಏಜಂಟ್ ಅಷ್ಟೇ. ದಿಲ್ಲಿಯ ಕೊರೆಯುವ ಚಳಿಯಲ್ಲಿ ನೀವು ಕೇವಲ ಒಂದೇ ಒಂದು ರಾತ್ರಿ ಇರಿ, ಅಷ್ಟೇ ಸಾಕು. ಯಾರು ರೈತರು ಎಂದು ನಿಮ್ಮ ಪೂರ್ವಗ್ರಹ ಪೀಡಿತ ಬುದ್ದಿಗೆ ಗೊತ್ತಾಗುತ್ತದೆ.
Ello doongi swamy erabeku e aasami.
ತಾವು ಉಣ್ಣುವ ಅನ್ನ ರೈತರಿಂದಲೇ ಬೆಳೆದದ್ದು ಅನ್ನುವುದನ್ನು ಸ್ವಾಮಿಗಳು ಮರೆತಂತೆ ಕಾಣುತ್ತದೆ. ಸ್ವಾಮಿಗಳು ಕೆಲಸ ನೋಡಿಕೊಳ್ಳುವುದು ಒಳಿತು. ರೈತರ ಕಷ್ಟ ರೈತರಿಗೇ ಗೊತ್ತು. ಅನಗತ್ಯವಾಗಿ ಎಲ್ಲದರಲ್ಲೂ ಮೂಗು ತೂರಿಸಬಾರಸದು
ಅದೇ ಮತ್ತೆ ಇವರು ಹೇಳಿಕೆಯನ್ನು ನೋಡಿದರೆ ಯಾವುದೋ ರಾಜಕೀಯ ಪಕ್ಷದ ಕುಮ್ಮಕ್ಕಿನಿಂದಲೋ ಅಥವಾ ಪರವಾಗಿಯೋ ಮಾತನಾಡುತ್ತಿದ್ದಾರೆ ಅನಿಸುತ್ತೆ. ಈ ರೀತಿಯ ರಾಜಕೀಯ ಪ್ರೇರಿತ ಸ್ವಾಮೀಜಿಗಳು ದೇಶಕ್ಕೆ ಅಲ್ಲ ನಮ್ಮ ಸಮಾಜಕ್ಕೂ ಹಾನಿಕರ.
ಮಾಧ್ಯಮಗಳು ನಿಮ್ಮನ್ನು ನಿಮ್ಮ ಮಠವನ್ನು ಕಳ್ಳರಂತೆ ತೋರಿಸಿದ್ದುದ್ದನ್ನು ನೆನಪಿಸಿಕೊಂಡರೆ, ನೀವೆಲ್ಲರೂ ಕಳ್ಳರೆ ಇರಬೇಕೆನಿಸುತಿದೆ.
Pakisthani ?
Who require your support ? Your sangaparivar slave !!
ಇವತ್ತಿನ ಮಾಧ್ಯಮಗಳು ಹೇಳುವ ಬೊಗಳೆಯನ್ನು ಕೇಳುವಷ್ಟು ದಡ್ಡರೆ ಪೇಜಾವರ ಶ್ರೀಗಳು..?