Homeಮುಖಪುಟಹಲವು ಬದಲಾವಣೆಗಳಿಗೆ ಕಾರಣವಾದ ಭಾರತ ಜೋಡೋದ ಎರಡು ತಿಂಗಳ ಯಾತ್ರೆ

ಹಲವು ಬದಲಾವಣೆಗಳಿಗೆ ಕಾರಣವಾದ ಭಾರತ ಜೋಡೋದ ಎರಡು ತಿಂಗಳ ಯಾತ್ರೆ

- Advertisement -
- Advertisement -

ಭಾರತ್ ಜೋಡೊ ಯಾತ್ರೆ ಶುರು ಆದ ಮೊದಲ ದಿನಗಳಲ್ಲಿ ಸ್ನೇಹಿತರು ಫೋನ್ ಮಾಡಿ ಈ ರೀತಿ ಹೇಳುತ್ತಿದ್ದರು: “ರಾಹುಲ್ ಗಾಂಧಿಯ ಯಾತ್ರೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಾ?” ಎಂದು. ಈಗ ಎರಡು ತಿಂಗಳ ನಂತರ ಈ ರೀತಿ ಹೇಳುತ್ತಿದ್ದಾರೆ: “ಭಾರತ್ ಜೋಡೊ ಯಾತ್ರೆಯಲ್ಲಿ ಎಲ್ಲಿ ಸೇರಿಕೊಂಡಿದ್ದೀರಾ? ಹೇಗೆ ಸೇರಿಕೊಂಡಿದ್ದೀರಾ?” ಎಂದು. ಭಾರತ್ ಜೋಡೊ ಯಾತ್ರೆಯ ಪರಿಣಾಮವನ್ನು ಈ ಬದಲಾವಣೆಯಲ್ಲಿ ಕಾಣಬಹುದಾಗಿದೆ. ಸುಮಾರು 70 ದಿನ ಹಾಗೂ 1,800 ಕಿಲೊಮೀಟರ್ ನಡಿಗೆಯ ನಂತರ ಈ ಯಾತ್ರೆಯು ತನ್ನ ಅರ್ಧ ದೂರವನ್ನು ಕ್ರಮಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಈ ಯಾತ್ರೆಯು ಕೇರಳ, ಕರ್ನಾಟಕ, ಆಂಧ್ರ ಪ್ರದೇಶ-ತೆಲಂಗಾಣದಿಂದ ಹಾದು ಈಗ ಮಹಾರಾಷ್ಟ್ರವನ್ನೂ ಮುಗಿಸಿ ಮಧ್ಯಪ್ರದೇಶದ ಬಾಗಿಲು ತಟ್ಟಲಿದೆ.

ಸ್ವಾಭಾವಿಕವಾಗಿಯೇ ಕಾಂಗ್ರೆಸ್ ಪಕ್ಷ ಆಯೋಜಿಸಿದ ಈ ಯಾತ್ರೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮುಗಿಬಿದ್ದು ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿಯೊಂದಿಗೆ 100ಕ್ಕೂ ಹೆಚ್ಚು ’ಭಾರತ ಯಾತ್ರಿ’ಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಮಾಡುತ್ತಲಿದ್ದಾರೆ. ಸಾವಿರಾರು ’ಪ್ರದೇಶ ಯಾತ್ರಿಗಳು ರಾಜ್ಯದ ಆರಂಭದಿಂದ ಆ ರಾಜ್ಯದ ಗಡಿ ಕೊನೆಯಾಗುವ ತನಕ ಪಾದಯಾತ್ರೆ ಮಾಡುತ್ತಲಿದ್ದಾರೆ. ಹಾಗೂ ಪ್ರತಿನಿತ್ಯ ಸಾವಿರಾರು ಸ್ಥಳೀಯ ಕಾರ್ಯಕರ್ತರು ಯಾತ್ರೆಯ ನಡಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿರಾಜ್ಯದಲ್ಲಿ ಒಂದು ಅಥವಾ ಎರಡು ಕಡೆ ವಿಶಾಲವಾದ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬಹಳ ಸಮಯದ ನಂತರ ಕಾಂಗ್ರೆಸ್ ಸಂಘಟನೆಗೆ ಚುನಾವಣೆ ಎದುರಿಸುವುದರ ಹೊರತಾಗಿ ಬೇರೊಂದು ಸಕಾರಾತ್ಮಕ ಕೆಲಸ ಸಿಕ್ಕಿದೆ. ಬಹಳ ಸಮಯದ ನಂತರ ಕಾಂಗ್ರೆಸ್‌ನ ಕಾರ್ಯಕತೆ/ರ್ತ ರಸ್ತೆಗೆ ಇಳಿದಿದ್ದಾಳೆ/ನೆ. ಈ ಹೊಸ ಕಾರ್ಯಕ್ರಮದಿಂದ ಒಂದು ಹೊಸ ಆತ್ಮವಿಶ್ವಾಸ ಹುಟ್ಟಿದೆ ಮತ್ತು ತನ್ನ ನಾಯಕತ್ವದಲ್ಲಿ ಭರವಸೆ ಹುಟ್ಟುಕೊಂಡಿದೆ. ಇಷ್ಟಕ್ಕೇ ಕಾಂಗ್ರೆಸ್‌ನ ಪುನರ್ಜನ್ಮದ ಮಾತುಗಳನ್ನಾಡುವುದು ಆತುರ ಮಾಡಿದಂತಾಗುವುದು, ಆದರೆ ಕೆಲವು ಮೂಲಭೂತ ಬದಲಾವಣೆಯ ಬೀಜ ಮೊಳೆಯುವ ಒಂದು ಝಲಕ್ ಕಾಣಿಸಿಕೊಂಡಿದೆ.

ಈ ಎರಡು ತಿಂಗಳಲ್ಲಿ ಅತ್ಯಂತ ದೊಡ್ಡ ಬದಲಾವಣೆ ಕಾಣಿಸಿಕೊಂಡಿದ್ದು ಯಾವುದು ಎಂದು ನೋಡಿದಾಗ, ಅದು ರಾಹುಲ್ ಗಾಂಧಿಯ ಇಮೇಜ್‌ನಲ್ಲಿ ಆದ ಬದಲಾವಣೆ ಎನ್ನಬಹುದು. ಯಾತ್ರೆ ಶುರುವಾದ ಸಮಯದಲ್ಲಿ ಹಲವಾರು ಹಿತೈಷಿಗಳು ನನಗೆ ಈ ರೀತಿ ಎಚ್ಚರಿಕೆ ನೀಡಿದ್ದರು: “ನೀನಂತೂ ರಸ್ತೆಯಲ್ಲಿ ಕಾಲ್ನಡಿಗೆ ಮಾಡುತ್ತೀಯ, ಆದರೆ ರಾಹುಲ್ ಗಾಂಧಿ ಕೆಲ ದಿನಗಳ ನಂತರ ಗಾಡಿ ಹತ್ತಿಬಿಟ್ಟಾರು, ಹೊರದೇಶಕ್ಕೆ ಹಾರಿಬಿಟ್ಟಾರು” ಎಂದು. ’ಪಪ್ಪು’ ಎಂಬ ಇಮೇಜ್ ರಾಹುಲ್ ಗಾಂಧಿಯ ವ್ಯಕ್ತಿತ್ವದ ಮೇಲೆ ಸಂಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡಿತ್ತು. ಆದರೆ, ಯಾವ ರಾಹುಲ್ ಗಾಂಧಿಯನ್ನು ನಾನು ಕಳೆದ 15 ವರ್ಷಗಳಿಂದ ನೋಡಿದ್ದೇನೋ, ಅವರು ಒಬ್ಬ ಶಾಲೀನ, ಗಂಭೀರ, ಸ್ಪಷ್ಟತೆಯುಳ್ಳ ಹಾಗೂ ಜಿಜ್ಞಾಸೆಯುಳ್ಳ ವ್ಯಕ್ತಿಯಾಗಿದ್ದರು. ಎಲ್ಲೂ ಕಪಟತೆ, ವಂಚನೆಯಿಲ್ಲದ ಮತ್ತು ಯಾವುದೇ ಕೃತಕತೆಯಿಲ್ಲದ ವ್ಯಕ್ತಿ. ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ, ಸಮಾಜದ ಕೊನೆಯಲ್ಲಿರುವ ವ್ಯಕ್ತಿಯ ಬಗ್ಗೆ ಕಾಳಜಿಯುಳ್ಳ ಹಾಗೂ ಅವಕಾಶವಾದಿ ರಾಜಕೀಯದಿಂದ ದೂರವಿರುವ ವ್ಯಕ್ತಿ. ನಾನು ಕಾಂಗ್ರೆಸ್‌ನ ಕಟು ಟೀಕೆ ಮಾಡಿದಾಗ ಹಾಗೂ ಅವರ ಸರಕಾರದ ವಿರುದ್ಧ ಬೀದಿಗಿಳಿದು ವಿರೋಧ ಮಾಡಿದಾಗಲೂ ರಾಹುಲ್ ಗಾಂಧಿಯ ವ್ಯಕ್ತಿತ್ವದ ಬಗ್ಗೆ ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಆಗಿದ್ದಿಲ್ಲ.

