Homeಕರ್ನಾಟಕ“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ವಾಟಿಸ್ಸೆ ಬಂದು “ಬ್ಯಾಡಲಕ್ಕು ಕಣಕ್ಕ” ಅಂದ.
“ಯಾಕ್ಲ”
“ಮುಂದಿನ ತಿಂಗಳು ಮೂರನೇ ತಾರಿಕಿನವರಿಗೂ ಲಾಕ್‍ಡೌನು ಮಾಡಿದ ಕಣಕ್ಕ ಮೋದಿ.”
“ಅಯ್ಯೊ ಅಯ್ಯೊ ವಸಿದಿನವೆ. ಆಯ್ತು ಬುಡು.”
“ಇಷ್ಟು ದಿನವೆ ಇದ್ಯಲ್ಲ ಬುಡು” ಎಂದ ಉಗ್ರಿ.
“ಹದುನಾಕು ದಿಸ ವನವಾಸದಂಗೆ ಕಳೆದ ಕಂಡ್ಳ.”
“ಏನು ಲಾಸಗಿಲ್ಲ ತಗಳಕ್ಕ. ಕಲರ್ ಬಂದಿದ್ದಿ, ಹೆಲ್ತ ಇಂಪ್ರೂ ಆಗ್ಯದೆ ಇನ್ನೆನಾಗಬೇಕು. ಬಾಗಲಾಯ್ಕಂಡು ಇರದೆ ಹೆಲ್ತಿಗೊಸ್ಕರ ಗೊತ್ತೇನಕ್ಕ” ಎಂದ ವಾಟಿಸ್ಸೆ.
“ಯಾವ ಸೀಮೆ ಹೆಲ್ತಲ, ಹ್ಯಳುವುದಂಗೆ ಮನೆವಳಗೆ ಕುಂತಿದ್ರೆ ಮನಸುನ ಸರೀಳ ಯಾತಕ್ಕೆ ಬಂದತೂ.”
“ಕೊರೊನಾ ಬರದಿಲ್ಲ ಬುಡು”
“ಬರದಿಲ್ಲ ಅಂತರೆ, ಜನ ಸಾಯ್ತಾ ಅವುರೆ ಅಂತರೆ, ಯಾವುದು ನಂಬಲಿ ಯಾವುದು ಬುಡ್ಳಿ ಅನ್ನಂಗಾಗ್ಯಾದೆ.”
“ಮೋದಿ ಮಾತ ನಂಬಕ್ಕ.”
“ಬೂದಿ ಹುಯ್ಕಳದೆಯ ಕಂಡ್ಳ ಅವುನ ಮಾತ ಕೇಳಿದ್ರೆ.”
“ಯಾಕಪ್ಪ.”
“ಮನೆವಳಗಿರಿ ಅಂತನೆ ವರತು ಇನ್ನೆನು ಹೇಳದಿಲ್ಲ.”
“ಏನೇಳಬೇಕಾಗಿತ್ತು.”
“ಇಪ್ಪತ್ತು ದಿನಾತು ದನ ಕಟ್ಟಿತ್ತಾವುಲೆ ಹುಲ್ಲಾಕ್ತ ಇದ್ದಿನಿ. ಯಮ್ಮೆ ಹಿಡದು ಆಚೆಗೆ ಕಟ್ಟಿದ್ದು ತಿರಗ ವಳಿಕೆ ಹಿಡದು ಕಟ್ಟದಾಗ್ಯದೆ. ಆಡು ಮರಿಗಳು ಸೊಪ್ಪಿಲ್ಲದೆ ಕೂಗ್ತವೆ. ಅದ್‍ಯಂಗ್ಲ ಮನೆವಳಗಿದ್ದೀ.”
“ಮೋದಿಗವ್ಯಲ್ಲ ಗೊತ್ತಿಲ್ಲ ಕಣಕ್ಕ. ಅವುನಿಗೆ ಅಂಗಡಿ, ಆಫೀಸು ಅಷ್ಟೆ ಗೊತ್ತಿರದು. ಅದಕ್ಕೆ ಮನೆಲಿರಿ ಅಂದವುನೆ.”
“ಅಂಗರೆ ರೈತಾಪಿ ಜನ ಗೊತ್ತಿಲವೆ ಅವುನಿಗೆ.”
“ಇಲ್ಲ ಕಣಕ್ಕ. ಗೊತ್ತಿದ್ರೆ ಯಲ್ಲಾ ಸಾಮಾನು ಸರಂಜಾಮು ವದಿಗಿಸಿಗಳಿ, ಲಾಕ್‍ಡವುನ್ ಮಾಡ್ತಿನಿ ಅಂತ ಮೂರು ದಿನ ಮದ್ಲೆ ಹೇಳಿ, ಜನಗಳ ತಯಾರು ಮಾಡನು. ಅವುನ ತಲೆಲಿ ಕೂಲಿ ಮಾಡೋರು ಬಡವುರು ಜಮೀನಿಲ್ಲದೊರು ಇಲವೇ ಇಲ್ಲ.”
