Homeಕರ್ನಾಟಕಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

ಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

- Advertisement -
- Advertisement -

(ಮಂಡ್ಯದ ಗಾಂಧಿಭವನದಲ್ಲಿ ನಡೆದ ‘ಗಾಂಧಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ “ಇಂದಿಗೆ ಅನಿವಾರ್ಯವಾಗಿರುವ ಗಾಂಧಿ ಮತ್ತು ಅವರ ಆರ್ಥಿಕ ಚಿಂತನೆ’ ವಿಷಯದ ಕುರಿತು ಹೆಗ್ಗೋಡು ಪ್ರಸನ್ನರವರು ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.)

ಮಹಾತ್ಮ ಗಾಂಧಿಯವರನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಈ ಪಾದಯಾತ್ರೆಯ ಉದ್ದೇಶ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಕೆಲವರು ಪುಸ್ತಕ ಓದುವುದರ ಮತ್ತು ಬೌದ್ಧಿಕ ಚರ್ಚೆಯ ಮೂಲಕ ಗಾಂಧಿಯವರನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ.

ಜನರ ಬಳಿಗೆ ಹೋಗುವ ಪಾದಯಾತ್ರೆಯೇ ಉತ್ತಮ ಮಾರ್ಗ. ಅದೇ ಅರಿವು. ಅಲ್ಲಿ ನಿಧಾನವಾಗಿ ನಡೆಯುತ್ತೇವೆ. ಅಲ್ಲಿನ ಗ್ರಾಮ, ಮನುಷ್ಯರು, ಇಡೀ ಹಳ್ಳಿಯ ಪರಿಸರ ಅನುಭವಕ್ಕೆ ಬರುತ್ತದೆ‌. ಆದರೆ ಇಂದು ಅನುಭವವೇ ಕಾಣೆಯಾಗಿದೆ. ಎಲ್ಲವೂ ನಮಗೆ ಕೇವಲ ಮಾಹಿತಿಯಾಗಿ ದೊರೆಯುತ್ತದೆ. ಕೇವಲ ಮಾಹಿತಿ ಅಥವಾ ಜ್ಞಾನದಿಂದ ಚಳವಳಿ, ಸಮಾಜ ಕಟ್ಟಲು ಆಗುವುದಿಲ್ಲ ಎಂದು ಗಾಂಧಿಜಿಯವರು ಹೇಳಿದ್ದರು..

ಬಸವಣ್ಣ, ಕಬೀರ, ಅಲ್ಲಮನ ರೀತಿಯಲ್ಲಿಯೇ ಗಾಂಧಿಯನ್ನು ಸಹ ಒಬ್ಬ ಸಂತನಾಗಿ ಇಲ್ಲವೇ ರಾಜಕಾರಣಿಯಾಗಿ ನೋಡುವ ಪ್ರವೃತ್ತಿ ನಮ್ಮಲ್ಲಿ ಬೆಳೆದುಬಂದಿದೆ. ಅದರೆ ಅವರ ಕೆಲಸದ ಬುನಾದಿ ಅವರ ಆರ್ಥಿಕ ಕಾರ್ಯಕ್ರಮವಾಗಿದೆ. ಅದನ್ನು ಗ್ರಾಮ ಸ್ವರಾಜ್ಯ ಎಂದು ಕರದಿದ್ದರು. ಆದರೆ ಅದನ್ನು ಸಮಗ್ರವಾಗಿ ಮಾಡಲು ರಾಜಕೀಯ ಚಳವಳಿಯ ಕಾರಣಗಳಿಗಾಗಿ ಗಾಂಧಿಯವರಿಗೆ ಸಮಯ ಸಿಗಲಿಲ್ಲ.

ನಾಳೆ ಯಾರಿಗೆ ಬರಬೇಕು ಸ್ವತಂತ್ರ? ಎಂದು ಗಾಂಧಿ ಕೇಳಿದ್ದರು‌. ಸಾಮಾನ್ಯ ಜನರಿಗೆ, ಬಡಜನರಿಗೆ ಸ್ವಾತಂತ್ರ್ಯ ಸಿಗಬೇಕು. ಆದರೆ ಅವರಿಗೆ ಅದರ ಕಲ್ಪನೆ ಸಹ ಇಲ್ಲ. ಅವರ ಹಕ್ಕುಗಳ ಪರಿಚಯವಿಲ್ಲ. ಅವರಿಗೆ ಜಾತಿವಿನಾಶದ, ಲಿಂಗತಾರತಮ್ಯ, ಆರೋಗ್ಯ ಶಿಕ್ಷಣದ ಅರಿವಿಲ್ಲ‌. ನಾವು ಇದರ ಪರಿಚಯ ಮಾಡಿಕೊಡಬೇಕು..