ಆದರೆ ರಾಹುಲ್ ಗಾಂಧಿಯನ್ನು ಪಪ್ಪು ಮಾಡುವ ಮಾಧ್ಯಮಗಳ ಹಾಗೂ ರಾಜಕೀಯ ಅಭಿಯಾನವು ಅವರ ಬೇರೆಯದೇ ಒಂದು ಇಮೇಜನ್ನು ಸಾಮಾನ್ಯ ಜನರ ಮುಂದಿಟ್ಟಿತ್ತು. ರಾಜಕೀಯ ಕುಟುಂಬದ ಎರಡನೆಯ ಅಥವಾ ಮೂರನೆಯ ತಲೆಮಾರಿನ ನಾಯಕರ ತರಹವೇ ರಾಹುಲ್ ಗಾಂಧಿ ಕೂಡ ಒಬ್ಬ ಗಂಭೀರವಲ್ಲದ, ದೇಶದೊಂದಿಗೆ ಸಂಬಂಧವಿಟ್ಟುಕೊಳ್ಳದ, ತಿಳಿವಳಿಕೆಯಿಲ್ಲದ ಹಾಗೂ ದುರಹಂಕಾರಿ ವ್ಯಕ್ತಿ ಎಂದು ಅವರ ಬಗ್ಗೆ ತಿಳಿಯದಿರುವ ಒಬ್ಬ ಸಾಧಾರಣ ವ್ಯಕ್ತಿಯು ನಂಬಿಕೆ ಬೆಳೆಸಿಕೊಳ್ಳುವಂತೆ ಮಾಡಿತು. ಈ ದೇಶದ ಧೂಳು ಮಣ್ಣಿನಲ್ಲಿ ಎರಡು ದಿನಾನೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿದುಕೊಂಡಿದ್ದರು. ಆದರೆ ಈ ಎರಡು ತಿಂಗಳಲ್ಲಿ ದೇಶದ ಜನರು ಅದೇ ರಾಹುಲ್ ಗಾಂಧಿಯನ್ನು ದೇಶದ ಉಬ್ಬುತಗ್ಗಿನ ರಸ್ತೆಗಳಲ್ಲಿ ನಡೆಯುವುದನ್ನು ನೋಡುತ್ತಿದ್ದಾರೆ, ಒಂದು ’ರಾಜಕೀಯ ತಪಸ್ಸಿ’ನ ತನ್ನ ಸಂಕಲ್ಪವನ್ನು ಪೂರ್ಣಗೊಳಿಸುವುದನ್ನು ನೋಡುತ್ತಿದ್ದಾರೆ. ಒಂದೆಡೆ, ಪ್ರಧಾನಮಂತ್ರಿಗಳು ಒಂದು ಫ್ಲೈಓವರ್ ಮೇಲೆ 20 ನಿಮಿಷ ಸಿಕ್ಕಾಕಿಕೊಂಡಾಗ, ತಮ್ಮದೇ ಪಕ್ಷದ ಬೆಂಬಲಿಗರ ಸಲುವಾಗಿಯೂ ತಮ್ಮ ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸುವುದಿಲ್ಲ, ಇನ್ನೊಂದೆಡೆ ರಾಹುಲ್ ಗಾಂಧಿ ಪ್ರತಿಯೊಬ್ಬ ಮಗು, ಮುದುಕ ಮತ್ತು ಯುವಜನರನ್ನು ಅಪ್ಪಿಕೊಳ್ಳುತ್ತಿದ್ದಾರೆ; ಪರಿಚಯವಿದ್ದವರು, ಇಲ್ಲದವರ ಕೈಹಿಡಿದು ನಡೆಯುತ್ತಿದ್ದಾರೆ, ಓಡುತ್ತಿದ್ದಾರೆ, ಆಡುತ್ತಿದ್ದಾರೆ. ಇದೇ ರಾಹುಲ್ ಗಾಂಧಿ ಪ್ರತಿ ಸಂಜೆ ದೇಶವನ್ನು ಉದ್ದೇಶಿಸಿ ಬೆಲೆಏರಿಕೆ, ನಿರುದ್ಯೋಗ ಹಾಗೂ ಶ್ರೀಮಂತ ಮತ್ತು ಬಡವರ ನಡುವೆ ಇರುವ ಕಂದರದ ಬಗ್ಗೆ ದೇಶವನ್ನು ಎಚ್ಚರಿಸುತ್ತಿದ್ದಾರೆ; ಗೌರವ ಮತ್ತು ಸಮತೋಲನ ಕಳೆದುಕೊಳ್ಳದೇ ದ್ವೇಷದ ರಾಜಕೀಯದ ಮೇಲೆ ದಾಳಿ ಮಾಡುತ್ತಿದ್ದಾರೆ. ದೇಶವು ಒಬ್ಬ ಹೊಸ ರಾಹುಲ್ ಗಾಂಧಿಯ ದರ್ಶನ ಮಾಡುತ್ತಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಹೊರತಾಗಿ ಈ ಯಾತ್ರೆಯು ದೇಶದಲ್ಲಿಯ ಜನಾಂದೋಲನಗಳು ಹಾಗೂ ಜನರ ಸಂಘಟನೆಗಳ ನಡುವೆ ಒಂದು ಹೊಸ ಶಕ್ತಿಯ ಸಂಚಲನವಾಗುವಂತೆ ಹಾಗೂ ಅದರೊಂದಿಗೆ ಅವುಗಳ ನಡುವೆ ಸಮನ್ವಯ ಆಗುವಂತೆ ಮಾಡುತ್ತಿದೆ. ಈ ಯಾತ್ರೆಗೆ ಅಹ್ವಾನಿಸುವ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಹಲವಾರು ರಾಜಕೀಯ ಪಕ್ಷ, ಜನಾಂದೋಲನಗಳು, ಜನರ ಸಂಘಟನೆಗಳಿಗೆ ಈ ಯಾತ್ರೆಯೊಂದಿಗೆ ಸೇರಿಕೊಳ್ಳಲು ಆಹ್ವಾನಿಸಿತ್ತು. ಈ ಆಹ್ವಾನವನ್ನು ಸ್ವೀಕರಿಸಿ ದೇಶದ ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಜನರ ಸಂಘಟನೆಗಳು ಆರಂಭದಿಂದಲೇ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದರು. ಆದರೆ ಅನೇಕರ ಮನಸ್ಸಿನಲ್ಲಿ ಹಲವಾರು ಅನುಮಾನಗಳಿದ್ದವು, ಹಳೆಯ ತಕರಾರುಗಳಿದ್ದವು. ಕಳೆದ ಎರಡು ತಿಂಗಳಲ್ಲಿ ಈ ಅವಿಶ್ವಾಸ ನಿಧಾನವಾಗಿ ಕಾಣೆಯಾಗುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸೇರಿ ನಡೆಯುತ್ತಿರುವ ಜನಾಂದೋಲನಗಳ ದಂಡು ಜೊತೆಜೊತೆಗೆ ಹೆಜ್ಜೆಹಾಕುತ್ತಿವೆ. ಪ್ರತಿದಿನ ಸ್ಥಳೀಯ ಸಂಘಟನೆಗಳು ತಳಮಟ್ಟದ ವಿಷಯಗಳನ್ನಿಟ್ಟುಕೊಂಡು ರಾಹುಲ್ ಗಾಂಧಿಯೊಂದಿಗೆ ಭೇಟಿ ಮಾಡುತ್ತಿವೆ. ಒಂದು ದಿನ ಆತ್ಮಹತ್ಯೆಗೆ ಬಲಿಯಾದ ರೈತರ ಕುಟುಂಬ ಭೇಟಿಯಾದರೆ ಇನ್ನೊಂದು ದಿನ ಬೀಡಿ ಕಾರ್ಮಿಕರು ಭೇಟಿ ಮಾಡಿದ್ದಾರೆ. ಯಾವುದೋ ಒಂದು ದಿನ ದೇವದಾಸಿ ಪದ್ಧತಿಗೆ ಬಲಿಯಾದ ಮಹಿಳೆಯರು ಭೇಟಿಯಾದರೆ ಇನ್ನೊಂದು ದಿನ ಇಂದಿಗೂ ಅಂಚಿನಲ್ಲಿರುವ ಆದಿವಾಸಿ ಹಾಗೂ ಶೋಷಿತ ಸಮಾಜದವರು ಭೇಟಿಯಾಗಿದ್ದಾರೆ. ಒಂದು ದಿನ ಸಾರಾಯಿ ವಿರೋಧಿ ಅಂದೋಲನದ ಪ್ರತಿನಿಧಿಗಳು ಹಾಗೂ ಕೆಲವು ಸಲ ಪರ್ಯಾಯ ಶಿಕ್ಷಣ, ಆರೋಗ್ಯ ಹಾಗೂ ಕೃಷಿಯ ಪ್ರಯೋಗಗಳನ್ನು ಮಾಡುತ್ತಿರುವ ಸಂಘಟನೆಗಳು. ಈ ಯಾತ್ರೆ ಕನಸುಗಳನ್ನು ಒಂದುಗೂಡಿಸುತ್ತಿದೆ, ನೋವಿನಿಂದಲೇ ಪ್ರಾರಂಭವಾಗಿ ಹಲವು ಸಂಬಂಧಗಳನ್ನು ಹುಟ್ಟುಹಾಕುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಈ ನದಿಯಲ್ಲಿ ಹಲವಾರು ಧಾರೆಗಳು ಬಂದು ಸೇರಿಕೊಂಡಿವೆ, ಸಣ್ಣಸಣ್ಣ ಯಾತ್ರೆಗಳು ಸೇರಿಕೊಳ್ಳುತ್ತಿವೆ, ಹೆಸರಾಂತ ನಾಗರಿಕರು ಸೇರಿಕೊಳ್ಳುತ್ತಿದ್ದಾರೆ. ಒಂದು ಸಮಯದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಕಾಂಗ್ರೆಸ್‌ಅನ್ನು ವಿರೋಧ ಮಾಡುತ್ತಿದ್ದ ಪ್ರಶಾಂತ್ ಭೂಷಣ್ ಮತ್ತು ಮಾಜಿ ನೌಕಾಸೇನೆ ಪ್ರಮುಖ ಅಡ್ಮಿರಲ್ ರಾಮದಾಸ್ ಅವರುಗಳು ರಾಹುಲ್ ಗಾಂಧಿಯೊಂದಿಗೆ ಯಾತ್ರೆ ಮಾಡುತ್ತಿದ್ದಾರೆ; ಸಿನೆಮಾ ಜಗತ್ತಿನ ಪೂಜಾ ಭಟ್ ಮತ್ತು ಸುಶಾಂತ್ ಸಿಂಗ್ ಕೂಡ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ತುರ್ತುಪರಿಸ್ಥಿತಿಯ ಸಮಯದಲ್ಲಿ 19 ತಿಂಗಳು ಸೆರೆವಾಸ ಅನುಭವಿಸಿದ ಸೇನಾನಿಯೂ ಜೊತೆಗೆ ನಡೆಯುತ್ತಿದ್ದಾರೆ ಹಾಗೂ ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಸಂಬಂಧವಿಟ್ಟುಕೊಳ್ಳದ ಯುವಕ ಯುವತಿಯರೂ ನಡೆಯುತ್ತಿದ್ದಾರೆ. ನಿಧಾನವಾಗಿ ಸಣ್ಣ ಹಳ್ಳವೊಂದು ಈಗ ಒಂದು ನದಿಯಾಗಿ ಬದಲಾಗುತ್ತಿದೆ.

