Homeಕರ್ನಾಟಕ“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ವಾಟಿಸ್ಸೆ ಬಂದು “ಬ್ಯಾಡಲಕ್ಕು ಕಣಕ್ಕ” ಅಂದ.
“ಯಾಕ್ಲ”
“ಮುಂದಿನ ತಿಂಗಳು ಮೂರನೇ ತಾರಿಕಿನವರಿಗೂ ಲಾಕ್‍ಡೌನು ಮಾಡಿದ ಕಣಕ್ಕ ಮೋದಿ.”
“ಅಯ್ಯೊ ಅಯ್ಯೊ ವಸಿದಿನವೆ. ಆಯ್ತು ಬುಡು.”
“ಇಷ್ಟು ದಿನವೆ ಇದ್ಯಲ್ಲ ಬುಡು” ಎಂದ ಉಗ್ರಿ.
“ಹದುನಾಕು ದಿಸ ವನವಾಸದಂಗೆ ಕಳೆದ ಕಂಡ್ಳ.”
“ಏನು ಲಾಸಗಿಲ್ಲ ತಗಳಕ್ಕ. ಕಲರ್ ಬಂದಿದ್ದಿ, ಹೆಲ್ತ ಇಂಪ್ರೂ ಆಗ್ಯದೆ ಇನ್ನೆನಾಗಬೇಕು. ಬಾಗಲಾಯ್ಕಂಡು ಇರದೆ ಹೆಲ್ತಿಗೊಸ್ಕರ ಗೊತ್ತೇನಕ್ಕ” ಎಂದ ವಾಟಿಸ್ಸೆ.
“ಯಾವ ಸೀಮೆ ಹೆಲ್ತಲ, ಹ್ಯಳುವುದಂಗೆ ಮನೆವಳಗೆ ಕುಂತಿದ್ರೆ ಮನಸುನ ಸರೀಳ ಯಾತಕ್ಕೆ ಬಂದತೂ.”
“ಕೊರೊನಾ ಬರದಿಲ್ಲ ಬುಡು”
“ಬರದಿಲ್ಲ ಅಂತರೆ, ಜನ ಸಾಯ್ತಾ ಅವುರೆ ಅಂತರೆ, ಯಾವುದು ನಂಬಲಿ ಯಾವುದು ಬುಡ್ಳಿ ಅನ್ನಂಗಾಗ್ಯಾದೆ.”
“ಮೋದಿ ಮಾತ ನಂಬಕ್ಕ.”
“ಬೂದಿ ಹುಯ್ಕಳದೆಯ ಕಂಡ್ಳ ಅವುನ ಮಾತ ಕೇಳಿದ್ರೆ.”
“ಯಾಕಪ್ಪ.”
“ಮನೆವಳಗಿರಿ ಅಂತನೆ ವರತು ಇನ್ನೆನು ಹೇಳದಿಲ್ಲ.”
“ಏನೇಳಬೇಕಾಗಿತ್ತು.”
“ಇಪ್ಪತ್ತು ದಿನಾತು ದನ ಕಟ್ಟಿತ್ತಾವುಲೆ ಹುಲ್ಲಾಕ್ತ ಇದ್ದಿನಿ. ಯಮ್ಮೆ ಹಿಡದು ಆಚೆಗೆ ಕಟ್ಟಿದ್ದು ತಿರಗ ವಳಿಕೆ ಹಿಡದು ಕಟ್ಟದಾಗ್ಯದೆ. ಆಡು ಮರಿಗಳು ಸೊಪ್ಪಿಲ್ಲದೆ ಕೂಗ್ತವೆ. ಅದ್‍ಯಂಗ್ಲ ಮನೆವಳಗಿದ್ದೀ.”
“ಮೋದಿಗವ್ಯಲ್ಲ ಗೊತ್ತಿಲ್ಲ ಕಣಕ್ಕ. ಅವುನಿಗೆ ಅಂಗಡಿ, ಆಫೀಸು ಅಷ್ಟೆ ಗೊತ್ತಿರದು. ಅದಕ್ಕೆ ಮನೆಲಿರಿ ಅಂದವುನೆ.”
“ಅಂಗರೆ ರೈತಾಪಿ ಜನ ಗೊತ್ತಿಲವೆ ಅವುನಿಗೆ.”
“ಇಲ್ಲ ಕಣಕ್ಕ. ಗೊತ್ತಿದ್ರೆ ಯಲ್ಲಾ ಸಾಮಾನು ಸರಂಜಾಮು ವದಿಗಿಸಿಗಳಿ, ಲಾಕ್‍ಡವುನ್ ಮಾಡ್ತಿನಿ ಅಂತ ಮೂರು ದಿನ ಮದ್ಲೆ ಹೇಳಿ, ಜನಗಳ ತಯಾರು ಮಾಡನು. ಅವುನ ತಲೆಲಿ ಕೂಲಿ ಮಾಡೋರು ಬಡವುರು ಜಮೀನಿಲ್ಲದೊರು ಇಲವೇ ಇಲ್ಲ.”
