Homeಕರ್ನಾಟಕ“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ವಾಟಿಸ್ಸೆ ಬಂದು “ಬ್ಯಾಡಲಕ್ಕು ಕಣಕ್ಕ” ಅಂದ.
“ಯಾಕ್ಲ”
“ಮುಂದಿನ ತಿಂಗಳು ಮೂರನೇ ತಾರಿಕಿನವರಿಗೂ ಲಾಕ್‍ಡೌನು ಮಾಡಿದ ಕಣಕ್ಕ ಮೋದಿ.”
“ಅಯ್ಯೊ ಅಯ್ಯೊ ವಸಿದಿನವೆ. ಆಯ್ತು ಬುಡು.”
“ಇಷ್ಟು ದಿನವೆ ಇದ್ಯಲ್ಲ ಬುಡು” ಎಂದ ಉಗ್ರಿ.
“ಹದುನಾಕು ದಿಸ ವನವಾಸದಂಗೆ ಕಳೆದ ಕಂಡ್ಳ.”
“ಏನು ಲಾಸಗಿಲ್ಲ ತಗಳಕ್ಕ. ಕಲರ್ ಬಂದಿದ್ದಿ, ಹೆಲ್ತ ಇಂಪ್ರೂ ಆಗ್ಯದೆ ಇನ್ನೆನಾಗಬೇಕು. ಬಾಗಲಾಯ್ಕಂಡು ಇರದೆ ಹೆಲ್ತಿಗೊಸ್ಕರ ಗೊತ್ತೇನಕ್ಕ” ಎಂದ ವಾಟಿಸ್ಸೆ.
“ಯಾವ ಸೀಮೆ ಹೆಲ್ತಲ, ಹ್ಯಳುವುದಂಗೆ ಮನೆವಳಗೆ ಕುಂತಿದ್ರೆ ಮನಸುನ ಸರೀಳ ಯಾತಕ್ಕೆ ಬಂದತೂ.”
“ಕೊರೊನಾ ಬರದಿಲ್ಲ ಬುಡು”
“ಬರದಿಲ್ಲ ಅಂತರೆ, ಜನ ಸಾಯ್ತಾ ಅವುರೆ ಅಂತರೆ, ಯಾವುದು ನಂಬಲಿ ಯಾವುದು ಬುಡ್ಳಿ ಅನ್ನಂಗಾಗ್ಯಾದೆ.”
“ಮೋದಿ ಮಾತ ನಂಬಕ್ಕ.”
“ಬೂದಿ ಹುಯ್ಕಳದೆಯ ಕಂಡ್ಳ ಅವುನ ಮಾತ ಕೇಳಿದ್ರೆ.”
“ಯಾಕಪ್ಪ.”
“ಮನೆವಳಗಿರಿ ಅಂತನೆ ವರತು ಇನ್ನೆನು ಹೇಳದಿಲ್ಲ.”
“ಏನೇಳಬೇಕಾಗಿತ್ತು.”
“ಇಪ್ಪತ್ತು ದಿನಾತು ದನ ಕಟ್ಟಿತ್ತಾವುಲೆ ಹುಲ್ಲಾಕ್ತ ಇದ್ದಿನಿ. ಯಮ್ಮೆ ಹಿಡದು ಆಚೆಗೆ ಕಟ್ಟಿದ್ದು ತಿರಗ ವಳಿಕೆ ಹಿಡದು ಕಟ್ಟದಾಗ್ಯದೆ. ಆಡು ಮರಿಗಳು ಸೊಪ್ಪಿಲ್ಲದೆ ಕೂಗ್ತವೆ. ಅದ್‍ಯಂಗ್ಲ ಮನೆವಳಗಿದ್ದೀ.”
“ಮೋದಿಗವ್ಯಲ್ಲ ಗೊತ್ತಿಲ್ಲ ಕಣಕ್ಕ. ಅವುನಿಗೆ ಅಂಗಡಿ, ಆಫೀಸು ಅಷ್ಟೆ ಗೊತ್ತಿರದು. ಅದಕ್ಕೆ ಮನೆಲಿರಿ ಅಂದವುನೆ.”
“ಅಂಗರೆ ರೈತಾಪಿ ಜನ ಗೊತ್ತಿಲವೆ ಅವುನಿಗೆ.”
“ಇಲ್ಲ ಕಣಕ್ಕ. ಗೊತ್ತಿದ್ರೆ ಯಲ್ಲಾ ಸಾಮಾನು ಸರಂಜಾಮು ವದಿಗಿಸಿಗಳಿ, ಲಾಕ್‍ಡವುನ್ ಮಾಡ್ತಿನಿ ಅಂತ ಮೂರು ದಿನ ಮದ್ಲೆ ಹೇಳಿ, ಜನಗಳ ತಯಾರು ಮಾಡನು. ಅವುನ ತಲೆಲಿ ಕೂಲಿ ಮಾಡೋರು ಬಡವುರು ಜಮೀನಿಲ್ಲದೊರು ಇಲವೇ ಇಲ್ಲ.”