ಎಲ್ಲಾ ರಚನಾತ್ಮಕ ಕೆಲಸಗಳನ್ನು ಬದಿಗೊತ್ತಿ ನಾವು ಕೇವಲ ಕಾನೂನಾತ್ಮಕ ಕೆಲಸಗಳನ್ನು ಮಾತ್ರ ಮಾಡಿದ್ದೇವೆ. ನಾವು ಮಾಡಿರುವ ಕಾನೂನುಗಳಲ್ಲಿ ಕಾಲುಭಾಗ ಜಾರಿಗ ಬಂದಿದ್ದರೂ ಸಹ ಭಾರತ ಸಮಾಜವಾದಿ ರಾಷ್ಟ್ರವಾಗುತ್ತಿತ್ತು. ಆದರೆ ಇಂದು ಭ್ರಷ್ಟಾಚಾರದ ದೇಶವಾಗುತ್ತಿದೆ.

ಇಂತಹ ಸಂಕಟದ ಸಮಯದಲ್ಲಿ ರಚನಾತ್ಮಕ ಚಳವಳಿ ಕಡೆಗೆ ಹೋಗಬೇಕಿದೆ. ನಮ್ಮ ಹಳ್ಳಿ ಜನರಿಗೆ ಮಳೆ ಬೆಳೆ ಸರಿಯಾಗಿ ಆಗುತ್ತಿಲ್ಲ, ಶೆಕೆಯಾಗುತ್ತಿದೆ, ಉದ್ಯೋಗವಿಲ್ಲ.. ಎನ್ನುವುದು ಮಾತ್ರ ಗೊತ್ತಿದೆ. ಆದರೆ ಕರಾಳ ದಿನಗಳ ಕಲ್ಪನೆ ಅವರಿಗಿಲ್ಲ.

ಒಬ್ಬ ವಿಜ್ಞಾನಿಗಳು ಹೇಳುತ್ತಾರೆ ಇನ್ನ 14 ವರ್ಷದಲ್ಲಿ ನಮ್ಮ ಈ ಅಭಿವೃದ್ಧಿಯ ಮಾದರಿಯನ್ನು ಬದಲಾಯಿಸಬೇಕು. ಅದಕ್ಕಾಗಿ ಹೋರಾಟ ನಡೆಯುತ್ತಿದೆ. ಅದರ ನಾಯಕತ್ವ ವಹಿಸುತ್ತಿರುವುದು ಯುವಜನತೆ.. ಅದರ ನಾಯಕಿ 16 ವರ್ಷದ ಗ್ರೇಟಾ ಥನ್ಬೆರ್ಗ್ ಕರೆಗೆ ಇಡೀ ವಿಶ್ವದ ಯುವಜನತೆ ಸಕರಾತ್ಮಕವಾಗಿ ಸ್ಪಂದಿಸಿದೆ. ಅಹಿಂಸಾತ್ಮಕವಾಗಿ ಗಾಂಧಿ ಮಾದರಿಯಲ್ಲಿ ನಡೆಯುತ್ತಿದ್ದು ನನ್ನ ಭವಿಷ್ಯವನ್ನು ನೀವೇಕೆ ಹಾಳು ಮಡುತ್ತಿದ್ದೀರಿ ಎಂದು ಆ ಹುಡುಗಿ ಪ್ರಶ್ನಿಸುತ್ತಿದ್ದಾಳೆ. ನಮ್ಮ ಮೂರು ಪ್ರಶ್ನೆಗಳಿವೆ.

ಮೊದಲ ಪ್ರಶ್ನೆ: 

ಮೊದಲ ಪ್ರಶ್ನೆ ಉದ್ಯೋಗದ್ದಾಗಿದೆ. ಕಳೆದ ನಾಲ್ಕು ತಿಂಗಳಿಂದ ನಮ್ಮ ದೇಶದಲ್ಲಿ ದಿನಕ್ಕೆ ಮೂರು ಲಕ್ಷ ಉದ್ಯೋಗಗಳು ನಷ್ಟವಾಗುತ್ತಿವೆ. ಹಾಗಾದರೆ ಕಷ್ಟಪಟ್ಟು ಓದುತ್ತಿರುವವರು ಮಣ್ಣು ತಿನ್ನಬೇಕೆ?

ಎರಡನೇ ಪ್ರಶ್ನೆ: 

ಎರಡನೇ ಪ್ರಶ್ನೆ ಪರಿಸರ ನಾಶವಾಗಿದೆ. ತಕ್ಷಣದಲ್ಲಿ ವಿಪರೀತ ಬೆಂಕಿ ಉಳಿಸುವ ಕೆಲಸ ಮಾಡದಿದ್ದರೆ ನಮ್ಮ ಪ್ರಪಂಚ ಖಂಡಿತ ವಾಸಯೋಗ್ಯವಾಗಿ ಉಳಿಯುವುದಿಲ್ಲ. ಇಂದು ಬೆಂಕಿ ಹಚ್ಚುವುದರ ಮೂಲಕ ಮಾತ್ರವೇ ಪ್ರಗತಿಯಾಗುತ್ತಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋದರೆ ಪ್ರತಿಯೊಬ್ಬ 29 ಕೆಜಿ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಸರಕ್ಕೆ ಬಿಡುತ್ತಿದ್ದೇವೆ ಎಂಬುದನ್ನು ಮರೆಯಬರದು.

ಮೂರನೇಯದು ಧರ್ಮದ ಪ್ರಶ್ನೆ:

ಇಂದು ರಾಜಕೀಯ ಕಾರಣಗಳಿಗಾಗಿ ಧರ್ಮ ಎನ್ನುವುದೇ ಜನರನ್ನು ಒಡೆಯುವ ಅಸ್ತ್ರ ಆಗಿದೆ. ಮೇಲ್ಜಾತಿಯವರನ್ನು ಮತ್ತಷ್ಟು ಕೊಬ್ಬಿಸಲು ಧರ್ಮ ಕಾರಣವಗುತ್ತಿದೆ. ಧರ್ಮ ಇಂದು ಒಳ್ಳೆಯ ಅಲೋಚನಗಳನ್ನು ಹಿಮ್ಮೆಟ್ಟುಸುವ ಅಸ್ತ್ರವಾಗಿದೆ. ನಿರುದ್ಯೋಗ, ಪರಿಸರ ನಾಶ, ಧರ್ಮದ ದುರ್ಬಳಕೆ ಈ ಮೂರು ವಿಷಯಗಳು ಇಂದು ನಮ್ಮನ್ನು ಬಾಧಿಸುತ್ತಿವೆ.

ಈ ದೇಶದ 60% ಕೃಷಿಭೂಮಿಯಲ್ಲಿ ಈಗಲೂ ಮಳೆಯಾಧಾರಿತ ಬೇಸಾಯ ನಡೆಯುತ್ತಿದೆ. ಮೀನುಗಾರಿಗೆ, ಹೈನೋದ್ಯಮ ಇತ್ಯಾದಿಗಳು ಇಂದಿಗೂ ಕೈ ಉತ್ಪಾದನೆಗಳಾಗಿವೆ. ಇದನ್ನು ನಡೆಸುವ ಜನ ಮತ್ತು ಕೌಶಲ್ಯ ನಮಗಿದೆ‌. ಇದನ್ನೆ ಗಾಂಧಿಯವರು ಗ್ರಾಮ ಸ್ವರಾಜ್ಯ ಎಂದಿದ್ದರು. ಅವರು ಸಮಾಜವಾದ, ಪರಿಸರ ರಕ್ಷಣೆ ಮತ್ತು ದುಡಿಯುವುದೇ ಧರ್ಮ ಎಂದು ಮಾತನಾಡಿದ್ದರು. ಈ ಮೂರನ್ನು ಒಟ್ಟಾಗಿ ಸೇರಿಸಿದರೆ ನಮಗೆ ಗಾಂಧಿ ಅರ್ಥವಾಗುತ್ತಾರೆ.

ಎಲ್ಲಾ ಧಾರೆಗಳ ಜನರು ಇಲ್ಲಿ ನೆರದಿದ್ದೀರಿ.. ಪ್ರತ್ಯೇಕತೆ ಕಳಚಿ ಹೋರಾಟ ಮಡಬೇಕಾದ ಪರಿಸ್ಥಿತಿ ಇಂದು ಬಂದಿದೆ. ಅದಕ್ಕೆ ಗಾಂಧಿಜಿಯವರ ವಿಚಾರಧಾರೆಗಳು ನಾಯಕತ್ವ ನೀಡುತ್ತವೆ.