“ಜಮೀನು ಅಂದೇಟಿಗೆ ನೆಪ್ತಿಗೆ ಬತ್ತು ಕಂಡ್ಳ ಬಿಜೆಪಿಗಳು ಅದೇನೂ ಕಾನೂನು ಮಾಡಿದ್ರಂತೆ.”
“ಏನಕ್ಕ.”
“ವತುವರಿ ಜಮೀನ್ಯಲ್ಲ ನಿಂದೆಯ ಅಂತ ಮಾಡಿದರಂತೆ.”
“ನಂದಂತೂ ಯಾವ ವತುವರಿನೂ ಇಲ್ಲ ಕಣಕ್ಕ ನನ್ನ ಖಾತೆ ಜಮೀನ್ನ ಹಾಳು ಬಿಟ್ಟಿದ್ದಿನಿ.”
“ನಿಂದಿಲ್ಲ ಕಂಡ್ಳ, ಆ ಕಿಸ್ಣೇಗೌಡ ಒಂದು ಕಾಲಿಲ್ದೆಯಿದ್ರೂವೆ ಮನಿಯೋರನ್ನೆಲ್ಲ ಕರಕಂಡೋಗಿ ಯಕರಿಗಟ್ಳೆ ಬೇಲಿ ಹಾಕ್ಯಂಡನಂತೆ.”
“ನೋಡಪ್ಪ, ಕರೊನಾ ಬಂದು ದೇಸಕ್ಕೆ ದೇಸನೆ ಕೊಚಗಂಡೊಯ್ತಾಯಿರುವಾಗ, ಆ ಕುಂಟಣ್ಣನಿಗೆ ಬಂದಿರೊ ದುರಾಸೆ ನೋಡು ಯಂಗದೆ.”
“ಅದೂ ಊರ್ಯಲ್ಲ ಬಾಗಲಾಯ್ಕಂಡು ಮನೆಲಿದ್ರು ನೋಡು, ಯಾರು ನೋಡದಿಲ್ಲ ಅಂತ ತಿಳಗಂಡು ಬದ ಹಾಕಿ ಬೇಲಿ ಹಾಕಿದ್ದಾನಂತೆ.”
“ಅಲ್ಲಾ ಕಣೊ ಉಗ್ರಿ, ಇಂತ ಟೈಮಲ್ಲಿ ಹಿಂಗೆ ಯೋಚನೆ ಮಾಡ್ತರೆ ಜನ ಅಂತ ನನಿಗೆ ಗೊತ್ತಿರಲೇ ಇಲ್ಲ.”
“ಆ ಬಿಜೆಪಿಗಳೇ ಅಂಗೆ ಕಣೊ, ಯಾವಾಗ್ಲೂ ಟೈಂ ನೊಡ್ತರೆ ಜನ ಅಡ್ಡಗ್ಯಾನಾಗಿದ್ದಾಗ ಲಬುಕ್ಕಂತ ಲಪಟಾಯಿಸಿಬುಡ್ತಾರೆ”
“ಈಗ್ಲು ಅಂಗೆ ಆಗ್ಯದೆ ನೋಡೊ, ಊರ್ಯಲ್ಲ ಮನೆಲಿದ್ರೆ ಆ ಕೃಷ್ಣೇಗೌಡ ಬೇಲಿ ಹಾಕ್ಯವುನೆ ಇನ್ನ ಆ ಮಲನಾಡಕಡೆ ಗುಡ್ಡ ಗುಡ್ಡನೆ ನಂದು ಅಂತರೇನೂ.”
“ಹೋಗ್ಲಿ ಬುಡೊ ಉಗ್ರಿ, ಆ ವತ್ತುವರಿ ಮಾತಂಗಿರ್ಲಿ ಡ್ರಿಂಕ್ಸ್ ಬಗ್ಗೆ ಮಾತಾಡನ. ಇಪ್ಪತ್ತು ದಿನಾಯ್ತು ಕಣೊ ಉಗ್ರಿ ನಾನು ಡ್ರಿಂಕ್ಸ್ ಮಾಡಿ.”
“ಯಾಕೆ ಎಂ.ಸಿ ಬ್ರಾಂದಿ ಸಿಗತದಲ್ಲೊ.”
“ಒಂದು ಕ್ವಾಟ್ರಿಗೆ ನಾನೂರ್ರುಪಾಯಿ ಕಣೊ.”
“ಆಟೊಂತರ ದುಡ್ಡೆ.”
“ಯೆಸ್ ಕೊರೋನ ಯಾಕೊ ಡ್ರಿಂಕ್ಸ್ ಆಸೆಗೆ ಬುಡಂಗೆ ಮಾಡ್ತ ಅದೆ ಅಕ್ಚವಲಿ ಲಾಕ್‍ಡೌನು ಡ್ರಿಂಕ್ಸ್‍ಗೆ ಇರಬಾರದಿತ್ತು ಕಣೊ ಉಗ್ರಿ.”
“ಎಡೂರಪ್ಪನಿಗೆ ಫೋನು ಮಾಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...