“ಜಮೀನು ಅಂದೇಟಿಗೆ ನೆಪ್ತಿಗೆ ಬತ್ತು ಕಂಡ್ಳ ಬಿಜೆಪಿಗಳು ಅದೇನೂ ಕಾನೂನು ಮಾಡಿದ್ರಂತೆ.”
“ಏನಕ್ಕ.”
“ವತುವರಿ ಜಮೀನ್ಯಲ್ಲ ನಿಂದೆಯ ಅಂತ ಮಾಡಿದರಂತೆ.”
“ನಂದಂತೂ ಯಾವ ವತುವರಿನೂ ಇಲ್ಲ ಕಣಕ್ಕ ನನ್ನ ಖಾತೆ ಜಮೀನ್ನ ಹಾಳು ಬಿಟ್ಟಿದ್ದಿನಿ.”
“ನಿಂದಿಲ್ಲ ಕಂಡ್ಳ, ಆ ಕಿಸ್ಣೇಗೌಡ ಒಂದು ಕಾಲಿಲ್ದೆಯಿದ್ರೂವೆ ಮನಿಯೋರನ್ನೆಲ್ಲ ಕರಕಂಡೋಗಿ ಯಕರಿಗಟ್ಳೆ ಬೇಲಿ ಹಾಕ್ಯಂಡನಂತೆ.”
“ನೋಡಪ್ಪ, ಕರೊನಾ ಬಂದು ದೇಸಕ್ಕೆ ದೇಸನೆ ಕೊಚಗಂಡೊಯ್ತಾಯಿರುವಾಗ, ಆ ಕುಂಟಣ್ಣನಿಗೆ ಬಂದಿರೊ ದುರಾಸೆ ನೋಡು ಯಂಗದೆ.”
“ಅದೂ ಊರ್ಯಲ್ಲ ಬಾಗಲಾಯ್ಕಂಡು ಮನೆಲಿದ್ರು ನೋಡು, ಯಾರು ನೋಡದಿಲ್ಲ ಅಂತ ತಿಳಗಂಡು ಬದ ಹಾಕಿ ಬೇಲಿ ಹಾಕಿದ್ದಾನಂತೆ.”
“ಅಲ್ಲಾ ಕಣೊ ಉಗ್ರಿ, ಇಂತ ಟೈಮಲ್ಲಿ ಹಿಂಗೆ ಯೋಚನೆ ಮಾಡ್ತರೆ ಜನ ಅಂತ ನನಿಗೆ ಗೊತ್ತಿರಲೇ ಇಲ್ಲ.”
“ಆ ಬಿಜೆಪಿಗಳೇ ಅಂಗೆ ಕಣೊ, ಯಾವಾಗ್ಲೂ ಟೈಂ ನೊಡ್ತರೆ ಜನ ಅಡ್ಡಗ್ಯಾನಾಗಿದ್ದಾಗ ಲಬುಕ್ಕಂತ ಲಪಟಾಯಿಸಿಬುಡ್ತಾರೆ”
“ಈಗ್ಲು ಅಂಗೆ ಆಗ್ಯದೆ ನೋಡೊ, ಊರ್ಯಲ್ಲ ಮನೆಲಿದ್ರೆ ಆ ಕೃಷ್ಣೇಗೌಡ ಬೇಲಿ ಹಾಕ್ಯವುನೆ ಇನ್ನ ಆ ಮಲನಾಡಕಡೆ ಗುಡ್ಡ ಗುಡ್ಡನೆ ನಂದು ಅಂತರೇನೂ.”
“ಹೋಗ್ಲಿ ಬುಡೊ ಉಗ್ರಿ, ಆ ವತ್ತುವರಿ ಮಾತಂಗಿರ್ಲಿ ಡ್ರಿಂಕ್ಸ್ ಬಗ್ಗೆ ಮಾತಾಡನ. ಇಪ್ಪತ್ತು ದಿನಾಯ್ತು ಕಣೊ ಉಗ್ರಿ ನಾನು ಡ್ರಿಂಕ್ಸ್ ಮಾಡಿ.”
“ಯಾಕೆ ಎಂ.ಸಿ ಬ್ರಾಂದಿ ಸಿಗತದಲ್ಲೊ.”
“ಒಂದು ಕ್ವಾಟ್ರಿಗೆ ನಾನೂರ್ರುಪಾಯಿ ಕಣೊ.”
“ಆಟೊಂತರ ದುಡ್ಡೆ.”
“ಯೆಸ್ ಕೊರೋನ ಯಾಕೊ ಡ್ರಿಂಕ್ಸ್ ಆಸೆಗೆ ಬುಡಂಗೆ ಮಾಡ್ತ ಅದೆ ಅಕ್ಚವಲಿ ಲಾಕ್‍ಡೌನು ಡ್ರಿಂಕ್ಸ್‍ಗೆ ಇರಬಾರದಿತ್ತು ಕಣೊ ಉಗ್ರಿ.”
“ಎಡೂರಪ್ಪನಿಗೆ ಫೋನು ಮಾಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...