ಏಸುಕ್ರಿಸ್ತ, ರಾಮ, ಬಸವಣ್ಣನವರ ಭಜನೆ ರೀತಿ ಗಾಂಧಿಯವರ ಭಜನೆ ಇಂದು ಬೇಡ. ನಾವು ಶ್ರಮದಾನ ಮಾಡಬೇಕಿದೆ. ಏಕೆಂದರೆ ಈ ದೇಶ ನಡೆಯುತ್ತಿರುವುದೇ ಕೋಟ್ಯಾಂತರ ಶ್ರಮಿಕರ ಶ್ರಮದಿಂದ‌. ಬುದ್ದಿಜೀವಿಗಳು, ವಿಚಾರವಂತರು ಶ್ರಮದಾನ ಮಾಡಿದರೆ ಅಗ ಅದಕ್ಕೆ ಅಪಾರವಾದ ಮಹತ್ವ ಬರುತ್ತದೆ. ಈ ಕೆಲಸ ಮುಂದುವರಿಸಿ, ಗಾಂಧಿಯನ್ನು ಜೀವಂತಗೊಳಿಸಿ, ರಚನಾತ್ಮಕ ಕೆಲಸ ಮುಂದುವರೆಸುವ ಕೆಲಸವನ್ನು ಮುದುಕರಿಗೆ ಬಿಡಬೇಡಿ.. ಯುವಕರೆ ಕೈಗೆತ್ತಿಕೊಳ್ಳಿ.

ಗಾಂಧಿಯನ್ನು ಕೇವಲ ಮುದುಕರಿಗೆ ಬಿಡಬೇಡಿ, ಗಾಂಧಿ ವಿಚಾರಧಾರೆಯ ವಾರಸುದಾರರು ಯುವಜನರೆ ಆಗಬೇಕು. ಜೊತೆಗೆ ಗಾಂಧಿಯನ್ನು ಬೋರ್ ಎನಿಸಬಾರದು. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿಸಬೇಡಿ..ಗಾಂಧಿ ಸರಳವಾಗಿದ್ದರು, ಇಡೀ ದೇಶ ಸುತ್ತಿದರು, ತಮಾಷೆಗಳನ್ನು ಮಾಡುವ ಚೈತನ್ಯವಾಗಿದ್ದರು ಎಂಬುದನ್ನು ಮರೆಯಬಾರದು.

ಶ್ರಮ ಸಂಸ್ಕತಿಯನ್ನು ಜೀವಂತವುಳಿಸಿ, ಮುಸ್ಲಿಂ ಹೆಣ್ಣು ಮಕ್ಕಳು ಸಹ ಹೊರಬಂದು ದೇಶಕಟ್ಟುವ ಕಲಸ ಮಾಡಬೇಕಿದೆ. ಆ ಮೂಲಕ ಸಮಾಜವನ್ನು ಮತಧರ್ಮ ನಿರಪೇಕ್ಷವನ್ನಾಗಿ ಮಾಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭೆಗೆ ಮೇನಕಾ ಗುರುಸ್ವಾಮಿ : ದೇಶದ ಮೊದಲ LGBTQ+ ಸಂಸದೆಯಾಗಲು ಅಣಿಯಾದ ಹಿರಿಯ ವಕೀಲೆ

ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ (ಫೆ.27) ವಕೀಲೆ ಮೇನಕಾ ಗುರುಸ್ವಾಮಿ, ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್, ರಾಜ್ಯ ಸಂಪುಟ ಸಚಿವ ಬಾಬುಲ್ ಸುಪ್ರಿಯೋ ಮತ್ತು ನಟಿ...

ದಾಳಿ ಮುಂದುವರಿಸುವ ಸೂಚನೆ ನೀಡಿದ ಟ್ರಂಪ್ : ಇರಾನ್‌ನಿಂದ ತೀವ್ರ ಪ್ರತಿದಾಳಿಯ ಎಚ್ಚರಿಕೆ

ಅಮೆರಿಕದ ಸಹಯೋಗದೊಂದಿಗೆ ಇಸ್ರೇಲ್ ಶನಿವಾರ (ಫೆ.28) ಇರಾನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗುವಾಗ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇಸ್ರೇಲ್‌ ಇರಾನ್‌ನ ರಾಜಧಾನಿ ಟೆಹ್ರಾನ್‌ ಸೇರಿದಂತೆ ದೇಶದ ಹಲವು ಸ್ಥಳಗಳ...