ಹಾಗಾದರೆ, ದೇಶದ ಮೂಡ್ ಬದಲಾಗಿದೆಯೇ? ದ್ವೇಷದ ರಾಜಕೀಯ ನಿಲ್ಲುವುದೇ? ಸದ್ಯದಲ್ಲೇ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದೇ? ಸದ್ಯಕ್ಕೆ ಇಂತಹ ಯಾವುದೇ ದೂರಗಾಮಿ ಅಥವಾ ತಾತ್ಕಾಲಿಕ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಈಗ ಇಷ್ಟನ್ನು ಹೇಳಬಹುದು: ದೇಶದಲ್ಲಿ ಯಾವ ಅಂಧಕಾರದ, ನಿರಾಶೆಯ ಹಾಗೂ ಶೋಕದ ವಾತಾವರಣವಿತ್ತೋ, ಒಂದು ಪರ್ಯಾಯವಿಲ್ಲದ ಘಟ್ಟವಿತ್ತೋ, ಮೌನದ, ಒಂಟಿತನದ ಹಾಗೂ ಭಯದ ಗೋಡೆಯಿತ್ತೋ, ಅದರಲ್ಲಿ ಒಂದು ಬಿರುಕು ಮೂಡಿದೆ. ಅಂಧಕಾರದಲ್ಲಿ ಬೆಳಕಿನ ಕಿರಣವೊಂದು ಕಾಣಿಸಿಕೊಳ್ಳುತ್ತಿದೆ. ಭೋಪಾಲ್‌ದಲ್ಲಿ ಈ ಯಾತ್ರೆಯ ಬಗ್ಗೆ ಆಯೋಜಿಸಿದ್ದ ಒಂದು ಗೋಷ್ಠಿಯಲ್ಲಿ ಎಡಪಂಥೀಯ ಚಿಂತಕ ಹಾಗೂ ಕಾರ್ಯಕರ್ತ ಬಾದಲ್ ಸರೋಜ್ ಹೇಳಿದ್ದು ಇದು: “ಭಾರತ ಜೋಡೊ ಯಾತ್ರೆಯು ನಮ್ಮ ಕಾಲಘಟ್ಟದ ಒಂದು ಮಹತ್ವಪೂರ್ಣ ಘಟನೆಯಾಗಿದೆ” ಎಂದು.

ನನಗೆ ಯಾರಾದರೂ ಈ ಯಾತ್ರೆಯಿಂದ ಏನನ್ನು ಸಾಧಿಸಲಾಗಿದೆ ಎಂದು ಕೇಳಿದಾಗ ನಾನು ರಘುವೀರ್ ಸಹಾಯ್ ಅವರ ಪ್ರಸಿದ್ಧ ಕವಿತೆ ’ಆತ್ಮಹತ್ಯೆಯ ವಿರುದ್ಧ’ದ ಈ ಸಾಲುಗಳನ್ನು ಹೇಳುತ್ತೇನೆ:

“ಏನೋ ಆಗುವುದು, ಏನೋ ಆಗುವುದು ಒಂದು ವೇಳೆ ನಾನು ಮಾತನಾಡಿದರೆ
ಮುರಿದು ಬೀಳಲಿಲ್ಲ ಮುರಿದು ಬೀಳಲಿಲ್ಲ ಅಧಿಕಾರದ ಭ್ರಮೆ
ನನ್ನೊಳಗಿನ ಒಬ್ಬ ಹೇಡಿ ಮುರಿದು ಬೀಳುವನು”

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...