Homeಕರ್ನಾಟಕ“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ವಾಟಿಸ್ಸೆ ಬಂದು “ಬ್ಯಾಡಲಕ್ಕು ಕಣಕ್ಕ” ಅಂದ.
“ಯಾಕ್ಲ”
“ಮುಂದಿನ ತಿಂಗಳು ಮೂರನೇ ತಾರಿಕಿನವರಿಗೂ ಲಾಕ್‍ಡೌನು ಮಾಡಿದ ಕಣಕ್ಕ ಮೋದಿ.”
“ಅಯ್ಯೊ ಅಯ್ಯೊ ವಸಿದಿನವೆ. ಆಯ್ತು ಬುಡು.”
“ಇಷ್ಟು ದಿನವೆ ಇದ್ಯಲ್ಲ ಬುಡು” ಎಂದ ಉಗ್ರಿ.
“ಹದುನಾಕು ದಿಸ ವನವಾಸದಂಗೆ ಕಳೆದ ಕಂಡ್ಳ.”
“ಏನು ಲಾಸಗಿಲ್ಲ ತಗಳಕ್ಕ. ಕಲರ್ ಬಂದಿದ್ದಿ, ಹೆಲ್ತ ಇಂಪ್ರೂ ಆಗ್ಯದೆ ಇನ್ನೆನಾಗಬೇಕು. ಬಾಗಲಾಯ್ಕಂಡು ಇರದೆ ಹೆಲ್ತಿಗೊಸ್ಕರ ಗೊತ್ತೇನಕ್ಕ” ಎಂದ ವಾಟಿಸ್ಸೆ.
“ಯಾವ ಸೀಮೆ ಹೆಲ್ತಲ, ಹ್ಯಳುವುದಂಗೆ ಮನೆವಳಗೆ ಕುಂತಿದ್ರೆ ಮನಸುನ ಸರೀಳ ಯಾತಕ್ಕೆ ಬಂದತೂ.”
“ಕೊರೊನಾ ಬರದಿಲ್ಲ ಬುಡು”
“ಬರದಿಲ್ಲ ಅಂತರೆ, ಜನ ಸಾಯ್ತಾ ಅವುರೆ ಅಂತರೆ, ಯಾವುದು ನಂಬಲಿ ಯಾವುದು ಬುಡ್ಳಿ ಅನ್ನಂಗಾಗ್ಯಾದೆ.”
“ಮೋದಿ ಮಾತ ನಂಬಕ್ಕ.”
“ಬೂದಿ ಹುಯ್ಕಳದೆಯ ಕಂಡ್ಳ ಅವುನ ಮಾತ ಕೇಳಿದ್ರೆ.”
“ಯಾಕಪ್ಪ.”
“ಮನೆವಳಗಿರಿ ಅಂತನೆ ವರತು ಇನ್ನೆನು ಹೇಳದಿಲ್ಲ.”
“ಏನೇಳಬೇಕಾಗಿತ್ತು.”
“ಇಪ್ಪತ್ತು ದಿನಾತು ದನ ಕಟ್ಟಿತ್ತಾವುಲೆ ಹುಲ್ಲಾಕ್ತ ಇದ್ದಿನಿ. ಯಮ್ಮೆ ಹಿಡದು ಆಚೆಗೆ ಕಟ್ಟಿದ್ದು ತಿರಗ ವಳಿಕೆ ಹಿಡದು ಕಟ್ಟದಾಗ್ಯದೆ. ಆಡು ಮರಿಗಳು ಸೊಪ್ಪಿಲ್ಲದೆ ಕೂಗ್ತವೆ. ಅದ್‍ಯಂಗ್ಲ ಮನೆವಳಗಿದ್ದೀ.”
“ಮೋದಿಗವ್ಯಲ್ಲ ಗೊತ್ತಿಲ್ಲ ಕಣಕ್ಕ. ಅವುನಿಗೆ ಅಂಗಡಿ, ಆಫೀಸು ಅಷ್ಟೆ ಗೊತ್ತಿರದು. ಅದಕ್ಕೆ ಮನೆಲಿರಿ ಅಂದವುನೆ.”
“ಅಂಗರೆ ರೈತಾಪಿ ಜನ ಗೊತ್ತಿಲವೆ ಅವುನಿಗೆ.”
“ಇಲ್ಲ ಕಣಕ್ಕ. ಗೊತ್ತಿದ್ರೆ ಯಲ್ಲಾ ಸಾಮಾನು ಸರಂಜಾಮು ವದಿಗಿಸಿಗಳಿ, ಲಾಕ್‍ಡವುನ್ ಮಾಡ್ತಿನಿ ಅಂತ ಮೂರು ದಿನ ಮದ್ಲೆ ಹೇಳಿ, ಜನಗಳ ತಯಾರು ಮಾಡನು. ಅವುನ ತಲೆಲಿ ಕೂಲಿ ಮಾಡೋರು ಬಡವುರು ಜಮೀನಿಲ್ಲದೊರು ಇಲವೇ ಇಲ್ಲ.”