ಅಮೆರಿಕ ಅಣತಿಯಂತೆ ಇರಾನ್ ಮೇಲೆ ಇಸ್ರೇಲ್ ದಾಳಿ : ಟೆಹ್ರಾನ್‌ನ ಹಲವೆಡೆ ಭಾರೀ ಸ್ಪೋಟ

ಇರಾನ್ ಮೇಲೆ ಇಸ್ರೇಲ್ ಶನಿವಾರ (ಫೆ.28) ವೈಮಾನಿಕ ದಾಳಿ ನಡೆಸಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯನ್ನು ಇಸ್ರೇಲ್ 'ಪೂರ್ವಭಾವಿ ದಾಳಿ' ಎಂದು ಕರೆದಿದೆ. ಇಂದು ಬೆಳಿಗ್ಗಿನ ಹೇಳಿಕೆಯೊಂದರಲ್ಲಿ, ಇಸ್ರೇಲ್ ರಕ್ಷಣಾ ಸಚಿವ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ನಟ ದಿಲೀಪ್, ಇತರರ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರ್ಕಾರ

ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪ್ರಕರಣದ...

‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ವಿಧಿಸಿದ್ದ ತಡೆಯಾಜ್ಞೆ ತೆರವು

'ದಿ ಕೇರಳ ಸ್ಟೋರಿ-2 : ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ (ಫೆ.27) ತೆರವುಗೊಳಿಸಿದೆ. 'ಕೋಮು ಸಾಮರಸ್ಯ ಕದಡುವ ಸಾಧ್ಯತೆ'ಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಬೆಚು...

‘ದೆಹಲಿಯಲ್ಲಿ ಮತ್ತೆ ಚುನಾವಣೆ ನಡೆಸಿ; ಬಿಜೆಪಿ 10ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ’: ಕೇಜ್ರಿವಾಲ್ ಸವಾಲು

"ದೆಹಲಿಯಲ್ಲಿ ಮತ್ತೆ ಚುನಾವಣೆ ನಡೆಸಿ, ಬಿಜೆಪಿ ಹತ್ತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ನಾನು ರಾಜಕೀಯ ತ್ಯಜಿಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ....

ಚನ್ನರಾಯಪಟ್ಟಣ| ಭೂಸ್ವಾಧೀನ ವಿರುದ್ಧ ಗೆದ್ದ ರೈತರಿಂದ ‘ಭೂಮಿ ಹಬ್ಬ’ ಸಂಭ್ರಮ: ಹೋರಾಟದ ಒಡನಾಡಿಗಳಿಗೆ ಗೌರವ ಸಮರ್ಪಣೆ

ದೇವನಹಳ್ಳಿಯ ಚನ್ನರಾಯಪಟ್ಟಣದ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ರೈತರು ನಡೆಸಿದ ಸುದೀರ್ಘ ನಾಲ್ಕು ವರ್ಷಗಳ ಸತ್ಯಾಗ್ರಹಕ್ಕೆ ಐತಿಹಾಸಿಕ ಜಯ ಲಭಿಸಿದ ಹಿನ್ನಲೆಯಲ್ಲಿ, ಭೂಸ್ವಾದೀನ ವಿರೋಧಿ ಹೋರಾಟ ಸಮಿತಿಯು...

ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಮತ್ತು ಇತರರು ಖುಲಾಸೆ: ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ

ಮದ್ಯ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು...

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಚುನಾವಣೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಡೆಹಿಡಿದಿದೆ. ಭಾರತದ ಮುಖ್ಯ...

ಹಾಜರಾತಿ ಆಧಾರದ ಮೇಲೆ ಪರೀಕ್ಷಾ ನಿಷೇಧ ವಿರೋಧಿಸಿ ಎಎಂಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಬಂಧನ, ಹಲ್ಲೆ ಆರೋಪ 

ಕಡಿಮೆ ಹಾಜರಾತಿ ಕಾರಣ ಸೆಮಿಸ್ಟರ್ ಪರೀಕ್ಷೆಗಳಿಂದ ನಿಷೇಧಿಸಲ್ಪಟ್ಟಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ನಂತರ, ವಿಶ್ವವಿದ್ಯಾಲಯದ ಪ್ರೊಕ್ಟೋರಿಯಲ್ ತಂಡವು ಹಲವಾರು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದೆ ಎಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU)...