“ಜಮೀನು ಅಂದೇಟಿಗೆ ನೆಪ್ತಿಗೆ ಬತ್ತು ಕಂಡ್ಳ ಬಿಜೆಪಿಗಳು ಅದೇನೂ ಕಾನೂನು ಮಾಡಿದ್ರಂತೆ.”
“ಏನಕ್ಕ.”
“ವತುವರಿ ಜಮೀನ್ಯಲ್ಲ ನಿಂದೆಯ ಅಂತ ಮಾಡಿದರಂತೆ.”
“ನಂದಂತೂ ಯಾವ ವತುವರಿನೂ ಇಲ್ಲ ಕಣಕ್ಕ ನನ್ನ ಖಾತೆ ಜಮೀನ್ನ ಹಾಳು ಬಿಟ್ಟಿದ್ದಿನಿ.”
“ನಿಂದಿಲ್ಲ ಕಂಡ್ಳ, ಆ ಕಿಸ್ಣೇಗೌಡ ಒಂದು ಕಾಲಿಲ್ದೆಯಿದ್ರೂವೆ ಮನಿಯೋರನ್ನೆಲ್ಲ ಕರಕಂಡೋಗಿ ಯಕರಿಗಟ್ಳೆ ಬೇಲಿ ಹಾಕ್ಯಂಡನಂತೆ.”
“ನೋಡಪ್ಪ, ಕರೊನಾ ಬಂದು ದೇಸಕ್ಕೆ ದೇಸನೆ ಕೊಚಗಂಡೊಯ್ತಾಯಿರುವಾಗ, ಆ ಕುಂಟಣ್ಣನಿಗೆ ಬಂದಿರೊ ದುರಾಸೆ ನೋಡು ಯಂಗದೆ.”
“ಅದೂ ಊರ್ಯಲ್ಲ ಬಾಗಲಾಯ್ಕಂಡು ಮನೆಲಿದ್ರು ನೋಡು, ಯಾರು ನೋಡದಿಲ್ಲ ಅಂತ ತಿಳಗಂಡು ಬದ ಹಾಕಿ ಬೇಲಿ ಹಾಕಿದ್ದಾನಂತೆ.”
“ಅಲ್ಲಾ ಕಣೊ ಉಗ್ರಿ, ಇಂತ ಟೈಮಲ್ಲಿ ಹಿಂಗೆ ಯೋಚನೆ ಮಾಡ್ತರೆ ಜನ ಅಂತ ನನಿಗೆ ಗೊತ್ತಿರಲೇ ಇಲ್ಲ.”
“ಆ ಬಿಜೆಪಿಗಳೇ ಅಂಗೆ ಕಣೊ, ಯಾವಾಗ್ಲೂ ಟೈಂ ನೊಡ್ತರೆ ಜನ ಅಡ್ಡಗ್ಯಾನಾಗಿದ್ದಾಗ ಲಬುಕ್ಕಂತ ಲಪಟಾಯಿಸಿಬುಡ್ತಾರೆ”
“ಈಗ್ಲು ಅಂಗೆ ಆಗ್ಯದೆ ನೋಡೊ, ಊರ್ಯಲ್ಲ ಮನೆಲಿದ್ರೆ ಆ ಕೃಷ್ಣೇಗೌಡ ಬೇಲಿ ಹಾಕ್ಯವುನೆ ಇನ್ನ ಆ ಮಲನಾಡಕಡೆ ಗುಡ್ಡ ಗುಡ್ಡನೆ ನಂದು ಅಂತರೇನೂ.”
“ಹೋಗ್ಲಿ ಬುಡೊ ಉಗ್ರಿ, ಆ ವತ್ತುವರಿ ಮಾತಂಗಿರ್ಲಿ ಡ್ರಿಂಕ್ಸ್ ಬಗ್ಗೆ ಮಾತಾಡನ. ಇಪ್ಪತ್ತು ದಿನಾಯ್ತು ಕಣೊ ಉಗ್ರಿ ನಾನು ಡ್ರಿಂಕ್ಸ್ ಮಾಡಿ.”
“ಯಾಕೆ ಎಂ.ಸಿ ಬ್ರಾಂದಿ ಸಿಗತದಲ್ಲೊ.”
“ಒಂದು ಕ್ವಾಟ್ರಿಗೆ ನಾನೂರ್ರುಪಾಯಿ ಕಣೊ.”
“ಆಟೊಂತರ ದುಡ್ಡೆ.”
“ಯೆಸ್ ಕೊರೋನ ಯಾಕೊ ಡ್ರಿಂಕ್ಸ್ ಆಸೆಗೆ ಬುಡಂಗೆ ಮಾಡ್ತ ಅದೆ ಅಕ್ಚವಲಿ ಲಾಕ್‍ಡೌನು ಡ್ರಿಂಕ್ಸ್‍ಗೆ ಇರಬಾರದಿತ್ತು ಕಣೊ ಉಗ್ರಿ.”
“ಎಡೂರಪ್ಪನಿಗೆ ಫೋನು ಮಾಡು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...