“ಜಮೀನು ಅಂದೇಟಿಗೆ ನೆಪ್ತಿಗೆ ಬತ್ತು ಕಂಡ್ಳ ಬಿಜೆಪಿಗಳು ಅದೇನೂ ಕಾನೂನು ಮಾಡಿದ್ರಂತೆ.”
“ಏನಕ್ಕ.”
“ವತುವರಿ ಜಮೀನ್ಯಲ್ಲ ನಿಂದೆಯ ಅಂತ ಮಾಡಿದರಂತೆ.”
“ನಂದಂತೂ ಯಾವ ವತುವರಿನೂ ಇಲ್ಲ ಕಣಕ್ಕ ನನ್ನ ಖಾತೆ ಜಮೀನ್ನ ಹಾಳು ಬಿಟ್ಟಿದ್ದಿನಿ.”
“ನಿಂದಿಲ್ಲ ಕಂಡ್ಳ, ಆ ಕಿಸ್ಣೇಗೌಡ ಒಂದು ಕಾಲಿಲ್ದೆಯಿದ್ರೂವೆ ಮನಿಯೋರನ್ನೆಲ್ಲ ಕರಕಂಡೋಗಿ ಯಕರಿಗಟ್ಳೆ ಬೇಲಿ ಹಾಕ್ಯಂಡನಂತೆ.”
“ನೋಡಪ್ಪ, ಕರೊನಾ ಬಂದು ದೇಸಕ್ಕೆ ದೇಸನೆ ಕೊಚಗಂಡೊಯ್ತಾಯಿರುವಾಗ, ಆ ಕುಂಟಣ್ಣನಿಗೆ ಬಂದಿರೊ ದುರಾಸೆ ನೋಡು ಯಂಗದೆ.”
“ಅದೂ ಊರ್ಯಲ್ಲ ಬಾಗಲಾಯ್ಕಂಡು ಮನೆಲಿದ್ರು ನೋಡು, ಯಾರು ನೋಡದಿಲ್ಲ ಅಂತ ತಿಳಗಂಡು ಬದ ಹಾಕಿ ಬೇಲಿ ಹಾಕಿದ್ದಾನಂತೆ.”
“ಅಲ್ಲಾ ಕಣೊ ಉಗ್ರಿ, ಇಂತ ಟೈಮಲ್ಲಿ ಹಿಂಗೆ ಯೋಚನೆ ಮಾಡ್ತರೆ ಜನ ಅಂತ ನನಿಗೆ ಗೊತ್ತಿರಲೇ ಇಲ್ಲ.”
“ಆ ಬಿಜೆಪಿಗಳೇ ಅಂಗೆ ಕಣೊ, ಯಾವಾಗ್ಲೂ ಟೈಂ ನೊಡ್ತರೆ ಜನ ಅಡ್ಡಗ್ಯಾನಾಗಿದ್ದಾಗ ಲಬುಕ್ಕಂತ ಲಪಟಾಯಿಸಿಬುಡ್ತಾರೆ”
“ಈಗ್ಲು ಅಂಗೆ ಆಗ್ಯದೆ ನೋಡೊ, ಊರ್ಯಲ್ಲ ಮನೆಲಿದ್ರೆ ಆ ಕೃಷ್ಣೇಗೌಡ ಬೇಲಿ ಹಾಕ್ಯವುನೆ ಇನ್ನ ಆ ಮಲನಾಡಕಡೆ ಗುಡ್ಡ ಗುಡ್ಡನೆ ನಂದು ಅಂತರೇನೂ.”
“ಹೋಗ್ಲಿ ಬುಡೊ ಉಗ್ರಿ, ಆ ವತ್ತುವರಿ ಮಾತಂಗಿರ್ಲಿ ಡ್ರಿಂಕ್ಸ್ ಬಗ್ಗೆ ಮಾತಾಡನ. ಇಪ್ಪತ್ತು ದಿನಾಯ್ತು ಕಣೊ ಉಗ್ರಿ ನಾನು ಡ್ರಿಂಕ್ಸ್ ಮಾಡಿ.”
“ಯಾಕೆ ಎಂ.ಸಿ ಬ್ರಾಂದಿ ಸಿಗತದಲ್ಲೊ.”
“ಒಂದು ಕ್ವಾಟ್ರಿಗೆ ನಾನೂರ್ರುಪಾಯಿ ಕಣೊ.”
“ಆಟೊಂತರ ದುಡ್ಡೆ.”
“ಯೆಸ್ ಕೊರೋನ ಯಾಕೊ ಡ್ರಿಂಕ್ಸ್ ಆಸೆಗೆ ಬುಡಂಗೆ ಮಾಡ್ತ ಅದೆ ಅಕ್ಚವಲಿ ಲಾಕ್‍ಡೌನು ಡ್ರಿಂಕ್ಸ್‍ಗೆ ಇರಬಾರದಿತ್ತು ಕಣೊ ಉಗ್ರಿ.”
“ಎಡೂರಪ್ಪನಿಗೆ ಫೋನು ಮಾಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...